ಗ್ರಾಹಕಸೇವೆ ದಕ್ಕಿಸಿಕೊಳ್ಳಲು "ಮಾಹಿತಿ ಹಕ್ಕು" ಎಂಬ ಮಹತ್ವದ ಅಸ್ತ್ರ!

ಪ್ರತಿವರ್ಷ ಮಾರ್ಚ್ ೧೫ನ್ನು ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬ ಗ್ರಾಹಕನಿಗೂ ಇರುವ ಹಕ್ಕುಗಳನ್ನು ಒದಗಿಸಿಕೊಡಬೇಕು ಎಂದು ವಿಶ್ವಸಂಸ್ಥೆ, ಸದಸ್ಯ ದೇಶಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಕೊಟ್ಟಿದೆ. ಅವುಗಳಲ್ಲಿ ಪ್ರಮುಖವಾದ ಕೆಲವು ವಿಷಯಗಳು ಗ್ರಾಹಕರ ಸುರಕ್ಷತೆ, ಆರ್ಥಿಕ ಹಕ್ಕುಗಳ ರಕ್ಷಣೆ, ಗ್ರಾಹಕರಿಗೆ ಮಾಹಿತಿ, ಪರಿಣಾಮಕಾರಿಯಾದ ದೂರು ನಿರ್ವಹಣಾ ವ್ಯವಸ್ಥೆಯೇ ಮೊದಲಾದವುಗಳನ್ನು ಒಳಗೊಂಡಿದೆ..

ನಮ್ಮ ಪರಿಸ್ಥಿತಿ ಹೀಗಿದೆ...

ಈ ಎಲ್ಲಾ ಹಕ್ಕುಗಳ ಬಗ್ಗೆ ಅವರೇನೋ ಸೂಚನೆ ಕೊಟ್ಟಿದಾರೆ, ಆದರೆ ಭಾರತದಲ್ಲಿ ಈ ಹಕ್ಕುಗಳು ಯಾವ ರೂಪದಲ್ಲಿ ನಮಗೆ ದಕ್ಕಿವೆ ಅಂತನ್ನೋಕೆ ಈ ಕೆಳಗಿನ ಚಿತ್ರಗಳನ್ನು ನೋಡಿದರೆ ಅರ್ಥವಾಗುತ್ತದೆ...

 ಗ್ರಾಹಕ ಸುರಕ್ಷತೆ ಅಂದರೆ ಬಳಸುವ ವಸ್ತುಗಳ ಸುರಕ್ಷತಾ ಮಾಹಿತಿಯನ್ನು ಗ್ರಾಹಕರಿಗೆ ಕೊಡಬೇಕೆನ್ನೋ ನಿಯಮಾನ ಕಟ್ಟುನಿಟ್ಟಾಗಿ ಪಾಲಿಸಿರೋ ಈ ಫೋಟೋ ನೋಡಿ. 
ಜನರು ಔಷಧಿಗಳನ್ನು ಕೊಳ್ಳುವಾಗ ಅದನ್ನು ಹೇಗೆ ಬಳಸಬೇಕು? ಅದರಲ್ಲಿ ಏನಿದೆ? ಏನು ಎಚ್ಚರ ವಹಿಸಬೇಕು? ಅದರ ಬದಲಿ ಪರಿಣಾಮವೇನು? ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳೋ ಹಕ್ಕನ್ನು ಹೊಂದಿದ್ದಾರೆ, ಹಾಗಾಗಿ ಈ ಮಾಹಿತಿಯನ್ನು ಕೊಡಲೇಬೇಕು ಎನ್ನೋ ಗ್ರಾಹಕ ನಿಯಮವನ್ನು ಹೀಗೆ ಪೂರೈಸಿದ್ದಾರೆ... ನೋಡಿ.


ಇನ್ನು ನಮ್ಮದೇ ಘನ ಭಾರತ ಸರ್ಕಾರವು ಪರದೇಶಿ ಭಾಷೇಲಿ ಹ್ಯಾಗೆ ತಾನೇ ಜನರಿಗೆ ಸುರಕ್ಷತೆ ಬಗ್ಗೆ ಹೇಳೀತು? ಅದಕ್ಕೆ ಭಾರತೀಯ ಭಾಷೇಲೇ ಹೇಳ್ತಿದಾರೆ ನೋಡ್ಕೊಳ್ಳಿ... ಆದ್ರೆ ಇದು ನಮ್ಮ ಕರ್ನಾಟಕದ ಕನ್ನಡದ ಜನಪ್ರಿಯ ದಿನಪತ್ರಿಕೆಯಲ್ಲಿ ಬಂದಿರೋ ಜಾಹೀರಾತು... 

‘ನಮ್ಮೂರ ಮೆಟ್ರೋ ರೈಲಲ್ಲಿ ಹಿಂದೀ ಯಾಕ್ರೀ ಬಳುಸ್ತೀರಾ’ ಅಂತಂದೋರಿಗೆಲ್ಲಾ ನಿಮ್ಮ ಹಿಂದೀ ದ್ವೇಶ ನಿಲ್ಲಿಸಿ ಅನ್ನೋ ಉತ್ತರ ಮುಖಕ್ಕೆಸೆದಿದ್ದ ನಮ್ಮ ಮೆಟ್ರೋ ಈಗ ಬಳಸುತ್ತಿರೋ ವಾರ್ಷಿಕ ಪಾಸ್ ಹೀಗಿದೆ ನೋಡಿ...


ಬರೀ ಕನ್ನಡವೊಂದನ್ನೇ ಕಲಿತಿರೋ ಕರ್ನಾಟಕದ ಸಾಮಾನ್ಯ ಕನ್ನಡಿಗನಿಗೆ ತನ್ನದೇ ನಾಡಿನಲ್ಲಿ ದಕ್ಕಿರೋ ಗ್ರಾಹಕ ಸೇವೆಯ ಈ ಹಕ್ಕುಗಳ ಪರಿಯನ್ನು ನೋಡಿರಿ! ಇಂಥಾ ಗ್ರಾಹಕ ಸೇವೆ ಪಡೆದುಕೊಳ್ತಿರೋ ಕನ್ನಡಿಗನ ಹಣೇಬರಹಕ್ಕೆ ಏನು ಹೇಳಬೇಕೂ ಗುರೂ?

ಹಾಗಾದ್ರೆ ಏನು ಮಾಡಬಹುದು?

ನಾವೇ ಎಚ್ಚರಾಗಬೇಕು. ಸಾಧ್ಯವಾದಲ್ಲೆಲ್ಲಾ ಸಂಬಂಧಿಸಿದವರಿಗೆ ನಮ್ಮ ಹಕ್ಕೊತ್ತಾಯದ ಕೂಗನ್ನು ಮುಟ್ಟಿಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜನದನಿಯ ಮೂಲಕ ಬದಲಾವಣೆ ತರುವುದು ಒಂದು ಬಗೆಯಾದರೆ ಮತ್ತೊಂದು ಬಗೆ ಕಾನೂನು ಹೋರಾಟ... ಹೌದೂ! ಇಂಥಾ ಹೋರಾಟಗಳು ಬೇರೆ ಬೇರೆ ಕಡೆ ನಡೆದಿವೆ. ಆಯಾ ಜನರ ನುಡಿಯಲ್ಲಿಯೇ ಸೇವೆ ಸಿಗುವಂತೆ ನ್ಯಾಯಾಲಯಗಳು ತೀರ್ಪನ್ನೂ ನೀಡಿವೆ. ಹೀಗೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿರೋ ಅಸ್ತ್ರವೆಂದರೆ ಮಾಹಿತಿ ಹಕ್ಕು ಕಾಯ್ದೆ ೨೦೦೫

ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿ:

ಇದರಡಿಗೆ ಕೇಂದ್ರಸರ್ಕಾರದ ಮತ್ತು ರಾಜ್ಯಸರ್ಕಾರದ ಎಲ್ಲಾ ಸಂಸ್ಥೆ-ಇಲಾಖೆಗಳುಸರ್ಕಾರದ ಮೂಲಕ ಸವಲತ್ತು ಪಡೆದಿರುವ ಯಾವುದೇ ಸರಕಾರೇತರ ಸಂಸ್ಥೆ ಅಥವಾ ಖಾಸಗಿ ಆಸ್ಪತ್ರೆಶಾಲೆಕಾಲೇಜು ದೇವಸ್ಥಾನದತ್ತಿ ಸಂಘಗಳೇ ಮುಂತಾದವುಗಳಿಂದಲೂ ಮಾಹಿತಿಯನ್ನು ಪಡೆದುಕೊಳ್ಳಬಹುದು.


ಮಾಹಿತಿ ಹಕ್ಕು ಕಾಯ್ದೆ ೨೦೦೫

ಮಾಹಿತಿ ಹಕ್ಕು ಕಾಯಿದೆಯನ್ನು ೨೦೦೫ರಿಂದ ಜಾರಿಗೆ ತರಲಾಗಿದೆಈ ಕಾಯಿದೆಯಡಿಗೆ ರಾಜ್ಯಸರ್ಕಾರಿಕೇಂದ್ರಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಸರ್ಕಾರಿ ಸಹಯೋಗದ ಸಂಸ್ಥೆಗಳು ಒಳಪಡುತ್ತವೆ ಕಾಯಿದೆಯ ಅನ್ವಯ ನಾಗರಿಕರು ಕೇಳುವ ಪ್ರಶ್ನೆಗಳಿಗೆ ಸಂಸ್ಥೆಗಳು ಸರಿಯಾದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ನೀಡಲೇಬೇಕಾಗಿದೆಇದಕ್ಕೆಂದೇ ಪ್ರತಿಇಲಾಖೆಗಳಲ್ಲೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆಮಾಹಿತಿಯನ್ನು ನೀಡಲು ವಿಫಲರಾದ ಸಂಸ್ಥೆಗಳ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಅರ್ಜಿಯನ್ನು ವ್ಯಕ್ತಿಯೊಬ್ಬ ಸಲ್ಲಿಸಬಹುದು. ಯಾವ ಅಧಿಕಾರಿಯೂ ಯಾವ ಕಾರಣಕ್ಕಾಗಿ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎಂದು ಕೇಳುವ ಅಧಿಕಾರವನ್ನು ಹೊಂದಿರುವುದಿಲ್ಲ.

ಮಾಹಿತಿ ಹಕ್ಕು ಅರ್ಜಿಯನ್ನು ಹೇಗೆ ಸಲ್ಲಿಸುವುದು?

ಅರ್ಜಿಯನ್ನು ಒಂದು ಖಾಲಿ ಹಾಳೆಯ ಮೇಲೆ ಬರೆದು ಸಿದ್ಧಪಡಿಸಬಹುದು ಅಥವಾ ಕೆಲವು ಇಲಾಖೆಗಳ ಕಚೇರಿಗಳಲ್ಲಿ ಮಾದರಿ ಅರ್ಜಿಗಳೂ ಸಿಗಲಿದ್ದು ಅವನ್ನು ಬಳಸಿಯೂ ಅರ್ಜಿಯನ್ನು ಸಿದ್ಧಪಡಿಸಬಹುದು. ಅರ್ಜಿಯನ್ನು ಒಂದು ನಿರ್ದಿಷ್ಟ ಮಾದರಿಯಲ್ಲೇ  ಸಲ್ಲಿಸಬೇಕು ಎಂದು ಹೇಳುವ ಅಧಿಕಾರವನ್ನು ಸಂಸ್ಥೆಗಳು ಹೊಂದಿಲ್ಲಆದರೆ ಒಂದು ಮಾದರಿಯನ್ನು ಸಲಹೆ ಮಾಡಲು ಸಂಸ್ಥೆಗಳಿಗೆ ಸ್ವತಂತ್ರವಿದೆ. ಆದರೆ ಮಾದರಿಯನ್ನು ಬಳಸುವುದು ಬಿಡುವುದು ಅರ್ಜಿದಾರರ ಇಚ್ಛೆಗೆ ಬಿಟ್ಟಿದ್ದು.  ಅರ್ಜಿಯನ್ನು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಪ್ರಶ್ನೆಗಳನ್ನು ಕೇಳಲು ಬಳಸಬಹುದುಬೇರೆ ಬೇರೆ ವಿಶಯಕ್ಕೆ ಸಂಬಂದಿಸಿದ ಮಾಹಿತಿ ಬೇಕಾದಲ್ಲಿ ಬೇರೆ ಬೇರೆ ಅರ್ಜಿಯನ್ನು ಸಲ್ಲಿಸಬೇಕು.  ಅರ್ಜಿಯನ್ನು ಖುದ್ದಾಗಿ ಇಲಾಖೆಯ ಕಚೇರಿಗೆ ಹೋಗಿ ಅಥವಾ ರಿಜಿಸ್ಟರ್ಡ್ ಅಂಚೆಯ ಮೂಲಕ ತಲುಪಿಸಬಹುದುಖುದ್ದಾಗಿ ಸಲ್ಲಿಸಿದ ಪ್ರತಿ ಅರ್ಜಿಗೆ ೧೦ ರೂಪಾಯಿ ಶುಲ್ಕವನ್ನು ಕೊಡಬೇಕು ಮತ್ತು ಮುಖ್ಯವಾಗಿ ಕೊಟ್ಟ ಹಣಕ್ಕೆ ರಶೀತಿಯನ್ನು ಪಡೆಯಬೇಕು. ರಶೀತಿಯೇ ಅರ್ಜಿ ಸಲ್ಲಿಸಿದ್ದಕ್ಕೆ ಸಾಕ್ಷಿಅಥವಾ ತಾವೇನಾದರೂ ರಿಜೆಸ್ಟರ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಲ್ಲಿ ೧೦ ರೂಪಾಯಿಯ ಪೋಸ್ಟಲ್ ಆರ್ಡರ್ ಅನ್ನು ಅರ್ಜಿಯ ಜೊತೆಗೆ ಕಳುಹಿಸಬೇಕುಮುಖ್ಯವಾಗಿ ರಿಜಿಸ್ಟರ್ ಪೋಸ್ಟ್ ಮಾಡಿದ ರಶೀತಿಯೇ ತಾವು ಅರ್ಜಿ ಸಲ್ಲಿಸಿದ್ದಕ್ಕೆ ಸಾಕ್ಷಿತಾವೇನಾದರೂ ಯಾವುದಾರರು ಮಾಹಿತಿಯ ಜೆರಾಕ್ಸ್ ಪ್ರತಿಯನ್ನು ಕೇಳಿದ್ದರೆ ಪುಟ ಒಂದಕ್ಕೆ ರೂಗಳನ್ನು ನೀಡಬೇಕುಅದೂ ಕೂಡಾ ಸಂಬಂಧಪಟ್ಟ ಇಲಾಖೆಗಳು ಸೂಚಿಸಿದ ನಂತರಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಲ್ಲಿ ಮಾಹಿತಿ ಹಕ್ಕು ಪ್ರಾಧಿಕಾರಕ್ಕೆ ದೂರು ನೀಡಬಹುದು

ಮಾಹಿತಿ ಹಕ್ಕು ಅರ್ಜಿಯನ್ನು ಯಾರಿಗೆ ಸಲ್ಲಿಸಬೇಕು?

ಪ್ರತಿಯೊಂದು ಸಂಸ್ಥೆಯಲ್ಲೂ ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರಿಸಲೆಂದು ಸಾರ್ವಜನಿಕ ಮಾಹಿತಿಸಂಪರ್ಕ ಅಧಿಕಾರಿಗಳನ್ನು ನೇಮಿಸಿರುತ್ತಾರೆಹಾಗೇನಾದರೂ ಅಧಿಕಾರಿಯ ನೇಮಕ ಆಗಿಲ್ಲದಿದ್ದಲ್ಲಿ ಅಥವಾ ಅಧಿಕಾರಿಯ ವಿಳಾಸ ತಿಳಿಯದಿದ್ದಲ್ಲಿ ನೇರವಾಗಿ ಸಂಸ್ಥೆಯ ಅಥವಾ ಇಲಾಖೆಯ  ಮುಖ್ಯಸ್ಥರಿಗೆ ಸಲ್ಲಿಸಬಹುದುಇಲಾಖೆಯ ಮಿಂಬಲೆಗಳಲ್ಲಿ ಸಾರ್ವಜನಿಕ ಮಾಹಿತಿಸಂಪರ್ಕ ಅಧಿಕಾರಿ ಅಥವಾ ಮುಖ್ಯಸ್ಥರ ವಿಳಾಸವನ್ನು ಪಡೆದುಕೊಳ್ಳಬಹುದುಸಾರ್ವಜನಿಕ ಮಾಹಿತಿ/ ಸಂಪರ್ಕ ಅಧಿಕಾರಿಗಳುಅರ್ಜಿ ಸಲ್ಲಿಸಿದ ದಿನದಿಂದ ೩೦ ದಿನದ ಒಳಗೆ ಉತ್ತರಿಸಬೇಕು

ಮಾಹಿತಿ ತಲುಪದಿದ್ದಲ್ಲಿ ಏನು ಮಾಡಬಹುದು?

ಮಾಹಿತಿ ತಲುಪದಿದ್ದಲ್ಲಿ ಅಥವಾ ತಲುಪಿದ ಮಾಹಿತಿ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಮೊದಲ ಮೇಲ್ಮನವಿಯನ್ನು  ಅವಧಿ ಮುಗಿದ ೩೦ ದಿನದ ಒಳಗೆ ಅಥವಾ ಮಾಹಿತಿ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಮಾಹಿತಿ ಸಿಕ್ಕಿದ ೩೦ ದಿನದ ಒಳಗೆ ಸಲ್ಲಿಸಬಹುದುಪ್ರತಿಯೊಂದು ಸಂಸ್ಥೆಗಳಲ್ಲಿ ಮೊದಲ ಮೇಲ್ಮನವಿ ಅಧಿಕಾರಿಯನ್ನು ನೇಮಿಸಿರುತ್ತಾರೆ ಅಧಿಕಾರಿಯು ಸಾರ್ವಜನಿಕ ಮಾಹಿತಿಸಂಪರ್ಕ ಅಧಿಕಾರಿಗಳಿಗಿಂತ ಹಿರಿಯ ಸ್ಥಾನದಲ್ಲಿರುತ್ತಾರೆಕರ್ನಾಟಕ ಸರ್ಕಾರದ ನಿಯಮದಂತೆ ಮೊದಲ ಮೇಲ್ಮನವಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲಮೊದಲ ಮೇಲ್ಮನವಿ ಪ್ರಾದಿಕಾರಕ್ಕೆ  ೪೫ ದಿನಗಳಲ್ಲಿ ಮಾಹಿತಿ ನೀಡಬೇಕಾದ ಸಮಯದ ಮಿತಿಯಿದೆಮೇಲ್ಮನವಿ ಪ್ರಾಧಿಕಾರವು ಮೊದಲ ಮೇಲ್ಮನವಿ ವಿಚಾರಣೆಗೆ ಅಗತ್ಯವಿಲ್ಲದೇ ಅರ್ಜಿದಾರರನ್ನು ಕರೆಯುವಂತಿಲ್ಲ.

ಮೊದಲ ಮೇಲ್ಮನವಿಗೆ ಕೂಡ ಉತ್ತರ ಬರದಿದ್ದಲ್ಲಿ ಏನು ಮಾಡಬೇಕು?

ಮೊದಲ ಮೇಲ್ಮನವಿಗೂ ಕೂಡ ಯಾವುದೇ ಉತ್ತರ ಬರದಿದ್ದಲ್ಲಿ ಮೊದಲನೇ ಮೇಲ್ಮನವಿಯ ಅವಧಿ ಮುಗಿದ ೯೦ ದಿನಗಳ ಒಳಗೆ ಕೇಂದ್ರಸರ್ಕಾರ ಅಥವಾ ರಾಜ್ಯಸರ್ಕಾರದ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬೇಕುಇದನ್ನು ಮೇಲ್ಮನವಿಯ ರೂಪದಲ್ಲಾಗಲೀ ದೂರಿನ ರೂಪದಲ್ಲಾಗಲೀ ಅಥವಾ ಎರಡನ್ನೂ ಸಲ್ಲಿಸಬಹುದಾಗಿದೆಎರಡನೇ ಮೇಲ್ಮನವಿಯನ್ನು ತೀರ್ಮಾನ ಮಾಡಲು ಯಾವುದೇ ಕಾಲಮಿತಿಯಿಲ್ಲಆದ್ದರಿಂದ ನೀವು ಮಾಹಿತಿ ಆಯೋಗವನ್ನು ಸಂಪರ್ಕಿಸಿ ನಿಮ್ಮ ಮೇಲ್ಮನವಿಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು.  ವಿಪರೀತ ವಿಳಂಬವಾದಲ್ಲಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಆಯೋಗವನ್ನು ಕೇಳಿಕೊಳ್ಳಬಹುದು ಅಥವಾ ಹೈಕೋರ್ಟ್ ಅಥವಾ ಸುಪ್ರೀಮ್ಕೋರ್ಟ್ಗೆ ಕೂಡ ಮೊರೆ ಹೋಗುವ ಆಯ್ಕೆ ನಿಮಗೆ ಇದೆ.  ಎರಡನೇ ಮೇಲ್ಮನವಿಯ ವಿಚಾರಣೆಯ ವೇಳೆ ಇಚ್ಛೆಪಟ್ಟಲ್ಲಿ ಅರ್ಜಿದಾರರೂ ಸಹ ಭಾಗವಹಿಸಬಹುದುಎರಡನೇ ಮೇಲ್ಮನವಿಯ ಫಲಶ್ರುತಿಯ ಬಗ್ಗೆ ತಮಗೆ ತೃಪ್ತಿಯಿಲ್ಲದಿದ್ದರೆ ವಿವರವಾದ ಕಾರಣ ನೀಡಿ ಪುನರ್ವಿಮರ್ಶೆಗೆ ಮತ್ತೆ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಹೈಕೋರ್ಟ್ ಅಥವಾ ಸುಪ್ರೀಮ್ ಕೋರ್ಟ್ಗೆ ಮೇಲ್ಮನವಿ ಮಾಡಿ ರಿಟ್ ಅರ್ಜಿ ಸಲ್ಲಿಸಬಹುದುರಾಜ್ಯಸರ್ಕಾರಕ್ಕೆ ಸಂಬಂಧಿಸಿದ ಮನವಿಯನ್ನು ರಾಜ್ಯ ಆಯೋಗಕ್ಕೂ ಕೇಂದ್ರಕ್ಕೆ ಸಂಬಂಧಿಸಿದ್ದನ್ನು ಕೇಂದ್ರ ಆಯೋಗಕ್ಕೂ ಸಲ್ಲಿಸಬಹುದೇ ಹೊರತು ಒಂದು ಇನ್ನೊಂದರ ಅಧೀನವಲ್ಲ.

ಉತ್ತರ ನೀಡದ ಅಧಿಕಾರಿಗಳಿಗೆ ದಂಡವಿದೆಯೇ?

ಹೌದುಕಾರಣವಿಲ್ಲದೆ ಮಾಹಿತಿಯನ್ನು ನೀಡದೆ ಇರುವುದು ಮಾಹಿತಿ ನಿರಾಕರಣೆಗೆ ಸಮವೆಂದು ಪರಿಗಣಿಸಲಾಗಿದೆಇದರಿಂದಾಗಿ ಹೀಗೆ ಮಾಹಿತಿ ನೀಡಲು ವಿಫಲನಾಗುವ ಅಧಿಕಾರಿಯು ದಂಡನೆಗೆ ಅರ್ಹನಾಗಿದ್ದಾನೆಎರಡನೇ ಮೇಲ್ಮನವಿಯನ್ನು ಸಲ್ಲಿಸುವಾಗಲೇ ಪರಿಹಾರಕ್ಕಾಗಿಯೂ ಬೇಡಿಕೆ ಇಡಬಹುದಾಗಿದೆದಿನವೊಂದಕ್ಕೆ ೨೫೦/- ರೂಪಾಯಿ ದಂಡ (ಹೆಚ್ಚೆಂದರೆ ೨೫,೦೦೦/-) ತೆರಲು ಅಧಿಕಾರಿ ಬಾಧ್ಯನಾಗಿರುತ್ತಾನೆ.

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಳಾಸ ನೇ ಮಹಡಿ ನೇ ಸ್ಟೇಜ್ , ಬಹುಮಹಡಿ ಕಟ್ಟಡ(MS Building) ಡಾಅಂಬೇಡ್ಕರ್ ರಸ್ತೆಬೆಂಗಳೂರು-೫೬೦೦೦೧

ಕೇಂದ್ರ ಮುಖ್ಯಮಾಹಿತಿ ಆಯೋಗ ವಿಳಾಸಮುಖ್ಯ ಮಾಹಿತಿ ಆಯುಕ್ತರುಕೇಂದ್ರ ಮಾಹಿತಿ ಆಯೋಗ ನೇಬ್ಲಾಕ್ ನೇಮಹಡಿಹಳೇ ಜೆ.ಎನ್.ಯುಆವರಣದೆಹಲಿ.

ಕನ್ನಡಿಗರು ಮಾಹಿತಿ ಹಕ್ಕು ಕಾಯ್ದೆಯನ್ನು ಹೆಚ್ಚು ಹೆಚ್ಚು ಬಳಸಿ ಗ್ರಾಹಕಸೇವೆಯಲ್ಲಿ ಕನ್ನಡದ ಬಳಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ಇನ್ನೇಕೆ ತಡಾ... ಮಾಹಿತಿ ಹಕ್ಕು ಸಹಾಯ ಸಂಸ್ಥೆಗಳ/ ಕಾನೂನು ತಜ್ಞರ ಸಹಾಯದೊಂದಿಗೆ ಇವತ್ತೇ ಶುರು ಮಾಡ್ಕೊಳೋಣ್ವಾ... ಗುರೂ!




1 ಅನಿಸಿಕೆ:

Anonymous ಅಂತಾರೆ...

ನನಗೆ ಸರಿಯಾದ ಮಾಹಿತಿ ಸಿಕ್ಕಿದೆ ದನ್ಯವಾದಗಳು


ಉಲ್ಲಾಸ್ ಕೆ.ಆರ್
ಹುಂಚ.ಹೊಸನಗರ(ತಾ)
ಶಿವಮೊಗ್ಗ(ಜಿ)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails