ರೈಲ್ವೆ ಇಲಾಖೆ ಇರೋದು ಕರ್ನಾಟಕಕ್ಕೆ ವಲಸಿಗರನ್ನ ತಂದು ತುಂಬಕ್ಕಾ?

ಕರ್ನಾಟಕದಲ್ಲಿ ರೈಲ್ವೇ ಇಲಾಖೆ ಕನ್ನಡಿಗನಿಗೆ ಮಾಡ್ತಿರೋ ಅನ್ಯಾಯ ಇತ್ತೀಚಿನ ’ಡಿ’-ಗುಂಪಿನ ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಮೂಲಕ ಬಯಲು ಆಗಿದೆಯಷ್ಟೆ? ಈ ಸಂದರ್ಭದಲ್ಲಿ ಇಂತಹ ಅನ್ಯಾಯಗಳ ಒಂದು ಸರಪಳಿಯನ್ನೇ ಇತ್ತೀಚಿನ ಇತಿಹಾಸದಲ್ಲಿ ಕಾಣ್ಬೋದು. ಈಗಾಗ್ಲೇ ಇಲಾಖೆಯು ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಕೈಗೆತ್ತಿಕೊಂಡಿರೋ ಯಾವುದೇ ಯೋಜನೆಯ ಲಾಭವೂ ಕರ್ನಾಟಕಕ್ಕೆ ಸಂದಿಲ್ಲ. ಇಂತಹ ಅನ್ಯಾಯಗಳ ಹಿಂದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕರ್ನಾಟಕಕ್ಕೆ ಹೊರರಾಜ್ಯಗಳ ಜನರ ವಲಸೆ ಮಿತಿಮೀರಿಹೋಗಿದೆ ಗುರು!

ಅಲ್ಲಾ, ಬೆಂಗಳೂರು ಮಂಗಳೂರುಗಳ ಮಧ್ಯ ರೈಲು ಹಾಕಿ, ಹಾಕಿ ಅಂತ ವರ್ಷಗಳಿಂದ ಬಡ್ಕೊಂಡ ಮೇಲೆ, ಏನೋ ದೊಡ್ಡ ಕೆಲ್ಸ ಮಾಡಿದ ಹಾಗೆ ವರ್ಷಗಳ ನಂತರ ಈ ರೈಲನ್ನ ಬಿಡುಗಡೆ ಮಾಡಿದ್ರು ನಮ್ಮ ಲಾಲೂ ಸಾಹೇಬ್ರು. ಆದ್ರೆ ಮಂಗಳೂರಿಗೆ ಈಗಾಗ್ಲೇ ಹಲವಾರು ವರ್ಷಗಳಿಂದ ಚೆನ್ನೈಯಿಂದ, ಕೇರಳದಿಂದ ಹಲವಾರು ರೈಲುಗಳು ಅಲ್ಲಿಯ ಜನರನ್ನ ತಂದು ಸೇರಿಸ್ತಿದೆ ಅಂತ ನಿಮಗೆ ಗೊತ್ತಾ? ಇದರಿಂದ ತಮಿಳುನಾಡಿನ ಹಾಗೂ ಕೇರಳದ ಜನರಿಗೆ ಉಪಯೋಗ ಆಗಿದೆ ಹೊರತು ಕನ್ನಡದವರಿಗೆ ಒಂದು ಬಿಡಗಾಸು ಉಪ್ಯೋಗವೂ ಇಲ್ಲ. ಆದರೆ ಇಂತಹ ಬೆಳವಣಿಗೆಗಳಿಂದ ಹುಟ್ಟಿರೋ ವಲಸೆ ಸಮಸ್ಯೆಯಿಂದ ಮಂಗಳೂರಿನ ಜನರಿಗೆ ಆಗ್ತಿರೋ ಕಷ್ಟಗಳು ಮಾತ್ರ ತಪ್ಪಿದ್ದಲ್ಲ ಗುರು (ಹೆಚ್ಚಿನ ಓದಿಗೆ ಓದಿ: 1, 2)

ಇತ್ತೀಚೆಗೆ ಬೆಂಗಳೂರಿಗೆ ದೂರದ ರಾಜಾಸ್ಥಾನದ ಅಜ್ಮೀರದಿಂದ ಬರುತ್ತಿದ್ದ ರೈಲನ್ನು ಮೈಸೂರಿನವರೆಗೂ ವಿಸ್ತರಣೆ ಮಾಡ್ಸಿದೀವಿ ಅಂತ ಇಲ್ಲಿಯ ರೈಲ್ವೇ ಇಲಾಖೆಯೋರು ಹೆಮ್ಮೆಯೇನೋ ಪಟ್ರು, ಆದ್ರೆ ಇದ್ರಿಂದ ಕರ್ನಾಟಕಕ್ಕೆ ಯಾವ ಮಣ್ಣು ಲಾಭ ಆಯ್ತು? ಬೆಂಗಳೂರು ಮೈಸೂರಿನಲ್ಲಿ ಇನ್ನಷ್ಟು ಹೆಚ್ಚಾದ ರಾಜಾಸ್ಥಾನ ಮೂಲದ ದಿನಗೂಲಿ ಕೆಲಸಗಾರರು. ಅಂದು ಅಲ್ಲಿ ವಲಸಿಗ ದಿನಗೂಲಿ ಕೆಲಸಗಾರರು, ಇಂದು ರಾಜ್ಯದೆಲ್ಲೆಡೆ ಡಿ-ಗುಂಪಿಗೆ ಬಿಹಾರಿ ವಲಸಿಗರು! ಆದ್ರೆ ವಾಣಿಜ್ಯಕ್ಕೆ ಹೆಸರಾದ ಮಂಗಳೂರು ಮತ್ತೆ ಹುಬ್ಬಳ್ಳಿಯ ಮಧ್ಯ ಇನ್ನೂ ಇಲ್ಲದ ರೈಲಿಗಿಂತಲೂ ಈ ಅಜ್ಮೀರದ ರೈಲು ಮುಖ್ಯವೇ ಗುರು?

ಕರ್ನಾಟಕದಲ್ಲಿ ಕನ್ನಡಿಗನಿಗೆ ಅನ್ಯಾಯವಾದಂತಹ ಇಂತಹ ನೂರಾರು ಉದಾಹರಣೆಗಳು ಕಂಡು ಬರತ್ತೆ ಗುರು! ಇವೆಲ್ಲದರ ಮಧ್ಯ ಕೇಂದ್ರ ರೈಲ್ವೇ ಇಲಾಖೆಯು ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಸತತವಾಗಿ ವಲಸಿಗರನ್ನು ತಂದು ಹಾಕುವ ಬಂಡಿಯಾಗಿ ತೋರಿದೆ ಗುರು! ಕರ್ನಾಟಕದಲ್ಲಿ ಕೇಂದ್ರ ಸ್ವಾಮ್ಯದ ರೈಲ್ವೇ ಇಲಾಖೆಯ ಕಚೇರಿಗಳಲ್ಲಿ ಸುಮಾರು ಹೊರರಾಜ್ಯದ ಜನರು ಕೆಲ್ಸ ಮಾಡ್ತಿರೋದನ್ನ ನೋಡಿದ್ರೇ ಈ ಬಿಹಾರಿಗಳಿಗೆ ಮಣೆ ಹೆಂಗೆ ಸಿಕ್ತು ಅಂತ ಗೊತ್ತಾಗತ್ತೆ ಅಲ್ವ ಗುರು?!

2 ಅನಿಸಿಕೆಗಳು:

Anonymous ಅಂತಾರೆ...

neevu helodu sari guru
laloo tamma rajya davarige esthu anukoola madikodtha iddarey
namma dhrusthi inda adu tappu aadru avara janarige adu sari
namma rajyadina mantrigalada kelavaru namma janrannanu mareyuttharey yaake ??
maaji railway sachiva jaffer sharif maatra nemmadi yagi niddhey madiddu bittrey enu madilla

Anonymous ಅಂತಾರೆ...

Yes, all these are because of our idiot Karnataka politicians. More pathetic story is, Bijapur-Bagalkot has only meter-gauge railway track. More importantly our Karnataka politicians (??) are not aggressive enough to ask questions in Lok sabha. If you want to see "Nara-satta Rajakaranaru", please see Karnataka politics. Look at other state MP's. Mani-Shankara Iyyar, Chidambaram, Venkayya Naidu... all are from either TN or AP.... hence they are able to hi-light there state, so that they are able to get good amount of budget money for their state... Looking at Karnataka, (Even though we have best intellectual persons in the country, like Narayana Murty who created hell out of job opportunities not only for kannadigas, but also for whole country), our politics and politicians sucks..... enemadodu guru, "Kurigalu saaar kurigalu..."...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails