ಚಿತ್ರರಂಗದ ನಿರ್ಣಯಗಳು : ಜೊಳ್ಳು ಮತ್ತು ಕಾಳು


ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಸಂಭ್ರಮದಿಂದ ನಡೆಯಿತು. ಈ ಕಾರ್ಯಕ್ರಮದ ಕಡೇ ದಿವ್ಸ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದಾರೆ ಅನ್ನೋ ಸುದ್ದಿ 04.03.2009ರ ಕನ್ನಡಪ್ರಭದ ಮೂರನೇ ಪುಟದಲ್ಲಿ ಬಂದಿದೆ. ಕನ್ನಡ ಚಿತ್ರರಂಗದ ಏಳಿಗೆಗೆ ಅಗತ್ಯವಿದೆ ಅಂತ ಇವರು ಅಂದ್ಕೊಂಡಿರೋ ಆ ನಿರ್ಣಯಗಳ ಜೊತೆಗೆ ಇನ್ನೊಂದಿಷ್ಟು ವಿಚಾರಗಳ ಬಗ್ಗೇನೂ ನಿರ್ಣಯ ಕೈಗೊಳ್ಳಬೇಕಿತ್ತು ಗುರು!
ನಿರ್ಣಯಗಳು ಬೇಡಿಕೆ ಪಟ್ಟಿ ಮಾತ್ರಾ ಆಗಬಾರದು!
ಈ ಬಾರಿಯ ನಿರ್ಣಯಗಳಲ್ಲಿ ಚಿತ್ರರಂಗ ಮುಂದೆ ಏನೇನು ಯೋಜನೆ ಹೊಂದಿದೆ ಅನ್ನಕ್ಕಿಂತ ಉಳಿದವರು ಏನು ಮಾಡಬೇಕು ಅನ್ನೋ ಬಗ್ಗೇನೇ ಹೆಚ್ಚು ಒತ್ತುಕೊಟ್ಟಂಗಿದೆ. ಕನ್ನಡ ಚಿತ್ರಗಳ ಬಗ್ಗೆ ಜಾಗೃತಿ ಯಾತ್ರೆ ಅನ್ನೋ ಒಂದು ನಿರ್ಣಯ, ಚಿತ್ರಬೇತಿ ತರಬೇತಿ ಕಮ್ಮಟ ಅನ್ನೋ ಎರಡು ನಿರ್ಣಯಗಳನ್ನು ಬಿಟ್ಟರೆ ಉಳಿದದ್ದೆಲ್ಲಾ ಬೇಡಿಕೆಗಳೇ ಆಗಿವೆ. ಸಂತೋಷ. ಬೇಡಿಕೆಗಳ ಜೊತೆಗೆ ಒಳಗಿಂದ ಹ್ಯಾಗೆ ಚಿತ್ರರಂಗಾನ ಕಟ್ಕೋಬೇಕು, ಗಟ್ಟಿ ಮಾಡ್ಕೊಬೇಕು ಅನ್ನೋ ಮತ್ತಷ್ಟು ಆಳವಾದ ಚಿಂತನೇನೂ ಇರಬೇಕಿತ್ತು.
ಚಿತ್ರರಂಗ ಬೆಳಗಕ್ಕೆ ನಿಜಕ್ಕೂ ಬೇಕಿರೋದು?
ಗುಣಮಟ್ಟದ ಚಿತ್ರಗಳು ಇಂದಿನ ಅಗತ್ಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಗುಣಮಟ್ಟ ಅನ್ನೋದ್ರ ವಿವರಣೆ ಸ್ವಲ್ಪ ಕಷ್ಟಾನೆ. ನಿಜಕ್ಕೂ ನಮ್ಗೆ ಬೇಕಿರೋದು ಯಶಸ್ವಿಯಾಗಬಲ್ಲ ಚಿತ್ರಗಳು. ಇಂಥದೇ ಚಿತ್ರ ಗೆಲ್ಲುತ್ತೆ ಅಂತ ಹೇಳಕ್ ಆಗ್ದಿದ್ರೂ ಉತ್ತಮವಾದ ಕಥೆ, ಚಿತ್ರಕಥೆ, ನಿರೂಪಣೆ, ನಟನೆ, ಸಂಗೀತ ಇರೋವು ಗೆಲ್ಲಬಲ್ಲವು. ಚಿತ್ರರಂಗ ಈ ಹೊಸ ಉತ್ತಮ ಪ್ರತಿಭೆಗಳನ್ನು ಬೆಳೆಸೋಕೆ ಮುಂದಾಗಬೇಕು. ಹೊಸ ತರನಾದ ಪ್ರಯೋಗಗಳಿಗೆ ಮುಂದಾಗಬೇಕು. ಮುಂದಾಗೋರಿಗೆ ಉತ್ತೇಜನ ಕೊಡಬೇಕು. ಇದಕ್ಕಾಗಿ ಪ್ರತಿ ನಿರ್ಮಾಪಕನೂ ತನ್ನ ಚಿತ್ರಗಳಲ್ಲಿ ಇಂತಿಷ್ಟು ಹೊಸಮುಖಗಳಿಗೆ ಅವಕಾಶ ಕೊಡಬೇಕು ಅನ್ನೋ ಸ್ವಯಂಕಟ್ಟುಪಾಡು ಮಾಡ್ಕೊಬೌದಲ್ವಾ? ಇಂಥಾ ಒಂದು ಪ್ರತಿಭೆಗಳ, ಕಥೆಗಳ, ಚಿತ್ರಕಥೆಗಳ ಒಂದು ಬ್ಯಾಂಕ್ ಕಟ್ಟೋದು ಒಳ್ಳೇದಲ್ವಾ ಗುರು!
ಚಿತ್ರರಂಗದ ಕಾರ್ಮಿಕರ ಬದುಕಿಗೆ ಭದ್ರತೆ!
ಚಿತ್ರರಂಗದ ಕಾರ್ಮಿಕರಿಗೆ ಗ್ರೂಪ್ ಇನ್ಷುರೆನ್ಸ್ ಥರದ ಜೀವವಿಮೆಗಳಿಗೆ ಮುಂದಾಗಿ, ಕಲಾವಿದರ ಬದುಕಿಗೆ ಭದ್ರತೆ ಕಟ್ಟಿಕೊಡೋಕೆ ಯೋಜನೆ ಮಾಡಬೌದು. ನಿವೃತ್ತ ಕಲಾವಿದರಿಗೆ ಪಿಂಚಣಿ ದೊರೆಯೋ ಹಾಗೇ, ಅಸಹಾಯಕರಿಗೆ ವೈದ್ಯಕೀಯ ನೆರವು ದೊರೆಯೋ ಹಾಗೇ ಯೋಜನೆಗಳನ್ನು ರೂಪಿಸಬೇಕಲ್ವಾ? ಚಿತ್ರನಿರ್ಮಾಣ ಅನ್ನೋದು ಒಂದು ಗಂಭೀರವಾದ ಉದ್ದಿಮೆ ಅಂತ ಅರಿತು ನಿರ್ಮಾಣದಲ್ಲಿ ತೊಡಗೋ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳೂ ಇಂದಿನ ಅಗತ್ಯವಾಗಿದೆ. ಕಾರ್ಪೋರೇಟ್ ರೀತಿಯಲ್ಲಿ ವೃತ್ತಿಪರವಾಗಿ ಚಿತ್ರನಿರ್ಮಾಣಕ್ಕೆ ಇಳಿದಾಗ ಯಶಸ್ಸಿನ ಪ್ರಮಾಣಾನೂ ಹೆಚ್ಚುತ್ತದೆ. ಇವತ್ತು ಚಿತ್ರರಂಗಾನ ತಿಂದುಹಾಕ್ತಿರೋ ಮೀಟರ್ ಬಡ್ಡಿ ವ್ಯವಹಾರಕ್ಕೆ ಕೊನೆ ಹಾಡದೆ ನಿರ್ಮಾಪಕ್ರು ಚಿತ್ರಮಾಡಿ ಗೆಲ್ಲೋದು ಕಷ್ಟಾನೆ ಇದೆ. ತಮ್ಮದೇ ಆದ ಸಹಕಾರ ಸಂಘ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಚಿತ್ರ ನಿರ್ಮಾಣಕ್ಕೆ ಸಾಲ ಕೊಡೋ ವ್ಯವಸ್ಥೆ ಮಾಡ್ಕೊಬೌದಲ್ವಾ? ಚಿತ್ರನಿರ್ಮಾಣದ ನಾನಾ ಹಂತಗಳಾದ ಫಿಲ್ಮ್, ಪ್ರೊಸೆಸ್ಸಿಂಗ್, ಸೆಟ್ಟುಗಳು ಇವೆಲ್ಲಾನೂ ನಿರ್ಮಾಪಕರಿಗೆ ಹೊರೆಯಾಗದಂತೆ ಒದಗಿಸಿಕೊಳ್ಳೋ ವ್ಯವಸ್ಥೆ ಬೇಕಾಗಿದೆ.
ಮಾರುಕಟ್ಟೆ ಕಟ್ಟಿಕೊಳ್ಳೋ ತಂತ್ರಗಾರಿಕೆ!
ಇದರ ಜೊತೆಗೆ ಈಗಾಗಲೇ ನಿರ್ಣಯ ಮಾಡಿರೋ ಹಾಗೇ ಕನ್ನಡದ ತಾರೆಯರು ತಮ್ಮ ಚಿತ್ರ ಬಿಡುಗಡೆಯ, ಕ್ಯಾಸೆಟ್ ಸಿಡಿ ಬಿಡುಗಡೆಯ ಕಾರ್ಯಕ್ರಮಗಳ್ನ ಗಡಿ ಊರುಗಳಲ್ಲಿ ಹಮ್ಮಿಕೊಳ್ಳಬೇಕು. ಕನ್ನಡ ಚಿತ್ರ ಪ್ರದರ್ಶನ ಲಾಭದಾಯಕ ಉದ್ದಿಮೆಯಾಗಬೇಕೂಂದ್ರೆ ಸಹಜವಾಗೇ ಜನರನ್ನು ಸೆಳೆಯೋ ಶಕ್ತಿ ಚಿತ್ರಗಳಿಗೆ ಇರಬೇಕು. ಸರ್ಕಾರ ಎಲ್ಲಾ ಕಡೆ ಚಿತ್ರಮಂದಿರ ಆರಂಭಿಸಲು ಅನುಮತಿ ನೀಡಬೇಕಾದ ಪ್ರಕ್ರಿಯೆ ಸರಳವಾಗುವಂತೆ ಏಕಗವಾಕ್ಷಿ ವ್ಯವಸ್ಥೆ, ಹೊಸ ಉದ್ದಿಮೆಗಳಿಗೆ ನೀಡುವಂತೆ ಕೆಲವರ್ಷದ ತೆರಿಗೆ ರಜೆಗಳು ಬೇಕೆಂದು ಸರ್ಕಾರಾನ ಕೇಳೋದೇನೋ ಸರಿಯಾಗಿದೆ. ಚಿತ್ರಮಂದಿರಗಳ ಬಾಡಿಗೆ ದರವನ್ನು ಗೊತ್ತುಮಾಡಕ್ಕೆ ಚಿತ್ರಮಂದಿರಗಳ ಮಾಲೀಕರನ್ನು ಪ್ರತಿನಿಧಿಸೋ ಸರಿಯಾದ ಸಂಘಟನೆ ಜೊತೆ ಸಂಪರ್ಕ ಇಟ್ಕೊಂಡು ಒಪ್ಪಂದಗಳ ಮೂಲಕ ಬಾಡಿಗೆ ತೀರ್ಮಾನ ಮಾಡ್ಕೊಳ್ಳೋದು ಒಳ್ಳೇದು!
ನಕಲಿ ಸಿ.ಡಿ ಹಾವಳಿ ತಡೆಗೊಂದು ಯೋಜನೆ!
ನಕಲಿ ಸಿಡಿಗಳ ವಿರುದ್ಧ ಜನಜಾಗೃತಿ ಮಾಡಿ ಅಂತಹ ದುಷ್ಟ ಶಕ್ತಿಗಳನ್ನು ಸಾರ್ವಜನಿಕರ ಸಹಕಾರದಿಂದ ಕಂಡುಹಿಡಿದು ಅಂಥವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಈ ಪಿಡುಗನ್ನು ನಿವಾರಿಸಲು ಮುಂದಾಗಬೋದಿತ್ತು. ಜಾಗೃತಿ ಯಾತ್ರೆಯ ಜೊತೇಲೇ ಇದನ್ನೂ ಮಾಡುದ್ರೆ ಪೈರಸಿ ತಡ್ಯಕ್ಕೆ ಆಗಲ್ವಾ? ಅಂತ ಯೋಚುಸ್ಬೌದಿತ್ತು. ನಕಲಿ ಸಿ.ಡಿ ತಯಾರ್ಸೋ ಒಂದೊಂದು ಅಂಗಡಿನ ಹಿಡ್ಕೊಟ್ಟ ಸಾರ್ವಜನಿಕರಿಗೆ ಅವರ ಮೆಚ್ಚಿನ ಒಬ್ಬೊಬ್ಬ ತಾರೆಯ ಜೊತೆ ಒಂದು ಡಿನ್ನರ್ ಮಾಡುಸ್ತೀವಿ ಅಂದ್ರೂ ಆಗ್ತಿತ್ತಪ್ಪ. ಈ ಪೈರಸಿ ಅಂಗಡಿಗಳ ಬಾಗಿಲು ಹಾಕ್ಸೋದ್ ಕಷ್ಟ ಆಗಲಾರದು ಅನ್ಸುತ್ತೆ!
ಕನ್ನಡ ಚಿತ್ರರಂಗ ಬೆಳೆಯೋಕೆ ಬೇಕಿರೋದು!
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ?. ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ?, ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದನ್ನೆಲ್ಲಾ ಮುಕ್ತವಾಗಿ ಚರ್ಚೆ ಮಾಡಬೇಕಿತ್ತು ಗುರು! ಆಗ ನಾಳಿನ ಬಗ್ಗೆ ಯೋಚನೆ ಮಾಡ್ತಿರೋ ಕನ್ನಡ ಚಿತ್ರರಂಗದ ಈ ತಲೆಮಾರನ್ನು ಸ್ವರ್ಗದಿಂದಲೇ ನಮ್ಮ ಹಿರಿಯರು ಹರಸ್ತಿದ್ರು! ಏನಂತೀರಾ?

1 ಅನಿಸಿಕೆ:

Anonymous ಅಂತಾರೆ...

1. modalige chitraraMgavanna oMdu udyamavannaagi maaDabEku..baragooru raamachaMdrappanavaru oMdu kaDe hELidaMte chitraraMgavannu oMdu kasubannaagi maaDkObEku..adu upakasubu aadre vruttiparate annOdu irOdilla...

2. utkrushTate bagge heccige gamana vahisabEku. oLLe kelasagaLalli kathegaLalli taaMtrika vishayagaLalli
garishThaTe aMta maatu baMdaaga ellaroo kannaDa citraraMgada kaDe beTTu maaDabEku

3.haage namma citragaLige maarukaTTeya visteerNavannu doDDadaagisalu yOcane maaDi adara takkaMte tayaari naDesabEku idEnu kashTada kelasavalla..vivEcaneiMda maaDidare mugeetu

4. reemEk ge jaastiyE kaDivaaNa haakabEku..nammalliro prathibhege cinemaraMgada ellaa kshEtradalliyoo bELeyaLu
avakaasha koDabEku..aamadu kathe kathegaararu kelasagaararige taMtragnarige maNe haakabaaradu..

5. dabbiMg ge anumati neeDabEku..

6. taMtragnaanavannu citraraMgada abhivruddhige poorakavaagi baLsikoLLabEku

7. swaavalaMbigaLaagalu yOjaneyannu hammikoLLabEku

8. citramaMdiragaLa guNamaTTa hecchisabEku

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails