ನಾಗರೀಕ ಸೇವಾ ಪರೀಕ್ಷೆಗಳು : ಕನ್ನಡಿಗರ ನೆರವಿಗೊಂದು ಸೇವಾಸಂಸ್ಥೆ!

ಮೊನ್ನೆ ಏನ್ ಗುರುವಿನಲ್ಲಿ ಪ್ರಕಟವಾದ ಬರಹಕ್ಕೆ ಪ್ರತಿಕ್ರಿಯೆಯಾಗಿ ಭಾಷಾಂತರ ಅಧ್ಯಯನ ಸಂಸ್ಥೆಯ ರವೀಂದ್ರನಾಥ್ ಎಂಬ ಓದುಗರು ಒಳ್ಳೇ ಮಾಹಿತಿ ಕೊಟ್ಟಿದಾರೆ. ಇದರ ಸಾರಾನ ನಮ್ಮೆಲ್ಲಾ ಓದುಗರ ಅನುಕೂಲಕ್ಕಾಗಿ ಇಲ್ಲಿ ಹಾಕ್ತಿದೀವಿ :

ಬರೀ ಕನ್ನಡಿಗ್ರು ಮಾತ್ರಾ ಕಮ್ಮಿ ಅಲ್ಲ!

ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಮುಖ್ಯವಾಗಿ ಮೂರು ಥರದ ಪ್ರಶ್ನೆಪತ್ರಿಕೆಗಳಿರ್ತವೆ. ಭಾಷಾ ಸಾಹಿತ್ಯ ಅನ್ನೋದ್ರಲ್ಲಿ ಒಂದು ಭಾಷೆಯನ್ನು ಆರಿಸಿಕೊಳ್ಳಬಹುದು. ಇದರಲ್ಲಿ ಕನ್ನಡವನ್ನು ಆರಿಸಿಕೊಳ್ಳೋರ ಸಂಖ್ಯೆ 5%ಕ್ಕಿಂತಲೂ ಕಮ್ಮಿ. ಇನ್ನು ಮಾಧ್ಯಮವಾಗಿ ಕನ್ನಡ. ಎರಡನೇ ಥರದ ವಿಷಯಗಳಂದ್ರೆ ಕಡ್ಡಾಯವಾಗಿ ಇರೋವು. 2006ರಲ್ಲಿ ಇದರಲ್ಲಿ ಕನ್ನಡವನ್ನು ಆರಿಸಿಕೊಂಡಿರೋರ ಸಂಖ್ಯೆ ಒಟ್ಟು 7461 ಜನಕ್ಕೆ ಬರೀ 8 . ಮತ್ತೊಂದು ವಿಷಯವೆಂದ್ರೆ ಐಚ್ಚಿಕ ವಿಷಯಗಳಲ್ಲಿ ಕನ್ನಡವನ್ನು ಆರಿಸಿಕೊಂಡಿರೋರ ಸಂಖ್ಯೆ 2006ರಲ್ಲಿ ಒಟ್ಟು 13382 ಜನಕ್ಕೆ ಬರೀ 9 ಜನ. ಓದುಗರು ನೀಡಿರೋ ಈ ಮಾಹಿತೀ ಆಧಾರದ ಮೇಲೆ ನೋಡುದ್ರೆ, ಅನ್ಸೋದೇನಪ್ಪಾ ಅಂದ್ರೆ ಕನ್ನಡದೋರು ಇಂಥಾ ಮಹತ್ವದ ಪರೀಕ್ಷೆಗಳಲ್ಲಿ ಭಾಗವಹಿಸೋದ್ರಲ್ ಮಾತ್ರಾ ಹಿಂದೆ ಅಲ್ಲ. ಇದರ ಜೊತೆಗೆ ಕನ್ನಡದ ಬಳಕೇನೂ ಹಿಂದೆ ಅಂತ.

ಕನ್ನಡಿಗರ ಸಹಾಯಕ್ಕೊಂದು ಸೇವಾಸಂಸ್ಥೆ

ಬೆಂಗಳೂರಿನ ರಾಜಾಜಿ ನಗರದಲ್ಲಿರೋ ಭಾಷಾಂತರ ಅಧ್ಯಯನ ಸಂಸ್ಥೆಯೋರು ಹಿಡಿದು ಪ್ರತಿವರ್ಷ ನಡೆದ ಈ ಪರೀಕ್ಷೆಗಳ ಪ್ರಬಂಧ, ಸಾಮಾನ್ಯಜ್ಞಾನ, ಪ್ರಮುಖ ವಿಷಯಗಳು... ಇವೆಲ್ಲದರ ಬಗ್ಗೆ ಕನ್ನಡದಲ್ಲಿ ಉತ್ತರ ಬರೆದು ಅಂತರ್ಜಾಲದಲ್ಲಿ ಎಲ್ರಿಗೂ
ಉಚಿತವಾಗಿ ಸಿಗುವಂತೆ ಪ್ರಕಟಿಸೋ ಮೊದಲ ಹೆಜ್ಜೇನಾ ಇಡಲು ಮುಂದಾಗಿದ್ದೀವಿ. ಎಲ್ಲರೂ ಸಹಕಾರ ನೀಡಿ ಅಂದಿದ್ದಾರೆ. ಇವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಗುರು!

2 ಅನಿಸಿಕೆಗಳು:

Anonymous ಅಂತಾರೆ...

ಒಳ್ಳೇ ಸುದ್ದಿ,

ರವೀಂದ್ರನಾಥ್ ಅವರ ಈ ಸಂಸ್ಥೆಯನ್ನು ಸಂಪರ್ಕ ಮಾಡೋದು ಹ್ಯಾಗೆ? ಫೋನ್ ನಂಬರ್ ಕೊಡ್ತೀರಾ?

ಕೀರ್ತಿ

ಬನವಾಸಿ ಬಳಗ ಅಂತಾರೆ...

ದೂರವಾಣಿ : : 080 - 23111467

ಮಿಂಚೆ : ravindranath@ravindranath.com

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails