"ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ"

ಇವತ್ತಿನ ದಿನ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗಿ ದುಡಿಯುವುದು ದುರಭಿಮಾನ, ಇಲ್ಲವೇ ಜಾತಿವಾದ, ಇಲ್ಲವೇ ರಾಷ್ಟ್ರೀಯತ್ವಕ್ಕೆ ವಿರುದ್ಧ ಎಂದು ದುಡುಕುವುದು ಕೆಲವರಿಗೆ ವಾಡಿಕೆಯಾಗಿಹೋಗಿದೆ. ಆದರೆ ಈ ದುಡುಕಾಟದಲ್ಲಿ ಹುರುಳಿಲ್ಲ.

ಕರ್ನಾಟಕವೆಂಬ ಭಾಷಾವಾರು ರಾಜ್ಯ ಹುಟ್ಟಬೇಕು ಎಂದು ವಾದಿಸಿದ ಮೊದಲಿಗ, ಕರ್ನಾಟಕ ಕುಲಪುರೋಹಿತರಾದ ಆಲೂರ ವೆಂಕಟರಾಯರ "ಕರ್ನಾಟಕತ್ವದ ವಿಕಾಸ" ಎಂಬ ಹೊತ್ತಗೆಯಿಂದ ಆಯ್ದ ವಾಕ್ಯಗಳು ಕೆಳಗಿವೆ. ಹಿಂದೆ ಕರ್ನಾಟಕವೆಂಬ ಪ್ರತ್ಯೇಕ ರಾಜ್ಯ ಕ್ಕಾಗಿ ಹೋರಾಡುತ್ತಿದ್ದ ಅಲೂರ ವೆಂಕಟರಾಯರನ್ನು ಕೂಡ ಜನರು (ಕನ್ನಡಿಗರು ಕೂಡ!) ಅಪಾರ್ಥ ಮಾಡಿಕೊಂಡಿದ್ದುಂಟು, ಅವರನ್ನು "ದುರಭಿಮಾನಿ", "ಜಾತಿವಾದಿ", ಮತ್ತು "ರಾಷ್ಟ್ರೀಯತ್ವ ವಿರೋಧಿ" ಎಂದೆಲ್ಲ ಕರೆದಿದ್ದುಂಟು. ಹಿಂದೆಯೂ ಅವರು ಈ ಪೊಳ್ಳು ವಿರೋಧಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಸಿದ್ಧಾಂತವನ್ನು ಸ್ಪಷ್ಟವಾಗಿ ಅರ್ಥ ಮಾಡಿಸಿದ್ದುಂಟು. ಕರ್ನಾಟಕವೆಂಬ ಪ್ರತ್ಯೇಕ ರಾಜ್ಯವನ್ನು ಕನ್ನಡಿಗರಿಗಾಗಿ ಅವರು ಕೊಡಿಸಿಯೇ ತೀರಿದ್ದು. ಆ ಮಹಾನುಭಾವನ ಅಂದಿನ ಮಾತುಗಳು ಇಂದಿಗೂ ಹೊಂದುತ್ತವೆ. ಇಂದೂ ಕೂಡ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗಿ ದುಡಿಯುವವರಲ್ಲಿ ಇಲ್ಲಸಲ್ಲದ ದೋಷಗಳನ್ನು ಕಾಣುವವರಿಗೆ ಅವರದೇ ಉತ್ತರ:
ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ.

ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ.

ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು. ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು.

ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.

ಏಳಿ! ಎದ್ದೇಳಿ! ಕನ್ನಡಿಗನೇನೆಂಬುದನ್ನು ಅರ್ಥ ಮಾಡಿಕೊಳ್ಳಿ! ಪ್ರಪಂಚದಲ್ಲಿ ಕೋಟಿಗೊಂದು ಹೃದಯ ಕನ್ನಡಿಗನದಷ್ಟು ಶುದ್ಧವಾಗಿದ್ದೀತು! ಇಡೀ ಭಾರತಕ್ಕೆ ಕನ್ನಡಿಗನೇ ಆದರ್ಶ ಪುರುಷನು! ಇವನಲ್ಲಿ ಸಂಕುಚಿತ ಮನೋಭಾವವೆಲ್ಲಿಂದ ಬಂದೀತು? ಇವನಲ್ಲಿ ಹೇಡಿತನವೆಲ್ಲಿಂದ ಬಂದೀತು? ಇಲ್ಲಸಲ್ಲದ ಮಣ್ಣೆರಚಾಟವನ್ನು ಕೈಬಿಡಿ! ಬನ್ನಿ! ಒಗ್ಗೂಡಿ! ಒಂದಾಗಿ ಬಂಗಾರದ ಕನ್ನಡನಾಡ ಕಟ್ಟಲು ಮುಂದಾಗಿ!

ಅಂದಹಾಗೆ ಆಲೂರ ವೆಂಕಟರಾವ ಪ್ರತಿಷ್ಠಾನ, ಸಾಧನಕೇರಿ, ಧಾರವಾಡ - ಇವರ ವತಿಯಿಂದ "ಆಲೂರ ವೆಂಕಟರಾಯರ ಸಮಗ್ರ ಕೃತಿಗಳು" ಎನ್ನುವ ಹೊತ್ತಿಗೆ ಸಿಗುತ್ತಿದೆ, ಮರೆಯದೆ ಕೊಂಡು ಓದಿ! ಬೆಂಗಳೂರಿನಲ್ಲಿ ಗಾಂಧೀಬಜಾರಿನ "ಅಂಕಿತ ಪುಸ್ತಕ" ದಲ್ಲಿ ಎಷ್ಟು ಬೇಕಾದರೂ ಸಿಗುತ್ತಿವೆ ಗುರು!

ಭಾರತದಿಂದ ಆಸ್ಕರ್-ಗೆ ಹಿಂದಿ ಚಿತ್ರಾನೇ ಹೋಗಬೇಕಾ?

ಆಸ್ಕರ್ ಪ್ರಶಸ್ತಿಯ ಸ್ಪರ್ಧೇಲಿ ಭಾಗವಹಿಸೋದಕ್ಕೆ ಭಾರತದಿಂದ ಮತ್ತೊಮ್ಮೆ ಒಂದು ಹಿಂದಿ ಚಿತ್ರ "ಆಯ್ಕೆ" ಆಗಿದೆ ಅಂತ 26ನೇ ತಾರೀಕಿನ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಮಾಡಿದೆ. ಅಲ್ಲ - ಭಾರತದಿಂದ ಒಂದು ಚಿತ್ರ ಹೋಗಬೇಕಾದ್ರೆ ಅದು ಹಿಂದೀಲೇ ಇರಬೇಕು ಅಂತ ಏನಾದ್ರೂ ನಿಯಮ ಇದ್ಯಾ? ಭಾರತದ ಬೇರೆ ಎಲ್ಲಾ ಭಾಷೆಗಳ ಚಿತ್ರಗಳಿಗೆ ಏನೂ ಬೆಲೆ ಇಲ್ಲವಾ? ಕನ್ನಡದ ಯಾವ ಚಿತ್ರವನ್ನ ಈ "ಆಯ್ಕೆ" ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿದ್ರು ಅಂತ ಈ "ಆಯ್ಕೆ" ಮಾಡಿದ ತಂಡಕ್ಕೆ ಕೇಳೋರು ಯಾರೂ ಇಲ್ಲವಾ?

ಒಂದು ವರ್ಷಕ್ಕೆ ಭಾರತದಲ್ಲಿ ಹೆಚ್ಚು-ಕಡಿಮೆ 800 ಚಿತ್ರಗಳು ತೆರೆ ಕಾಣತ್ವೆ, ಅದ್ರಲ್ಲಿ ಹಿಂದಿ ಚಿತ್ರಗಳು ಬರೀ 200 ಮಾತ್ರ. ಮಿಕ್ಕ 600 ರಲ್ಲಿ ಕನ್ನಡವೂ ಸೇರಿದಂತೆ 5 ಭಾಷೆಗಳ ಚಿತ್ರಗಳಿರತ್ವೆ. ಇದು ಭಾರತದ ಭಾಷಾ ವಿವಿಧತೆಗೆ ಒಂದು ಉದಾಹರಣೇನೇ ಸರಿ. ಹೀಗಿರುವಾಗ ಬರೀ ಹಿಂದಿ ಭಾಷೆಯ ಚಿತ್ರಗಳನ್ನೇ ಆಯ್ಕೆ ಮಾಡಿ ಕಳಿಸೋದು ಯಾವ ನ್ಯಾಯ ಗುರು? ಈ ದೇಶ ಭಾಷಾವಾರು ರಾಜ್ಯಗಳ ಒಕ್ಕೂಟ ಆಗಿರುವಾಗ ಎಲ್ಲ ಭಾಷೆಗಳಿಗೂ ಸಮಾನ ಹಕ್ಕಿರಬೇಕೋ ಬೇಡವೋ? ಆಸ್ಕರ್ ಅಂತಾ ಜಾಗಕ್ಕೆ ಭಾರತದಿಂದ ಒಂದು ಚಿತ್ರ ಅಂತ ಕಳಿಸಬೇಕಾದ್ರೆ ಎಲ್ಲಾ ಮುಖ್ಯ ಚಿತ್ರ-ನಿರ್ಮಾಣ ಮಾಡೋ ಭಾಷೆಗಳ ಚಿತ್ರಗಳ್ನ ಗಣನೆಗೆ ತೊಗೊಂಡು ಅವುಗಳಲ್ಲಿ ಎಲ್ಲಾದಕ್ಕಿಂತ ಸಕ್ಕತ್ತಾಗಿರೋದನ್ನ ಆಯ್ಕೆ ಮಾಡಿ ಕಳಿಸಬೇಕು ಅನ್ನೋದು ನ್ಯಾಯ. ಆದ್ರೆ ನಿಜವಾಗಲೂ ಭಾರತದಲ್ಲಿ ನಡಿಯೋದು ಏನು ಅಂತ ಈ ಘಟನೆ ಹೇಳತ್ತೆ, ಅಷ್ಟೆ.

ಇವತ್ತು ಹಿಂದಿ ಹೇರಿಕೆಯಿಂದ ಭಾರತವನ್ನ ಪ್ರತಿನಿಧಿಸಕ್ಕೆ ಹಿಂದೀನೇ ಆಗಬೇಕು ಅಂತ ಎಲ್ಲರನ್ನೂ ಮೋಡಿ ಮಾಡಿ ನಂಬಿಸಿಬಿಟ್ಟಿರುವಾಗ, ನಮ್ಮ ಬ್ಯಾಂಕುಗಳಲ್ಲೇ ಕನ್ನಡ ಕಸಕ್ಕಿಂತ ಕಡೆಯಾಗಿರುವಾಗ, ದೈನಂದಿನ ವ್ಯವಹಾರಕ್ಕೂ ಹಿಂದಿ ಗೆದ್ದಿಲು ಲಗ್ಗೆ ಇಟ್ಟಿರುವಾಗ ಇನ್ನು ಆಸ್ಕರ್-ಗೆ ಕನ್ನಡದ ಚಿತ್ರ ಹೋಗಕ್ಕೆ ಎಲ್ಲಿ ಸಾಧ್ಯ ಗುರು? ಕನ್ನಡದ ಚಿತ್ರರಂಗ ಎಷ್ಟು ಚೆನ್ನಾಗಿದ್ದರೇನು, ಇಲ್ದಿದ್ರೇನು? ಭಾರತದಲ್ಲಿ ಹಿಂದಿ ಬರೆದೇ ಹೋದರೆ ಕಲಿಯೋ ವರೆಗೆ ಕನ್ನಡಿಗ ಎರಡನೇ ದರ್ಜೆಯೋನೇ ಗುರು! ನಮ್ಮ ಅಣ್ಣೋರು-ಗಿಣ್ಣೋರು ಎಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಇಲ್ಲಿ! ಇದು ಕಟು ಸತ್ಯ! ಈ ಕಟುಸತ್ಯವನ್ನ ವಿರೋಧಿಸದೆ ಬೇರೆ ದಾರಿಯೇ ಇಲ್ಲ. ಈ ಕಟುಸತ್ಯವನ್ನ ನಿರ್ನಾಮ ಮಾಡದೆ ಕರ್ನಾಟಕದ ಏಳ್ಗೆಯಿಲ್ಲ, ಕನ್ನಡಿಗ ಸ್ವಾಭಿಮಾನದ ಬದುಕು ಬದುಕಕ್ಕಾಗಲ್ಲ ಗುರು! ಹಿಂದಿ ಹೇರಿಕೆಗೆ ಒಂದು ಪೈಸಾನೂ ಸೊಪ್ಪು ಹಾಕಬಾರದು ಗುರು!

ಐಟಿ: ಆಗದಿರಲಿ ಮನೆಗೆ ಮಾರಿ ಪರರಿಗೆ ಉಪಕಾರಿ

ಇದೇ ತಿಂಗಳ 24ನೇ ತಾರೀಕಿನ "ದಿ ಹಿಂದೂ" ನಲ್ಲಿ ಐಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ಸರಿಪಡಿಸಕ್ಕೆ ಬೆಂಗಳೂರಲ್ಲಿ ನಡೆದ ಒಂದು ಸಮ್ಮೇಳನದ ಬಗ್ಗೆ ಸುದ್ದಿ ಬಂದಿದೆ. ಬೆಂಗಳೂರು ಭಾರತದ ಐಟಿ ರಾಜಧಾನಿಯಾದ್ರೂ ಕೂಡ ಕನ್ನಡೇತರರದೇ ಈ ಕ್ಷೇತ್ರದಲ್ಲಿ ಸಿಂಹಪಾಲಿದೆ ಅಂತ ಆ ಸಮ್ಮೇಳನ ಏರ್ಪಡಿಸಿದೋರು ದುಕ್ಕ ತೋಡ್ಕೊಂಡಿದಾರೆ:
Jobs in the IT industry appear to be dwindling for Kannadigas despite Bangalore being the IT capital of India, according to a group of concerned IT professionals and Kannadigas. At a brainstorming session, organised by the jobsite 'IT Udyoga.com' here on Sunday, the group wanted the corporate world that generates IT and ITES-related jobs to keep Kannadigas in mind during the recruitment drive. Promoter of the jobsite, A.R. Venugopal, said that despite their talent Kannadigas were not being employed in the IT and ITES sector.

ಕರ್ನಾಟಕದಲ್ಲಿ ಕನ್ನಡಿಗರಿಗಾಗೋ ಅನ್ಯಾಯದ ಪಟ್ಟಿ ಮಾಡ್ತಾ ಹೋದ್ರೆ ಒಂದು ಹನುಮಂತನ ಬಾಲ ಬರತ್ತಲ್ಲ, ಅದರಲ್ಲಿ ಇದೂ ಒಂದು ಕೂದಲು ಗುರು! ಬೆಂಗಳೂರು ಭಾರತದ ಐಟಿ ಕೇಂದ್ರ ಅನ್ನೋದರಲ್ಲಿ ಯಾವ ಸಂಶಯ ಇಲ್ಲ. ಆದ್ರೆ ಕನ್ನಡಿಗರು ಯಾಕೆ ಕಡಿಮೆ ಸಂಖ್ಯೆಯಲ್ಲಿದ್ದಾರೆ? ನಮ್ಮಲ್ಲೇನು ಬುದ್ದಿ ಇಲ್ವಾ? ವಿದ್ಯೆ ಇಲ್ವಾ? ನಮ್ಮ ಜಾಗದಲ್ಲಿ ನಮಗೇ ಕೆಲ್ಸ ಸಿಗ್ದೆ ಇದ್ರೆ ನಾವು ಎಲ್ಲಿ ಹೋಗ್ಬೇಕು? ನಮ್ಮ ರಾಜ್ಯದಲ್ಲಿ ಅದೆಷ್ಟು ಒಳ್ಳೊಳ್ಳೆ ಇಂಜಿನಿಯರಿಂಗ್ ಕಾಲೇಜುಗಳಿವೆಯಲ್ಲ, ವಿಶ್ವವಿದ್ಯಾಲಯಗಳಿವೆಯಲ್ಲ? ಆದರೂ ಹೀಗೆ ಯಾಕೆ?

ಐಟಿ ಕ್ಷೇತ್ರದಲ್ಲಿ ಕನ್ನಡೇತರರ ಹಾವಳಿ

ಹೊರ ರಾಜ್ಯದಿಂದ ಬಂದವ್ರು ಅವರವರ ರಾಜ್ಯದ ಜನ್ರನ್ನ ಒಳಗೊಳಗೆ ಕರ್ಸ್ಕೋತಾ ಇದ್ರೆ ನಮ್ಗೆಲ್ಲಿ ಸಿಗುತ್ತೆ ಕೆಲ್ಸ? ಹೀಗ್ ಬಂದವ್ರೆಲ್ಲ ತಮ್ಮ ತಮ್ಮ ಗುಂಪು ಕಟ್ಕೋತಾರೆ, ಅವರವರಿಗೆ ಬೇಕಾದ ಹಾಗೆ ಇರ್ತಾರೆ. ಅವರ ಭಾಷೆ, ಸಂಸ್ಕ್ಟುತೀನ ನಮ್ಮ ಮೇಲೆ ಹೇರ್ತಾರೆ. ಐಟಿ ಕೆಲಸಕ್ಕೆ ಮಾತ್ರ ಅಲ್ಲ, ಬೇರೆ ಕೆಲ್ಸಕ್ಕೂ (ಅಡುಗೆ, ರಕ್ಷಣಾ ಸಿಬ್ಬಂದಿಯಿಂದ ಹಿಡಿದು ನಾಮಕರಣ-ತಿಥಿ ಮಾಡಿಸೋ ಪುರೋಹಿತನ ತನಕ) ತಮ್ಮ ತಮ್ಮ ಜನರನ್ನ ಕರ್ಕೋಂಡು ಬರ್ತಾರೆ. ಎಲ್ಲ ಕೆಲ್ಸದಲ್ಲೂ ನಮಗೇ ತಾನೆ ಮೋಸ ಆಗೋದು?

ಅವರ ಮನರಂಜನೆ ಅಂತ ಅವರ ಭಾಷೆ ಚಿತ್ರಗಳು ಬೇರೆ ಬೇಕು ಅವ್ರಿಗೆ. ಕನ್ನಡನಾಡಲ್ಲಿ ಯಾವುದೇ ಕಂಪನಿ ಶುರು ಆದ್ರೂ ಕನ್ನಡಿಗರಿಗೆ ಬಹುಪಾಲು ಕೆಲ್ಸ ಸಿಗಬೇಕು ಅನ್ನೋದೇ ಧರ್ಮ. ಬೇರೆಬೇರೆಯೋರ್ನ ತಂದು ತುಂಬ್ತೀನಿ ಅನ್ನೋದೇ ಅಧರ್ಮ ಗುರು!

ನಮ್ಮ ರಾಜ್ಯದಲ್ಲಿ ಹೊಟ್ಟೆ ಪಾಡಿಗೆ ಅಂತ ಬರೋರು ಮುಂದೆ ಅವರೇ ಮ್ಯಾನೇಜರುಗಳಾಗಿ ಅವರವರ ಜಾಗಕ್ಕೆ ಹೋಗಿ ಅವರವರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನ ಕ್ಯಾಂಪಸ್ನಲ್ಲಿ ಕರ್ಕೊಂಡು ಬರೋಕಾ ನಮ್ಮ ಜಾಗ ಬೇಕು? ತಮಿಳ ತಮಿಳ್ರನ್ನ, ಮಲಯಾಳಿ ಮಲಯಾಳಿಗಳ್ನ, ಹಿಂದಿಯೋನು ಹಿಂದಿಯೋರ್ನ, ಬಂಗಾಳಿ ಬಂಗಾಳಿಗಳ್ನ ತಂದು ಬೆಂಗಳೂರಿಗೆ ತುಂಬಕ್ಕಾ ಬೆಂಗಳೂರಿರೋದು?

ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಲ್ಲೀಗ್ ಹೋಗಬೇಕು ಗುರು? ಬೇರೆ ರಾಜ್ಯದಲ್ಲೆಲ್ಲ ಅವರವರ ಜನಕ್ಕೇ ಆದ್ಯತೆ ಕೊಟ್ಟು ಅಲ್ಲೂ ಇರೋ ಕನ್ನಡಿಗರು ಮೂಲೆಗುಂಪಾಗೋದ್ನ ನೋಡ್ತಾನೇ ಇದೀವಿ (ತಮಿಳ್ನಾಡು ನೆನೆಸಿಕೊಳ್ಳಿ). ಅಲ್ಲಿ ಅವರಿಗಾಗಿ ಮಿಕ್ಕಿದ್ರೆ ಬೇರೆಯವ್ರಿಗೆ ಅಂತಿರೋವಾಗ ನಮ್ಮಲ್ಲ್ಯಾಕೆ ಬೇರೆ ನಿಯಮ?

ಹೀಗಿರುವಾಗ ನಮ್ಮ ಸರ್ಕಾರ ಏನ್ ಮಾಡ್ಬೇಕು?

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯಸರ್ಕಾರದ ಉದ್ಯೋಗಳಿಗಷ್ಟೇ ಅಲ್ಲ, ಖಾಸಗಿ ಕೆಲ್ಸಗಳಲ್ಲೂ ಕನ್ನಡಿಗರಿಗೇ ಆದ್ಯತೆ ಸಿಗ್ಬೇಕು ಅಂತ ಸರ್ಕಾರ ಆದೇಶ ಹೊರಡಿಸೋದಕ್ಕೆ ಹಿಂಜರೀತಿರೋದು ನಮ್ಮ ಉಳಿವಿಗೇ ಕುತ್ತು ತಂದಿದೆ! ಐಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೋಸವಾಗದೆ ಇರೋಹಾಗೆ ಮಾಡೋದು ಸರ್ಕಾರದ ಕರ್ತವ್ಯ ಗುರು! ಇಲ್ಲವೇ (ಕನ್ನಡೇತರರದೇ ದರ್ಬಾರಿರೋ ಐಟಿ ಕಂಪನಿಗಳು ಅಡ್ಡಗೋಡೆಮೇಲೆ ದೀಪ ಇಟ್ಟಂಗೆ ಹೇಳೋಹಾಗೆ) ಕನ್ನಡಿಗರು ಈ ಕೆಲಸಗಳಿಗೆ ನಿಜವಾಗಲೂ ಅರ್ಹರಲ್ಲ ಅನ್ನೋದೇ ಆದರೆ -
  • ಕನ್ನಡಿಗರಿಗೆ ಈ ಕೆಲಸಗಳಿಗೆ ಹೊಂದುವ ಸಾಮರ್ಥ್ಯಗಳು ಇಲ್ಲವೇ ಇಲ್ಲ ಅನ್ನುವ ಬಗ್ಗೆ ಸ್ಪಷ್ಟವಾಗಿ ಅಂಕಿ-ಅಂಶಗಳಿರೋ ಮಾಹಿತಿ ಬಹಿರಂಗ ಮಾಡಲಿ!
  • ಆ ಸಾಮರ್ಥ್ಯಗಳ್ನ ಕನ್ನಡಿಗರು ಬೆಳಸಿಕೊಳ್ಳೋದಕ್ಕೆ ಸರ್ಕಾರ ಏನೇನು ವ್ಯವಸ್ಥೆ ಮಾಡಿದೆ ಅಂತಾನೂ ಬಹಿರಂಗ ಮಾಡಲಿ!
ಇದ್ಯಾವುದನ್ನೂ ಮಾಡದೆ ಐಟಿ ಕ್ಷೇತ್ರಾನ ತನ್ನಪಾಡಿಗೆ ಕಾಡು ಬೆಳೆದಂಗೆ ಬೆಳ್ಕೊಳ್ಳಿ ಅಂತ ಸರ್ಕಾರ ಏನಾದ್ರೂ ಬಿಟ್ರೆ ಆ ಕಾಡಲ್ಲಿ ಕೊಬ್ಬಿ ಕೊಬ್ಬಿ ಬೆಳೆಯೋ ಕನ್ನಡೇತರ ಕಿರುಬಗಳು ನಿಧಾನವಾಗಿ ಕರ್ನಾಟಕವನ್ನ ತಿಂದುಹಾಕತ್ವೆ, ಅಷ್ಟೆ!

ಐಟಿ ಕನ್ನಡಿಗರು ಏನು ಮಾಡಬೇಕು?

ನಮ್ಮ ಗಾಳಿ, ನಮ್ಮ ನೆಲ, ನಮ್ಮ ನೀರು, ನಮ್ಮ ಸಂಸ್ಕೃತಿ ಎಲ್ಲ ಬೇರೆಯವ್ರಿಗೆ ಮಾರ್ಕೊಂಡು ಕೆಲಸಾನೂ ಇಲ್ಲದೆ ಹೊಟ್ಟೆಮೇಲೆ ತಣ್ಣೀರುಬಟ್ಟೆ ಹಾಕ್ಕೊಂಡು ಸುಮ್ನೆ ಕೈಕಟ್ಟಿ ಕೂತ್ಕೊಳಕ್ಕಾಗಲ್ಲ ಗುರು! ಈ ನಿಟ್ನಲ್ಲಿ ಐಟಿ ಕನ್ನಡಿಗರು -
  • ಮೊದಲಾಗಿ ಒಂದಾಗಬೇಕು. ಒಗ್ಗಟ್ಟಲ್ಲೇ ಶಕ್ತಿಯಿರೋದು
  • ಕನ್ನಡಿಗರ ರೆಸ್ಯೂಮ್ಗಳಿಗೆ ಆದ್ಯತೆ ಕೊಡ್ಬೇಕು
  • ಕನ್ನಡಿಗರನ್ನು ಪ್ರತಿಸ್ಪರ್ಧಿ ಅಂತ ನೋಡದೆ ಸಹಕಾರ ಮಾಡಕ್ಕೆ ಮುಂದಾಗಬೇಕು
  • ಒಂದು ಕೆಲಸಕ್ಕೆ ಬೇಕಾದ ಎಲ್ಲ ಅರ್ಹತೆಗಳುಳ್ಳ 2 ಅಭ್ಯರ್ಥಿಗಳಲ್ಲಿ ಒಬ್ಬ ಕನ್ನಡಿಗನಾಗಿದ್ದು ಮತ್ತೊಬ್ಬ ಬೇರೆಭಾಷೆಯವನಾಗಿದ್ದರೆ ಕನ್ನಡಿಗನಿಗೇ ಆದ್ಯತೆ ಕೊಡಕ್ಕೆ ಹಿಂಜರೀಬಾರ್ದು. ಇದು ತಮ್ಮ ಹಕ್ಕು ಅಂತ ಅರ್ಥ ಮಾಡ್ಕೋಬೇಕು.
  • ಕಾಲೇಜಿಂದ ಈಗಷ್ಟೆ ಪಾಸಾಗಿ ಬರೋ ಕನ್ನಡದ ವಿದ್ಯಾರ್ಥಿಗಳಿಗೆ ಈಗಾಗಲೇ ಕೆಲಸದಲ್ಲಿರೋರು ಮಾರ್ಗದರ್ಶನ ಮಾಡ್ಬೇಕು. ಇಂಟರ್ವ್ಯೂ ಹೇಗೆ ಕೊಡ್ಬೇಕು ಅನ್ನೋದನ್ನ ಹೇಳ್ಕೊಡ್ಬೇಕು.
  • ಕನ್ನಡೇತರ ಸಹೋದ್ಯೋಗಿಗಳಿಗೆ ನಮ್ಮಲ್ಲಿ ಒಂದಾಗಿ ಬಾಳ್ಬೇಕು, ನಮ್ಮ ರಾಜ್ಯದ ಎಲ್ಲ ಸೌಕರ್ಯ ಉಪಯೋಗಿಸ್ತಿರೋರು ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ನಿಜವಾದ ಕಾಳಜಿ ಮೂಡಿಸಿಕೊಳ್ಳುವಂತೆ ಮಾಡ್ಬೇಕು, ಇಲ್ದೇ ಹೋದ್ರೆ ಉಂಡಮನೆಗೆ ಎರಡು ಬಗೆದಂಗಾಗತ್ತೆ ಅಂತ ಅರ್ಥ ಮಾಡಿಸಬೇಕು

ಕನ್ನಡವಾಡುವ ಮುದ್ದಿನ ಪೋಲೀಸ್!

ಮೊನ್ನೆ 24ನೇ ತಾರೀಕಿನ ಕನ್ನಡದ 'ಟೈಮ್ಸ್ ಆಫ್ ಇಂಡಿಯಾ' ದಲ್ಲಿ ನಮ್ಮ ಪೋಲೀಸ್ ಇಲಾಖೆ ಕನ್ನಡದ ಅನುಷ್ಠಾನ ಸರಿಯಾಗಿ ಮಾಡಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡೋ ನಿಟ್ನಲ್ಲಿ ಈ ಕೆಳಗಿನ ಬದಲಾವಣೆಗಳ್ನ ಮಾಡಕ್ಕೆ ಹೊರಟಿದೆ ಅಂತ ವರದಿ ಬಂದಿದೆ:
  1. ಎಫ್.ಐ.ಆರ್. ಕನ್ನಡದಲ್ಲೇ
  2. ಪೋಲಿಸ್ ಭುಜಪಟ್ಟಿಗಳಲ್ಲಿ ಕನ್ನಡದಲ್ಲೇ ಕಂಗೊಳಿಸಲಿರುವ ಐ.ಪಿ.ಎಸ್., ಕೆ.ಎಸ್.ಪಿ.ಎಸ್.
  3. ದೋಷಾರೋಪ ಪಟ್ಟಿ ಸೇರಿದಂತೆ ನ್ಯಾಯಾಲಯಕ್ಕೆ ಸಲ್ಲಿಸುವ ಕಡತಗಳು ಕನ್ನಡದಲ್ಲಿ
  4. ಸಿಬ್ಬಂದಿ ಜತೆ ಕನ್ನಡದಲ್ಲೇ ವ್ಯವಹಾರ
  5. ಸಂಚಾರ ಪೋಲೀಸರ ದಂಡ ಪಾವತಿ ರಸೀತಿಯಲ್ಲೂ ಕನ್ನಡ
  6. ಕನ್ನಡ ಚೆನ್ನಾಗಿ ಬಳಸುವ ಪೋಲಿಸರಿಗೆ ಬಹುಮಾನ, ಬಡ್ತಿಗೆ ಶಿಫಾರಸು
  7. ಪೋಲೀಸರು ಕಳುಹಿಸುವ ಇ-ಮೇಲ್ ಸಂದೇಶಗಳೂ ಕನ್ನಡದಲ್ಲೇ
ತನ್ನ ಎಲ್ಲಾ ಕೆಲ್ಸಗಳನ್ನ ತನಗೆ ಅರ್ಥ ಆಗೋ ಭಾಷೇಲಿ, ಈ ನಾಡಿನ ಜನತೆಗೆ ಅರ್ಥ ಆಗೋ ಭಾಷೇಲಿ ಮಾಡಿದ್ರೆ ಹೆಚ್ಚು ಪರಿಣಾಮಕಾರಿಯಾಗಿರುತ್ತೆ ಅಂತ ತಿಳ್ಕೊಂಡು ಹೆಚ್ಚಾಗಿ ಕನ್ನಡಾನ ಬಳಕೆಗೆ ತರಕ್ಕೆ ಒಂಟಿರೋ ಪೋಲೀಸ್ ಇಲಾಖೆಗೆ ನಾವೆಲ್ರೂ ಸಲೀಟ್ ಮಾಡ್ಬೇಕು ಗುರು!

ಜನಸಾಮಾನ್ಯರಿಗೆ ತೀರಾ ಹತ್ತಿರ್ವಾಗಿ ಕೆಲ್ಸ ಮಾಡೋ ಇಲಾಖೆಗಳಲ್ಲಿ ಪೋಲೀಸ್ ಇಲಾಖೆ ಬಹು ಮುಖ್ಯವಾದದ್ದು. ಹೆಚ್ಚೆಚ್ಚು ಜನ್ರನ್ನ ತಲ್ಪೋ ಪೋಲಿಸ್ ಇಲಾಖೆ ಕನ್ನಡಮಯವಾದ್ರೆ -
  • ಜನಸಾಮಾನ್ಯರು ಪೋಲೀಸರೊಡನೆ ಸುಲಭವಾಗಿ ವ್ಯವಹಾರ ಮಾಡಕ್ಕೆ ಸಹಾಯ ಆಗೋದ್ರಿಂದ ರಾಜ್ಯದ ಕಾನೂನು-ಸುರಕ್ಷತೆ ಹೆಚ್ಚತ್ತೆ.
  • ಪೋಲೀಸರಿಗೆ ತಮ್ಮ ಕೆಲಸವನ್ನ ಯಾವುದೋ ಬೇರೆದೇಶದ ಭಾಷೆಯಲ್ಲಿ ಮಾಡೋ ಹೊರೆ ಹೋಗಿ ನಿಜವಾಗಲೂ ಕಾನೂನು-ಸುರಕ್ಷತೆಗಳ ಕಡೆ ಗಮನ ಹೆಚ್ಚತ್ತೆ
  • ಇಲ್ಲಿಗೆ ಬರೋ ವಲಸಿಗ್ರೂ ಸ್ಥಳೀಯ ಪೋಲಿಸ್ರನ್ನ ಆಶ್ರಯಿಸ್ಬೇಕಾಗಿರೋದ್ರಿಂದ ಅವ್ರಿಗೆ ಕನ್ನಡದಲ್ಲೇ ವ್ಯವಹರಿಸೋದು ಅನಿವಾರ್ಯ ಆಗತ್ತೆ.
  • ನಾಡಿನ ಭಾಷೇಲಿ ಆಡಳಿತ ನಡೆಸಿದ್ರೆ ಹೆಚ್ಚು ಅನುಕೂಲ, ಯಶಸ್ಸು ಸಾಧ್ಯ ಅಂತ ತೋರಿಸ್ಕೋಡೋದ್ರಿಂದ ಇತರ ಇಲಾಖೆಗಳು ಕನ್ನಡಮಯ ಆಗೋಕೆ ಕಣ್ಣು ತೆರ್ಸಿ- ಸ್ಪೂರ್ತಿ ಕೊಡುತ್ತೆ.
ನಮ್ಮ ಪೋಲಿಸ್ರಿಂದ ಮತ್ತಷ್ಟು ಕನ್ನಡ ಡಿಂಡಿಮ ಹೊಡ್ಸೋದಕ್ಕೆ ತಮ್ಮ ಸಂಫೂರ್ಣ ಬೆಂಬಲ ಇದೇ ಅಂತ ಹೇಳಿರೋ ರಾಜ್ಯ ಪೋಲಿಸ್ ಮಹಾ ನಿರ್ದೇಶಕರು ಆದಷ್ಟು ಬೇಗ ಇದನ್ನ ಕಾರ್ಯರೂಪಕ್ಕೆ ತರಬೇಕು ಗುರು, ಕರಾರಸಾಸಂ ಥರಾ ಹೇಳುವುದು ಒಂದು, ಮಾಡುವುದು ಇನ್ನೊಂದು ಅಂತ ಆಗದೇ ಇರಲಿ! ನಮ್ಮ ಪೋಲಿಸ್ರ ಈ ಬುದ್ಧಿವಂತಿಕೆ, ಈ ಉತ್ಸಾಹ ಸರ್ಕಾರದ ಬೇರೆ ಇಲಾಖೆಗಳಿಗೂ ಸಹ ಹರಡಲಿ ಅಂತ ಆಸೆಪಡೋಣ ಗುರು!

ಬೆಂಗ್ಳೂರೇನು ತೋಟದಪ್ಪನ ಧರ್ಮಛತ್ರಾನಾ?

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಘೋಷಣೆ ಆದ ಮೇಲೆ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡ್ತಿವೆ. ಜನತಾದಳ(ಜಾ) ದೋರು ಸ್ಲಮ್ ಜನಗಳಿಗೆ ಹಕ್ಕುಸ್ವಾಮ್ಯ ಪತ್ರ ಕೊಡ್ತೀವಿ ಅಂತಿದಾರಲ್ಲಾ, ಈ ಭರವಸೆ ಈಡೇರ್ಸೋ ಭರದಲ್ಲಿ ಬೇರೆ ಬೇರೆ ರಾಜ್ಯಗಳಿಂದ ವಲಸೆ/ಗುಳೆ ಬಂದಿರೋರ್ಗೆ ಹಕ್ಕುಸ್ವಾಮ್ಯ ಕೊಡೋದು ಎಷ್ಟು ಸರಿ? ಇದು ಅನಿಯಂತ್ರಿತ ವಲಸೆಗೆ ಉತ್ತೇಜನ ಕೊಟ್ಟ ಹಾಗಾಗುತ್ತೆ ಅಷ್ಟೆ. ರಾಜ್ಯಸರ್ಕಾರಕ್ಕೆ ಇರಬೇಕಾದ ಬಡಜನ ಪರವಾದ ಕಾಳಜಿ ಕರ್ನಾಟಕದ ಬೇರೆಬೇರೆ ಜಾಗಗಳಿಂದ ಹೊಟ್ಟೆಪಾಡಿಗೆ ಬರೋ ಕನ್ನಡಿಗರ ಕುರಿತಾಗಿದ್ರೆ ಸಾಕು. ಕನ್ನಡಿಗನೋ ಅಲ್ಲವೋ ಅಂತ ನೋಡ್ದೆ ಮಾಡ್ದೆ ಬಂದೋರಿಗೆಲ್ಲಾ "ಅತಿಥಿದೇವೋ ಭವ" ಅನ್ತಾ ಕೂತಿದ್ರೆ, ನಾವು ಉದ್ಧಾರ ಆದ್ವಿ, ಅದಾಯ್ತು!

ಈಗಾಗ್ಲೆ ಬೆಂಗಳೂರಿನ ಜನಸಂಖ್ಯೇಲಿ 10% ಜನ ಇರೋದು ಕೊಳಚೆ ಪ್ರದೇಶದಲ್ಲಿ. ಬೆಂಗಳೂರಿನ ಇಂಥ ಕೊಳೆಗೇರಿಗಳ ತುಂಬ ವಾಸ ಮಾಡೊ ಹೆಚ್ಚಿನ ಜನ ಎರಡಕ್ಷರ ಕನ್ನಡ ಬರದೇ ಇರೋ ವಲಸಿಗರು. 2004ರಲ್ಲೇ ದಿ ಹಿಂದು ವರದಿ ಮಾಡಿದ ಪ್ರಕಾರ:
The city has been a hub for workers from Tamil Nadu, Andhra Pradesh and North Karnataka for decades now. But the last five years have seen a sea-change in the composition of the incoming populace. In addition to migrants from neighbouring areas, the city is increasingly becoming home-away-from-home for migrants from northern states of Orissa, Bihar, Rajasthan, Gujarat, Uttar Pradesh and Madhya Pradhesh as well.

ಉತ್ತರ ಕರ್ನಾಟಕದಿಂದ ಬಂದೋರಿಗೆ ನೆಲೆ ಮಾಡ್ಕೊಡೋದ್ರಲ್ಲಿ ತಪ್ಪೇನಿಲ್ಲ, ಆದ್ರೆ ತಮಿಳ್ನಾಡು, ಆಂಧ್ರ, ಒರಿಸ್ಸಾ, ಬಿಹಾರು, ರಾಜಸ್ತಾನು, ಗುಜರಾತು, ಉತ್ತರಪ್ರದೇಶ, ಮಧ್ಯಪ್ರದೇಶ - ಇಲ್ಲಿಂದ ಬಂದೋರ್ನೆಲ್ಲಾ ತಲೇಮೇಲೆ ಕೂಡಿಸಿಕೊಳಕ್ಕೆ ನಾವೇನು ಕಿವಿಮೇಲೆ ಹೂವು ಮಡೀಕೊಂಡಿದೀವಾ? "ಬಡವ್ರು ಅಂದ ಮೇಲೆ ಎಲ್ಲರೂ ಒಂದೇ" ಅಂತ ಕನಿಕರ ಪಡೋ ಮಂದಿ ಅರ್ಥ ಮಾಡ್ಕೋಬೇಕಾದ್ದು ಏನಪ್ಪಾ ಅಂದ್ರೆ - ನಮ್ಮೂರಿಗೆ, ಬೇಕು ಅಂದ್ರೆ ನಮಗೆ ಅನುಕೂಲವಾಗೋ ವಲಸೆ ಮಾಡ್ಕೊಳ್ಳೋಣ, ಪರ್ವಾಗಿಲ್ಲ. ಯಾವುದೋ ವಿಶೇಷ ಜ್ಞಾನ, ಪರಿಣಿತಿ ಹೊಂದಿರೋ ಒಬ್ಬ ತಂತ್ರಜ್ಞನ್ನ ನಮ್ಮ ಏಳಿಗೇಗೆ ಅನುಕೂಲ ಆಗುತ್ತೆ ಅಂತ ಒಳಗೆ ಬಿಟ್ಕೊಳ್ಳೋದ್ರಲ್ಲಿ ತಪ್ಪಿಲ್ಲ ಗುರು. ಆದ್ರೆ ಜಗತ್ತಿನ ಬಡವ್ರೆಲ್ಲಾ ಒಂದೇ ಅಂತ ಬೇರೆ ರಾಜ್ಯಗಳ ನಿರಾಶ್ರಿತರಿಗೆ ನೆಲೆ ಕೊಡಕ್ ಹೋದ್ರೆ ಇಡೀ ಕರ್ನಾಟಕವೇ ಭಾರತದ ಸ್ಲಮ್ಮಾಗಿ ಹೋಗತ್ತೆ ಅಷ್ಟೆ! ಇದರಿಂದ ನಮ್ಮ ಜನರ ಬದುಕು ಅರಳೋ ಬದ್ಲು ನರಳುತ್ತೆ. ಬೆಂಗಳೂರಂತಾ ಊರುಗಳು ತೋಟದಪ್ಪನ ಧರ್ಮಛತ್ರ ಆಗತ್ವೆ, ಅಷ್ಟೆ!

ಅಲ್ಲಾ, ಹೀಗ್ ಬೇರ್ ಬೇರೇ ರಾಜ್ಯದಿಂದ ಹೊಟ್ಟೆಪಾಡಿಗೆ ಬರೋ ಜನ್ರಿಗೆಲ್ಲಾ ಹಕ್ಕುಸ್ವಾಮ್ಯ ಕೊಟ್ರೆ ನಾಳೆ ಇವ್ರೆಲ್ಲಾ ಪಡಿತರ ಚೀಟಿ ತೊಗೋಬೋದು, ಗುರುತಿನ ಚೀಟಿ ಪಡ್ಕೋಬೋದು, ಮತದಾನ ಮಾಡ್ಬೋದು, ಚುನಾವಣೆಗೆ ನಿಲ್ಬೋದು, ನಾಳೆ ನಮ್ನೇ ಆಳ್ಬೋದು, ಹೇಗ್ ಆಳಬೇಕು ಅನ್ನೋ ಕಾನೂನೂ ಮಾಡ್ಬೋದು...ಇವೆಲ್ಲಾ ಬೇಕಾ ಗುರು? ಇಂಥೋರು ಹೆಚ್ತಾ ಹೋದ್ರೆ ಇವರಿಂದ ಕನ್ನಡ ಮೂಲೆಗುಂಪಾಗೋಲ್ವಾ? ಇದು ನಮಗೆ ಬೇಕಾ?

ಅಲ್ಲಾ, ತಮ್ಮದು ಪ್ರಾದೇಶಿಕ ಪಕ್ಷ ಅಂತ ಮಾತಾಡೊ ಮಣ್ಣಿನ ಮಕ್ಕಳ ಪಕ್ಷವೇ ಹೀಗ್ ಆಡುದ್ರೆ, ಇನ್ನು ಹುಸಿ ರಾಷ್ಟ್ರೀಯತೆಯಲ್ಲಿ ಮುಳುಗೋಗಿರೋ ಕಾಂಗ್ರೆಸ್ಸು, ಭಾಜಪ ಗಳು ಇನ್ನೆಂಗೆಂಗ್ ಆಡ್ಬೋದು, ನಂ ನಾಡ್ನ ಹೆಂಗೆಂಗ್ ಕಟ್ಟಬಹುದು ಅಂತ ಆತಂಕ ಆಗಲ್ವಾ ಗುರು?

ಮತ್ತೆ ಕರಾರಸಾಸಂ ಬಾಲ ಡೊಂಕು!

ತನ್ನ ಪ್ರತಿಯೊಂದು ಬಸ್ಸಲ್ಲೂ ಮನರಂಜನೆ ಕನ್ನಡದಲ್ಲೇ ಇರಬೇಕು ಅಂತ 2 ತಿಂಗಳ ಹಿಂದೆ ಕರಾರಸಾಸಂ ಸುತ್ತೋಲೆ ಹೊರಡಿಸಿತ್ತು, ನಾವು ಅದನ್ನ ಓದಿ ಸಕ್ಕತ್ ಖುಷಿ ಪಟ್ಟಿದ್ದೂ ಉಂಟು. ಆದ್ರೆ ಕೊಟ್ಟ ಮಾತು ಹಳ್ಳ ಹಿಡಿದು ಹೇಗೆ ಅದೇ ಬಸ್ಸುಗಳಲ್ಲಿ ಮತ್ತೆ ತಮಿಳು, ತೆಲುಗು, ಮರಾಠಿ ಮತ್ತು ಹಿಂದೀ ಚಿತ್ರಗಳು ಓಡ್ತಿವೆ ಅಂತ ಇವತ್ತಿನ ವಿ.ಕ. ದಲ್ಲಿ ವರದಿ ಬಂದಿದೆ.

ಜವಾಬ್ದಾರಿಯಿಲ್ಲದ ವರ್ತನೆ ಕರಾರಸಾಸಂಗೆ ಶೋಭಿಸೋದಿಲ್ಲ

ಅವಕಾಶಗಳ ತವರೂರಾಗಿರೋ ನಮ್ಮ ಬೆಂಗಳೂರು-ಕರ್ನಾಟಕಕ್ಕೆ ಈ ಬಸ್ಸುಗಳ ಮೂಲಕ ಒಂದೇತಪ್ಪ ಬೇರೆ ರಾಜ್ಯಗಳಿಂದ ಬರೋ ವಲಸಿಗರಿಗೆ ಬಸ್ಸಲ್ಲೇ "ಇಲ್ಲಿ ನೀವು ಬದುಕಬೇಕಾದರೆ ಕನ್ನಡ ಕಲೀಬೇಕು" ಅಂತ ಸವಿನಯವಾಗಿ ಹೇಳೋ ಒಂದು ಅವಕಾಶ ಆ ಆದೇಶದಿಂದ ಈಡೇರ್ತಿತ್ತು. ಅಲ್ಲದೆ ಕರ್ನಾಟಕದಲ್ಲಿ ಕನ್ನಡ ಉಳೀಬೇಕಾದ್ರೆ ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡ ಓಡಾಡ್ತಿರಬೇಕು ಅನ್ನೋ ಕನ್ನಡಿಗನ ಕನಸಿಗೆ ಆ ಆದೇಶ ಪೂರಕವಾಗಿತ್ತು ಗುರು. ಆದರೆ ಆ ಆದೇಶಾನ ಕರಾರಸಾಸಂ ಗಂಭೀರವಾಗಿ ಪರಿಗಣಸ್ದೆ ಬಹಳ ಲಘುವಾಗಿ ತಗೊಂಡಿರೋದು ಕನ್ನಡಿಗನ ಭಾವನೆಗಳಿಗೆ ಎಸಗಿರೋ ಒಂದು ದೊಡ್ಡ ಅಪರಾಧ ಅಲ್ಲದೆ ಇನ್ನೇನು ಗುರು?

ಇದಕ್ಕೆ ಕರಾರಸಾಸಂ ಅಧಿಕಾರಿಗಳು ಕೊಡೋ ಕುಂಟು ನೆಪಗಳು ನೋಡಿ:
  • ಪ್ರಯಾಣ ಮಾಡ್ಬೇಕಾದ್ರೆ ನಮ್ಗೆ ನಮ್ಮ ಭಾಷೆ ಚಿತ್ರ ಹಾಕಿ ಅಂತ ಪರಭಾಷಿಕರು ಹೇಳ್ತಾರೆ
  • ಕನ್ನಡದ ಹೊಸ ಚಿತ್ರಗಳು ಪ್ರದರ್ಶನಕ್ಕೆ ಲಭ್ಯವಿಲ್ಲ; ಕನ್ನಡದ ಚಿತ್ರ ನೋಡುಗರಿಗೆ ಹಳೇ ಚಿತ್ರ ಬೇಕಾಗಿಲ್ಲ,
ಅಲ್ಲ, ಬೇರೆ ರಾಜ್ಯದ ಬಸ್ಸುಗಳಲ್ಲಿ ಪ್ರಯಾಣ ಮಾಡೋ ಕನ್ನಡಿಗರಿಗೆ ಕನ್ನಡ ಚಿತ್ರ ನೋಡೋ ಅವಕಾಶ ಇದ್ಯಾ? ಕರಾರಸಾಸಂ ನೋರು ಈ ರೀತಿ ಕುಂಟುನೆಪ ಕೊಡ್ತಿರೋದ್ರಿಂದ ಕರ್ನಾಟಕಕ್ಕೆ ಬರೋರು ಇಲ್ಲಿಯ ಭಾಷೆ-ಸಂಸ್ಕತಿ ಆಚರಣೆಗಳಿಗೆ ಒಗ್ಗಬೇಕು ಅನ್ನೋ ಕನ್ನಡಿಗರ ನಿಲುವಿಗೆ ಹಿನ್ನಡೆ ಆಗ್ತಿದೆ ಅಂತಾದ್ರೂ ಔರಿಗೆ ಗೊತ್ತಾಗಬೇಡವಾ? ವಲಸಿಗರಿಗೆ ನಿಮ್ಮ ಭಾಷೇನ ನಿಮ್ಮ ಮನೇಲೇ ಬಿಟ್ಟು ಬಸ್ ಹತ್ತಿ ಅಂತ ಔರ್ನ ಬಾಗಿಲಲ್ಲೇ ತಡೀಬೇಕಾಗಿದ್ದ ಬಸ್ ನಡ್ಸೋರು ವಲಸಿಗರನ್ನೇ ತಲೆ ಮೇಲೆ ಕುಡಿಸ್ಕೋಂಡಿರೋದು ಕರ್ನಾಟಕಕ್ಕೆ ಸಕ್ಕತ್ತಾಗಿ ಸೇವೆ ಸಲ್ಲಿಸಿದಂತಾಯ್ತು ಬಿಡಿ!

ಜೊತೆಗೆ ಕನ್ನಡದಲ್ಲಿ ಮನರಂಜನೇನೇ ಇಲ್ಲ ಅನ್ನೋ ಬಾವನೇನ ಕರಾರಸಾಸಂ ನೋರು ವಲಸಿಗರ ಮನಸ್ಸಲ್ಲಿ ಹುಟ್ಟಿಹಾಕಿದಂಗಾಗತ್ತೆ ಗುರು. ಮುಂದೆ ಅದೇ ಬಸ್ಸಲ್ಲಿ ಕೂತು ಒಳಗೆ ಬಂದೋರು ಕನ್ನಡ ಚಿತ್ರಗಳ ಬಗ್ಗೆ ಬಾಯಿಗೆ ಬಂದಂಗೆ ಮಾತಾಡ್ತಾರೆ, ಬಾಯಿಗೆ ಬಂದಂಗೆ ನಮ್ನೇ ಅಂತಾರೆ! ಇದನ್ನೆಲ್ಲ ತಡೆಗಟ್ಟೋ ಶಕ್ತಿ ಕರಾರಸಾಸಂ ಕೈಲಿ ಇದ್ದಾಗ ಸ್ವಲ್ಪ ಜವಾಬ್ದಾರಿಯಿಂದ ನಡ್ಕೋಬೇಡ್ವೆ? ಕರ್ನಾಟಕದ ಬಸ್ಗಳಲ್ಲಿ ಕನ್ನಡದಲ್ಲಿ ಮನರಂಜನೆ ಕೊಡಕ್ಕೆ ಯಾರ್ಗೂ ಕರಾರಸಾಸಂನೋರು ಅಂಜ್ಬೇಕಾಗಿಲ್ಲ. ಬಸ್ಗಳಲ್ಲಿ "ಧೂಮಪಾನ" ಹೇಗೆ ನಿಷೇದ ಮಾಡಿದೆಯೋ ಹಾಗೇ "ಕನ್ನಡೇತರ ಭಾಷೆಗಳಲ್ಲಿ ಮನರಂಜನೆ ನಿಷೇಧಿಸಿದೆ" ಅಂತ ಬೋರ್ಡು ತಗಲಿಹಾಕಿದರೂ ಚಿಂತೆಯಿಲ್ಲ ಗುರು - ಆಗ ಬಸ್ಸಲ್ಲಿ ಬೇರೆಭಾಷೆಯಲ್ಲಿ ಮನರಂಜನೆ ಕೊಡಿ ಅಂತ ಹೇಳೋರಿಗೆ ಪದೇ ಪದೇ ಚಾಲಕ/ನಿರ್ವಾಹಕ ಉತ್ರ ಕೊಡಬೇಕಾಗಲ್ಲ.

ನಾವು-ನೀವು ಕನ್ನಡದಲ್ಲೆ ಮನರಂಜನೆ ಕೊಡಿ ಅಂತ ಒತ್ತಾಯ ಮಾಡಬೇಕು

ಇನ್ನು ಕರಾರಸಾಸಂ ಬಸ್ಸಲ್ಲಿ ಪ್ರಯಾಣ ಮಾಡೋ ನಾವು-ನೀವು ಕನ್ನಡ ಚಿತ್ರ/ಮನರಂಜನೇನೇ ಬೇಕು ಅಂತ ಪಟ್ಟು ಹಿಡಿಯೋ ಸಮಯ ಬಂದಿದೆ ಗುರು! ಕನ್ನಡದಲ್ಲಿ ಮನರಂಜನೆ ಕೊಡಲ್ಲ ಅಂದ್ರೆ ಆ ಬಸ್ಸಿನ ಸಂಖ್ಯೆ, ಪ್ರಯಾಣಿಸಿದ ದಿನಾಂಕ, ಸಮಯ ದಾಖಲಿಸಿಕೊಂಡು ಸಾರಿಗೆ ಸಂಸ್ತೆಯಲ್ಲಿ ದೂರು ಕೊಡಕ್ಕೆ ಶುರು ಮಾಡಬೇಕು.

ಕೊನೆ ಗುಟುಕು

ಅಂದಹಾಗೆ ಕನ್ನಡಿಗರು ಬಸ್ಸಲ್ಲಿ ಹೊಸ ಚಿತ್ರಗಳ್ನ ಹಾಕಿ ಅಂತ ಕೇಳೋದು ತಪ್ಪೇನಿಲ್ಲ. ಚಿತ್ರ ನಿರ್ಮಾಪಕರು ಮುಂತಾದೋರು ಹೊಸ ಚಿತ್ರ/ಹಾಡುಗಳ್ನ ಡೀವೀಡಿ-ಗೀವೀಡೀಲಿ ಬಿಡಕ್ಕೆ ಮುಂದಾಗಬೇಕು. ಇಲ್ಲೀವರೆಗೂ ಮುಂಗಾರುಮಳೆ ಡೀವೀಡಿ ಸಿಗದೇ ಇರೋದು ಆ ಚಿತ್ರ ಮಾಡಿದೋರಿಗೇ ಲಾಸು ಗುರು! ಚಿತ್ರಮಂದಿರಕ್ಕೆ ಬಂದು ನೋಡ್ಲಿ ಅನ್ನೋದು ತಪ್ಪೇನಿಲ್ಲ. ಆದರೆ ಬಸ್ಸಲ್ಲಿ ನೋಡಕ್ಕೆ ಅವಕಾಶಾನೇ ಮಾಡಿಕೊಡದೆ ಇರೋದು ಮಹಾನ್ ಪೆದ್ದತನ ಅಲ್ಲದೆ ಇನ್ನೇನು? ದುಡ್ಡಿಗೆ ದುಡ್ಡೂ ಸಿಕ್ಕಿದಂಗಲ್ಲ, ಪ್ರಚಾರಕ್ಕೆ ಪ್ರಚಾರಾನೂ ಸಿಕ್ಕಿದಂಗಲ್ಲ! ನಮ್ಮ ಚಿತ್ರರಂಗದೋರು ಸೊಲ್ಪ ತಲೆ ಉಪಯೋಗಿಸಿ ಈಗ ಸಕ್ಕತ್ ಹಾಟಾಗಿರೋ ಕನ್ನಡ ಚಿತ್ರೋದ್ಯಮದಿಂದ ಒಂಚೂರೂ ಬಿಡದಂಗೆ ಲಾಭ ಪಡ್ಕೋಬೇಕು ಗುರು!

ಬೇರೆ ಭಾಷೆಯಲ್ಲಿ ಕಲಿಕೆ: ಈಜು ಬಾರದ ಕೂಸ ನೀರೊಳಗೆ ಮುಳುಗಿಸಿ ಕೊಂದಂತೆ!

ನಮ್ಮ ಅಬ್ದುಲ್ ಕಲಾಂ ಸರ್ ಎಲ್ಲೀಗ್ ಹೋದ್ರೂ ಶಿಕ್ಷಣ ವ್ಯವಸ್ಥೆ ರಿಪೇರಿ ಆಗದೇ ಹೋದ್ರೆ ನಾವು ಉದ್ಧಾರ ಆಗೋದಿಲ್ಲ ಅಂತ ಹೇಳೋ ಅವಕಾಶ ತಪ್ಪಿಸಿಕೊಳಲ್ಲ ಗುರು. ಮೊನ್ನೆ ಅಮೇರಿಕದ ಸಿಲಿಕಾನ್ ವ್ಯಾಲಿಯಲ್ಲಿ ಉತ್ತರ ಅಮೇರಿಕದ IISc ಹಳೇ ವಿದ್ಯಾರ್ಥಿಗಳ ಕೂಟ, Pan-IIT ಹಳೇ ವಿದ್ಯಾರ್ಥಿಗಳ ಕೂಟ ಮತ್ತು TiE ನೋರು ನಮ್ಮ ಮಾಜೀ ರಾಷ್ಟ್ರಪತಿಗಳ್ನ ಕರ್ದು ಒಂದೆರ್ಡು ಮಾತಾಡಿ ಅಂದಾಗಲೂ ಔರು ಮತ್ತೆ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೇನೇ ಮಾತಾಡಿದ್ದು. ಆ ಶಿಕ್ಷಣ ವ್ಯವಸ್ಥೆ ಮಗುವಿನ ತಾಯ್ನುಡಿಯಲ್ಲಿ ಇದ್ದರೇ ಔರು ಆಡಿದ ದೊಡ್ಡ ದೊಡ್ಡ ಮಾತುಗಳು ನಿಜವಾಗಲೂ ಕಾರ್ಯರೂಪಕ್ಕೆ ಬರೋದು ಗುರು!

ಕಲಾಂ ಹೇಳಿದ್ದು ನೋಡಿ:
"The primary school education has to be changed. It must be changed to help kids be more creative"

"If a child becomes confident, the citizen becomes confident. If a citizen becomes confident, the nation becomes confident"

ಒಟ್ನಲ್ಲಿ ಮಕ್ಕಳ ಸೃಜನಶೀಲತೆ ಹೆಚ್ಚಬೇಕು, ಧೈರ್ಯ ಹೆಚ್ಚಬೇಕು. ಆದರೆ ಸೃಜನಶೀಲತೆ (creativity) ಹೆಚ್ಚಬೇಕಾದರೆ ಏನಾಗಬೇಕು? ಧೈರ್ಯ (confidence) ಬರ್ಬೇಕಾದ್ರೆ ಏನಾಗಬೇಕು? ಶಿಕ್ಷಣ ವ್ಯವಸ್ಥೇಲಿ ಯಾವ ಬದಲಾವಣೆ ಆಗಬೇಕು? ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿರೋದು, ಆ ಉತ್ತರವನ್ನ ಕಾರ್ಯರೂಪಕ್ಕೆ ತರಬೇಕಾಗಿರೋದು ಬಹಳ ಮುಖ್ಯ ಗುರು.

ಈಜು ಬಾರದ ಮಕ್ಕಳನ್ನ ನೀರೊಳಗೆ ಮುಳುಗಿಸೋ ಪೆದ್ದತನ ನಿಲ್ಲಬೇಕು

ಮೇಲಿನ ಪ್ರಶ್ನೆಗ ಉತ್ತರವಾಗಿ ಪ್ರಪಂಚದಾದ್ಯಂತ ಚಿಂತಕರು "ತಾಯ್ನುಡಿಯಲ್ಲಿ ಶಿಕ್ಷಣ ಕೊಡಿ", "ತಾಯ್ನುಡಿಯಲ್ಲಿ ಶಿಕ್ಷಣ ಕೊಡಿ" ಅಂತ ಬಡ್ಕೋತಾನೇ ಇದಾರೆ. ಕಲಿಕೆ ತಾಯ್ನುಡಿಯಲ್ಲಿ ಇದ್ದರೇ ಮಗುವಿಗೆ ಧೈರ್ಯ ಬರೋದು. ಶಾಲೆಗೆ ಹೋದ ತಕ್ಷಣ ಮನೇಲಿ ಮಾತಾಡ್ತಿದ್ದ ಭಾಷೆ ಬಿಟ್ಟು ಬೇರೆ ಯಾವುದೋ ಭಾಷೇಲಿ ಮಾತಾಡಬೇಕು, ಓದಬೇಕು, ಕಲೀಬೇಕು ಅನ್ನೋದು ಮಕ್ಕಳ ಮನಸ್ಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರತ್ತೆ ಗುರು. ಇದನ್ನ ಮನಗಂಡೇ ವಿಶ್ವಸಂಸ್ಥೆಯೋರು ಕಲಿಕೆ ತಾಯ್ನುಡಿಯಲ್ಲಿ ಇಲ್ಲದಿದ್ದರೆ ಏನೇನು ತೊಂದರೆಗಳಾಗತ್ವೆ ಅಂತ ಹೇಳ್ತಾನೇ ಇದಾರೆ ಗುರು:
Instruction through a language that learners do not speak has been called “submersion” (Skutnabb-Kangas 2000) because it is analogous to holding learners under water without teaching them how to swim.

ಮಕ್ಕಳಿಗೆ ತಮ್ಮದಲ್ಲದ ಭಾಷೇಲಿ ಕಲಿಸಕ್ಕೆ ಹೊರಡೋದು ಈಜಕ್ಕೆ ಬರ್ದೇ ಇರೋ ಮಕ್ಕಳನ್ನ ನೀರೊಳಗೆ ಬಲವಂತವಾಗಿ "ಮುಳುಗಿ"ಸಿದಹಾಗೆ ಅಂತ್ಲೇ ವಿಶ್ವಸಂಸ್ಥೆ ಹೇಳ್ತಿರೋದು ಗುರು! ಸ್ವಲ್ಪ ಯೋಚ್ನೆ ಮಾಡಿ...ಎಷ್ಟು ನಿಜ ಈ ಮಾತು ಅಂತ! ಇಂಗ್ಲೀಷಲ್ಲೇ ಸರಿಯಾದ ಶಿಕ್ಷಣ ಸಾಧ್ಯ ಅಂತ ನಾವು ನಂಬ್ಕೊಂಡಿರೋದು ಅತ್ಯಂತ ಅವೈಜ್ಞಾನಿಕ ಅನ್ನೋದು ಪ್ರಪಂಚದಲ್ಲಿ ಎಲ್ರೂ ಹೇಳ್ತಿರೋದೇ. ಇದನ್ನ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ಕನ್ನಡದ ಮಕ್ಕಳೆಲ್ಲ ನೀರಲ್ಲಿ ಮುಳುಗಿ ಸತ್ತೇ ಹೋಗ್ತವೆ ಗುರು! ಈಜು ಬರದೇ ಇರೋ ಮಕ್ಕಳನ್ನ ನೀರೊಳಗೆ ಮುಳುಗಿಸಿದರೆ ಧೈರ್ಯ, ಸೃಜನಶೀಲತೆಗಳು ಬರೋದು ಇರಲಿ, ಇರೋ ಸೃಜನಶೀಲತೇನೂ ಇರೋ ಧೈರ್ಯಾನೂ ಇಂಗೋಗತ್ತೆ ಗುರು!

ನಿಧಾನವಾಗಿ ಕನ್ನಡದಲ್ಲಿ ಒಳ್ಳೇ ಶಿಕ್ಷಣ ವ್ಯವಸ್ಥೆ ಕಟ್ಟಬೇಕು

ಈ ಮೇಲಿನ ಸಮಸ್ಯೆಗೆ "ಈಜು ಕಲಿಸಿದರಾಯಿತು, ಇಂಗ್ಲೀಷು ಕಲಿಸಿದರಾಯಿತು" ಅಂತ ಕೆಲವರು ಹೇಳಬಹುದು. ಅದು ಹೇಳಕ್ಕೆ ಸುಲಭ, ಆದರೆ ಮಾಡೋದು ಕಷ್ಟ. ಅದು ನಮಗೆ ಅಪ್ರಿಯವೂ ಹೌದು. ಅನಾದಿ ಕಾಲದಿಂದ ಮಾತಾಡಿಕೊಂಡು ಬಂದಿರೋ ನಮ್ಮ ಭಾಷೇನ ಬಿಟ್ಟು ಮತ್ತೊಂದಕ್ಕೆ ಮೊರೆಹೋಗೋದು ಆಗದೆ ಇರೋ ವಿಷಯ ಗುರು! ಅಲ್ಲದೆ ಯಾಕೆ ಬಿಟ್ಟುಕೊಡಬೇಕು ನಮ್ಮ ಭಾಷೇನ? ನಾವೇನು ಸ್ವಾಭಿಮಾನವೇ ಇಲ್ಲದ ಹೇಡಿಗಳೇನು? ನಮ್ಮ ಭಾಷೇಲೇ ಕಲಿಯೋದು ಸರಿ ಅಂತ ಎದೆ ಬಡ್ಕೋತಾ ಇದ್ರೂ ಅದರ ಕಡೆ ಗಮನ ಕೊಡಕ್ಕೂ ಅಂಜ್ತಾ ಇರೋ ಷಂಡರಾ ನಾವು?

ಇವತ್ತು ಕರ್ನಾಟಕದಲ್ಲಿ ಬೆರಳೆಣಿಕೆ ಜನ ಇಂಗ್ಲೀಷಲ್ಲಿ ಕಲೀತಿರಬೋದು, ದುಡ್ಡು ಮಾಡ್ತಾ ಇರಬಹುದು. ಆದರೆ ಔರಿಗೂ ಕಲಿಕೆ ತಲೇಗ್ ಹತ್ತುತ್ತಾ ಇಲ್ಲ ಅನ್ನೋದಕ್ಕೆ ಕರ್ನಾಟಕದಲ್ಲಿ ಹತ್ತನೇ ತರಗತಿ ಫಲಿತಾಂಶಾನೇ ಸಾಕು: ಇವತ್ತಿಗೂ ಕನ್ನಡ ಮಾಧ್ಯಮದಲ್ಲಿ ಓದ್ತಿರೋ ಮಕ್ಕಳೇ ಇಂಗ್ಲೀಷ್ ಮಾಧ್ಯಮದಲ್ಲಿ ಓದ್ತಿರೋರಿಗಿಂತ (ಶೇಕಡಾವಾರು) ಜಾಸ್ತಿ ಪಾಸಾಗ್ತಿರೋದು! ಜೊತೆಗೆ ಈ ಬೆರಳೆಣಿಕೆ ಜನ ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳಲ್ಲಿ ಕಿಸ್ದಿರೋದ್ನೂ ನೋಡ್ತಾನೇ ಇದೀವಲ್ಲ - ಓ ಅಂದ್ರೆ ಟೋ ಅನ್ನಕ್ಕೆ ಬರದೇ ಹೋದರೂ ಸರಿ! ಎಷ್ಟು ಪೇಟೆಂಟುಗಳ್ನ ನಾವು ಕನ್ನಡಿಗರು ತೊಗೊಂಡಿದೀವಿ? ಎಷ್ಟು ನಿಜವಾದ ವೈಜ್ಞಾನಿಕ ಸಂಶೋಧನೆಗಳ್ನ ನಾವು ಕನ್ನಡಿಗರು ಮಾಡಿದೀವಿ? ಕನ್ನಡಿಗರು ಕಂಡುಹಿಡಿದ ಒಂದು ವೈಜ್ಞಾನಿಕ ತತ್ವದ ಹೆಸರು ಹೇಳಿ ನೋಡೋಣ? ಯಾವ ಮಣ್ಣೂ ಇಲ್ಲ ಗುರು! ಇದಕ್ಕೆ ನಮ್ಮ ಅಯೋಗ್ಯ ಶಿಕ್ಷಣ ವ್ವವಸ್ಥೇನೇ ಕಾರಣ ಹೊರತು ಇನ್ನೇನೂ ಇಲ್ಲ. ನಮಗೆ ತಲೆ ಇಲ್ಲ ಅಂತೇನಿಲ್ಲ.

ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ಇದನ್ನ ಅರ್ಥ ಮಾಡ್ಕೊಂಡೇ ತಂತಮ್ಮ ಶಿಕ್ಷಣ ವ್ಯವಸ್ಥೆಗಳ್ನ ತಂತಮ್ಮ ಭಾಷೆಗಳಲ್ಲೇ ಇಟ್ಕೊಂಡಿರೋದು. ಅವರವರ ಭಾಷೆ ಬರದೇ ಇರೋ ದೇಶಗಳ ಜೊತೆ ಮಾತಾಡಕ್ಕೆ ಮಾತ್ರ ಇಂಗ್ಲೀಷ್ನ ಇಟ್ಕೊಂಡಿದಾರೆ, ಅಷ್ಟೆ.

ಇಷ್ಟೆಲ್ಲ ಕಣ್ಮುಂದೆ ಇದ್ರೂ ನಾವು (ಕನ್ನಡಿಗರಷ್ಟೆ ಅಲ್ಲ, ಭಾರತದೋರೆಲ್ಲ) ಇಂಗ್ಲೀಷಿಗೆ ಕಣ್ಮುಚ್ಚಿಕೊಂಡು ಮೊರೆ ಹೋಗೋದು ಪೆದ್ದತನಾನೂ ಹೌದು, ನಮ್ಮ ಮಕ್ಕಳಿಗೆ ಮಾಡ್ತಿರೋ ಮೋಸಾನೂ ಹೌದು. ನಿಧಾನವಾಗಿ ಇದನ್ನ ರಿಪೇರಿ ಮಾಡ್ಬೇಕು, ಕನ್ನಡದ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನ ಸೇರಿಸೋದು ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಚೆನ್ನಾಗಿ ಆಗಬೇಕು, ನಮ್ಮ ಮಕ್ಕಳನ್ನ ಜಾಗತೀಕರಣದಲ್ಲಿ ನಿಜವಾದ ಆಟಗಾರರಾಗಕ್ಕೆ ಅನುವು ಮಾಡ್ಕೊಡಬೇಕು, ಇವತ್ತಿನಂಗೆ ಬರೀ ತ್ಯಾಪೆ ಕೆಲಸಗಾರರಾಗಿರ್ಲಿ ಅಂತ ಬಿಡಬಾರದು ಗುರು!

ಈ ಬದಲಾವಣೆ ಮಾಡುವಾಗ ಕೆಲವು ದಿನ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆ ಇಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ಅದನ್ನೇ ಶಾಶ್ವತವಾಗಿ ನಂಬಿಕೊಳ್ಳದೆ ಜೊತೆಜೊತೆಗೇ ಕನ್ನಡದ ಶಿಕ್ಷಣ ವ್ಯವಸ್ಥೇನ ಭದ್ರ ಮಾಡ್ಕೋಬೇಕು ಗುರು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಕರ್ನಾಟಕಕ್ಕೆ ಹತ್ತಿರೋ ಪಾರ್ಸಲ್ ನಾಯಕತ್ವದ ಪಿಡುಗು ಅಡಗಬೇಕು!

ಹೋದ ತಿಂಗಳ 27ನೇ ತಾರೀಕಿನ ವಿ.ಕ.ದಲ್ಲಿ ನಮ್ಮ ಊರ ಕ್ರೈಸ್ತರ ಮೇಲೆ ಹಲ್ಲೆಗಳಾಗ್ತಿವೆ ಅಂತ ಕ್ರೈಸ್ತ ಸಮುದಾಯದ ಕೆಲ ನಾಯಕರು ಧ್ವನಿ ಎತ್ತಿರೋ ಸುದ್ದಿ ಬಂದಿತ್ತು. ಅಲ್ಲ, ಕನ್ನಡ ನಾಡಿನ ಕ್ರೈಸ್ತರಿಗೆ ನಾಯಕತ್ವ ಕೊಡಕ್ಕೆ ದೂರದ ಮಿಜೊರಾಮ್ ರಾಜ್ಯದ ಸಾಂಗ್ಲಿಯಾನ, ಕೇರಳ ರಾಜ್ಯದ ಐವಾನ್ ನಿಗ್ಲಿ - ಇವ್ರುಗಳೇ ಆಗಬೇಕಾ? ಇದೊಂಥರಾ ತಮಾಷೆ ಆಯ್ತಲ್ಲ!

ನಮ್ಮ ಊರಿನ "ನಾಯಿ ಉಳ್ಸಿ ಚಳವಳಿ"ಗೆ ಮನೇಕಾ ಗಾಂಧೀನ, ಪರಿಸರ ಚಳವಳಿಗೆ ಮೇಧಾ ಪಾಟ್ಕರ್ನ ಕರ್ಕೊಂಡ್ ಬರೋದು ವಾಡಿಕೇನೇ ಆಗೋಗಿರುವಾಗ ಇದೆಲ್ಲಾ ಯಾವ ಲೆಕ್ಕ ಅಂತೀರಾ?

ಕನ್ನಡದ ಜನಕ್ಕೆ ನಾಯಕತ್ವ ಕೊಡಕ್ಕೆ, ಕನ್ನಡ ನಾಡಿನಲ್ಲಿ ಕನ್ನಡದವರ ಸಮಸ್ಯೆ ಎದುರ್ಸಕ್ಕೆ ಹೊರಗಿಂದ ಪರಭಾಷಿಕರು ಯಾಕ್ ಬರಬೇಕು? ಯಾರೇ ಆಗಲಿ, ಆಯಾ ನಾಡಿನ ಜನ ಜೀವನ, ಭಾಷೆ, ಬದುಕುಗಳನ್ನ ತಿಳ್ಕೊಳ್ದೆ ಸಮಸ್ಯೆಗಳಿಗೆ ಪರಿಹಾರ ಕೊಡಕ್ ಹೇಗಾಗತ್ತೆ? ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳು, ರೈತ ಸಂಘಟನೆಗಳು - ಪ್ರತಿಯೊಂದಕ್ಕೂ ನಾಯಕತ್ವ ಕರ್ನಾಟಕದ ಹೊರಗಿಂದ್ಲೇ ಬಂದ್ರೆ ನಮ್ಮ ಗತಿ ಏನು ಅಂತ ಯೋಚ್ನೆ ಮಾಡಿದೀಯಾ ಗುರು?

ಹೀಗೆ ತಮ್ಮ ಬೇಳೆ ಬೇಯಿಸಿಕೊಳಕ್ಕೆ ಹೊರಗಿನೋರು ಬರ್ತಾನೇ ಇದ್ರೆ, ಇಂಗ್ಲೀಷಲ್ಲೋ ಹಿಂದೀನಲ್ಲೋ ಏನೇನೋ ಒದರಿ ಕನ್ನಡಾನ ಕಡೆಗಣಿಸ್ತಾನೇ ಇದ್ರೆ, ಜೊತೆಗೆ ನಾವುಗಳು ಪೆದ್ದಮುಂಡೇವಂಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಆಗಬೇಕಾದರೆ ನಾವೇ ಮುಂದಾಳುತನ ವಹಿಸಿಕೋಬೇಕು ಅಂತ ಅರ್ಥಾನೇ ಮಾಡ್ಕೊಳ್ದೆ ಪ್ರತಿಯೊಂದಕ್ಕೂ ಹೊರಗಿಂದ ಯಾರೋ ಬೇರೆ ಭಾಷೆಯೋರು ಬಂದು ಪರಿಹಾರ ಕೊಡ್ತಾರೆ, ನಮ್ಮ ಕಷ್ಟಗಳಿಗೆ ಕೊನೆ ಹುಡುಕ್ಕೊಡ್ತಾರೆ ಅಂತಾನೇ ಅನ್ಕೊಂಡಿದ್ರೆ ನಮ್ಮ ಭವಿಷ್ಯದಲ್ಲಿ ಬರೀ ಕತ್ಲೇನೇ ಗುರು!

ಪ್ರತಿಯೊಂದು ಕ್ಷೇತ್ರದಲ್ಲೂ ಕರ್ನಾಟಕಕ್ಕೆ ನಾಯಕತ್ವಾನ ಹೊರಗಿಂದ ಪಾರ್ಸಲ್ ಮಾಡಿಸಿಕೊಳೋ ಪಿಡುಗು ಮುಂದುವರೀಬಾರದು. ಇದರಿಂದ ನಾಡಿನ ಭವಿಷ್ಯದಲ್ಲಿ ಕತ್ತಲೆಯೊಂದೇ ಕೂಡಿಕೊಳ್ಳುವುದು. ಆದ್ದರಿಂದ ಕನ್ನಡಿಗರು ಎಲ್ಲಾ ಕಡೇನೂ ನಾಯಕತ್ವ ತೊಗೊಳಕ್ಕೆ ಮುಂದಾಗಬೇಕು. ಅದು ಧರ್ಮದ ವಿಷಯದಲ್ಲಿರಬಹುದು, ರಾಜಕೀಯದ ವಿಷಯದಲ್ಲಿ ಇರಬಹುದು, ಇಲ್ಲವೇ ಕೆಲಸದಲ್ಲಿ ಮೇಲೇರೋ ವಿಷಯ ಇರಬಹುದು, ಯಾವುದೇ ಇರಬಹುದು. ಕನ್ನಡಿಗ ನಾಯಕತ್ವ ತೊಗೊಳ್ಳೇಬೇಕು. ಇಲ್ಲದಿದ್ದರೆ ಹೊರಗಿಂದ ಪಾರ್ಸಲ್ ಆಗಿ ಬಂದ ನಾಯಕರುಗಳು ನಂ ನಾಡ್ನ ಸಾರ್ಸಿ, ಗುಡ್ಸಿ, ರಂಗೋಲೆ ಹಾಕಿ ಹೊಟೋಗ್ತಾರೆ, ಅಷ್ಟೆ!

ಮಲಯಾಳಿಗಳಿಂದ ಕನ್ನಡದ ರೈಲು ಕದಿಯೋ ಹುನ್ನಾರ

ನಿನ್ನೆ ವಿಜಯ ಕರ್ನಾಟಕದಲ್ಲಿ ಕರ್ನಾಟಕದ ಕೊಂಕಣ ರೈಲ್ವೆ ಆಫೀಸಲ್ಲಿ ಕೆಲ್ಸಾ ಮಾಡೋ 1500ಕ್ಕೂ ಹೆಚ್ಚು ಮಲಯಾಳಿಗಳು ನ್ಯಾಯವಾಗಿ ಹುಬ್ಬಳ್ಳಿಯ ನೈರುತ್ಯ ವಲಯಕ್ಕೆ ಸೇರಬೇಕಾದ ಕೊಂಕಣ ರೈಲ್ನ ಕೇರಳದ ಪಾಲ್ಘಾಟ್ ವಿಭಾಗಕ್ಕೆ ಸೇರಿಸಿ ಅಂತ ರೈಲ್ವೆ ಮಂಡಳಿಗೆ ಗುಟ್ಟಾಗಿ ಹಕ್ಕೊತ್ತಾಯ ಮಾಡಿರೋದು ಬಯಲಾಗಿದೆ. ಸಾಲದು ಅಂತ ಅಂತರ್ಜಾಲದಲ್ಲೂ ಕೇರಳದ ಪರ ಅಭಿಪ್ರಾಯ ರೂಪಿಸೊ ಕೆಲ್ಸಾ ಶುರು ಹಚ್ಚಕೊಂಡಿದಾರೆ! ಮಲಯಾಳಿಗಳ ಈ ಹುನ್ನಾರವೇನಾದರೂ ಫಲಿಸಿದರೆ ಕರ್ನಾಟಕಕ್ಕೆ ಮಹಾ ಮೋಸ ಗುರು!

ಪಾಲ್ಘಾಟ್ ವಿಭಾಗದ ಕೆಲವು ಪ್ರದೇಶಗಳು ಸೇಲಂ ನಲ್ಲಾಗಿರೋ ಹೊಸ ವಿಭಾಗಕ್ಕೆ ಸೇರಿರೋದ್ರಿಂದ ಕೇಂದ್ರ ಸರ್ಕಾರ ಕೇರಳದ ಪಾಲ್ಘಾಟ್ಗೆ ಹೊಸ ರೈಲ್ವೆ ವಲಯ ಮಾಡಿ ಕೊಡ್ತಾ ಇದೆ. ಅದೇನೋ ಸರಿ, ಆದ್ರೆ ಆ ವಲಯಕ್ಕೆ ನಮ್ಮ ಕೊಂಕಣ ರೈಲ್ವೇನೂ ಸೇರ್ಸಿ ಅಂತ ಅಲ್ಲಿನ ಕೆಲವು NGOಗಳು, ರಾಜಕಾರಣಿಗಳು ಕೇಂದ್ರಕ್ಕೆ ಒತ್ತಾಯ ಮಾಡ್ತಿದಾರಲ್ಲ ಗುರು! ತಕೊಳ್ಳಪ್ಪಾ ಇಲ್ಲಿದೆ ನೋಡು ನ್ಯಾಯ!

ರೈಲಿಗಾಗಿ ಕನ್ನಡಿಗರ ನೆಲ ಗುಳುಂ, ಆದರೆ ಉದ್ಯೋಗಾವಕಾಶವೂ ಇಲ್ಲ, ರೈಲೂ ಇಲ್ಲ!

ಸುಮಾರು 760 ಕಿ.ಮೀ. ಉದ್ದದ ಈ ರೈಲುದಾರಿಯಲ್ಲಿ ಕರ್ನಾಟಕದ ಪಾಲು ಸುಮಾರು 350 ಕೀ.ಮೀ ಅಷ್ಟಿದೆ. ಹತ್-ಹತ್ರ 2500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಯೋಜನೆಗೆ 42 ಸಾವಿರ ಜನ ತಮ್ಮ ನೆಲ ಬಿಟ್ಟಕೊಟ್ರು. ಅದರಲ್ಲಿ ಕನ್ನಡಿಗರ ಪಾಲು ಶೇಕಡಾ 45 ರಷ್ಟು - ಅಂದರೆ ಸುಮಾರು 19 ಸಾವಿರ ಜನ.

ಇಷ್ಟೆಲ್ಲ ತ್ಯಾಗ ಮಾಡಿರೊ ನಮ್ಮ ಪಾಲಿಗೆ ಸಿಕ್ಕಿರೋ ಪ್ರಸಾದ ಎನ್ ಗೊತ್ತಾ? ಕೊಂಕಣ ರೈಲ್ವೆಯಲ್ಲಿ 4500 ಜನ ಉದ್ಯೋಗಿಗಳಿದ್ದು, ಅದರಲ್ಲಿ ಕನ್ನಡಿಗರ ಸಂಖ್ಯೆ ಬರೀ 750, ಅಂದ್ರೆ ಬರೀ ಶೇಕಡ 16.5 ಮಾತ್ರ! ಅದೂ ಕೂಡಾ ಕಾಮಗಾರಿ ಸಮಯದಲ್ಲಿ ಭೂಮಿ ಕಳೆದುಕೊಂಡ ಕನ್ನಡಿಗರಿಗೆ ಉದ್ಯೋಗ ಕೊಡಲೇ ಬೇಕಾಗಿದ್ದ ಕಾರಣಕ್ಕೆ, ಕೆಳಸ್ತರದ ಕೆಲವು ಉದ್ಯೋಗ ಮಾತ್ರ ನಮಗೆ ದೊರಕಿದೆ ಗುರು!

ಮಂಗಳೂರು, ಉಡುಪಿ, ಕಾರವಾರಕ್ಕೆ ಬರೋ ಪ್ರಮುಖ ರೈಲುಗಳು ಮಧ್ಯ ರಾತ್ರಿ ಬರೋದ್ರಿಂದ ನಮ್ಮ ಜನಾ ನಿದ್ದೆಗೆಟ್ಟು ರೈಲಿಗೆ ಕಾಯೊ ಪರಿಸ್ಥಿತಿ ಈಗಾಗಲೇ ಇದೆ. ಚಿಕ್ಕ ಚಿಕ್ಕ ಊರುಗಳಾದ ಮೂಲ್ಕಿ, ಬ್ರಹ್ಮಾವರ, ಕೋಟ, ಬೈಂದೂರು, ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಗಳಿಗೆ ಸರಿಯಾದ ರೈಲೂ ಇಲ್ಲ, ಬಂದ್ರೂ ಅವು ಅಪರಾತ್ರಿಲಿ ಬರ್ತಾವೆ ಗುರು! ಈಗ್ಲೇ ಹೀಗಿರಬೇಕಾದ್ರೆ, ಇನ್ನು ನಮ್ಮ ಕೊಂಕಣ ರೈಲು ಕೇರಳದ ಪಾಲಾದ್ರೆ ದೇವರೇ ಗತಿ! ಧಾರವಾಡ ಕನ್ನಡದಲ್ಲಿ ಹೇಳೊ ಹಾಗೆ "ಉದೋದ ಕೊಟ್ಟು ಬಾರಸೋದ ತಗೊಂಡ್ರು" ಅನ್ನೊ ಹಾಗಾಗುತ್ತೆ ನಮ್ಮ ಕರಾವಳಿ ಜನರ ಪರಿಸ್ಥಿತಿ!

ನಮ್ಮಲ್ಲಿ ಒಗ್ಗಟ್ಟಿಲ್ಲದಿರುವುದೇ ಇದಕ್ಕೆಲ್ಲ ಕಾರಣ

ಇವೆಲ್ಲಾ ನಿಲ್ಲಬೇಕು ಅಂದ್ರೆ ಮೊದ್ಲು ನಾವು ಕನ್ನಡಿಗರು ಒಂದಾಗಿ ನಿಂತು ನಮ್ಮ ಮೇಲೆ ಏನೇನೆಲ್ಲಾ ಮೋಸ ನಡೀತಿದೆ ಅಂತ ಅರ್ಥ ಮಾಡ್ಕೋಬೇಕು, ಅವುಗಳ್ನ ತಡೆಗಟ್ಟಕ್ಕೆ ಗಟ್ಟಿಯಾಗಿ ನಿಲ್ಲಬೇಕು. ವಿ.ಕ. ಹೇಳತ್ತೆ:
[ಆದರೆ] ಕೊಂಕಣ ರೈಲ್ವೆಯಲ್ಲಿ 750 ಮಂದಿ ಕನ್ನಡಿಗ ಉದ್ಯೋಗಿಗಳಿದ್ದರೂ ಕನ್ನಡಪರ ಸಂಘಟನೆಯೇ ಇಲ್ಲದಿರುವುದು ಕರ್ನಾಟಕ ರಾಜ್ಯದಲ್ಲಿ ಕೊಂಕಣ ರೈಲ್ವೆಯ ಅಸ್ತಿತ್ವಕ್ಕೆ ಕೊಡಲಿಯೇಟು ಹಾಕಿದೆ. ಕೊಂಕಣ ರೈಲ್ವೆಯನ್ನೂ ಕಸಿಯುವ ಸನ್ನಾಹವನ್ನು ಕೇರಳಿಗರು ನಡೆಸಿದ್ದಾರೆ.

ತಿರ್ಗಾ ಅದೇ ಪಾಠ ಅನ್ನಿ! ಕನ್ನಡಿಗರು ಒಗ್ಗಟ್ಟಾಗಲೇಬೇಕು. ಇಲ್ದಿದ್ರೆ ಇಷ್ಟೇ ಅಲ್ಲ - ಕನ್ನಡಿಗರ ಮನೆಗಳ್ಗೆ ಕನ್ನಡೇತರರು ಹಗಲಲ್ಲೇ ಕನ್ನ ಹಾಕಿ "ನೀನು ಸನ್ಯಾಸಿ ತಾನೆ? ವಿಶ್ವಮಾನವ ತಾನೆ? ಶರೀರ, ಆಸ್ತಿ-ಅಂತಸ್ತು ಎಲ್ಲಾ ಎಷ್ಟೇ ಆದರೂ ನಶ್ವರ! ತೆಪ್ಪಗಿರು, ನಾವು ಬೇಕಾದ ಬೇಳೆಕಾಳು ಬೇಯಿಸಿಕೋತೀವಿ" ಅಂತ ಹೇಳಿ ಹೋಗ್ತಾರೆ, ನಾವು ಬೆಪ್ಪ ಮುಂಡೇವಂಗೆ ನೋಡ್ತಾ ಕೂತಿರಬೇಕಾಗತ್ತೆ!

ಬೇಕಾ ಇವೆಲ್ಲ? ಬೇಡ ತಾನೆ? ಇದಕ್ಕೆ ಪರಿಹಾರವೇ ಒಗ್ಗಟ್ಟು. ಐಟಿ ಕಂಪನಿಗಳಾಗಲಿ, ಬಿಸಿಸಿಐ ಆಗಲಿ, ರೈಲ್ವೆಯಾಗಲಿ, ಸರ್ಕಾರವಾಗಲಿ, ಮತ್ತೆಲ್ಲೇ ಆಗಲಿ, ಕನ್ನಡಿಗರು ಒಗ್ಗಟ್ಟಾಗಿ ನಿಲ್ಲಬೇಕು! ಒಬ್ಬರಿಗೆ ಒಬ್ಬರು ಕಷ್ಟದಲ್ಲಿ ನೆರವಾಗ್ಬೇಕು! "ಮಲಯಾಳೀನೂ ಭಾರತೀಯನೇ ಕನ್ನಡಿಗನೂ ಭಾರತೀಯನೇ" ಅಂತಾನೋ ಅಥವಾ "ಇಬ್ಬರೂ ಮನುಷ್ಯರೇ" ಅಂತಾನೋ ಅಥವಾ "ಶರೀರವೇ ನಶ್ವರ" ಅಂತಾನೋ ಕನ್ನಡಿಗರು ಒಗ್ಗಟ್ಟಾಗದೇ ಹೋದರೆ ಕನ್ನಡ ಜನಾಂಗವನ್ನ ಕನ್ನಡಿಗರೇ ಸುಟ್ಟುಹಾಕಿದಹಾಗೆ ಆಗತ್ತೆ ಗುರು! ಮುಂದಿನ ಪೀಳಿಗೆ ಅನ್ನ ಅಲ್ಲ, ಇನ್ನೇನೋ ತಿನ್ನಬೇಕಾಗತ್ತೆ!

ಕನ್ನಡಿಗರ ಒಗ್ಗಟ್ಟೇ ಮೋಸಕ್ಕೆ ಮದ್ದು

ರಾಹುಲ್ ದ್ರಾವಿಡ್ ಮುಂಬಯಿ ಲಾಬಿ ಎದುರು ಮುಗ್ಗರಿಸಿ ಹೇಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ಕಳ್ಕೋಬೇಕಾಯ್ತು ಅಂತ ವಿ.ಕ.ದಲ್ಲಿ ಬಂದಿದೆ ನೋಡಿ ಒಂದು ವಿಶ್ಲೇಷಣೆ.

ದ್ರಾವಿಡ್ ಜಾಗದಲ್ಲಿ ಗಂಗೂಲಿ ಏನಾದ್ರು ಇದ್ದಿದ್ದಿದ್ರೆ, ಏಕಾಏಕಿ ಈ ರೀತಿ ನಿರ್ಧಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಹುಟ್ಟಿಕೊಂಡು ಇಡೀ ಪ.ಬಂಗಾಳ ಇಷ್ಟು ಹೊತ್ತಿಗೆ ಹತ್ಕೊಂಡು ಉರೀತಿತ್ತು ಗುರು!

ಬೇರೆ ರಾಜ್ಯದೋರು ಒಗ್ಗಟ್ಟಿಂದ ಬಿಸಿಸಿಐ ನಲ್ಲಿ ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ತಾ ಇದಾರೋ, ಹಾಗೇ ಕ್ರಿಕೆಟ್ ಆಡಳಿತದಲ್ಲಿರೋ ಕನ್ನಡಿಗರು ಕೂಡ ಒಳಜಗಳಗಳ್ನ ಬದಿಗಿಟ್ಟು ಒಗ್ಗಟ್ಟಿಂದ ವರ್ತಿಸಬೇಕಾಗಿರೋದು ಇವತ್ತು ಅತ್ಯಗತ್ಯ ಗುರು! ಎಲ್ಲಕ್ಕಿಂತ ಮೊದಲು ನಾವು ಕನ್ನಡಿಗರು ಅಂತ ಇವರು ಗುರುತಿಸಿಕೊಳ್ಳಬೇಕಿದೆ, ಒಗ್ಗಟ್ಟಿಂದ ಬಿಸಿಸಿಐ ನಲ್ಲಿ ನಿಂತು ಕನ್ನಡದ ಆಟಗಾರರಿಗೆ ಹೀಗೆ ಮೋಸ ಆಗದೇ ಇರೋಹಾಗೆ ನೋಡ್ಕೋಬೇಕಿದೆ. ಇದನ್ನ ಮಾಡದೇ ಇರೋದ್ರಿಂದ್ಲೇ ಹಿಂದೇನೂ ಗುಂಡಪ್ಪ ವಿಶ್ವನಾಥು, ಪ್ರಸನ್ನ ಮುಂತಾದೋರಿಗೂ ಪಂಗನಾಮ ಸಿಕ್ಕಿದ್ದು ಗುರು!

ತಿರ್ಗಾ ಅದೇ ಪಾಠ: ಕನ್ನಡಿಗ್ರು ತಾವು ಕನ್ನಡಿಗ್ರು ಅಂತ ಎಂದಿಗೂ ಮರೀದೆ ಒಗ್ಗಟ್ಟಿಂದ ಇರಬೇಕು. ಬಿಸಿಸಿಐ ನಲ್ಲೂ ಅಷ್ಟೇ, ಬೆಂಗಳೂರಿನ ಐಟಿ ಕಂಪನಿಗಳಲ್ಲೂ ಅಷ್ಟೇ. ಇಲ್ದೇ ಹೋದ್ರೆ ಎಲ್ಲೀಗ್ ಹೋದ್ರೂ ಕನ್ನಡಿಗಂಗೆ ಪಂಗನಾಮಾನೇ ಗುರು! ಒಗ್ಗಟ್ಟಾಗಿರೋದು ಬಿಟ್ಟು ನಾನೊಬ್ಬ "ವಿಶ್ವಮಾನವ", ನನಗೆ ಕನ್ನಡತನ ಇಲ್ಲ, ನನಗೆ ವಿಶ್ವಮಾನವತ್ವ ಒಂದೇ ಇರೋದು ಅಂತೇನಾದ್ರೂ ಇನ್ನೂ ಕೂತಿದ್ರೆ ಕನ್ನಡಿಗ ಮಟೇಸ್! ಯಾರು ಮಟೇಸ್ ಮಾಡೋರು ಅಂತೀರಾ? ಯಾರು "ಕನ್ನಡಿಗರು ವಿಶ್ವಮಾನತ್ವಕ್ಕೆ ಹೆಸರುವಾಸಿಯಾಗಿರೋರು, ನೀವು ಹಾಗೇ ಇರಿ" ಅಂತ ಮಾರ್ಜಾಲನ್ಯಾಯ ಹೇಳಿಕೊಂಡು ತಮ್ಮ ಬೇಳೆಕಾಳು ಬೇಯಿಸಿಕೋತಾರೋ ಔರು!

ಗೆಲಿಲಿಯೋ ತಲೆ ಚೆಚ್ಚಿಕೊಳ್ಳೋದು ಯಾವಾಗ?

ಮೊನ್ನೆ 16ನೇ ತಾರೀಕು ಪ್ರಜಾವಾಣಿಯ ಸಾಪ್ತಾಹಿಕ ಪುರವಣೀಲಿ ಗೆಲಿಲಿಯೋ ಬಗ್ಗೆ ಒಂದು ಸಕ್ಕತ್ತಾಗಿರೋ ಬರಹ ಬಂದಿದೆ. ಗೆಲಿಲಿಯೋ ನಿಜಕ್ಕೂ ಆಧುನಿಕ ವಿಜ್ಞಾನದ ಪಿತಾಮಹನೇ ಗುರು! ಅದೇ ಬರಹ ಹೇಳೋಹಂಗೆ:
ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿದೆ, ಭೂಮಿಯು ಗೋಳಾಕಾರವಾಗಿದೆ ಎಂದು ಕೊಪರ್ನಿಕಸ್ ಮಂಡಿಸಿದ್ದ ವಿಚಾರಕ್ಕೆ ಆ ಕಾಲದ ಪ್ರಬಲ ಧಾರ್ಮಿಕ ವಲಯದಿಂದ ತೀವ್ರ ಪ್ರತಿರೋಧ ಕಂಡುಬಂದಿತ್ತು. ಗೆಲಿಲಿಯೋ ಕೂಡಾ ಮತ್ತೆ ಕೊಪರ್ನಿಕಸ್ ವಿಚಾರಧಾರೆಯನ್ನೇ ಎತ್ತಿ ಹಿಡಿದಾಗ ಇಗರ್ಜಿಗಳ ವಲಯದಿಂದ ಟೀಕಾ ಪ್ರವಾಹ ಹರಿದು ಬರತೊಡಗಿತ್ತು. "ಭೂಮಿಯ ಸುತ್ತ ಸೂರ್ಯ ಸುತ್ತುತ್ತಿದೆ, ಚಪ್ಪಟೆಯಾಗಿರುವ ಭೂಮಿ ನಿಂತಲ್ಲೇ ನಿಂತಿದೆ" ಎಂಬ ಆಗಿನ ಧಾರ್ಮಿಕ ನಂಬಿಕೆಯನ್ನು ಗೆಲಿಲಿಯೋ ಪರಿಣಾಮಕಾರಿಯಾಗಿ ಪ್ರಶ್ನಿಸಿದ್ದರು.

ಗೆಲಿಲಿಯೋ ಬಗ್ಗೆ ಬರೆಯುವಾಗ ಔರು ವಿಜ್ಞಾನಕ್ಕೆ ನೀಡಿದ ಕೊಡುಗೆಯೇನೋ ಆ ಬರಹದಲ್ಲಿ ಚೆನ್ನಾಗಿ ಮೂಡಿಬಂದಿದೆ. ಆದರೆ ಔರು ವಿಜ್ಞಾನಿಗಳಿಗೆ ಕೊಟ್ಟ ಅತಿಮುಖ್ಯವಾದ ಸಂದೇಶ ಬಂದೇ ಇಲ್ಲ ಅನ್ನೋದು ಕನ್ನಡಿಗರ ಕಾಮಾಲೆ ಕಣ್ಣಿಗೆ ಒಂದು ಉದಾಹರಣೆ ಅನ್ನಿಸ್ತಿದೆ ಗುರು! ಏನು ಗೆಲಿಲಿಯೋ ಕೊಟ್ಟ ಸಂದೇಶ?

"ನಾನು ಲ್ಯಾಟಿನ್ ನಲ್ಲಿ ಬರೆಯೋದಿಲ್ಲ, ಇಟಾಲಿಯನ್ ನಲ್ಲೇ ಬರೆಯುತ್ತೇನೆ!"

ಹೌದು, ಆಗಿನ ಕಾಲದ ಯೂರೋಪಲ್ಲೆಲ್ಲಾ ವಿಜ್ಞಾನಿ ಎನಿಸಿಕೊಳ್ಳಬೇಕಾದರೆ ಲ್ಯಾಟಿನ್ ಭಾಷೆಯಲ್ಲೇ ಬರೆಯಬೇಕು, ಓದಬೇಕು ಅನ್ನೋ ವಾಡಿಕೆ ಇತ್ತು ಗುರು! ಲ್ಯಾಟಿನ್ನಲ್ಲಿ ಬರೆಯೋದಿಲ್ಲ, ಓದೋದಿಲ್ಲ ಅಂದ್ರೆ ಪೆದ್ದನನ್ನ ಮಕ್ಕಳು ಅಂತ್ಲೇ ಜನ್ರು ಅಂತಿದ್ದಿದ್ದು! ಆದ್ರೆ ಅವತ್ತಿನ ಯೂರೋಪಲ್ಲಿ ನಿಜವಾಗಲೂ ವಿಜ್ಞಾನ ಅರ್ಥವಾಗಬೇಕಾದ್ರೆ ಅದು ನಮ್ಮ ಭಾಷೇಲೇ ಇರಬೇಕು ಅನ್ನೋದ್ನ ಧೈರ್ಯವಾಗಿ ಹೇಳೋ ಮೀಟ್ರಿದ್ದ ಮೊದಲನೇ ವ್ಯಕ್ತೀನೇ ಗೆಲಿಲಿಯೋ. Galileo, His Life and Work ಅನ್ನೋ ಪುಸ್ತಕದಲ್ಲಿ ಜೋಸೆಫ್ ಫಾಹೀ ಬರೀತಾರೆ -
"I write in Italian," he says, "because I wish every one to be able to read what I say. I see young men brought together indiscriminately to study to become physicians, philosophers, etc., who although furnished, as Ruzzante might say, with a decent set of brains, yet being unable to understand things written in gibberish, assume that in these crabbed folios there must be some grand hocus pocus of logic and philosophy much too high up for them to jump at. I want such people to know that as Nature has given eyes to them just as well as to philosophers for the purpose of seeing her works, so has she given them brains for understanding them."

ಇವತ್ತಿನ ಕರ್ನಾಟಕದಲ್ಲಿ ಇಂಗ್ಲೀಷು ಅವತ್ತಿನ ಲ್ಯಾಟಿನ್ನಿನ ಸ್ಥಾನದಲ್ಲಿದೆ, ಅಷ್ಟೆ. ಯೋಗ್ಯತೆಯಿದ್ರೂ ಕನ್ನಡಿಗರು ವಿಜ್ಞಾನ ಅಂದ್ರೆ ಅದೇನೋ ಮಾಟ-ಮಂತ್ರ ಅಂತ್ಲೇ ಅನ್ಕೊಂಡಿರೋದು ಗುರು! ವಿಜ್ಞಾನವನ್ನೂ ಬಾಯಿಪಾಠ ಮಾಡಿ (ಉರು ಹೊಡೆದು) ತಮ್ಮ ತಲೆಮೇಲೆ ತಾವೇ ಚಪ್ಪಡಿ ಕಲ್ಲು ಎಳ್ಕೊಳೋ ಪದ್ದತಿ ಇನ್ನೂ ಕನ್ನಡದ ಮಕ್ಕಳ್ನ ಕಾಡ್ತಾ ಇದೆ. ಇದಕ್ಕೆ ಮೂಲ ಕಾರಣ ನಮ್ಮದಲ್ಲದ ಭಾಷೇಲಿ ನಮ್ಮ ಸುತ್ತಮುತ್ತಲ ಪ್ರಕೃತೀನ ಅರ್ಥ ಮಾಡ್ಕೊಳಕ್ಕೆ ಹೊರಟಿರೋ ಪೆದ್ದತನ. ಇದನ್ನ ಗೆಲಿಲಿಯೋ ಏನಾದ್ರೂ ನೋಡಿದ್ರೆ ಅಂಡ್ ಬಡ್ಕೊಂಡು ನಗ್ತಿದ್ರು ಗುರು!

ತಿದ್ಕೊಳಕ್ಕೆ ಇನ್ನೂ ಕಾಲ ಮಿಂಚಿಲ್ಲ

ಕನ್ನಡದಲ್ಲೇ ಸರಿಯಾಗಿ ವಿಜ್ಞಾನದ ಕಲಿಕೆ ಸಾಧ್ಯ ಅಂತ ಅರ್ಥ ಮಾಡ್ಕೊಳಕ್ಕೆ ಇನ್ನೂ ಕಾಲ ಮಿಂಚಿಲ್ಲ! ಇನ್ನೂ ಜ್ಞಾನ-ವಿಜ್ಞಾನಗಳ್ನ ಮರ್ಯಾದೆಯಾಗಿ ನಮ್ಮ ಭಾಷೇಲೇ ತರೋ ಪ್ರಯತ್ನ ಸರಿಯಾಗಿ ಮಾಡಬಹುದು, ತರಬಹುದು. ಇಲ್ದಿದ್ರೆ ನಾವು ಕನ್ನಡಿಗ್ರು ತಲೆಕೆಳಗೆ ನಿಂತ್ರೂ ವಿಜ್ಞಾನ "ಮಾಟ-ಮಂತ್ರ" ಅನ್ಕೊಳೋದು ನಿಲ್ಲಲ್ಲ. ಕನ್ನಡಾನೇ ವಿಜ್ಞಾನದ ಕಲಿಕೆಗೆ ಕನ್ನಡಿಗರಿಗೆ ಸರಿಯಾದ ಸಾಧನ ಅಂತ ಅರ್ಥ ಮಾಡ್ಕೊಳ್ದೇ ಇದ್ರೆ ನಾವು ಅಲ್ಲಿ-ಇಲ್ಲಿ ಅಮೇರಿಕದೋರಿಗೋ ಯೂರೋಪಿನೋರಿಗೋ ತ್ಯಾಪೆ ಕೆಲಸ ಮಾಡಿಕೊಟ್ಟು ಚೂರು-ಪಾರು ದುಡ್ಡಿಂದ ತೃಪ್ತಿ ಪಡೋದೇ ಶಾಶ್ವತವಾಗೋಗತ್ತೆ ಗುರು! ಹಿಂಗೇ ಮುಂದುವರೆದರೆ ಬರೀ ಗೆಲಿಲಿಯೋ ಹಂಗೆ ಹಿಂಗೇಂತ್ಲೇ ಬರ್ಕೊಂಡಿರಬೇಕಾಗತ್ತೆ ಹೊರತು ನಮ್ಮ ಮಣ್ಣಲ್ಲಿ ಸತ್ತರೂ ಅಂಥ ಯೋಗ್ಯತೆಯಿರೋ ವಿಜ್ಞಾನಿಗಳು ಹುಟ್ಟಲ್ಲ!

ವಿಜ್ಞಾನ-ತಂತ್ರಜ್ಞಾನಗಳ್ನ ಕನ್ನಡದಲ್ಲಿ ತರಕ್ಕೆ ಮೊದಲ ಹೆಜ್ಜೆ ಏನು?

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟಿಸುತ್ತ ಉನ್ನತ ಶಿಕ್ಷಣ ಮಂತ್ರಿ ಶ್ರೀ ಡಿ.ಎಚ್. ಶಂಕರಮೂರ್ತಿಗಳು, "ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಪುಸ್ತಕಗಳು ಬೇಕು" ಅಂತ ಹೇಳಿರೋದ್ನ ಇವತ್ತಿನ ಕನ್ನಡ ಪ್ರಭ ವರದಿ ಮಾಡಿದೆ.

ಇದೇ ಶಂಕರಮೂರ್ತಿಗಳಿಗೆ ಕರ್ನಾಟಕ ಅಂದ್ರೇನು, ಕನ್ನಡ ಅಂದ್ರೇನು, ಭಾರತ ಅಂದ್ರೇನು ಅಂತ ಗೊತ್ತಿರಲಿ ಗೊತ್ತಿಲ್ಲದೇ ಇರಲಿ, ಹೇಗೋ ಏನೋ ಈ ಮೂರು ದೊಡ್ಡ ದೊಡ್ಡ ಮಾತುಗಳ್ನ ಹೇಳಿ ಇವತ್ತು ಹೊಗಳಿಕೆಗೆ ಪಾತ್ರ ಅಂತೂ ಆಗಿದಾರೆ:
  • ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂದಪಟ್ಟ ಪುಸ್ತಕಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಪ್ರಕಟವಾಗಬೇಕು
  • ವಿಜ್ಞಾನ ಕಲಿಯಲು ಕನ್ನಡ ಭಾಷೆ ಸೂಕ್ತವಲ್ಲ ಎಂಬ ಭಾವನೆಯನ್ನು ಜನರಿಂದ ಹೋಗಲಾಡಿಸಲು ತಜ್ಣರು ಶ್ರಮಿಸಬೇಕು
  • ಮಾತೃಭಾಷೆಯಲ್ಲಿ ಪಡೆದ ಜ್ಞಾನ ಹೃದಯಕ್ಕೆ ಹತ್ತಿರವಾಗುತ್ತದೆ ಮತ್ತು ಅದನ್ನು ಮತ್ತೊಬ್ಬರಿಗೆ ಪ್ರಸಾರ ಮಾಡಲು ಸುಲಭವಾಗುತ್ತದೆ
ಆದರೆ ಈ ಮೇಲಿನ ವಿಷಯಗಳ್ನ ಕುವೆಂಪುವಿಂದ ಹಿಡಿದು ಐನ್‍ಸ್ಟೈನ್ ಅಂತಹ ಹಿರಿಯರಿಂದ-ತಜ್ಞರಿಂದ-ಬಲ್ಲವರಿಂದ ನಾವು ಕೇಳದೆ ಏನಿಲ್ಲ ! ಮೂರ್ತಿಗಳು ಹೇಳಿರೋದ್ರಲ್ಲಿ ವಿಶೇಷ ಏನಿಲ್ಲ. ವಿಶೇಷ ಇರೋದು ಇದನ್ನ ಕಾರ್ಯರೂಪಕ್ಕೆ ಹೇಗೆ ತರೋದು ಅನ್ನೋದ್ರಲ್ಲಿ. ಬರೀ ಮೂರು ಮುತ್ತು ಉದುರಿಸಿದರೆ ಸಾಲದು, ನಿಜವಾಗಿ ಈ ನಿಟ್ಟಲ್ಲಿ ಕೆಲಸ ಮಾಡ್ಬೇಕು ಗುರು!

ಏನು ಕೆಲಸ ಮಾಡಬೇಕು? ಸರ್ಕಾರ ಮತ್ತು ಸಾರ್ವಜನಿಕರು ಹೇಗೆ ಇದನ್ನ ಕಾರ್ಯಗತ ಮಾಡ್ಬೋದು ಅಂತ ನೋಡ್ಮ.

ಸರ್ಕಾರ ಮಾಡಬೇಕಾದ ಕೆಲಸ

ಸರ್ಕಾರ ಮುಖ್ಯವಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸಿ ಕೊಡೋ ಅಂಗ ತಾನೆ? ಇವತ್ತಿನ ದಿನ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಬರಬೇಕಾದ್ರೆ ಕೆಲವು ಮೂಲಭೂತ ಕೆಲಸಗಳು ಆಗಬೇಕಿವೆ ಗುರು. ಉದಾಹರಣೆಗೆ:
  • ಹೊಸದಾಗಿ ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬರಿಯೋರ್ನ ಗುರುತಿಸಿ, ಅವರಿಗೆ ಪ್ರೋತ್ಸಾಹ ಕೊಡಬೇಕು
  • ಪ್ರೌಢಶಾಲಾ ಹಂತದ ವರೆಗೆ ಕನ್ನಡದ ಪಠ್ಯಗಳನ್ನು ತಿಳಿಗನ್ನಡದಲ್ಲಿ ಸರಳವಾಗಿರುವಂತೆ ಮಾಡಿ, ಹೆಚ್ಚು ಆಕರ್ಷಕವಾಗಿರುವಂತೆ, ಮನಸ್ಸಿಗೆ ನಾಟುವಂತೆ ಹೊಸತುಮಾಡಿಸಬೇಕು
  • ಕನ್ನಡದ ಪಠ್ಯಗಳ್ನ ಇಂಗ್ಲೀಷಿಂದ ಅನುವಾದ ಮಾಡಿ ರಚಿಸುವ ಪದ್ದತಿ ಕಿತ್ತೊಗೀಬೇಕು, ಬದಲಾಗಿ ಕನ್ನಡದಲ್ಲೇ ನೇರವಾಗಿ ಚಿಂತನೆ ಮಾಡಿ ಬರೆದ ಪಠ್ಯಗಳು ಹೊರಬರಬೇಕು
  • ಪಠ್ಯಗಳನ್ನು ರೂಪಿಸಲು ಸಾರ್ವಜನಿಕರಿಂದ ಸಲಹೆ ತೊಗೊಳೋ ವ್ಯವಸ್ಥೆ ಹುಟ್ಟಿಹಾಕಬೇಕು
  • ಶಿಕ್ಷರಿಗೆ ಕನ್ನಡದ ಮಕ್ಕಳಿಗೆ ಪಾಠ ಹೇಳಿಕೊಡುವುದು ಹೇಗೆ ಅನ್ನೋ ಬಗ್ಗೆ ತರಬೇತಿ ಕೊಡಬೇಕು
  • ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಿ ಪ್ರೋತ್ಸಾಹ ಕೊಡಬೇಕು
  • ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ/ಶಿಕ್ಷಕರಿಂದ ನಡೆಯೋ ಸಂಶೋಧನೆಯ ಸಾರಂಶವನ್ನ ಕನ್ನಡದಲ್ಲಿ ಕಡ್ಡಾಯವಾಗಿ ಬರೆಸಲು/ಮೂಡಿಸಲು ಇಂತಿಷ್ಟು ಅಂಕ ಅಂತ ಮೀಸಲಿಡಬೇಕು
ನಾವು-ನೀವು ಮಾಡಬೇಕಾದ ಕೆಲಸ

ಇನ್ನು ಜವಾಬ್ದಾರಿಯುತ ಕನ್ನಡದ ಸಾರ್ವಜನಿಕರಾಗಿ ನಾವು-ನೀವು ಈ ನಿಟ್ಟಿನಲ್ಲಿ ಏನೇನು ಮಾಡಬಹುದು ಅಂತ ಯೋಚಿಸ್ತಾ ಹೋದ್ರೆ....
  • ಅಂತಹ ಪುಸ್ತಕಗಳ ಬಗ್ಗೆ ಆಸಕ್ತಿ ತಾಳಬೇಕು, ತೊಗೊಂಡು ಓದಬೇಕು
  • ಅಂತಹ ಪುಸ್ತಕಗಳ್ನ ಬರೆಯಕ್ಕೆ ಇಷ್ಟ ಪಡೋರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು
  • ಕನ್ನಡ ಮಾಧ್ಯಮದಲ್ಲಿ ಓದ್ತಿರೋರನ್ನು ನೋಡಿ ಪ್ರೋತ್ಸಾಹ ಕೊಡಬೇಕು, ಗೇಲಿ ಮಾಡುವ ನಾಡದ್ರೋಹದ ಕೆಲಸ ಮಾಡಬಾರದು.
  • ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಹೆಚ್ಚು ಸೇರಿಸಬೇಕು
  • ನಮ್ಮ ನಮ್ಮ ಕೆಲಸಗಳಲ್ಲಿ ಆದಷ್ಟೂ ಕನ್ನಡದಲ್ಲೇ ವಿಜ್ಞಾನ-ತಂತ್ರಜ್ಞಾನ ಸಂಬಂಧಿಸಿದ ಚಂತೆನೆ-ಆಲೋಚನೆಗಳನ್ನು ಮಾಡಬೇಕು, ಇತರ ಕನ್ನಡಿಗರೊಡನೆ ಕನ್ನಡದಲ್ಲೇ ಈ ಸಂಬಂಧದ ಚರ್ಚೆಗಳಿಗೆ ಕೂರಬೇಕು
  • ಈಗಾಗಲೇ ನಮಗೆ ಗೊತ್ತಿರೋ ಜ್ಞಾನ-ವಿಜ್ಞಾನದ ಕನ್ನಡವನ್ನ ಮರೀದೆ ಸದಾ ಬಳಸುತ್ತಾ ಇರಬೇಕು, ಬೇರೆಯವರಿಗೆ ಹೇಳಿಕೊಡುತ್ತಲೂ ಇರಬೇಕು
  • ನಮ್ಮ ಬಳಿ ಇರೋ ಜ್ಞಾನವನ್ನು ಕನ್ನಡದಲ್ಲಿ ಬರೆದು, ಕಿರಿಯರಿರಗೆ ತಲುಪಿಸಬೇಕು
  • ವಿಶ್ವವಿದ್ಯಾನಿಲಯಗಳನ್ನು-ಸರ್ಕಾರವನ್ನು ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂದ ಪಟ್ಟಂತೆ ಕಲಿಕೆಗೆ ಅನುವು ಮಾಡಲು ಆಗ್ರಹಿಸುವುದು
ಇದ್ಯಾವುದೂ ಮಾಡಕ್ಕೆ ಕಷ್ಟ ಇಲ್ಲ ಗುರು! ಮಾಡಬೇಕು, ಅಷ್ಟೆ. ಈ ಪ್ರತಿಯೊಂದು ಹೆಜ್ಜೆಯಿಂದಾನೂ ನಮ್ಮ ಭವ್ಯಕರ್ನಾಟಕದ ಕನಸು ಒಂದು ಗೇಣು ಹತ್ತಿರ ಆಗತ್ತೆ ಗುರು!

ಚೌಕಾಸಿಯಿಲ್ಲದ ವಿಶ್ವೇಶ್ವರಯ್ಯನೋರ ಮೇಲೆ ಆಣೆ!

ಕನ್ನಡಾಂಬೆಯ ಹೆಮ್ಮೆಯ ಮಗ, ಚೌಕಾಸಿಯಿಲ್ಲದ ದಾರ್ಶನಿಕ, ಶ್ರೇಷ್ಠ ಎಂಜಿನಿಯರ್, ಸರಿಸಾಟಿಯಿಲ್ಲದ ವೃತ್ತಿಪರತೆಯ ಕೆಲಸಗಾರ, ಕಾಯಕವೇ ಕೈಲಾಸವೆಂದು ನಂಬಿದ್ದ ಮೈಸೂರಿನ ದಿವಾನರಾಗಿದ್ದ ನಮ್ಮ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನೋರು ಹುಟ್ಟಿದ ದಿನ ಸೆಪ್ಟೆಂಬರ್ 15 ಅನ್ನು "ಇಂಜಿನಿಯರ ದಿನ" ಅಂತ ಇಡೀ ಭಾರತ ಎಂದಿನಂತೆ ಆಚರಣೆ ಮಾಡ್ತು.

ಕನಸು ಕಾಣಬೇಕಾದರೆ, ಯೋಜನೆಗಳ್ನ ಹಾಕಿಕೊಳ್ಳಬೇಕಾದರೆ, ಕೆಲಸಕ್ಕೆ ಕೈ ಹಾಕಬೇಕಾದರೆ ಚೌಕಾಸಿ ಮಾಡಬೇಡಿ! ದೊಡ್ಡ ದೊಡ್ಡ ಕನಸು ಕಾಣ್ರಿ! ದೊಡ್ಡ ದೊಡ್ಡ ಯೋಜನೆಗಳ್ನ ಹಾಕ್ಕೊಳಿ! ದೊಡ್ಡದೊಡ್ಡ ಕೆಲಸಕ್ಕೆ ಕೈ ಹಾಕಿ! ಶಿಸ್ತಿನಿಂದ ಕೆಲಸ ಮಾಡಿ! - ಇದು ವಿಶ್ವೇಶ್ವರಯ್ಯನೋರ ಜೀವನದಿಂದ ಕಲೀಬೇಕಾದ ಮುಖ್ಯವಾದ ಪಾಠ.

ವಿಶ್ವೇಶ್ವರಯ್ಯನೋರು ಬರೀ ಒಬ್ಬ ಬುದ್ಧಿವಂತ ಇಂಜಿನಿಯರ್ ಆಗಿರಲಿಲ್ಲ. ಔರು ನಮ್ಮ ನಾಡು, ನಾಡಿನ ಜನತೆಯ ಭವಿಷ್ಯಕ್ಕೆ ಮುನ್ನುಡಿ ಬರೆದು, ನಮ್ಮ ನಾಡು ಏಳಿಗೆ ಹೊಂದಬೇಕಾದರೆ ನಾವು ಹೋಗಬೇಕಾದ ದಾರಿ ಬಗ್ಗೆ ಸ್ಪಷ್ಟ ಕಲ್ಪನೆಗಳ್ನ ಇಟ್ಟುಕೊಂಡಿದ್ದು, ಅವುಗಳ್ನ ಯೋಜನಾ ಬದ್ಧವಾಗಿ ತಮ್ಮ ಸೀಮಿತ ಅಧಿಕಾರದ ಅವಧಿಯಲ್ಲೇ ಸಾಕಷ್ಟು ಜಾರಿಗೆ ತಂದೋರು. ಅವರು ಕೆಲಸಮಾಡಿದ ಕನ್ನಡನಾಡಿನಲ್ಲಿ ಮೂಲಭೂತ ಸೌಕರ್ಯಗಳೂ ಇರಲಿಲ್ಲ. ಜನರಲ್ಲಿ ಮೂಢನಂಬಿಕೆಗಳು, ತಾಮಸ ಗುಣ ತುಂಬಿ ತುಳುಕಾಡ್ತಿದ್ವು. ಇಂತಹಾ ಒಂದು ನಾಡ್ನ ಅದೆಷ್ಟು ಮೇಲಕ್ಕೆ ತಂದರು ಈ ಮಹಾನುಭಾವರು!

ನಾಳಿನ ತಂತ್ರಜ್ಞಾನಗಳನ್ನು ಇವತ್ತೇ ಬೆಳೆಸಿ ಉತ್ಪನ್ನಗಳನ್ನು ತಯಾರಿಸಿ ಜಗತ್ತಿನಲ್ಲಿ ಸ್ಪರ್ಧೆ ಮಾಡೋದೇ ನಾಡು ಕಟ್ಟುವ ಸರಿಯಾದ ಮಾರ್ಗ ಅಂತ ಔರು ತಮ್ಮ ನಡೆಯಲ್ಲಿ ತೋರಿಸಿದರು. ನಾಡಿಗೆ ವಿಶ್ವೇಶ್ವರಯ್ಯನೋರ ಕೊಡುಗೆಗಳ ಪಟ್ಟಿ ಮಾಡ್ತಾ ಹೋದರೆ ನಿಲ್ಲೋದೇ ಇಲ್ಲ ಗುರು! ನಮ್ಮ ನೆಲದಲ್ಲೇ ಇರೋ ನೀರು, ಖನಿಜ, ನೆಲ, ವನ ಸಂಪತ್ತು (ಉದಾ: ಶ್ರೀಗಂಧ) ಇವುಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ನಮ್ಮ ಜನರ ಅರ್ಥಿಕ ಸಬಲೀಕರಣದ ಸಾಧನೆಗೆ ಶ್ರಮಿಸಿದವರು ಇವರು. ವ್ಯರ್ಥವಾಗುತ್ತಿದ್ದ ಜೋಗದ ನೀರಲ್ಲಿ ವಿದ್ಯುತ್ ತಯಾರಿಕೆಯ ಕನಸು ಕಂಡು ನನಸಾಗಿಸಿದವರು.

ಇವರ ನೀರಾವರಿ ಯೋಜನೆಗಳು ಹಸಿರುಗೊಳಿಸಿದ ಹೊಲಗಳೆಷ್ಟೋ, ಇವರ ಕೈಗಾರಿಕೆಗಳು ಹಸನುಗೊಳಿಸಿದ ಮನೆಗಳೆಷ್ಟೋ. ಪ್ರತಿ ಯೋಜನೆಯೂ ನಾಡ ಮಣ್ಣಿನ ಮಕ್ಕಳಿಗೆ ಕೈತುಂಬ ಕೆಲಸ (ಅದು ಬೇಸಾಯವೇ ಇರಲಿ, ಕೈಗಾರಿಕೆಯೇ ಇರಲಿ) ಕೊಡುವ, ಆ ಮೂಲಕ ಆರ್ಥಿಕ ಬಲ ತಂದುಕೊಡೋ ಯೋಜನೆಗಳೇ ಆಗಿದ್ದವು. ನಾಡ ಏಕೀಕರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬಣ್ಣಿಸಲಾಗದಷ್ಟು ಮಹತ್ವದ ಕೊಡುಗೆ ನೀಡಿತು. ಉತ್ತರ ದಕ್ಷಿಣ ಕರ್ನಾಟಕದ ಭಾವನಾತ್ಮಕ ಬೆಸುಗೆಗೆ ನಾಂದಿ ಹಾಡಿತು.

ಅಂದಿನ ಕಾಲದಲ್ಲೇ ಅಣೆಕಟ್ಟೆಯ ಬೃಹತ್ ಗೇಟುಗಳ ಪೇಟೆಂಟ್ ಹೊಂದಿದ್ದರು ಅವರು. ತಂತ್ರಜ್ಞಾನದ ಕ್ಷೇತ್ರವನ್ನು ಕೃಷಿಗೂ ವಿಸ್ತರಿಸಿ ವಿಶ್ವವಿದ್ಯಾಲಯ ಕಟ್ತಿದರು. ಕೈಗಾರಿಕೀಕರಣದ ಅಗತ್ಯ ಪೂರೈಸಲು ಇಂಜಿನಿಯರಿಂಗ್ ಕಾಲೇಜು ತೆಗೆದವರು ಅವರು. 1930ರಲ್ಲಿ ಟಯೋಟಾ ಸಂಸ್ಥೆ ಜಪಾನಿನಲ್ಲಿ ಮೋಟಾರು ಕಾರುಗಳ ಉತ್ಪಾದನೆ ಆರಂಭಿಸಿತು. ಸರ್ ಎಂವಿಯವರು ಸುಮಾರು 1939ರಲ್ಲಿಯೇ ಮೈಸೂರಿನಲ್ಲಿ ಒಂದು ಕಾರು ತಯಾರಿಸುವ ಕಾರ್ಖಾನೆಯ ಬಗ್ಗೆ ಯೋಜನೆ ರೂಪಿಸಿದ್ದರು.

ವಿಶ್ವೇಶ್ವರಯ್ಯನೋರೆ, ನಿಮ್ಮ ಮೇಲೆ ಆಣೆ! ಇನ್ನೆಂದಿಗೂ ಚಿಕ್ಕ ಕನಸುಗಳ, ಚಿಕ್ಕ ಯೋಜನೆಗಳ, ಚಿಕ್ಕ ಕೆಲಸಗಳಿಗೇ ನಮ್ಮ ಜೀವನವನ್ನು ಮೀಸಲಾಗಿ ಇಡೋದಿಲ್ಲ! ಕನಸು ಕಾಣುತ್ತೇವೆ, ಚಿನ್ನದ, ರನ್ನದ, ಬಂಗಾರದ ಕನ್ನಡನಾಡನ್ನು ಕಟ್ಟುವ ಕನಸು ಕಾಣುತ್ತೇವೆ. ಮಾಡಿ ತೋರಿಸುತ್ತೇವೆ, ಚಾಚೂ ತಪ್ಪದೆ ನಿಮ್ಮ ದಾರಿಯನ್ನೇ ಹಿಡಿಯುತ್ತೇವೆ, ಶಿಸ್ತಿನಿಂದ ಕೆಲಸ ಮಾಡುತ್ತೇವೆ!

ಇದು ನಿಮ್ಮ ಮೇಲೆ ಆಣೆ!

ರಾಮನ ಲೆಕ್ಕದಲ್ಲಿ "ರಾಜ್-ಭಾಷಾ", ಕೃಷ್ಣನ ಲೆಕ್ಕದಲ್ಲಿ "ರಾಷ್ಟ್ರಭಾಷಾ"

ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ ಅಂತ ಹೊಸದಾಗಿ ಹೇಳಬೇಕಾಗೇನಿಲ್ಲ. ಭಾರತ ಸರ್ಕಾರ ಅದನ್ನ "ರಾಜ್-ಭಾಷಾ" ಅಂತ ಕರ್ಕೊಂಡು ಮಾಡ್ತಿರೋ ಕಿರೀಕ್ನ ಇಲ್ಲೇ ಒಂದು ವಾರ ನೋಡಿದೀರಿ. ಆದರೆ ಈ ಸ್ವಾರಸ್ಯಕರ ವಿಷಯ ನೋಡಿ:

ಗೂಗಲ್ಲಲ್ಲಿ "national language of india" ಅಂತ ಹುಡುಕಿದರೆ ಒಂದೇ ಒಂದು ಸರ್ಕಾರೀ ಅಂತರ್ಜಾಲ ತಾಣ ಸಿಗಲ್ಲ. ಆದ್ದರಿಂದ ರಾಮನ ಲೆಕ್ಕದಲ್ಲಿ ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ.

ಆದರೆ ಅದೇ ಹುಡುಕಾಟದಲ್ಲಿ ಕೃಷ್ಣನ ಲೆಕ್ಕದಲ್ಲಿ (ಅಂದರೆ ಸರ್ಕಾರೀ ತಾಣಗಳ್ನ ಬಿಟ್ಟು) ಎಷ್ಟು ತಾಣಗಳು ಸಿಗತ್ವೆ ಅಂದ್ರೆ ನಂಬಕ್ಕಾಗಲ್ಲ ಗುರು! ಅದರಲಿ ಕೆಲವನ್ನ ಇಲ್ಲಿ ನೋಡ್ಮ. ಇವರೆಲ್ಲರೂ ಹಾಡ-ಹಗಲಲ್ಲೇ ಹಿಂದಿಗೆ ಇಲ್ಲದ "ರಾಷ್ಟ್ರಭಾಷೆ" ಪಟ್ಟ ಕಟ್ಕೊಂಡಿರೋರೇ:

http://www.nlindia.org/collection.html
http://www.india-travel-agents.com/india-guide/languages.html
http://www.bharatonline.com/travel-tips/common-languages.html
http://www.indiasite.com/language/hindi.html
http://www.tribuneindia.com/2002/20020914/windows/note.htm
http://www.languageschoolsguide.com/listingsp3.cfm/listing/31005
http://www.indianetzone.com/2/hindi_language.htm
http://www.bolokids.com/2007/0461.htm
http://www.bartleby.net/65/in/IndoIran.html
http://www.urbandictionary.com/define.php?term=hindi
http://www.chillibreeze.com/articles/MisconceptionsaboutIndia_000.asp
http://www.mapsofindia.com/who-is-who/literature/regional-authors.html
http://www.goa-travel-tourism.com/languages-of-goa/
http://www.multilingualbooks.com/hindi-tutor.html
http://www.mukto-mona.com/Special_Event_/5_yrs_anniv/s_bain/india_ally250506.htm
http://www.manicksorcar.com/news37.php
http://www.hindikids.com/hindi_language.html
http://www.indianraj.com/2006/08/should_hindi_be_included_in_un.html
http://miusa.org/ncde/intlopportunities/indiafeat/
http://www.indopedia.org/Hindi.html

ಅಮೇರಿಕದ ಈ ವಿಶ್ವವಿದ್ಯಾಲಯಗಳಿಗೆ ಏನು ಬಂದಿತ್ತು ರೋಗ?

http://www.lmp.ucla.edu/Profile.aspx?LangID=87&menu=004
http://news-service.stanford.edu/news/2007/may2/hennessy-050207.html
http://www.slu.edu/colleges/AS/languages/hindi/
http://www.ucsc.edu/news_events/review/summer-02/languagelessons.html
http://cms.lsa.umich.edu/lsa/printversion/0,2062,841*article*176*UOM_Article,00.html
http://www.crl.edu/areastudies/SAMP/news/index.htm
http://www.southasia.wisc.edu/langstudy.htm

ಇನ್ನು ವಿಕೀಪೀಡಿಯಾನಲ್ಲೂ ಕೃಷ್ಣನ ಲೆಕ್ಕ ಇದ್ದೇ ಇದೆ ಗುರು:

http://en.wikipedia.org/wiki/Standard_language

ಈ ಭೂಪಾಂತೂ ಭಾರತೀಯ ಸಂವಿಧಾನವನ್ನೇ ಬದಲಾಯಿಸಿಬಿಟ್ಟಿದಾನೆ ಹಿಂದಿಗೆ ರಾಷ್ಟ್ರಭಾಷೆ ಸ್ಥಾನ ಕೊಡಕ್ಕೆ:

http://www.iloveindia.com/constitution-of-india/languages.html

ಇದೆಲ್ಲಾ ತೋರಿಸುತ್ತಾ ಇರೋದೇನಪ್ಪಾ ಅಂದ್ರೆ - ಕೇಂದ್ರ ಸರ್ಕಾರ ಮೇಲೆಮೇಲೆ ಹೇಳೋದು ಏನೇ ಇದ್ದರೂ ಈ ಪ್ರಪಂಚದಲ್ಲಿ ಹಿಂದಿಯಬಗ್ಗೆ ಸುಳ್ಳುಸುಳ್ಳು ಮಾಹಿತಿ ಇಟ್ಕೊಂಡಿರೋರ ಸಂಖ್ಯೆ ಸಕ್ಕತ್ ಇದೆ. ರಾಮನ ಲೆಕ್ಕ, ಕೃಷ್ಣನ ಲೆಕ್ಕ ಬೇರೆಬೇರೆ ಇಟ್ಕೊಳೋದ್ನ ನಮ್ಮ ಭಾರತದ ವ್ಯವಸ್ಥೆಯಿಂದ ಕಲೀಬೇಕು ಗುರು! ಭೇಷ್ ಇಂಡಿಯಾ!

ಇಲ್ಲಿ ಕೃಷನ ಲೆಕ್ಕದಲ್ಲಿ ಹಿಂದೀನ ರಾಷ್ಟ್ರಭಾಷೆ ಅಂತ ಹೇಳ್ತಿರೋರಿಗೆಲ್ಲ ಬರೆದು ನಿಜಾಂಶ ತಿಳ್ಸಬೇಕು ಗುರು! ಇದನ್ನ ನಾವಲ್ದೆ ಇನ್ನ್ಯಾರು ಮಾಡ್ತಾರೆ?

ಹಿಂದಿ ಹೇರಿಕೆಗೆ ಸೊಪ್ಪು ಹಾಕದೆ ಇರೋದು ಹೇಗೆ?

ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕಗಳ ಭರಾಟೆಗಳ ದಿಬ್ಬಣದಲ್ಲಿ ಕಳೆದುಹೋಗ್ತಿರೋ ಕನ್ನಡಿಗರೇ, ಈ ಹಿಂದಿ ಹೇರಿಕೆಯ ಭೂತವನ್ನು ಬಿಡ್ಸೋದ್ ಹ್ಯಾಗೆ ಅಂತ ಇವತ್ ಮಾತಾಡೋಣ. ನಾವು ಕನ್ನಡದೋರು, ನಮ್ ನುಡಿ ಕನ್ನಡ, ನಮ್ಮ ನಾಡಲ್ಲಿ ಇದೇ ಸಾರ್ವಭೌಮ ಭಾಷೆ ಅಗ್ಬೇಕು ಅಂತ ಅನ್ನೋದೆ ಸರಿ, ಇದೇ ನಮ್ ಗುರಿ ಅಂತ ನೀವೂ ಅಂದ್ಕೊಂಡ್ರೆ ...... ನೋಡಿ ಸ್ವಾಮಿ ನಾವ್ ಇರಬೇಕಾದ್ದೇ ಹೀಗೆ.


ನಮ್ಮ ಕೆಲಸದ ಜಾಗದಲ್ಲಿ ....

ನಿಮ್ ಕಛೇರಿಗಳಲ್ಲಿ ಅಧಿಕೃತ ಸಂಪರ್ಕ ಭಾಷೆ - ಕನ್ನಡ ಅಥವಾ ಇಂಗ್ಲಿಷ್ ಆಗಿರ್ಲಿ. ಕನ್ನಡಿಗ ಸಹೋದ್ಯೋಗಿಗಳ ಜೊತೆ ಕನ್ನಡದಲ್ಲೇ ಮಾತಾಡೋಣ. ಬೇರೆ ಭಾಷೆ ಸಹೋದ್ಯೋಗಿಗಳ ಜೊತೆ ಇಂಗ್ಲಿಷ್ ಮಾತಾಡುದ್ರೂ ಕನ್ನಡ ಕಲ್ಸೋ ಕೆಲ್ಸ ಮಾತ್ರ ಮರ್ಯೋದ್ ಬೇಡ. ಹಿಂದಿ ಮಾತ್ ಆಡೋದು ಮಾತ್ರ ದೇಶಪ್ರೇಮದ ಪ್ರದರ್ಶನ ಅಲ್ಲ, ದೇಶದ ಒಗ್ಗಟ್ಟಿಗೆ ಅದು ಒಳ್ಳೇದೂ ಅಲ್ಲ ಅಂತ ತಿಳ್ಕೊಂಡು ನಮ್ ಭಾಷೆ ಹೇಳ್ಕೊಡೋಣ.

ಗ್ರಾಹಕ ಸೇವೆ ತೊಗೋಬೇಕಾದಾಗ ....

ನಿಮ್ಮ ಬ್ಯಾಂಕು, ಫೋನೂ ಸೇರಿದಂತೆ ಯಾವುದೇ ಗ್ರಾಹಕ ಸೇವೆ ಪಡೀಬೇಕಾದ್ರೆ ಕನ್ನಡದಲ್ಲೇ ಅದು ಇರ್ಬೇಕು ಅಂತ ಒತ್ತಾಯ ಮಾಡಿ. ATMಗಳಲ್ಲಿ ಕನ್ನಡ ಆಯ್ಕೆ ಇದ್ರೆ ಅದನ್ನೇ ಖಂಡಿತಾ ಉಪಯೋಗಿಸಿ. ಇಲ್ಲಾಂದ್ರೆ ಬಳ್ಸೋರಿಲ್ಲ ಅಂತ ಕಿತ್ ಹಾಕ್ ಬಿಟ್ಟಾರು. ಹಿಂದಿ ಫಲಕಗಳನ್ನು, ಹಿಂಗ್ಲಿಷ್ ಫಲಕಗಳನ್ನು ಹಾಕೋದನ್ನು ವಿರೋಧಿಸಿ. ಪರಭಾಷಿಕರ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಕಂಗ್ಲಿಷ್ ಫಲಕ ಹಾಕಿ ಅಂತ ಒತ್ತಾಯಿಸಿ. ನಾವೂ ನೀವೂ ಗ್ರಾಹಕ ಸೇವೆಯನ್ನು ಕನ್ನಡದಲ್ಲಿಯೇ ಪಡ್ಕೋಬೇಕು ಅಂತ ಒಂದು ತೀರ್ಮಾನ ಮಾಡುದ್ರೆ ಎಷ್ಟೋ ಸಾವಿರ ಜನ ಕನ್ನಡಿಗರಿಗೆ ಉದ್ಯೋಗ ಸಿಗುತ್ತೆ. ಎಷ್ಟೊ BPOಗಳು ಪಕ್ಕದ್ ರಾಜ್ಯಗಳಿಗೆ ಪಲಾಯನ ಮಾಡೋದ್ ತಪ್ಪುತ್ತೆ.

ಅಂಗಡಿ, ಮುಂಗಟ್ಟುಗಳಲ್ಲಿ ....

ಎಲ್ಲಾ ಕಡೆ ಕನ್ನಡ ಮಾತಾಡಿ. ಮಾಲ್ ಗಳಿಗೋ, ಮಾರ್ಕೆಟ್ ಗಳಿಗೋ ಹೋದರೆ, ಸ್ವಲ್ಪ ಜೋರುಜೋರಾಗೆ ಕನ್ನಡದಲ್ಲಿ ಮಾತಾಡ್ಕೊಳ್ಳಿ ಮತ್ತು ಕನ್ನಡದ ವಾತಾವರಣ ಹುಟ್ಟ್ ಹಾಕೋದ್ನ ಮರೀಬೇಡಿ. ಅಂಗಡಿಯವರ ಜೊತೆ, ಅಲ್ಲಿನ ಭದ್ರತಾ ಸಿಬ್ಬಂದಿ ಜೊತೆ ಕನ್ನಡದಲ್ಲೇ ಮಾತಾಡಿ. ಕನ್ನಡ ಮಾತಾಡೋ ಸಿಬ್ಬಂದಿಗಾಗಿ ಒತ್ತಾಯಿಸಿ. ಎರಡು ರೂಪಾಯಿ ಕಮ್ಮಿಗೆ ಸಾಮಾನು ಸಿಗುತ್ತೆ ಅಂತ ಅಂಗಡಿಯವನ ಹತ್ರ ಹಿಂದೀಲ್ ಮಾತಾಡೋದ್ನ ಯಾವತ್ಗೂ ಮಾಡ್ಬೇಡಿ. ಬೇಡದೆ ಇರೋ ಹಿಂದಿ ಪದಗಳನ್ನು ಬಳಕೆ ಮಾಡ್ಲೇ ಬೇಡಿ. ಅಂದ್ರೆ ಬೇಳೆಗೆ ದಾಲ್ ಅನ್ನೋದೋ ಮತ್ತೊಂದೋ ಮಾಡಬೇಡಿ. ವಸ್ತುಗಳಿಗೆ ಬಳಕೇಲ್ ಇರೋ ಕನ್ನಡದ ಹೆಸರುಗಳನ್ನೇ ಬಳಸಿ.

ಬ್ಯಾಂಕು, ರೇಲ್ವೆ ಕಛೇರಿಗಳಲ್ಲಿ ....

ಎಲ್ಲ ಅರ್ಜಿಗಳನ್ನು ಕನ್ನಡದಲ್ಲಿ ತುಂಬಿ. ಬ್ಯಾಂಕು ಚಲನ್ನು ಚೆಕ್ಕುಗಳನ್ನು ಕನ್ನಡದಲ್ಲೇ ತುಂಬಿ. ಯಾವ ಬ್ಯಾಂಕಿನವರು ಕನ್ನಡದಲ್ಲಿ ಸೇವೆ ಕೊಡ್ತೀನಿ ಅಂತಾರೋ ಅವರ ಹತ್ರಾನೆ ಖಾತೆ ಇಟ್ಕೋತೀನಿ ಅಂತ ತೀರ್ಮಾನ ಮಾಡಿ. ಹಿಂದೀಲಿ ಅರ್ಜಿ ಪರ್ಜಿ ಇದ್ರೆ ವಿರೋಧ ಮಾಡಿ. ಕನ್ನಡದಲ್ಲಿ ಇಲ್ಲದಿದ್ದರೆ ಖಂಡಿಸಿ, ಕನ್ನಡಕ್ಕಾಗೆ ಒತ್ತಾಯಿಸಿ.

ಭದ್ರತಾ ಸಿಬ್ಬಂದಿಗಳು ....

ನೀವು ಎಲ್ಲೇ ಹೋಗಿ, ಭದ್ರತಾ ಸಿಬ್ಬಂದಿಗಳ ಜೊತೆ ಸದಾ ಕನ್ನಡದಲ್ಲೇ ಮಾತಾಡಿ. ಅವರೇನಾದ್ರೂ ಹಿಂದೀಲೆ ಮಾತಾಡಕ್ ಪ್ರಯತ್ನ ಪಟ್ರೆ, ನಿಮಗೆ ಹಿಂದಿ ಬರಲ್ಲ ಅಂತ ಹೆಮ್ಮೆಯಿಂದ ಇಲ್ದೆ ಹೇಳಿ. ಅಕಸ್ಮಾತ್ ಹಿಂದಿ ಬರ್ತಿದ್ರೂ ನಿಮಗೆ ಬರೋದೆ ಇಲ್ಲ ಅನ್ನೋ ಹಾಗೆ ನಡ್ಕೊಳ್ಳಿ.

ನಮ್ಮವರ ಜೊತೆ ....

ಸದಾ ಕನ್ನಡದಲ್ಲೇ ಮಾತಾಡಿ. ಕನ್ನಡ ನಾಡಿನ ಆಗುಹೋಗುಗಳು, ಇಲ್ಲಿನ ರಾಜಕೀಯ, ಇಲ್ಲಿನ ಆರ್ಥಿಕ ಸ್ಥಿತಿಗತಿ, ಇಲ್ಲಿನ ಸಿನಿಮಾಗಳು, ಕನ್ನಡದ ಹಾಡುಗಳು . . . . ಇವುಗಳ ಬಗ್ಗೇನೆ ಹೆಚ್ಚಾಗಿ ಮಾತಾಡಿ. ನೀವು ಕೊಂಡುಕೊಳ್ಳುವ ಮೊದಲ ದಿನಪತ್ರಿಕೆ ಕನ್ನಡದ್ದಾಗಿರಲಿ. ನಿಮ್ಮ ಮನೆಯಲ್ಲಿ ಕನ್ನಡದ ವಾತಾವರಣವಿರಲಿ. ಮನೆಯ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಅನ್ನುವ ಸತ್ಯವನ್ನು ತಿಳಿಸಿಕೊಡಿ.

ಇವೆಲ್ಲಾ ಮಾಡುದ್ರೆ ಏನಾಗುತ್ತೆ?

ವಲಸಿಗ ಕನ್ನಡ ನಾಡಿನ ಮುಖ್ಯವಾಹಿನಿಯಲ್ಲಿ ಸೇರ್ಕೊಳ್ಳಕ್ ಪೂರಕವಾದ ಸನ್ನಿವೇಶ ಸೃಷ್ಟಿಯಾಗುತ್ತೆ. ಇದು ಕನ್ನಡನಾಡು, ಇದು ಕನ್ನಡಿಗರ ನಾಡು ಅನ್ನೋ ಸಂದೇಶ ಪರಭಾಷಿಕನಿಗೆ ತಲುಪುತ್ತೆ. ಕನ್ನಡಿಗರ ಕೀಳರಿಮೆ ಬಹಳಷ್ಟು ಕಡಿಮೆಯಾಗುತ್ತೆ. ಅದೆಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ಹಿಂದಿ ನುಂಗಿ ನೀರುಕುಡ್ಯೋ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತೆ.

ಇದೇ ನಿಜವಾದ ದೇಶಪ್ರೇಮ ....

ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು. ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರದಲ್ಲಿ ತೆಲುಗು, ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ ಸಾರ್ವಭೌಮ ಭಾಷೆಯಾಗಬೇಕು. ನಮ್ಮ ಆಡಳಿತಗಳಲ್ಲಿ, ಕೇಂದ್ರ ಸರ್ಕಾರದ ಕಛೇರಿಗಳಲ್ಲಿ... ಎಲ್ಲ ಭಾಷೆಗಳಿಗೂ ಸಮಾನವಾದ ಮಾನ್ಯತೆ ಮತ್ತು ಆದ್ಯತೆಗಳು ಇರಬೇಕು. ಒಂದು ನಾಡಿಗೆ ಪರಭಾಷಿಕನೊಬ್ಬ ವಲಸೆ ಹೋಗುವುದಿದ್ದರೆ ಆ ಪ್ರದೇಶದ ಭಾಷೆಯ ತರಬೇತಿಯನ್ನು ಪಡೆದುಕೊಂಡು ಹೋಗುವ ವ್ಯವಸ್ಥೆ ಇರಬೇಕು. ಪ್ರತಿಯೊಂದು ಭಾಷೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು.

ಹಿಂದಿಯನ್ನು ದೇಶಪ್ರೇಮದ ಜೊತೆ ತಳುಕು ಹಾಕುವುದೋ, ದೇಶಕ್ಕೊಂದು ಭಾಷೆಯಿರಬೇಕೆಂದು ಸಮೂಹ ಸನ್ನಿ ಹುಟ್ಟುಹಾಕುವುದೋ, ಆ ಕಾರಣಕ್ಕಾಗಿ ಹಿಂದಿಗೆ , ಹಿಂದಿ ಪ್ರಚಾರಕ್ಕೆ ವಿಶೇಷ ಆದ್ಯತೆ ನೀಡುವುದೋ ನಿಲ್ಲಬೇಕು. ಇದೊಂದೇ ನಮ್ಮ ಪ್ರೀತಿಯ ಭಾರತವನ್ನು ಒಡೆಯದಂತೆ ತಡೆಯಲು ಇರುವ ಸಾಧನ. ಇದೇ ನಿಜವಾದ ದೇಶಪ್ರೇಮ. ಊಟಕ್ಕೆ ಎಲೆ ಹಾಕಿದಾಗ, ಪಾಯಸಕ್ಕೊಂದು ಜಾಗ, ಪಲ್ಯಕ್ಕೊಂದು ಜಾಗ, ಅನ್ನಕ್ಕೊಂದು ಜಾಗ ಅಂತ ಇರುತ್ತೆ. ಏಕತೆ ಹೆಸರಲ್ಲಿ ಎಲ್ಲಾನು ಕಲಸಿಕೊಂಡು ಒಟ್ಗೆ ಊಟ ಮಾಡಬೇಕು ಅಂದ್ರೆ ಅದು ಇಡೀ ಊಟದ ರುಚೀನೆ ಕೆಡ್ಸುತ್ತೆ ಗುರೂ... ಒಂದೊಂದಕ್ಕೂ ಇರೋ ಅನನ್ಯತೆಯನ್ನು ಗುರುತಿಸಿ ಗೌರವಿಸಿದರೆ ಊಟಕ್ಕೊಂದು ರೀತಿ, ಅದು ಪರಮಾತ್ಮಂಗೂ ಪ್ರೀತಿ.

ಕರ್ನಾಟಕಕ್ಕೆ ಬಂದ ಹಿಂದಿಯೋರು ಕನ್ನಡ ಕಲೀಬೇಕು, ನಮಗೇ ಹಿಂದಿ ಕಲಿಸೋದಲ್ಲ!

ಒಬ್ಬ ಕನ್ನಡಿಗ ಉತ್ತರ ಭಾರತದ ಹಿಂದಿ ರಾಜ್ಯಗಳಿಗೆ ವಲಸೆ ಹೋದ್ರೆ ಹಿಂದಿ ಮಾತಾಡ್ತಾನೆ, ಅಲ್ಲೀ ಸಂಸ್ಕೃತಿ ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಸೇರ್ಕೋತಾನೆ. ಆದರೆ ಉತ್ತರಭಾರತದಿಂದ ಹಿಂದಿಯೋರು ಬಂದ್ರೆ ಮಾತ್ರ ಇಲ್ಲಿ ಅವರು ಕನ್ನಡ ಕಲಿಯೋದಿರ್ಲಿ, ನಮ್ಮ ಕಣ್ಣಿಗೇ ಮಣ್ಣೆರಚಿ ನಮಗೇ ಹಿಂದಿ ಕಲಿಸಕ್ಕೆ ಬರ್ತಾರಲ್ಲ, ಹೀಗೆ ಯಾಕೆ ಗುರು? ಇದಕ್ಕೆ ಪರಿಹಾರ ಏನು ಗುರು?

ಕೇಂದ್ರದ ಆಡಳಿತದಲ್ಲಿರೋ ಇಲಾಖೆಗಳು ಬಿತ್ತ ಬೀಜ

ಕೆಲವೇ ವರ್ಷಗಳ ಹಿಂದೆ ಸರ್ಕಾರಾನೇ ಉದ್ಯೋಗ ಕೊಡೋ ತಾಯಿ-ತಂದೆ ಎಲ್ಲವೂ ಆಗಿತ್ತು. ಸರ್ಕಾರವೇ ಬ್ಯಾಂಕು ನಡೆಸ್ತಾ ಇತ್ತು, ವಾಹನಗಳ್ನ ತಯಾರು ಮಾಡ್ತಿತ್ತು, ಅಡಿಗೆ ಸಾಮಾನು ಮಾರ್ತಾ ಇತ್ತು, ಪೇಪರ್ ತಯಾರಿಸ್ತಾ ಇತ್ತು, ಅಂಚೆ ಸೇವೆ ನಡೆಸ್ತಾ ಇತ್ತು, ಪ್ರತಿಯೊಂದ್ನೂ ಮಾಡ್ತಿತ್ತು. ಇದು ನಮ್ಮ ಹಿಂದಿನ ಪೀಳಿಗೆಯೋರ್ಗೆ ಬಹಳ ಚೆನ್ನಾಗಿ ಗೊತ್ತು. ಒಟ್ನಲ್ಲಿ "ಸರ್ಕಾರ = ಉದ್ಯೋಗ ಕೊಡೋ ದೇವ್ರು" ಆಗಿತ್ತು. ಆದ್ರೆ ಆ ಸರ್ಕಾರಕ್ಕೆ ಹಿಂದಿ ಹಿಡಿದಿತ್ತು.

ಕರ್ನಾಟಕಕ್ಕೆ ಹಿಂದಿಯೋರು ವಲಸೆ ಬರಕ್ಕೆ ಶುರು ಮಾಡಿದ್ದು ಹೆಚ್ಚಾಗಿ ಕೇಂದ್ರಸರ್ಕಾರದ ಬೇರೆಬೇರೆ ಇಲಾಖೆಗಳಿಗೆ ಕೆಲಸಕ್ಕೆ ಬರೋ ನೆಪದಲ್ಲಿ. ಅದ್ಯಾಕೆ? ಕೇಂದ್ರಸರ್ಕಾರದ ಇಲಾಖೆಗಳಿಗೆ ಹಿಂದಿಯೋರೇ ಹೆಚ್ಚು ಯಾಕೆ ಬಂದ್ರು ಅಂತೀರಾ? ಕೆಲವರು ಅಂದ್ಕೊಂಡಿರಬೋದು ಅವರಿಗೆ ಹೆಚ್ಚು ತಲೆ ಇತ್ತು, ಅವರು ಕನ್ನಡಿಗರಿಗಿಂತ ಬುದ್ಧಿವಂತರು, ಉದ್ಯಮಶೀಲರು, ಧೈರ್ಯವಂತರು, ಮುನ್ನುಗ್ಗೋರು, ಮಣ್ಣು ಮಸಿ, ಅದಕ್ಕೋಸ್ಕರಾನೇ ಔರು ಇಲ್ಲೀಗೆ ಬಂದು ಸೇರ್ಕೊಂಡ್ರು ಅಂತ.

ಎಲ್ಲಾ ಬರೀ ಸುಳ್ಳು. ಕಾರಣ ಅದಲ್ಲ. ಕಾರಣ ಇಷ್ಟೇ: ಆಗಲಿಂದಲೇ ಕೇಂದ್ರ ಕಚೇರಿಗಳಲ್ಲಿ ಹೆಚ್ಚು ಹೆಚ್ಚು ಕೆಲಸ ಹಿಂದಿಯಲ್ಲಿ ನಡೀಬೇಕು, ಬರ್ತಾ ಬರ್ತಾ ಇಂಗ್ಲೀಷು ಹೋಗಿ ಬರೀ ಹಿಂದಿ ಉಳೀಬೇಕು ಅನ್ನೋ ಕಾನೂನು ಆಗಲೇ ಇತ್ತು (ಈಗಲೂ ಇದೆ!). ಅದಕ್ಕೆ ಹಿಂದಿ ಬರೋರೇ ಆಗಬೇಕಲ್ಲ, ಅದಕ್ಕೇ ಹಿಂದಿ ಜನ ಬಂದು ಬಂದು ಇಲ್ಲಿ ತುಂಬ್ಕೊಂಡಿದ್ದು (ಈಗಲೂ ತುಂಬ್ಕೋತಿದಾರೆ!).

ಇಷ್ಟೆಲ್ಲಾ ನಡೀತಿರುವಾಗ ಕನ್ನಡಿಗ ಏನ್ ಮಾಡ್ದ? ಪಾಪ ಔನಿಗೆಲ್ಲಿ ಬರಬೇಕು ಹಿಂದಿ? ಕೆಲಸ ಸಿಗದೆ ಸುಮ್ಮನೆ ಕೂತಿದ್ದ! ತನಗೆ ಕೆಲಸ ಯಾಕೆ ಸಿಗಲಿಲ್ಲ ಅಂತ ಯೋಚಿಸಿದಾಗ ತನಗೆ ಬುದ್ಧಿಯಿಲ್ಲವೇನೋ, ಅದೃಷ್ಟ ಇಲ್ಲವೇನೋ, ಯೋಗ್ಯತೆ ಇಲ್ಲವೇನೋ ಅಂದುಕೊಂಡು ಸುಮ್ಮನಾದ! ಬರ್ತಾ ಬರ್ತಾ ತನ್ನ ಭಾಷೆ ಯೋಗ್ಯತೇನೇ ಇಷ್ಟು, ಕನ್ನಡದಿಂದ ಅನ್ನ ಇಲ್ಲ ಅನ್ಕೊಂಡು ಹಿಂದಿ ಕಲಿಯಕ್ಕೆ ಶುರು ಮಾಡ್ದ!

ಹಿಂದಿ ಪ್ರಚಾರ ಹಾಕಿದ ನೀರು

ಇದರ ಜೊತೇಗೇ ಹಿಂದಿ ಅಂದ್ರೆ ರಾಷ್ಟ್ರಭಾಷೆ, ಹಿಂದೀನೇ ದೇಶದ ಪ್ರಾತಿನಿಧಿಕ ಭಾಷೆ, ಹಿಂದಿ ಬರದೇ ಇರೋನು ಈ ದೇಶದಲ್ಲಿರಕ್ಕೆ ಲಾಯಕ್ಕಿಲ್ಲ ಅಂತೆಲ್ಲಾ ಸಕ್ಕತ್ತು ಸುಳ್ಳುಸುಳ್ಳು ಪ್ರಚಾರಗಳು ನಡುದ್ವು. ಇವತ್ತಿಗೂ "ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ" ಅನ್ನೋ ಒಂದು ಸಂಸ್ಥೆ ಹಿಂದೀನ ರಾಷ್ಟ್ರಭಾಷೆ ಅಂತ ರಾಜಾರೋಷವಾಗಿ ಕರೀತಿದೆ. ಇವರೊಬ್ರೇ ಅಲ್ಲ, ಹಾಗೆ ನಂಬ್ಕೊಂಡಿರೋರು ಭಾರತದಲ್ಲಿ ಬಹಳ ಜನ ಇದಾರೆ. ಆದರೆ ಇವೆಲ್ಲ ಸುಳ್ಳು. ಹಿಂದಿಗೆ ನಮ್ಮ ಸಂವಿಧಾನ ಕೇಂದ್ರದ "ಅಧಿಕೃತ ಭಾಷೆ" ಅನ್ನೋ ಸ್ಥಾನಮಾನ ಕೊಟ್ಟಿದೆಯೇ ಹೊರತು ಹೆಚ್ಚೇನೂ ಇಲ್ಲ. ಹಾಗೆ ಕೊಟ್ಟಿರೋದು ಸರಿಯಿಲ್ಲ ಅನ್ನೋದನ್ನೂ ನಾವು ಮರೀಬಾರದು ಗುರು! ಯಾಕೆ ಅದಕ್ಕೆ ಈ ವಿಶೇಷ ಸ್ಥಾನ? ಇರಲಿ.

ಒಟ್ನಲ್ಲಿ ಹಿಂದಿಗೆ ಇಲ್ಲದ ಸ್ಥಾನ ಕೊಡ್ತು ಈ ಪ್ರಚಾರ. ಇವತ್ತಿಗೂ ಇಲ್ಲದ ಪ್ರಚಾರ, ಇಲ್ಲದ ಸ್ಥಾನಮಾನಾನ ಹಿಂದಿಗೆ ಕೇಂದ್ರಸರ್ಕಾರ ಕೊಡ್ತಾನೇ ಇದೆ, ನಮ್ಮ ರಾಜ್ಯಸರ್ಕಾರಾನೂ ತೂಗುತಲೆ ತೂಗ್ತಾನೇ ಇದೆ, ಅನೇಕ ಕನ್ನಡಿಗರು ಹಿಂದೀನ ಕಣ್ಗೊತ್ಕೋತಾನೇ ಇದಾರೆ. ಈ ಹಿಂದೀವಾದಿ ಕನ್ನಡಿಗರೆಲ್ಲ ನಮ್ಮ ವ್ಯವಸ್ಥೆಯಲ್ಲಿರೋ ಪಕ್ಷಪಾತದ ಮಕ್ಕಳೇ! ಈ ಮಕ್ಕಳಿಗೆ ಹಿಂದಿಯೇ ತಾಯಾದಳು, ಹಿಂದಿಯೋರೆಲ್ಲಾ ಅಣ್ಣತಮ್ಮಂದಿರಾದರು. ಸುತ್ತಮುತ್ತಲ ತಮ್ಮದೇ ಜನಾಂಗಕ್ಕೆ ಸೇರಿದ ಕನ್ನಡಿಗರು ಕಚ್ಚಾಡೋ ದಾಯಾದಿಗಳಾದ್ರು! ಯಾವ ಕಚ್ಚಾಟ? ಕೇಂದ್ರಸರ್ಕಾರೀ ನೌಕರಿ ಗಿಟ್ಟಿಸಿಕೊಳ್ಳಕ್ಕೆ ಹಿಂದಿ ಕಲಿಯೋದ್ರಲ್ಲಿ ನಾಮುಂದು ತಾಮುಂದು ಅಂತ ಬಾವಿಗೆ ಬೀಳೋದ್ರಲ್ಲಿ!

ಬೀಜ ಹೆಮ್ಮರವಾಗಿದ್ದು ಆಶ್ಚರ್ಯವೇನು?

ಹಿಂದಿಯೋರಿಗೆ ಎಲ್ಲಿಗೆ ಹೋದರೂ ತಮ್ಮ ಭಾಷೆ ನಡೀಬೇಕು ಅನ್ನೋ ವ್ಯವಸ್ಥೆ, ಕರ್ನಾಟಕಕ್ಕೆ ಬಂದರೆ ತೋರಣ ಕಟ್ಟಿ ಆರತಿ ಮಾಡಿ ಅವರ ಭಾಷೇಲೇ ಹಾಡು ಹೇಳಿ ಬರಮಾಡ್ಕೋಬೇಕು ಅನ್ನೋ ಕನ್ನಡಿಗರು - ಇವೆಲ್ಲಾ ಇದ್ದಾಗ ಹಿಂದಿ ಮಾತಾಡೋ ವಲಸಿಗ್ರು ಬಂದು ತುಂಬ್ಕೊಳೋದು ವಿಶೇಷವೇನು? ಔರಿಗೇ ಇದು ಮನೆ ಅನ್ನಿಸ್ತಾ ಇರೋದು, ಕನ್ನಡಿಗರಿಗಲ್ಲ!

ಇವತ್ತು ಐಟಿ-ಬಿಟಿ ಗಳ ಯುಗ ಬಂದು ಕಚೇರಿಗಳಲ್ಲಿ ಹಿಂದಿಯಲ್ಲೇ ಕೆಲಸ ನಡೀಬೇಕು ಅಂತಿಲ್ಲದೆ ಹೋದರೂ ಈ ವಲಸೆಯೇನು ನಿಂತಿಲ್ಲ, ಹಿಂದಿ ಹೇರಿಕೆ ನಿಂತಿಲ್ಲ. ಯಾಕೆ? ಇವತ್ತಿಗೂ ಹಿಂದಿಯೋರು ಇಲ್ಲೀಗ್ ಬಂದು "ಇನ್ನೂ ಇಲ್ಲೀ ಜನ ಯಾಕೆ ಹಿಂದಿ ಮಾತಾಡ್ತಿಲ್ಲ?" ಅಂತಾರಲ್ಲ, ಯಾಕೆ? ಇಲ್ಲೀಗೆ ಬರೋ ಎಷ್ಟೋಂದು ಹಿಂದಿಯೋರಿಗೆ ಇಲ್ಲಿ ಭಾಷೆ ಯಾವುದು ಅಂತಾನೇ ಗೊತ್ತಿರಲ್ಲವಲ್ಲ, ಯಾಕೆ?

ಬೀಜ ಇಲ್ಲದಿದ್ದರೂ ಹೆಮ್ಮರ ಉಳ್ಕೊಂಡಿದ್ಯಲ್ಲ, ಯಾಕೆ? ಯಾಕೇಂದ್ರೆ ಆ ಮರವೇ ನೀರು ಕುಡಿದು ಕುಡಿದು ಬೆಳ್ದು ಬೆಳ್ದು ದೊಡ್ಡದಾಗ್ತಿದೆ, ಅದಕ್ಕೆ!

ಇದಕ್ಕೆಲ್ಲ ಪರಿಹಾರ

ಇದು ಹೀಗೇ ಮುಂದುವರ್ಕೊಂಡು ಹೋಗೋದು ಸರಿಯಿಲ್ಲ ಅನ್ನೋದು ಸ್ಪಷ್ಟ. ಕನ್ನಡಿಗನೇ ಕರ್ನಾಟಕದಲ್ಲಿ ಸಾರ್ವಭೌಮನಾಗಬೇಕು. ಕನ್ನಡವೇ ಇಲ್ಲಿ ಸಾರ್ವಭೌಮವಾಗಬೇಕು. ಹಿಂದಿ-ಹಿಂದಿಯೋರು ಇಲ್ಲಿ ನಮಗಿಂತ ಹೆಚ್ಚು ಸೌಲತ್ತುಗಳನ್ನು ಅನುಭವಿಸೋದು, ನಾವು ನಮ್ಮ ನಾಡಲ್ಲೇ ಎರಡನೇ ದರ್ಜೆ ಪ್ರಜೆಗಳಾಗಿರೋದು - ಇವೆಲ್ಲ ನಿಲ್ಲಬೇಕು.

ಜೊತೆಗೆ ಈಗಾಗಲೇ ಇಲ್ಲಿ ವಲಸೆ ಬಂದು ನೆಲೆಸಿರೋ ಹಿಂದಿಯೋರಿಗೆ ಕನ್ನಡ ಕಲಿಯದೆ ಬೇರೆ ದಾರಿ ಇಲ್ಲ ಅನ್ನೋ ವ್ಯವಸ್ಥೆ ಬರಬೇಕು. ಇವತ್ತು ಕರ್ನಾಟಕದಲ್ಲಿ ಎಲ್ಲೆಲ್ಲಿ ಹಿಂದಿ ಇದ್ಯೋ ಅಲ್ಲೆಲ್ಲ ಮೊದಲು ಕನ್ನಡ ಬರಬೇಕು. ನಿಧಾನವಾಗಿ ಇಂಗ್ಲೀಷೂ ಹೋಗಿ ಬರೀ ಕನ್ನಡವಾಗಬೇಕು. ತಾವಾಗೇ ತಮ್ಮ ಇಷ್ಟದಿಂದ್ಲೇ ಕನ್ನಡ ಕಲೀತೀನಿ ಅನ್ನೋ ಹಿಂದಿಯೋರೂ ಬಹಳ ಜನ ಇದಾರೆ. ಇವರಿಗೆ ಕನ್ನಡಿಗರು ಸರಿಯಾದ ಸಂಸ್ಥೆಗಳ್ನ ಹುಟ್ಟುಹಾಕಿ ಕನ್ನಡವನ್ನ ವೈಜ್ಞಾನಿಕವಾಗಿ, ಹೊಚ್ಚಹೊಸ ತಂತ್ರಜ್ಞಾನಗಳ ಉಪಯೋಗ ಪಡ್ಕೊಂಡು ಹೇಳ್ಕೊಡ್ಬೇಕು.

ಇದೇ ಪರಿಹಾರ. ಇದಕ್ಕೆ ಮೊದಲ ಹೆಜ್ಜೇನೇ ಹಿಂದಿ ಹೇರಿಕೆಯನ್ನ ಕನ್ನಡಿಗರು ವಿರೋಧಿಸೋದು. ಯಾವುದೇ ಸಂದರ್ಭದಲ್ಲೂ ಹಿಂದಿ ಹೇರಿಕೆ ಒಪ್ಕೊಳ್ದೆ ಒಂದು ರೀತಿಯಲ್ಲಿ ಅಸಹಕಾರ ಚಳುವಳಿ ಶುರುವಾಗಬೇಕು ಗುರು! ಇಲ್ಲಿ ಹಿಂದಿಯೋರು ಕನ್ನಡ ಕಲೀಬೇಕೇ ಹೊರತು ಕನ್ನಡಿಗರು ಹಿಂದೀನಲ್ಲ.

"ಅತಿಥಿದೇವೋ ಭವ" ಅನ್ನೋ ಮಾತು ನಿಜ. ಆದರೆ ಹಿಂದಿಯೋರು ಅತಿಥಿಗಳಲ್ವೇ ಅಲ್ಲ! ಯಾರು ಆಕಸ್ಮಿಕವಾಗಿ ನಮ್ಮ ಮನೇಗೆ ಬರ್ತಾನೋ ಔನು ಅತಿಥಿ. 60 ವರ್ಷದಿಂದ ಸ್ಕೆಚ್ ಹಾಕ್ಕೊಂಡು ರೈಲ್ಮೇಲೆ ರೈಲು ಹಾಕ್ಕೊಂಡು ವ್ಯವಸ್ಥಿತವಾಗಿ ಬರ್ತಿರೋನು ಅತಿಥಿಯೂ ಅಲ್ಲ, ದೇವರೂ ಅಲ್ಲ!

ಹಿಂದಿ ಹೇರಿಕೆಯನ್ನು ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದು ರಾಷ್ಟ್ರಭಕ್ತಿಯೇನು?

ರಾಷ್ಟ್ರಭಕ್ತಿ ಎಂಬ ಪದವನ್ನು ನಾವು ಯಾರೂ ಕೇಳದೆಯೇನಿಲ್ಲ, ಉಪಯೋಗಿಸದೆ ಏನಿಲ್ಲ. ಆದರೆ ಯಾವುದು ನಿಜವಾದ ರಾಷ್ಟ್ರಭಕ್ತಿ? ಹಿಂದಿ ಭಾಷೆಯು ಒಂದಾದಮೇಲೊಂದು ಕ್ಷೇತ್ರದಲ್ಲಿ ಕನ್ನಡದ ಸ್ಥಾನವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿರುವುದನ್ನು ಮೂಕರಂತೆ ಒಪ್ಪಿಕೊಳ್ಳುವುದು ರಾಷ್ಟ್ರಭಕ್ತಿಯ ಸಂಕೇತವೇನು?

ಭಾರತದ ಒಂದು ನಕ್ಷೆಯನ್ನಿಟ್ಟುಕೊಂಡು ಭಾವುಕನಾಗಿ ಗೊಳೋ ಎಂದು ಅಳುವುದು ರಾಷ್ಟ್ರಭಕ್ತಿಯೇನು? ಯಾವುದರಿಂದ ನನ್ನ ಕೈಗಳು ಕೆಲಸ ಮಾಡದೆ ಕೇವಲ ಕಣ್ಣು ನೀರು ಸುರಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ನಾನು ನನ್ನ ಸುತ್ತಮುತ್ತಲಿನ ಬೆಂಕಿಯನ್ನು ಆರಿಸುವುದಕ್ಕೇ ಯೋಗ್ಯತೆಯಿಲ್ಲದ ನಪುಂಸಕನಾಗಿ ನನ್ನ ಪ್ರಭಾವದ ವ್ಯಾಪ್ತಿಯನ್ನು ಮೀರಿದ ಬೆಂಕಿಯನ್ನು ಆರಿಸಬೇಕೆಂದು ನನ್ನ ಬೆಚ್ಚನೆಯ ಕುರ್ಚಿಯಿಂದ ಉತ್ತರನ ಪೌರುಷವನ್ನು ತೋರುತ್ತ ಬೋಧಿಸುವೆನೋ ಅದು ರಾಷ್ಟ್ರಭಕ್ತಿಯೇನು?

ಯಾವುದರಿಂದ ನನ್ನ ಸುತ್ತಮುತ್ತಲ ಜನರ ಭಾಷೆಯೇ ಕೀಳೆಂದು ಏರ್ಪಡುತ್ತದೋ ಅದು ರಾಷ್ಟ್ರಭಕ್ತಿಯೋ? ಯಾವುದರಿಂದ ನಮ್ಮ ಕಂದಮ್ಮಗಳ ಬಾಯಿಂದ ಕನ್ನಡವೇ ನಶಿಸಿಹೋಗುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ನನ್ನ ಸುತ್ತಮುತ್ತಲ ನಾಡಿನ ಇತಿಹಾಸವೇ ಮರೆತಂತಾಗಿ ಈ ನಾಡು ಸಾಧನೆಗಳಿಲ್ಲದ ಬಂಜರುಭೂಮಿಯೆನಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ತಲೆತಲಾಂತರಗಳಿಂದ ನನ್ನ ಪೂರ್ವಜರು ಆಡಿಕೊಂಡು ಬಂದಿದ್ದ ಭಾಷೆ ಇವತ್ತು "ಆಟಕ್ಕುಂಟು ಲೆಕ್ಕಕ್ಕಿಲ್ಲ" ಎಂದು ಏರ್ಪಡುತ್ತದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಕೋಟಿಗಟ್ಟಲೆ ವೀರ ಅರಸರಾಳಿದ ನಾಡು ಕಸಕ್ಕಿಂತ ಕಡೆಯೆನಿಸುವುದೋ ಅದು ರಾಷ್ಟ್ರಭಕ್ತಿಯೇನು?

ನನ್ನ ಸುತ್ತಮುತ್ತಲ ಜನರೊಡನೆ ಸಹಕರಿಸಲು ನನ್ನ ಭಾಷೆಯೇ ಸಾಧನವಾಗಿರುವಾಗ ಆ ಸಾಧನವನ್ನು ಸಮರ್ಪಕವಾಗಿ ಬಳಸುವುದಕ್ಕೇ ಯಾವುದರಿಂದ ಅನುಮತಿಯಿಲ್ಲವೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ನನ್ನ ಸುತ್ತಮುತ್ತಲಿನ ಜನರ ಒಗ್ಗಟ್ಟೇ ಅಸಾಧ್ಯವೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಹತ್ತಿರದ್ದೆಲ್ಲವೂ ಕೆಟ್ಟದೆನಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ದೂರದ್ದೆಲ್ಲವೂ ಪರಿಪೂರ್ಣತೆಗೆ ಹತ್ತಿರವಿದೆಯೆನಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ದಿನೇ ದಿನೇ ನನ್ನ ಆತ್ಮವಿಶ್ವಾಸವೇ ಕುಂದಿಹೋಗುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು?

ಯಾವುದರಿಂದ ಕನ್ನಡ ಗೌಣವೆನಿಸುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಕನ್ನಡಿಗ ಗೌಣವೆನಿಸುತರುವನೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಕರ್ನಾಟಕ ಗೌಣವೆನಿಸುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು?

ಅಲ್ಲ. ಇದಾವುದೂ ರಾಷ್ಟ್ರಭಕ್ತಿಯಲ್ಲ.

ರಾಷ್ಟ್ರಭಕ್ತಿಯೆಂದರೆ ನಮ್ಮ ಕಾಲ್ಕೆಳಗಿನ ಎರಡು ಹಿಡಿ ಮಣ್ಣಿನ ಭಕ್ತಿ. ರಾಷ್ಟ್ರಭಕ್ತಿಯೆಂದರೆ ಈ ನಾಡಿನ ಭಕ್ತಿ. ರಾಷ್ಟ್ರಭಕ್ತಿಯೆಂದರೆ ಈ ನುಡಿಯ ಭಕ್ತಿ. ರಾಷ್ಟ್ರಭಕ್ತಿಯೆಂದರೆ ಈ ಜನರ ಭಕ್ತಿ. ಕನ್ನಡಿಗನ ಮಟ್ಟಿಗೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಭಕ್ತಿಯೇ ರಾಷ್ಟ್ರಭಕ್ತಿಯೂ ಅದೇ ವಿಶ್ವಬಂಧುತ್ವವೂ. ಕನ್ನಡ ಕುಲಪುರೋಹಿತ ಶ್ರೀ ಆಲೂರ ವೆಂಕಟರಾಯರು ಹೇಳುತ್ತಾರೆ ("ನನ್ನ ಜೀವನ ಸ್ಮೃತಿಗಳು") -
ಒಂದು ತೃಣದಲ್ಲಿ ಕೂಡ ಪರಮಾತ್ಮನ ಸಂಪೂರ್ಣ ಸಾನ್ನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಳಗಾಡಲಾರದು. ಅಂದಬಳಿಕ ನನ್ನ ’ಕರ್ನಾಟಕತ್ವ’ದಲ್ಲಿ ರಾಷ್ಟ್ರೀಯತ್ವ, ವಿಶ್ವಬಂಧುತ್ವಗಳು ಅಡಕವಾಗುವವೆಂದು ಹೇಳಿದರೆ ಆಶ್ಚರ್ಯವೇನು?

[...]

ರಾಸಕ್ರೀಡೆಯಲ್ಲಿ ಬೇರೆ ಬೇರೆ ಗೋಪಿಕಾಸ್ತ್ರೀಯರು ಕೋಲಾಟವನ್ನಾಡುವಾಗ ಹೇಗೆ ಒಬ್ಬನೇ ಕೃಷ್ಣನನ್ನು ತಮ್ಮ ಹತ್ತಿರ ಕಾಣುತ್ತಿದ್ದರೋ, ಹಾಗೆ ವಿವಿಧ ಪ್ರಾಂತಗಳು ವಿಶಿಷ್ಟ ಮಾರ್ಗದಿಂದ ತಮ್ಮ ಉನ್ನತಿ ಮಾಡಿಕೊಳ್ಳುವಾಗ ರಾಷ್ಟ್ರೀಯತ್ವವನ್ನು ಹತ್ತರವೇ ಕಾಣಬೇಕು...

ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ. ಕನ್ನಡವೇ ಸಾಕು. ಕನ್ನಡವೇ ಸತ್ಯ. ಅನ್ಯವೆನಲದೇ ಮಿಥ್ಯ.

ದೈನಂದಿನ ವ್ಯವಹಾರದಲ್ಲಿ ಹಿಂದಿ ಹೇರಿಕೆಯಿಂದ ಮಾನಸಿಕವಾಗಿ ಕುಗ್ಗುತ್ತಿರುವ ಕನ್ನಡಿಗ

ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳು, ಬ್ಯಾಂಕುಗಳು, ವಿಮಾ ಕಂಪನಿಗಳು - ಯಾರೇ ಆಗಲಿ - ನಮ್ಮ ಹತ್ರ ಕನ್ನಡ್ದಲ್ಲಿ ವ್ಯವಹರಿಸಬೇಕು, ಕನ್ನಡದಲ್ಲಿ ಗ್ರಾಹಕ ಸೇವೆ ನೀಡ್ತಾ ಇಲ್ಲಿನ ಸಂಸ್ಕೃತಿ, ಬಾಷೆ ಮತ್ತು ಭಾವ್ನೆಗಳಿಗೆ ಮನ್ನಣೆ ನೀಡಬೇಕು ಅಂತ ಏನಾದ್ರೂ ಹೊಸದಾಗಿ ಹೇಳಬೇಕಾ? ಗ್ರಾಹಕನಿಗೆ ನಿಜವಾಗಲೂ ಸೇವೆ ಸಲ್ಲಿಸುವ ದೃಷ್ಟಿಯಿಂದಾಗಲಿ ಭಾರತದ ವಿವಿಧತೆಯನ್ನು ಕಾಪಾಡುವ ದೃಷ್ಟಿಯಿಂದಾಗಲಿ, ಕರ್ನಾಟಕದಲ್ಲಿ ಈ ವಲಯಗಳಲ್ಲೆಲ್ಲಾ ಕನ್ನಡ ಕಿತ್ತೊಗೆದು ಹಿಂದಿ ತುರುಕ್ತಾ ಇರೋದ್ನ ನೋಡುದ್ರೆ ಅದೇನು ನಗಬೇಕೋ ಅಳಬೇಕೋ ಗೊತ್ತಾಗಲ್ಲ ಗುರು!

ನಮ್ಮ ಭಾಷೆಯಲ್ಲೇ ತಾನೆ ಕನ್ನಡದ ಗ್ರಾಹಕರಿಗೆ ಸರಿಯಾಗಿ ಸೇವೆ ಕೊಡಲು ಸಾಧ್ಯ? ಈ ಸಾಮಾನ್ಯ ತಿಳುವಳಿಕೆ ಮತ್ತು ಹೊಣೆಗಾರರಿಕೆ ಇಲ್ಲಿ ವ್ಯಾಪಾರ ಮಾಡೋರಿಗೆ ಇಲ್ಲದೆ ಇರೋದ್ರಿಂದ ಕನ್ನಡಿಗನ ಮನಸ್ಸಿನ ಮೇಲೆ ಎಂಥಾ ದುಷ್ಪರಿಣಾಮಗಳು ಆಗ್ತಿವೆ ಅಂತ ಯೋಚ್ನೆ ಮಾಡಿದೀರಾ?

ಗ್ರಾಹಕ ಸೇವೆಯಲ್ಲಿ ಕನ್ನಡಿಗನನ್ನು ಕಾಡುತ್ತಿರುವ ಹಿಂದಿ ಭೂತ

ಕರ್ನಾಟಕದಲ್ಲಿ ಈ ಅದ್ಭುತಗಳು ನೋಡಕ್ಕೆ ಸಿಗೋದು ಹಿಂದಿ ಹೇರಿಕೆಯ ಪ್ರಭಾವ ಗುರು:
  • ಬೆಂಗಳೂರಿನ ಅಚ್ಚ ಕನ್ನಡದ್ ಪ್ರದೇಶ, ಕನ್ನಡ ಚಳವಳಿ ಪಿತಾಮಹ ಅನಕೃ ರಸ್ತೆ ಪ್ರಾರಂಭದಲ್ಲಿ (ಬಸವನಗುಡಿ ದೇಶೀಯ ವಿದ್ಯಾಶಾಲೆ ಸಮೀಪ) ಇರೋ ಈ ಇಂಡಿಯನ್ ಆಯಿಲ್ ಕಾರ್ಪೋರೇಷನ್ನಿನ ಪೆಟ್ರೋಲ್ ಅಂಗಡೀಲಿ ಎಂತಾ ಗ್ರಾಹಕ ಸೇವೆ ಫಲ್ಕ ಜಡ್ಸಿದಾರೆ ನೋಡ್ಗುರು! ಇಲ್ಲೀಗ್ ಬಂದು ಗಾಡಿಗೆ ಪೆಟ್ರೋಲ್ ತುಂಬಿಸ್ಕೊಳ್ಳೋನು ಕನ್ನಡ್ದವನು, ಅಂಗಡಿ ಯಜ್ಮಾನ ಕನ್ನಡ್ದೋನು, ಫಲ್ಕ ನೇತಾಕಿರೊದು ಯಾರ್ಗೇ ಗುರು? ಅಬ್ಬೇಪಾರಿ ಕನ್ನಡಿಗ ಹಿಂದಿ ಅರ್ಥ ಮತ್ತು ಸಂದೇಶ ಹೋದಿರೋ ಈ ಜಾಹೀರತನ್ನ, ಇಂಗ್ಳಿಷ್ ನಲ್ಲಿ ಒದೋಂತ ಪರಿಸ್ಥಿತಿ ಮಾಡಿರೋರು ಯಾರು ಗುರು?
  • ಇವತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಬೆಂಗಳೂರಿನ ಜಯನಗರದಲ್ಲಿ ಹೊಸ ಶಾಖೆ ತೆಗೀತು, ಬೆಂಗಳೂರಿನ ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡ್ತಾ ಇಲ್ಲಿ ಶಾಖೆ ತೆರಿತಿರೋದಕ್ಕೆ ಅವ್ರು ಒಂದು ಕಾರಣ ಪ್ರಕಟಿಸಿದ್ರು: "ಸಮ್ಜೆ ಆಪ್ಕೆ ದಿಲ್ ಕಿ ಬಾತ್". "ನಿಮ್ಮ ಮನಸ್ಸು ನಮಗೆ ಅರ್ಥ ಆಗಿದೆ "ಅಂತ ಕನ್ನಡದಲ್ಲಿ ಬರೆಸಕ್ಕೆ ಇವರಿಗೇನು ರೋಗ ಬಂದಿತ್ತು ಗುರು? ಈ ರೀತಿ ಬರೆದು ಮಾತ್ರ ಇವರು ಕನ್ನಡಿಗರನ್ನು ತಮ್ಮತ್ತ ಸೆಳ್ಕೋಬೋದು ಅಂತಾದ್ರೂ ಗೊತ್ತಾಗಬೇಡ್ವಾ ಇವರ ತಲೆಗೆ? ಇದೇ ತಪ್ನ ಈ ಬ್ಯಾಂಕು ಮಹಾರಾಷ್ಟ್ರದಲ್ಲಿ ಮಾಡಿದರೂ ತಪ್ಪೇ! ಅಲ್ಲಿ ಮರಾಠಿಯಲ್ಲಿ ಬರೀಬೇಕು!
  • ಹೀಗೆ ನೀವು ಯಾವುದೇ ಬ್ಯಾಂಕಿನ ಅಂತರ್ಜಾಲ ತಾಣ ತೆಗೆದು ನೋಡಿ. ನಿಮಗೆ ಸೇವೆ ಇಂಗ್ಲೀಷ್ ಜತೆಗೆ ಎರಡನೆಯದೇನಾದರು ಇದ್ದರೆ ಅದು ಹಿಂದಿಯಲ್ಲಿರುತ್ತದೆ.
  • ಬೆಂಗಳೂರಿಂದ/ಗೆ ವಿಮಾನದಲ್ಲಿ ಓಡಾಡಿ, ನಿಮಗೆ ಇಂಗ್ಲೀಷ್ ಜತೆಗೆ ಹಿಂದಿಲಿ ಘೋಷಣೆಗಳನ್ನು ಕೇಳಿಸುತ್ತಾರೆ, ಕನ್ನಡದಲ್ಲಿ ಇರೋದಿಲ್ಲ.
  • ವಿಮಾ ಕಂಪನಿಗಳಿಗೆ ಹೋಗಿ ಅಲ್ಲಿ ಎಲ್ಲಾ ರೀತಿಯ ಅರ್ಜಿ ನಮೂನೆಗಳು ನಿಮಗೆ ಇಂಗ್ಲೀಷ್ ಜತೆಗೆ ಹಿಂದಿಯಲ್ಲಿ ಕಣ್ಣಿಗೆ ರಾಚುತ್ತದೆ.
  • ಯಾವುದೇ ರೀತಿಯ ಕರೆ ಕೇಂದ್ರಕ್ಕೆ ಕರೆ ಮಾಡಿ ಇಂಗ್ಲೀಷ್ ಜತೆಗೆ ಹಿಂದಿ ಮಾತ್ರ ಕಿವಿಗೆ ಅಪ್ಪಳಿಸುತ್ತೆ. ಹೀಗೆ ಹಿಂದಿ ಹಿರಿಯಕ್ಕನ್ ಚಾಳಿ ಊರೆಲ್ಲಾ ಹಬ್ಬಿ ಗಬ್ ಎಬ್ಬದೇ ಇರೋ ಜಾಗಾನೇ ಬಾಕಿ ಉಳಿದಿಲ್ಲ
ಕನ್ನಡಿಗನ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ

ಈ ರೀತಿ ಹಿಂದಿ ಹೇರಿಕೆಯ ಬಗ್ಗೆ ನಾವು ಸುಮ್ಮನಿದ್ದರೆ ಏನಾಗತ್ತೆ ಅಂತ ಯೋಚ್ನೆ ಮಾಡಿದ್ಯಾ ಗುರು? ಬೆಳಿಗ್ಗೆ ಎದ್ದಾಂಗಿದ ರಾತ್ರಿ ಮಲ್ಗೋ ವರೆಗೆ ಈ ರೀತಿ ಹಿಂದಿ ಹೇರಿಕೆಗೆ ತುತ್ತಾಗ್ತಿರೋ ಕನ್ನಡಿಗನ ಮನಸ್ಥಿತಿ ಹೇಗೆ ಕುಗ್ತಾ ಇದೆ ಅಂತ ಯೋಚ್ನೆ ಮಾಡಿದ್ಯಾ ಗುರು?
  • ಕನ್ನಡಿಗನಿಗೆ ತನ್ನ ಬಗ್ಗೆ , ಹಿಂದಿಯಲ್ಲದ ತನ್ನ ಭಾಷೆ ಬಗ್ಗೆ , ಹಿಂದಿಯನ್ನು ಕಲಿಯದಿದ್ದ ಬಗ್ಗೆ ಕೀಳರಿಮೆ ಮೂಡ್ತಾ ಇದೆ.
  • ತಾನು ತನ್ನ ನುಡಿ ತನ್ನ ನಾಡು ಯಾವುದೂ ಉಪಯೋಗವಿಲ್ಲದ್ದು ಅನ್ನೋ ಆತ್ಮಹತ್ಯಾ ಮನೋಭಾವ ನಿಧಾನವಾಗಿ ಕನ್ನಡಿಗನಿಗೆ ಮೂಡ್ತಾ ಇದೆ
  • ಕನ್ನಡದಲ್ಲಿ ವ್ಯವಹರಿಸಿದ್ರೆ ತನ್ನನ್ನು ಮಕ ಮಕ ನೋಡಿ, ಹಳ್ಳಿ ಗಮಾರ ಅಂತ ನಗಾಡ್ತಾರೆ ಅಂತ ಯೋಚ್ನೆ ಮಾಡಕ್ಕೆ ಶುರು ಮಾಡ್ತಿದಾನೆ
  • ತನ್ನ ಸುತ್ತ ಮುತ್ತಲಿನವರನ್ನು ಮೆಚ್ಸಕ್ಕೆ, ಕನ್ನಡದ ಬಗ್ಗೆ ತಾನೇ ತಮಾಷಿ ಮಾಡಕ್ಕೆ ಕನ್ನಡಿಗ ಶುರು ಮಾಡ್ಕೊಂಡಿದಾನೆ.
  • ಕನ್ನಡ ಮಾತಾಡೋದು, ಕನ್ನಡದವರನ್ನ ಮಾತಾಡ್ಸೋದು ಅವಮಾನ ಅನ್ಕೊಳ್ತಿದಾನೆ.
  • ಹುಸಿ ಗೌರವಕ್ಕೆ ಮನರಂಜನೆ ಇಂದ ಹಿಡ್ದು ಎಲ್ಲಾ ಕಡೆ ಹಿಂದಿ ಬೇಕು ಅಂತಿದಾನೆ.
  • ಕನ್ನಡದ ಜಾಹೀರಾತು ಉದ್ದಿಮೆ ಕುಸೀತಿದೆ
  • ದೀರ್ಘಾವದಿಯಲ್ಲಿ ಇದು ಸಂಪೂರ್ಣವಾಗಿ ಒಂದು ನಡೆ-ನುಡಿ-ಆಚಾರ-ವಿಚಾರವನ್ನು ಛಿದ್ರ ಛಿದ್ರ ಮಾಡಿಬಿಡುವ ಸಾಧ್ಯತೆ ಇದೆ
ಬರೀ ನಮ್ಮ ಕನ್ನಡದ ಸಾಹಿತ್ಯಕ್ಕೆ 7 ಜ್ಘಾನಪೀಠ ಬಂದ್ರೆ ಮಾತ್ರ ಸಾಲ್ದು ಗುರು, ಕನ್ನಡ ದೈನಂದಿನ ಬದುಕಿನಲ್ಲಿ ರಾಜಾರೋಷವಾಗಿ ಇರಬೇಕು. ನಮ್ಮ ಬದುಕಿನ ಎಲ್ಲಾ ರೀತಿಯ ಕೆಲಸಗಳಲ್ಲಿ ನಮಗೆ ಕನ್ನಡ ಕಾಣಿಸ್ತಿರಬೇಕು. ಆಗ್ಲೇ ಕನ್ನಡ ಭಾಷೆಗೆ ಮುನ್ನಡೆ ಮತ್ತು ಮನ್ನಣೆ. ಇಲ್ಲದಿದ್ರೆ ನಿನ್ನಾಣೆ ಗುರು ಈ ಹಿಂದಿ ಭೂತ ನಮ್ಮೆಲ್ಲರನ್ನೂ ತಿಂದು ತೇಗ್ಬಿಡತ್ತೆ, ಇದರಿಂದ ಕನ್ನಡಿಗ ಮಾನಸಿಕವಾಗಿ ಕುಸಿದು ನಶಿಸಿ ಹೋಗ್ತಾನೆ. ಇದನ್ನು ತಡೆಗಟ್ಟದೆ ಬೇರೆ ದಾರಿಯಿಲ್ಲ ಗುರು...

ಹಿಂದಿ ಹೇರಿಕೆಯ ಮೂರು ತಂತ್ರಗಳು: ಒತ್ತಾಯ, ಆಮಿಷ, ವಿಶ್ವಾಸ

ಬ್ರಿಟಿಷರಿಂದ ಬಿಡುಗಡೆಯಾದ ಮೊದಲನೇ ದಿನದಿಂದಲೇ ಹಿಂದಿ ಅನ್ನೋ ಒಂದು ಭಾಷೇನ ರಾಷ್ಟ್ರಭಾಷೆಯನ್ನಾಗಿಸುವ ಪ್ರಯತ್ನಗಳು ನಡೆದವು ಅನ್ನೋದು "ವಿವಿಧತೆಯಲ್ಲಿ ಏಕತೆ" ಅನ್ನೋದನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿರೋ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಈ ಪ್ರಯತ್ನಗಳ್ನ ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ಪ್ರದೇಶಗಳು ವಿರೋಧಿಸಿದಾಗ ಹಿಂಬಾಗಿಲ ಮೂಲಕ ಹಿಂದಿಯನ್ನು ಹೇರಲು ಆರಂಭಿಸಿದರು. ಹಿಂದಿಗೆ ರಾಜ್ ಭಾಷಾ ಎನ್ನುವ (ಅಧಿಕೃತ ಆಡಳಿತ ಸಂಪರ್ಕ ಭಾಷೆ) ಪಟ್ಟ ಕಟ್ಟಲಾಯಿತು.

ಮೂರು ತಂತ್ರಗಳು

ಇವತ್ತಿಗೂ ನಮ್ಮ ಕೇಂದ್ರ ಸರ್ಕಾರ ಹಿಂದೀನ ರಾಜ್-ಭಾಷೆ ಅಂತ ಕರೀತಾ ಇಟ್ಕೊಂಡಿರೋ ನಿಲುವು ನೋಡಿ:
It has been the policy of the Government of India that progressive use of Hindi in the official work may be ensured through persuasion, incentive and goodwill.

ಏನು ಹೀಗಂದ್ರೆ? ಒತ್ತಾಯ, ಆಮಿಷ ಇಲ್ಲವೇ ವಿಶ್ವಾಸ - ಈ ಮೂರುಗಳನ್ನು ಭಾರತೀಯರಿಗೆ ಒಡ್ಡಿ ಕೇಂದ್ರ-ಸರ್ಕಾರದ ಕೆಲಸಗಳನ್ನು ಹಿಂದಿಯಲ್ಲೇ ಮಾಡಿಸಬೇಕು ಅನ್ನೋದೇ ಇದರ ಅರ್ಥ. ಅಬ್ಬಾ! "ವಿವಿಧತೆಯಲ್ಲಿ ಏಕತೆ"ಗೆ ಏನು ಉದಾಹರಣೆ, ಏನು ಕತೆ! ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡ ಕೇಂದ್ರಸರ್ಕಾರದ ಕೆಲಸಗಳ ಮಟ್ಟಿಗೆ ಗೌಣವಾಗಬೇಕು ಅನ್ನೋದು ನಮ್ಮ ವ್ಯವಸ್ಥೇಲಿ ಬೇರೂರಿದೆ ಅನ್ನೋದು ಸ್ಪಷ್ಟ ಗುರು!

ಈ ಮೂರು ತಂತ್ರಗಳೂ ಹಿಂದಿ ಬಾರದ ಭಾಷಾವಾರು ಜನಾಂಗಗಳ ಮೇಲೆ ಬಹಳ ಸಮರ್ಪಕವಾಗಿ ಉಪಯೋಗವಾಗುತ್ತಿವೆ ಅನ್ನುವುದಕ್ಕೆ ಉದಾಹರಣೆಗಳನ್ನು ಕೊಡುತ್ತ ಹೋದರೆ ಜಾಗವೇ ಸಾಕಾಗಲ್ಲ ಗುರು!

ಕೇಂದ್ರದ ಒತ್ತಾಯಕ್ಕೆ ಮಣಿದೇ ಕರ್ನಾಟಕದಲ್ಲಿ ಹಿಂದಿ ಅನ್ನೋ ಚಪ್ಪಡಿ ಕಲ್ಲನ್ನು ಕನ್ನಡಿಗರು ತಮ್ಮಮೇಲೆ ತಾವೇ ಎಳೆದುಕೊಂಡಿರೋದು (ಇದ್ರಲ್ಲಿ ನಮ್ಮ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳದಂತೂ ಅದ್ಭುತವಾದ ಪಾತ್ರ!). ಈ ಒತ್ತಾಯದಿಂದಲೇ ಕನ್ನಡದ ಮಕ್ಕಳಿಗೆ ಇವತ್ತು ಹಿಂದಿ ರಾಷ್ಟ್ರಭಾಷೆ ಅನ್ನೋ ಸುಳ್ಳು "ವಿದ್ಯೆ" ಕಲಿಸಲಾಗುತ್ತಿರುವುದು!

ಆಮಿಷಗಳ್ನ ಕಣ್ಣಾರೆ ನೋಡೋದಕ್ಕೆ ಕೇಂದ್ರಸರ್ಕಾರದ ಯಾವುದೇ ಕೆಲಸಕ್ಕೆ ಅಥವಾ ಯವುದೇ ಬ್ಯಾಂಕಿಗೆ ಅರ್ಜಿ ಹಾಕಿ ನೋಡಿದರೆ ಸಾಕು!

ಇನ್ನು ವಿಶ್ವಾಸಕ್ಕೆ ಉದಾಹರಣೆಗಳು ಬೇಕೆ? ಭಾರತಕ್ಕೆ ಒಂದು ರಾಷ್ಟ್ರಭಾಷೆ ಅಂತ ಇರಬೇಕು, ಅದು "ನಮ್ಮದಲ್ಲದ" ಇಂಗ್ಲೀಷ್ ಆಗಿರುವುದಕ್ಕಿಂತ ಹಿಂದಿಯಾಗಿರುವುದೇ ಒಳ್ಳೇದು ಅಂತ ಭಾರತೀಯರಿಗೆಲ್ಲಾ ನಿಧಾನವಾಗಿ ಒಪ್ಪಿಸುತ್ತಾ ಬಂದಿರುವುದೇ ಇದಕ್ಕೆ ಉದಾಹರಣೆ. ಅಂದಹಾಗೆ ಇದಕ್ಕೆ ನಮ್ಮ ಉತ್ತರ - ಕನ್ನಡವನ್ನು ಬಿಟ್ಟು ಬೇರೆ ಪ್ರತಿಯೊಂದು ಭಾಷೆಯೂ ನಮಗೆ "ನಮ್ಮದಲ್ಲದ" ಭಾಷೇನೇ. ಹಿಂದೀನೂ ನಮದಲ್ಲದ್ದು, ಇಂಗ್ಲೀಷೂ ನಮ್ಮದಲ್ಲದ್ದು. ಕನ್ನಡಕ್ಕೂ ಹಿಂದಿಗೂ ಯಾವ ಭಾಷಾವೈಜ್ಞಾನಿಕ ಸಂಬಂಧವೂ ಇಲ್ಲ.

ಭಾರತಕ್ಕೆ ಒಂದೇ ರಾಷ್ಟ್ರಭಾಷೆಯಿರಬೇಕು ಅಂತ ಹಟ ಹಿಡಿಯೋರಿಗೆ ಉತ್ತರ

ಒಂದೇ ರಾಷ್ಟ್ರಭಾಷೆಯಿರ"ಬೇಕು" ಎಂದು ವಾದ ಎತ್ತುವುದರಲ್ಲೇ ಆ ರಾಷ್ಟ್ರ ಮೊದಲಿಂದಲೇ ಒಂದಾಗಿರಲಿಲ್ಲ ಅನ್ನೋದರ ಸ್ಪಷ್ಟವಾದ ಗುರುತು ಅಡಗಿದೆ! ಮೊದಲಿಂದ ಒಂದಾಗೇ ಇದ್ದಿದ್ದರೆ ಒಂದೇ ಭಾಷೆ ಮೊದಲಿಂದಲೇ ಇರುತ್ತಿತ್ತು! ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರಭಾಷೆ ಇರುವುದನ್ನು ಪ್ರಪಂಚದಲ್ಲಿ ಬೇರೆಬೇರೆ ಕಡೆ ನೋಡುತ್ತೇವೆ, ನಿಜ. ಆದರೆ ಅದೇ ಭಾರತಕ್ಕೂ ಅನ್ವಯಿಸಬೇಕಾಗೇನಿಲ್ಲ. ಒಂದುವೇಳೆ ಒಂದೇ ಭಾಷೆ ರಾಷ್ಟ್ರಭಾಷೆಯಾಗಲೇಬೇಕು ಅಂತ ಹಟ ಹಿಡಿದರೆ ಅದು ಇಂಗ್ಲೀಷೇ ಆಗಬೇಕು, ಮತ್ತೊಂದಲ್ಲ. ಯಾಕೇಂತೀರಾ? ಇಂಗ್ಲೀಷಿಗಿರುವಷ್ಟು ಶಕ್ತಿ ಮತ್ತು ಅಧಿಕಾರ ಇವತ್ತಿನ ದಿನ ಬೇರೆ ಯಾವ ಭಾಷೆಗೂ ಇಲ್ಲ. ಬೇರೆಬೇರೆ ಭಾಷಾವಾರು ಜನಾಂಗಗಳನ್ನು ಇಡೀ ಪ್ರಪಂಚದಲ್ಲಿ ಒಗ್ಗೂಡಿಸುತ್ತಿರೋ ಭಾಷೆ ಅದು. ಹಿಂದಿಗಾಗಲಿ ಕನ್ನಡವೂ ಸೇರಿದಂತೆ ಬೇರೆಯಾವ ಭಾರತೀಯ ಭಾಷೆಗಾಗಲಿ ಇವತ್ತು ಈ ಯೋಗ್ಯತೆಯಿಲ್ಲ. ಆದ್ದರಿಂದ ಹಟ ಹಿಡಿದವರಿಗೆ ಇದೇ ಉತ್ತರ.

ಭಾರತಕ್ಕೆ ಹೊಂದುವ ಸರಿಯಾದ ಭಾಷಾ ನಿಯಮ ಹೇಗಿರಬೇಕು?

ನಿಜವಾಗಲೂ ಯೋಚಿಸಿ ನೋಡಿದರೆ ಭಾರತದ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಬೇಕು. ಯಾವುದೋ ಆಯ್ಕೆಯ ಒಂದೆರಡಲ್ಲ. ಯೂರೋಪು ಒಕ್ಕೂಟದಲ್ಲಿ ಕೇಂದ್ರ-ಸರ್ಕಾರ ಒಗ್ಗೂಡಿರುವ ಎಲ್ಲಾ ರಾಜ್ಯಗಳ ಭಾಷೆಗಳಲ್ಲೂ ಕೆಲಸ ಮಾಡಕ್ಕೆ ತಯಾರಿರುವಾಗ ಭಾರತಕ್ಕೆ ಯಾಕೆ ಹಿಂದಿ ಅನ್ನೋ ಒಂದೇ ಭಾಷೆ ಮೇಲೆ ಒಲವು? ಈ ಒಲವು ಪ್ರಜಾಪ್ರಭುತ್ವಕ್ಕೆ ಎಷ್ಟು ಹೊಂದುವಂಥದ್ದು? ಈ ಒಲವು ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರು ಸಾರ್ವಭೌಮರಾಗಿರಬೇಕೆಂಬ ಪ್ರತಿಯೊಬ್ಬರ ಸಹಜವಾದ ಆಶಯಕ್ಕೆ ಎಷ್ಟು ಪೂರಕ? ಕೇಂದ್ರ-ಸರ್ಕಾರದ ಕೆಲಸಗಳೆಲ್ಲ ಒಂದೇ ಭಾಷೇಲಿ ಆಗಬೇಕು ಅನ್ನೋ ಚಿಂತನೆಯಾದರೂ ಎಷ್ಟು ಸರಿ? ಇವತ್ತಿನ ದಿನ ತಂತ್ರಜ್ಞಾನದ ಬಳಕೆಯಿಂದ ಪ್ರತಿಯೊಂದು ಭಾಷೆಯಲ್ಲೂ ಆಡಳಿತ ಮಾಡುವುದು ಕಷ್ಟವೂ ಏನಿಲ್ಲ...

ಕನ್ನಡಿಗರಿಗೆ ಹಿಂದಿ ಜಾಹೀರಾತು ಯಾಕೆ ಮಣ್ಣು ಹುಯ್ಕೊಳಕ್ಕೆ?

ಬೆಂಗಳೂರಿನ ಜನ ಯಾರು, ಎಂಥೋರು, ಅವರಿಗೆ ಬೇಕಾಗಿರೋದು ಯಾವ ಭಾಷೆ ಹಾಡುಗಳು ಅಂತ ಅರ್ಥ ಮಾಡಿಕೊಳ್ಳದೆ ಮೊದ್ಲು ಬರೀ ಹಿಂದೀಮಯವಾಗಿದ್ದ ರೇಡಿಯೋ ಮಿರ್ಚಿ ಈಗ 100% ಕನ್ನಡ ಹಾಡುಗಳನ್ನು ಹಾಕ್ತಾ ಬೆಂಗಳೂರಲ್ಲಿ ಮನೆಮಾತಾಗಿದೆ. ಸ್ಥಳೀಯ ಮಾರುಕಟ್ಟೆಗೆ ಬೇಕಾದ ಕನ್ನಡ ಹಾಡುಗಳ್ನ ಕೊಡೋ ಚಾನೆಲ್ಗೆ ಈ ಒಳ್ಳೇ ಹೆಸ್ರು ಸಿಗೋದ್ರಲ್ಲಿ ವಿಶೇಷವೇನಿಲ್ಲ.

ಆದ್ರೆ ಅದೇ ರೇಡಿಯೋ ಮಿರ್ಚಿ ಕೇಸರಿಬಾತಲ್ಲಿ ಸಿಗೋ ಕೂದ್ಲು ಥರಾ ಬೇಡಾಂದ್ರೂ ಕನ್ನಡ ಹಾಡುಗಳ ನಡುವೆ ಹಿಂದಿಯಲ್ಲಿ ಜಾಹೀರಾತುಗಳ್ನ ಕನ್ನಡದ ಕೇಳುಗಂಗೆ ಕೇಳಿಸುತ್ತಿದೆಯಲ್ಲ ಗುರು? ಇದರಿಂದ ಕೇಳುಗ-ಕೇಳಿಸುಗಗಳಿಬ್ಬರಿಗೂ ಕಷ್ಟ, ನಷ್ಟ! ಜಾಹೀರಾತು ಕೊಡೋರಿಗೂ ಕೇಳೋರಿಗೂ ಕನ್ನಡದಲ್ಲೇ ಜಾಹೀರಾತು ಯಾಕಿರಬೇಕು ಅನ್ನೋದನ್ನ ಸ್ಪಷ್ಟ ಮಾಡಕ್ಕೆ ಈ ಬರಹ.

ಒಂದು ಜಾಹೀರಾತಿನ ಉದ್ದೇಶವಾದರೂ ಏನು?

ಇವತ್ತಿನ ದಿನ ಕನ್ನಡದ ಎಫ್.ಎಂ. ಚಾನೆಲುಗಳಲ್ಲಿ - ಅದೂ ರೇಡಿಯೋ ಮಿರ್ಚಿಯಲ್ಲಿ - ಹಿಂದಿ ಜಾಹೀರಾತುಗಳು ಬರುತ್ತಿರೋದು ನೋಡಿದರೆ ಆಯಾ ಕಂಪನಿಯ ಜನರಿಗೆ ಜಾಹೀರಾತು ಅಂದ್ರೆ ಏನೂಂತಾನೇ ಮರೆತುಹೋಗಿದೆಯೇನೋ ಅನ್ನಿಸುತ್ತೆ ಗುರು! ಆದ್ದರಿಂದ ನೆನಪಿಸಿ ಕೊಡೋಣ:
  • ಜಾಹೀರಾತು ಬಿತ್ತರವಾಗುವ ಕ್ಷೇತ್ರದಲ್ಲಿ ಆದಷ್ಟೂ ಮಾರುಕಟ್ಟೆಯನ್ನು ಮುಟ್ಟಬೇಕು
  • ಜಾಹೀರಾತು ಯಾರಿಗೋಸ್ಕರ ಮಾಡಿದೆಯೋ ಅವರ ಮನಕ್ಕೆ ನೇರವಾಗಿ ನಾಟಬೇಕು
ಹೀಗಿರುವಾಗ 100% ಕನ್ನಡ ಹಾಡುಗಳನ್ನು ಹಾಕ್ತಿರೋ ಎಫ್.ಎಂ. ಚಾನೆಲುಗಳಲ್ಲಿ ನಡುನಡುವೆ ಹಿಂದಿ ಜಾಹೀರಾತುಗಳ್ನ ಹಾಕೋದು ಮೂರ್ಖತನವಲ್ದೆ ಇನ್ನೇನು? ಅರ್ಥವಾಗದ ಭಾಷೆಯಲ್ಲಿ ಸಕ್ಕತ್ ತಲೆ ಉಪಯೋಗಿಸಿ ಏನೇನೋ ಹೇಳಿದರೆ ಯಾವ ಮಣ್ಣು ಉಪಯೋಗ?

ಜಾಹೀರಾತು ಕನ್ನಡದಲ್ಲಿ ಇದ್ರೇನೇ ಹೆಚ್ಚು ಪರಿಣಾಮಕಾರಿ


ಜಾಹೀರಾತುಗಳ್ನ ಕನ್ನಡದಲ್ಲೇ ಮಾಡೋದ್ರಿಂದ ಬರೀ ಲಾಭಾನೇ ಇರೋದು. ನಷ್ಟ ಅನ್ನೋದಿಲ್ಲ. ಏನು ಲಾಭ? ಮೊದಲ್ನೇದಾಗಿ ಮೇಲೆ ಹೇಳಿರೋ ಯಾವುದೇ ಜಾಹೀರಾತಿನ ಮೂಲ ಉದ್ದೇಶಗಳೆರಡೂ ಜಾಹೀರಾತುದಾರ ಈಡೇರಿಸಿದಂಗಾಗತ್ತೆ. ಅಂದರೆ - ಆದಷ್ಟೂ ಹೆಚ್ಚು ಗ್ರಾಹಕರನ್ನು ಮುಟ್ಟಬಹುದು, ಜೊತೆಗೆ ಗ್ರಾಹಕರಿಗೆ ಆದಷ್ಟೂ ಪರಿಣಾಮಕಾರಿಯಾಗಿ ತಂತಮ್ಮ ವಸ್ತು/ಸೇವೆಯನ್ನು ಮಾರಾಟ ಮಾಡಬಹುದು. ಇದೇ ತಾನೆ ಬೇಕಾಗಿರೋದು? ಕನ್ನಡದಲ್ಲೇ ಜಾಹೀರಾತುಗಳಿದ್ದರೆ ಕೇಳುಗರು ತಂತಮ್ಮಲ್ಲೇ ಅದೇ ಜಾಹೀರಾತಿನ ಬಗ್ಗೆ ಮಾತಾಡಿಕೊಳ್ತಾರೆ, ಅದರಿಂದ ಜಾಹೀರಾತು ಕೊಡುತ್ತಿರುವ ಕಂಪನಿಗೆ ಮತ್ತಷ್ಟು ಲಾಭ.

ಅಲ್ಲದೆ ಕನ್ನಡಿಗರ ಮನಕ್ಕೆ ನಾಟುವಂಥಾ ಜಾಹೀರಾತುಗಳನ್ನು ತಯಾರಿಸೋದಕ್ಕೆ ದಿಲ್ಲಿಯಿಂದ ಹಿಂದಿ ಜನರನ್ನ ಕರ್ಕೊಂಡು ಬಂದ್ರೆ ಅವರೇನು ಕಿಸ್ದಾರು ಬೆಂಗಳೂರಲ್ಲಿ? ಅವರಿಗೇನು ಗೊತ್ತು ಇಲ್ಲೀ ಮನೆಮಾತು? ಅವರಿಗೇನು ಗೊತ್ತು ಇಲ್ಲೀ ಮಾತಿನ ಸೊಗಡು? ಅವರೇನು ಮುಟ್ಟಾರು ಕನ್ನಡಿಗನ ಮನಸನ್ನು, ಅವರ ತಲೆ?

ಹೇಗೇ ತಿರುಗಿಸಿ ಮುರುಗಿಸಿ ನೋಡಿದರೂ ನಮ್ಮ ಜಾಹೀರಾತುಗಳು ಕನ್ನಡದಲ್ಲೇ ಇರಬೇಕು ಅನ್ನೋದು ಸ್ಪಷ್ಟ. ಇದೇನು ಚಿಪಣಿ-ತಂತ್ರಜ್ಞಾನವಲ್ಲ. ಇದನ್ನ ಜಾಹೀರಾತು ಕೊಡ್ತಿರೋ ಕಂಪನಿಗಳು ಮತ್ತು ಮಿರ್ಚಿ ಥರಾ ಎಫ್.ಎಂ. ವಾಹಿನಿಗಳು ಅರ್ಥ ಮಾಡ್ಕೊಂಡ್ರೆ ಅವರಿಗೇ ಲಾಭ ಗುರು!

ಹಿಂದಿ ಜಾಹೀರಾತುಗಳು ಹಿಂದಿ ಹೇರಿಕೆಯ ಪ್ರಭಾವವೇ

ಈ ಚಾನೆಲ್ಗಳಲ್ಲಿ ಜಾಹೀರಾತು ಹಾಕೋ ಕಂಪನಿಗಳಲ್ಲಿ ಹಲವು ಕಂಪನಿಗಳು ಕನ್ನಡೇತರರದಾಗಿವೆ ಇಲ್ಲಾ ಹೊರರಾಜ್ಯದ ಕಂಪನಿಗಳಾಗಿವೆ ಅನ್ನೋದು ಕಟುಸತ್ಯ. ಅವರಿಗೆಲ್ಲ ಹಿಂದೀನೇ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನು ತಾನೆ ನಮ್ಮ ಕೇಂದ್ರದೋರು ಹೇಳಿಕೊಟ್ಟಿರೋದು (ಈ "ವಿದ್ಯೆ"ಯನ್ನ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ವರೆಗೂ ತಲುಪಿಸಿದ್ದಾರೆ)? ಆದ್ದರಿಂದ ಕರ್ನಾಟಕಕ್ಕೆ ವ್ಯಾಪಾರಕ್ಕೆ ಬಂದಿರೋ ಹೊರಗಿನೋರು ಅನ್ಕೊಂಡಿರ್ತಾರೆ ಇಡೀ ಭಾರತದಲ್ಲಿ ಹಿಂದಿ ಇಲ್ಲಾ "ಓಡತ್ತೆ", ಇಲ್ಲಾ "ಕಾನೂನಿನ ಪ್ರಕಾರ ಓಡಲೇಬೇಕು" ಅಂತ! ಅಂಥಾ ಯಾವ ಕಾನೂನೂ ಇಲ್ಲ, ಇಲ್ಲಿ ಹಿಂದಿ ಓಡೋದೂ ಇಲ್ಲ. ಓಡತ್ತೆ ಇಲ್ಲಾ ಓಡಬೇಕು ಅಂತ ನಂಬ್ಕೊಂಡಿರೋ ಕನ್ನಡಿಗರೂ ಕೆಲವರು ಇದ್ದಾರೆ ಗುರು! ಅವರಿಗೆ ಸ್ವಲ್ಪ ಬುದ್ಧಿ ಹೇಳಿ!

ಕನ್ನಡಿಗರ ತಟ್ಟೇಲಿ ಹಿಂದಿ ಬಡಿಸೋದು ಪೆದ್ದತನ ಅಂತ ಹಾಡು ಹಾಕುವಾಗ ಮಿರ್ಚಿಗೆ ಅರ್ಥವಾಗಿದೆ. ನಿಧಾನವಾಗಿ ಜಾಹೀರಾತು ಹಾಕುವಾಗಲೂ ಅರ್ಥವಾಗತ್ತೆ, ಜಾಹೀರಾತು ಹಾಕಿಸೋ ಕಂಪನಿಗಳಿಗೂ ಅರ್ಥವಾಗತ್ತೆ. ಅರ್ಥವಾಗದೇ ಹೋದರೆ ಸ್ವಲ್ಪ ಬುದ್ಧಿ ಹೇಳಿ ಮಾಡಿಸಬೇಕು, ಅಷ್ಟೆ. ಯಾವನಿಗಾಗತ್ತೆ ಬರೀ ಹಿಂದಿ-ಕೂದಲು ತುಂಬಿರೋ ಕೇಸರಿಭಾತು ತಿನ್ನಕ್ಕೆ? ಥೂ! ಛೀ!

ಕನ್ನಡಾಂಬೆಯ ಮೇಲೆ ತಮಿಳರ ಕಾಮದ ಕಣ್ಣು: ಇಂಗಿಸಲು ಬೇಕು ಇದೇ ಮಣ್ಣಿನ ಪಕ್ಷಗಳು

ಇದೇ ತಿಂಗಳ ಕೊನೇಲಿ ಕರ್ನಾಟಕದ ಸ್ಥಳೀಯ ಚುನಾವಣೆಗಳಲ್ಲಿ ತಮಿಳುನಾಡಿನ ಎಐಎಡಿಎಂಕೆ ನಿಲ್ಲಕ್ಕೆ ಸಂಚು ಹಾಕಿದೆ ಅಂತ ಸೆ.1ರಂದು ಕನ್ನಡಪ್ರಭ ವರದಿ ಮಾಡಿದೆ (ಎಡಗಡೆನೂ ಇದೆ, ನೋಡಿ). ರಾಷ್ಟ್ರೀಯ ಪಕ್ಷಗಳು ನಮ್ನ ಹಾಳು ಮಾಡ್ತಿರೋದು ಸಾಲದು ಅಂತ ಈಗ ತಮಿಳು ಪಕ್ಷಗಳಿಂದ ಬೇರೆ ತೊಂದರೆ ಶುರುವಾಗೋಹಾಗಿದೆ!

ಕೆ.ಜಿ.ಎಫ್. ಶಿವಮೊಗ್ಗ, ಭದ್ರಾವತಿ, ಮೈಸೂರುಗಳಲ್ಲಿ ಎಐಎಡಿಎಂಕೆ ಸ್ಪರ್ಧಿಸುವ ಬಗ್ಗೆ ಖಚಿತ ಪಡಿಸಿದ್ದಾರೆ. ಇವರ ಕುತಂತ್ರ ಕೂಡ ಸ್ಪಷ್ಟ ಅಲ್ಲವ? ಸುತ್ತಲಿನ ಸಣ್ಣ ಪಾಳಯಗಳನ್ನು ತೆಕ್ಕೆಗೆ ತೆಗೆದುಕೊಂಡು ನಂತರ ಬೆಂಗ್ಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು. ಈಗಾಗಲೇ ಒಂದೆರಡು ಬಾರಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರವನ್ನೂ ಒಳಗೊಂಡಂತೆ ಎಐಎಡಿಎಂಕೆ ಯ ಪ್ರತಿನಿಧಿಗಳು ಶಾಸಕರಾಗಿ ನಮ್ಮನ್ನಾಳಿರುವುದು ಸಹ ಸತ್ಯ.

ಕನ್ನಡಿಗ ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಇಲ್ಲಿ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ಒಬ್ಬರಿಗೊಬ್ಬರು ಆಗದೆ, ಕನ್ನಡವನ್ನು ಉಳಿಸುವ ಸಲುವಾಗಿ ಸಹ ತಮ್ಮಗಳ ನಡುವೆ ಹೊಂದಾಣಿಕೆಗೆ ಒಳಗಾಗದೆ ಕರ್ನಾಟಕದ ಉತ್ತರದಲ್ಲಿ ಎಂಇಎಸ್, ಶಿವಸೇನೆಗೆ ಪಾರುಪತ್ಯ ವಹಿಸಿ ಕೊಟ್ಟಿದ್ದಾರೆ. ಈಗ ದಕ್ಷಿಣದ ಕಡೆಯಿಂದ ತಮಿಳುನಾಡಿನ ದ್ರಾವಿಡ ಪಕ್ಷಗಳು ಲಗ್ಗೆ ಇಡುತ್ತಿವೆ, ಮುಂದೆ ಬಳ್ಳಾರಿ ಮುಂತಾದೆಡೆ ತೆಲುಗು ಪಕ್ಷಗಳ ಗದ್ದಲ, ಕೇರಳದ ಕಡೆಯಿಂದ ಕಮ್ಯೂನಿಷ್ಟರು, ಪಶ್ಚಿಮದಲ್ಲಿ ಗೋಮಾಂತರು! ಮೂರೂ ಬಿಟ್ಟಿರುವ ಈ ರಾಷ್ತ್ರೀಯ ಪಕ್ಷಗಳು ಕನ್ನಡವನ್ನು ಊರು ಬಿಡಿಸಿ, ಗುಡಿಸಿ ಮಂಗಳೂರಿನ ಸಮೀಪವಿರುವ ಅರಬ್ಬೀ ಸಮುದ್ರಕ್ಕೆ ದಬ್ಬಿ ಬಿಡುವ ಸಾಧ್ಯತೆಯನ್ನು ಸಾಬೀತು ಮಾಡುತ್ತಿದ್ದಾರೆ ಅಲ್ವಾ ಗುರು!

ಹೀಗೇ ನಮ್ಮನ್ನ ಬೇರೇವ್ರೂ ಆಳಕ್ಕೆ ಶುರು ಮಾಡಿದ್ರೆ ನಮ್ಮತನವನ್ನೆಲ್ಲಾ ಕಳ್ಕೊಂಡು ಮತ್ತೊಮ್ಮೆ ಗುಲಾಮ್ಗಿರಿಗೆ ಒಳಗಾಗಿ ನಾವು ಚೂರುಚೂರಾಗಿಹೋಗಿ, ಅಲ್ಪಸಂಖ್ಯಾತರಾಗಿ, ಸ್ವಾಭಿಮಾನಾನೂ ಕಳ್ಕೊಂಡು, ಕನ್ನಡ ಕುಲ ಸರ್ವನಾಶ ಆಗೋಗ್ತದೆ ಅಲ್ವ ಗುರು!

ಇದ್ಕೇ ನಾವು ಬಾರಿ ಬಾರಿ ನಮ್ಮನ್ನ ಕಾಪಾಡಿಕೊಳ್ಳೋಕೆ ನಮ್ಮದೇ ಆದ ಪ್ರಾದೇಶಿಕ ಪಕ್ಷ ನಮಗೆ ಬೇಕು ಅಂತ ಹೇಳ್ತಿರೋದು. ಅಂತಹ ಪ್ರಾದೇಶಿಕ ಪಕ್ಷಗಳನ್ನ ಹುಟ್ಟಿಸಬೇಕು, ನಾವು ಅವುಗಳಿಗೆ ಬೆಂಬಲ ಕೊಟ್ಟು ಗೆಲ್ಲಿಸಬೇಕು, ಆಡಳಿತಕ್ಕೆ ತರಬೇಕು ಗುರು! ಕನ್ನಡಾಂಬೆ ಇವತ್ತು ಯಾವ ಕೆಟ್ಟಕೆಲಸಕ್ಕೂ ಕೈಹಾಕಕ್ಕೆ ಹಿಂಜರೀದಿರೋ ಕಾಮುಕರ ಮುಂದೆ ನಿಂತಿದಾಳೆ ಗುರು...ಇವಳ ಹೊಟ್ಟೆಯಲ್ಲೇ ಹುಟ್ಟಿ, ಇವಳನ್ನು ಜೀವಕೊಟ್ಟಾದರೂ ಕಾಪಾಡುವ ಕನ್ನಡದ ಸೇನೆಯೊಂದು ಇವತ್ತು ಆಡಳಿತಕ್ಕೆ ಬರಲೇಬೇಕು ಗುರು! ಆಗಲೇ ಬೀದಿಯಲ್ಲಿ ಹೋಗೋರೆಲ್ಲಾ ನಮ್ಮ ತಾಯಿಯನ್ನ ಕಾಮದ ಕಣ್ಣಿಂದ ನೋಡೋದು ನಿಲ್ಲಿಸೋದು ಗುರು...

ಇಂಥವರಿಗೆ ಸಲ್ಲಬೇಕು ಶಿಕ್ಷಕರ ದಿನದ ನಮನ!

ಎಲೆಮರೆಯ ಕಾಯಂತೆ ಕನ್ನಡನಾಡ್ನ ಹಗಲು-ಇರುಳು ಕಟ್ತಾ ಇರೋ ಕರ್ನಾಟಕದ ಒಂದು ವಿಶೇಷವಾದ ಶಿಕ್ಷಕವರ್ಗಕ್ಕೆ ಶಿಕ್ಷಕರ ದಿನದಂದು ನಮ್ಮ ನಮನ.

ಎಲ್ಲಾ ಓಕೆ, ಯಾವುದು ಈ ವಿಶೇಷವಾದ ಶಿಕ್ಷಕವರ್ಗ ಅಂತೀರಾ? ಮುಂದೆ ಓದಿ...

ಈ ಶಿಕ್ಷಕರು ಕನ್ನಡನಾಡಲ್ಲಿ ಮೂಲೆಮೂಲೆಗಳಲ್ಲಿ ಅಡಗಿಕೊಂಡಿದ್ದಾರೆ, ಆದ್ರೆ ತಮ್ಮ ಮಾತಿಗೆ ಬೆಲೆ ಸಿಗ್ತಾ ಇಲ್ಲ ಅನ್ನೋದೊಂದೇ ಅವರ ಅಳಲು. ಇವತ್ತಿನ ದಿನ ಅವರು ಕನ್ನಡದಲ್ಲೇ ಬೋಧನೆ ಮಾಡ್ತಾ ಇರಲಿ, ಅನಿವಾರ್ಯ ಅಂತ ಇಂಗ್ಲೀಷಲ್ಲೇ ಬೋಧನೆ ಮಾಡ್ತಾ ಇರಲಿ, "ಕನ್ನಡವೇ ಸತ್ಯ, ಅನ್ಯವೆನಲದೇ ಮಿಥ್ಯ" ಅಂತ ನಿಜವಾಗಲೂ ತರಗತಿಯಲ್ಲಿ ಕಣ್ಣಾರೆ ಕಾಣ್ತಾ ಇರೋಂಥಾ ಶಿಕ್ಷಕರು ಇವರು!

ಕಲಿಕೆ ನಮ್ಮ ತಾಯ್ನುಡಿಯಲ್ಲೇ ಶುರುವಾಗೋದು, ತಾಯ್ನುಡಿಯ ಮೂಲಕವೇ ಅರಿವು ದೊರೆಯೋದು ಅಂತ ಅನುಭವದಿಂದ ತಿಳ್ಕೊಂಡಿರೋಂಥಾ ಶಿಕ್ಷಕರು ಇವರು. ಪ್ರಾಥಮಿಕ ಶಿಕ್ಷಣ ಮಾತ್ರ ಕನ್ನಡದಲ್ಲಿ (ಮಾತೃಭಾಷೇಲಿ) ಇದ್ದರೆ ಸಾಕು ಅಂತ ಸುಮ್ಮನೆ ಕೂರದೆ ನಿಜವಾಗಲೂ ಈ ಕೆಳಗಿನದೆಲ್ಲಾ ಆಗಬೇಕು ಅಂತ ಕನಸು ಕಾಣ್ತಾ ಇರೋ ಶಿಕ್ಷಕರು ಇವರು:
  • ನಮ್ಮ ಎಲ್ಲ ಪಠ್ಯ ಪುಸ್ತಕಗಳ ಮರು ಪರಿಶೀಲನೆಯಾಗಿ.... ಸರಳವಾದ, ನಿಜವಾದ ಕನ್ನಡೀಕರಣ ಆಗಬೇಕು
  • ವಿಜ್ಞಾನ - ತಂತ್ರಜ್ಞಾನ - ವೈದ್ಯಕೀಯವೂ ಸೇರಿದಂತೆ ಎಲ್ಲ ಶಿಕ್ಷಣಗಳೂ ಕನ್ನಡದಲ್ಲಿ ದೊರೆಯಬೇಕು
  • ಹಾಗೆ ಅಗತ್ಯವಿರುವ ಜ್ಞಾನ ಭಂಡಾರವನ್ನು ಕನ್ನಡಕ್ಕೆ ತರಲು, ಹೊಸ ಹೊಸ ಪದಗಳನ್ನು ಹುಟ್ಟು ಹಾಕುವ ಕೆಲಸವನ್ನೇ ಮಾಡುವ ಕನ್ನಡ ವಿಶ್ವವಿದ್ಯಾನಿಲಯಗಳನ್ನು ಕಟ್ಟಬೇಕು
  • ನಮ್ಮ ಮಕ್ಕಳು ಯಾವುದೇ ವಿಷಯವನ್ನು ಅಭ್ಯಾಸ ಮಾಡಬೇಕೆಂದರೆ ಅದು ಕನ್ನಡದಲ್ಲಿ ಸಾಧ್ಯವಾಗಬೇಕು.
  • ಸಂಶೋಧನೆಗಳು, ಉನ್ನತ ಶಿಕ್ಷಣ ಎಲ್ಲವೂ ಕನ್ನಡದಲ್ಲಿ ಆಗಬೇಕು
  • ಕನ್ನಡ ಭಾಷೆಯಲ್ಲಿ ಎಲ್ಲ ಕ್ಷೇತ್ರಗಳಿಗೆ ಸಂಬಂಧ ಪಟ್ಟ ಪದಕೋಶಗಳು ತಯಾರಾಗಬೇಕು
ಇವುಗಳಿಂದ ಯಾವುದೇ ವಿಷಯದ ಆಳಕ್ಕೆ ಹೋಗಕ್ಕೆ ಕನ್ನಡದ ಮಕ್ಕಳಿಗೆ ಸುಲಭ ಆಗತ್ತೆ, ಇವುಗಳಾದ್ರೆ ಮಾತ್ರ ಹೊಸ ಹೊಸ ಸಂಶೋಧನೆಗಳು, ಹೊಸಹೊಸ ಉತ್ಪನ್ನಗಳ ತಂತ್ರಜ್ಞಾನ ನಮ್ಮಲ್ಲೇ ಹುಟ್ಟಕ್ಕೆ ಸಾಧ್ಯ, ಹೀಗಾಗೋದ್ರಿಂದ ಮಾತ್ರ ನಾವು ಪ್ರಪಂಚದ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸಬಲ್ಲವರಾಗ್ತೀವಿ, ಜಗತ್ತಲ್ಲಿ ಆರ್ಥಿಕವಾಗಿ ಬಲಿಷ್ಠ ಆಗಕ್ಕೆ ಸಾಧ್ಯ ಆಗತ್ತೆ ಅಂತ ಮನಸಾರೆ ಅರ್ಥ ಮಾಡ್ಕೊಂಡಿರೋಂಥಾ ಶಿಕ್ಷಕರು ಇವರು. ಇಂಥಾ ಒಂದು ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಾಗಲೇ ನಾವು ಫ್ರಾನ್ಸು, ಜಪಾನು, ಜರ್ಮನಿ, ಇಸ್ರೇಲು, ರಷ್ಯಾ, ಚೀನಾ ಸೇರಿದ ಹಾಗೆ ಪ್ರಪಂಚದ ಬಲಿಷ್ಠ ದೇಶಗಳ ಜೊತೆ ಗಂಡಸರ ನಡುವೆ ಗಂಡಸರಂತೆ ನಿಲ್ಲಕ್ಕಾಗೋದು ಅಂತ ತಿಳ್ಕೊಂಡಿರೋ ಶಿಕ್ಷಕರು ಇವರು.

ಈ ವಿಶೇಷವಾದ ಶಿಕ್ಷಕವರ್ಗಕ್ಕೆ ಇಂದು ನಮ್ಮ ನಮನ. ನಾವು ನಿಮ್ಮ ಜೊತೆ ಇದೀವಿ ಗುರುಗಳೆ!

ಕಟ್ಟುವಾ ಬೆಳಕುತುಂಬಿದ ನಾಳೆಯಾ, ನೀನಿನ್ನು ಬಾರೆಯಾ?

ತಮಿಳರಿಗೆ ತಮ್ಮ ಭಾಷೆ ಬೆಣ್ಣೆ, ಸುಮ್ಮನೆ ಕೂತೋರಿಗೆ ಹಿಂದಿ ಸುಣ್ಣ!

ನಮ್ಮ ದೇಶದಲ್ಲಿ ಸಮಾನತೆಯೇ ಜೀವಾಳ ಅಂತ ನೀವೇನಾದ್ರೂ ನಂಬ್ಕೊಂಡಿದ್ರೆ ಭಾರತ ಸರ್ಕಾರ ಹೊರಡ್ಸಿರೋ ಆಡಳಿತ ಭಾಷಾ ಕಾಯ್ದೆ ಒಮ್ಮೆ ನೋಡಿ, ಅಬ್ಬಬ್ಬಬ್ಬಬ್ಬಾ ಎಷ್ಟು ಸಮಾನತೆ ಇದೆ, ಏನು ಕತೆ ಅಂತ! ಹಿಂದಿ ಹೇರಕ್ಕೇಂತ್ಲೇ ಮೀಸಲಾಗಿರೋ ಕೇಂದ್ರಸರ್ಕಾರದ "ಆಡಳಿತ ಭಾಷೆ ವಿಭಾಗ" ಹಿಂದಿ ಹೇರೋದಕ್ಕೆ ಹಾಕಿಕೊಂಡಿರೋ ನಿಯಮಗಳ್ನ ಹೇಳುವಾಗ ಏನ್ ಹೇಳತ್ತೆ ನೋಡಿ:

1. Short title, extent and commencement -
(i) These rules may be called the Official Languages (Use for Official Purposes of the Union) Rules, 1976.
(ii) They shall extend to the whole of India, except the State of Tamilnadu.
(iii) They shall come into force on the date of their publication in the Official Gazette.

ಮೊದಲಲ್ಲೇ ನಮ್ಮ ಕಣ್ಣಿಗೆ ರಾಚೋದು, ಈ ಕಾಯ್ದೆ ತಮಿಳುನಾಡಿಗೆ ಅನ್ವಯ ಆಗೋಲ್ಲಾ ಅನ್ನೊ ಸಾಲು. ಯಾಕೆ? ಯಾವ ಒತ್ತಡಕ್ಕೆ ಮಣಿದು ಹೀಗೆ ತಮಿಳುನಾಡಿಗೆ ಹಿಂದಿ ಹೇರಿಕೆ ಅನ್ವಯಿಸೋದಿಲ್ಲ ಅನ್ನೋ ನಿಯಮ? ನಮ್ ರಾಜಕಾರಣಿಗಳು ಇದನ್ನ ಕರ್ನಾಟಕಕ್ಕೆ ಯಾಕೆ ದೊರಕಿಸಿಕೊಟ್ಟಿಲ್ಲ ಅಂತ ಯೋಚ್ನೆ ಮಾಡು ಗುರು!

ಅವ್ರು ಇದನ್ನ ಪಡ್ಕೊಂದಿರೋದಕ್ಕೆ ನೇರವಾಗಿ ಕಾಣೊ ಕಾರಣ ತಮ್ನ ತಾವೇ ಆಳ್ಕೊಳ್ಳೋಕೆ ಅಂತಲೇ ಅಲ್ಲಿ ಪ್ರಾದೇಶಿಕ ಪಕ್ಷಗಳಾಗಿರೋದು. ಇಂಥ ಅಧಿಕಾರಾನ ನಾವು ಪಡ್ಕೊಳ್ಳೋಕೆ ನಮ್ದೇ ಪ್ರಾದೇಶಿಕ ಪಕ್ಷಗಳು ಬೇಕು ಅನ್ನೋದು ಸ್ಪಷ್ಟ ಗುರು!

ನಮ್ ಬೆಂಗಳೂರಿರಲಿ, ಚಾಮರಾಜನಗರದಲ್ಲಾಗಲೀ, ಹಿಂದಿಯ ಸೋಂಕೇ ಇಲ್ಲದ ಒಳನಾಡಿನ ಊರುಗಳಲ್ಲಾಗಲಿ, ಅಲ್ಲಿನ ಅಂಚೆ ಕಚೇರಿ, ರೇಲ್ವೆ ನಿಲ್ದಾಣ, ದೂರವಾಣಿ ಕಚೇರಿ - ಈ ಥರದ ಯಾವುದೇ ಕೇಂದ್ರ ಸರ್ಕಾರಿ ಕಚೇರೀಲಿ, ಯಾರಾದ್ರೂ ಹಿಂದಿ ಭಾಷೇಲಿ ಒಂದು ಮನವಿ/ದೂರು ಕೊಟ್ಟರೆ ಅದಕ್ಕೆ ಉತ್ತರಾನ ಹಿಂದೀಲೇ ಕೊಡಬೇಕು ಅನ್ನುತ್ತೆ ಈ ಕಾನೂನು.

ಈ ಥರ ಕಾನೂನಿನಿಂದ ಏನು ಅನುಕೂಲಾನಪ್ಪಾ ಅಂದ್ರೆ ಹಿಂದಿ ಮಾತಾಡೋನು ದೇಶದ ಯಾವ ಮೂಲೇಲಿ ಬೇಕಾದ್ರೂ ನೆಮ್ಮದಿಯಾಗಿ ಬದುಕ್ಬೋದು.

ಈ ದೇಶ ಇರೋದು ಬರೀ ಹಿಂದಿ ಮಾತಾಡೊ ಜನಾ ನೆಮ್ಮದಿಯಾಗ್ ಬಾಳಕ್ಕೆ ಅಂತ ಅರ್ಥಾನಾ ಗುರು? ಇದು ನಿಜವಾದ ಪ್ರಜಾಪ್ರಭುತ್ವಾನಾ? ಪ್ರಜೆಗಳು ಕನ್ನಡದೋರು, ಪ್ರಭುಗಳು ಹಿಂದಿಯೋರು ಅಂತಾನಾ ಅರ್ಥ?

ಟಾಟಾ ಬರಲಿ, ಆದರೆ ಕನ್ನಡಿಗರಿಗೆ ಟಾಟಾ ಮಾಡದೇ ಇರಲಿ!

ಧಾರವಾಡದ ಹೊರವಲಯದಲ್ಲಿ 2012 ವೇಳೆಗೆ 37,000 ಕನ್ನಡಿಗರಿಗೆ ಟಾಟಾ ಸಂಸ್ಥೆಯ ವತಿಯಿಂದ ಕೆಲಸ ಸಿಗಲಿದೆ ಅಂತ 29 ಆಗಸ್ಟಿನ ಕನ್ನಡಪ್ರಭದಲ್ಲಿ ಬಹಳ ಧೈರ್ಯವಾಗಿ ಹಾಕಿದಾರೆ. ಧೈರ್ಯ ಯಾಕೇಂತೀರಾ? ಅಲ್ ಕೆಲ್ಸ ಕನ್ನಡಿಗರಿಗೇ ಸಿಗತ್ತೆ ಅಂತ ಹೇಳಿರೋದೇ ಧೈರ್ಯ.

10,000 ಜನರಿಗೆ ನೇರವಾಗಿ, 27,000 ಜನರಿಗೆ ನಂಟಿನ ಕ್ಷೇತ್ರಗಳಲ್ಲಿ ಕೆಲಸ ಹುಟ್ಟೋ ಖಾತ್ರಿ ಐತಿ ಅಂತ ಕಂದಾಯ ಸಚಿವ ಜಗದೀಶ ಶೆಟ್ಟರ ಆಶ್ವಾಸನೆ. ನಿಜವಾಗಲೂ ಕನ್ನಡಿಗರಿಗೇ ಕೆಲಸ ಸಿಕ್ರೆ ಇದು ಅತಿವೃಷ್ಟಿ-ಅನಾವೃಷ್ಟಿಯಿಂದ ಕಷ್ಟಕ್ಕೆ ಒಳಗಾಗಿರೋ ಉತ್ತರ ಕರ್ನಾಟಕದ ಜನತೆಗೆ ಸ್ವಲ್ಪ ನೆಮ್ಮದಿ ಕೊಡೋಂಥಾ ವಿಷಯಾನೇ.

ಆದ್ರೆ ಕನ್ನಡಿಗರಿಗೇ ಸಿಗೋಹಾಗೆ ನೋಡಿಕೊಳ್ಳೋ ವ್ಯವಸ್ಥೆ ನಿಜವಾಗಲೂ ನಮ್ಮಲ್ಲಿ ಇದ್ಯಾ? ಸಿಗೋಹಾಗೆ ಮಾಡಕ್ಕೆ ಏನ್ ಮಾಡಬೇಕು?

ಟಾಟಾಗೋಸ್ಕರ ಕನ್ನಡಿಗರು ಮಾಡಿಕೊಡ್ತಿರೋ ಸೌಲತ್ತುಗಳು

ನಮ್ಮ ಸರ್ಕಾರ ಟಾಟಾ ಸಂಸ್ಥೆಗೆ ಮಾಡಿಕೊಡ್ತಾ ಇರೋ ಸೌಲಭ್ಯ ಸಕ್ಕತ್ತಿದೆ: ಉದ್ದಿಮೆ ಶುರು ಮಾಡಕ್ಕೆ ಬೇಕಾಗಿರೋ ಭೂಮಿ ಕಡಿಮೆ ಬೆಲೆಯಲ್ಲಿ, ಭೂಮಿ ನೋಂದಾವಣಿಯಲ್ಲಿ ರಿಯಾಯ್ತಿ, ಅನಿಯಮಿತ ವಿದ್ಯುತ್, ನಿತ್ಯ 2600 ಕ್ಯುಬಿಕ್ ಲೀಟರ್ ನೀರು, 11 ವರ್ಷ ಮೌಲ್ಯ ವರ್ಧಿತ ತೆರಿಗೆಗೆ ರಜಾ...ಹೀಗೆ ಒಂದಾ ಎರಡಾ...

ಇವೆಲ್ಲಾ ಸೌಕರ್ಯ ಮಾಡಿ ಕೊಡ್ತಿರೋದ್ರಿಂದ ಕನ್ನಡಿಗರಿಗೆ ಉಪಯೋಗವಾದರೂ ಆಗಬೇಡವೆ? ಕೆಲಸಗಳಲ್ಲಿ ಸಿಂಹಪಾಲು ಕನ್ನಡಿಗರಿಗೇ ಸಿಗಬೇಕು ಅಂತ ಸಾರ್ತಾಇರೋ ಸರೋಜಿನೀ ಮಹಿಷಿ ವರದಿ ಇದ್ದೇ ಇದೆ. ಆದರೆ ಅದನ್ನ ಅನುಷ್ಠಾನ ಮಾಡಿದಾರೋ ಇಲ್ವೋ ಅಂತ ಪರೀಕ್ಷೆ ಮಾಡೋ ವ್ಯವಸ್ಥೆ ಎಲ್ಲಿದೆ?

ನಾವು ಕತ್ಲೆಯಲ್ಲಿ ಇದ್ದು ಬೇರೆಯವರಿಗೆ ದೀಪ ಹಿಡೀಬೇಕಾ?

ಈ ಹಿಂದೆ ಕೂಡ ಕರ್ನಾಟಕದಲ್ಲಿ ಎಲ್ಲಾ ಸೌಲಭ್ಯ ಪಡೆದು ಕನ್ನಡಿಗರಿಗೆ ಕೆಲಸ ಕೋಡದೆ ಮೂರು ನಾಮ ಹಾಕಿದ ಸಂಸ್ಥೆಗಳ ಸಾಲಿಗೆ ಟಾಟಾನೂ ಸೇರಬಾರದು ಗುರು! ಅರ್ಹತೆ ಅಂತ ನೆಪ ಒಡ್ಡಿ ಬೇರೆ ಬೇರೆ ಕಡೆಯಿಂದ ಜನರನ್ನು ಕೆಲಸಕ್ಕೆ ಕರ್ಕೊಂಡು ಬರೋ ಹಾಗಿದ್ರೆ ಇದು ಬೇಡವೇ ಬೇಡ! ಈ ಉದ್ದಿಮೆಗೆ ಎಲ್ಲಾ ಸೌಲಭ್ಯ ಕೊಡಬೇಕಾದರೆ ಅನೇಕ ಹಳ್ಳಿಗಳು ಕತ್ತಲಲ್ಲಿ ಕಾಲ ಕಳೀಬೇಕು, ಕುಡಿಯೋ ನೀರಿಗಾಗಿ ಪರದಾಡಬೇಕು ಅನ್ನೋದನ್ನ ಮರೀಬೇಡಿ.

ಈ ತ್ಯಾಗಗಳ್ನ ಬೀದೀಲಿ ಹೋಗೋರಿಗೆಲ್ಲಾ ಮಾಡಿಕೊಂಡು ನಾವು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗಕ್ಕೆ... ನಾವು ಕನ್ನಡಿಗ್ರು ತಯಾರಿಲ್ಲ ಗುರು! ಇವನ್ನೆಲ್ಲ ನಾವು ಕೊಡೋದು ಕನ್ನಡಿಗರಿಗೇ ಉದ್ಯೋಗ ಸಿಗಲಿ ಅನ್ನೋ ಒಂದೇ ಕಾರಣದಿಂದ. ಕನ್ನಡಿಗರ ಬದಲು ಬೇರೆಯೋರು ಬಂದು ಇಲ್ಲಿಗೆ ತುಂಬ್ಕೊಂಡ್ರೆ, ಇದು ಕನ್ನಡಿಗರ ಪಾಲಿಗೆ ವರವಾಗದೇ ಶಾಪ ಆಗುತ್ತೆ ಅಂತ ನಾವು ಮರೀಬಾರದು.

ಮೊದಲಿಂದಲೇ ಟಾಟಾ ಮೇಲೆ ನಿಗಾ ಇಡಬೇಕು

ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುದ್ರು ಅಂತ ಆಗದೇ, ಮೊದಲಿಂದಲೂ ಸರ್ಕಾರದ ಪ್ರತಿನಿಧಿಗಳು ಉದ್ಯೊಗ ನೇಮಕಾತಿಯಲ್ಲಿ ಪಾಲ್ಗೊಳ್ಳಬೇಕು. ಅಭ್ಯರ್ಥಿಗಳು ಕನ್ನಡಿಗರಾ ಅಂತ ತಿಳಿದುಕೊಳಕ್ಕೆ ಜನನ ಪ್ರಮಾಣ ಪತ್ರ, ವಾಸಪತ್ರಗಳನ್ನು ಚೆನ್ನಾಗಿ ಪರಿಶೀಲಿಸಿಯೇ ಆರಿಸಬೇಕು. ಎಲ್ಲದಕ್ಕೂ ಮುಖ್ಯವಾಗಿ ಕನ್ನಡದ ಬಗ್ಗೆ ಕಾಳಜಿ ಇರುವ ಮಾನವ ಸಂಪನ್ಮೂಲ ಅಧಿಕಾರಿಗಳ(HR) ನೇಮಕವಾಗಬೇಕು. ಅಲ್ಲಿ ನೇಮಕ ಆಗಿರೋ ಪ್ರತಿಯೊಬ್ಬ ಉದ್ಯೋಗಿಯ ಮಾಹಿತಿ ಸರ್ಕಾರದ ಬಳಿ ಇರಬೇಕು.

ಇದು ಮಾಡದೇ, ಮುಂದೆ ಇಲ್ಲಿ ಚೆನ್ನಾಗಿ ಬೇರು ಊರಿದ ಸಂಸ್ಥೆಗಳಿಗೆ ಎಷ್ಟು ಕನ್ನಡಿಗರನ್ನು ಸೇರಿಸಿಕೊಂಡಿದ್ದೀರಾ ಅಂತ ಪತ್ರ ಬರೆದರೆ ಅವು ಕ್ಯಾರೇ ಅನ್ನೋಲ್ಲ. ಅದಕ್ಕೇ ಕನ್ನಡವನ್ನು ಕಾಯಲು ಇರುವ ಸಮಿತಿಗಳು, ಮಂಡಲಿಗಳು ಮತ್ತು ಪರಿಷತ್ತುಗಳೂ ಈಗಲೇ ಇದರ ಮೇಲೆ ಒಂದು ಕಣ್ಣು ಇಡಬೇಕು ಗುರು!

"ಕನ್ನಡ = ಜುಟ್ಟಿಗೆ ಮಲ್ಲಿಗೆ ಹೂ" ಚಿಂತನೆಯಿಂದ ನಮಗೆ ಉದ್ಧಾರವಿಲ್ಲ

ಇವತ್ತಿನ ವಿ.ಕದಲ್ಲಿ "ಜಾಗತೀಕರಣದಿಂದ ಕನ್ನಡಕ್ಕೆ ಕುತ್ತು" ಅನ್ನೋ ಒಂದು ಸುದ್ದಿ ಇದೆ (ಕೊಂಡಿ ಕೆಲಸ ಮಾಡ್ತಿಲ್ದೇ ಹೋದ್ರೆ ಇವತ್ತಿನ ಬೆಂಗಳೂರಿನಲ್ಲಿ ಮುದ್ರಣವಾಗಿರೋ ವಿ.ಕ. 2ನೇ ಪುಟ ನೋಡಿ.)

ನಿಜವಾದ ಆತಂಕದ ವಿಷಯ ಏನು?

ಮೊದಲನೇದಾಗಿ ಕನ್ನಡ ಜನಾಂಗ ಕನ್ನಡದಿಂದ ದೂರ ಸರೀತಿದೆ ಅನ್ನೋದಲ್ಲ ಆತಂಕದ ಸಂಗತಿ! ನಿಜವಾದ ಆತಂಕದ ಸಂಗತಿ ಏನಪ್ಪಾ ಅಂದ್ರೆ - ನಾವು ಕನ್ನಡಿಗರು ಬೆಳವಣಿಗೆ ಹೊಂದದೆ ಹಿಂದೆ ಬೀಳ್ತಿದೀವಿ ಅನ್ನೋದು. ಇದಕ್ಕೆ ಕಾರಣ ನಾವು ಕನ್ನಡದಿಂದ ದೂರ ಹೋಗ್ತಿರೋದು, ಅಷ್ಟೆ. ಆ ಸಭೇಲಿದ್ದವರಿಗೆ ನಿಜವಾದ ಆತಂಕದ ಅರಿವೂ ಇದ್ದಂತಿಲ್ಲ, ನಿಜವಾದ ಆತಂಕಕ್ಕೆ ಕಾರಣ ಏನು ಅನ್ನೋದರ ಅರಿವೂ ಇದ್ದಂತಿಲ್ಲ. ಇವರು ನಮ್ಮ "ಚಿಂತಕರು" ಇವತ್ತು!

ತಪ್ಪು ಆತಂಕಕ್ಕೆ ತಪ್ಪು ಪರಿಹಾರ!

ಹೋಗಲಿ, ಅವರಿಗೆ ನಿಜವಾಗಿ ಇರಬೇಕಾಗಿದ್ದ ಆತಂಕ ಬಿಟ್ಟಾಕಿ. ಆ ಸಭೇಲಿ ಅವರು ವ್ಯಕ್ತ ಪಡಿಸಿರೋ "ತನ್ನ ಭಾಷೆಯಿಂದ ಕನ್ನಡ ಜನಾಂಗ ದೂರ ಸರೀತಿದೆ" ಅನ್ನೋ ಆತಂಕಕ್ಕೂ ಔರು ಸೂಚಿಸಿರೋ ಪರಿಹಾರ ಅರೆಬೆಂದಿದ್ದು ಅಂತ ಹೇಳಲೇಬೇಕಿದೆ ಗುರು!

ವಚನ ಸಾಹಿತ್ಯ, ದಾಸ ಸಾಹಿತ್ಯ, ಭಾವಗೀತೆ, ಜಾನಪದಗಳ ಬಗ್ಗೆ ದೇಶ ವಿದೇಶದಲ್ಲಿ ಪ್ರಚಾರ ಮಾಡ್ಬೇಕು ಅಂತ ಆ ಸಭೆಯಲ್ಲಿ ಮಾತಾಡಿರೋರು ಅಂದಿರೋದೇನೋ ಸರೀನೇ ಇದೆ, ಆದ್ರೆ ಇಷ್ಟರಿಂದ ಭಾಷೆಗೆ ಬಂದಿರೋ "ಕುತ್ತು" ಹೋಗುತ್ತಾ ಅನ್ನೋದೇ ಪ್ರಶ್ನೆ. ಖಂಡಿತ ಹೋಗಲ್ಲ! ಬರೀ ಅಧ್ಯಾತ್ಮ ಮತ್ತು ಮನರಂಜನೆಯಂತಹ "ಜುಟ್ಟಿಗೆ ಮಲ್ಗೆ ಹೂವಿನ ವರ್ಗ"ಕ್ಕೆ ಸೇರೋ ಸಾಹಿತ್ಯಾನ ಹರಡಬೇಕು ಅಂತ ಪರಿಹಾರ ಸೂಚಿಸೋದು ಮೂರ್ಖತನ ಗುರು!

ಇದರಿಂದ ಜಾಗತೀಕರಣ ಎದುರಿಸಿದಹಾಗೆ ಎಲ್ಲಿ ಆಗತ್ತೆ? ಇದರಿಂದ ಫಿನ್‍ಲ್ಯಾಂಡಿನ ನೋಕಿಯಾ ಕಂಪನೀನ ಮಾರುಕಟ್ಟೇಲಿ ಸೋಲಿಸಕ್ಕಾಗತ್ತಾ? ಜಪಾನಿನ ಸೋನಿ ಕಂಪನೀನ ಮಾರುಕಟ್ಟೇಲಿ ಸೋಲಿಸಕ್ಕಾಗತ್ತಾ? ಆಗತ್ತೆ ಮಣ್ಣು! ಒಟ್ಟಿನಲ್ಲಿ ಇವರಿಗೆ ಕನ್ನಡ ಉಳಿಸಿಕೊಳ್ಳೋದಕ್ಕೆ ಬೇಕಾದ ಮುಲಭೂತ ಅರಿವೇ ಇಲ್ಲ ಗುರು!

ನಿಜವಾದ ಆತಂಕಕ್ಕೆ ನಿಜವಾದ ಪರಿಹಾರ

ಬರೀ ನಮ್ಮಲ್ಲಿರೋ ಸಾಹಿತ್ಯದ ಹಿರಿಮೆ ಹಾಡಿ ಹೊಗಳಿ ಅಧ್ಯಾತ್ಮ-ಧರ್ಮಗಳಿಗೆ ಮಾತ್ರ ಕನ್ನಡವನ್ನ ಮೀಸಲಾಗಿಟ್ರೆ ಇವತ್ತು ಏನೂ ಸಾಧ್ಸಕ್ ಆಗಲ್ಲ ಗುರು! ಕನ್ನಡ ಭಾಷೆ ಅಂದ್ರೆ ಬರೀ ಇಂಥ ಸಾಹಿತ್ಯ ಅಂತ ಮಾಡ್ಕೊಂಡಿದ್ರಿಂದ್ಲೇ ಇವತ್ತು ಕನ್ನಡದ ಮುಂದೆ "ಕುತ್ತು"ಗಳು ಬಂದಿರೋದು ಗುರು! ಅಂಥ ಹಿರಿಮೆ, ಇತಿಹಾಸದ ಸ್ಪೂರ್ತಿ ತೊಗೊಂಡು ಈಗ ಹ್ಯಾಗೆ ಬದುಕು ಹಸನು ಮಾಡ್ಕೋಬೇಕು ಅಂತ ನೋಡ್ಬೇಕು.

ಒಟ್ನಲ್ಲಿ ಜಾಗತೀಕರಣದ ಸವಾಲ್ ಎದುರ್ಸಕ್ಕೆ ನಮಗೆ ಬೇಕಿರೋದು
  1. ಈ ಸವಾಲ್ನ ಎದುರಿಸಬೇಕು, ಹೇಡಿಗಳ ಹಾಗೆ ಓಡಿಹೋಗಬಾರದು ಅನ್ನೋ ಧೈರ್ಯ
  2. ನಿಜವಾಗಲೂ ಎದುರಿಸಿ ಜಾಗತಿಕ ಮಾರುಕಟ್ಟೇಲಿ ಮಿಂಚಬೇಕು ಅಂದ್ರೆ ಅದು ಕನ್ನಡದ ನಿಜವಾದ ಶಿಕ್ಷಣ ವ್ಯವಸ್ಥೆಯಿಂದ್ಲೇ ಸಾಧ್ಯ ಅನ್ನೋ ಅರಿವು.
ಜಾಗತೀಕರಣದ ಬಾಗಿಲು ತೆರೆದಿದೆ ಅಂದ್ರೆ ಹೊರಗಿಂದ ನಮ್ ಮೇಲ್ ದಾಳಿ ನಡ್ಯುತ್ತೆ ಅಂತ ಹೇಡಿಗಳಂಗೆ ಒಳಗೆ ಬಚ್ಚಿಟ್ಕೊಳೋ ಬದಲು ಧೈರ್ಯವಾಗಿ ರಣರಂಗಕ್ಕೆ ಇಳೀಬೇಕು ಗುರು! ನಮಗೆ ಬೇಕಾಗಿರೋದು ಯಾವುದೇ ಉತ್ಪನ್ನವನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡದಷ್ಟು ಉತ್ತಮ ಗುಣಮಟ್ಟದಲ್ಲಿ ತಯಾರಿಸೋ ಕುಶಲತೆ. ಅದನ್ನ ಕನ್ನಡ ಜನಾಂಗದ ನಾವು ಸಾಧಿಸಕ್ಕಾಗೋದು ಕನ್ನಡದಲ್ಲೇ ಹೊರತು ಬೇರೆ ಯಾವ ಭಾಷೆಯ ಶಿಕ್ಷಣ ವ್ಯವಸ್ಥೆಯಿಂದ್ಲೂ ಅಲ್ಲ. ಇವತ್ತು ಈ ಕನ್ನಡದ ಶಿಕ್ಷಣ ವ್ಯವಸ್ಥೆ ಬೇಕಾದಷ್ಟು ಬೆಳೆದಿಲ್ಲ, ನಿಜ. ಆದರೆ ಬೆಳೀದೆ ಬೇರೆ ದಾರಿಯಿಲ್ಲ ಗುರು! ಇದು ಬಿಟ್ಟು ಬರೀ "ಜುಟ್ಟಿಗೆ ಮಲ್ಲಿಗೆ ಹೂ" ಚಿಂತನೆಯಿಂದ ನಮಗೆ ಉದ್ಧಾರವಿಲ್ಲ ಗುರು!
Related Posts with Thumbnails