ಪ್ರವಾಸೋದ್ಯಮಕ್ಕೆ ನಮ್ಮತನವೇ ಸರಕು

ಕೊನೆಗೂ ಮೈಸೂರಲ್ಲಿ ಪ್ರವಾಸೋದ್ಯಮಕ್ಕೆ ಸರಿಯಾಗಿ ಪ್ರೋತ್ಸಾಹ ಕೊಟ್ಟು ಒಂದು ಸಕ್ಕತ್ತಾಗಿರೋ "ಬ್ರಾಂಡ್ ಇಮೇಜ್" ಕೊಡಬೇಕು ಅಂತ ಅಧಿಕಾರಿಗಳು ತೀರ್ಮಾನ ತೊಗೊಂಡಿದಾರೆ ಅಂತ ಇವತ್ತಿನ ದಿ ಹಿಂದು ನಲ್ಲಿ ವರದಿ. ನಮ್ಮತನಕ್ಕೆ ಕೊನೆಗೂ ಮಾರುಕಟ್ಟೆ ಇದೆ ಅಂತ ನಮ್ಮ ತಲೆಯೊಳಗೆ ಹೋಗ್ತಿರೋದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು!

ಪ್ರವಾಸೋದ್ಯಮ ಬೆಳೆಸಬೇಕಾದ್ರೆ ನಮ್ಮತನವೇ ಮುಖ್ಯ
ಮೈಸೂರಿಗೆ ಪ್ರವಾಸಕ್ಕೆ ಬರೋ ಜನ ನಮ್ಮತನವನ್ನ ನೋಡಕ್ಕೆ ಇಷ್ಟ ಪಡ್ತಾರೇ ಹೊರತು ಅವರತನವನ್ನಲ್ಲ. ಬರೀ ಅರಮನೆ, ಹಳೇ ಕಟ್ಟಡಗಳು ಮಾತ್ರ ಅಲ್ಲ, ಮೈಸೂರಿನ ಚಿಕ್ಕಚಿಕ್ಕ ವಿಶೇಷತೆಗಳ್ನ ಮೆರೆಸಬೇಕು ಅಂತ ಕೊನೆಗೂ ಅರ್ಥವಾಗಿದೆಯಲ್ಲ ಅಂತ ಸಕ್ಕತ್ ಖುಷಿಯಾಗ್ತಿದೆ ಗುರು! ನಮ್ಮತನವನ್ನ ಬಿಟ್ಕೊಡ್ತಾ ಹೋದಷ್ಟೂ ಪ್ರವಾಸಿಗರು ಕಡ್ಮೆ ಆಗ್ತಾ ಹೋಗ್ತಾರೆ ಅಂತ ನಮಗೆ ಗೊತ್ತಾಗಿದೆಯಲ್ಲ, ಅದು ಒಳ್ಳೇದು ಗುರು!

ಮೈಸೂರುಪಾಕ್, ಮೈಸೂರು ಮಲ್ಲಿಗೆ, ಮೈಸೂರು ರೇಶ್ಮೆ, ಮೈಸೂರು ಪೇಟ, ಮೈಸೂರೆಲೆ (ವಿಳ್ಳೇದೆಲೆ), ಮೈಸೂರು ಕರಕುಶಲಕಲೆ, ಮೈಸೂರು ಚಿತ್ರಕಲೆ - ಇವುಗಳ್ನ ಕೊನೆಗೂ ಹೊರರಾಜ್ಯದೋರ ಮುಂದೆ, ವಿದೇಶೀಯರ ಮುಂದೆ ತಂದಿಡೋದು ಕೀಳರಿಮೆಯೇನಲ್ಲ, ಬದಲಾಗಿ ಅದನ್ನ ನೋಡಕ್ಕೆ ಔರು ಇಷ್ಟ ಪಡ್ತಾರೆ ಅಂತ ಅರ್ಥವಾಗಿದೆಯಲ್ಲ ನಮಗೆ, ಇದು ಸಕ್ಕತ್ ಸರಿಯಾಗಿದೆ ಗುರು!

"ಬೇರೇದನ್ನ" ನೋಡಕ್ಕೇ ಜನ ಎಲ್ಲೀಗೇ ಆಗ್ಲಿ ಪ್ರವಾಸಕ್ಕೆ ಹೋಗೋದು. ಹೋಟೆಲಲ್ಲಿ ಬ್ರೆಡ್ಡು-ಬೆಣ್ಣೆ ತಿನ್ನಕ್ಕೆ ಬರಲ್ಲ ಔರು, ಇಡ್ಲಿ-ದೋಸೆಗಳ್ನ ತಿನ್ನಕ್ಕೆ. ಏನೋ ಹೊಸದನ್ನ ನೋಡಕ್ಕೆ ಬರ್ತಾರೇ ಹೊರತು ಅವರ ದೇಶದಲ್ಲೇ, ಅವರ ರಾಜ್ಯದಲ್ಲೇ ಸಿಗೋದನ್ನಲ್ಲ.

ನಮ್ಮ ಭಾಷೆಗೂ ಮಾರುಕಟ್ಟೆ ಇದೆ ಅನ್ನೋದನ್ನ ಮರೀಬಾರದು

ಪ್ರವಾಸ ಬರೋರಿಗೆ ಹೋದ ಜಾಗದ ಭಾಷೆ ಕೇಳಿಬರೋದು, ಕಾಣಬರೋದೂ ಬಹಳ ಮುಖ್ಯ ಗುರು. ಇವೂ ಪ್ರವಾಸಿಗರ ಮನಸ್ಸಿನಲ್ಲಿ ಆ ಜಾಗದ ವಿಶೇಷತೆಯನ್ನ ಹೆಚ್ಚಿಸುತ್ತೆ ಗುರು. ಇಂಗ್ಲೀಷಲ್ಲೂ ಸೂಚನೆಗಳು ಇರ್ಲಿ, ಆದ್ರೆ ಮೊಸ್ರನ್ನದ ತುಂಬಾ ಉಪ್ಪಿನಕಾಯಿ ಆದಂಗೆ ಬರೀ ಇಂಗ್ಲೀಷೇ ಆದರೆ ಪೆದ್ದತನ ಗುರು! ಇಂಗ್ಲೀಷ್ನ ಎಲ್ಲಿಡಬೇಕೋ ಅಲ್ಲಿಡಬೇಕೇ ಹೊರತು ತಲೇಮೇಲಿಟ್ಕೋಬಾರದು! ಮೈಸೂರೆಲೆ ಮಾರೋ ಕಡೆ "Beetle leaf" ಅಂತ ದೊಡ್ಡದಾಗಿ ಹಾಕಿ ಕನ್ನಡವನ್ನೇ ಮರೀಬಾರದು, ಅಥವಾ ಹಿಂದೀ ಹುಚ್ಚಿನಲ್ಲಿ "ಪಾನ್" ಅಂತ ಬರೀಬಾರದು ಗುರು! ಅದು ಪೆದ್ದತನವಾದೀತು!

ಇದನ್ನ ಅರ್ಥ ಮಾಡ್ಕೊಂಡಿದಾರಾ ನಮ್ಮ ಅಧಿಕಾರಿಗಳು? ಅಥವಾ ಕನ್ನಡದಲ್ಲಿ ಏನಾದ್ರೂ ಮಾತಾಡಿದರೆ, ಕನ್ನಡದಲ್ಲಿ ಏನಾದರೂ ಸೂಚನೆಗಳ್ನ ಹಾಕಿದರೆ ಜನಕ್ಕೆ ಬೇಜಾರಾಗತ್ತೆ ಅಂತ ಇನ್ನೂ ಅನ್ಕೊಂಡಿದಾರೋ? ಈ ಒಂದು ಪೆದ್ದತನಾನ ಮೀರ್ತಾರಾ ನಮ್ಮ ಮೈಸೂರಿನ ಅಧಿಕಾರಿಗಳು? ಕಾದು ನೋಡೋ ಬದ್ಲು ಹೋಗಿ ಔರಿಗೆ ಕನ್ನಡವನ್ನ ಮೆರಸಕ್ಕೆ ಹಿಂಜರೀಬೇಡಿ ಅಂತ ಹೇಳೋಣ್ವಾ ಗುರು?

4 ಅನಿಸಿಕೆಗಳು:

Kumudha ಅಂತಾರೆ...

It is so nice to read in kannada!

Thanks

ಆನಂದ್ ಅಂತಾರೆ...

ನಮ್ಮೂರಿನ ಮದ್ದೂರು ವಡೆ - ಮದ್ದೂರ್ ವಡಾ ಆಗೋದೂ, ಮಸಾಲೆ ದೋಸೆ - ಮಸಾಲಾ ದೋಸಾ ಆಗೋದು ಕೂಡ ತಪ್ಪಬೇಕು.

Anonymous ಅಂತಾರೆ...

IT/BT can genarate a few thousand jobs for some qualified professionals. Only sectors like Tourism can genarate jobs in mass. Best thing is, it can give a job to people across the spectrum of the society. doorada- pattadakallu, badami, aihole, joga falls, karavalaiya beach gaLu, kodachadri, madikeri ya hill stations gaLu, yenilla nammuralli,, swalpa sariyaad push koTTu, nammatana vannu high light maadi,, karnataka tourism annu keralakintha munde tagonda hogo praythna aagbeku..

Amarnath Shivashankar ಅಂತಾರೆ...

lekhana tuMba chennagide..
namma samskrutiyannu kaapaaDikoLLabEku

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails