ಬನವಾಸಿಯೆಂಬ ಹಸಿರ ಗುಡಿ...
ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ 22 ಕಿಮೀ ದೂರದಲ್ಲಿದೆ ಬನವಾಸಿ. ಇಲ್ಲಿಗೆ ಶಿವಮೊಗ್ಗೆಯ ಸೊರಬದಿಂದಲೂ ಹೋಗಬಹುದಾಗಿದೆ. ಬನವಾಸಿ ಬಹಳ ಪುಟ್ಟದಾದ ಊರು. ಇಲ್ಲಿಗೆ ಹೋಗೋ ರಸ್ತೆಯೂ ಪುಟ್ಟದು. ಏರಿಳಿತಗಳ, ತಿರುವುಗಳ, ಹಳ್ಳಕೊಳ್ಳಗಳ ರಸ್ತೆ ಇದು. ಆದಿಕವಿ ಪಂಪ ಜೈನ ಮತಾವಲಂಬಿ ಎಂಬುದನ್ನು ನೆನಪಿಸುವಂತೆ ಜೈನರ ಕಟ್ಟಡಗಳು, ಜೈನರ ಹೆಸರಿನ ಬೀದಿಗಳು ಅನೇಕವು. ಚಾಲುಕ್ಯರ ದೊರೆ ಅರಿಕೇಸರಿಯ ಕಾಲದಲ್ಲೇ ಇಲ್ಲಿ ಜೈನಮತ ಪ್ರಾಬಲ್ಯ ಹೊಂದಿತ್ತಂತೆ. ಇಂಥಾ ಬನವಾಸಿ ಪ್ರಕೃತಿಯ ರಮ್ಯ ಸೊಬಗಿನ ನಡುವೆ ಹಸಿರನುಟ್ಟು ಕಂಗೊಳಿಸುತ್ತಿದೆ. ಮಲೆನಾಡಿನ ಸೊಗಡಿನ ಈ ಊರಿನಲ್ಲಿ ನೋಡಲು ಇರುವ ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇಲ್ಲಿರುವುದು ಒಂದು ಗುಡಿ. ಮಧುಕೇಶ್ವರನ ಗುಡಿ. ಬಲು ಸುಂದರವಾದ ಕೆತ್ತನೆಯ ಪೀಠವನ್ನು ಈ ಲಿಂಗ ಹೊಂದಿದೆ.
ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಲಿ!
ಈ ಮಂಚವನ್ನು ಕಡೆದ ಕಾಲ ಕಾಲ ಯಾವುದೋ? ಈ ಗುಡಿಯನ್ನು ಕಟ್ಟಿದ ಕಾಲ ಯಾವುದೋ? ಈ ಜಾಗದ ಐತಿಹಾಸಿಕ ಮಹತ್ವವೇನು? ಇತ್ಯಾದಿ ಮಾಹಿತಿಗಳನ್ನು ಸಂದರ್ಶಕರಿಗೆ ಒದಗಿಸಬೇಕಾದ ಅಗತ್ಯವಿದೆ. ಕನ್ನಡಿಗರ ಸ್ಪೂರ್ತಿಕೇಂದ್ರವನ್ನಾಗಿ ಬನವಾಸಿಯನ್ನು ರೂಪಿಸಬೇಕಾಗಿದೆ. ಈಗೆಲ್ಲಾ ಕದಂಬೋತ್ಸವ ಎನ್ನುವ ಕಾರ್ಯಕ್ರಮ ವರ್ಷಕ್ಕೊಮ್ಮೆ ನಡೆಯುತ್ತಿದೆ. ಆದರೂ ಇಷ್ಟು ಸಾಲದು. ಈ ಜಾಗವನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕಾಗಿದೆ. ಉತ್ತಮ ಹೋಟೆಲ್ ಸೌಲಭ್ಯ, ಒಳ್ಳೇ ರಸ್ತೆಗಳು, ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿ ಸಿಗುವಂತೆ ಮಾಡುವುದು ಮುಂತಾದ ಅನೇಕ ಕೆಲಸಗಳನ್ನು ಪ್ರವಾಸೋದ್ಯಮ ಇಲಾಖೆಯು ಕೂಡಲೇ ಕೈಗೆತ್ತಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಬನವಾಸಿಗೆ ಹೋಗಿಬಂದರೊಮ್ಮೆ ಕನ್ನಡಿಗರ ಮೈ ಮಯೂರನ ಪರಾಕ್ರಮ, ಪಂಪನ ಕಾವ್ಯವನ್ನು ನೆನೆದು ಪುಳಕಗೊಳ್ಳುವುದು ಖಚಿತ. ನೀವು ನೋಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಹೋಗಿ ಬನ್ನಿ ಗುರುಗಳೇ.
7 ಅನಿಸಿಕೆಗಳು:
ಹೌದು. ಬನವಾಸಿಯ ಮಧುಕೇಶ್ವರ ದೇವಸ್ಥಾನವು ಅತಿ ಸುಂದರವಾಗಿದೆ. ನಾವು ಹೋದ ಅಕ್ಟೋಬರ್ನಲ್ಲಿ ಹೋಗಿದ್ದೆವು. ತುಂಬಾ ಜೋರಾಗಿ ಮಳೆ ಸುರಿಯುತ್ತಿತ್ತು. ನಾವೆಲ್ಲರೂ ಕಾರಿನಿಂದ ಇಳಿದು ದೇವಸ್ಥಾನದ ಬಳಿ ಹೋಗಲು ಕಷ್ಟವಾಯಿತು. ಅಷ್ಟು ಮಳೆ ಬರುತ್ತಿತ್ತು. ಅಲ್ಲಿದ್ದ ತ್ರಿಲೋಕ ಮಂಟಪವು ಹಾಗು ಕಲ್ಲಿನ ಮಂಚ ಚೆನ್ನಾಗಿದೆ.
ಅಲ್ಲಿ ತೆಗೆದ ಕೆಲವು ಚಿತ್ರಗಳು: http://picasaweb.google.co.in/prasannakannadiga/RydYRG#
http://prasca.blogspot.com/search?updated-max=2009-11-26T05%3A52%3A00-08%3A00&max-results=7
ಮೈ ಜುಮ್ ಎನಿಸಿತಿದೆ ಗುರು! ಆ ಜಾಗದಲ್ಲಿ ಇತಿಹಾಸದಲ್ಲಿ ಅಂದಿನ ದಿನ, ಯಾವುದೋ ರಾಜನ ದರಬಾರಲ್ಲೇ ನಿಂತಂತೆ ರೋಮಾಂಚನ ಆಗ್ತಿದೆ ನನಗೆ! ನಮ್ಮ ಇತಿಹಾಸದ ಹಿರಿಮೆ ಸಂಪೂರ್ಣ ಇವತ್ತು ಕೂತು ತಿಳಿದುಕೊಳ್ಳೋ ಮಹದಾಸೆ ಹುಟ್ಟುತ್ತಿದೆ ಗುರು.. ಬರ್ತೀನಿ..
inta jaga gala bagge jana adyake publicity kodalvo a MadhukeshwaranE balla.
ದಕ್ಷಿಣ ಕಾಶಿ ,ಜಯಂತಿ ಪುರ ಅನ್ನಿಸಿದ ಬನವಾಸಿ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ದಕ್ಷಿಣ ಕಾಶಿ ,ಜಯಂತಿ ಪುರ ಅನ್ನಿಸಿದ ಬನವಾಸಿ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ದಸರೆಯ ರಜದಲ್ಲಿ ಬೈಕ್ ಪ್ರವಾಸ ಹೋಗಿದ್ದೆವು
ಸಿರಸಿ ಇಂದ ಬನವಾಸಿಗೆ ಹೋಗುವಾಗ, ಅಲ್ಲಿನ ರಮಣೀಯ ಪರಿಸರ ಕಂಡು ಪಂಪನ ಈ ವಾಕ್ಯಗಳು ಜ್ಞಾಪಕ ಬಂದವು
"ಚಾಗದ ಭೋಗದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರಮಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವದು ನಂದನವನದೊಳ್ ಬನವಾಸಿದೇಶದೊಳ್||"
ಅಂದಿನ ಬನವಾಸಿ ದೇಶ(ಈಗಿನ ಕನ್ನಡ ದೇಶ ) ದಲ್ಲಿ ಹುಟ್ಟಿದ ನಾವೇ ದನ್ಯರು .....
ಬನವಾಸಿಯ ದೆವಸ್ತಾನದ ಕೆತ್ತನೆ ಬಹಳ ವಿಬಿನ್ನವಾಗಿದೆ...
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!