ವಿನಾಯಕನಿಗೆ ಗಣೇಶನ ಮಳೆ ಕಲಿಸಿದ ಪಾಠ!

೨೫ ಚಿತ್ರಮಂದಿರದಲ್ಲಿ ಬೆಳ್ಳಿಹಬ್ಬ, ೪೧ ಚಿತ್ರಮಂದಿರದಲ್ಲಿ ನೂರುದಿನದಹಬ್ಬ ಆಚರಿಸಿಕೊಂಡು ಇನ್ನೂ ಅಬ್ಬರ ಕಡಿಮೆಗೊಳಿಸದೆ ಮುನ್ನುಗ್ಗುತ್ತಿರುವ ಮುಂಗಾರು ಮಳೆ, ೨೯ ನೆ ಡಿಸಂಬರ್ ೨೦೦೬ ರಂದು ಬಿಡುಗಡೆಗೊಳ್ಳುವ ಸಮಯದಲ್ಲಿ ಚಿತ್ರಮಂದಿರದ ಕೊರತೆ ಎದುರಿಸಿತ್ತು ಅಂದರೆ ನೀವು ನಂಬ್ತೀರಾ?







ಈ ವಾರದ "ಚಿತ್ರಪ್ರಭ" ಸಿನಿಮಾ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಸುದ್ಢಿಯಲ್ಲಿ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಿದ್ದ - ಮೂಗು ಮುರಿಯುತ್ತಿದ್ದ ಚಿತ್ರಮಂದಿರವೊಂದರ ಮಾಲಿಕ ಕಾಸಿಗಾಗಿ ಕನ್ನಡದ ಹಿಂದೆ ಹೇಗೆ ಬಿದ್ದ ಅನ್ನೋದನ್ನ ಓದಿದರೆ ಅಚ್ಚರಿ ಖಂಡಿತ! ಮತ್ತೊಂದು ವಿಶೇಷವೆಂದರೆ ಓಡದ ಬೇರೆಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಗುಂಗಿಗೆ ಬಿದ್ದಿದ್ದ ಬೆಂಗಳೂರಿನ ವಿನಾಯಕ, ನಟರಾಜ್ ಚಿತ್ರಮಂದಿರಗಳಲ್ಲಿ ಮುಂಗಾರು ಮಳೆ ನೂರುದಿನ ಆಚರಿಸಿಕೊಂಡಿದೆ. ವಿನಾಯಕ ಈಗ ಖಾಯಂ ಕನ್ನಡ ಚಿತ್ರ ಪ್ರದರ್ಶಿಸುತ್ತಿದೆ, ಕನ್ನಡ ಚಿತ್ರಗಳನ್ನು ನಾಮುಂದು-ತಾಮುಂದು ಎಂದು ನುಗ್ಗಿ ಪಡೆಯುತ್ತಿವೆ. ಇದರಿಂದ ಕಾಸು ಸಾಕಷ್ಟು ಎಣಿಸುತ್ತಿದ್ದಾರೆ! ಕನ್ನಡ ಚಿತ್ರರಂಗದ ಬಗ್ಗೆ ಯಾರುಯಾರಿಗೆ ಸಂದೇಹಗಳಿದ್ದವೋ ಅವರಿಗೆಲ್ಲ ಉತ್ತರ ಸಿಕ್ಕಿದಂತಾಗಿದೆ.
ಕಾಫಿ ತೊಗೊಳಿ, ಯೂಟ್ಯೂಬ್ ನಲ್ಲಿ ಹಾಡು ಕೇಳಿ/ನೋಡಿ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails