37 ಜನ ಸತ್ರೂ ನಿಷೇಧ ಮಾಡೋಕಾಗಲ್ಲ !
ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಸುಮಾರು 20 ಜನರು ದೈಹಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 18 ಜನರು, ದೈಹಿಕ ತೊಂದರೆಗಳನ್ನು ಸಹಿಸಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಎದೆ ನಡುಗಿಸೋ ಸುದ್ಧಿನಾ ಈ ವರದಿ ಹೇಳುತ್ತೆ. ಇಂತಹದೊಂದು ಔಷಧಿಯಿಂದ ಇಷ್ಟೆಲ್ಲ ತೊಂದರೆ ಆದಾಗ ಸಹಜವಾಗಿ ಅದನ್ನ ನಿಷೇಧಿಸೋ ಅಧಿಕಾರ ನಮ್ಮ ರಾಜ್ಯ ಸರ್ಕಾರಕ್ಕೆ ಇರಬೇಕಿತ್ತು ಅನ್ಸಲ್ವಾ ಗುರು ? ತನ್ನ ರಾಜ್ಯದ ಜನರ ಸಾವು ನೋವಿಗೆ ಕಾರಣವಾಗ್ತಿರೋ ಒಂದು ಕೀಟನಾಶಕವನ್ನು ನಿಷೇಧ ಮಾಡಬೇಕು ಅನ್ನೋ ನಿರ್ಧಾರ ತಗೊಳ್ಳೊಕೂ, ಒಂದು ರಾಜ್ಯ 2000 ಕಿ.ಮೀ ಆಚೆ ಇರೋ ದೆಹಲಿಗೆ ಹೋಗಿ, ದೆಹಲಿ ದೊರೆಗೆ ವಿನಂತಿ ಮಾಡ್ಕೊಬೇಕು ಅನ್ನೋ ಸ್ಥಿತಿ ಇದ್ರೆ, ಅದು ಹೇಗೆ ಆ ರಾಜ್ಯ ಸರ್ಕಾರ ತನ್ನ ಜನರಿಗೆ ಒಂದು ಪರಿಣಾಮಕಾರಿಯಾದ ಆಡಳಿತ ನೀಡೋಕೆ ಆಗುತ್ತೆ ಗುರು ?
ರಾಜ್ಯದ ತೆಕ್ಕೆಗೆ ಬರಬೇಕು
ಟ್ರಾಫಿಕ್ ಅಲ್ಲಿ ರೂಲ್ಸ್ ಮುರಿದರೆ ಹಾಕುವ ದಂಡದಿಂದ ಹಿಡಿದು, ಜೀವ ತೆಗೆಯೋ ಒಂದು ಕೀಟನಾಶಕದ ಬಳಕೆ ನಿಲ್ಲಿಸೋಕು ದಿಲ್ಲಿ ಕಡೆ ನೋಡಬೇಕು ಅನ್ನೋ ವ್ಯವಸ್ಥೆಯಿಂದ ರಾಜ್ಯಗಳ ಆಡಳಿತ ಅನ್ನೋದು ನಿಜಕ್ಕೂ ಜಿಡ್ಡುಗಟ್ಟಿ, ನಿಂತ ನೀರಾಗುತ್ತೆ ಅನ್ಸಲ್ವಾ ಗುರು? ಇಂತಹ ಅಧಿಕಾರಗಳು ರಾಜ್ಯ ಸರ್ಕಾರಗಳ ತೆಕ್ಕೆಗೆ ಬಂದಾಗಲಷ್ಟೇ ನಿಜಕ್ಕೂ ಜನರಿಗೆ ಅನುಕೂಲ ಕಲ್ಪಿಸೋ, ವೇಗದ ನಿರ್ಧಾರ ತೆಗೆದುಕೊಳ್ಳುವ ಪರಿಣಾಮಕಾರಿಯಾದ ಆಡಳಿತ ಕೊಡೊಕೆ ಸಾಧ್ಯ. ನೀನೇನ್ ಅಂತೀಯಾ ಗುರು?
dakshina kannada jilleyalli raita horata annodu illave ilva?
ReplyDeleteyaavaga nodidru mateeya galabe maado yuvakarige,, intaha vishyavella gamanakke baralva?
ಇದರ ಬಗ್ಗೆ ಸುಮಾರು ೧೫ ವರ್ಶಗಳ ಹಿಂದೆ ಸುಧಾದಲ್ಲಿ ಬಂದಿತ್ತು. ಆಗಿಂದ ಈಗಿನವರೆಗೆ ಏನೂ ಸುಧಾರಣೆ ಆಗಿಲ್ಲ... ತುಂಬಾ ನೋವಿನ ಸಂಗತಿ ಇದು
ReplyDeletevery sad ting, i think what foolish govt.
ReplyDelete