ಕನ್ನಡ ನಾಡು! ಚಿನ್ನದ ಬೀಡು!

ಈ ತಿಂಗಳ 25ರಂದು ವಿಜಯ ಕರ್ನಾಟಕದಲ್ಲಿ ಕರ್ನಾಟಕದ ಇನ್ನೂ 9 ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ದೊರಕಲಿದೆ ಅಂತ ವರದಿ ಆಗಿದೆ. ಇದು ಕನ್ನಡಿಗರಿಗೆಲ್ಲಾ ಹೆಮ್ಮೆ, ಮರ್ಯಾದೆ ಹಾಗೂ ಸಂತಸ ತರೋ ವಿಷಯ ಗುರು! ನಮ್ಮ ನಾಡಿನ ಬೆಳೆಗಳಲ್ಲಿ ಎಂತಹ ವೈಶಿಷ್ಟ್ಯತೆ ಅಡಗಿದೆ ಅನ್ನೋ ಮಾಹಿತಿ ಇಂತಹ ಮಾನ್ಯತೆಗಳಿಂದ ಜಗತ್ತಿಗೆಲ್ಲಾ ಪಸರುತ್ತಿರೋದು ಇನ್ನೂ ಹೆಚ್ಚು ಖುಷಿಗೆ ಕಾರಣ ಗುರು! ಈಗಾಗ್ಲೇ ನೋಂದಣಿಯಾಗಿರೋ ನಮ್ಮ ಬೆಳೆಗಳಲ್ಲಿ ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ ಹೀಗೆ ಹಲವಿವೆ. ಕರ್ನಾಟಕದ ವಿಶಿಷ್ಟ ಬೆಳೆಗಳು ಅಂದ್ರೆ ಇಷ್ಟೇ ಅಲ್ಲ, ಈ ನಾಡಲ್ಲಿ ಇನ್ನು ಸಕ್ಕತ್ ವೈಶಿಷ್ಟ್ಯತೆ ಇದೆ ಅಂತ ತೋರ್ಸಕ್ಕೆ ಈ ಪಟ್ಟಿಗೆ ಇನ್ನೂ 9 ಬೆಳೆಗಳ್ನ ಸೇರ್ಸೋ ಕೆಲ್ಸ ನಡ್ದಿದೆ.

ಮಾನ್ಯತೆ ಪಡೆದ ಹತ್ತರಲ್ಲಿ ಆರು!

ಒಂದು ನೆಲದ ಮಣ್ಣಿನ ಮತ್ತು ಅಲ್ಲಿನ ಹವಾಮಾನದ ವೈಶಿಷ್ಟ್ಯತೆ ಆಧರಿಸಿ ಅಲ್ಲಿ ಬೆಳೆಯೋ ಕೆಲವು ಬೆಳೆಗಳ ರೂಪ, ಗುಣಮಟ್ಟ ಹಾಗೂ ಅವುಗಳ ಸೊಗಡು ಇನ್ನೆಲ್ಲಿ ಬೆಳೆದ್ರೂ ಸಿಗದು ಅಂತಾದಾಗ ಇಂತಹ ಬೆಳೆಗಳ ವೈಶಿಷ್ಟ್ಯತೆ ಕಾಪಾಡಿ ಅವುಗಳನ್ನು ಬೆಳ್ಯೋರಿಗೆ ಪ್ರೋತ್ಸಾಹ ನೀಡಿ ಆ ಬೆಳೆಗೆ ಹೆಚ್ಚು ಮಾರುಕಟ್ಟೆ ಸಿಗೋ ಹಾಗೆ ಈ ಭೌಗೋಳಿಕ ಮಾನ್ಯತೆ ಮಾಡತ್ತೆ ಗುರು! ಕರ್ನಾಟಕದ ಭೌಗೋಳಿಕ ವೈಶಿಷ್ಟ್ಯತೆ ಎಷ್ಟು ಅಂದರೆ ಈಗಾಗ್ಲೇ ನಮ್ಮ ದೇಶದಿಂದ ಹೋಗಿರುವ 10 ಇಂತಹ ಬೆಳೆಗಳಲ್ಲಿ 6 ನಮ್ಮ ರಾಜ್ಯದ್ದೇ. ಈ ಬೆಳೆಗಳು - ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ, ನಂಜನಗೂಡು ರಸಬಾಳೆ, ಮೂರು ಬಗೆಯ ಮಲ್ಲಿಗೆ ಹೂಗಳು.

ಕನ್ನಡ ನಾಡು ಚಿನ್ನದ ಬೀಡು

ನಮ್ಮ ಕನ್ನಡ ನಾಡಿನ ಭೂಪ್ರದೇಶ ಬಹಳ ಸಮೃದ್ಧವಾದ್ದು ಗುರು! ಭಾರತದ ಒಟ್ಟು ನೆಲದ-ಮೇಲಿನ-ನೀರ ವಿಸ್ತೀರ್ಣದ ಶೇಕಡ 5ರಷ್ಟು ನೀರು ಇಲ್ಲೇ ಹರಿಯತ್ತೆ. ಈ ನಮ್ಮ ನಾಡಲ್ಲಿ 7 ನದಿಗಳ ನೀರು ನೀರಾವರಿ, ಪ್ರವಾಸೋದ್ಯಮ, ವಿದ್ಯುತ್, ಕುಡಿವ ನೀರು ಹೀಗೆ ಹಲವು ಯೋಜನೆಗಳಿಗೆ ಪೂರೈಕೆ ಮಾಡಿವೆ. ಪ್ರಕೃತಿಯ ಯಾವುದೇ ಏರು-ಪೇರು, ವಿಕೋಪ ಪ್ರಕೋಪಗಳಿಲ್ಲದ ಭೂಪ್ರದೇಶವಾಗಿದ್ದು ಇದು ಎಲ್ಲಾ ಬಗೆಯ ವಾಣಿಜ್ಯ, ವ್ಯಾಪಾರ ಮತ್ತು ವ್ಯವಸಾಯಗಳಿಗೆ ಪ್ರಿಯವಾದ ಭೂಮಿಯಾಗದೆ ಗುರು!

ಕರುನಾಡಲ್ಲಿ ಬೆಳ್ಯೋ ಶ್ರೀಗಂಧ ಇನ್ನೆಲ್ಲಿ ಬೆಳುದ್ರೂ ಆ ಕಂಪು ಬರೋಕ್ಕೆ ಸಾಧ್ಯವೇ ಇಲ್ಲ ಅಂತನ್ನೋದು ಈಗಾಗ್ಲೇ ಜಗತ್ತಿಗೆಲ್ಲಾ ತಿಳ್ದಿರೋ ಸತ್ಯವೇ ಹೌದು. ನಮ್ಮ ನಾಡಿನ ಎಡಭಾಗದಲ್ಲಿ ಹರಡ್ಕೊಂಡಿರುವ ಮಲೆನಾಡು ಪ್ರದೇಶದಲ್ಲಿ ಸಿಗುವ ಔಷದ ಮೂಲಿಕೆಗಳು ಎಣಿಕೆ ಮೀರಿದೆ, ಕೊಡಗಿನಲ್ಲಿ ಬೆಳೆವ ಕಿತ್ತಳೆ ಮತ್ತು ಕಾಫಿಯ ಸೊಬಗು, ಇಲ್ಲಿಯ ನೈಸರ್ಗಿಕ ಸೌಂದರ್ಯ ಎಲ್ಲವೂ ಅದ್ಭುತ! ಆದ್ರೆ ಮಳೆ-ಬೆಳೆಗಳಷ್ಟೇ ನಮ್ಮ ಹಿರಿಮೆಯಾಗಿರದೇ ನಮ್ಮ ಭೂಮಿ ಕೈಗಾರಿಕಾ ಕ್ಷೇತ್ರಕ್ಕೂ ಪೂರಕವಾಗುವಂತೆ ದೇಶದಲ್ಲೇ ಅತಿ ಹೆಚ್ಚು ಚಿನ್ನದ ಉತ್ಪಾದನೆ ಮಾಡುವ ರಾಜ್ಯವಾಗಿದೆ, ಅಲ್ಲದೆ ಇತರ ಮುಖ್ಯ ಖನಿಜಗಳಿಗೆ ನಮ್ಮ ರಾಜ್ಯ ಹೆಸರಾಗಿದೆ ಗುರು!

ಈ ಸಂಪತ್ತು ನಮ್ಮ ಸೊತ್ತು!

ಈ ಖಜಾನೆಯ ವಾರಸುದಾರ ಸಹಜವಾಗೇ ಈ ಮಣ್ಣಿನ ಮಕ್ಕಳು. ಇಲ್ಲಿ ಕಾಣುವ ಪ್ರತಿಯೊಂದು ವಸ್ತುವಿನಿಂದ್ಲೂ ಕನ್ನಡಿಗನಿಗೇ ಲಾಭ ಆಗ್ಬೇಕು ಗುರು. ಇಲ್ಲಿ ಲಾಭದ ಅವಕಾಶ ಹೊರಗಿನವರಿಗೆ ಕಂಡರೂ ಅವರ ಲಾಭದಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕದ ಲಾಭವೇ ಮೊದಲಾಗಿರಬೇಕು ಗುರು. ನಮ್ಮ ನೆಲದಲ್ಲಿ ನಡೀತಿರೋ ಗಣಿಗಾರಿಕೆ ಕನ್ನಡನಾಡಿಗೆ ಸಂಪತ್ತು ಸುರಿಸಬೇಕು. ಅದು ನಮ್ಮ ಜನರ ಬಾಳನ್ನು ಹಸನಾಗಿಸಬೇಕು.

ಇಂತಹ ಸೊಬಗಿನ ಸಿರಿ ತುಂಬಿದ ನಾಡು ನಾಡು ನಮ್ಮ ಕನ್ನಡ ನಾಡು. ಈ ನಾಡಲ್ಲಿ ಹುಟ್ಟಿರೋ ನಾವು ಈ ನೆಲಕ್ಕೆ ಪ್ರತಿದಿನ ಕೈಜೋಡಿಸಿ ನಮಿಸಿದ್ರೂ ಸಾಲ್ದು ಗುರು! ನಮ್ಮ ನಾಡಿನ ಈ ಸಿರಿಯನ್ನು ಸರಿಯಾಗಿ ಅರ್ಥ ಮಾಡ್ಕೊಳೋಣ, ಅದನ್ನ ಕಾಪಾಡೋ ಜವಾಬ್ದಾರಿ ತೊಗೊಳೋಣ. ಈ ಮಣ್ಣಿಗೆ, ಇಡಿಯ ಕನ್ನಡ ಕುಲಕೋಟಿಗೆ ಜೀವನ ಕೊಡಬಲ್ಲ ಮತ್ತದನ್ನ ಬೇಕಾದಷ್ಟು ಹಸನು ಮಾಡಬಲ್ಲ ಶಕ್ತಿ ಇದೆ ಎಂದೂ ಅರಿಯೋಣ ಗುರು.

4 ಅನಿಸಿಕೆಗಳು:

Anonymous ಅಂತಾರೆ...

ಮಾನ್ಯರೇ,
ಸರಸ್ವತಿ-ಸಿಂದು ನಾಗರಿಕತೆಯ ಕಾಲದಿಂದಲೂ ಕರ್ನಾಟಕವೇ ಭಾರತಿಯರಿಗೆ ಚಿನ್ನವನ್ನು ವದಗಿಸುತ್ತ ಬಂದಿದೆ.ನೀವು ಹೇಳಿರುವ ಹಾಗೆ ಕರ್ನಾಟಕದಲ್ಲಿ ಸುಖಮಯವಾದ ಜೀವನ ನೆಡಸಲು ಎಲ್ಲ ಸೌಕರ್ಯವು ಭಗವಂಥ ನೀಡಿಧಾನೆ. ಆದುದರಿಂದಲ್ಲವೇ " ಸಿರಿವಂಥನಾದರು ಕನ್ನಡನಾಡಲ್ಲೇ ನಲಿವೆ, ಬಿಕ್ಷುಕನಾದರು ಕನ್ನಡನಾಡಲ್ಲೇ ಮಡಿವೆ" ಎಂದು ಹೇಳುವುದು.

Anonymous ಅಂತಾರೆ...

here is a link
http://www.hindu.com/2006/10/27/stories/2006102714680200.htm

This link runs a series of 12 unique symbols of the State and efforts made to revive their production.

Anonymous ಅಂತಾರೆ...

karnataka samruddiyaagide, kannadiga adanna aritu swabhimaaniyaagabeku ashte .. abhimaana illadiddare chinna, srigandha ella anyara paalagatte ..

Sri

Anonymous ಅಂತಾರೆ...

Guru,

karnataka da IIT (haasana alli) reject maadidare .. yaake ?? aadare .. TN, punjab gaLige IIT IIM kottidare .. idu enta mosavayya ..

http://www.hindu.com/2008/03/29/stories/2008032958640100.htm

Sri

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails