ನಾಟಕ ಶಾಲೆ ಸುತ್ತ ಕೇಂದ್ರದ ನಾಟಕ

ಕರ್ನಾಟಕದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಶುರು ಮಾಡಕ್ಕೆ ಒಪ್ಪಿಗೆ ಕೊಡದೆ ಮೀನ-ಮೇಷ ಎಣಿಸುತ್ತ ಹೇಗೆ ಕೇಂದ್ರ ಸರ್ಕಾರ ಇದಕ್ಕೆ ತೊಡಕಾಗಿದೆ ಅಂತ 26ನೇ ಸೆಪ್ಟಂಬರ್ ದಿನ ಪ್ರಜಾವಾಣೀಲಿ ವರದಿ ಬಂದಿತ್ತು. ಕರ್ನಾಟಕಕ್ಕೆ ರಾಷ್ಟ್ರೀಯ ಶಾಲೆ ದೊರಕಿಸಲು ಸತತವಾಗಿ ಪ್ರಯತ್ನ ಮಾಡ್ತಿರೋ ರಂಗಕರ್ಮಿ ಪ್ರಸನ್ನ ಔರು ಈ ಕೂಡಲೇ ಕೇಂದ್ರ ಸರ್ಕಾರದೋರು ಎಚ್ಚತ್ತುಕೊಂಡು ನಾಟಕಶಾಲೆ ಶುರು ಮಾಡದೇ ಇದ್ದರೆ ದೆಹಲಿಗೆ ಬಂದು ಒಂದೇ ತಪ್ಪ ಉಪವಾಸ ಸತ್ಯಾಗ್ರಾಹ ಮಾಡ್ತೀನಿ ಅಂತ ಹೇಳಿದಾರೆ.

ಹಿಂದೆ ಕೂಡ ಬೆಂಗಳೂರಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಪ್ರಸನ್ನ ರಾಷ್ಟ್ರೀಯ ಕನ್ನಡ ನಾಟಕ ಶಾಲೆಯ ಜತೆಗೆ ಭಾರತ ಸಂವಿಧಾನದ 8ನೇ ಪರಿಚ್ಚೇಧದಲ್ಲಿ ಕೊಟ್ಟಿರೋ ಎಲ್ಲಾ ಆಡಳಿತ ಭಾಷೆಗಳ ರಾಷ್ಟ್ರೀಯ ನಾಟಕ ಶಾಲೆಗಳ್ನ ಸ್ಥಾಪನೆ ಮಾಡ್ಬೇಕು ಅಂತ ಒತ್ತಾಯಿಸಿದ್ದರು. ಆಮೇಲೆ ತೀವ್ರಗೊಂಡಿದ್ದ ಇವರ ಸತ್ಯಾಗ್ರಹದ ಬಿಸಿ ಸಂಬಂಧಪಟ್ಟ ಕೇಂದ್ರ ಸರ್ಕಾರದ ದಂಡು ಅವರ ಬಳಿಗೆ ದೌಡಾಯ್ಸಿ ಬರುವಂತೆ ಮಾಡಿತ್ತು. ಬಂದವರೆಲ್ಲರೂ ಆದಷ್ಟು ಬೇಗ ರಾಷ್ಟ್ರೀಯ ಕನ್ನಡ ನಾಟಕ ಶಾಲೆ ಮತ್ತು ಇತರ ರಾಜ್ಯಗಳ ಆಯಾ ಭಾಷೆಯ ಶಾಲೆ ತೆರೆಯುವುದಕ್ಕೆ ಭರವಸೆ ನೀಡಿ ತೆರಳಿದ್ದರು. ನಂತ್ರ ಕರ್ನಾಟಕಕ್ಕೆ ವಿಶೇಷ ಅಧಿಕಾರಿ ಒಬ್ಬರನ್ನ ನೇಮ್ಸೋ, ನಾಟಕ ಶಾಲೆಗೆ ನಮ್ಮ ಸರ್ಕಾರ ನೀಡಿದ ಸ್ಥಳ ಪರೀಕ್ಷೇ ಮಾಡೋ ನಾಟ್ಕ ಸಹ ನಡೀತು. ಆದ್ರೆ ಇವರ ಭರವಸೆ ಯೋಗ್ತೆ ನಮಗೆ ಗೊತ್ತಿಲ್ಲವೆ? ಯಾವ ಮಣ್ಣೂ ನಡೀಲಿಲ್ಲ. ಈಗ ಪರಿಸ್ಥಿತಿ ಮೊದ್ಲಂಗೇ ಇದೆ!

ಭಾರತದ ಎಲ್ಲಾ ಭಾಷಾವಾರು ಜನಾಂಗಗಳಿಗೂ ಸಮನಾದ ಅವಕಾಶ ಸಿಗಬೇಕು ಗುರು. ನಮ್ಮನಮ್ಮ ಭಾಷೇಲಿ ನಾಟಕ, ಕಲೆಗಳಿಗೆ ಪ್ರೋತ್ಸಾಹ ಸಿಗಬೇಕು. ಇದೇ ಅಲ್ಲವೇ ಭಾರತದ ಭಾಷೆ-ಸಂಸ್ಕೃತಿಗಳಲ್ಲಿರೋ ವೈವಿಧ್ಯಗಳಿಗೆ ಕೊಡೋ ನಿಜವಾದ ಗೌರವ?

ಪ್ರಸನ್ನ ಅವರ ಈ ಕೆಲ್ಸಕ್ಕೆ ರಂಗಭೂಮಿಗೆ ಸಂಬಂದಪಟ್ಟ ಎಲ್ರೂ ಸಹಕಾರ ನೀಡಿ ಈ ಹೋರಾಟದಲ್ಲಿ ತೊಡಗಿಸಿಕೊಬೇಕು. ನಮ್ಮ ರಾಜ್ಯ ಸರ್ಕಾರ ಸಹ ಔರ್ನ ಎಲ್ಲಾ ರೀತೀಲಿ ಬೆಂಬಲಿಸಬೇಕು ಗುರು! ಕೂಡ್ಲೇ ಇದಕ್ಕ್ಕೆ ಒಂದು ಒಳ್ಳೆ ಜಾಗ ಕೊಡಕ್ಕೆ ನಿರ್ಧಾರ ಮಾಡ್ಬೇಕಿದೆ. ಪ್ರಸನ್ನ ಅವರೆ, ನಾವು ನಿಮ್ಮ ಜೊತೆ ಇದೀವಿ!

1 ಅನಿಸಿಕೆ:

ಹೆಸರು ರಾಜೇಶ್, ಅಂತಾರೆ...

modalindalu karnatakakke kendra sarakara heege mosa maduthide. aadare eebari prasannravarannu bembalisi namma palu padeyalebeku

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails