ಮಹಿಳಾ ವಿವಿಗೆ ಒಬ್ಬ ಕನ್ನಡತಿ ಸಿಗಂಗಿಲ್ಲೇನು?

ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ರಾಜ್ಯಪಾಲ ಠಾಕೂರ್ ಸಾಹೇಬ್ರು ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯೆಯೊಬ್ರನ್ನ ನೇಮಕ ಮಾಡಿ ಆದೇಶ ಹೊರುಡ್ಸಿ, ಈಗ ಕನ್ನಡ ಸಂಘಟನೆಗಳು ತೊಡಿ ತಟ್ಟಿ ಹೋರಾಟಕ್ ನಿಂತ್ ಮ್ಯಾಲ ನೇಮಕಾತಿ ರದ್ದು ಮಾಡ್ಯಾರಿ ಸರಾ.. ಕರ್ನಾಟಕದಾಗ ದಿಲ್ಲಿ ಮಂದಿ ನಡ್ಸಾಕ್ ಹತ್ತಿರೂ ದರ್ಬಾರದಾಗಿನ ಈ ರಂಗಾದ ಕಥಿ ಅಂತೂ ಇಂತೂ ಸುಖಾಂತ ಕಾಣ್ತಂತ ಕನ್ನಡ ಮಂದಿ ನಿಟ್ಟುಸ್ರು ಬಿಟ್ಟಾರ. ಹಾಂ, ನಮ್ ರಾಜ್ಯಪಾಲರೇನು ಸುಖಾ ಸುಮ್ಮನೆ ಈ ಆದೇಶಾನ ಹೊಳ್ ತೊಗೋಳಿಲ್ರೀ. ಇಡೀ ಕರ್ನಾಟಕದ ಉದ್ದಗಲಕ್ಕೆ ಕನ್ನಡಪರ ಸಂಘಟನೆಗಳು ಭಾರೀ ಪ್ರತಿಭಟನೆ ಮಾಡಿದ್ದರಿಂದ ಇದು ಹೀಂಗಾತ್ರಿ.

ರಾಜ್ಯಪಾಲರು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ ಕರ್ನಾಟಕದಾಗ ಅಂಥಾ ಯೋಗ್ಯ ಹೆಣ್ಣುಮಗಳು ಇಲ್ಲ ಅಂತಾ ಸಾಬೀತ್ ಮಾಡ್ದೆ ಹೊರಗಿಂದ ತಜ್ಞರಿದಾರ ಅಂತ ಕರ್ಕೊಂಬರೋ ಆದೇಶಾ ಹೊರಡ್ಸಿದ್ದೇ ತಡ ಕನ್ನಡದ ಮಂದಿ ಹೊಯ್ಕೊಳಕ್ ಚಾಲೂ ಮಾಡುದ್ರುರೀ. ಅಲ್ರಿ, ನಮ್ಮ ಇಡೀ ಕರ್ನಾಟಕದಾಗ ರಾಜ್ಯಪಾಲರಿಗೆ ರಾಜ್ಯದ ಮಹಿಳಾ ವಿಶ್ವವಿದ್ಯಾಲಯಕ್ಕ ಬೇಕಾದ ಅರ್ಹತಿ, ಪ್ರತಿಭೆ ಇರುವಂತ ಒಬ್ಬಾಕಿ ಹೆಣ್ಣು ಮಗಳು ಸಿಗಂಗಿಲ್ಲ ಅಂದ್ರ ಇದಕಿಂತ ದೊಡ್ಡ ಕಾಮೆಡಿ ಏನ್ ಐತ್ರಿ?

ನಮ್ಮಲ್ಲೇ ಪ್ರತಿಭಾನ್ವಿತರು, ನುರಿತ ಶಿಕ್ಷಣ ತಜ್ಞರು ಇರಬೇಕಾರ ಹೊರಗಿನ ಮಂದಿನ ಯಾ ಮಾನದಂಡ ಇಟ್ಕೊಂಡ ಕರುಸ್ಲಿಕ್ ಹೊಂಟಿದ್ರುರೀ? ಆಂಧ್ರಪ್ರದೇಶದ ಶಾಸಕಿ ಆ ರಾಜ್ಯದಾಗ್ ಶಿಕ್ಷಣ ತಜ್ಞರೆ ಇರಬಹುದು. ಆದ್ರ, ನಮ್ಮ ಕರ್ನಾಟಕದಾಗ್ ಒಬ್ರೂ ತಜ್ಞರಿಲ್ಲೆನು? ನಮ್ಮ ರಾಜ್ಯದ ಒಬ್ಬೆ ಒಬ್ಬ ಅರ್ಹ ಹೆಣ್ಣ ಮಗಳ್ನ ಹುಡಕಕ್ಕ ಆಗಂಗಿಲ್ಲಾ ಅಂದ್ರ ಏನ ಹೇಳಬೇಕ್ರಿ. ಹೀಂಗಾ ಆದ್ರಾ ನಮ್ಮೂರಿನ ಕಲಿತ ಮಂದಿ ಹೊಟ್ಟಿಪಾಡಿಗೆ ಏನ್ ಮಾಡ್ಬೇಕಾ? ಆಂಧ್ರದ ಹೆಣ್ಣುಮಗಳನ್ನು ಇಲ್ಲಿ ಕರ್ಸೋ ಮಂದಿ ಎಷ್ಟು ಮಂದಿ ಕನ್ನಡದೋರಿಗೆ ಹೊರಗಿನ ರಾಜ್ಯಗಳಲ್ಲಿ ಕೆಲ್ಸ ಕೊಡುಸ್ತಾರ್ರೀ?

ಹೀಂಗಾ ನೋಡ್ರಿ ವಲಸಿ ಚಾಲೂ ಆಗೋದು...

ಭಾರತದಾಗ್ ಎಲ್ಲಾರ ಹೋಗ್ ಇರೂ ಹಕ್ಕೈತಿ ಅನ್ನೋ ಮಂದಿ ತುಸಾ ತಿಳ್ಕೊಳೋದೈತ್ರಿ. ಅಲ್ಲಾ, ನಮ್ಮ ನಾಡಿನಾಗಿರೂ ಮಂದಿಗ ಒಂದು ಹುದ್ದೆಗೆ ಬೇಕಾದ ಅರ್ಹತಿ ಇಲ್ಲಂದ್ರ, ಅದುನ್ನ ಸಾಬೀತ್ ಮಾಡಿ ಹೊರಗಿಂದ ಮಂದೀನ ಕರ್ಕೊಂಡ್ ಬರೂದ್ ಒಪ್ಪೋ ಮಾತ್ರಿ. ಆದ್ರ ಬ್ಯಾರಿ ಬ್ಯಾರಿ ಕಾರಣಗೋಳ್ನ ಇಟ್ಕೊಂಡು ಹೊರಗಿನ ಮಂದೀನ ಇಲ್ಲಿಗ ಕರುಸ್ಕೊಂಡು ಕನ್ನಡ ಮಂದೀಗ ಈ ಕೆಲ್ಸ ಮಾಡೊ ಯೋಗ್ಯತೀ ಇಲ್ಲ, ಅದುಕ್ಕಾ ಹೊರಗಿನ ಮಂದೀನ ಕರಸಾಕ್ ಹತ್ತೀವಿ ಅನ್ನೋರು ಭಾಳ ಜನ ಅದಾರ್ರೀ. ಅದಕ್ಕ ಹಾಗ್ ಹೊರಗಿಂದ ಕರ್ಕೊಂಡು ಬರೋದು ಬರೀ ಒಂದು ತಾತ್ಕಾಲಿಕ ಏರ್ಪಾಡ್ ಆಗ್ಬೇಕ್ರಿ. ಅದೆಂಥದೇ ಹುದ್ದಿ ಇರಲಿ, ಇವತ್ತಿಗ ನಮ್ ಕೂಡಾ ಅಂಥಾ ಯೋಗ್ಯತೀ ಇರೂ ಮಂದಿ ಇಲಾಂದ್ರ ಅಂಥಾ ಯೋಗ್ಯತೀನ ನಮ್ ಮಂದಿ ಗಳಿಸೋ ವ್ಯವಸ್ಥೀನೂ ಮಾಡಬೇಕ್ರಿ. ಇಲ್ಲಾಂದ್ರ ಶಾಶ್ವತವಾಗಿ ಹೊರಗಿನ ಮಂದೀನಾ ಕರ್ಕೊಂಡು ಬರ್ತಾನೆ ಇರ್ಬೇಕಾಗುತ್ತೆ. ಹೀಂಗಾ ನಮ್ ಮಂದ್ಯಾಗೆ ಅಂಥ ಯೋಗ್ಯತಿ ಐತೊ ಇಲ್ಲೋ ಅಂತಾನೂ ನೋಡ್ದೆ ಹೊರಗಿಂದ ಮಂದೀನ ಕರ್ಕೊಂಡು ಬರೋದನ್ನೇ ಕನ್ನಡ ಮಂದಿ ಕೂಡಿ ತಡೀಬೇಕಾಗೈತಿ.

ಈ ಮಾತು ಬರೀ ವಿಶ್ವವಿದ್ಯಾಲಯಕ್ಕಲ್ರೀ, ಊರು ಸುದ್ದ ಮಾಡೋ ಹುದ್ದೆಯಿಂದ ಊರು ಆಳೋ ಹುದ್ದಿ ಮಟ ಅನ್ವಯ ಆಕ್ಕೈತಿ. ಹೌದಲ್ರೀ, ಗುರುಗಳೇ?

3 ಅನಿಸಿಕೆಗಳು:

Anonymous ಅಂತಾರೆ...

ishta alri ..ee taakoorna darbar innu jOrdaar naDedEti noDryala...kannaDa baro IAS adhikaarigaLigu Eno Eru pEru maaDi aaTa aaDakattaari...yaarge bhadti koDbEko avrna biTTu inyaargo koDakattaari...
rashtrapati aaDaLitada hesarnyaaga raajyapaalaru ulTaa seeda mADAkattaari...

kannaDapara smaghaTanegaLa hOraaTadimda ivatta aa telugu heNmagaLa nEmakaati raadaatu...

Anonymous ಅಂತಾರೆ...

"ಇವತ್ತಿಗ ನಮ್ ಕೂಡಾ ಅಂಥಾ ಯೋಗ್ಯತೀ ಇರೂ ಮಂದಿ ಇಲಾಂದ್ರ ಅಂಥಾ ಯೋಗ್ಯತೀನ ನಮ್ ಮಂದಿ ಗಳಿಸೋ ವ್ಯವಸ್ಥೀನೂ ಮಾಡಬೇಕ್ರಿ. "
ee melina maathu thumba sari...idhu naawu eega thuranthawaagi maaDabekaadha kelsa...namma janralli adhenu kammi idhe antha huDki adhralli parinithi hondhbeku

Anonymous ಅಂತಾರೆ...

Nivu yaaru anta nagan gottilla aadra enu brdiri adu noorakka nooru khare ada.

Alla nammalli ira mandigi YOGYATE illa anta matadaka avnigenu YOGYATE aitri ???Ava hyang heltana ???alla ellakadenu shyneru dhadru antu idde irtara adaka tira Hing maduda swalpa nu sari illa ree.

Idu hyang aitu andra kagi kaccheri ellaru kelirabekalla ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails