ಬೆಂಗಳೂರು ಪುಸ್ತಕೋತ್ಸವದಲ್ಲಿ ಸಿಗೋಣ...

ಇದೇ ನವೆಂಬರ್ ತಿಂಗಳ ೧೮ನೇ ತಾರೀಕಿನ ಶುಕ್ರವಾರದಿಂದ ೨೭ನೇ ತಾರೀಕಿನವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂಬತ್ತನೇ "ಬೆಂಗಳೂರು ಪುಸ್ತಕೋತ್ಸವ"ವನ್ನು ಏರ್ಪಡಿಸಿದ್ದಾರೆ. ಈ ಪುಸ್ತಕ ಮೇಳದಲ್ಲಿ ನೂರಾರು ಪುಸ್ತಕ ಮಾರಾಟಗಾರರು/ ಪ್ರಕಾಶಕರು ಭಾಗವಹಿಸುತ್ತಿದ್ದು ಬೆಂಗಳೂರಿನ ಹೆಸರಾಂತ ಕಾರ್ಯಕ್ರಮಗಳಲ್ಲಿ ಇದೊಂದಾಗಿದೆ. ಇದನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ೧೧:೦೦ರಿಂದ ರಾತ್ರಿ ೮:೦೦ರವರೆಗೆ ಮಳಿಗೆಗಳು ತೆರೆದಿರುತ್ತವೆ.

ಬಳಗದ ಮಳಿಗೆ

ಬನವಾಸಿ ಬಳಗವೂ ಕೂಡಾ ಈ ಬಾರಿ ಈ ಪುಸ್ತಕೋತ್ಸವದಲ್ಲಿ ಮಳಿಗೆಯನ್ನು ತೆರೆಯಲಿದೆ. ನೀವೂ ಬನ್ನಿ... ನಿಮ್ಮವರನ್ನೂ ಕರೆತನ್ನಿ. ಈ ಮಳಿಗೆಯಲ್ಲಿ ಬನವಾಸಿ ಬಳಗದ ಹೊತ್ತಗೆಗಳ ಜೊತೆಯಲ್ಲಿ ನಾಡೋಜ ಡಾ. ಡಿ ಎನ್ ಶಂಕರ್ ಬಟ್ ಅವರ ಅನೇಕ ಹೊತ್ತಗೆಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಿದ್ದೇವೆ.

ಬನವಾಸಿ ಬಳಗ
ಮಳಿಗೆ ಸಂಖ್ಯೆ ೧೯೯,
ಬೆಂಗಳೂರು ಪುಸ್ತಕೋತ್ಸವ,
ಗಾಯತ್ರಿ ವಿಹಾರ, ಅರಮನೆ ಮೈದಾನ,
ಬೆಂಗಳೂರು

1 ಅನಿಸಿಕೆ:

Chandru ಅಂತಾರೆ...

dhanyvadagalu share madiddakke

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails