
ಜನವರಿ 26ರಂದು ದಿಲ್ಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕರ್ನಾಟಕದ ಕಡೆಯಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರ ತೋರಿಸಲಾಗಿತ್ತು. ಇದು ಎರಡನೇ ಅತ್ಯುತ್ತಮ ಸ್ತಬ್ಧ-ಚಿತ್ರ, ಅತ್ಯುತ್ತಮ ಫ್ಯಾಬ್ರಿಕೇಷನ್ ಹಾಗೂ ವಿಷಯವನ್ನು ಅತ್ಯುತ್ತಮವಾಗಿ ಬಿಂಬಿಸಿದೆ ಎಂದು ಬಹುಮಾನ ಗಳಿಸಿದೆ. ಇದು ನಿಜಕ್ಕೂ ಕನ್ನಡಿಗರ ಕಿರೀಟದಲ್ಲಿನ ಇನ್ನೊಂದು ಗರಿಯಾಗಿದೆ. ಹಿಂದೊಮ್ಮೆ 2005ರಲ್ಲಿ ಮೊದಲನೇ ಬಹುಮಾನ ಗೆದ್ದಿದ್ದ ಗೊಮಟೇಶ್ವರನ ಸ್ತಬ್ಧ-ಚಿತ್ರ ಇನ್ನೂ ನೆನಪಿನಲ್ಲಿರುವಾಗ್ಲೇ ಈ ಬಹುಮಾನವೂ ಕರ್ನಾಟಕಕ್ಕೆ ದೊರಕಿದೆ! ಇದು ನಮಗೆಲ್ಲಾ ಎಂತಹ ಒಳ್ಳೇ ಸಂದೇಶ ಕೊಡ್ತಿದೆ ಅನ್ನೋದ್ನ ಗಮನಿಸಿ.
ಬಹುಮಾನ ಟ್ಯಾಬ್ಲೋಗಲ್ಲ, ನಮ್ಮ ಹಿಂದಿನವರ ಕುಶಲತೆಗೆ
ಬೇಲೂರಿನ ದೇವಾಲಯದ ಕೇವಲ ಒಂದು ನಕಲು-ಪ್ರತಿಗೇ ಇಷ್ಟು ಗೌರವ ನೀಡ್ಬೇಕಾಗಿ ಬಂದಿದೆ ಅಂದ್ರೆ ಇನ್ನು ನಿಜವಾದುದರ ಹಿರಿಮೆ ಏನು ಅನ್ನೋದ್ನ ತಿಳ್ಕೋಬೇಕು ನಾವು. ಈ ಕುಶಲತೆಯನ್ನು ಬರೀ ಬೇಲೂರಿನ ಒಂದು ದೇವಾಲಯಕ್ಕೆ ಅಂದುಕೊಳ್ಳದೆ ಕಣ್ಣು ಹಾಯಿಸಿದರೆ ಕಾಣೋದು ಹಂಪೆ-ಬಾದಾಮಿ-ಐಹೊಳೆ-ಪಟ್ಟದಕಲ್ಲಿನ ವಿನ್ಯಾಸಗಳು, ಕರಾವಳಿಯ ಮುರುಡೇಶ್ವರ, ಸೋಮನಾಥಪುರ, ಮೈಸೂರಿನ ಅರಮನೆ, ಬೆಂಗಳೂರಿನ ವಿಧಾನ ಸೌಧ ಮತ್ತನೇಕ.
ಕಲೆಯಲ್ಲವಿದು, ತಂತ್ರಜ್ಞಾನದ ಶಿಖರ ಸಾಧನೆಯ ಹೆಗ್ಗುರುತು!

ಬಹುಮಾನ ಟ್ಯಾಬ್ಲೋಗಲ್ಲ, ನಮ್ಮ ಹಿಂದಿನವರ ಕುಶಲತೆಗೆ
ಬೇಲೂರಿನ ದೇವಾಲಯದ ಕೇವಲ ಒಂದು ನಕಲು-ಪ್ರತಿಗೇ ಇಷ್ಟು ಗೌರವ ನೀಡ್ಬೇಕಾಗಿ ಬಂದಿದೆ ಅಂದ್ರೆ ಇನ್ನು ನಿಜವಾದುದರ ಹಿರಿಮೆ ಏನು ಅನ್ನೋದ್ನ ತಿಳ್ಕೋಬೇಕು ನಾವು. ಈ ಕುಶಲತೆಯನ್ನು ಬರೀ ಬೇಲೂರಿನ ಒಂದು ದೇವಾಲಯಕ್ಕೆ ಅಂದುಕೊಳ್ಳದೆ ಕಣ್ಣು ಹಾಯಿಸಿದರೆ ಕಾಣೋದು ಹಂಪೆ-ಬಾದಾಮಿ-ಐಹೊಳೆ-ಪಟ್ಟದಕಲ್ಲಿನ ವಿನ್ಯಾಸಗಳು, ಕರಾವಳಿಯ ಮುರುಡೇಶ್ವರ, ಸೋಮನಾಥಪುರ, ಮೈಸೂರಿನ ಅರಮನೆ, ಬೆಂಗಳೂರಿನ ವಿಧಾನ ಸೌಧ ಮತ್ತನೇಕ.
ಕಲೆಯಲ್ಲವಿದು, ತಂತ್ರಜ್ಞಾನದ ಶಿಖರ ಸಾಧನೆಯ ಹೆಗ್ಗುರುತು!

ಓ ಕನ್ನಡಿಗಾ, ಇವುಗಳಲ್ಲಿ ಕಾಣುತ್ತಿರುವುದು ಬರಿಯ ಕಲೆಯ ಉತ್ತುಂಗವಲ್ಲ. ಇದರಲ್ಲಿರುವುದು ಉನ್ನತ ತಂತ್ರಜ್ಞಾನ. ಅಂದಿನ ದಿನಗಳಲ್ಲಿ ಪ್ರಪಂಚದಲ್ಲಿ ಅತಿ ವಿರಳವಾದ ತಂತ್ರಜ್ಞಾನ. ಅದು ಒಂದೇ ಕಲ್ಲಿನಲ್ಲಿ ಕೆತ್ತಿರೋ ಬೆಳಗೋಳದ 57 ಅಡಿ ಎತ್ತರದ ಗೊಮ್ಮಟನೇ ಇರ್ಬೋದು, ಬೇಲೂರಿನ ಶಿಲಾ-ಬಾಲಿಕೆಯರ ಮೋಹಕ ವಿನ್ಯಾಸವೇ ಇರ್ಬೋದು, ಹಂಪೆಯ ಸಂಗೀತ ಮೂಡಿಸುವ ಕಂಬಗಳೇ ಇರ್ಬೋದು, ಸುಂದರ ಸ್ನಾನದ ಕೊಳವಿರವಿರಬಹುದು, ನೀರಾವರಿ ಕಾಲುವೆಗಳಿರಬಹುದು, ಸಂಕ್ರಮಣದ ಸಮಯದಲ್ಲಿ ಸರಿಯಾಗಿ ಸೂರ್ಯನ ಪ್ರಕಾಶ ಒಂದೇ ಕಡೆ ಬೀಳೋ ಹಾಗಿರೋ ಗವಿಪುರಂನ ಶಿವಮಂದಿರ ಇರ್ಬೋದು, ಹಂಪೆಯಲ್ಲಿರುವ ಹವಾನಿಯಂತ್ರಿತ ಅರಮನೆಯೇ ಇರ್ಬೋದು.. ಹೀಗೇ ನೂರಾರು ಉದಾಹರಣೆ ಇರ್ಬೋದು - ಇವೆಲ್ಲವೂ ಕಲೆಯ ಹೊದಿಕೆಯಲ್ಲಡಗಿರೋ ತಂತ್ರಜ್ಞಾನದ ಉತ್ತುಂಗ ಸಾಧನೆಯಲ್ಲವೇ?
ಇಂದಿಗೂ ತಂತ್ರಜ್ಞಾನದ ಮುಂಚೂಣಿಗೆ ಕನ್ನಡಿಗ ಬರಬೇಕು
ಅಂದೇ ತಂತ್ರಜ್ಞಾನದಲ್ಲಿ ಅಂತಹ ಸಾಧನೆಗೈದಿದ್ದ ಕನ್ನಡಿಗರು ನಾವು ಇಂದೂ ಕೂಡಾ ತಂತ್ರಜ್ಞಾನದ ಮುಂಚೂಣಿಯಲ್ಲಿ ನಿಂತು ಅದರ ಕರ್ತಾರರಾಗ್ಬೋದು. ಇಂತಹ ಇತಿಹಾಸವಿರೋ ನಮಗೆ ಯಾವ ಕೀಳರಿಮೆಯೂ ಇರಬೇಕಿಲ್ಲ. ನಮ್ಮ ರಕ್ತದಲ್ಲೇ ಆ ಹಿರಿಮೆ ಇರೋದ್ರಿಂದ ಮನಸ್ಸು ಮಾಡಿ ಸಾಧಿಸಿ ತೋರಿಸಿದ್ರೆ ಸಾಕು, ಇಡೀ ಜಗತ್ತೇ ನಿಬ್ಬೆರಗಾಗೋ ಅವಿಷ್ಕಾರಗಳನ್ನು ನಾವು ಮಾಡಬಹುದು. ಮಾಡಬೇಕು. ಅದಕ್ಕೆ ನಮ್ಮ ಹಿರಿಯರ ಅಂದಿನ ಸಾಧನೆಗಳು ಪ್ರೇರಣೆ ನೀಡುತ್ತಿವೆ. ಅಗೋ ನೋಡಿ, ಕನ್ನಡಿಗ ಏನೆಲ್ಲಾ ಸಾಧಿಸುವನೆಂದು ಕಾಣಲೆಂದೇ ಆ ಸ್ಮಾರಕಗಳೆಂಬ ಸಾಧನೆಯ ಹೆಗ್ಗುರುತುಗಳು ಕಾತರಿಸುತ್ತಾ ಕಾಯುತ್ತಿವೆ.
1 ಅನಿಸಿಕೆ:
ಒಂದು ಒಳ್ಳೆಯ ವಿಮರ್ಶಾತ್ಮಕ ಅಂಶ ಹಾಗೂ ಉಟಾಮ ಬರವಣಿಗೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!