ಅಯ್ಯೋ! ದಳಕ್ಕೆಂಥಾ ಗತಿ ಬಂತು!!

 


ಒಂದು ರಾಷ್ಟ್ರ ಒಂದು ಚುನಾವಣೆಯೆನ್ನುವ ಪ್ರಾದೇಶಿಕ ಪಕ್ಷಗಳ ಸಾವಿನ ಕುಣಿಕೆಯನ್ನು ಮುತ್ತಿಕ್ಕಿ ಬೆಂಬಲಿಸುತ್ತಿರುವ ಜನತಾ ದಳದವರ ಅಸಹಾಯಕತೆಯನ್ನು ಕಂಡರೆ ಅಯ್ಯೋ ಅನ್ನಿಸುತ್ತಿಲ್ವಾ ಗುರೂ? ಪಾಪ, ಅದರ ಮುಖ್ಯಸ್ಥರು ಕೆಲವು ಬೇಡಿಕೆಗಳನ್ನೂ ಇಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಧಕ್ಕೆಯಾಗಬಾರದು, ಸಮ್ಮಿಶ್ರ ಸರ್ಕಾರಗಳಿಗೆ ರಕ್ಷಣೆಯ ಭರವಸೆ ನೀಡಬೇಕು ಅನ್ನೋದು ಅವರ ಬೇಡಿಕೆ.

ಎರಡು ಪಕ್ಷದ ರಾಜಕಾರಣದೆಡೆಗೆ!


ಹಾಗೆ ನೋಡಿದರೆ. ’ಹಣ ಉಳಿಯುತ್ತೆ - ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ’ ಮುಂತಾದ ಕಾರಣಗಳನ್ನು ’ಒಂದು ರಾಷ್ಟ್ರ ಒಂದು ಚುನಾವಣೆ’ಗೆ ಸಮರ್ಥನೆಯಾಗಿ ನೀಡಲಾಗುತ್ತದೆ. ಆದರೆ ಅವು ಕೇವಲ ಹೇಗೆ "ನೆಪ"ಗಳಾಗಿವೆ ಎಂಬುದನ್ನು ಇಲ್ಲಿ ಓದಿ. 

ಮಹಾನ್ ರಾಜಕೀಯ ಮುತ್ಸದ್ದಿಗಳಾದ ಶ್ರೀ ಕುಮಾರಸ್ವಾಮಿಯವರಿಗಾಗಲೀ, ಅವರ ಪಿತಾಶ್ರೀಯವರೂ, ರಾಜಕೀಯ ಭೀಷ್ಮರೂ (ವಯಸ್ಸಿನಲ್ಲಿ) ಆಗಿರುವ ಶ್ರೀ ದೇವೇಗೌಡರಿಗಾಗಲೀ ಇವೆಲ್ಲಾ ತಿಳಿಯುವುದಿಲ್ಲ ಎಂಬುದನ್ನು ಯಾರದರೂ ನಂಬಲು ಸಾಧ್ಯವೇ? ಪಕ್ಷವನ್ನು ಗಟ್ಟಿಗೊಳಿಸಬೇಕೆಂದರೆ ಅದು ಉಳಿಯಬೇಕು ಸರಿ. ಆದರೆ ಉಳಿಸಿಕೊಳ್ಳುವ ಭರದಲ್ಲಿ ಪಕ್ಷಕ್ಕೆ ಕುಣಿ ತೆಗೆಯಲು ಇವರು ಮುಂದಾಗಿಬಿಟ್ಟರೇ ಎಂಬುದನ್ನು ಬೆಂಬಲಿಗರು ಯೋಚಿಸಬೇಕಿದೆ. ನೀನೇನಂತೀಯಾ ಗುರೂ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails