ಬೆಳಗಾವಿ ಕುಂದಾ ಒಳಗಿರೋ ಪಾಠ

"ಬೆಳಾಗಾವಿ ಕುಂದಾ" ಬೆಳಗಾವಿ ಹೊರಗೆ ಬಂದು ಕರ್ನಾಟಕದ ಬೇರೆಬೇರೆ ಕಡೆಗಳಲ್ಲಷ್ಟೇ ಅಲ್ಲ, ಹೊರದೇಶಗಳಿಗೂ ಮಾರಾಟ ಆಗೋ ದಿನ ಕೊನೆಗೂ ಬಂದಿದೆ ಅಂತ ಪ್ರಜಾವಾಣಿ ವರದಿ ನೋಡಿ ಬಾಯಲ್ಲಿ ನೀರು ಗುರು! ಇದನ್ನ ನಮ್ಮ ಬೆಳಾಗಾವಿ ಮಂದಿ ಒಂದು ದೊಡ್ಡ ಉದ್ದಿಮೆಯಾಗಿ ಶುರು ಮಾಡ್ಕೊಂಡಿರೋದು ಸಕ್ಕತ್ ಗುರು! ನಮ್ಮ ನಮ್ಮ ಜಾಗಗಳ ವಿಶೇಷತೆಗಳ್ನ ಹಿತ್ತಲ ಗಿಡಗಳು ಅಂತ ಬಿಟ್ಟಾಕೋ ಬದ್ಲು ಅದ್ರಿಂದ ಹೇಗೆ ದುಡ್ಡು ಮಾಡ್ಕೋಬೋದು, ಹೇಗೆ ಇಡೀ ಪ್ರಪಂಚಕ್ಕೆ ಅದರ ಚಟ ಹಿಡಿಸೋದು ಅಂತ ಯೋಚ್ನೆ ಮಾಡೋದು ಸಕ್ಕತ್ ಮುಖ್ಯಾಮ್ಮಾ!

ಹಿತ್ತಲ ಗಿಡವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸಬೇಕು

ಇವತ್ತಿನ ದಿನ ಯಾವುದೇ ಒಳ್ಳೇ ಬಹುರಾಷ್ಟ್ರೀಯ ಕಂಪನಿ ತೊಗೊಂಡ್ರೂ ಅದು ತನ್ನ ಸುತ್ತಮುತ್ತಲ ಸಂಪನ್ಮೂಲ-ಸಾಮರ್ಥ್ಯ-ಬೇಡಿಕೆಗಳ್ನ ಬಳಸಿಕೊಂಡೇ ಮುಂದೆ ಬಂದಿರೋದು. ಉದ್ದಿಮೆಯಲ್ಲಿ ಗೆಲುವು ಸಾಧಿಸಿರೋರು ಯಾರೂ ಸುತ್ತಮುತ್ತಲಲ್ಲಿರೋ ಸಂಪನ್ಮೂಲಗಳ್ನ, ಸುತ್ತಮುತ್ತಲ ಜನರ ಸಾಮರ್ಥ್ಯಗಳ್ನ, ಸುತ್ತಮುತ್ತಲ ಜನರ ಬೇಡಿಕೆಗಳ್ನ ಕಡೆಗಣಿಸಿಲ್ಲ ಗುರು! ಅವರೆಲ್ಲಾ ಸುತ್ತಮುತ್ತಲಲ್ಲಿರೋದನ್ನ ಸರಿಯಾಗಿ ನಿಭಾಯಿಸೋ ಕಲೆ ಕಲ್ತು ಇಡೀ ಪ್ರಪಂಚವನ್ನೇ ಮಾರುಕಟ್ಟೆಯಾಗಿ ಬದಲಾಯಿಸಿಕೊಂಡೌರೆ ಗುರು.

ಇದಕ್ಕೆ ಇತ್ತೀಚೆಗೆ ಕರ್ನಾಟಕಕ್ಕೂ ಲಗ್ಗೆ ಇಟ್ಟಿರೋ ಪೀಜಾ ಕಂಪನಿಗಳೇ ಉದಾಹರಣೆ. ಇವತ್ತಿನ ದಿನ ಮೂರು ಹೊತ್ತೂ ಊಟ ಮಾಡೋ ಮಾಲೀಕರಿರೋ ಪೀಜಾ ಕಂಪನಿಗಳ್ಯಾವೂ ಈ ನೆಲದಲ್ಲಿ ಹುಟ್ಟಿರೋವಲ್ಲ. ಇಡೀ ಪ್ರಪಂಚಕ್ಕೇ Pizza Hut, Dominos ಮುಂತಾದೋರು ಪೀಜಾ ಮಾರ್ತಾರೆ? ಯಾಕೆ? ಯಾಕೇಂದ್ರೆ ಮೊದ್ಲು ಔರು ತಮ್ಮ ತಮ್ಮ ನಾಡಿನಲ್ಲಿ ಹೇಗೆ (ಅತೀ ಕಡಿಮೆ ದುಡ್ಡಲ್ಲಿ, ಅತೀ ಹೆಚ್ಚು ರುಚಿಯಿರೋಹಾಗೆ) ಪೀಜಾ ತಯಾರಿಸೋದು, ಹೇಗೆ ಜನ ನಾಮುಂದು-ತಾಮುಂದು ಅಂತ ಕೊಂಡ್ಕೊಳೋಹಂಗೆ ಮಾರೋದು ಅನ್ನೋ ವಿದ್ಯೇನ ಸಕ್ಕತ್ತಾಗಿ ಕಲ್ತುಕೊಂಡ್ರು, ಅದಕ್ಕೆ. ಅದು ಬಿಟ್ಟು ಇಟಲಿ ಜನ "ಛೆ! ಛೆ! ಪೀಜಾ ಎಷ್ಟೇ ಆದರೂ ಹಿತ್ತಲ ಗಿಡ!" ಅಂದ್ಕೊಂಡಿದ್ದರೆ ಇವತ್ತು ಇಡೀ ಪ್ರಪಂಚಕ್ಕೆ ಹರಡುಕೊಳ್ಳಕ್ಕೆ ಆಗ್ತಿತ್ತಾ? ಖಂಡಿತ ಇಲ್ಲಾಮ್ಮಾ!

ಸುತ್ತಮುತ್ತಲಲ್ಲಿರೋದ್ನ ಮರೆತರೆ ಕೈಗೆ ಚಿಪ್ಪೇ

ಆದ್ದರಿಂದ ಇವತ್ತೂ ಕನ್ನಡಿಗರು ವ್ಯಾಪಾರದಲ್ಲಿ ಗೆಲುವು ಸಾಧಿಸಕ್ಕೆ ಮೊದಲನೇ ಹೆಜ್ಜೇನೇ ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು:
  • ನನ್ನ ಸುತ್ತಮುತ್ತ ಸಿಗೋ ಸಂಪನ್ಮೂಲಗಳು ಯಾವುವು?
  • ನನ್ನ ಸುತ್ತಮುತ್ತ ಇರೋರ ಸಾಮರ್ಥ್ಯಗಳು ಯಾವುವು?
  • ನನ್ನ ಸುತ್ತಮುತ್ತ ಇರೋರ ಬೇಡಿಕೆಗಳು ಯಾವುವು?
  • ಇವುಗಳ್ನ ಬಳಸಿಕೊಂಡು ನಾನು ಹೇಗೆ ಇಡೀ ಪ್ರಪಂಚದಿಂದ ದುಡ್ಡು ಮಾಡಬಹುದು?
  • ನಾನೂ ದುಡ್ಡು ಮಾಡ್ಕೊಂಡು ನನ್ನ ಸುತ್ತಮುತ್ತ ಇರೋರ ಜೀವನಾನೂ ಹೇಗೆ ಹಸನಾಗಿಸೋದು?
ಮನುಷ್ಯನ ಬುದ್ಧಿಗೆ ಸುಲಭವಾಗಿ ಅರ್ಥವಾಗೋದು ಸುತ್ತಮುತ್ತಲ ವಿಷಯಗಳೇ. ಕಣ್ಣಿಗೆ ಕಾಣದಿರೋ ಸಂಪನ್ಮೂಲಗಳು, ಕಣ್ಣಿಗೆ ಕಾಣದ ಜನರ ಸಾಮರ್ಥ್ಯಗಳ್ನ, ಕಣ್ಣಿಗೆ ಕಾಣದ ಜನರ ಬೇಡಿಕೆಗಳ್ನೇ ಆಧಾರವಾಗಿಟ್ಟುಕೊಂಡು ಉದ್ಧಾರ ಆಗಕ್ಕೆ ಸಾಧ್ಯವಿಲ್ಲ ಗುರು! ನಮ್ಮ ನಾಡ್ನ, ನಮ್ಮ ನುಡೀನ, ನಮ್ಮ ಜನರನ್ನ, ಔರ ಸಾಮರ್ಥ್ಯಗಳ್ನ, ಔರ ಬೇಡಿಕೆಗಳ್ನ ಅರ್ಥ ಮಾಡ್ಕೊಳ್ದೇ, ಅದರಿಂದ ಪಡೀಬೇಕಾದ ಲಾಭವನ್ನ ಪಡ್ಕೊಳ್ದೆ ನಾವು ಈ ಜಾಗತೀಕರಣದ ಯುಗದಲ್ಲಿ ಏನೂ ಕಿಸ್ಯಕ್ಕಾಗಲ್ಲ ಗುರು!

3 ಅನಿಸಿಕೆಗಳು:

Anonymous ಅಂತಾರೆ...

nijavaada maatu helideera. namma jana udyama sheelateyalli modalindalu ashtenu hesaru maadilla. naaweniddaru sarkaari udyoga, vyavasaaya muntaada risk free kelasagalanna madkondu idwi. ade bere raajya bere deshadavaru namma raajyakke bandu vyaapaara maadi avara janaranna karkondu bandu avarige kelsa kottu avra bele heli koorta idru.
innaadaru naawu swalpa risk tagondu vyaapaara shuru madodu olledu. sampanmoola, bedike yaavdakke hecchide adara vyaapaara vahivaatanna sampoorna naawe kabaliskobeku.
olleya lekhana.

Anonymous ಅಂತಾರೆ...

haage namma dharawada da phede, mysuru paku, malenaadina patrode ella jagatika marukatte praveshisa beku - karuNaa

gangadhara ಅಂತಾರೆ...

Love this article.. Prathiyond vaakyanu satya.. Naavu kevala bereyavarige dudiyaade.. naavu kelasa huttisuva takkat padibekide..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails