ದಕ್ಷಿಣ ಭಾರತ ಚಿತ್ರೋದ್ಯಮ ಅಂದ್ರೆ ತಮಿಳು ಚಿತ್ರೋದ್ಯಮಾನಾ?

ಇತ್ತೀಚೆಗೆ ನಮ್ಮ ಮತ್ತು ತಮಿಳುನಾಡಿನ ನಡುವೆ ಹೊಗೇನಕಲ್ ವಿಚಾರದಲ್ಲಿ ಎದ್ದಿದ್ದ ಹೊಗೆ ಇನ್ನೂ ಮೂಗಿಂದ ಹೊರಗ್ ಹೋಗೇ ಇಲ್ಲ. ಆಗ್ಲೇ ಈ ಹೊಗೆಯ ಕಾರಣವಾಗಿದ್ದ ಬೆಂಕಿಗೆ ಬೇಡದ ಒಂದು ಅರ್ಥ (ಅನರ್ಥ ಅಂದರೂ ಸರಿ!) ಕಲ್ಪಿಸ್ಕೊಂಡು ತಮಿಳುನಾಡಿನ ಚಿತ್ರೋದ್ಯಮದೋರು ತುಪ್ಪವೇ ಸುರ್ದಂತಾಗಿದೆ ಗುರು!

ದಕ್ಷಿಣ ಭಾರತದ ಎಲ್ಲಾ ಭಾಷೆ ಚಲನಚಿತ್ರಗಳ ಯೋಗಕ್ಷೇಮ ಕಾಪಾಡುವ ಉದ್ದೇಶ ಮುಂದಿಟ್ಕೊಂಡು ವಿವಾದಿತ ಹೊಗೇನಕಲ್ ವಿಷಯದ ಕಾರಣ ಕೊಟ್ಕೊಂಡು ಕನ್ನಡ ಚಿತ್ರೋದ್ಯಮಿಗಳ ಮೇಲೆ ಅಸಂಬದ್ಧ ಕ್ರಮ ಕೈಗೊಂಡಿರೋದು ನೋಡಿದ್ರೆ ವ್ಯವಸ್ಥೆಯ ಉದ್ದೇಶವೇ ಸರಿ ಇಲ್ವೇನೋ ಅಂತ ಅನ್ಸತ್ತೆ ಗುರು!

ಈ ಮಂಡಳಿ ಯಾರದ್ದು? ಯಾರಿಂದ? ಯಾರಿಗೋಸ್ಕರ?
ಇಲ್ಲಿ ನೋಡಿದ್ರೆ ಈ ಮಂಡಳೀಲಿ ಯಾರ್ಯಾರೆಲ್ಲಾ ಇದಾರೆ ಅಂತ ಕಾಣತ್ತೆ:

Film producers, studio owners, film exhibitors, film distributors and others connected with the film industry are the members of this...

ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳ ಈ ಈ ಜನ್ರು ಸೇರಿ ಈ ಮಂಡಳಿ ರಚಿಸಿದಾರೆ ಗುರು. ಹಾಗಾಗಿ ಈ ಮಂಡಳಿ ಎಲ್ಲಾ ಭಾಷೆಯ ಚಿತ್ರೋದ್ಯಮಿಗಳ್ಗೂ ಸೇರಿದ್ದು. ಇವ್ರಿಂದ್ಲೇ ನಿರ್ಮಾಣವಾಗಿರೋ ಈ ಮಂಡಳಿ ಇವರ ಚಿತ್ರೋದ್ಯಮವನ್ನ ಎಲ್ಲೆಡೆ ಕಾಪಾಡುವ ಹಾಗೂ ಉದ್ದಾರ ಆಗಲು ಸಹಾಯ ಮಾಡುವ ಉದ್ದೇಶ ಇಟ್ಕೊಂಡಿದೆ ಅಂತ ಇಲ್ಲೇ ಕಾಣತ್ತೆ:


In brief, they are to encourage and develop the film industry in all its branches in South India and so far as possible to work in conjunction with other similar associations; to watch, protect and extend the rights and privileges of its members and of film trade in general; to encourage and facilitate film production, distribution and exhibition of films ; and to do various other things for the purpose of assisting the persons in this line of activity.

ಹಾಗಾಗಿ ಈ ಮಂಡಳಿ ಇರೋದೇ ದಕ್ಷಿಣ ಭಾರತ ಚಲನಚಿತ್ರೋದ್ಯಮಗಳ ಉದ್ದಾರಕ್ಕಾಗಿ ಅಂತ ಇಲ್ಲಿ ಅನ್ಕೊಬೇಕಿದೆ ಗುರು!

ಆದ್ರೆ ಮಂಡಳಿ ಮಾಡ್ತಿರೋದೇನು?
ಈ ಮಂಡಳಿಯ ಯೋಜನೆಯಡಿ ನಿಜಕ್ಕೂ ಯಾರಿಗೆ ಲಾಭ ಸಿಗ್ತಿದೆ? ಯಾವ್ಯಾವ ಭಾಷೆಯ ಚಿತ್ರಗಳ್ಗೆ ಹೊಸ ಹೊಸ ಮಾರುಕಟ್ಟೆಗಳಲ್ಲಿ ಪ್ರದರ್ಶನವಾಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ? ಯಾವ ಯಾವ ಭಾಷೆಯ ಚಿತ್ರೋದ್ಯಮಗಳಿಗೆ ಎಲ್ಲೆಲ್ಲಿ ಮಾರುಕಟ್ಟೆ ಹೆಚ್ಚಿಸುವಲ್ಲಿ ಸಹಾಯ ದೊರಕಿದೆ? ಹೀಗೆಲ್ಲಾ ಪ್ರಶ್ನೆ ಹಾಕೊಂಡು ನಮ್ಮ ಸುತ್ತ ನೋಡಿದ್ರೆ ಕರ್ನಾಟಕದಲ್ಲಿ ದಿನೇ-ದಿನೇ ಪರಭಾಷಿಕ ಚಿತ್ರಗಳ ಸಂಖ್ಯೆ ಎಷ್ಟು ಹೆಚ್ತಿದೆ, ಗುಣಮಟ್ಟ ಹಾಗೂ ಬೇಡಿಕೆಯ ಪ್ರಕಾರ ಕಡಿಮೆಯೇ ಅಲ್ಲದ ಕನ್ನಡ ಚಿತ್ರಗಳು ಹೊರರಾಜ್ಯಗಳ ಮಾರುಕಟ್ಟೆಯಲ್ಲಿ ಎಷ್ಟು ಕಷ್ಟ ಅನುಭವಿಸ್ತಿರೋದು ಕಾಣತ್ತೆ ಗುರು! ಇಲ್ಲೆಲ್ಲಾ ಈ ಮಂಡಳಿ ನಮ್ಮ ಚಿತ್ರೋದ್ಯಮಕ್ಕೆ ನಿಜಕ್ಕೂ ಏನ್ ಸಹಾಯ ಮಾಡಿದೆ ಗುರು! ಇದಕ್ಕೆ ಮಂಡಳಿ ಏನ್ ಮಾಡ್ದೇ ಇದ್ರೂ ಅಸಂಬದ್ದ ವಿಷಯಕ್ಕೆ ಮಾತ್ರ ಮೂಗು ತೂರ್ಸ್ತಿದೆ ಗುರು!

ವಿವಾದ ಕಾರಣವಷ್ಟೇ!
ಇಷ್ಟೆಲ್ಲಾ ಸಾಲ್ದು ಅಂತ ಹೊಗೇನಕಲ್ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ನಡೆದ ಪ್ರತಿಭಟನೆಗಳ್ನ ವಿರೋಧಿಸಕ್ಕೆ ಬಲಿ-ಪಶುವಾಗಿ ಕನ್ನಡದ ಹಲವಾರು ಚಿತ್ರೋದ್ಯಮಿಗಳ್ನ ಮಂಡಳಿಯಿಂದ ಅಮಾನತುಗೊಳಿಸಿದಾರೆ ಗುರು! ಇದಲ್ದೇ ಸಲ್ಲದ ವಾದವನ್ನೂ ಮಂಡಿಸಿದಾರೆ ತಮಿಳು ಮೂಲದೋರಾದ ಮಂಡಳಿ ಅಧ್ಯಕ್ಷರು. ಮಂಡಳೀಲಿ ಕನ್ನಡದ ಉದ್ಯಮಿಗಳು ಇರೋದ್ರಿಂದ ಮಂಡಳಿಗೆ ನಷ್ಟವೇ ಹೆಚ್ಚು ಅನ್ನೋ ಈ ನಿಲುವು ನಿಜಕ್ಕೂ ತರವಲ್ಲ ಗುರು! ವಿವಾದವಾಗಿರೋ ವಿಚಾರದಲ್ಲಿ ಒಂದು ರಾಜ್ಯ ಪ್ರತಿಭಟನೆ ಮಾಡಿದರೆ ಅದರ ಸ್ವಾರ್ಥದ ಲಾಭ ಪಡ್ಯಕ್ಕೆ ಇದನ್ನ ಉಪ್ಯೋಗ್ಸಿ ಕನ್ನಡ ಚಿತ್ರೋದ್ಯಮಿಗಳ್ನೇ ಹೊರಹಾಕಿದ್ರೆ ನಾವು ಮಂಡಳಿಯ ಅಸ್ತಿತ್ವವನ್ನೇ ಪ್ರಶ್ನಿಸಬೇಕು ಗುರು! ಸತ್ಯವನ್ನ ಕೇಳಲೇ ಬಯಸದ ಈ ಮಂಡಳಿ ಯಾರಿಗೆ ಬೇಕು ಗುರು?

ಇಷ್ಟಕ್ಕೂ ಮಂಡಳಿಯಿಂದ ಲಾಭ ಪಡೆಯದೇ ಕನ್ನಡ ಚಿತ್ರೋದ್ಯಮ ಇಷ್ಟೆಲ್ಲಾ ಸಾಧಿಸಿದೆ ಅಂದ್ರೆ ಇವರ ಸಹಾಯ ನಿಜಕ್ಕೂ ನಮಗೆ ಬೇಕೇ ಅನ್ನೋದೇ ಮುಖ್ಯ ಪ್ರಶ್ನೆ ಆಗೋಗಿದೆ ಗುರು!


3 ಅನಿಸಿಕೆಗಳು:

Anonymous ಅಂತಾರೆ...

ಕನ್ನಡ ಚಿತ್ರೋದ್ಯಮಿಗಳನ್ನ ಹೊರಗೆ ಹಾಕಿದ್ರೆ ತಮಿಳು ಚಿತ್ರದವರನ್ನು ಹೊರಗೆ ಹಾಕಬೇಕು ಯಾಕಂದ್ರೆ ಅವರೇ ಮೊದಲು ಪ್ರತಿಭಟನೆ ಹಾಗು ಸಮಸ್ಯೆಯನ್ನು ಹುಟ್ಟು ಹಾಕಿದ್ದು. ದಕ್ಷಿಣ ಭಾರತದ್ದು ಅಂದ್ರೆ ಅದು ತಮಿಳರೊಬ್ಬರ ಸ್ವತ್ತಲ್ಲ. ಕನ್ನಡ ಚಿತ್ರರಂಗದವರು ಇದನ್ನು ಖಂಡಿತ ವಿರೋಧಿಸಬೇಕು.

ಶ್ವೇತ

Rohith B R ಅಂತಾರೆ...

ivaru yArannE kittaakakkinta modalu ivaru yaaru haage maadodakke, ivaralliruva sadasyaru yaaryaaru antella bahirangagolisali.. aqvaaga avara nijavaada banna horabeeLatte :o

kong nan makklu ellaa serkondu avrige bekada nirdhara togondu adakke dakshina bharata anta hesru kottkondidaare..

intaha belavanigegalindle deshadallellaa dakshina bharatadoru andre madraasi anta apaprachaara nadedirodu.

idakke dhikkaara. idakka namma pratibhatane irabeku..

Anonymous ಅಂತಾರೆ...

Dakshina bharata chitrodyama andre, Tamil, Telugu and Malayam chitraranga.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails