"ಎಲ್ಲರ" ಕನ್ನಡದ ಅಧ್ಯಯನಕ್ಕೊಂದು ಸಂಸ್ಥೆ ಬೇಕು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ "ಎಲ್ಲರ" ಕನ್ನಡದ ಅಧ್ಯಯನವನ್ನು ಮಾಡುವ ಒಂದು ಸಂಸ್ಥೆ ಬೇಕೆಂದೂ, ಅದರ ಕೊರತೆ ಇವತ್ತು ನಾಡನ್ನು ಕಾಡುತ್ತಿದೆಯೆಂದೂ ತಿಳಿದುಬರುತ್ತದೆ. ಆ ಸಂಸ್ಥೆಯ ಜವಾಬ್ದಾರಿಗಳು ಮತ್ತು ಧ್ಯೇಯೋದ್ದೇಶಗಳು ಹೀಗಿರಬೇಕೆನಿಸುತ್ತದೆ:
  • "ಎಲ್ಲರ" ಕನ್ನಡವು ಶಾಸ್ತ್ರೀಯ ಕನ್ನಡಕ್ಕಿಂತ ಬೇರೆಯಾಗಿದ್ದು, ಇವತ್ತಿನ ದಿನ ಕನ್ನಡಿಗರೆಲ್ಲರೂ ಬರಹ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಬಳಸುತ್ತಿರುವ ಕನ್ನಡವೇ ಆಗಿದೆ. ಕೆಳಗೆ ಕೊಟ್ಟಿರುವ ದ್ಯೇಯೋದ್ದೇಶಗಳಲ್ಲಿ ಹಾಗೂ ಪ್ರಪಂಚದಲ್ಲೆಲ್ಲ ಯಾವುದೇ ವಿಶೇಷಣವಿಲ್ಲದೆ "ಕನ್ನಡ" ಎಂದರೆ ಅದು ಎಲ್ಲರಕನ್ನಡವೆಂದೇ ತಿಳಿದುಕೊಳ್ಳತಕ್ಕದ್ದು.
  • ಕನ್ನಡವನ್ನು ತನ್ನ ಕಾಲ ಮೇಲೇ ನಿಂತ ಒಂದು ನುಡಿಯೆಂದು ಪರಿಗಣಿಸಿ ಹೊಸದಾಗಿ ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಸಂಶೋಧನೆ ಮಾಡುವುದು.
  • ಕನ್ನಡವನ್ನು ಮತ್ತಷ್ಟು ಸಿರಿವಂತ ನುಡಿಯಾಗಿಸಲು ಕನ್ನಡದ ಎಲ್ಲಾ ಒಳನುಡಿಗಳ ಅಧ್ಯಯನ ಮಾಡುವುದು, ಹಾಗೂ ಎಲ್ಲಾ ಪ್ರದೇಶ, ವೃತ್ತಿ ಹಾಗೂ ಪಂಗಡಗಳ ಕನ್ನಡದ ಅಧ್ಯಯನ ಮಾಡುವುದು. ಈ ಅಧ್ಯಯನಗಳಿಂದ ಹೊರಹೊಮ್ಮುವ ಯಾವಯಾವ ಅಂಶಗಳನ್ನು ಎಲ್ಲರಕನ್ನಡಕ್ಕೆ ಅಳವಡಿಸಬೇಕು ಎಂದು ತೀರ್ಮಾನಿಸಿ, ಹಾಗೆ ತೀರ್ಮಾನಿಸಿದ ಅಂಶಗಳನ್ನು ಐದು ವರ್ಷಗಳ ಒಳಗೆ ಎಲ್ಲರಕನ್ನಡಕ್ಕೆ ಅಳವಡಿಸುವುದು.
  • ಕಲಿಕೆ ಹಾಗೂ ಬಳಕೆಯ ಬೇರೆಬೇರೆ ಕ್ಷೇತ್ರಗಳಲ್ಲಿ (ಆಡಳಿತ, ಮ್ಯಾನೇಜಮೆಂಟು, ಇಂಜಿನಿಯರಿಂಗು ಮುಂತಾದವು) ಕನ್ನಡದಲ್ಲೇ ಕಲಿಕೆ-ಕಲಿಸುವಿಕೆ-ಬಳಕೆ-ಸಂಶೋಧನೆಗಳು ನಡೆಯಲು ಉಪಯೋಗವಾಗುವಂತೆ ಬೇರೆಬೇರೆ ಹಂತಗಳ ಹಾಗೂ ಕ್ಷೇತ್ರಗಳ ಪದಕೋಶಗಳನ್ನು ತಯಾರಿಸುವುದು. ಈ ಪದಕೋಶಗಳನ್ನು ತಯಾರಿಸುವಲ್ಲಿ ಪ್ರಪಂಚದ ಬೇರೆ ನುಡಿಗಳಿಂದ ಪದಗಳನ್ನು ಯಾವಾಗ ಆಮದು ಮಾಡಿಕೊಳ್ಳಬೇಕು, ಮಾರ್ಪಾಡುಗಳು ಬೇಕಾದಲ್ಲಿ ಆಮದು ಮಾಡಿಕೊಂಡ ಪದಗಳನ್ನು ಹೇಗೆ ಮಾರ್ಪಡಿಸಿ ಕನ್ನಡಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಧ್ಯಯನ ಮಾಡುವುದು. ಮೇಲೆ ಹೇಳಿರುವ ಪದಕೋಶಗಳನ್ನು ಐದು ವರ್ಷಕ್ಕೊಮ್ಮೆ ಮರುಪರಿಶೀಲನೆ ಮಾಡಿ ಮರುಮುದ್ರಿಸುವುದು.
  • ಬೇರೆಬೇರೆ ಕ್ಷೇತ್ರಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡದಲ್ಲಿ ಕಲಿಕೆ-ಕಲಿಸುವಿಕೆ-ಸಂಶೋಧನೆಗಳು ಎಷ್ಟರ ಮಟ್ಟಿಗೆ ಜಾರಿಯಲ್ಲಿವೆ, ಯಾವ ಸ್ಥಿತಿಯಲ್ಲಿವೆ, ಕನ್ನಡವನ್ನು ಈ ಕೆಲಸಗಳಿಗೆ ಎಷ್ಟು ಬಳಸಲಾಗುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕಿ ಐದು ವರ್ಷಕ್ಕೊಮ್ಮೆ ಒಂದು ವರದಿಯನ್ನು ಒಪ್ಪಿಸುವುದು. ಆ ವರದಿಯಲ್ಲಿ ಆಯಾ ಕೆಲಸಗಳಿಗೆ ಕನ್ನಡವನ್ನು ಹೆಚ್ಚುಹೆಚ್ಚು ಬಳಸಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ ಸಲಹೆಗಳಿರಬೇಕು.
ಇಂಥದ್ದೊಂದು ಸಂಸ್ಥೆ ಹುಟ್ಟಿ ಸರಿಯಾಗಿ ಕಾರ್ಯನಿರ್ವಹಿಸಿದರೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಭವಿಷ್ಯವು ಹಸನಾಗಿರುವುದರಲ್ಲಿ ಸಂದೇಹವಿಲ್ಲ ಎಂದು ನಮ್ಮ ಅನಿಸಿಕೆ. ಇಂತಹ ಸಂಸ್ಥೆಗಳು ಫ್ರಾನ್ಸ್, ಜರ್ಮನಿ, ಇಸ್ರೇಲ್ ಮುಂತಾದ ನಾಡುಗಳಲ್ಲಿ ಕಾಣಸಿಗುತ್ತವೆ. ಒಮ್ಮೆ ವಿಕಿಪೀಡಿಯಾದಲ್ಲಿ ತಮ್ಮಿಂದಲೇ ಹುಡುಕುವಂತಾಗಲಿ ಗುರುವರ್ಯರೆ! ಈ ಸಂಸ್ಥೆಯ ಪರಿಕಲ್ಪನೆಯ ಬಗ್ಗೆ ತಮ್ಮ ಅಂಬೋಣವೇನೆಂದು ಪೇಳುವಂತಾಗುವಿರಾ ಗುರುವರ್ಯರೆ?

4 ಅನಿಸಿಕೆಗಳು:

Anonymous ಅಂತಾರೆ...

ಯಾರು ಈ ಕೆಲಸದ ಮು೦ದಾಳತ್ವವನ್ನು ವಹಿಸಿಕೊಳ್ಳಬೇಕು. ಎ೦ತಹ ಮತ್ತು ಎಷ್ಟು ಜನರನ್ನು ಈ ಕೆಲಸದಲ್ಲಿ ತೊಡಗಿಸಬೇಕು. ಇದಕ್ಕೆ ಕೇ೦ದ್ರ ಸರ್ಕಾರ ಯಾವ ರೀತಿ ಸಹಾಯ ಮಾಡುತ್ತದೆ. ಕನ್ನಡದ ಸೊಲ್ಲರಿಮೆಯನ್ನು ಕ೦ಡುಕೊಳ್ಳಲು ಏನು ಓದು ಓದಿರುವ ಜನರು ಒಟ್ಟುಗೂಡಬೇಕು? ಬೇರೆ ದೇಶಗಳಲ್ಲಿ ಕನ್ನಡವನ್ನು ಅಧ್ಯಯನ ಮಾಡಲು ಕೇ೦ದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಇದರಿ೦ದ ಎಷ್ಟು ಉದ್ಯೋಗಗಳೂ ಹುಟ್ಟಿಕೊಳ್ಳುವುದು?

ತಿಳಿಗಣ್ಣ ಅಂತಾರೆ...

ಇಲ್ಲಿ ನೋಡಿ ನೆರವಾಗಬೋದು.
http://en.wikipedia.org/wiki/Language_planning

ಈ ಮೂರು ಆಗಬೇಕು
-Corpus planning:Corpus planning refers to prescriptive intervention in the forms of a language. This may be achieved by creating new words or expressions, modifying old ones, or selecting among alternative forms.

-Status planning:Status planning refers to deliberate efforts to allocate the functions of languages and literacies within a speech community. It involves status choices, making a particular language or variety an 'official language', 'national language', etc.

-Acquisition planning:Acquisition planning concerns the teaching and learning of languages, whether national languages or second and foreign languages. I

Anonymous ಅಂತಾರೆ...

correctaagi heliddira guru.... samskrutha padagalna balsad nilsbeku... namde pada irbekaadre yaake bere bhashedu alwa?....

Anonymous ಅಂತಾರೆ...

ellara kannadada adyakke bekaagiruvudu samste alla ondu uttamavaada "tantramsha"....

adu nudi alla baraha all bekaagiruvudu ondu vyastita vaada tantramsha..

modalu idannu maadidare ulidaddela taanage aaguttade.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails