ಬಂಡಿಪುರ: ಸರಿಯಾದ ನಿಲುವು ತೋರಿದ ಸರ್ಕಾರ!

(ಫೋಟೋ ಕೃಪೆ: ಉದಯವಾಣಿ)

ಬಂಡಿಪುರದ ಕಾಡಿನ ನಡುವೆ ಕರ್ನಾಟಕ - ಕೇರಳ - ತಮಿಳುನಾಡಿಗೆ ಸಾಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ದಾರಿಗಳಲ್ಲಿ ಇರುಳು ಸಂಚಾರವನ್ನು ನಿಶೇಧಿಸಲಾಗಿದೆ. ಇದಕ್ಕೆ ಈ ದಾರಿಗುಂಟಾ ಇರುವ ವೈವಿಧ್ಯಮಯ ವನ್ಯಜೀವಿಗಳ ಜೀವ ಮತ್ತು ಖಾಸಗಿತನದ ರಕ್ಷಣೆಯ ಬಗ್ಗೆ ಇರುವ ಕಾಳಜಿಯೇ ಕಾರಣವಾಗಿದ್ದು... ಕರ್ನಾಟಕ ಸರ್ಕಾರ ತನ್ನ ನೆಲದಲ್ಲಿ ಈ ನಿಶೇಧವನ್ನು ಜಾರಿಮಾಡಿದೆ. ಈ ನಿಲುವಿನಿಂದಾಗಿ ಕೇರಳ ಕಸಿವಿಸಿಗೊಳಗಾಗಿದ್ದು ಈ ಇರುಳು ಸಂಚಾರ ನಿಶೇಧವನ್ನು ತೆಗೆದುಹಾಕುವಂತೆ ಎಲ್ಲಾ ಬಗೆಯಲ್ಲಿ ಒತ್ತಡವನ್ನು ಕರ್ನಾಟಕದ ಮೇಲೆ ಹಾಕುತ್ತಾ ಬಂದಿದೆ.

ಇಂಥದ್ದೇ ಒತ್ತಡ ಹಾಕಲು ಈ ಬಾರಿಯೂ ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಉಮ್ಮಾನ್ ಚಾಂಡಿಯವರು ಬೆಂಗಳೂರಿಗೆ ಬಂದಿದ್ದರು. ಇವರನ್ನು ಭೇಟಿ ಮಾಡಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿಯೇ ನಿಶೇಧ ತೆರವು ಮಾಡಲಿಕ್ಕಾಗದು ಎಂದಿದ್ದಾರೆ. ಬದಲಿ ಮಾರ್ಗವನ್ನು ಕಂಡುಕೊಳ್ಳುವ ಬಗ್ಗೆ ಒಲವು ತೋರಿದ್ದಾರೆ.. ಕರ್ನಾಟಕದ ಆನೆ, ಹುಲಿ, ಕಾಡೆಮ್ಮೆ, ಜಿಂಕೆಗಳೇ ಸೇರಿದಂತೆ ವನ್ಯಜೀವಿ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿನಿಲುವು ತೋರಿದ್ದಾರೆ. ಅಭಿನಂದನೆಗಳು.

ಕೊನೆಹನಿ: ಕರ್ನಾಟಕದ ಜನರಿಂದಲೇ ಆಯ್ಕೆಯಾಗಿರುವ ವಲಸಿಗರಾದ ಒಬ್ಬ ಸಚಿವಮತ್ತೊಬ್ಬ ಶಾಸಕರು ಈ ವಿಷಯವಾಗಿ ಕೇರಳದ ಪರವಾದ ಲಾಬಿಯನ್ನು ನಡೆಸಿ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಲು ಮುಂದಾದರು ಎಂಬ ಸುದ್ದಿಯನ್ನು ನೋಡಿದಾಗ ನಮ್ಮವರೇ ನಮ್ಮ ಜನಪ್ರತಿನಿಧಿಗಳಾಗಿರಬೇಕಾದ ಅಗತ್ಯ ಅರಿವಾಗುತ್ತದೆ. ಯೋಚಿಸಿ ನೋಡಿ... ರಾಜಕೀಯದ ಈ ಏರಿಳಿತದಾಟದಲ್ಲಿ ನಾಳೆ ನಮ್ಮ ನಾಡಿನವರಲ್ಲದ ವ್ಯಕ್ತಿಯೇ ಕರ್ನಾಟಕದ ಮುಖ್ಯಮಂತ್ರಿಯಾಗಿಬಿಟ್ಟರೆ ನಾಡನ್ನು ತಮ್ಮ ತವರಿನ ಪದತಳಕ್ಕೆ ಅರ್ಪಿಸುವುದಿಲ್ಲಾ ಎನ್ನಲಾಗುವುದೇ!




0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails