ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು

ನಮ್ಮ ಜನಕ್ಕೆ ಸಂಸ್ಕೃತ ಅಂದ್ರೆ ಅದೇನೋ ಕುರುಡುಭಯ, ಕುರುಡುಭಕ್ತಿ. ಅದಕ್ಕೆ ಇಲ್ಲಸಲ್ಲದ ಪಟ್ಟ ಕಟ್ಟಕ್ಕೆ ಹಿಂದೇಟೇ ಹಾಕಲ್ಲ. 25ನೇ ತಾರೀಕಿನ ವಿ.ಕ. ದಲ್ಲಿ ಯಾರೋ ಸತ್ಯನಾರಾಯಣ ಭಟ್ಟ ಅನೋರು ಬರೀತಾರೆ:
ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದವರು ಭಾರತೀಯರು, ಭಾರತೀಯ ಜ್ಞಾನ ಪರಂಪರೆಯ ಮೂಲ ಅಸ್ತಿತ್ವ ಹುದುಗಿರುವುದೇ ಸಂಸ್ಕೃತದಲ್ಲಿ. ಒಂದು ಕಾಲದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ವಾಸಿಸುವ ಸರ್ವ ಸಾಮಾನ್ಯರ ಭಾಷೆ ಇದಾಗಿತ್ತು.

ಸಂಸ್ಕೃತದಿಂದ ಕನ್ನಡದ ಪದಸಿರಿ ಇತ್ತೀಚೆಗೆ ಹೆಚ್ಚಿರೋದು ನಿಜ, ಆದ್ರೆ ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ "ಸರ್ವಸಾಮಾನ್ಯರ ಭಾಷೆ" ಆಗಿತ್ತು ಅನ್ನೋದು ಅಪರಂಜಿ ಸುಳ್ಳು. ಹಿಂದ್-ಹಿಂದೆ ಹೋದಷ್ಟೂ ಕರ್ನಾಟಕದ ನುಡಿಯಲ್ಲಿ ಸಂಸ್ಕೃತದ ಪದಗಳೇ ಸಿಗೋದಿಲ್ಲ. ಹೆಸರಾಂತ ಭಾಷಾತಜ್ಞ ಶ್ರೀ ಡಿ.ಎನ್. ಶಂಕರಭಟ್ಟರು ತಮ್ಮ ಹೊತ್ತಿಗೆ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಅನ್ನೋದ್ರಲ್ಲಿ ವೈಜ್ಞಾನಿಕವಾಗಿ ಕನ್ನಡಕ್ಕೂ ಸಂಸ್ಕೃತಕ್ಕೂ ಮಗಳು-ತಾಯಿ ಸಂಬಂಧ ಇಲ್ಲ, ಎರಡು ಭಾಷೆಗಳ ವ್ಯಾಕರಣಗಳಿಗೆ ಸ್ವಲ್ಪವೂ ನಂಟಿಲ್ಲ ಅಂತ ತೋರ್ಸಿಕೊಟ್ಟು ಹೇಳ್ತಾರೆ:
ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿರುವುದೇ ಅವುಗಳ ವ್ಯಾಕರಣ ನಿಯಮಗಳಲ್ಲಿ ಇಷ್ಟೊಂದು ವ್ಯತ್ಯಾಸಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ. ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಮೂಲದಿಂದ ಬೆಳೆದು ಬಂದಿದೆ; ಆದರೆ ಕನ್ನಡ ಭಾಷೆ ಅದಕ್ಕಿಂತ ತೀರ ಭಿನ್ನವಾದ ದ್ರಾವಿಡ ಮೂಲದಿಂದ ಬೆಳೆದು ಬಂದಿದೆ.

ಹಿಂದೆ ಕರ್ನಾಟಕದಲ್ಲಿ ಮಾತಾಡುತ್ತಿದ್ದಿದ್ದು ಸಂಸ್ಕೃತ ಅಲ್ಲ, ಆದಿದ್ರಾವಿಡ ಅನ್ನೋ ಒಂದು ಭಾಷೆ ಅಂತ ನಿಜವಾದ ಭಾಷಾವಿಜ್ಞಾನಿಗಳ ಅನಿಸಿಕೆ. ಆ ಆದಿದ್ರಾವಿಡಭಾಷೆಗೆ ಒಂದು ನಿಘಂಟ್ನ ಬರೋ ಮತ್ತು ಎಮೆನೋ ಅನ್ನೋ ಇಬ್ರು ಬರೆದು ಅಂತರ್ಜಾಲದಲ್ಲಿ ಇಟ್ಟಿದಾರೆ, ಭೇಟಿಕೊಟ್ಟು ನೋಡಿ. ಭಾರತದ ಭಾಷಾ ಕುಟುಂಬಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪಟ ನೋಡಿ (ಕ್ಲಿಕ್ಕಿಸಿದರೆ ದೊಡ್ಡದಾಗತ್ತೆ):


ಕನ್ನಡ ಸಂಸ್ಕೃತದಿಂದ ಬೆಳೆದುಬಂದ ಭಾಷೆ ಅಲ್ಲವೇ ಅಲ್ಲ. ಇದು ಪ್ರಪಂಚದ ಭಾಷಾವಿಜ್ಞಾನಿಗಳಿಗೆಲ್ಲಾ ಗೊತ್ತು. ಇಷ್ಟೆಲ್ಲಾ ಇದ್ರೂ ಸುಳ್ಳು ಹೇಳ್ಕೊಂಡು ಸಂಸ್ಕೃತಕ್ಕೆ ಪೂಜೆ ಮಾಡ್ಕೊಂಡು ಕೂರೋ ಜನಕ್ಕೆ ಯಾವಾಗ ಬುದ್ಧಿ ಬರತ್ತೆ ಗುರು? ಆಧಾರವಿಲ್ದೆ ಬಾಯಿಗೆ ಬಂದಂಗೆ ಮಾತಾಡೋದ್ನ ಯಾವಾಗ ನಿಲ್ಸ್‍ತಾರೆ ಗುರು?

ಹೀಗೆ ಹೇಳಿದ ಮಾತ್ರಕ್ಕೆ "ನೀವು ಸಂಸ್ಕೃತವಿರೋಧಿಗಳು = ಸಂಸ್ಕೃತಿವಿರೋಧಿಗಳು = ರೌಡಿಗಳು" ಅನ್ನೋ ಪಟ್ಟ ಕಟ್ಟಕ್ಕೆ ಸಕ್ಕತ್ ಜನ ಮುಂದೆ ಬರ್ತಾರೆ. ಆದರೆ ಔರು ಪೆದ್ದರು, ಆಧಾರವಿಲ್ಲದೆ ಮಾತಾಡೋರು. ಸಂಸ್ಕೃತಕ್ಕೂ ನಮಗೂ ಸಂಬಂಧವಿಲ್ಲ ಅಂದ್ರೆ ಅದನ್ನ ವಿರೋಧಿಸಿದಂಗಲ್ಲ. ಸಂಸ್ಕೃತ=ಸಂಸ್ಕೃತಿ ಅನ್ನೋದೂ ಸುಳ್ಳು. ಸಂಸ್ಕೃತದಿಂದ ಕಲೀಬೇಕಾದ್ದನ್ನ ಕಲಿಯೋದು ಬಿಟ್ಟು, ಗೋವಿಂದನ್ನ ಬಿಟ್ಟು ಬರೀ ಡುಕೃಂಕರಣೇಲೇ ಜೀವನ ಕಳೀತಾರಲ್ಲ, ಬರೀ ಸಿಪ್ಪೆ ತಿನ್ನೋದ್ರಲ್ಲೇ ಜೀವನ ಕಳೀತಾರಲ್ಲ ಈ ಸಂಸ್ಕೃತಭಕ್ತರು ಅಂತ ಬೇಜಾರಾಗತ್ತೆ ಗುರು!
ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ ||

ಓ ಕನ್ನಡಜನಾಂಗದವನೇ, ನಿನ್ನ ಜನಾಂಗಕ್ಕೆ, ನಿನಗೆ ಕಾಲ ಸನ್ನಿಹಿತವಾಗಿದ್ದಾಗ, ನಿನ್ನ ಏಳ್ಗೆಯೇ ಒಂದು ಪ್ರಶ್ನೆಯಾಗಿರುವಾಗ ಡುಕೃಂಕರಣೆಯನ್ನು ಬಿಡು! ಇಲ್ಲದ, ನೀನೇ ಕಲ್ಪಿಸಿಕೊಟ್ಟ ಪಟ್ಟದಿಂದ ಸಂಸ್ಕೃತವನ್ನು ಇಳಿಸಿ ಗೋವಿಂದನನ್ನು ಭಜಿಸು, ಸಂಸ್ಕೃಭಾಷೆಗೂ ನಿನಗೂ ಯಾವ ಸಂಬಂಧವಿಲ್ಲದಿದ್ದರೂ ಅದರಲ್ಲಿರುವ ಜ್ಞಾನವನ್ನು ನಿನ್ನದಾಗಿಸಿಕೋ! ನಿಜವಾದ ಜ್ಞಾನವನ್ನು ಪಡೆ, ಯಾರೋ ಹೇಳಿಕೊಟ್ಟ ಸುಳ್ಳಿಗೆ ಮಾರುಹೋಗಬೇಡ! ಸಂಸ್ಕೃತದಲ್ಲಿರೋ ಅದ್ಭುತವಾದ ಜ್ಞಾನವನ್ನ ಪಡೀಬೇಕು, ನಿಜ. ಅದರಿಂದ ಕಲೀಬೇಕು (ಈಗಲಂತೂ ಸಂಸ್ಕೃತದಲ್ಲಿ ಓದಕ್ಕೆ ಯೋಗ್ಯವಾಗಿರೋದೆಲ್ಲ ಕನ್ನಡಕ್ಕೆ ಅನುವಾದ ಆಗಿದೆ), ನಿಜ. ಅದನ್ನ ಕಲಿಯಕ್ಕಾಗದೇ ಇರೋ ಪೆದ್ದರಲ್ಲಿ ಅರಸರೇ ಸಂಸ್ಕೃತ ಅನ್ನೋದಕ್ಕೆ ಇಲ್ಲಸಲ್ಲದ ಸ್ಥಾನ ಕೊಟ್ಟು ತಲೆಮೇಲೆ ಕೂಡಿಸಿಕೊಳ್ಳೋದು.

ಬೇರೆ ಭಾಷೆಗಳಲ್ಲಿರೋ ಜ್ಞಾನ ಪಡ್ಕೋಬೇಕು. ಆದ್ರೆ ಅವುಗಳ್ಗೆ ಇಲ್ಲಸಲ್ಲದ ಪಟ್ಟ ಕಟ್ಟೋದು ಬಿಡಬೇಕು ಗುರು!

117 ಅನಿಸಿಕೆಗಳು:

Anonymous ಅಂತಾರೆ...

http://ccat.sas.upenn.edu/~haroldfs/sars238/shortencybrit.html

ದ್ರಾವಿಡ ನುಡಿಗಳು ಬಗ್ಗೆ ಅಲ್ಲಿ ನೋಡಿರಿ....

ಸಂಸ್ಕೃತದ ಬಗ್ಗೆ ಸುಮ್ಮಸುಮ್ಮನೇ ಏನೇ ಕುರುಡು ನಂಬಿಕೆ ಬೆಳಸಿಕೊಂಡು ಎಗ್ಗಿದ್ದೆ ಕನ್ನಡಕ್ಕೆ ಸಂಸ್ಕೃತದ ಪದಗಳನ್ನ ಬೆರೆಸಿ ಕನ್ನಡದ ಸೊಗಡನ್ನು ಕೆಡಿಸಿ, ಕನ್ನಡವನ್ನು ಆರಾಮಾಗಿ ಅರ್ಥ ಮಾಡಿಕೊಳ್ಳದ ಹಾಗೆ ಮಾಡಿಬಿಟ್ಟಿದ್ದಾರೆ.

ಇಗಲಾದರು ಈ ಕುರುಡು ಹೋಗಿ, ನಮ್ಮ ಕಣ್ತೆರೆಯುವುದೋ ನೋಡೋಣ. ಹಾರೈಕೆ.

ಒಳ್ಳೆಯ ಬರಹ, ನನ್ನಿ!

Anonymous ಅಂತಾರೆ...

’ಎಗ್ಗಿದ್ದೆ’ ಇದು ಎಗ್ಗಿಲ್ಲದೇ ಎಂದು ಆಗಬೇಕಿತ್ತು.
’ಇಗಲಾದರು’ ಈಗಲಾದರೂ ಆಗಬೇಕಿತ್ತು

ತಪ್ಪಚ್ಚುಗಳಿಗೆ ಮನ್ನಿಸಿರಿ

Rohith B R ಅಂತಾರೆ...

ಕೇಂದ್ರ ಸರ್ಕಾರದ ನೆರವಿನಲ್ಲಿ ಸಂಸ್ಕೃತದ ಪ್ರಚಾರ ನಡೆಯುತ್ತಿದೆ - ಸಂಸ್ಕೃತ ಭಾರತಿ ಎಂಬ ಹೆಸರಿನಲ್ಲಿ. ಇವರು ಹೇಳುವುದೆಲ್ಲಾ ಇದೇ - ಏನೆಂದರೆ ಸಂಸ್ಕೃತದಿಂದ ನಮ್ಮ ಎಲ್ಲಾ ಭಾಷೆಗಳು ಹುಟ್ಟಿವೆ ಅಂತ!! ಇದಕ್ಕೆ ಪ್ರತ್ಯುತ್ತರವಾಗಿ ತಮಿಳುನಾಡಿನಲ್ಲಿ ಇವರಿಗೆ ಸರಿಯಾದ ಡಿಶುಂ-ಡಿಶುಂ ಸಿಕ್ಕಿದೆ, ಸಿಗ್ತಾ ಇರತ್ತ್ತೆ.. ಅವರು ಈ ಮೋಸದ ಮಾತಿಗೆ ಮೋರೆ-ಹೋಗದೆ, ಸಂಸ್ಕೃತವನ್ನು ಹೇಳಿಕೊಡಿ, ಆದರೆ ತಮಿಳು ಲಿಪಿಯನ್ನೇ ಉಪಯೋಗಿಸಿ ಅಂತ ಹೇಳ್ತಾರೆ! ಅವರಲ್ಲಿನ ಭಾಷಾ ಜಾಗ್ರುತಿ ಮೆಚ್ಚಬೇಕು, ನಮಗೂ ಅದು ಅಂಟಿಕೊಳ್ಳಬೇಕು. ನನ್ನ ವಿಚಾರದಲ್ಲಿ ಕನ್ನಡ ಭಾಷೆ ತಮಿಳಿಗಿಂತ ಮಿಗಿಲಾದ ಭಾಷೆಯೇ, ಅದ್ಧರಿಂದ ನಮಗೆ ಅವರಿಗಿಂತ ಮಿಗಿಲಾದ ಹೆಮ್ಮೆ ಇರಲೇಬೇಕು..

ತುಂಬ ಒಳ್ಳೆಯ ಲೇಖನ.. ಇಲ್ಲಿ ಕೂಡಲಾಗಿರುವ ವಿಕಿ ಕೊಂಡಿಗಳೂ ಸಹ ಕನ್ನಡದಲ್ಲಿದ್ದಿದರೆ ಚೆನ್ನಾಗಿರ್ತಿತ್ತು.. ನಾವು ಸಹಾಯ ಮಾಡಬಹುದೆ?

Anonymous ಅಂತಾರೆ...

ಅಲ್ರೀ ಗುರುಗಳ್,, ಸಂಸ್ಕೃತ, ಸಂಸ್ಕೃತ ಅಂತ ಬಾಯಿ ಬಡಕೋಳ್ಳೊರಿಗ್ ಏನ್ ಹೇಳುದು waste ರೀ.. ಆದ್ರ ಇಗ ಬರದಿರಲ್ಲ ,, ಹಂಗ ಬರದು, ನಮ್ಮ ಭಾಷಾಕ್ ಇರು ಇತಿಹಾಸ್, ಅದಕ್ಕಿರು uniqueness, ಅದರಾಗ್ ಇರು ಅಂತಸತ್ವದ ಬಗ್ಗೆ ನಮ್ಮಂತಾ ಕಿರಿಯರನ್ನು ಜಾಗ್ರತ್ ಮಾಡಾತಿರಿಲ್ಲ.. ಅದು ಅಗದಿ ಚಲೊ ಕೆಲಸಾ.. ನಾ ..ಯಾಕ್ ಹೇಳಾಕತ್ತೆನಿ ಅಂದ್ರ,, ನಮ್ಮ genaration ನಾಗ್ ಬಾಳ ಮಂದಿಗ್ ಇವೆಲ್ಲಾ ವಿಷಯಗಳು ಚಲೊತಂಗ್ ಗೊತ್ತಾ ಇಲ್ರಿ,, ಹಿಂಗ.. ನಮ್ಮ ಭಾಷಾಕ್ ಇರು ಹಿರಿಮೆ, ಗರಿಮೆ ತಿಳಸಿ ನಮ್ಮ ಮಂದಿಗ್ ಇರು ಕೀಳರಮಿ ಕಮ್ಮಿ ಮಾಡು ಕೆಲಸ ಮಾಡ್ರಿ,,,
ನಿಮ್ಮ ಬಗ್ಗೆ ಬಾಳ ಖುಶಿ ಆಗ್ತೆತ್ರಿ...

Anonymous ಅಂತಾರೆ...

ಖಂಡಿತ ಸತ್ಯವಾದ ಮಾತು ಹೇಳಿದಿರಿ. ನಮ್ಮ ಜನಕ್ಕೆ ಅದರಲ್ಲು ರಾಜಕಾರಿಣಿಗಳಿಗೆ ನಮ್ಮ ಭಾಷೆಗಿಂತ ಸಂಸ್ಕ್ರುತಕ್ಕೆ ಹೆಚ್ಚು ವ್ಯಾಮೋಹ ಅನಿಸುತ್ತದೆ. ಅದರಿಂದೆ ಎಲ್ಲರು ಸಂಸ್ಕ್ರುತಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ನಮ್ಮ ಶಾಲೆಗಳಲ್ಲು ಇದೇ ಆಗುತ್ತಿರುವುದು. ಯಾವುದೆ logic ಇಲ್ಲದೆ ಮಕ್ಕಳಿಗೆ misguide ಮಾಡಲಾಗುತ್ತಿದೆ. 'ನೀವು ಸಂಸ್ಕ್ರುತ ತೆಗೆದುಕೊಂಡರೆ ಚೆನ್ನಾಗಿ score ಮಾಡಬಹುದು' ಎಂದು ಹೇಳಿ ಸಂಸ್ಕ್ರುತ ಕೊಡಿಸಲಾಗುತ್ತಿದೆ. ಇದೇ ಮೋಸಕ್ಕೆ ನಾನು ಬಲಿಯಾದೆ ಎಂದು ಹೇಳಲು ಬೇಜಾರಾಗುತ್ತಿದೆ. ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಅಧ್ಯಾಪಕರುಗಳೆ ಹಿಂಗಾದರೆ ಹೆಂಗೆ ಗುರು? ಇದನ್ನು ತಡೆಗಟ್ಟಲು ಎನೂ ಮಾಡಲಾಗುವುದಿಲ್ಲವೆ?
ಇಡೀ ಪ್ರಪಂಚದಲ್ಲೆ ಯಾರು ಮಾತನಾಡದೆ ಇರುವ ಭಾಷೆಯನ್ನು ಕಲಿಸುವುದಾದರು ಯಾಕೆ ಗುರು? ನನ್ನನ್ನು ಕೇಳಿದರೆ ಸಂಸ್ಕ್ರುತ, ಹಿಂದಿ ಇವುಗಳನ್ನೆಲ್ಲ ಶಾಲೆಗಳಲ್ಲಿ ತೆಗೆದೆ ಬಿಡಬೇಕು ನೋಡಿ.

Anonymous ಅಂತಾರೆ...

super guru. buddi illade naavu saha prouda shaleyalli samskrutha thagonde idvi. aglu hertha idru. eeglu ertha idare. ajja haakida alada marakke jotadbeku antha.
irli ondalla ondu dina ivarellara kannu thegyatte guru. innu ee tarada lekana barli guru ninna lehani, ninna kaiinda.
Karuna

Anonymous ಅಂತಾರೆ...

ಸೂಪರ್‍ ಗುರು!!

ನೆಟ್ಟಗೆ ಕನ್ನಡ ಮಾಡೋರು ಅಂದ್ರೆ ಹಳ್ಳಿಮುಕ್ಕರು.

"ಬನ್ನಿ/ಹೋಗಿ/ತಿನ್ನಿ" ಅನ್ನೋ ಬದಲು "ಆಗಮಿಸಿ/ನಿರ್ಗಮಿಸಿ/ಭೋಜನ ಸ್ವೀಕಾರಿಸಿ" ಅಂತ ತಲೆಹರಟೆ ಮಾಡಿಕೊಂಡು, ಇನ್ನೊಬ್ಬರನ್ನ ಕೀಳಾಗಿ ಕಂಡುಕೊಂಡು, ಸತ್ತ ಬಾಸೆಯನ್ನ ಹೊಗಳಿಕೊಂಡಯ ಬದುಕೋ, ಸಂಸ್ಕ್ರುತ fanaticsಗಳಿಗೆ ಒಳ್ಳೆಯ ಉತ್ರ ಕೊಟ್ಟಿದ್ದೀಯಣ್ಣ.

ಸಂಸ್ಕ್ರತ ಓದೋರು ಓದಿ ಯಾರು ಬೇಡ ಅಂತಾರೆ;

ಆದರೆ ಸುಮ್‌ಸುಮ್ಕೆ ಸಂಸ್ಕ್ರುತದ ಮುಂದೆ ನಮ್ಮ ಕನ್ನಡ ಕೀಳು, ಜಾಳು, ಮಣ್ಣಮಸಿ, ಸಂಸ್ಕ್ತತದಾಗೇ ಎಲ್ಲ ಇರೋದು, ಅಂತ ಸುಳ್ಳು ಪೊಳ್ಳು ಅನ್ನೋರು, ಈಗ ಮುಚ್ಚಿಕೊಂಡಿರೋ ಹಂಗೆ ಪಾಟ ಹೇಳಿದ್ದೀರಪ್ಪ!!

ಹಿಂಗೇ ಬರೆಯಣ್ಣ, ಒಳ್ಳೇದಾಗಲಿ.

Anonymous ಅಂತಾರೆ...

GurugaLe, Samskritakke adarade aada ondu shreshtate ide..Kannadakku adarade shreshtate ide..kannadavanne baLasona..aadare Samskrutakke patta kattona emba maatu heLiddiya..idu sari ansatte.

Samskruta kooda ondu adbhuta bhaashe..ballavane balla bellada saviya anta aa bhaashe ballavarige gottu adara gammattu..ee vaakyagaLu kannadakkoo anvayisuttave..

Anonymous ಅಂತಾರೆ...

ಗುರುಗಳೆ, ಸತ್ಯನಾರಾಯಣ ಭಟ್ಟರ ಲೇಖ್ಹನ ನಾನೂ ಓದಿದೆ..ಕೆಲವು ಅತಿರೇಕದ ವಿಶಯಗಳಿವೆ. ಹಿಂದೂ ಧರ್ಮದ ಮೂಲ ವೇದಗಳೆಲ್ಲವೂ ಸಂಸ್ಕ್ರುತದಲ್ಲೆ ಇವೆ..ಆದ್ದರಿಂದ ಸಂಸ್ಕ್ರುತ ಕಲಿಯಲು ಆಸಕ್ತಿ ಇದ್ದವರಿಗೆ ಕಲಿಸಲು, ಸಂಸ್ಕ್ರುತ ಉಪಾದ್ಃಯಾಯರ ಅಗತ್ಯ ಇದೆ ಯೆನ್ದು ಆ ಲೇಖ್ಹನದಲ್ಲಿ ಹೇಳಲಾಗಿದೆ.ಅದರಲ್ಲಿ ತಪ್ಪೇನಿದೆ?

Anonymous ಅಂತಾರೆ...

ನರಸಿಂಹ ಅವರೆ,

ಇಲ್ಲಿ ಚರ್ಚೆ ನಡೆಯುತ್ತಿರುವುದು ಸತ್ಯನಾರಾಯಣಭಟ್ಟರು "ಒಂದು ಕಾಲದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ವಾಸಿಸುವ ಸರ್ವ ಸಾಮಾನ್ಯರ ಭಾಷೆ ಇದಾಗಿತ್ತು" ಎಂದಿರುವುದರ ಬಗ್ಗೆ ಮಾತ್ರ. ಅವರು ಬರೆದಿರೋ ಮಿಕ್ಕೆದ್ದೆಲ್ಲದರ ಬಗ್ಗೆ ಚರ್ಚೆ ತೆಗೆಯಬೇಡಿ. ಅದಿಲ್ಲಿ ಹೊಂದುವುದಿಲ್ಲ. ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?

Anonymous ಅಂತಾರೆ...

Ravi avare, nanage enguru..na anisike bagge ellashtu besaravilla..aadare satyanarayana bhattara lekhanadallina kelavu uttama amshagaLannu bittu kevala kelavu asambadhavishayagalanne doddadu maadiddare engurugaLU..idu sariye?

Anonymous ಅಂತಾರೆ...

ನರಸಿಂಹ

೧)=========================
ನಿಮ್ಮ ಮಾತು ಹಿಂದು ಧರ್ಮದ ತಪ್ಪು ತಿಳಿವಳಿಕೆ.

ಹಿಂದು ಅನ್ನೋದು ಒಂದು ನಂಬಿಕೆ ಅಲ್ಲ!! ವೇದ ಮತ್ತು ವೈದಿಕ ನಂಬಿಕೆ ಹಿಂದು ಧರ್ಮದ ಒಂದು ಅಂಗ, ಆದರೆ ಇದೇ ಹಿಂದು ಧರ್ಮದ ಮೂಲವೂ ಸರ್ವಸ್ವವೂ ಅಲ್ಲ.

ಹಿಂದುಗಳಾದ ಲಿಂಗಾಯತರು, ವೇದವನ್ನು ನಿರಾಕರಿಸಿದವರು, ಅಲ್ಲಮ್ಮ ವೇದಗಳ ಹಳಿದಿದ್ದಾನೆ. ಹಾಗೆ ಒಕ್ಕಲಿಗರು, ಕುರುಬರು, ಇನ್ನು ಮುಂತಾದ ದಕ್ಷಿಣ ಭಾರತದ ಸಮುದಾಯಗಳ ವೇದವನ್ನು ಪಾಲಿಸಲ್ಲ. ಅವರ ನಂಬಿಕೆ ವೇದದಲ್ಲಿ ಇಲ್ಲ. ಆದರೂ ಅವರೆಲ್ಲ ಹಿಂದುಗಳಲ್ವೇ?

ಆದುದರಿಂದ "ಹಿಂದೂ ಧರ್ಮದ ಮೂಲ ವೇದಗಳೆಲ್ಲವೂ ಸಂಸ್ಕ್ರುತದಲ್ಲೆ ಇವೆ.." ಈ ಮಾತು ಸರಿಯಿಲ್ಲ.

ಆದುದರಿಂದ ಹಿಂದು ಧರ್ಮಕ್ಕಾಗಿ ಸಂಸ್ಕೃತ ಕಲಿಯಬೇಕಿಲ್ಲ, ಕನ್ನಡ ವಚನಗಳು, ದಾಸ ಸಾಹಿತ್ಯ, ತಮಿಳಿನ ಆಳ್ವಾರರ ರಚನೆ, ಮುಂತಾದವೂ ಹಿಂದೂ ಧರ್ಮವನ್ನೇ ಹೇಳಿಕೊಡುವುದು.

ಬರೀ ವೇದದ ಹೇಳಿದ ದೇವರುಗಳನ್ನು ಮಾತ್ರ ಪೂಜಿಸಬೇಕು ಎಂದು ಹೊರಟರೆ, ನಮ್ಮ ಮಲೆಯ ಮಹದೇವ, ಬಿಸಿಲು ಮಾರಮ್ಮ, ಅಣ್ಣಮ್ಮ, ಮಂಜುನಾಥ, ಶ್ರೀನಿವಾಸ, ಮುಂತಾದವರನ್ನು ಹಿಂದು ಪೂಜಿಸಲೇ ಬಾರದು, ಕಾರಣ ಇವರು ವೇದದಲ್ಲಿ ಸಿಗುವುದಿಲ್ಲವಂತೆ.

ಹಿಂದು ಧರ್ಮಕ್ಕೇ ಸಂಸ್ಕೃತಭಾಷೆಯೊಂದೇ ಆಧಾರವಲ್ಲ.!!

೨)===========================
ವೇದಗಳು ಸಂಸ್ಕೃತದಲ್ಲಿ ಇಲ್ಲ!

ವೇದಗಳು ಇರುವುದು ವೇದ-ಭಾಷೆಯಲ್ಲಿ. ಈ ವೇದಭಾಷೆಯ ಒಂದು ಉಪಭಾಷೆ ಸಂಸ್ಕೃತ. ಪಾಣಿನಿ ವೇದಭಾಷೆಯನ್ನು ಆಧಾರವಾಗಿಟ್ಟುಕೊಂಡು ಸಂಸ್ಕೃತವೆಂಬ ಭಾಷೆಯನ್ನು ಕವಲೊಡೆಸಿದನು.

ಈ ವೇದಭಾಷೆಯಿಂದ ಇನ್ನೂ ಹಲವ ಉಪಭಾಷೆಗಳೂ ಬಂದಿವೆ.

ವೇದಭಾಷೆಯ ವ್ಯಾಕರಣಕ್ಕೂ, ಶಾಸ್ತ್ರೀಯ ಸಂಸ್ಕೃತದ ವ್ಯಾಕರಣಕ್ಕೂ ಬಹಳ ವ್ಯತ್ಯಾಸಗಳಿವೆ. ವೇದಭಾಷೆಯಲ್ಲಿ ೧೨ ಲಕಾರಗಳಿದ್ದರೆ, ಸಂಸ್ಕೃತದಲ್ಲಿ ಬರೀ ೮ ಲಕಾರಗಳಿವುದು

ವೇದದಲ್ಲಿ 'ಳ'ಕಾರದ ಬಳಕೆ ಇದೆ ಆದರೆ ಸಂಸ್ಕೃತದಲ್ಲಿ ಲಳಗಳ ನಡುವೆ ಭೇದವಿಲ್ಲ.

ಹೀಗೆ ವೇದಭಾಷೆಯೇ ಬೇರೆ, ಪಾಣಿನೀಯ ಸಂಸ್ಕೃತವೇ ಬೇರೆ.

ದಯವಿಟ್ಟು ಇದನ್ನು ಸರಿಯಾಗಿ ಅರಿಯಬೇಕು. ವೇದಭಾಷೆಯನ್ನು ಸಂಸ್ಕೃತ ಅನ್ನುವುದು, ವೇದಭಾಷೆಯನ್ನು ಹಿಂದಿ, ಬಂಗಾಳಿ ಅಂಹ ಹಾಗೆ. ಏಕೆಂದರೆ ವೇದಭಾಷೆಯಿಂದ ಸಂಸ್ಕೃತದಂತೆ ಹಲವು ಭಾಷೆಗಳು ಹುಟ್ಟಿಬಂದಿದೆ.

ಆದುದರಿಂದ "ವೇದಗಳೆಲ್ಲವೂ ಸಂಸ್ಕ್ರುತದಲ್ಲೆ ಇವೆ." ಇದು ಅಷ್ಟು ಸರಿಯಲ್ಲ. ವೇದಗಳು ವೇದಭಾಷೆಯಲ್ಲಿದೆ.

೩===============================
ವಿಟ್ಟಲರಾಯರೇ,

ಹಲವರು ಸಂಸ್ಕೃತ ಬರುವುದು ಎಂದ ಹೇಳಿಕೊಂಡರು ಅವರಿಗೆ ಸರಿಯಾಗಿ ಬರುವುದಿಲ್ಲ.

ಸಂಸ್ಕೃತದಲ್ಲಿ "ಅವನು, ಇವನು, ಇವಳು" ಇವಕ್ಕೆ ನಿರ್ದಿಷ್ಟ ಪದಗಳಿಲ್ಲ. "ಸಃ, ಸಾ, ತತ್" ಅಂದರೆ ಕನ್ನಡದಲ್ಲಿ ಅವನು, ಅವಳು, ಅದು ಎಂದಲ್ಲ. "ಸಃ" ಅಂದರೆ "ಅವನು, ಅವಳು, ಅದು" ಇವು ಮೂರು ಆಗಬಹುದು.

ದಯವಿಟ್ಟು ಶಂಕರಭಟ್ಟ ಈ ಕೆಳಗಿ ಪುಸ್ತಕಗಳನ್ನು ಆಸಕ್ತಿಯುಳ್ಳವರು ಓದಿ ತಿಳಿದುಕೊಳ್ಳಬಹುದು
೧) ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
೨) ಕನ್ನಡ ಬರಹವನ್ನು ಸರಿಪಡಿಸೋಣ
೩) ಕನ್ನಡ ಸರ್ವನಾಮಗಳ

ಇವುಗಳಲ್ಲಿ ಸಂಸ್ಕೃತ ಮತ್ತು ಕನ್ನಡ ವ್ಯತ್ಯಾಸವನ್ನು ಸುಸ್ಪಷ್ಟವಾಗಿ ಹೇಳಿಕೊಟ್ಟಿದ್ದಾರೆ.

ಇನ್ನು ಸಂಸ್ಕೃತ ಬಲ್ಲವರಿಗೆ ಅದರ ಸವಿ ಗೊತ್ತು. ಆದರೆ ಆದರೆ ಕರ್ನಾಟಕದಲ್ಲಿ ಎಷ್ಟು ಮಂದಿಗೆ ಸಂಸ್ಕೃತ ಬರುವುದು? ಇನ್ನು ಅನಕ್ಷರಸ್ಥರು, ಕೊಂಚ ಓದಿದವರೂ, ಕಲಿತವರೂ ಇವರೇ ಹೆಚ್ಚು ನಮ್ಮ ನಾಡಲ್ಲಿ.

ಇವರಿಗೆ ತಮ್ಮ ತಾಯ್ನುಡಿ ಕನ್ನಡವನ್ನು ಓದಿ, ಬರೆದು, ಉಲಿಯುವುದರಲ್ಲೇ ತೊಡಕು, ಇನ್ನು ಅಧಿಕವಾಗಿ ಸಂಸ್ಕೃತದ ಪದಗಳನ್ನು ಬರೆಸಿದ ಬರೆವಣಿಗೆ ಹೇಗೆ ತಾನೆ ಅವರ ತಲೆಗಿಳಿಯುವುದು. ಅದಕ್ಕೆ ನಮ್ಮ ಕನ್ನಡನಾಡಿ ಹೆಚ್ಚಿ ಸಂಖ್ಯೆಯ ಜನರಿಗೆ ಸಂಸ್ಕೃತದ ಪದಗಳ ಅಧಿಕ ಬಳಕೆ ಅಪಯಕಾರಿ.!

ಆದದರಿಂದ ನಾವೆಲ್ಲ ಬರೆಯುವವಾಗ ಸರಳವಾದ ಆಡುಗನ್ನಡಕ್ಕೆ ಹತ್ತಿರವಾಗಿ ಬರೆಯುವುದು ಒಳಿತಲ್ಲವೇ! ಈ ಆಡುಗನ್ನಡದಲ್ಲಿ ಸಂಸ್ಕೃತದ ಪದಗಳು ವಿರಳ.

೪================================
ಏನ್‌ಗುರು ಅವರ ಈ ಬರಹ ಆಶಯ ಚನ್ನಾಗಿದೆ. ಅವರೇ ಅದನ್ನು ತಿಳಿಯಾಗಿ ಹೇಳಿಬಿಟ್ಟಿದ್ದಾರೆ.

ಕನ್ನಡವೊಂದು ಸಾಯುತ್ತಿರುವ ಭಾಷೆ, ದಿನದಿಂದ ದಿನಕ್ಕೆ ಇದರ ಹರವು ಕಡಮೆಯಾಗುತ್ತಾ ಇದೆ.( ಹೀಗೆ ಹೆಚ್ಚಿನವರು ಹೇಳುವರು)

ನಮ್ಮ ಜನರಿಗೆ ಈ ಕನ್ನಡತನದ ಕನ್ನಡ ಬೇಕು. ಸಂಸ್ಕೃತೀರಣದಿಂದ ಕಠಿಣವಾದ ಕನ್ನಡವಲ್ಲ. ಅದಕ್ಕಾಗಿ ಈ ಬನವಾಸಿ ಬಳಗದ ಒಳ್ಳೆಯ ಮಂದಿ ಕಾಳಜಿ ತೋರಿಸಿದ್ದು ಹೊಗಳತಕ್ಕದ್ದು.

೫)=========================
ಸಂಸ್ಕೃತ ಪ್ರೇಮಿಗಳೇ,

ಒಂದು ವಿನಂತಿ, ಸಂಸ್ಕೃತವನ್ನು ಉಳಿಸೋಣ, ಬೆಳೆಸೋಣ. ಆದರೆ ಈ ಸಂಸ್ಕೃತದ ಉಳಿಸಿಕೆ, ಬೆಳೆಸಿಕೆ, ಕನ್ನಡದ ಉಳಿವು ಬೆಳೆವುಗಳಿಗೆ ಮಾರಕ, ತೊಡಕು ಆಗಬಾರದು.

ಅತಿಯಾಗಿ ಕನ್ನಡದಲ್ಲಿ ಸಂಸ್ಕೃತದ ಬಳಕೆ ಕನ್ನಡದಲ್ಲಿ ಬಹಳ ಮಾರಕ. ಸಾಮಾನ್ಯ ಕನ್ನಡಿಗರಿಗೆ ಅದು ಕಬ್ಬಿಣದ ಕಡಲೆ. ಅದು ಕನ್ನಡ ಓದುಗರ ಸಂಖ್ಯೆಯನ್ನು ಕಡಮೆ ಮಾಡುವುದು.

ಏನ್ಗುರು ನನ್ನಿ!

Anonymous ಅಂತಾರೆ...

ನರಸಿಂಹ ಅವರೆ,

ಸತ್ಯನಾರಾಯಣಭಟ್ಟರು ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಸರ್ವಸಾಮಾನ್ಯರ ಭಾಷೆಯಾಗಿತ್ತು ಅನ್ನುವುದೊಂದೇ ಇಲ್ಲಿ ಚರ್ಚೆಗೆ ಅರ್ಹ. ಮಿಕ್ಕಿದ್ದೆಲ್ಲ ಏನಿದ್ದರೇನು? ಅದರ ಬಗ್ಗೆ ಇಲ್ಲಿ ಮಾತೇ ಬೇಡ. ಅಲ್ಲವೆ?

"ಅಸಂಬದ್ಧವಾದ ವಿಷಯಗಳನ್ನೇ ದೊಡ್ಡದು ಮಾಡಿದ್ದಾರೆ" ಎನ್ನುವುದರಲ್ಲಿ ಯಾವುದು ಅಸಂಬದ್ಧ ಎನ್ನುವುದು ನಿಮ್ಮನ್ನು ನೀವು ಯಾರೆಂದು ಗುರುತಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆಯಲ್ಲವೆ? ಒಬ್ಬ ಇಂಗ್ಲೀಷಿನವನಿಗೆ ಸಂಸ್ಕೃತವೂ ಅಸಂಬದ್ಧ, ಕನ್ನಡವೂ ಅಸಂಬದ್ಧ.

ನಿಮ್ಮನ್ನು ನೀವು ಒಬ್ಬ ಕನ್ನಡಿಗ ಎಂದು ಗುರುತಿಸಿಕೊಂಡು ಕನ್ನಡದ ಕಣ್ಣಿನಿಂದ ಸತ್ಯನಾರಾಯಣಭಟ್ಟರ ಬರಹವನ್ನು ನೋಡಿದಾಗ ಕರ್ನಾಟಕದಲ್ಲಿ ಹಿಂದೆ ಕನ್ನಡವೆನ್ನುವುದೇ ಇರಲಿಲ್ಲ ಎನ್ನುವುದೇ ಹೆಚ್ಚು "ಸಂಬದ್ಧ". ಅದು ಬಿಟ್ಟು ಸತ್ಯನಾರಾಯಣ ಭಟ್ಟರ ಸಂಸ್ಕೃತದ ಶಿಕ್ಷಕರ ಬಗ್ಗೆಯ ಅಳಲೇ "ಅಸಂಬದ್ಧ".

ಅಲ್ಲವೆ?

Breeze ಅಂತಾರೆ...

This is a forum of really jobless people. Illi janara vicharagalu odida mele, kelavu vishayagalu spashatavaguthave...

1. Illi barayuvavaralli 98% mandige linguistics na swalpavu arivilla. Bhashegalu hege evolve aguthave annuva gnana illave illa.

2. Karnataka ella bhaashegaligu asare needi avugalinda innashtu sirivanthike padedide annuva manognaana illa.

3. Tamil antha narrow-minded mandigala jothe compete maadalu prayathnisuthidira. Paapa, aa pranigalu IT office nalli Antakshari aagali, get together aagali tamma bhaasheya haadugalannu kelade, bereya bhaashe arthavagade eshtu chadapadisuthare ennuvudu enu gottu? Ade kannadadavarella ella bhaashegala olleya haadugalannu anubhavisi anand paduthare.

Heege, bahala helabahudu. Aadare, intha narrow-minded blog odi nanage kannadiganagiruva hemme kaledukollalu ishtavilla.

Enjoy maadi!

Anonymous ಅಂತಾರೆ...

ಲೋ ಕಚಡಾ ನನ್ ಮಗ್ನೆ...ಸ್ಕಾರ್ಡ್ ಲೆಟರ್ಸಂತೆ ನಿಮ್ಮೌನ್ ನಿನ್ ಬ್ಲಾಗಲ್ಲಿ ಬರೀ ಗೇ-ಗಳ ಬಗ್ಗೆ ಬರ್ಕೊಂಡು ಕೂತ್ಕೊಳಕ್ಕೆ ನೀನು ಲಾಯಕ್ಕು. ಇಲ್ಲೀಗ್ ಯಾಕ್ ಬಂದೆ? ನೀನ್ ಏನ್ ಲಿಂಗ್ವಿಸ್ಟಿಕ್ಸ್ ನಲ್ಲಿ ಕಿಸ್ದಿರೋದು ಹೇಳು? ಇಲ್ಲಿ ತಲೆ ಸೊಂಟದ ಮೇಲಿನ ಕೆಲಸ. ಸೊಂಟದ ಕೆಳಗಿನ ಕೆಲಸಕ್ಕೆ ನಿನ್ ಬ್ಲಾಗ್ ಇದ್ಯಲ್ಲ, ಅಲ್ಲೇ ಇರು, ಸಾಕು. ಬಂದ ಇಲ್ಲೇ ನೋ ಕಿಸ್ಯಕ್ಕೆ ಸೂಳೇಮಗನೆ!

Anonymous ಅಂತಾರೆ...

