ನಮ್ಮ ಮೇಷ್ಟ್ರೇ "ಮನೆಗೆ ಮಾರಿ, ಪರರಿಗೆ ಉಪಕಾರಿ" ಆದರೆ?

ಇವತ್ತಿನ ವಿ.ಕ.ದಲ್ಲಿ ನಮ್ಮ ಶಿಕ್ಷಕರು ಹೇಗೆ ಅಮೇರಿಕಕ್ಕೆ ಸೇವೆ ಸಲ್ಲಿಸಬಹುದು ಅಂತ ಬೋ ಪಸಂದಾಗಿ ಸುಧನ್ವಾ ದೇರಾಜೆ ಅನ್ನೋರು ಹೇಳಿದಾರೆ ನೋಡಿ.

ಅಮೇರಿಕಕ್ಕೆ ಸೇವೆ ಮಾಡಿ ದುಡ್ಡು ಮಾಡಿಕೊಳ್ಳೋದು ತಪ್ಪಲ್ಲ. ಗಣಕದ ಮುಂದೆ ಕೂತು ಅಲ್ಲಿಯ ವಿದ್ಯಾರ್ಥಿಗಳಿಗೆ ಕಲಿಸುವುದು ತಪ್ಪಲ್ಲ. ಆದರೆ ತೊಂದರೆಯೇನು ಗೊತ್ತಾ? ಇಂಥವರೇ ಸಮಾಜದಲ್ಲಿ ಮೇಲುಗರು (ಶ್ರೇಷ್ಠರು) ಅನ್ನಿಸಿಕೊಳ್ಳುವ ಕಾಲವೂ ಬರುವ ಸಾಧ್ಯತೆಯಿದೆ. ದುಡ್ಡಿನ ಆಸೆಗಾಗಿ ಬರಬರುತ್ತಾ ನಮ್ಮ ಒಳ್ಳೊಳ್ಳೇ ಶಿಕ್ಷಕರು ಈ ಕೆಲಸಕ್ಕೆ ಅರ್ಜಿ ಹಾಕಲು ಶುರುಮಾಡಿದರೆ ಚೊಂಬೋ ಚೊಂಬು!

ಸಮಾಜದಲ್ಲಿರುವ ಬುದ್ಧಿವಂತ ಶಿಕ್ಷಕರು ಈ ಬಲೆಗೆ ಬಿದ್ದರೆ ಇಲ್ಲಿನ - ಎಂದರೆ ನಮ್ಮ ಕನ್ನಡನಾಡಿನ ಶಿಕ್ಷಣ ವ್ಯವಸ್ಥೆ ಬಂಜರುಭೂಮಿಯಾಗುವುದಿಲ್ಲವೆ? "ಓ" ಎಂದರೆ "ಟೋ" ಅನ್ನಕ್ಕೆ ಬರದೇ ಇರೋರೆಲ್ಲ ಕನ್ನಡದ ಮಕ್ಕಳಿಗೆ ಪಾಠ ಹೇಳಿಕೊಡಕ್ಕೆ ಮುಂದಾಗುವುದಿಲ್ಲವೆ?

ಈ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ ನಮ್ಮ ಶಿಕ್ಷಕರಿಗೆ ಕರ್ನಾಟಕದಲ್ಲೇ, ಕನ್ನಡದಲ್ಲಿ ಪಾಠ ಮಾಡುತ್ತಲೇ ಒಳ್ಳೇ ಸಂಬಳ ಸಿಗಬೇಕು, ಒಳ್ಳೊಳ್ಳೆ ಯೋಜನೆಗಳನ್ನು ಇಲಾಖೆಯವರು ಹಾಕಿಕೊಂಡು ಶಿಕ್ಷಣ ವ್ಯವಸ್ಥೆಯನ್ನು ಕೆಳಗಿಂದ ಮೇಲುವರೆಗೂ ರಿಪೇರಿ ಮಾಡಬೇಕು. ಹಾಗೆ ರಿಪೇರಿಯಾದ ಶಿಕ್ಷಣ ವ್ಯವಸ್ಥೆಯಿಂದ ಕನ್ನಡಿಗರಿಗೆ ಕೇಳಿಕೇಳಿದಷ್ಟು ಅನ್ನ ಹುಟ್ಟಬೇಕು. ಪಡೆದವರು "ಕೆರೆಯ ನೀರನು ಕೆರೆಗೆ ಚೆಲ್ಲಿ" ಅಂದಹಾಗೆ ತಿರುಗಿ ಅದೇ ಶಿಕ್ಷಣ ವ್ಯವಸ್ಥೆಗೆ ದೇಣಿಗೆಗಳನ್ನು ಕೊಡಬೇಕು.

ಒಟ್ಟಿನಲ್ಲಿ ಈ ಕೆಲಸಕ್ಕೆ ನಮ್ಮ ಜನ ಹೋಗಲಿ, ದುಡ್ಡು ಮಾಡಲಿ, ಆದರೆ ಅವರೇ ಈ ನಾಡಿನ ಶ್ರೇಷ್ಠ ಶಿಕ್ಷಕರು ಅಂತ ಜನರು ಅನ್ನೋ ಕಾಲ ಬಂದರೆ ನಾವು ಉಣ್ಣುತ್ತಿರುವುದು ಮುದುಕಿ ಹಬ್ಬದಲ್ಲಿ ಅಂತ್ಲೇ ಅರ್ಥ. ಮೊದಲನೇದು (ಹೋಗೋದು ಬಿಡೋದು) ಜನರಿಗೆ ಬಿಟ್ಟಿದ್ದು. ಎರಡನೇದು (ಜನ ನಾಮುಂದು ತಾಮುಂದು ಅಂತ ಹೋಗದಂತೆ ಮಾಡೋದು) ಸರ್ಕಾರಕ್ಕೆ ಬಿಟ್ಟಿದ್ದು, ಉದ್ಯಮಿಗಳಿಗೆ ಬಿಟ್ಟಿದ್ದು. ಸರ್ಕಾರ ಮತ್ತು ಉದ್ಯಮಿಗಳು ನಾಡನ್ನು ಕಾಪಾಡಲು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯ ಮಾಡುವುದು ನಮ್-ನಿಮ್ಗೆ ಬಿಟ್ಟಿದ್ದು. ಪ್ರತೀ ಚುನಾವಣೆಯಲ್ಲೂ ಸುಳ್ಳು ಹೇಳಿ ಹೇಳಿ ಮತ ಗಿಟ್ಟಿಸಿಕೊಳ್ಳೋ ರಾಜಕಾರಣಿಗಳಿಗೆ ಕೇಳಬೇಕು - "ಕನ್ನಡದ ಶಿಕ್ಷಣ ವ್ಯವಸ್ಥೆಯನ್ನು ಸರಿಮಾಡಲು ಏನು ಯೋಜನೆ ಹಾಕಿಕೊಂಡಿದ್ದೀರಿ?" ಅಂತ, "ನಮ್ಮ ಗುರುಗಳೆಲ್ಲ ನಮಗೆ ಪಾಠ ಹೇಳದೆ ಅಮೇರಿಕಕ್ಕೆ ಹೇಳಿಕೊಡುತ್ತಿದ್ದಾರಲ್ಲ, ಕನ್ನಡನಾಡು ಒಳ್ಳೆಯ ಶಿಕ್ಷಕರಿಲ್ಲದೆ ಕೊರಗುವ ದಿನ ಬರುವಂತಿದೆಯಲ್ಲ, ಅದಕ್ಕೇನು ಮಾಡುತ್ತೀರಿ?" ಅಂತ.

ಅಂದಹಾಗೆ...ಹೀಗೆ ಭಾರತದ ಹಳ್ಳಿ-ಹಳ್ಳಿಗಳಲ್ಲಿ ಆಳುಗಳನ್ನಿಟ್ಟುಕೊಂಡು ಇಂಗ್ಲೀಷಿನವರು ಲಾಭ ಪಡೀಬೋದು ಅಂತಾನೇ ಮೆಕಾಲೆ ಇಲ್ಲಿ ಇಂಗ್ಲೀಷ್ ಶಿಕ್ಷಣ ವ್ಯವಸ್ಥೆಯ ಬೀಜವನ್ನು ಬಿತ್ತಿದ್ದ ಅಂತ ಕಾಣತ್ತೆ! ನಮ್ಮ ಜನರಿಗೆ ಈಗಲೂ ಅರ್ಥವಾಗಿಲ್ಲ - ಇದರಿಂದ ನಾವೇ ನಮ್ಮ ಮನೆಗೇ ಮಾರಿಗಳಾಗ್ತಿದೀವಿ, ಪರರಿಗೆ ಉಪಕಾರಿಗಳಾಗ್ತಿದೀವಿ ಅಂತ.

ಈ ಸುಡುಗಾಡನ್ನು ಸುಡಬೇಕು! ಎದ್ದೇಳಬೇಕು, ಸಾಧನೆಯ ಬೆಟ್ಟದ ತುದಿಯನ್ನು ಮುಟ್ಟಿಸುವಂತಹ ಕನ್ನಡದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಕನ್ನಡಿಗ ಎದ್ದೇಳಬೇಕು! ಸಾಧ್ಯ! ಇದು ಸಾಧ್ಯ! ಬನ್ನಿ! ಎದ್ದೇಳಿ!

3 ಅನಿಸಿಕೆಗಳು:

Anonymous ಅಂತಾರೆ...

ee vyavastheyalli nIvu hELida hAge duraMtavEnO kAdide.. Adare nanna bhAvaneyalli idariMdlU namma sarkAra En mADbOdu aMdre, iMtaha kelsakke kai hAkuva shikshakara saMbaLada mAhiti paDedukoMDu avara varamAnada mEle shEkaDa 60raShTu kara vidhisidare nODi, sarkArakke haNa baruttade, aMtaha kelasakke hOguva janara saMkhyeyU kammiyAgatte :)

-Rohith

Saranga Hebbar ಅಂತಾರೆ...
This comment has been removed by the author.
Anonymous ಅಂತಾರೆ...

tuMba yOchanAyuktha lEkhanavidu. Nijavagiyu idi karnatakave chinthane madabEkAda vishayavagide. Viparyasavendare yava prajeyu idara bagge dhwani ettadiruvudu. Ene irali, lekhakaru helidante idaralli praje hagu sarkArada palu ide. Call centre intahavugalannu beleyalu bittaddu ondu balu dodda tappu. Idu janaru bharatadalliddukonde "Anna danda Bhoomi Bhara" emba paristitige baruttiddare. Kaitumba hana sikkuttiddaru tamminda ondu swalpavu samajakke upakara madalu anarharaguttiddare. Idannu modalu tappisabeku. Call center viruddha janarege tiluvalike huttuvante madabeku. Idarinda janategu olitu, samajakku olitu...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails