ದಿಲ್ಲಿ ಗುಲಾಮಗಿರಿ: ಕಾಂಗ್ರೆಸ್ಸಿನದ್ದಾಯ್ತು, ಇನ್ನು ಬಿಜೆಪಿ ಸರದಿ!

ಬೆಂಗಳೂರಿನಲ್ಲಿ, ಬಡವರಿಗಾಗಿ ಹೊಸದಾದ ಸಾರಿಗೆ ಯೋಜನೆಯೊಂದನ್ನು, ತಮ್ಮ ಪಕ್ಷ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ್ದಕ್ಕಾಗಿ, ಶುರು ಮಾಡಿರೋ ಬಿ.ಜೆ.ಪಿಯೋರು ಅದಕ್ಕೆ ಅಟಲ್ ಸಾರಿಗೆ ಅಂತಾ ಹೆಸರಿಟ್ಟು ತಮ್ಮ ಸ್ವಾಭಿಮಾನ ಬರಡಾಗಿರೋದನ್ನು ಮತ್ತೊಮ್ಮೆ ಬಯಲು ಮಾಡಿಕೊಂಡಿದ್ದಾರೆ ಗುರು!

ಕಾಂಗ್ರೆಸ್ ಜೊತೆ ಇದ್ರಲ್ಲೂ ಪೈಪೋಟಿ!

ಒಂದು ಪ್ರದೇಶದ ಹೆಸರು ಆ ಪ್ರದೇಶದ ಸೊಗಡು, ನುಡಿ, ಸ್ವಾಭಿಮಾನ, ಇತಿಹಾಸಪ್ರಜ್ಞೆ, ಸಂಸ್ಕೃತಿಗಳನ್ನು ತೋರಿಸುತ್ತೆ. ಆದ್ರೆ ನಮ್ಮ ಕನ್ನಡನಾಡಿನಲ್ಲಿ ಹಿಂದಿನಿಂದಲೂ ಹೊಸದಾಗಿ ಒಂದು ಯೋಜನೆ ಶುರು ಮಾಡುದ್ರೆ ಅದಕ್ಕೆ ದಿಲ್ಲಿದೊರೆಗಳ ಹೆಸರನ್ನೇ ಇಡೋದು ಶೋಕಿಯಾಗಿಬಿಟ್ಟಿದೆ. ಹಾಗಾಗಿ ನಮ್ಮಲ್ಲಿ ಮಹಾತ್ಮಗಾಂಧಿ ರಸ್ತೆ, ಗಾಂಧಿನಗರಗಳಿಗೇನು ಕೊರತೆ ಇಲ್ಲ. ಹಾಗೇ ಕಾಂಗ್ರೆಸ್ಸಿನ ನಾಯಕರುಗಳ ಹೆಸರನ್ನೆಲ್ಲಾ ನಮ್ಮೂರ ಕೆರೆ, ಬೀದಿ, ಬಡಾವಣೆಗಳು, ಶಾಲೆಗಳು, ಅಣೆಕಟ್ಟೆಗಳು ಅಂಟಿಸಿಕೊಂಡುಕೂತಿವೆ. ಸುಮ್ಮನೆ ಈ ಪಟ್ಟಿ ನೋಡಿ : ಶಾಸ್ತ್ರೀನಗರ, ಜಯಪ್ರಕಾಶನಗರ, ರವೀಂದ್ರನಾಥ್ ಟ್ಯಾಗೂರ್ ನಗರ, ಸಂಜಯನಗರ, ಇಂದಿರಾನಗರ, ಗಾಂಧಿನಗರ, ರಾಜಾಜಿನಗರ, ಬಾಪೂಜಿನಗರ, ಭಗತ್ ಸಿಂಗ್ ನಗರ, ಆಜಾದ್ ನಗರ... ಹೀಗೆ ಸಾಗುತ್ತೆ ಪಟ್ಟಿ. ಆಲಮಟ್ಟಿ ಜಲಾಶಯಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹೆಸರು... ಇದೇನು ಗುರು? ಇದುವರೆಗೂ ಕಾಂಗ್ರೆಸ್ಸಿನೋರು ಮಾಡಿದ್ದನ್ನೇ ಈಗ ಬಿಜೆಪಿಯೋರು ಮಾಡಕ್ ಹೊಂಟವ್ರಲ್ಲಾ? ಆಗೆಲ್ಲಾ ಕಾಂಗ್ರೆಸ್ಸಿನೋರು ಜವಾಹರ್ ರೋಜಗಾರ್ ಯೋಜನೆ, ರಾಜೀವ್ ಗಾಂಧಿ ಖೇಲ್ ರತ್ನ ಅಂತೆಲ್ಲಾ ಅಂದ್ರೆ ಇದು ಗುಲಾಮಗಿರಿ ಅಂತಿದ್ದೋರು ಈಗ ಅವರು ಮಾಡಿದ್ದಾರೆ, ಅದ್ಕೆ ನಾವು ಮಾಡ್ತೀವಿ ಅನ್ನೋ ರೀತಿ ನಡ್ಕೊಳ್ಳೋ ಮಟ್ಟಕ್ ಇಳ್ದಿದಾರಲ್ಲಾ ಗುರು! ಅಲ್ಲಾ ಬೆಂಗಳೂರಿನ ಬಸ್ಸಿಗೂ ಅಟಲ್ ಬಿಹಾರಿ ವಾಜಿಪೇಯಿಯವರ ಹೆಸರು ಯಾಕೆ ಇಡ್ಬೇಕಾಗಿತ್ತು? ಇವರು ಕೊಡ್ತಿರೋ ಸಂದೇಶಾನಾದ್ರೂ ಏನು? ದಿಲ್ಲಿ ಗುಲಾಮಗಿರಿ ವಿಷ್ಯದಲ್ಲಿ ನಾವು ಕಾಂಗ್ರೆಸ್ಸಿನೋರಿಗಿಂತೇನು ಕಮ್ಮಿ ಇಲ್ಲಾ ಅಂತಾನಾ?
ಊಟವಾದ ಉಪ್ಪಿನಕಾಯಿ!
ಹಿಂದೊಮ್ಮೆ ಬಿಜೆಪಿಯೋರೆ ದಿಲ್ಲೀಲಿ ಕೂತಿದ್ದಾಗ ಹಳ್ಳಿಗಳಿಗೆ ಕೊಡಮಾಡಿದ ರಸ್ತೆ ಯೋಜನೇಗೆ "ಅಟಲ್ ಗ್ರಾಮ್ ಸಡಕ್ ಯೋಜನಾ" ಅನ್ನೋ ಹೆಸರಿಡಕ್ ಹೋಗಿದ್ದಾಗ, ಅಂದಿನ ಪ್ರಧಾನಿಗಳಾಗಿದ್ದ ವಾಜಪೇಯಿ ಅವ್ರೇ "ವ್ಯಕ್ತಿ ಹೆಸರು ಬೇಡಾ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಅಂದ್ರೆ ಸಾಕು" ಅಂದಿದ್ರಂತೆ! ಪಾಪಾ, ಈಗಿನ ಕರ್ನಾಟಕದ ಬಿಜೇಪಿಯೋರ ಬಾಲಬಡುಕತನಾ ನೋಡುದ್ರೆ ವಾಜಪೇಯಿಯೋರೇ ಎಷ್ಟು ನೊಂದ್ಕೋತಾರೋ ಏನೋ? ಒಂದು ವರ್ಷ ಮುಗ್ದಿದ್ದಕ್ಕೇ ಹಿಂಗಾದ್ರೆ, ಇನ್ನು ನಾಲ್ಕು ವರ್ಷ ಮುಗ್ಯೋ ಅಷ್ಟ್ರಲ್ಲಿ ಮುಂದೆ ನಮ್ಮ ಹಳ್ಳಿದಾರಿ, ಕೆರೆಏರಿ, ದೊಡ್ಡಮೋರಿ... ಇಲ್ಲೆಲ್ಲಾ ಯಾರ್ಯಾರ ಹೆಸರು ನೋಡೋ ಭಾಗ್ಯ ಕನ್ನಡದೋರುದ್ ಆಗುತ್ತೋ ಗುರೂ? ಅಷ್ಟಕ್ಕೂ ರಾಷ್ಟ್ರಮಟ್ಟದ ನಾಯಕರ ಹೆಸರೇ ಬೇಕಂದ್ರೆ ಕರ್ನಾಟಕದಿಂದ ಹೋಗಿ ಅಲ್ಲಿ ಮಿಂಚಿದ ನಾಯಕರ ಹೆಸರಾಗಬೇಕಲ್ವಾ? ಇಷ್ಟಕ್ಕೂ ನಮ್ಮ ನಾಡಿಗರಲ್ಲದ ರಾಷ್ಟ್ರನಾಯಕರ ಹೆಸರನ್ನೇ ಇಡೋದಾದ್ರೆ ಅದನ್ನು ಒಂದು ಮಿತಿಯಲ್ಲಿ ಇಡೋದು ಬಿಟ್ಟು ಹಿಂಗೆ ಇರೋ ಬರೋದಕ್ಕೆಲ್ಲಾ ದಿಲ್ಲಿ ದೊರೆಗಳ ಹೆಸರನ್ನೇ ಇಡೋದು "ತನ್ನ ಬಗ್ಗೆ ತನಗೇ ಬೆಲೆಯಿಲ್ಲದ" ಮನಸ್ಥಿತಿಯನ್ನು ಎತ್ತಿ ತೋರ್ಸಲ್ವಾ ಗುರು! ಊಟಕ್ಕೆ ಉಪ್ಪಿನಕಾಯಿ ಇರಬೇಕೇ ಹೊರತು ಉಪ್ಪಿನಕಾಯಿಯೇ ಊಟ ಆದ್ರೆ ಹೆಂಗೆ ಗುರು?

4 ಅನಿಸಿಕೆಗಳು:

raju hegde ಅಂತಾರೆ...

namma saarige mantrigalu,, idanna tamma kanasina yojane anta bere heLkondru !!

naachikegedu ivara baaLu

somesha ಅಂತಾರೆ...

ivarige kannaDadavara hesru sigalla... sikru hesranna haaLu maaDtaare. bhadravati li vishveshwariah avara hesarige masi baLadralla!..

hesru siglilla andra raju avru heLdaage "namma kanasina saarige" anta idralla. yaar beda andaaru.

Anonymous ಅಂತಾರೆ...

yedilla rajakarniya matra bidi. yellar hangeyya yaru mattu yava pakshanu jana samanyari ge sahary madallari. only one i willing to ask to these politicians.
"What is your total asset befor you coming to politics and what is now" a normal man can't get this much of amount in single year of five year. A normal govement servent class one officer he can earn in hole service at max 30 lacs. but these politicians within a five years how come they get 50 corers

putta ಅಂತಾರೆ...

ಇದು ಗುಲಾಮಗಿರಿಯ ಅತ್ಯುನ್ನತ ಮಟ್ಟ..ಶಭಾಶ್ ಭಾ ಜ ಪ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails