ಸಜ್ಜನ ರಾಜಕಾರಣಿ ಡಾ. ಆಚಾರ್ಯರಿಗೆ ಶ್ರದ್ಧಾಂಜಲಿ

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ, ಮಾಜಿ ಗೃಹಮಂತ್ರಿಗಳಾಗಿದ್ದ ಮೃದುಮಾತಿನ, ಸಜ್ಜನ ರಾಜಕಾರಣಿ, ವೈದ್ಯರಾಗಿದ್ದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (ಡಾ. ವಿ ಎಸ್ ಆಚಾರ್ಯ) ಇವರು ನಿಧನರಾಗಿದ್ದು ರಾಜ್ಯ ರಾಜಕಾರಣದ ಬಾನಿನಿಂದ ಹೊಳೆವ ತಾರೆಯೊಂದು ಕಳಚಿದಂತಾಗಿದೆ.

ಉಡುಪಿ ಜಿಲ್ಲೆಯವರಾದ ಇವರು ತಮ್ಮ ೨೮ನೇ ವಯಸ್ಸಿನಲ್ಲೇ ರಾಜಕೀಯಕ್ಕಿಳಿದು ಜನತಾ ಪಕ್ಷ, ಭಾರತೀಯ ಜನತಾ ಪಕ್ಷಗಳಲ್ಲಿ ತೊಡಗಿಕೊಂಡಿದ್ದರು. ಭಾರತೀಯ ಜನತಾ ಪಕ್ಷವು ಅಧಿಕ್ಕಾರಕ್ಕೇರಿದಾಗ ಮುಜರಾಯಿ ಇಲಾಖೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಪಶುಸಂಗೋಪನಾ ಇಲಾಖೆ, ಯೋಜನಾ ಆಯೋಗ ಖಾತೆ, ಐಟಿ ಬಿಟಿ ಖಾತೆ, ಗೃಹಖಾತೆಯೇ ಮೊದಲಾದ ಖಾತೆಗಳನ್ನು ನಿರ್ವಹಿಸಿದ ಅನುಭವ ಇವರಿಗಿತ್ತು. ಶ್ರೀಯುತರ ನಿಧನದಿಂದಾಗಿ ನೊಂದಿರುವ ಅವರ ಕುಟುಂಬ ವರ್ಗದವರಿಗೆ ಈ ಅನಿರೀಕ್ಷಿತ ಆಘಾತದಿಂದ ಹೊರಬರಲೆಂದೂ... ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದೂ ಬನವಾಸಿ ಬಳಗ ಕೋರುತ್ತಾ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತದೆ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails