
ಭಾರತೀಯ ಜನತಾ ಪಕ್ಷ ಮತ್ತು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂಗಳು ಕರ್ನಾಟಕದಲ್ಲಿ ಚುನಾವಣಾ ಹೊಂದಾಣಿಕೆ ಮಾಡ್ಕೊಳ್ಳೋ ಪ್ರಸ್ತಾಪವೊಂದನ್ನು ಜಯಲಲಿತಾ ಮುಂದಿಟ್ಟಿರೋ ಸಮಾಚಾರ ಕನ್ನಡಿಗರ ಕೂದಲು ನಿಮಿರಿಸಿದೆ ಗುರು.
ಸುದ್ದಿ ಏನಪ್ಪಾ ಅಂದರೆ ’ಕೋಲಾರ, ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ಹತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ವಾಸವಾಗಿರೋರಲ್ಲಿ ತಮಿಳು ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಮತ್ತು ಅವರ ಮತಗಳನ್ನೆಲ್ಲಾ ಏಐಡಿಎಂಕೆ ತನ್ನ ಮತಬ್ಯಾಂಕು, ಅಲ್ಲೆಲ್ಲಾ ಗೆದ್ದು ಭಾಜಪಾಗೆ ಬೆಂಬಲ ಕೊಡ್ತೀವಿ’ ಅಂತ ಅಮ್ಮ ಜಯಮ್ಮ ಅನ್ತಿರೋದೇ ಆಗಿದೆ. (ಫೋಟೋ ಕೃಪೆ : ದಿ ಹಿಂದೂ)
ಸುದ್ದಿ ಏನಪ್ಪಾ ಅಂದರೆ ’ಕೋಲಾರ, ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ಹತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ವಾಸವಾಗಿರೋರಲ್ಲಿ ತಮಿಳು ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಮತ್ತು ಅವರ ಮತಗಳನ್ನೆಲ್ಲಾ ಏಐಡಿಎಂಕೆ ತನ್ನ ಮತಬ್ಯಾಂಕು, ಅಲ್ಲೆಲ್ಲಾ ಗೆದ್ದು ಭಾಜಪಾಗೆ ಬೆಂಬಲ ಕೊಡ್ತೀವಿ’ ಅಂತ ಅಮ್ಮ ಜಯಮ್ಮ ಅನ್ತಿರೋದೇ ಆಗಿದೆ. (ಫೋಟೋ ಕೃಪೆ : ದಿ ಹಿಂದೂ)
ಈ ಪ್ರಸ್ತಾಪವನ್ನು ಈಕೆ ಮುಂದಿಟ್ಟಿರೋದು ಭಾರತೀಯ ಜನತಾ ಪಕ್ಷದ ಗುಜರಾತಿ ಮುಖಂಡರಾದ ನರೇಂದ್ರ ಮೋದಿ ಅವರ ಬಳಿ. ಗುಜರಾತಿ ಅಸ್ಮಿತಾ ಅಂತ ಗುಜರಾತಲ್ಲಿ ಮೋದಿ ಒಳ್ಳೇ ಕೆಲಸ ಮಾಡಕ್ ಹೋಗೋದು ಎಷ್ಟು ಶ್ಲಾಘನೀಯವೋ, ಕರ್ನಾಟಕದ ವಿಷಯದಲ್ಲಿ ತಲೆ ಹಾಕುದ್ರೆ ಅದು ಅಷ್ಟೇ ಖಂಡನೀಯ. ಒಟ್ನಲ್ಲಿ ಈ ವಿಷ್ಯವಾಗಿ ಇಲ್ಲಿ ಕರ್ನಾಟಕದ ಭಾಜಪಾ ನಾಯಕರುಗಳ ಅಭಿಪ್ರಾಯಾನಾ ಕೇಳಿದ್ದೂ ಗೊತ್ತಿಲ್ಲ, ಇವರ ಮಾತಿಗೆ ಕವಡೆ ಕಿಮ್ಮತ್ತಾದ್ರೂ ಇದೆಯೋ ಇಲ್ವೋ ಅದೂ ಗೊತ್ತಿಲ್ಲ. ಇದು ಭಾರತ ದೇಶದ ಮಹಾನ್ ಫೆಡೆರಲ್ ವ್ಯವಸ್ಥೆ ಸಾಗ್ತಿರೋ ದಿಕ್ಕಿನೆಡೆ ಬೆಳಕು ಚೆಲ್ತಿರೋದು ಮಾತ್ರಾ ನಿಜ.
ಕರ್ನಾಟಕದಲ್ಲಿ ’ದ್ರಾಮುಕ’ಗಳಿಗೆ ಏನು ಕೆಲಸ?
ಕರ್ನಾಟಕದಲ್ಲಿರೋ ತಮಿಳ್ರನ್ನು ಕನ್ನಡಿಗರ ವಿರುದ್ಧವಾಗಿ ಎತ್ತಿಕಟ್ಟೋದನ್ನು ಬಿಟ್ಟರೆ, ಆ ಮೂಲಕ ನಾಡು ಒಡೆಯಲು ಪ್ರೇರಣೆ ನೀಡೋದ್ ಬಿಟ್ರೆ ನಿಜಕ್ಕೂ ಜಯಮ್ಮನ ಪಕ್ಷ ಏನು ತಾನೆ ಮಾಡಕ್ ಸಾಧ್ಯ? ಕರ್ನಾಟಕದಲ್ಲಿರೋ ತಮಿಳರನ್ನು ಒಗ್ಗೂಡಿಸಿ ಚುನಾವಣೆ ಎದುರುಸ್ತೀವಿ ಅಂತ ಒಂದು ಪಕ್ಷ ಹೇಳ್ಕೊಂಡು ನಮ್ಮೂರಲ್ಲಿ ರಾಜಕಾರಣ ಮಾಡ್ತೀನಿ ಅಂತ ಬರ್ತಿರೋದು ಒಂದು ನಾಡನ್ನು ಒಡೆಯಲು ನಡೆಸೋ ಸಂಚಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಆಗಲ್ವಾ? ಈ ದೇಶದ ಕಾನೂನಿನ ಪ್ರಕಾರ ಬಹುಶಃ ಅಲ್ಲ. ಇದು ನಿಜಕ್ಕೂ ತಮಾಶೆ ವಿಷ್ಯಾನೆ ಬಿಡಿ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಗಳು ಕಾವೇರಿ ನೀರು ಹಂಚಿಕೆಯಲ್ಲಿ ತಳೆದ ನಿಲುವೇನು? ತಿರುವಳ್ಳುವರ್ ಪ್ರತಿಮೆ ವಿಚಾರದಲ್ಲಿ ನಿಲುವೇನು? ಡಾ.ರಾಜ್ ಅಪಹರಣವಾದಾಗ ಅವರುಗಳು ನಡೆದುಕೊಂಡ ಬಗೆ ಏನು? ಅನ್ನೋದೆಲ್ಲಾ ಜಗತ್ತಿಗೇ ಗೊತ್ತಿದೆ. ಹೀಗೆ ಹೆಜ್ಜೆ ಹೆಜ್ಜೆಗೂ ಕನ್ನಡಿಗರ ಅಭಿಪ್ರಾಯಕ್ಕೆ ವಿರುದ್ಧವಾದ ಮತ್ತು ಕರ್ನಾಟಕದ ಹಿತಕ್ಕೆ ವಿರುದ್ಧವಾಗೇ ನಡೆದುಕೊಳ್ತಿರೋ ಒಂದು ಪ್ರದೇಶದ ಪ್ರಮುಖ ರಾಜಕೀಯ ಪಕ್ಷದ ಈ ನಡೆ ನಮ್ಮ ನಾಡಿನ ಹಿತಕ್ಕೆ ಮಾರಕವಾಗಿದೆ ಅನ್ನೋದಂತೂ ಸತ್ಯ.
ರಾಜ್ಯದಲ್ಲಿ ಉಸಿರಾಡ್ತಿರೋ ರಾಷ್ಟ್ರೀಯ ಪಕ್ಷಗಳೆಂಬ ಬೆರ್ಚಪ್ಪಗಳು
ನಮ್ಮ ನಾಡಲ್ಲೇ ಇದ್ಕೊಂಡು, ನಮ್ಮ ನಾಡ್ನೇ ಒಡೆದು ಹಾಕಕ್ಕೆ ತುದಿಗಾಲಲ್ಲಿ ನಿಂತಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಈಗಾಗ್ಲೇ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಲು ಹೇಸದ ರಾಷ್ಟ್ರೀಯ ಪಕ್ಷಗಳು ಚುನಾವಣೆ ಹತ್ತಿರ ಬರ್ತಿದ್ದ ಹಾಗೇ ನಾಡು ನುಡಿಯ ಹಿತ ಕಾಪಾಡ್ತೀವಿ ಅಂತ ಕನ್ನಡಿಗರ ಕಿವಿ ಮೇಲೆ ಚೆಂಡ್ ಹೂವಲ್ಲ, ಇಡೀ ಲಾಲ್ ಬಾಗನ್ನೇ ಇಡಕ್ಕೆ ಹೊಂಟಿವೆ. ಈಗ ಜಯಲಲಿತಾ ಕೈ ಹಾಕಿರೋದು ಕೂಡಾ ಅಂತಹ ಒಂದು ರಾಷ್ಟ್ರೀಯ ಪಕ್ಷದ ಹೆಗಲಿಗೇ. ಕನ್ನಡ ನಾಡಲ್ಲಿ ಹೊಂದಾಣಿಕೆ ಮಾಡಿಕೊಳ್ಳೋ ಮಾತನ್ನು ಆ ಯಮ್ಮ ಆಡ್ತಿರೋದು ಗುಜರಾತಿನ ಮುಖ್ಯಮಂತ್ರಿ ಜೊತೆಗೆ. ಈ ಬೆಳವಣಿಗೆಗಳಲ್ಲಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕ ಶಿರೋಮಣಿಗಳ ಅಭಿಪ್ರಾಯ ಕೇಳಿ ತೀರ್ಮಾನ ಮಾಡ್ತಾರಂತೆ. ಕೋಳೀನ್ ಕೇಳಿ ಯಾರಾನಾ ಮಸಾಲೆ ಅರದಿದ್ದುಂಟಾ? ಹೇಳಿ. ದಿಲ್ಲೀಲಿ ಅಧಿಕಾರದ ಚುಕ್ಕಾಣಿ ಹಿಡ್ಯಕ್ಕೆ ಆಗುತ್ತೆ ಅಂದ್ರೆ ಹತ್ತು ಸೀಟೇನು, ಇಡೀ ಕರ್ನಾಟಕವನ್ನೇ ಬೇಕಾದ್ರೂ ಬರೆದು ಕೊಟ್ಟಾರು. ಹಾಗೆ ಹೈಕಮಾಂಡ್ ಬರೆದು ಕೊಡ್ತಿದ್ರೆ ಹೊಲದ್ ಮಧ್ಯೆ ಕೈ ಅಗುಲುಸ್ಕೊಂಡ್ ನಿಂತಿರೋ ಬೆರ್ಚಪ್ಪಗಳ ಥರಾ ಕೆಕರು ಮಕರು ಮುಖ ನೋಡ್ಕೊಂಡಿರೋದ್ನ ಬಿಟ್ಟು ಇನ್ನೇನು ಮಾಡಕ್ಕಾದ್ರೂ ಈ ನಾಯಕರ ಕೈಲಿ ಆಗುತ್ತಾ ಅನ್ನೋದು ಕುತೂಹಲ ಹುಟ್ಸೋ ವಿಷ್ಯಾ ಗುರು.
ಮೇರಾ ಭಾರತ್ ಮಹಾನ್
ಇದು ಭಾರತ ದೇಶ. ಇಲ್ಲಿ ಪ್ರಜಾಪ್ರಭುತ್ವ ಇದೆ. ಯಾರು ಯಾವ ಪಾರ್ಟಿ ಬೇಕಾದ್ರೂ ಕಟ್ಟ ಬಹುದು. ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಮೇರಾ ಭಾರತ್ ಮಹಾನ್!
ಕರ್ನಾಟಕದಲ್ಲಿ ’ದ್ರಾಮುಕ’ಗಳಿಗೆ ಏನು ಕೆಲಸ?
ಕರ್ನಾಟಕದಲ್ಲಿರೋ ತಮಿಳ್ರನ್ನು ಕನ್ನಡಿಗರ ವಿರುದ್ಧವಾಗಿ ಎತ್ತಿಕಟ್ಟೋದನ್ನು ಬಿಟ್ಟರೆ, ಆ ಮೂಲಕ ನಾಡು ಒಡೆಯಲು ಪ್ರೇರಣೆ ನೀಡೋದ್ ಬಿಟ್ರೆ ನಿಜಕ್ಕೂ ಜಯಮ್ಮನ ಪಕ್ಷ ಏನು ತಾನೆ ಮಾಡಕ್ ಸಾಧ್ಯ? ಕರ್ನಾಟಕದಲ್ಲಿರೋ ತಮಿಳರನ್ನು ಒಗ್ಗೂಡಿಸಿ ಚುನಾವಣೆ ಎದುರುಸ್ತೀವಿ ಅಂತ ಒಂದು ಪಕ್ಷ ಹೇಳ್ಕೊಂಡು ನಮ್ಮೂರಲ್ಲಿ ರಾಜಕಾರಣ ಮಾಡ್ತೀನಿ ಅಂತ ಬರ್ತಿರೋದು ಒಂದು ನಾಡನ್ನು ಒಡೆಯಲು ನಡೆಸೋ ಸಂಚಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಆಗಲ್ವಾ? ಈ ದೇಶದ ಕಾನೂನಿನ ಪ್ರಕಾರ ಬಹುಶಃ ಅಲ್ಲ. ಇದು ನಿಜಕ್ಕೂ ತಮಾಶೆ ವಿಷ್ಯಾನೆ ಬಿಡಿ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಗಳು ಕಾವೇರಿ ನೀರು ಹಂಚಿಕೆಯಲ್ಲಿ ತಳೆದ ನಿಲುವೇನು? ತಿರುವಳ್ಳುವರ್ ಪ್ರತಿಮೆ ವಿಚಾರದಲ್ಲಿ ನಿಲುವೇನು? ಡಾ.ರಾಜ್ ಅಪಹರಣವಾದಾಗ ಅವರುಗಳು ನಡೆದುಕೊಂಡ ಬಗೆ ಏನು? ಅನ್ನೋದೆಲ್ಲಾ ಜಗತ್ತಿಗೇ ಗೊತ್ತಿದೆ. ಹೀಗೆ ಹೆಜ್ಜೆ ಹೆಜ್ಜೆಗೂ ಕನ್ನಡಿಗರ ಅಭಿಪ್ರಾಯಕ್ಕೆ ವಿರುದ್ಧವಾದ ಮತ್ತು ಕರ್ನಾಟಕದ ಹಿತಕ್ಕೆ ವಿರುದ್ಧವಾಗೇ ನಡೆದುಕೊಳ್ತಿರೋ ಒಂದು ಪ್ರದೇಶದ ಪ್ರಮುಖ ರಾಜಕೀಯ ಪಕ್ಷದ ಈ ನಡೆ ನಮ್ಮ ನಾಡಿನ ಹಿತಕ್ಕೆ ಮಾರಕವಾಗಿದೆ ಅನ್ನೋದಂತೂ ಸತ್ಯ.
ರಾಜ್ಯದಲ್ಲಿ ಉಸಿರಾಡ್ತಿರೋ ರಾಷ್ಟ್ರೀಯ ಪಕ್ಷಗಳೆಂಬ ಬೆರ್ಚಪ್ಪಗಳು
ನಮ್ಮ ನಾಡಲ್ಲೇ ಇದ್ಕೊಂಡು, ನಮ್ಮ ನಾಡ್ನೇ ಒಡೆದು ಹಾಕಕ್ಕೆ ತುದಿಗಾಲಲ್ಲಿ ನಿಂತಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಈಗಾಗ್ಲೇ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಲು ಹೇಸದ ರಾಷ್ಟ್ರೀಯ ಪಕ್ಷಗಳು ಚುನಾವಣೆ ಹತ್ತಿರ ಬರ್ತಿದ್ದ ಹಾಗೇ ನಾಡು ನುಡಿಯ ಹಿತ ಕಾಪಾಡ್ತೀವಿ ಅಂತ ಕನ್ನಡಿಗರ ಕಿವಿ ಮೇಲೆ ಚೆಂಡ್ ಹೂವಲ್ಲ, ಇಡೀ ಲಾಲ್ ಬಾಗನ್ನೇ ಇಡಕ್ಕೆ ಹೊಂಟಿವೆ. ಈಗ ಜಯಲಲಿತಾ ಕೈ ಹಾಕಿರೋದು ಕೂಡಾ ಅಂತಹ ಒಂದು ರಾಷ್ಟ್ರೀಯ ಪಕ್ಷದ ಹೆಗಲಿಗೇ. ಕನ್ನಡ ನಾಡಲ್ಲಿ ಹೊಂದಾಣಿಕೆ ಮಾಡಿಕೊಳ್ಳೋ ಮಾತನ್ನು ಆ ಯಮ್ಮ ಆಡ್ತಿರೋದು ಗುಜರಾತಿನ ಮುಖ್ಯಮಂತ್ರಿ ಜೊತೆಗೆ. ಈ ಬೆಳವಣಿಗೆಗಳಲ್ಲಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕ ಶಿರೋಮಣಿಗಳ ಅಭಿಪ್ರಾಯ ಕೇಳಿ ತೀರ್ಮಾನ ಮಾಡ್ತಾರಂತೆ. ಕೋಳೀನ್ ಕೇಳಿ ಯಾರಾನಾ ಮಸಾಲೆ ಅರದಿದ್ದುಂಟಾ? ಹೇಳಿ. ದಿಲ್ಲೀಲಿ ಅಧಿಕಾರದ ಚುಕ್ಕಾಣಿ ಹಿಡ್ಯಕ್ಕೆ ಆಗುತ್ತೆ ಅಂದ್ರೆ ಹತ್ತು ಸೀಟೇನು, ಇಡೀ ಕರ್ನಾಟಕವನ್ನೇ ಬೇಕಾದ್ರೂ ಬರೆದು ಕೊಟ್ಟಾರು. ಹಾಗೆ ಹೈಕಮಾಂಡ್ ಬರೆದು ಕೊಡ್ತಿದ್ರೆ ಹೊಲದ್ ಮಧ್ಯೆ ಕೈ ಅಗುಲುಸ್ಕೊಂಡ್ ನಿಂತಿರೋ ಬೆರ್ಚಪ್ಪಗಳ ಥರಾ ಕೆಕರು ಮಕರು ಮುಖ ನೋಡ್ಕೊಂಡಿರೋದ್ನ ಬಿಟ್ಟು ಇನ್ನೇನು ಮಾಡಕ್ಕಾದ್ರೂ ಈ ನಾಯಕರ ಕೈಲಿ ಆಗುತ್ತಾ ಅನ್ನೋದು ಕುತೂಹಲ ಹುಟ್ಸೋ ವಿಷ್ಯಾ ಗುರು.
ಮೇರಾ ಭಾರತ್ ಮಹಾನ್
ಇದು ಭಾರತ ದೇಶ. ಇಲ್ಲಿ ಪ್ರಜಾಪ್ರಭುತ್ವ ಇದೆ. ಯಾರು ಯಾವ ಪಾರ್ಟಿ ಬೇಕಾದ್ರೂ ಕಟ್ಟ ಬಹುದು. ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಮೇರಾ ಭಾರತ್ ಮಹಾನ್!
ತಮಿಳರ ಈ ಪಕ್ಷಕ್ಕೆ ಭಾರತೀಯ ಸಂವಿಧಾನದ ಪ್ರಕಾರ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲೋ ಅವಕಾಶ ಇದೆ. ಮೇರಾ ಭಾರತ್ ಮಹಾನ್!
ಕರ್ನಾಟಕದಲ್ಲೇ ’ಕಾವೇರಿ ನೀರು ತಮಿಳುನಾಡಿಗೆ ಬಿಡ್ತೀವಿ, ನಮಗೆ ಮತ ಕೊಡಿ’ ಅನ್ನಬಹುದು. ಮೇರಾ ಭಾರತ್ ಮಹಾನ್!
ಇಲ್ಲಿನ ತಮಿಳ್ ಮಕ್ಕಳಿಗೆ ’ನಿಮ್ಮ ತಾಯಿನುಡಿ ತಮಿಳು. ನಿಮ್ಮ ತಾಯ್ನಾಡು ತಮಿಳುನಾಡು. ತಮಿಳರ ರಕ್ಷಣೆಗಾಗಿ ನೀವೆಲ್ಲಾ ಇಲ್ಲಿ ನಮಗೆ ಮತ ಕೊಡಿ, ಆಗ ಕರ್ನಾಟಕದ ವಿಧಾನ ಸಭೆಯಲ್ಲೂ ತಮಿಳರ ಹಿತರಕ್ಷಣೆಗಾಗಿ ನಾವು ಕೂಗೆಬ್ಬಿಸಬಹುದು’ ಅನ್ನಬಹುದು. ಮೇರಾ ಭಾರತ್ ಮಹಾನ್!
ನೀವು ವಲಸೆ ಬಂದ ನಾಡಿನ ಸಂಸ್ಕೃತಿಗಳಿಗೆ ಧಕ್ಕೆಯಾಗದ ಹಾಗೆ ಅವರಲ್ಲಿ ಬೆರೆತು ಒಂದಾಗಿ ಅಂತಾ ಹೇಳೋ ಬದಲು ನೀವಿಲ್ಲಿ ಬಂದು ಸಾವಿರ ವರ್ಷ್ವೇ ಆಗಿದ್ರೂ ನಿಮ್ಮ ಮೈಯ್ಯಾಗಿನ ರಕ್ತ ತಮಿಳು ರಕ್ತ. ಕನ್ನಡಿಗರು ಕಾವೇರಿ ನೀರು ಬಿಡ್ತಿಲ್ಲ ಅಂದ್ರೆ ತಮಿಳು ಕುಲ ಅಳಿಸಕ್ಕೆ ಹೊರ್ಟಿದಾರೆ, ಅವರ ವಿರುದ್ಧ ಪ್ರತಿಭಟಿಸಿ’ ಅಂತ ಬೇಕಾದ್ರೂ ಅನ್ನಬಹುದು. ಮೇರಾ ಭಾರತ್ ಮಹಾನ್!
ಕರ್ನಾಟಕದಲ್ಲಿ ನಗರ ಪಾಲಿಕೆ ಚುಕ್ಕಾಣಿ ಹಿಡಿದೋರು ಮಹಾರಾಷ್ಟ್ರದ ಜೊತೆ ಸೇರ್ಕೋತೀವಿ ಅಂತ ಠರಾವ್ ಪಾಸ್ ಮಾಡಿದ ಹಾಗೆ ನಾಳೆ ’ಬೆಂಗಳೂರನ್ನು ಕೇಂದ್ರಾಡಳಿತಕ್ಕೋ, ತಮಿಳುನಾಡಿಗೋ ಸೇರ್ಸಿ’ ಅನ್ನಬಹುದು. ಮೇರಾ ಭಾರತ್ ಮಹಾನ್!
ಎಲ್ಲವೂ ಇಲ್ಲಿ ಸಮ್ಮತವೇ. ಇಷ್ಟೆಲ್ಲಾ ಅವಕಾಶ ಮಾಡಿಕೊಟ್ಟ ಮೇಲೂ ’ವೈವಿಧ್ಯತೆಯಲ್ಲಿ ಏಕತೆ’ ಅಂತಾನೂ ’ಆಯಾ ಪ್ರದೇಶದ ಅನನ್ಯತೆ, ಸಾರ್ವಭೌಮತೆಗಳನ್ನು ಕಾಪಾಡಿಕೊಳ್ಳುವುದೇ ಭಾರತ ದೇಶದ ಹಿರಿಮೆ’ ಅಂತಾನೂ ಪ್ರಪಂಚದ ತುಂಬೆಲ್ಲಾ ಡಾಣಾ ಡಂಗೂರ ಸಾರ್ಕೊಂಡ್ ಬರಬಹುದು. ಮೇರಾ ಭಾರತ್ ಮಹಾನ್!
ಇಂಥಾ ಬೆಳವಣಿಗೆಗಳ್ನ ಮೊಳೆಕೇಲೇ ಕನ್ನಡದ ಜನ ಮತ್ತು ಜನಪ್ರತಿನಿಧಿಗಳು ಚಿವುಟಿ ಹಾಕಿ, ಆ ಜಯಮ್ಮಂಗೆ ’ ಜಯಾ! ಏಯ್ ಕರ್ನಾಟಕ ತೊರೆಯೇ’ ಅನ್ನಬೇಕಾಗಿದೆ ಗುರು.