ಸಹಜ ನ್ಯಾಯವೆನ್ನುವುದೇ ಇಲ್ಲಿ ಸಂವಿಧಾನ ಬಾಹಿರ!

(ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ)
ರಾಜ್ಯಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕವನ್ನು ಹಾಕುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು "ಸರಿಯಿಲ್ಲಾ" ಎಂದು ರಾಜ್ಯ ಉಚ್ಚನ್ಯಾಯಾಲಯ ಹೇಳಿದೆ ಎನ್ನುವ ಸುದ್ದಿ ಇಂದಿನ (೩೧.೦೩.೨೦೧೪ರ) ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸಂವಿಧಾನಬಾಹಿರ ಎಂದರೂ ಇದು ನ್ಯಾಯಬದ್ಧ!

ಕನ್ನಡನಾಡಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವುದು ಸಹಜ ನ್ಯಾಯ. ಯಾಕೆಂದರೆ ಸರ್ಕಾರ ತನ್ನ ನಾಡಿನ ವ್ಯವಸ್ಥೆಗಳನ್ನು ತನ್ನ ಜನರಿಗೆ ಆದಷ್ಟೂ ಹತ್ತಿರಗೊಳಿಸುವಲ್ಲಿ ಜನರ ನುಡಿ ಪ್ರಮುಖವಾದದ್ದು. ಪ್ರಜಾಪ್ರಭುತ್ವದ ಯಶಸ್ಸಿಗೆ ಇದೊಂದು ಅತ್ಯುತ್ತಮ ಸಾಧನ ಎನ್ನುವುದನ್ನು ಪ್ರಪಂಚವೇ ಎತ್ತಿಹೇಳುತ್ತದೆ. ವಿಶ್ವಸಂಸ್ಥೆಯೂ ನುಡಿಜನಾಂಗಕ್ಕಿರುವ ಹಕ್ಕುಗಳನ್ನು ಗುರುತಿಸಿ ಘೋಷಿಸಿದೆ. ಆದರೆ ಭಾರತದ ಸಂವಿಧಾನದಲ್ಲಿರುವ ಭಾಷಾನೀತಿಯ ಹುಳುಕಿನ ಸಾಲುಗಳು ಈ ನಾಡ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನ ಮಾಡಿದೆ. ರಾಜ್ಯಸರ್ಕಾರಗಳು ಕೇಂದ್ರದ ಗುಲಾಮರು ಎನ್ನುವಂತೆ ರೂಪಿಸಿರುವ ಈ ದೇಶದ ನೀತಿ ನಿಯಮಗಳಲ್ಲಿ...
- ಕರ್ನಾಟಕದ ವಾಹನಗಳ ಮೇಲೆ ಕನ್ನಡದಲ್ಲಿ ನೋಂದಣಿ ಸಂಖ್ಯೆ ಬರೆಯುವುದು ಕಾನೂನು ಬಾಹಿರ
- ಕರ್ನಾಟಕದಲ್ಲಿರುವ ಪಾಸ್‌ಪೋರ್ಟ್ ಕಚೇರಿ, ವಿಮಾನ ನಿಲ್ದಾಣ ಮೊದಲಾದೆಡೆ ಕನ್ನಡ ಬಳಸದಿರುವುದು ಅಪರಾಧವಲ್ಲಾ.
- ಈ ನಾಡಿನ ಅಂಚೆಕಚೇರಿ, ಬ್ಯಾಂಕು, ರೈಲುಗಳಲ್ಲಿ ಕನ್ನಡವೇ ಇರದೆ ಬರೀ ಹಿಂದೀ ಇಂಗ್ಲೀಷ್ ಇರುವುದು ಸಂವಿಧಾನ ಬದ್ಧ!
- ಈ ನಾಡಿನಲ್ಲಿ ಮಾರಾಟವಾಗುವ ಔಷಧಗಳ ಮೇಲೆ ಕನ್ನಡದಲ್ಲಿ ಯಾವ ಮಾಹಿತಿಯನ್ನು ಕೊಡದಿದ್ದರೂ ಪರ್ವಾಗಿಲ್ಲಾ, ಇಂಗ್ಲೀಷು ಹಿಂದೀಲಿ ಇರಬೇಕು.

ಭಾರತದ ಸಂವಿಧಾನವೇ ಇಂಥಾ ಹುಳುಕನ್ನು ಪೊರೆಯುತ್ತಿರುವಾಗ ನಮ್ಮ ಹಣೆಬರಹ ಹೀಗಿರದೆ ಇನ್ನು ಹೇಗಿರಲು ತಾನೇ ಸಾಧ್ಯ? ಇದಕ್ಕೆಲ್ಲಾ ಮದ್ದು ರಾಜ್ಯಸರ್ಕಾರದ ನಾಡಪರಬದ್ಧತೆಯಲ್ಲಿದೆ, ಭಾರತದ ಹುಳುಕಿನ ಭಾಷಾನೀತಿ ಬದಲಾಗುವುದರಲ್ಲಿದೆ, ಕರ್ನಾಟಕದ ರಾಜಕಾರಣ ಕರ್ನಾಟಕ ಕೇಂದ್ರಿತವಾಗುವುದರಲ್ಲಿದೆ... ಬನವಾಸಿ ಬಳಗವು ನಮ್ಮ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಲು ಮಿಂಬಲೆಯಲ್ಲಿ ಒಂದು ಸಹಿ ಅಭಿಯಾನ ಆರಂಭಿಸಿದೆ. ನೀವು ಅದಕ್ಕೆ ಸಹಿ ಹಾಕಿರಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ. ಈ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ನಾವು ತಲುಪಿಸುತ್ತೇವೆ.

ಪಿಟಿಷನ್ನಿನ ಕೊಂಡಿ: http://chn.ge/1dJ4zsv

5 ಅನಿಸಿಕೆಗಳು:

G B Sathish Kumar ಅಂತಾರೆ...

You needed a better advocate. Possibly, the one who represented us in this issue for not competent enough. the same thing happened during Cauvery. May this has continued.

Unknown ಅಂತಾರೆ...

How disloyal one can be... after making crores of revenue from a state a firm goes to Court against usage of language of the land ....and I am today very much saddened by helpless situation we are in ...Today ,more than ever, there is a need of a regional party which truly stands as the guardian of our language ,culture ,people . And there is need for us to introspect the situation we are in today and do whatever it takes to uphold the dignity of our people,language and state

Srinivas Raj Urs ಅಂತಾರೆ...

I oppose this...this is our state n Kannada is the language is easily understand middle class people... Mr judge ...please understand all are not expert and studied in English medium.... How about rural people.... Yepppppa...yavanama judgment kottidu

Unknown ಅಂತಾರೆ...

I oppose totally court decision

Unknown ಅಂತಾರೆ...

I oppose totally court decision

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails