ಧಾರವಾಡದಲ್ಲಿನ ಕಲಿಕೆ ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ


ಬನವಾಸಿ ಬಳಗವು ಇತ್ತೀಚಿಗೆ ಬಿಡುಗಡೆ ಮಾಡಿದ "ಬೆಳಗಲಿ ನಾಡ ನಾಳೆಗಳು: ಕಲಿಕಾ ವ್ಯವಸ್ಥೆಗೊಂದು ಕೈಮರ" ಹೊತ್ತಗೆಯು ಬರುವ ಭಾನುವಾರದಂದು ಧಾರವಾಡದಲ್ಲಿಯೂ ಬಿಡುಗಡೆಗೊಳ್ಳಲಿದೆ. ಈ ಮರುಬಿಡುಗಡೆ ಕಾರ್ಯಕ್ರಮವು, ನಾಡಿನಲ್ಲಿ ಹೆಸರಾದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿಕೊಂಡಿರುವ ಅನೇಕ ಸಂಘ ಸಂಸ್ಥೆಗಳು/ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲಬಾರಿಗೆ ಕರ್ನಾಟಕದ ಈ ಭಾಗದಲ್ಲಿ ಬಳಗದ ಕಾರ್ಯಕ್ರಮವು ನಡೆಯಲಿದ್ದು ತಮ್ಮನ್ನು ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಬನ್ನಿ, ಭಾಗವಹಿಸಿ.

ಕಾರ್ಯಕ್ರಮ ನಡೆಯುವ ಸ್ಥಳ: 
ಶ್ರೀ ನಲವಡಿ ಸಭಾಭವನ
ಮೊದಲನೇ ಮಹಡಿ
ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಕಾರ್ಯಕ್ರಮ ನಡೆಯುವ ದಿನ

23 ಸೆಪ್ಟೆಂಬರ್, 2012, ರವಿವಾರಸಮಯ: ಸಂಜೆ 5:00 ಗಂಟೆಗೆ

ಕಾರ್ಯಕ್ರಮ ನಡೆಸಿಕೊಡುತ್ತಿರುವವರುಶಿಕ್ಷಣ ಮಂಟಪ,
ಕರ್ನಾಟಕ ವಿದ್ಯಾವರ್ಧಕ ಸಂಘ,
ಧಾರವಾಡ

ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊತ್ತಗೆ ಬಿಡುಗಡೆ ಮಾಡುವವರು೧. ಶ್ರೀ ನಿರಂಜನಾರಾಧ್ಯ ವಿ. ಪಿ. - ಮುಖ್ಯ ಅತಿಥಿಗಳು
೨. ಶ್ರೀ ಆನಂದ್, ಬನವಾಸಿ ಬಳಗ - ಅಧ್ಯಕ್ಷತೆ
೩. ಶ್ರೀ ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ವಿದ್ಯಾವರ್ಧಕ ಸಂಘ
೪.  ಶ್ರೀ ಸಂಜೀವ ಕುಲಕರ್ಣಿ, ಕಾರ್ಯದರ್ಶಿ, ಶಿಕ್ಷಣ ಮಂಟಪ, ವಿದ್ಯಾವರ್ಧಕ ಸಂಘ
೫. ಪ್ರಿಯಾಂಕ್ ಕತ್ತಲಗಿರಿ

ಶ್ರೀ ನಿರಂಜನಾರಾಧ್ಯ ಅವರು "ಕನ್ನಡ ಮಾಧ್ಯಮ ಶಿಕ್ಷಣ: ಇಂದು ಮತ್ತು ನಾಳೆ" ಎಂಬ ವಿಚಾರವಾಗಿ ಮಾತನಾಡಲಿದ್ದಾರೆ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails