
ಕನ್ನಡವೇ ಸತ್ಯ ಖ್ಯಾತಿಯ ಹೆಮ್ಮೆಯ ಗಾಯಕ, ಸಂಗೀತ ನಿರ್ದೇಶಕ, ಸುಗಮ ಸಂಗೀತದ ಮಾಂತ್ರಿಕ, ಏರುದನಿಯ ಹಾಡುಗಾರ, ನಮ್ಮೆಲ್ಲರ ಪ್ರೀತಿಯ ಶ್ರೀ. ಸಿ. ಅಶ್ವಥ್ ಅವರು ಇಂದು ನಿಧನರಾಗಿದ್ದಾರೆ. ಅಶ್ವಥ್ ಎಂದೊಡನೆ ನೆನಪಾಗುವುದು ಕಾಮನ ಬಿಲ್ಲು ಚಿತ್ರದ "ನೇಗಿಲ ಹಿಡಿದು ಹೊಲವನು..." ಹಾಡು ಮತ್ತು ಆ ಹಾಡು ನಾಡಲ್ಲಿ ಮೂಡಿಸಿದ ಸಂಚಲನ. ಶಿಶುನಾಳ ಶರೀಫ ಅಂದರೆ ಕಣ್ಮುಂದೆ ಬರುವುದು ಅಶ್ವತ್ಥರ ಹಾಡುಗಳು.
ಏನ್ ಗುರು ಶ್ರೀಯುತರಿಗೆ ಗೌರವ ಪೂರ್ವಕವಾದ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತದೆ. ಪ್ರೀತಿಪೂರ್ವಕ... ಕಂಬನಿ ತುಂಬಿದ ವಿದಾಯಗಳು.
ನಾವು ಕನ್ನಡಿಗರು ಇ೦ದು ಒ೦ದು ಅಪೂರ್ವ ರತ್ನ ಕಳೆದು ಕೊ೦ಡಿದ್ದೇವೆ. ಅಶ್ವಥ್ ಅವರ ಹೆಸರು ಚಿರಾಯುವಾಗಲಿ. ಎ೦ದೂ ಮರೆಯಲಾರದ೦ಥಾ ಕನ್ನಡ ಹಾಡುಗಳನ್ನು ಹಾಡಿ ಮುದ್ರಿಸಿ ನಮ್ಮ ಬೊಕ್ಕಸ ತು೦ಬಿ ನಮ್ಮನ್ನಗಲಿದ್ದಾರೆ. ಅವರಿಗೆ ನಮ್ಮ ಭಾವಪೂರ್ಣ ಶೃಧ್ದಾ೦ಜಲಿ ಅರ್ಪಿಸೋಣ.
ReplyDeletevishnuvardhan kuda nammannu agaliddare.. :(
ReplyDeleteತುಂಬಲಾರದ ನಷ್ಟ, ಕರ್ನಾಟಕದ ರತ್ನನಿಗೆ ಭಾವಪೂರ್ಣ ಶ್ರದ್ಧಾಂಜಲಿ...
ReplyDelete