"ಭಾರತಕ್ಕೊಪ್ಪೋ ಭಾಷಾನೀತಿ" - ಬಳಗದ ಕಾರ್ಯಕ್ರಮಕ್ಕೆ ಬನ್ನಿ..

ಸೆಪ್ಟೆಂಬರ್ ಹತ್ತರಂದು ಬನವಾಸಿ ಬಳಗವು ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಈ ಅಕ್ಕರೆಯ ಕರೆಯೋಲೆ. ಅಂದಿನ ಕಾರ್ಯಕ್ರಮದಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಅತಿಥಿಗಳು ಮಾತನ್ನಾಡಲಿದ್ದಾರೆ. ಭಾರತದ ಭಾಷಾನೀತಿಯ ಬಗ್ಗೆ, ಅದರ ಇಂದಿನ ಸ್ವರೂಪ, ಅದರಿಂದಾಗಿರುವ ಪರಿಣಾಮಗಳು, ಬದಲಾವಣೆಯ ಅಗತ್ಯಗಳು ಮತ್ತು ಸರಿಯಾದ ಭಾಷಾನೀತಿಯ ಬಗ್ಗೆ ಅಂದಲ್ಲಿ ಮಾತುಕತೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಹಿಂದೀ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಅನೇಕ ಮೈನವಿರೇಳಿಸುವ ವಿಷಯಗಳನ್ನು ಒಳಗೊಂಡಿರುವ ಈ ಹೊತ್ತಗೆಯಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಚರ್ಚಿಸಲಾಗಿದೆ. ಕನ್ನಡದಲ್ಲಿ ಹಿಂದೆಂದೂ ಇರದ ಹೊಸ ವಿಷಯಗಳನ್ನು ಈ ಹೊತ್ತಗೆ ಒಳಗೊಂಡಿದೆ. ಬನವಾಸಿ ಬಳಗಕ್ಕಿದು ಮಹತ್ವದ ಕಾರ್ಯಕ್ರಮ. ನೀವು ನಮ್ಮೊಡನೆ ಇದ್ದರೆ ನಮಗೆ ಹೆಚ್ಚು ಖುಷಿ. ಬನ್ನಿ... ಕಾರ್ಯಕ್ರಮದ ವಿವರ ಇಂತಿದೆ: 


0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails