ಅಂತರ್ಜಾಲಿಗ ಕನ್ನಡಿಗರಿಗೆ ಅಕ್ಕರೆಯ ಆಹ್ವಾನ!


ಅಂತರ್ಜಾಲಿಗ ಕನ್ನಡಿಗರೇ,
ನೀವು ಈಗ ಬೆಂಗಳೂರಿನಲ್ಲಿದ್ದು, ನಮ್ಮ ನಾಡುನುಡಿಗಳ ಏಳಿಗೆಗಾಗಿ ಮಿಡಿಯುತ್ತಿರುವ ಮನಸ್ಸು ಹೊಂದಿರುವವರೇ? ಹಾಗಾದರೆ, ನಾವೂ ನೀವು ಕೂಡಿ ನಾಡಿನ ಬಗ್ಗೆ ಇರೋ ಕಳಕಳಿಯನ್ನು ಹಂಚಿಕೊಳ್ಳೋಣ.
ಬನ್ನಿ, ಬನವಾಸಿ ಬಳಗ ನಿಮಗೆ ಅಕ್ಕರೆಯ ಆಹ್ವಾನ ನೀಡುತ್ತಿದೆ. ನಾವೆಲ್ಲರೂ ಇದೇ ಏಪ್ರಿಲ್ ತಿಂಗಳ 13ನೇ ತಾರೀಕಿನಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಎದುರು ಇರುವ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಬೆಳಗ್ಗೆ 11:00ಕ್ಕೆ ಭೇಟಿಯಾಗೋಣ. ಅಲ್ಲಿ ಬಿಸಿ ಬಿಸಿ ಕಾಫಿ ಕುಡೀತಾ, ಒಂದೆರಡು ಘಂಟೆ ಕಾಲ ವಿಚಾರ ವಿನಿಮಯ ಮಾಡ್ಕೊಳೋಣ.
ಹೌದಲ್ಲಾ, ನಾವು ಒಬ್ರುನ್ ಒಬ್ರು ನೋಡಿ ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಯ್ತು. ನೆನಪಿದೆಯಾ? ಕಾವೇರಿ ನ್ಯಾಯ ಮಂಡಳಿ ತೀರ್ಪು ನಮ್ಮ ರಾಜ್ಯದ ವಿರುದ್ಧವಾಗಿ ಬಂದಾಗ ನಾಡ ಹಿತದ ಪರವಾಗಿ ಧ್ವನಿ ಎತ್ತಿ, ನಾಡು ನುಡಿಯ ಪ್ರಶ್ನೆ ಬಂದಾಗ ನಮಗಿರುವ ಕಳಕಳಿಯನ್ನು ನಾವೆಲ್ಲ ಒಂದಾಗಿ ತೋರಿಸಿದ್ದೆವು. ನಮ್ಮ ನಾಡು ನುಡಿಗೆ ಧಕ್ಕೆ ಬಂದಾಗ, ನಾಡಿನ ನೆಮ್ಮದಿಗೆ ಭಂಗ ಉಂಟಾದಾಗ ನಾವು ಬೀದಿಗಿಳಿದು "ಮೊದಲು ನಾನು ಕನ್ನಡಿಗ: ಆನಂತರವೇ ಇನ್ನೆಲ್ಲ" ಎಂದು ದನಿ ಎತ್ತಿದ್ದೆವು. ಅಂದು ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ನಾವೆಲ್ಲ ಸೇರಿದ್ದೆವಲ್ವಾ?
ಈಗ ಮತ್ತೆ ನಾವೆಲ್ಲಾ ಸೇರೋಣ. ನಾವೆಲ್ಲ ಸೇರಿ ನಮ್ಮ ತಾಯಿನಾಡಿನ ಏಳಿಗೆಗೆ ನಾವು ಯಾವ ರೀತಿ ಕಾಣಿಕೆ ನೀಡಬಹುದು? ಹೇಗೆ ಶ್ರಮಿಸಬಹುದು? ನಾವೆಲ್ಲ ಒಂದಾಗಬೇಕಾದ, ಕೂಡಿ ಕೆಲಸ ಮಾಡಬೇಕಾದ ಅಗತ್ಯ ಏನು? ನಾಡಿನ ಪ್ರತಿ ಕೈಗಳಿಗೂ ದುಡಿಯಲು ಕೆಲಸವೇನೋ ಬೇಕು? ಈ ಗುರಿಯತ್ತ ನಮ್ಮ ನಾಡು ಸಾಗುವಲ್ಲಿ ನಮ್ಮ ಪಾತ್ರವೇನು? ನಮ್ಮ ಊರಲ್ಲಿ ನಮ್ಮ ಭಾಷೇಲೇ ಎಲ್ಲ ರೀತಿಯ ಗ್ರಾಹಕ ಸೇವೆ ಲಭ್ಯವಾಗುತ್ತಿಲ್ಲ. ಹಾಗಿದ್ರೆ ಏನು ಮಾಡ್ಬೇಕು? ಈ ಎಲ್ಲದರ ಬಗ್ಗೆ ಮಾತಾಡೋಣ.
ಕನ್ನಡ-ಕನ್ನಡಿಗ-ಕನ್ನಡಿಗರ ಬಗ್ಗೆ ಇರುವ ಆಸೆ, ಕನಸು, ಗುರಿಗಳ ಬಗ್ಗೆ ಚರ್ಚಿಸೋಣ. ಹಾಗಿದ್ದರೆ ತಡ ಯಾಕೆ? ಬನ್ನಿ, ಜೊತೆಗೆ ಸಮಾನ ಮನಸ್ಸಿನ ಕನ್ನಡಿಗರನ್ನೂ ಕರೆ ತನ್ನಿ. ಒಂದು ಆತ್ಮೀಯ ಸಂವಾದ ಮಾಡೋಣ. ಇದು ಬನವಾಸಿ ಬಳಗದ ಪ್ರಸ್ತುತಿ.

1 ಅನಿಸಿಕೆ:

Anonymous ಅಂತಾರೆ...

karyakramakke bandidde guru,,

sakat aagittu !

e thara tumba professional aagi nivella maadodanna, maatadodanna nodi sakat kushi aaytu !!

grahaka seve bagge ondu perspective kooda irada nannantorige nijavaglu kannu tersidri..

hige munduvarsi guru !

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails