ಕನ್ನಡಿಗರ ಕಣ್ಮಣಿಯ ನೆನಪಲ್ಲಿ...


(ವಿಡಿಯೋ ಕೃಪೆ: ಯೂಟ್ಯೂಬ್)

ಇಂದು ಡಾ. ರಾಜ್‌ಕುಮಾರ್ ಹುಟ್ಟಿದ ದಿನ. ಕನ್ನಡಪರರ ಪಾಲಿಗೆ ನಾಡಪರ ಬದ್ಧತೆಯನ್ನು ಮರುಖಾತ್ರಿ ಪಡಿಸುವ ದಿನವಿದು ಎಂದರೆ ತಪ್ಪಾಗಲಾರದು. ತನ್ನ ಚಿತ್ರಗಳಿಂದ, ಚಿತ್ರಗಳಲ್ಲಿನ ಪಾತ್ರಗಳಿಂದ ನಮ್ಮೆಲ್ಲರ ಮೈಮನಗಳನ್ನು ಆವರಿಸುವ ರಾಜ್ ಅವರು ನಮ್ಮ ಸಮಕಾಲೀನರು ಎನ್ನುವುದೇ ಒಂದು ಹೆಮ್ಮೆಯ ವಿಷಯ. ಈ ದಿನ ಅವರನ್ನು ನೆನೆಸದ ಕನ್ನಡಿಗರೇ ಇಲ್ಲಾ! ರಾಜ್! ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನದ ಮನವೇ ಇಲ್ಲಾ!

ತಾವು ಅಭಿನಯಿಸಿದ ಪಾತ್ರಗಳು ಎಂಥವೇ ಇರಲಿ.. ಎಂದಿಗೂ ಸಭ್ಯತೆಯನ್ನು ಮೀರದ ಪಾತ್ರಗಳು ಅವಾಗಿರುತ್ತಿದ್ದವು. ಕನ್ನಡಜನತೆಯ ಇತಿಹಾಸವನ್ನು ಮತ್ತೆ ಕಣ್ಮುಂದೆ ಕಟ್ಟಿಕೊಟ್ಟು ನಾವೇನೂ ಕುರಿಮರಿಗಳಲ್ಲಾ... ದೊಡ್ಡದನ್ನು ಸಾಧಿಸಲೆಂದೇ ಹುಟ್ಟಿರುವ ಸಿಂಹಗಳು ಎಂಬುದನ್ನು ಸದಾ ನೆನಪಿಸುವ ಮಯೂರ ಚಿತ್ರದ ಈ ದೃಶ್ಯ ಸದಾ ಪ್ರೇರಕ, ಸ್ಪೂರ್ತಿದಾಯಕ. ಡಾ. ರಾಜ್ ಹುಟ್ಟುಹಬ್ಬದ ಶುಭಾಶಯಗಳು!!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails