ನೀವು ಕನ್ನಡ ಶಿವಯ್ಯ ಆಗ್ತೀರಾ?

 


ಅಂತೂ ಸಿದ್ದರಾಮಯ್ಯನವರ ಪರ್ವ ಮುಗಿದಂಗಾಯ್ತು ಗುರೂ! ಕನ್ನಡನಾಡಿಗೆ ಹೊಸ ಸಾರಥಿಯಾಗಿ ಶ್ರೀ ಡಿ. ಕೆ ಶಿವಕುಮಾರ್ ಅವರು ಇನ್ನೇನು ನೇಮಕವಾಗಲಿದ್ದಾರೆ.. ಅಭಿನಂದನೆಗಳು ಅವರಿಗೆ!


ಕನ್ನಡ ರಾಮಯ್ಯ!

ಶ್ರೀ ಸಿದ್ದರಾಮಯ್ಯನವರಿಗೆ ಅವರ ಕೆಲವುಕನ್ನಡ ಪರವಾದ ಕೆಲಸಗಳಿಂದ ಕನ್ನಡ ರಾಮಯ್ಯ ಅಂತಾರೆ. ಬೆಂಗಳೂರಿನ ನಮ್ಮ ಮೆಟ್ರೋ ಹೋರಾಟ ಗೆಲ್ಲೋದಕ್ಕೆ ಕಾರಣವೇ ಅವರು. ಇತ್ತೀಚಿಗೆ ಜಾರಿಯಾದ ನಾಮಫಲಕ ಕಾಯ್ದೆಯು ಜಾರಿಯಾದದ್ದೂ ಇವರದ್ದೇ ಕಾಲದಲ್ಲಿ. ಕನ್ನಡ ನಾಡಿನ ಕಲಿಕೆಯಲ್ಲಿರುವ ತ್ರಿಭಾಷಾನೀತಿಯನ್ನು ಕೈಬಿಟ್ಟು ದ್ವಿಭಾಷಾನೀತಿಯ ಜಾರಿಗೆ ಒಲವು ತೋರಿಸಿದವರು ಅವರು. ಕನ್ನಡದ ಕೆಲಸಗಳು ಸಾಕಷ್ಟಿದ್ದರೂ, ಕೆಲವನ್ನಾದರೂ ಧೈರ್ಯವಾಗಿ ಮಾಡಿದ್ದು ಶ್ರೀ ಸಿದ್ದರಾಮಯ್ಯನವರು. ಹೀಗಾಗಿ ಅವರನ್ನು ತುಸುಮಟ್ಟಿಗಾದರೂ ಕನ್ನಡ ರಾಮಯ್ಯ ಎನ್ನಬಹುದು...


ನೀವಾಗಿ ಕನ್ನಡ ಶಿವಯ್ಯ!

ಕನ್ನಡ ಪರ ಯಾವುದು, ಕನ್ನಡ ವಿರೋಧ ಯಾವುದು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು, ಕನ್ನಡಿಗರ ಪರವಾಗಿ ಕೆಲಸ ಮಾಡಲು ಡಿ ಕೆ ಶಿವಕುಮಾರ್ ಅವರು ಮನಸ್ಸು ಮಾಡಬೇಕಿದೆ. ಕನ್ನಡಪರ ದನಿಗಳಿಗೆ ಕಿವಿಯಾಗಬೇಕಿದೆ. ಮೊದಲಿಗೆ, ಏನಿಲ್ಲದಿದ್ದರೂ ತ್ರಿಭಾಷಾನೀತಿಯಂಥಾ ಕನ್ನಡ ವಿರೋಧಿ ನೀತಿಗಳನ್ನು ಕೈಬಿಡಲು ಮನಸ್ಸು ಮಾಡಬೇಕಿದೆ. 

ಈಗ ನಾಡಿನ ಮುಖ್ಯಮಂತ್ರಿಗಳಾಗಲಿರೋ ಶಿವಕುಮಾರ್ ಅವರನ್ನು ಎಲ್ಲಾ ಕನ್ನಡಪರರೂ ಕೇಳೋದು ಒಂದೇ ಪ್ರಶ್ನೆ! ನೀವಾಗ್ತೀರಾ, ಕನ್ನಡ ಶಿವಯ್ಯ? ಅವರೆಲ್ಲರ ಆಶಯವೂ ಒಂದೇ... ನೀವಾಗಿ ಕನ್ನಡ ಶಿವಯ್ಯ!

ನಿನ್ನದೂ ಇದೇ ಮಾತಲ್ವಾ ಗುರೂ!!   

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails