

ಈ ತೀರ್ಪನ್ನು ರಾಜ್ಯ ಸರ್ಕಾರ ಒಪ್ಪಿ ಸ್ವಾಗತಿಸಿರೋದು ಭಾಳಾ ಒಳ್ಳೇ ಸುದ್ದಿ.

ಅಂದ್ರೆ "ಕೇಂದ್ರೀಯ ಶಾಲೆಗಳಾಗಲೀ ಮತ್ತೊಂದಾಗ್ಲೀ ಕರ್ನಾಟಕದಲ್ಲಿದ್ದ ಮೇಲೆ ನಮ್ಮ ರಾಜ್ಯಸರ್ಕಾರದ ಶಿಕ್ಷಣ ಕಾಯ್ದೆಯ ವ್ಯಾಪ್ತಿಯಿಂದ ತಾನು 1998ರಲ್ಲಿ ಹೊರಗಿಟ್ಟಿದ್ದು ತಪ್ಪು... ಆ ತಪ್ಪು ಈಗ ತಿದ್ಕೊಳ್ಳಕ್ಕೆ ಇದೊಂದು ಒಳ್ಳೇ ಅವಕಾಶ" ಅಂತಾಯ್ತು. ಭಾಳಾ ಒಳ್ಳೇ ತೀರ್ಮಾನಾನ ನಮ್ಮ ರಾಜ್ಯಸರ್ಕಾರ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಸಚಿವಾಲಯ ತೆಗೆದುಕೊಂಡಿದೆ. ಸರಿ ಹಾಗಾದ್ರೆ ಈ ಕಾಯ್ದೆಯ ಇನ್ಯಾವ ಅಂಶಗಳನ್ನು ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ರಾಜ್ಯಸರ್ಕಾರ ಜಾರಿಮಾಡಬಹುದು ಸ್ವಲ್ಪ ನೋಡೋಣ.

ಅಂದ್ರೆ "ಕೇಂದ್ರೀಯ ಶಾಲೆಗಳಾಗಲೀ ಮತ್ತೊಂದಾಗ್ಲೀ ಕರ್ನಾಟಕದಲ್ಲಿದ್ದ ಮೇಲೆ ನಮ್ಮ ರಾಜ್ಯಸರ್ಕಾರದ ಶಿಕ್ಷಣ ಕಾಯ್ದೆಯ ವ್ಯಾಪ್ತಿಯಿಂದ ತಾನು 1998ರಲ್ಲಿ ಹೊರಗಿಟ್ಟಿದ್ದು ತಪ್ಪು... ಆ ತಪ್ಪು ಈಗ ತಿದ್ಕೊಳ್ಳಕ್ಕೆ ಇದೊಂದು ಒಳ್ಳೇ ಅವಕಾಶ" ಅಂತಾಯ್ತು. ಭಾಳಾ ಒಳ್ಳೇ ತೀರ್ಮಾನಾನ ನಮ್ಮ ರಾಜ್ಯಸರ್ಕಾರ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಸಚಿವಾಲಯ ತೆಗೆದುಕೊಂಡಿದೆ. ಸರಿ ಹಾಗಾದ್ರೆ ಈ ಕಾಯ್ದೆಯ ಇನ್ಯಾವ ಅಂಶಗಳನ್ನು ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ರಾಜ್ಯಸರ್ಕಾರ ಜಾರಿಮಾಡಬಹುದು ಸ್ವಲ್ಪ ನೋಡೋಣ.
ಶಿಕ್ಷಣ ಕಾಯ್ದೆ 1983ರಲ್ಲೇನಿದೆ?
ಈ ಕಾಯ್ದೆಯಂತೆ ರಾಜ್ಯಸರ್ಕಾರ ತಾನು ನಿಗದಿ ಪಡಿಸಬಹುದಾದ ವಿಷಯಗಳಲ್ಲಿ 7(f) ಶುಲ್ಕ, ದೇಣಿಗೆ ಬಗ್ಗೆ ಹೇಳುವಂತೆ 7(c)ಯಲ್ಲಿ Medium of instruction ಅಂತಾ ಇದೇ ಗುರೂ. ಜೊತೇಲಿ objectives of education ಎಂಬ ನಿಯಮದಡಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಒಂದು ಹಂತದ ಪ್ರಾವೀಣ್ಯತೆಯನ್ನು ತಂದುಕೊಡಬೇಕೆಂದು ಇದೆ.
ಅಂದ್ರೆ ಕರ್ನಾಟಕದ ಸಿಬಿಎಸ್ಇ ಮುಂತಾದ ಶಾಲೆಗಳಲ್ಲಿ ಕಲಿಕಾ ಮಾಧ್ಯಮ ಕನ್ನಡ ಅಂತಾ ಮಾಡೊ ಅಧಿಕಾರ, ಸಮಾಜ ಶಾಸ್ತ್ರದಲ್ಲಿ ಕನ್ನಡನಾಡಿನ ಇತಿಹಾಸ ಹೇಳಿಕೊಡಿ ಅನ್ನಕ್ಕೆ, ನಮ್ಮ ನಾಡಿನ ಹಬ್ಬ ಹರಿದಿನ ಸಂಸ್ಕೃತಿಗಳನ್ನು ಪರಿಚಯಿಸಿ ಅನ್ನಕ್ಕೆ ಕರ್ನಾಟಕ ರಾಜ್ಯಸರ್ಕಾರಕ್ಕೆ ಅಧಿಕಾರ ಇದೆ ಅಂತಾಯ್ತು. ಅಷ್ಟ್ಯಾಕೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಬೇಕೂಂದ್ರೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗಬಲ್ಲ ಹುದ್ದೆಯ ಪೋಷಕರ ಇಂತಿಷ್ಟು ಮಂದಿ ಮಕ್ಕಳು ಇರಬೇಕು ಅನ್ನೋ ಒಂದೇ ಒಂದು ಚಾಲ್ತಿಯಲ್ಲಿರೋ ನಿಯಮಾನ ಸರಿಯಾಗಿ ಜಾರಿಮಾಡ್ಬುಟ್ರೆ ಸಾಕು. ಕಾಗೇರಿ ಸಾಹೇಬ್ರೇ... ಒಸಿ ಮನಸ್ಸು ಮಾಡ್ತೀರಾ?
1 ಅನಿಸಿಕೆ:
ಇದು ಒಳ್ಳೆ ಸುದ್ದಿ. ಇಗಲಾದ್ರು ಸರ್ಕಾರ ಕನ್ನಡಿಗರ ಹಕ್ಕುಗಳನ್ನು ಕಾಪಾಡೊ ನಿಟ್ಟಿನಲ್ಲಿ ಕೆಲ್ಸ ಮಾಡುತ್ತೇನೋ!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!