ಸಂಸ್ಕೃತದ ವಿಷಯ ಬಂದ ಕೂಡಲೇ ಏನು ಹೇಳ್ತಿದಾರೆ ಅಂತ ಕೂಡಾ ನೋಡದೆ ಇರೋ ಮನಸ್ಥಿತಿಗಳಿಗೆ . . . ಸರಿಯಾಗ್ ಬರ್ದಿರೋದ್ನ ಓದಿ, ಓದಿದ್ನ ಅರ್ಥ ಮಾಡ್ಕೊಳ್ಳಿ ಅಂತ ಕೇಳ್ಕೊಂಡು ನನ್ನ ಮಾತ್ ಹೇಳ್ತೀನಿ. ಅಲ್ರೀ, ಸಂಸ್ಕೃತದಲ್ಲಿ ವೇದ ಉಪನಿಷತ್, ಅಧ್ಯಾತ್ಮ ಇದೆ ಅನ್ನೋದಾದ್ರೆ, ನಮ್ಮ ಕನ್ನಡದವರೆಲ್ಲಾ ಆ ಒಂದು ಪರಮ ಜ್ಞಾನ ಸಂಪಾದನೆಗಾಗಿ ಸಂಸ್ಕೃತವನ್ನು ಕಲಿಯಲೇ ಬೇಕು ಅಂದ್ರೆ ಅದು ಆ ಜ್ಞಾನಕ್ಕೂ ನಮಗೂ ಮಧ್ಯೆ ಸಂಸ್ಕೃತವೆನ್ನುವ ಒಂದು ಕಂದಕ ಹುಟ್ ಹಾಕಿದ್ ಹಾಗ್ ಆಗಲ್ವಾ? ಅದ್ರ ಬದ್ಲು ಸಂಸ್ಕೃತ ಕಲಿತ ಬೆರಳೆಣಿಕೆಯ ಪಂಡಿತರು ಕನ್ನಡಕ್ಕೆ ಆ ಜ್ಞಾನಾನ ತರೋದು ಸರಿ ಅಲ್ವಾ? ಹಾಗ್ ತಂದ್ರೆ ತನ್ನದಲ್ಲದ ಭಾಷೇ ಕಲಿಯುವ ಸರ್ಕಸ್ ಮಾಡೋ ಅಗತ್ಯ ಕನ್ನಡದವನಿಗ್ ಇಲ್ಲದೇ ಎಲ್ಲವನ್ನು ತನ್ನ ಭಾಷೆಯಲ್ಲಿ ಸುಲಭವಾಗಿ ಅರ್ಥ ಮಾಡ್ಕೋ ಬಹುದಲ್ವಾ? ಇದೇ ಮಾತು ತಂತ್ರಜ್ಞಾನ, ವಿಜ್ಞಾನ ಎಲ್ಲದಕ್ಕೂ ಅನ್ವಯ ಆಗುತ್ತೆ ಅಲ್ವಾ?
ಇನ್ನು ಸ್ಕಾರ್ಡ್ ಲೆಟರ್ಸ್ ಬರೆಯೋ ಮಹಾನುಭಾವ, ಅಂತ್ಯಾಕ್ಷರಿ ಹಾಡ್ಬೊಂಡ್ ಇರೋದ್ರಿಂದ್ಲೇ ದೇಶ ಉದ್ಧಾರ ಆಗತ್ತೆ ಅಂದ್ಕೊಂಡ್ ಇದ್ದಾರೆ. ಭಾಷಾ ಜ್ಞಾನದ ಬಗ್ಗೆ ಮಾತಾಡ್ತಿರೋ ಈತಂಗೆ ಸಂಸ್ಕೃತ - ಕನ್ನಡಕ್ಕೆ ತಾಯಿ ಅಲ್ಲ ಅನ್ನೋದೂ ಗೊತ್ತಿಲ್ಲದ್ದನ್ನ ನೋಡುದ್ರೆ ಸುಮ್ನೆ ಮೆಣಸಿನ್ ಕಾಯಿ ಇಡಕ್ ಬರೀತಾ ಇದಾರೆ ಅಂತ ಗೊತ್ತಾಗುತ್ತೆ. ಇವರಂತಹ ಅಲ್ಲೂ ಸಲ್ಲದ, ಇಲ್ಲೂ ಸಲ್ಲದ ತ್ರಿಶಂಕುಗಳಿಗೆ( ನಮ್ಮ ಕಡೆ ಎಡಬಿಡಂಗಿ ಅಂತಾರೆ) ಉದಾಸೀನವೇ ಸರಿಯಾದ ಉತ್ತರ ಅಂತ ಈ ಬ್ಲಾಗ್ನಲ್ಲಿ ಬರೆಯೋರೆಲ್ಲ ಅರಿತು ವಿಷ್ಯದ ಬಗ್ಗೆ ಮಾತಾಡುದ್ರೆ ಒಳ್ಳೇದು.
ತಿಮ್ಮಯ್ಯ

Anonymous ಅಂತಾರೆ...

ತಿಮ್ಮಯ್ನೋರೇ ಚನ್ನಾಗಿ ಹೇಳಿದ್ರಿ!!

ಸುಮ್ನೆ ಈ ಕೆಲವು ಸಂಸ್ಕ್ರುತದೋರಿಗೆ ಮಾಡಕ್ಕೆ ಕೆಲಸ ಇಲ್ಲ. ಎಲ್ಲಾ ಕಡೆ ನಂದೆಲ್ಲಿ ಅಂತ ಗಲಿಬಿಲಿ ಎಬ್ಸೋದು.

ನಮ್ಮ ಕನ್ನಡ ನೆಗೆದು ಬಿದ್ದುಹೋದ್ರೂ ಇವರಿಗೆ ಚಿಂತೆಯಿಲ್ಲ. ಅವರ ಸಂಸ್ಕ್ರುತ ಮರೀತಿರ್ಬೇಕು

Anonymous ಅಂತಾರೆ...

ತಮಿಳ್ರು ಇಪ್ಪತ್ ಮೂವತ್ ವರ್ಷಗಳ ಹಿಂದೆಯೇ (ಅದಕ್ಕಿಂತ ಮುಂಚೆಯಿಂದಲೆ)ಹೀಗೇ ಹೇಳ್ತಾ ಇದ್ರು, ತಮಿಳ್ಗೂ ಸಂಸ್ಕೃತಕ್ಕೂ ಸಂಬಂದ ಇಲ್ಲ ಅಂತ ... ಅವ್ರು ಹೇಗ್ ಹೇಗ್ ಆಡ್ತಾ ಇದ್ರೊ ಈಗ ನಾವೂ ಹಾಗೆ ಆಡ್ತಾ ಇದೀವಿ, ಅದೇ ಸರಿ ಗುರು ... ಅದೇ ಸರಿಯಾದ ದಾರಿ ... ತಮಿಳರಿಗೆ ಅಗತ್ಸ್ಯನೋ, ಮುರುಗನೋ ಕೊಟ್ಟ ಗಿಫ್ಟಂತೆ, ನಮಗೆ ಕನ್ನಡ ಯಾರ gift ಅಂತ decide ಮಾಡ್ಬೇಕು ಈಗ್ಲೆ... ಭಾಷಾತಜ್ಞರನ್ನ ಕೇಳ್ಬೇಕು ... ಅತ್ವಾ ಅದಾಗದೆ ಹುಟ್ಕೊತ್ತು ಕನ್ನಡ ಕೂಡ ಅಂತನಾದ್ರೂ ಹಬ್ಬುಸ್ಬೇಕು ... ಕನ್ನಡವೇ ಎಲ್ಲಾವುದಕ್ಕಿಂತಾ ಪ್ರಾಚೀನ ಭಾಷೆ, ಇದರಿಂದಲೇ ಬೇರೆ ಎಲ್ಲಾ (including latin, greek, sanskrit, tamil etc etc) ಅಂತ ಈ ಪೆದ್ದು ಜನರಿಗೆ ಮನವರಿಕೆ ಮಾಡ್ಕೊಡ್ಬೇಕು ...

ಆ ತಮಿಳರು ಹೇಳೋದು ಕನ್ನಡ ತಮಿಳಿನಿಂದ ಬಂತು ಅಂತ, proof is in ಹಳೆಗನ್ನಡ ಅಂತ ತೋರುಸ್ತಾರೆ ... ತೆಲುಗು ಅವ್ರೂ ಅದೇ ಹೆಳ್ತಾರೆ, ನಾವು ಅವರ script ಕದ್ದಿದ್ದೇವೆ ಅಂತ ... ಕೆಲವರು ಎಲ್ಲಾ ಸಂಸ್ಕೃತದಿಂದ ಬಂತು ಅಂತ ಹೇಳ್ತಾರೆ ...

ಆದ್ರೆ ಈಗ ನಂಗೆ confirm ಆಗ್ತಾ ಇದೆ ಕನ್ನಡದಿಂದಾನೆ ತಮಿಳು, ತೆಲುಗು, ಸಂಸೃತಾ ಎಲ್ಲಾ ಬಂದಿರೋದೂ ಅಂತ ... ಮುಂದೆ ಕೆಲವು ಕನ್ನಡ ಪಂಡಿತರು ಹೀಗೆ ಹೆಳಿದ್ರೆ ಅದ್ರಲ್ಲಿ ಅಚ್ಚರಿ ಏನೂ ಇಲ್ಲ, ಯಾಕಂದ್ರೆ ತಮಿಳ್ರೂ ಅದನ್ನೇ ಹೇಳೋದು ...

ನಮಗೆ Englishಕೂಡಾ ಬೇಡ ... ತಮಿಳರ ದಾರಿಯೇ ಸರಿ, ಅದನ್ನೇ ಹಿಂಬಾಲಿಸೋಣ ... ಹಿಂದಿ ಬೇಡ, ಕನ್ನಡಕ್ಕೂ ಸಂಸ್ಕೃತಕ್ಕೂ ಸಂಬಂದ ಇಲ್ಲ, ಕನ್ನಡದಿಂದಲೇ ಎಲ್ಲ ... ಮುಠ್ಠಾಳರು ಸಂಸ್ಕೃತ ಕಲೀಲಿ ಬಿಡು ಗುರು, ಅನುವಾದ ಆಗಿರೋದನ್ನ ಓದ್ಕೊಂಡು ಬಾವಿ ಕಪ್ಪೆ ಆದ್ರೂ ಪರ್ವಾಗಿಲ್ಲ, ನಾಮಗೆ ಕನ್ನಡ ಬಿಟ್ಟು ಬೇರೆ ಏನೂ ಬೇಡ ....

"ಕತ್ತೆಗೆಲ್ಲಿ ಗೊತ್ತು ಕಸ್ತೂರಿ ಗಂಧ" ಅಂತ ತಿಳ್ದೋರ್ ಹೇಳೊದು ಸರೀನೇ ಅನ್ನಕ್ಕೆ ಈ ನಿಮ್ಮ ಅತಿ ಅಧ್ಬುತ ಲೇಕನವೇ ಸಾಕ್ಷಿ ...

Anonymous ಅಂತಾರೆ...

ನನಗೆ ನೆನಪಿದೆ ಒಬ್ಬ ಚುನಾವಣೆಗೆ ನಿಂತಿದ್ದ, ಅವನ "promise": ಕನ್ನಡವನ್ನ ರಾಷ್ಟ್ರ ಭಾಷೆ ಮಾಡ್ತೇನ ಅಂತ ... ಪ್ರತಿ ಒಬ್ಬರಿಗೂ ಹಾಗೆ ಅನ್ಸ್ಬೇಕು ...ಯಾಕೆ ನಾವು ಅಂತರರಾಷ್ಟ್ರೀಯ ಭಾಷೆ ಮಾಡ್ಬಾರ್ದು? ಎಲ್ಲರೂ ಕನ್ನಡದಲ್ಲೇ ಮಾತಾಡೋ ಹಾಗೆ ಮಾಡೋಣಾ ... ಈ ನನ್ಮಕ್ಕ್ಳುಗೆ ಬುದ್ದಿ ಕಳ್ಸೋಣಾ ... ಈ english, sanskrit, hindi, french, latin, spanish ಎಲಾವ್ದನ್ನೂ ಕಿತ್ತು ವಗೆಯೋಣಾ .... ಸಂಕೃತ ಪಂಡಿತರೆಗೆ ಗಲ್ಲು ಶಿಕ್ಷೆ ಕೊಡ್ಸೋಣಾ ...

ಇದೇ ಕನ್ನಡ ಪ್ರೇಮ, ಇದೆ ಕನ್ನಡಿಗರ ಹಕ್ಕು, ಇದೇ ಕನ್ನಡಾಂಬೆಯ ಸೇವೆ ... ಎದ್ದೇಳಿ ಕನ್ನಡಿಗರೆ ಕುಚ್ಚಿ ಹಾಕಿ ಬೇರೆಲ್ಲಾ ಭಾಷೆಯವರನ್ನ, ಬೇರೆಲಾ ಭಾಷೆಯನ್ನ, ಬರೀ ಕನ್ನಡವೇ ಇರಬೇಕು ಅದೆ ನಮ್ಮ ಪ್ರತಿಗ್ನೆಯಾಗಲಿ ... ಬನ್ನಿ ಜಿಹಾದ್ ಮಾಡೋಣಾ, ಕನ್ನಡಕ್ಕೆ ಸಾಯೋಣಾ, ಸೂಸೈಡ್ ಬಾಂಬರ್ಸ್ ಆಗೋಣಾ, ಕನ್ನಡಿಗರು ಏನೆಂದು ತೋರಿಸೊಣಾ ... ಏಳಿ ಎದ್ದೇಳಿ ಕನ್ನಡಿಗರೆ ...

ತಾಯಿ ಕಾಪಾಡು ಭಾರತವನ್ನ!!

Anonymous ಅಂತಾರೆ...

GurugaLe, Samskruta devabhaashe, neevu heLuttiruva manjunaatha, sreenivaasa yellaroo vedagaLalli heliruva rudra, vishnuvina mattondu roopagalashte..namage vedagaLa apaaragnaana padeyalu, samskrutavoo beku, dina nityada bhaashege kannadavoo beku..

Anonymous ಅಂತಾರೆ...
This comment has been removed by a blog administrator.
ಬನವಾಸಿ ಬಳಗ ಅಂತಾರೆ...

ಶ್ರೀರಾಮ್ ಅವರೆ, ಇಲ್ಲಿ ಇಡೀ ಸಂಸ್ಕೃತದ ವಿಕಿಪೀಡಿಯಾ ಬರೆಯುವ ಬದಲು http://en.wikipedia.org/wiki/Sanskrit ಎಂದು ಬರೆದಿದ್ದರೆ ಸಾಕಾಗಿತ್ತು. ಇದಕ್ಕಿಂತ ಹೆಚ್ಚೇನಾದರೂ ಹೇಳುವುದಿದ್ದರೆ (ನಿಮ್ಮ ಮಾತಲ್ಲಿ) ಹೇಳಿ.

Anonymous ಅಂತಾರೆ...

kshamisi, kannadavannu english nalli barita idene.

Kannadadinda samskrutano athava samskrutadinda kannadano ashtu mukhya alla. alde naavu jnanakkagi yaavude bhasheyinda odidaru adu olleyade.

chiMteya vishya enapa andre eegina day-to-day kannada baLake. ardhkkinta kammi beMgalooru kannadigarige sariyada kannada barolla .... (its evident if you listen to kannada radio/TV channels/Singers (barring few)/movie stars etc )... avrige nagallilla badalu nakkalilla baLasode hechchu uchita anta ansutte...

ee bhashamoola hudkodakkinta bhasheya vyapti mattu parimitiyanna sariyagi artha maadkondu adanna dina baLakeyalli upayogakke tarodu uchita anta nanna anisike....

samskruta kathina, kevala unnata vargadavarige maatra meesalu anta tilide dasaru itararu tamma pagagalinda adanne sulabhada bhasheyalli anuvadisidaru ....

Anonymous ಅಂತಾರೆ...

houdu, veda agaadha! adakke heLuvudu vedavannariyalu samskrutavoo beku, dina nityada balakege kannadavoo beku..

Anonymous ಅಂತಾರೆ...

ಅಯ್ಯೋ ಅನಾನಿಮಸ್ಸಪ್ಪ,

(ಈ ಅನಾನಿಮಸ್ಸುಗಳ ಹಾವಳಿ ಜಾಸ್ತಿಯಾಯಿತು ಗುರು!)

ನೀವು ಹೇಳುವುದೆಲ್ಲ ಸರಿ. ಬೆಂಗಳೂರಿನವರ ಕನ್ನಡ ಸರಿ ಮಾಡಬೇಕಾದರೆ ಅದಕ್ಕೆ ಏನಾದರೂ incentive ಬೇಕಲ್ಲ? ಎಲ್ಲಾ ಕಡೆಯಿಂದ ಕನ್ನಡ ಕೀಳು ಅನ್ನೋ ಸಂದೇಶವನ್ನೇ ಕೊಡುತ್ತಾ ಇದ್ದರೆ ಹೇಗೆ? ಕೀಳು ಎಂದು ಒಪ್ಪಿಕೊಳ್ಳುವುದಕ್ಕೆ ಎಲ್ಲಿಯವರೆಗೆ ನಾವು ತಯಾರಿತುತ್ತೇವೋ ಅಲ್ಲಿಯವರೆಗೂ ನಮ್ಮನ್ನು ಬಗ್ಗಿಸುತ್ತಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗೆ ಬಗ್ಗುತ್ತೇನೆ ಎಂದಿರುವುದಕ್ಕೇ ಇವತ್ತಿನ ದಿನ ಸಂಸ್ಕೃತದಿಂದಲೇ ಕನ್ನಡ ಹುಟ್ಟಿರುವುದು ಎನ್ನುವ ಸುಳ್ಳು ಪ್ರಚಲಿತವಾಗಿರುವುದು.

Anonymous ಅಂತಾರೆ...

Raviyavare, samskrutakke sumaru 3000 varshagaligoo migilaada itihaasavide..aaddarinda adannu kadegaanisuvudu beDa.

Anonymous ಅಂತಾರೆ...

ವೇದವನ್ನು ನಿಜವಾಗಲೂ ಅರಿಯುವುದಕ್ಕೆ ಅದು ನಮ್ಮ ನುಡಿಯಲ್ಲೇ ಅನುವಾದವಾಗಬೇಕು. ಅದು ಸಂಸ್ಕೃತದಲ್ಲೇ ಉಳಿದುಕೊಂಡರೆ ದೊಡ್ಡ ಗಂಡಾಂತರವೇ ನಮ್ಮ ಮುಂದಿದೆ. ಬರೀ ಬಾಯಿಪಾಠದಲ್ಲೇ ಬ್ರಾಹ್ಮಣರು ತಮ್ಮ ಬಾಳನ್ನು ಹಾಳುಮಾಡಿಕೊಂಡುಬಿಡುತ್ತಾರೆ, ಈಗಾಗುತ್ತಿರುವಂತೆ.

ಅನುವಾದವೆನ್ನುವುದು ಹೇಗಾಗಬೇಕು? ಕೇವಲ ಯಾರೋ ಬರೆದ ಕನ್ನಡಭಾಷ್ಯವಿದ್ದರೆ ಸಾಲದು, ವೇದಮಂತ್ರಗಳೇ ಕನ್ನಡಕ್ಕೆ ಅನುವಾದವಾಗಬೇಕು.

ಉದಾ:-

ಭೃಗುರ್ವೈ ವಾರುಣಿಃ | ವರುಣಂ ಪಿತರಮುಪಸಸಾರ | ಅಧೀಹಿ ಭಗವೋ ಬ್ರಹ್ಮೇತಿ |

ಅನ್ನೋದನ್ನ ಸರಳಗನ್ನಡದಲ್ಲಿ ಹೀಗೆ ಓದಿಕೊಳ್ಳಬಹುದು:-

ಭೃಗುವೆಂಬ ವರುಣನ ಮಗನು | ತಂದೆ ವರುಣನ ಬಳಿಸಾರಿದ | ತಿಳಿಹೇಳು ಭಗವನ್ ಬ್ರಹ್ಮನನ್ನೆಂದು |

ಇದನ್ನು ಮಾಡದಿದ್ದರೆ, ಇದರ ಆಧಾರದ ಮೇಲೆ ವೇದಧರ್ಮದ ಪ್ರಚಾರವಾಗದಿದ್ದರೆ ವೇದ ಅಲ್ಲೇ ಸಂಸ್ಕೃತದ ಫ್ರಿಜ್ಜಿನಲ್ಲೇ ಕೊಳೆತುಹೋಗುವ ಭಯ ನಮ್ಮ ಮುಂದೆ ಈಗ ಇದೆ.

Anonymous ಅಂತಾರೆ...

heege kannaDa anuvaada Maadi janarige tiLisuva saluvaagiyaadaroo samskruta/samskrruta kalitavara avashyakate yillave??

Anonymous ಅಂತಾರೆ...

ಸಂಸ್ಕೃತಕ್ಕೆ 3000 ವರ್ಷ ಇತಿಹಾಸವಿದೆ ಎನ್ನುವ ಮಾಹಿತಿಯೇ ಮೊದಲನೆಯದಾಗಿ ತಪ್ಪು. ಅದಕ್ಕೆ 3ಅಲ್ಲ, 30ಅಲ್ಲ, 300ಅಲ್ಲ, ಇನ್ನೂ ಹೆಚ್ಚು ಸಾವಿರ ವರ್ಷಗಳ ಇತಿಹಾಸವಿದೆ. ಹೇಗೆ ಅನ್ನುತ್ತೀರಾ? ಹೇಗೆಂದರೆ ಸಂಸ್ಕೃತದ ಮೊದಲ "ಲಿಖಿತ ದಾಖಲೆ" 3000 ವರ್ಷ ಹಳೆಯದು, ಅಷ್ಟೆ. ಆದರೆ ಅದಕ್ಕಿಂತ ಮುಂಚೆ ಸಂಸ್ಕೃತ ಭಾಷೆ ಇರಲೇ ಇಲ್ಲ ಎಂದು ಹೇಳಿದವರು ಯಾರು?

ಆದರೆ ಸಂಸ್ಕೃತದ ಹಳಮೆ ಇಲ್ಲಿ ಅಸಂಬದ್ಧ. ಸಂಸ್ಕೃತ ಹಳೆಯದಾದರೇನು, ಹೊಸದಾದರೇನು? ಹಳೆಯದನ್ನೆಲ್ಲ ಒಪ್ಪುತ್ತೀರಾ? ಹಾಗಾದರೆ ಸತಿ-ಪದ್ಧತಿಯನ್ನೂ ಒಪ್ಪಬೇಕಾದೀತು!

ಹಾಗಲ್ಲ.

ಸಂಸ್ಕೃತವನ್ನು ನಾವು ಅದರ ಅದ್ಭುತವಾದ ಆಧ್ಯಾತ್ಮಿಕ ಸಾಹಿತ್ಯಕ್ಕಾಗಿ ಒಪ್ಪಬೇಕು.

ಒಪ್ಪಬೇಕು ಎಂದರೇನು?

ಅದನ್ನೇ ಕಲಿಯಬೇಕು ಎಂದೇನಲ್ಲ. ನಿಜವಾದ ಸಂಸ್ಕೃತದ ಪಂಡಿತರು ಕುಳಿತು ಆಧ್ಯಾತ್ಮಿಕ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು (ಮೇಲೆ ಹೇಳಿದಂತೆ ಕೇವಲ ಭಾಷ್ಯಗಳನ್ನಲ್ಲ, ಮಂತ್ರಗಳನ್ನೂ ಕೂಡ), ಅದನ್ನು ತಿಳಿಗನ್ನಡದಲ್ಲೇ ಎಲ್ಲರೂ ಓದಿ ಅರ್ಥಮಾಡಿಕೊಳ್ಳುವಂತೆ ಮಾಡಬೇಕು.

ಇದೇ ಸಂಸ್ಕೃತದ ಸರಿಯಾದ ಬಳಕೆ. ಇಡೀ ಜೀವನ ಸಂಸ್ಕೃತ ವ್ಯಾಕರಣವನ್ನು ಕಲಿಯುವುದರಿಂದೇನು ಪ್ರಯೋಜನ? ಅದು ಬಿಟ್ಟು ಕೈಯ್ಯೊಳಗಿನ ನಲ್ಲೀಕಾಯಂತೆ ವೇದಜ್ಞಾನವೆಲ್ಲ ಆಗಬೇಕಾದರೆ ಅದು ನಮ್ಮ ನುಡಿಯಲ್ಲೇ ಇರಬೇಕು.

ಅಂದಹಾಗೆ ಕನ್ನಡಕ್ಕೂ ಬರೀ 2000 ವರ್ಷದ ಇತಿಹಾಸ ಇದೆ ಎಂದು ವಾದಿಸುವವರೂ ತಪ್ಪು. ಅದಕ್ಕೂ ಮೇಲಿನ "ಲಿಖಿತ ದಾಖಲೆ"ಯ ವಾದ ಅನ್ವಯಿಸುತ್ತದೆ.

ಮತ್ತು ಕನ್ನಡ ಹಾಗೂ ಸಂಸ್ಕೃತಗಳಿಗೆ ಯಾವ ಭಾಷಾವೈಜ್ಞಾನಿಕ ಸಂಬಂಧವೂ ಇಲ್ಲ. ಹಾಗೆಂದ ಮಾತ್ರಕ್ಕೆ ಸಂಸ್ಕೃತದಿಂದ ಕನ್ನಡ ಪದಗಳನ್ನು ಪಡೆಯಬಾರದು ಎಂದೇನಿಲ್ಲ. ಪಡೆಯಬೇಕು, ಉಪಯೋಗವಾಗುವುದನ್ನೆಲ್ಲ ಪಡೆಯಬೇಕು.

ಮಿಕ್ಕಿದ್ದೆಲ್ಲ ಬಿಡಬೇಕು.

Anonymous ಅಂತಾರೆ...

ಕರ್ನಾಟಕದ ಜನಸಂಖ್ಯೆ 5.5ಕೋಟಿ ಜನ. ಅನುವಾದ ಮಾಡುವವರು ಎಷ್ಟು ಜನ ಬೇಕು? ಈ ಅನುವಾದವನ್ನ ಇಲ್ಲೀವರೆಗೆ ಅದ್ವೈತ-ದ್ವೈತ-ವಿಶಿಷ್ಟಾದ್ವೈತ ಮಠಗಳು ಮಾಡಿ ಮುಗಿಸಿ ಜನಕ್ಕೆ ಅರ್ಥವಾಗದ ಸಂಸ್ಕೃತವನ್ನು ಬಿಟ್ಟು ಕನ್ನಡದಲ್ಲೇ ಧರ್ಮಪ್ರಚಾರ ಮಾಡಬಹುದಿತ್ತು. ಅದು ಬಿಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕೃತಕ್ಕೆ ಅದಾಗಿದೆ, ಇದಾಗಿದೆ ಎಂದು ಗೋಳು ಹೊಯ್ಕೊಳ್ಳುವುದರಿಂದೇನು ಬಂದೀತು?

Anonymous ಅಂತಾರೆ...

houdu,upayogavaaguva bahaLashtu samskruta padagalannu padeyabeku adaralli tappenilla..eegaagale bus, car, auto modalaada padagalannu english ninda yeravalu padedaddaagide..innu samskrutadinda kelavu padagalannu padedare tappenu??

Anonymous ಅಂತಾರೆ...

ನರಸಿಂಹ ಅವರೆ,

ಅಸಂಬದ್ಧವಾದ ವಿಷಯವನ್ನ ಯಾಕೆ ತೆಗೆಯುತ್ತಿದ್ದೀರಿ? ಇಲ್ಲಿ ಉಪಯೋಗವಾಗುವ ಸಂಸ್ಕೃತದ ಪದಗಳನ್ನು ಕನ್ನಡಕ್ಕೆ ಸೇರಿಸಿಕೊಳ್ಳಬೇಡಿ ಎಂದು ಯಾರಾದರೂ ಹೇಳಿದರೇನು? ಇಲ್ಲಿ ಚರ್ಚೆ ನಡೆಯುತ್ತಿರುವುದು ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡುತ್ತಿರಲಿಲ್ಲ ಎನ್ನುವುದರ ಬಗ್ಗೆ. ಅದರ ಬಗ್ಗೆ ಮಾತನಾಡಿ ಸ್ವಾಮಿ!

Anonymous ಅಂತಾರೆ...

ಅಸಂಬಂಧಪ್ರಲಾಪಿ ಸಂಸ್ಕೃತ ಪ್ರೇಮಿಗಳೇ!!

ನಿಮಗೆ ಯಾವುದನ್ನು ಅರ್ಥಮಾಡಿಕೊಳ್ಳುವ ಯೋಗ್ಯತೆ ಇಲ್ಲವಾ?

ಕರ್ನಾಟಕದ ಆಡುಭಾಷೆ ಸಂಸ್ಕೃತವಾಗಿತ್ತು ಅಂದರೆ, ಆಮೇಲೆ ಕನ್ನಡಿಗರು ಬಂದು ಕನ್ನಡ ತುರುಕಿದರು ಅಂತ ಆಗಲ್ವಾ?

ನಿಮ್ಮ ಹಾಳು ಸಂಸ್ಕೃತ ಸಂಸ್ಕೃತ ಅಂತ ಬಡೆದುಕೊಂಡೇ ಇವೊತ್ತು ಸಂಸ್ಕೃತ ಸತ್ತು ಗೋರಿ ಆಗಿರೋದು.

ಅದನ್ನು ಇವನು ಕಲಿಯಬಾರದು, ಅವನು ಕಲಿಯಬಾರದು, ಸಂಸ್ಕೃತ ಶೂದ್ರ ಕಲಿತ್ರೆ ಕಿವಿ ಬಿಸ-ಿಸೀಸಾ ಸುರಿ, ಸಂಸ್ಕೃತ ಆಡಿದ್ರೆ ನಾಲಗೆ ಹರಿ, ಹೀಗೆಲ್ಲ ಮಾಡಿ , ಸಂಸ್ಕೃತವನ್ನು ಹೆಚ್ಚು ಜನರಿಗೆ ಹೇಳಿಕೊಡದೇ ಸಾಯಿಸಿಬಿಟ್ಟಿರಿ.

ನಮ್ಮ ನಮ್ಮ ಮಾತೃಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮರಾಠಿಗಳನ್ನು ಉಳಸಿಕೊಳ್ತೀವಿ, ಮೊದಲು ಎಲ್ಲರಿಗೂ ಸರಿಯಾಗಿ ಕನ್ನಡ ಬರಲಿ, ಆಮೇಲೆ ಬೇಕಾದರೆ ಸಂಸ್ಕೃತ-ಗಿಂಸ್ಕೃತ ಅಂತ ನಾವು ಅಂದುಕೊಂಡ್ರೆ, ಅಂಡು ಸುಟ್ಟ ಬೆಕ್ಕಂತೆ, ಸಂಸ್ಕೃತವೇ ಮೊದಲು ಬರಬೇಕು, ಇಲ್ಲ ಅಂದರೆ ಪ್ರಳಯ ಆಗುವುದೆಂದು ಒದರುವಿರಿ!!

ಮಹೇಶ, ರಾಘವೇಂದ್ರಾಚಾರ್‍ ಮುಂದಾದವರೇ, ಇವರಿಗೆ ಕುರುಡು ಅಭಿಮಾನ, ನೀವು ಎಷ್ಟು ಬಿಡಿಸಿ ಹೇಳಿದರೂ ಒಪ್ಪರು..

ಬಿಟ್ಟಾಕಿ!!

ಏನ್ ಗುರು, ನಿಮ್ಮ ಕೆಲಸ ಚನ್ನಾಗಿದೆ. ಈ ಅಧಿಕ ಪ್ರಸಂಗಿಗಳ ಮಾತಿಗೆ ತಲೆಕೆಡಿಸಕೊಳ್ಳಬೇಡಿ.. ಇವರು ಯಾವಾಗಲೂ ಯಾರನ್ನೂ ಉದ್ದಾರ ಆಗಕ್ಕೆ ಬಿಡಲ್ಲ!! ಅವರೂ ಉದ್ದಾರ ಆಗಲ್ಲ, ಇವರ ದರಿದ್ರ ಬುದ್ಧಿಯೇ ಅಂತದ್ದು.

ಹಿಂದೇ ಹೀಗೇ ಬ್ರಾಹ್ಮಣರಾದ ಬಸವಣ್ಣನವರು, ಚಾಮರಸ, ಮುಂತಾದವು ಹೇಳಿದಕ್ಕೆ ಬಿಜ್ಜಳ ಹತ್ತಿರ ಚಾಡಿ ಚುಚ್ಚಿ ಏನೆಲ್ಲ ಅಲ್ಲೋಲಕಲ್ಲೋಲ ಮಾಡಿ ಪಾಪಿಗಳಿವರು!!

Anonymous ಅಂತಾರೆ...

kshamisi, kannadavannu matte englishnalliye barita idene.

kannada keeLu aMdavanige sariyada pAtha kalisabeku... kannada itara bhashegaLiginta sahityadallu mattu vaividhyadallu hechchu shreemanta .... aadare naavu bere bhasheyannu ( esp saMskruta ) vannu keeLagi kaaNabaradu ....

dayavittu gamanisi, yaavaga naavu ondu bere bhasheya anuvadita pustakavannu odutteveyo adu anuvadakana drishtiye horatu nijavada lekhakana anisike aagiruvadilla ....

innu beMgaloorigara kannada sudharaNe bagge chiMtane.. ee kelasa obbarindaguvadanthadalla .... alde mere translation of other language books into kannada wont help in developing kannada .... we should read kannada books which were written in kannada and understand the sougaDu ,,aavagle kannada beLiyodu uLiyodu ....

Anonymous ಅಂತಾರೆ...

ಈ ವಯ್ಯ ಹೇಳಿರೋದಕ್ಕೂ ಇಲ್ಲಿ ಏನ್‌ಗುರು ಬರಹಕ್ಕೂ ಯಾವ ಸಂಬಂದ ಇಲ್ಲ.

ಇವರಿಗೆ ಸುಮ್ನೆ ಇರಕ್ಕೇನು ರೋಗ? ಮೊದಲು ಸರಿಯಾಗಿ ಅರ್ತಮಾಡ್ಕೊಳ್ಳಲ್ಲ.

"innu beMgaloorigara kannada sudharaNe bagge chiMtane.. ee kelasa obbarindaguvadanthadalla .."

ಅಂದ್ರೆ ನಾನು ಸುಮ್ನೆ ಕೂತು ಬೊಗಳೆ ಬಿಡ್ತಾನೇ ಇರ್ತೀನಿ, ಏನು ಮಾಡಲ್ಲ. ನೀವು ಏನಾರ ಮಾಡಕ್ ಹೊಂಟ್ರೆ, ಬಾಯ್ ಹಾಕ್ತೀನಿ, ನಾನೊಬ್ನೇ ಡೀಸೆಂಟ್, ಸಂಸ್ಕ್ರುತದೋನು ಅಂತ.

ಇಸ್ಟು ದಿವಸ ಏನ್ ಕತ್ತೆ ಕಾಯ್ತಿದ್ರ? ಏನ್‌ಗುರು ಚನ್ನಾಗಿ ಬರೆತಾವ್ರೆ, ಅದಕ್ಕೆ ಇವಕ್ಕೆ ಹೊಟ್ಟೆ ಉರಿ, ಇಲ್ಲಿ ಬಂದು ಏನೇನೋ ಬರಿತಾರೆ.

ಅಣ್ಣಂದಿರ...

ಇಲ್ಲಿ ಏನ್‌ಗುರು ಹೇಳಿದ್ದು ಈಟೇಯ
"ಕರ್ನಾಟಕದಲ್ಲಿ ಯಾವೋನು ಸಂಸ್ಕ್ರುತವನ್ನ ಮಾತಾಡ್ತಿರಲಿಲ್ಲ. ಅದು ಯಾವತ್ತು ಇಲ್ಲ ಸತ್ತ ಬಾಸೆಯೇ" ಅಂತ

ಇದನ್ನ ಬಿಟ್ಟು ಕೊಂಕಣ ಸುತ್ತಿ ಮೈಲಾರಕ್ಕ ಬಂದಂಗೆ ಏನೇನೋ ಹೇಳ್ಕೊಂಡು ವೇದ, ಬೇದಿ, ಬೆಂಗಳೂರು, ಹಿಂದು ದರ್ಮ, ಕರ್ಮ, ನರಸಿಂಹ, ಗೊಮ್ಮಟೇಸ ಅಂತ ಎಲ್ಲೆಲ್ಲಿಗೋ ವೋಯ್ತಾವ್ರೆ.!!

ಯಾಕ್ರಣ್ಣ, ಇದ್ದದ್ದನ್ನ ಇದ್ದಂಗೆ ಓದ್ಕೊಳ್ಳಕ್ಕೆ ಬರಕ್ಕೆಇಲ್ವಾ? ರೆಕ್ಕೆ ಪುಕ್ಕೆ ಯಾಕ್ ಜೋಡಿಸ್ತಿರಿ?

ಇನ್ನು ನನ್ನ ಬೈಯಕ್ಕೆ ನಾಕ್ ಮಂದಿ ಸ್ಲಂಸ್ಕೃತರು ರೆಡಿ!

Anonymous ಅಂತಾರೆ...

ayya,

muchkondirodakke en togoLtiya ? allaya ella anisikegaLannu odde sumne eneno heLtiralri.. bardirodu hindina kelavu comments ge saMbhanda pattidde horatu main topic ge alla ...

comment maadbekadre odi maadi illvae teppagiri ashte ....

Anonymous ಅಂತಾರೆ...

ಮೇಲು-ಕೀಳು ಎನ್ನುವುದರ ಬಗ್ಗೆ

ಸಂಸ್ಕೃತವನ್ನು ಇಲ್ಲಿ ಯಾರೂ ಮೇಲು ಅಥವಾ ಕೀಳು ಎಂದು ಕರೆದಿಲ್ಲ. ಭಾಷೆಗಳಲ್ಲಿ ಮೇಲು-ಕೀಳೆಂಬುದಿಲ್ಲ. ಇದನ್ನು ಮೊದಲು ಅರ್ಥಮಾಡಿಕೊಳ್ಳಿ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಸಿರಿವಂತಿಕೆ ಇದ್ದೇ ಇರುತ್ತದೆ. ಸಂಸ್ಕೃತಕ್ಕೆ ಆಧ್ಯಾತ್ಮಿಕ ಸಾಹಿತ್ಯದ ಸಿರಿ ಅನ್ನುವುದಿದೆ ಎಂದು ಒಪ್ಪಿಕೊಳ್ಳುತ್ತಲೇ ಇದ್ದೇವಲ್ಲ, ಇನ್ನು ಕೀಳು ಎಂದು ಯಾರು ಹೇಳುತ್ತಿರುವುದು? ಏನ್ ಗುರು ಅವರೂ ಎಲ್ಲೂ ಸಂಸ್ಕೃತವನ್ನು ಕೀಳು ಎಂದಿಲ್ಲ. ಅವರೇ ಸಂಸ್ಕೃತದ ಶ್ಲೋಕವನ್ನು ಹೇಳಿಲ್ಲವೆ?

ಆದರೆ ಕೆಲವರು ಸಂಸ್ಕೃತಕ್ಕೆ "ಮೇಲು" ಎಂಬ ಪಟ್ಟ ಕಟ್ಟಲು ಹೊರಡುತ್ತಾರೆ. ಅದು ಅವರ ಕನಸಿನ ಲೋಕದಲ್ಲಿ ಎಷ್ಟು "ಮೇಲಾ"ಗುತ್ತದೆಯೆಂದರೆ ಅದು ಸುಳ್ಳುಸುಳ್ಳಾಗಿ "ಪ್ರಪಂಚದ ಎಲ್ಲಾ ಭಾಷೆಗಳಿಗೂ ತಾಯಿ" ಎಂಬ ಪಟ್ಟವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಕನ್ನಡ ಅವರ ಕಲ್ಪನೆಯ ಲೋಕದಲ್ಲಿ "ಸಂಸ್ಕೃತದ ಮಗಳಾ"ಗಿರುವುದರಿಂದ "ಕೀಳು" ಅಥವಾ "ಇತ್ತೀಚಿನದು" ಎಂಬ ಪಟ್ಟ ಪಡೆಯುತ್ತದೆ.

ಈ ಸುಳ್ಳೆಲ್ಲ ಯಾಕೆ? ಈ ಸುಳ್ಳುಗಳ ನಡುವೆಯೇ ಸಂಸ್ಕೃತದ ವೃಥಾಪೂಜೆಯಿಂದ ಇಡೀ ಜೀವನವನ್ನು ಕಳೆದು ಅದರಿಂದ ಪಡೆಯಬೇಕಾದ್ದನ್ನು ಪಡೆಯದೆ ಹೋಗುತ್ತಾರೆ. ಅದರ ಬದಲು ಈ ಮೇಲು-ಕೀಳುಗಳ ದ್ವಂದ್ವದಿಂದ ಹೊರಬಂದು ಗೊತ್ತಿರುವ ಕನ್ನಡನುಡಿಯಲ್ಲೇ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು ಲೇಸು.

ಅನುವಾದಗಳು ಮೂಲಗ್ರಂಥಗಳನ್ನು ಸರಿಯಾಗಿ ಬಿಂಬಿಸುವುದಿಲ್ಲ ಎನ್ನುವುದರ ಬಗ್ಗೆ

ಈ ಮಾತು ನಿಜ. ಅದಕ್ಕಾಗಿಯೇ ವೇದಮಂತ್ರಗಳನ್ನೇ ಅನುವಾದಮಾಡಿ ಎಂದಿದ್ದು. ಮಂತ್ರಗಳನ್ನು ಅನುವಾದಮಾಡುವುದಕ್ಕೆ ಬೇಕಾಗಿರುವುದು ಯಾವ ಆಧ್ಯಾತ್ಮಿಕ ವಿದ್ಯೆಯೂ ಅಲ್ಲ; ಕೇವಲ ಸಂಸ್ಕೃತ ಮತ್ತು ಕನ್ನಡ ಇವೆರಡೂ ನುಡಿಗಳ ವ್ಯಾಕರಣ. "ಅಧ್ಯಾತ್ಮ ಗೊತ್ತಿದೆ" ಎಂದುಕೊಳ್ಳುವವನು ಅನುವಾದಿಸಿದಾಗ ತಾನೇ ಆ ಅನುವಾದಕ್ಕೆ ಅವನ "ಬಣ್ಣ" ಬರುವುದು? ಬೇಡವೇ ಬೇಡ. ಇದ್ದದ್ದು ಇದ್ದಹಾಗೆ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಬಹುದಲ್ಲ? ಹೀಗೆ ಮಾಡಿದರೆ ಮೂಲಗ್ರಂಥದ ಅರ್ಥ ಅನುವಾದದಲ್ಲಿ ಕೆಡುವುದಿಲ್ಲ.

Anonymous ಅಂತಾರೆ...

"muchkondirodakke en togoLtiya ? allaya ella anisikegaLannu odde sumne eneno heLtiralri.. bardirodu hindina kelavu comments ge saMbhanda pattidde horatu main topic ge alla ..."

ಏನ್‌ಗುರು,

ಇವನ್ಯಾವೂರ್‍ ದೊಣ್ಣೆನಾಯಕ, ನಂಗೆ ಮುಚ್ಚುಕೋ ಅಂತ ತಂದು ಊರಗಲ ತೋರಿಸ್ಕೊಂಡ್ ಹೇಳ್ತಾನೆ.

ಸರಿ, ರಾಮಾಯಣದ ಬಗ್ಗೆ ಏನ್‌ಗುರು ನಾಳೆ ಬರೀತಾನೆ, ನೀನು ಬಂದ ಅದರಲ್ಲಿ ಅಲ್ಲಾವುದ್ದೀನನ ದೀಪ ಅಂತ ಬರೆಯಣ್ಣ!!

ಯಾರೋ ಸರಿಯಾಗೇ ಹೇಳವ್ರೆ!
"ಏನ್ ಗುರು, ನಿಮ್ಮ ಕೆಲಸ ಚನ್ನಾಗಿದೆ. ಈ ಅಧಿಕ ಪ್ರಸಂಗಿಗಳ ಮಾತಿಗೆ ತಲೆಕೆಡಿಸಕೊಳ್ಳಬೇಡಿ.. ಇವರು ಯಾವಾಗಲೂ ಯಾರನ್ನೂ ಉದ್ದಾರ ಆಗಕ್ಕೆ ಬಿಡಲ್ಲ!! ಅವರೂ ಉದ್ದಾರ ಆಗಲ್ಲ, ಇವರ ದರಿದ್ರ ಬುದ್ಧಿಯೇ ಅಂತದ್ದ"

ನಿಮ್ಮ ದರಿದ್ರ ಬುದ್ದಿಷ್ಟು!! ಲಬೊ ಲಬೊ ಅಂತಾನೆ ಇರ್ತೀರಲ್ಲ.

ಏನ್‌ಗುರು, ನೀನ್ ಮುಂದುವರಿಸಪ್ಪ, ಇವು ಕಾಗೆ ಮುಂಡೇವು!

Anonymous ಅಂತಾರೆ...

ಬಹಳ ಒಳ್ಳೆಯ ಬ್ಲಾಗ್. ಇದನ್ನ ಪರಿಚಯ ಮಾಡಿಸಿದ್ದಕ್ಕೆ ವಾಷಿಂಗ್ಟನ್ನಿನ ಭರತ್ ಅವರಿಗೆ ನನ್ನ ಥ್ಯಾಂಕ್ಸ್! ಇಂತಹ ವೇದಿಕೆಗಳು ಕನ್ನಡಿಗರನ್ನು ಒಗ್ಗೂಡಿಸುವುದರಲ್ಲಿ ಬಹಳ ದೊಡ್ಡ ಪಾತ್ರ ವಹಿಸಲಿವೆ. ಹೀಗೇ ಮುಂದುವರೆಸಿ. ಸಂಸ್ಕೃತ ಅಂದ ತಕ್ಷಣ ಇದ್ದ ಬುದ್ಧಿಯನ್ನೂ ಕಳೆದುಕೊಳ್ಳುವವರು, 2+2=5 ಎನ್ನುವವರು ಇದ್ದೇ ಇರುತ್ತಾರೆ, ಅಂಥವರನ್ನು ಕಡೆಗಣಿಸುವುದೇ ಬೆಸ್ಟು. ಬನವಾಸಿ ಬಳಗದ ಮುಖ್ಯ ಕಾರ್ಯಾಲಯ ಎಲ್ಲಿದೆ? ಅವರ contact number ಏನಾದರೂ ಇದ್ದರೆ ಕೊಡಿ.

Unknown ಅಂತಾರೆ...

ಶ್ರೀಧರ ಅವರೆ,

ನೀವು ಬಲಗಡೆ ಇರುವ ಮೀಂಚೆ ವಿಳಾಸಕ್ಕೆ ಮಿಂಚೆ ಕಳಿಸಿ. ಬಳಗದ ಬಗ್ಗೆ ವಿವರವನ್ನು ಕೊಡ್ತಾರೆ.

Anonymous ಅಂತಾರೆ...

enguru,
samskrita ne great anno bhooparige keLagina link nodali

http://thatskannada .oneindia. in/sahitya/ my_karnataka/ 310707kannada_ language_ grammar.html

http://thatskannada.oneindia.in/sahitya/my_karnataka/010807kannada_language_grammar.html

nimmava,
sunil

Anonymous ಅಂತಾರೆ...

ನಮಸ್ಕಾರ,
ಈ ಬ್ಲಾಗ್ ಬಗ್ಗೆ ಗೆಳೆಯರಿಂದ ತಿಳಿದು ಎಲ್ಲ ಬರಹಗಳನ್ನು ಓದುತ್ತಾ ಬಂದಿದ್ದೇನೆ. ನಾನೊಬ್ಬ ಭಾಷಾ ವಿಜ್ಞಾನಿ. ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಎಂ.ಎ ಓದಿಕೊಂಡು ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದೇನೆ.
ನಿಮ್ಮ ಬರವಣಿಗೆ ಮತ್ತು ಹೇಳುತ್ತಿರುವ ವಿಷಯಗಳು ತುಂಬಾ ಸೂಕ್ತವಾಗಿದೆ ಮತ್ತು ಚೆನ್ನಾಗಿದೆ. ಸಂಸ್ಕೃತ ಎಂದಿಗೂ ಕನ್ನಡ ನೆಲದ ಭಾಷೆಯಾಗಿರಲಿಲ್ಲ ಎನ್ನುವ ಈ ಬರಹಕ್ಕೆ ಬಂದಿರುವ ಅನೇಕ ಅನಿಸಿಕೆಗಳಲ್ಲಿ ಎರಡಕ್ಕೆ ಉತ್ತರ ಕೊಡಲೇ ಬೇಕು ಅನ್ನಿಸ್ತಿದೆ.
ಒಬ್ಬ ಗೆಳೆಯರು ಬಹಳ ವ್ಯಂಗ್ಯವಾಗಿ ಕನ್ನಡಿಗರನ್ನು ತಮಿಳರ ಹಾಗಿರಬೇಕು ಅನ್ನುತ್ತಾ ಬರೆದಿದ್ದಾರೆ. ಅವರ ಬರಹದಲ್ಲಿ ಕನ್ನಡ ಸಂಸ್ಕೃತ ಭಾಷೆಯಿಂದ
ಹುಟ್ಟಿದ್ದಲ್ಲ ಎಂದು ಹೇಳಿದ್ದನ್ನು ಒಪ್ಪಲಾಗದ ಮನಸ್ಥಿತಿ ಕಾಣುತ್ತಿದೆ. ಜೊತೆಗೆ ದೇಶ ಒಂದಾಗಿ ಉಳಿಯಬೇಕಾದರೆ ಹಿಂದಿಯನ್ನೂ ಒಪ್ಪಿಬಿಡಬೇಕೆಂಬ ಆಶಯವೂ ಕಾಣುತ್ತಿದೆ.
ಹಿಂದಿಯನ್ನು, ಸಂಸ್ಕೃತವನ್ನು ವಿರೋಧಿಸಬಾರದೆನ್ನುವ ಅವರ ನಿಲುವಿನಲ್ಲಿ ದೇಶದ ಏಕತೆಯ ಬಗೆಗಿನ ಕಾಳಜಿ ಕಾಣುತ್ತಿದೆ.
ಇದೇ ಆಶಯದ ಮತ್ತೊಂದು ಪತ್ರ ವ್ಯಂಗ್ಯವಾಗಿ ಕನ್ನಡದ ಜಿಹಾದ್ ಗೆ ಕರೆ ನೀಡುತ್ತಿದೆ. ಇದಕ್ಕೆ ಭಾರತವನ್ನು ಕಾಪಾಡು ತಾಯೆ ಎನ್ನುವ ಆಕ್ರಂದನದ ಕೊನೆಹನಿ ಬೇರೆ ಇದೆ.
ಗೆಳೆಯರೇ, ಭಾಷಾ ವಿಜ್ಞಾನಿಯಾಗಿ ನಾನು ಹೇಳ ಬಯಸುವುದು ಒಂದೇ . . ಕನ್ನಡ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಾಗಿದೆ ಮತ್ತು ಸಂಸ್ಕೃತ ಇದಕ್ಕಿಂತ ಭಿನ್ನವಾದ ಭಾಷಾ ವರ್ಗಕ್ಕೆ ಸೇರಿದೆ.
ಇದನ್ನು ಭಾಷಾ ವಿಜ್ಞಾನದ ಎಲ್ಲ ಕೋನಗಳಿಂದ ಅವಲೋಕಿಸಿ ಸಾಧಿಸಲಾಗಿದೆ. ಹಾಗೆ ಸತ್ಯವನ್ನು ಹೇಳುವುದರಿಂದಲೇ ದೇಶ ಒಡೆಯುವುದಿಲ್ಲ. ಹಾಗಲ್ಲದೆ ಸಂಸ್ಕೃತ ಕನ್ನಡಕ್ಕೂ ತಾಯಿ ಭಾಷೆ ಅದಕ್ಕಾಗಿ ಸಂಸ್ಕೃತವನ್ನೂ, ಒಂದು ದೇಶ ಒಡೆಯದೇ ಇರಲು ಒಂದು ಭಾಷೆಯನ್ನು ಎಲ್ಲರೂ ಒಪ್ಪಿ ಆದರಿಸಬೇಕಾದದ್ದು ಅಗತ್ಯ ಎನ್ನುತ್ತಾ ಹಿಂದಿಯನ್ನೂ ಒಪ್ಪಿಬಿಡಬೇಕೆನ್ನುವುದು ದೇಶದ್ರೋಹವಾಗುತ್ತದೆ. ಮತ್ತು ತನ್ನದಲ್ಲದ ಭಾಷೆಯನ್ನು ಒಪ್ಪಿಬಿಡಬೇಕೆನ್ನುವುದು ಒಂದು ಭಾಷಾ ಜನಾಂಗದ ಏಳಿಗೆಯ ದೃಷ್ಟಿಯಿಂದ ಆಯಾ ಭಾಷಾ ಸಮಾಜಕ್ಕೆ ಮಾರಕವಾಗುತ್ತದೆ.
ಜಗತ್ತಿನ ಮುಂದುವರಿದ ದೇಶಗಳೆಲ್ಲಾ ತಮ್ಮ ತಮ್ಮ ಭಾಷೆಗಳ ಸುತ್ತ ಕಟ್ಟಿಕೊಂಡವುಗಳಾಗಿವೆ.ಉದಾಹರಣೆಗೆ ಜಪಾನ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್ ಡಮ್ ಇತ್ಯಾದಿಗಳು. ತಮ್ಮದಲ್ಲದ ಭಾಷೆಯನ್ನು ಭಾಷೆಯ ಬೆನ್ನ ಹಿಂದೆ ಬಿದ್ದಿರುವ ದೇಶಗಳೆಲ್ಲಾ ಹಿಂದೆಯೇ ಉಳಿದಿವೆ.ಇದೊಂದನ್ನು ಅರಿತರೆ ಸಾಕು, ತಾಯಿನುಡಿಯ ಹಿರಿಮೆಯ ಅರ್ಥವಾಗುತ್ತದೆ. ಇಲ್ಲಿ ಯಾರೂ ಭಾಷಾ ಹಿರಿಮೆಯನ್ನು ಅದರ ಹಳಮೆಯ ಮೂಲಕ ಸಾಧಿಸುತ್ತಿಲ್ಲ. ಬೇರೆ ಬೇರೆ ಭಾಷೆಗಳಲ್ಲಿನ ಸೊಗಡನ್ನು ಅನುವಾದದ ಮೂಲಕ ಪೂರ್ತಿಯಾಗಿ ಅರಿಯುವುದು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ ಆ ಕಾರಣದಿಂದ ಐದು ಕೋಟಿ ಕನ್ನಡಿಗರೆಲ್ಲ ಹಿಂದಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತೆ. ಸಾಕ್ಷರತೆಯ ಪ್ರಮಾಣವೇ ಕಡಿಮೆ ಇರುವ ನಮ್ಮ ದೇಶದಲ್ಲಿ ಎರಡನೆಯ ಭಾಷೆಯನ್ನು, ಅದೂ ಆ ಭಾಷೆಯ ಸೊಗಡನ್ನು ಅರಿಯಲು ಕಲಿಯಬೇಕು . . ಅದೂ ಎಲ್ಲ ಜನರೂ ಕಲಿಯಲಿ ಎಂದು ಆಶಿಸುವುದು ತಪ್ಪು ಮತ್ತು ಖಂಡನೀಯ.
ಭಾರತ ದೇಶದಲ್ಲಿ ಭಿನ್ನತೆಯ ಕೂಗು ಇಂದು ಎದ್ದಿರುವುದೇ ಆದಲ್ಲಿ ಅದಕ್ಕೆ ಕಾರಣ ನಮ್ಮ ಭಾಷೆ, ಸಂಸ್ಕೃತಿಗಳಲ್ಲಿ ಸಹಜವಾಗಿ ಇರುವ ಭಿನ್ನತೆ ಕಾರಣವಲ್ಲ. ಈ ಭಿನ್ನತೆಯನ್ನು ಅಳಿಸಿ ಹಾಕಿ, ವೈವಿಧ್ಯತೆ ಅಳಿದರೇ ಏಕತೆ ಎನ್ನುವ ನೀತಿಗಳ ಕಾರಣದಿಂದಾಗಿ ಎಂದು ತಿಳಿಸಲು ಬಯಸುತ್ತೇನೆ.
ನಿಮ್ಮಬ್ಲಾಗ್ ಉನ್ನತ ದ್ರುಷ್ಟಿಕೋನದ ಒಳ್ಳೆಯ ಆಶಯದಿಂದ ಕೂಡಿದೆ ಹೀಗೇ ಮುಂದುವರೆಸಿ.
ಡಾ. ರಾಮಕೃಷ್ಣ ಪುರಾಣಿಕ್

Anonymous ಅಂತಾರೆ...

ಪ್ರೀತಿಯ ರಾಮಕೃಷ್ಣ ಪುರಾಣಿಕ್ ಅವ್ರೆ, ತುಂಬಾ ಚೆನ್ನಾಗಿ ಬರೆದಿದ್ದೀರಿ. ಈ ವಿಚಾರ, ಈ ದಾರಿಯನ್ನ ಅಳವಡಿಸಿ ಕೊಂಡರೆ ಒಳ್ಳೆಯದು. ಆದ್ರೆ ಕನ್ನಡ "ಕಾಪಾಡ್ತೀವಿ" ಅಂತ ಓಡಾಡೊ ಅಂತ ನಮ್ಮ ಕೆಲವು ಸ್ನೇಹಿತರು ಸಕ್ಕತ್ ಭಯೊತ್ಪಾದಕ, ಮಿಲಿಟೆಂಟ್ ರೀತಿಗಳನ್ನ ಬಳೆಸೋದನ್ನ ನೋಡಿದ್ದೇನೆ. ಕೆಲವೊಮ್ಮೆ fundamentalist ಅಂತ ಹೇಳ್ತಾರಲ್ಲ ಆ ರೀತಿ-ನೀತಿನೇ ಸರಿ ಅನ್ನೋಹಾಗೆ ಮಾಡಿ, ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಅಸಹ್ಯ ಬರೋ ಹಾಗೆ ಮಾಡೋದೂ ನೋಡಿದ್ದೇನೆ.

ವಿಚಾರ ದಬ್ಬಾಳಿಕೆ, ಅವರು ಹೇಳಿದ್ದೆ ಸರಿ ಅನ್ನೋ ಮನೋಭಾವ, ಕೆಲವೊಮ್ಮೆ ಕುರುಡು ಅಭಿಮಾನಕ್ಕೆ ಚಾಪೆ ಹಾಸುತ್ತೆ, ಅಲ್ವೆ? ಒಮ್ಮೊಮ್ಮೆ ಈ ಜಿಹಾದಿ ವ್ಯಂಗ ಸರಿಯಾಗೇ ಇದ್ಯೇನೋ ಅನ್ಸುತ್ತೆ. ಕನ್ನಡವೆಂದರೆ ಕನ್ನಡ ಸಿನೆಮಾ, ಕನ್ನಡ ಸಿನೇಮಾಗಳನ್ನ ನೋಡದಿದ್ದವರಿಗೆ ಕನ್ನಡ ಭಾಷಾ ಪ್ರೇಮ ಇಲ್ವೇನೊ ಅನ್ನೋ ಅಭಿಪ್ರಾಯ, ಕನ್ನಡ ಭಾಷೆ ಉಳಿಸಬೇಕಾದ್ರೆ ಬೇರೆ ಭಾಷೆಗಳನ್ನ ನಮ್ಮ ರಾಜ್ಯದಲ್ಲಿ ತುಳಿಯಬೇಕು ಅನ್ನೋ ಮಾತುಗಳ ಧಾಟಿ...... ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ ... ನಮಗೆ ಕನ್ನಡ ಅಂದ್ರೆ ಏನೂ ಅಂತಾನೆ ಗೊತ್ತಿಲ್ವೇನೋ ಅನ್ಸುತ್ತೆ .... ಬಿಡಿ ..

ಸಂಸ್ಕೃತದಲ್ಲಿರೋ ಅಂತಹಾ ವಿಚಾರಧಾರೆ ಬೇರೆಲ್ಲೂ ಇಲ್ಲ ಅನ್ನೋದು ಸರ್ವರೂ ಒಪ್ಪಿಕೊಳ್ಳೋ ವಿಚಾರ (ಒಪ್ಪಿಕೋಳ್ಲದೇ ಇರೋ ಮಹಾನುಭಾವರು ಇದ್ದಾರೆ), ಭಗವದ್ ಗೀತೆಯಾಗಲಿ, ಮಹಾಭಾರತವಾಗಲಿ, ರಾಮಯಣವಾಗಲಿ, ಭಾಗವತ ವಾಗಲೀ, ಶ್ರಿ ಶಂಕರ, ರಮಾನುಜ, ಮಧ್ವ, ಹೀಗೆ ಅನೇಕರ ಮುತ್ತು ರತ್ನಗಳನ್ನ ನಾವು ಈಗಾಗ್ಲೇ ಕಳ್ಕೊತಾ ಇರೋವಾಗ, ಅವುಗಳ ಸ್ವಾರಸ್ಯವನ್ನು ಸವಿದೂ ಹೀಗೆ ಮಾತಾಡೋದು ನಗೆಗಾಟ್ಲು ಅನ್ಸುತ್ತೆ, ಅಲ್ವೆ? ಅವುಗಳ ಅನುವಾದ ಓದಿ ಅಂದ್ರೆ ಏನ್ ಹೆಳ್ಬೇಕು ಹೇಳಿ :)

ಭಾಷೆ ಅನ್ನೋದು ಬೇಳಿಯಬೇಕು, ಅಲ್ಲ್ವೆ? ಅದಕ್ಕೆ ಸೂಕ್ತವಾದ ಉದಾಹರಣೆ ಅಂದ್ರೆ ಆಂಗ್ಲ ಭಾಷೆ. ತನ್ನದೇ identity ಕಾಪಾಡಿಕೊಂಡು ಬೇರೆ ಭಾಷೆಗಳ "most appropriate" ಪದಗಳನ್ನ ಅಳವಡಿಸಿಕೊಂಡು ಬೆಳೆದಿದೆ, ಬೆಳೆಯುತ್ತಿದೆ. ಅದರಲ್ಲಿ latin, french, spanish, hindi, sanskrit, kannada, japanese, chinese ಹೀಗೆ ಎಲ್ಲಾ ಭಾಷೆಗಳ ಕೆಲವು ಆಯ್ದ ಪದಗಳೆವೆ. ಹಾಗೆಯೇ ಕನ್ನಡದಲ್ಲೊ ಕೂಡ ಸಂಸ್ಕೃತದಿಂದ ಅಳವಡಿಸಿಕೊಂಡ ಸಾಕಷ್ಟು ಪದಗಳಿವೆ, ಅದನ್ನ ಹೇಳೊದ್ರಲ್ಲಿ ಎನೂ ನಾಚಿಕೆಗೇಡಿಲ್ಲ ಅಲ್ವೆ? ಇದರಲ್ಲಿ ನಾಚಿಕೆ ಪಡುವ ಸಂಗತಿಯಾಗಲಿ, ಧಿಕ್ಕರಿಸುವ ಮನೋಭಾವವಾಗಲಿ ಅಸಂಬದ್ದ ಅಲ್ಲವೇ? ಭಾಷೆ ಪ್ರೇಮ ಇರಲೇಬೇಕು, ಅದರ ಅನುಕೂಲಗಳು ಸಾಕಷ್ಟ್ ಇವೆ, ಹಾಗಂತ ನಾವು ಮತ್ತು ನಮ್ಮ ಭಾಷೆ ಗೊಡ್ಡಾಗಬಾರ್ದು, ವಡ್ಡಾಗಿ ಬೆಳಿಯದೆ ಇರೋ ಹಾಗೆ ಆಗಬೇಕಿಲ್ಲ. ಕನ್ನಡದಲ್ಲಿ ಈಗ ಸಾಕಷ್ಟು ಆಂಗ್ಲ, ತಮಿಳು ಪದಗಳೂ ಇವೆ. ಕೆಲವೊಮ್ಮೆ ಬೇರೆ ಭಾಷೆಗಳನ್ನ ಧಿಕ್ಕರಿಸುವ ಧ್ವನಿ ಇಲ್ಲಿ ಕಂಡು ಬರುತ್ತೆ ಅದು ದೇಷಕ್ಕಾಗಲೀ, ರಾಜ್ಯಕ್ಕಾಗಲೀ, ಭಾಷೆಗಾಗಲೀ, ನಮಗಾಗಲೀ ಒಳ್ಳೆಯದಲ್ಲ ಅಂತ ಅನ್ಸುತ್ತೆ.

Anonymous ಅಂತಾರೆ...

ಅಲ್ಲಾ ಗುರು!!

"ನಿಜವಾದ ಜ್ಞಾನವನ್ನು ಪಡೆ", ಯಾವ್ದು ಗುರು ನಿಜವಾದ ಜ್ಞಾನ?

"ಯಾರೋ ಹೇಳಿಕೊಟ್ಟ ಸುಳ್ಳಿಗೆ ಮಾರುಹೋಗಬೇಡ", ನಿಂಗೆ ಯಾರೂ ಹೆಳಿಕೊಡ್ಲೇ ಇಲ್ವಾ ಗುರು? ನಿಂದೇ ನಿಜ ಅಂತ ಗ್ಯಾರೆಂಟಿ ಏನ್ ಗುರು? :) ಸುಳ್ಳು, ನಿಜ ಎಲ್ಲಾ ಠೊಳ್ಳು :)ಬಿಟ್-ಹಾಕು.

ನೋಡ್ ಗುರು! ನಂಗೆ ನಮ್ ಅಪ್ಪ-ಅಮ್ಮನ ಮೇಲೆ ಪ್ರೀತಿ, ಆದ್ರೆ ಶ್ರಿ ಶಂಕರರ ಮೇಲೆ, ಶ್ರಿ ರಾಮಕೃಷ್ಣರ ಮೇಲೆ, ಸ್ವಾಮಿ ವಿವೇಕಾನಂದರ ಮೇಲೆ, ಸ್ವಾಮಿ ಚಿನ್ಮಯಾನಂದರ ಮೇಲೆ ಭಕ್ತಿ, ಅತ್ಯಂತ ಮರ್ಯಾದೆ. ಇದ್ರಲ್ಲಿ ಯಾರ್ ಮೇಲೆ ಯಾರ್ ಕೆಳ್ಗೆ ಅನ್ನೋದು ಸರಿನಾ? ಹೇಳ್ಳೇ ಬೇಕು ಅನ್ನೋಹಾಗಿದ್ರೆ, ಜ್ಞಾನ ವಿಚಾರದಲ್ಲಿ ಗುರು, ಜೀವನದ ವಿಚಾರದಲ್ಲಿ ತಂದೆ ತಾಯಿ ಮೇಲು. ಕನ್ನಡ ನನ್ನ ಮಾತಾ-ಪಿತ್ರು, ಸಂಸ್ಕೃತ ಗುರು ಇದ್ಧಹಾಗೆ. ಅಪ್ಪ-ಅಮ್ಮ ಗುರು ಕೂಡ ನಿಜ, ಆದ್ರೆ ಗುರುವಿನ ಪಟ್ಟವೇ ಬೇರೆ. ಮೇಲೆ-ಕೆಳಗೆ ಅನ್ನೋದು ಹುಚ್ಚುತನ, ಎರಡಕ್ಕೂ ಅವುಗಳದೇ ಆದ ಸ್ಥಾನ ಮಾನಗಳಿವೆ.

ವಿಧ್ಯೆಯೇ ಕಲಿಯದವರಿಗೆ ಗುರುವಿನ ಮೌಲ್ಯವೆಲ್ಲಿ ಹೇಳು? ಸಂಸ್ಕೃತವನ್ನ ಎಂದೂ ನೋಡದೆ ಇದ್ದು ಅದರ ಬಗ್ಗೆ ತಿಪ್ಪಣಿಸಿದ್ರೆ ಏನ್ ಪ್ರಯೊಜ್ನ ಹೆಳು? ನೀನೆನ್ ಸಂಸ್ಕೃತ ಪಂಡಿತನಲ್ಲ, ಆದರೆ ಅದರ ಸ್ವಲ್ಪ ರುಚಿ ಕಂಡಿದ್ದೇನೆ, ಅದರ ಸ್ಥಾನ ಏನು ಅಂತ ಸ್ವಲ್ಪ ಅರೆತಿದ್ದೇನೆ ಅಷ್ಟೆ. ಸುಮ್ಮನೆ ಅಸಂಬದ್ದ ವಿಚಾರಗಲನ್ನ ತಕ್ಕಡಿಯಲ್ಲಿ ತೂಗೋದು ಸರಿಯಲ್ಲ. ನಿಮ್ಮ ಶುರು ಸರಿ ಇದೆ ಆದ್ರೆ ಕೆಲವು ವಿಚಾರಗಳು over generanlized sweeping statements ತರ ಕಾಣುತ್ವೆ ಅದಕ್ಕೆ ನನ್ನ ಅನಿಸಿಕೆ ಅಷ್ಟೆ.

"ನನ್ನ ಭಾಷೆ ನನ್ನದು" ಅದು ಹೃದಯಕ್ಕೆ ಹತ್ರ, ಬೇರೆ ಭಾಷೆಗಳೆಲ್ಲ ಮೆದುಳಿಗೆ ಹತ್ರ ಅಷ್ಟೆ!! ಸುಮ್ನೆ ಪಟ್ಟ, ಮೇಲೆ ಕೆಳಗೆ ಏನ್ ಗುರು ಇವೆಲ್ಲಾ?

"ನಹಿ ನಹಿ ರಕ್ಷತಿ ಡುಕೃಂಕರಣೇ, ಭಜ ಗೋವಿಂದಂ ಮೂಢಮತೆ"

Anonymous ಅಂತಾರೆ...

"ಸಂಸ್ಕೃತದಲ್ಲಿರೋ ಅಂತಹಾ ವಿಚಾರಧಾರೆ ಬೇರೆಲ್ಲೂ ಇಲ್ಲ ಅನ್ನೋದು ಸರ್ವರೂ ಒಪ್ಪಿಕೊಳ್ಳೋ ವಿಚಾರ (ಒಪ್ಪಿಕೋಳ್ಲದೇ ಇರೋ ಮಹಾನುಭಾವರು ಇದ್ದಾರೆ), ಭಗವದ್ ಗೀತೆಯಾಗಲಿ, ಮಹಾಭಾರತವಾಗಲಿ, ರಾಮಯಣವಾಗಲಿ, ಭಾಗವತ ವಾಗಲೀ, ಶ್ರಿ ಶಂಕರ, ರಮಾನುಜ, ಮಧ್ವ, ಹೀಗೆ ಅನೇಕರ ಮುತ್ತು ರತ್ನಗಳನ್ನ ನಾವು ಈಗಾಗ್ಲೇ ಕಳ್ಕೊತಾ ಇರೋವಾಗ, ಅವುಗಳ ಸ್ವಾರಸ್ಯವನ್ನು ಸವಿದೂ ಹೀಗೆ ಮಾತಾಡೋದು ನಗೆಗಾಟ್ಲು ಅನ್ಸುತ್ತೆ, ಅಲ್ವೆ? ಅವುಗಳ ಅನುವಾದ ಓದಿ ಅಂದ್ರೆ ಏನ್ ಹೆಳ್ಬೇಕು ಹೇಳಿ :)"




ಏನು ಇಲ್ಲಿ ಕರ್ನಾಟಕದಲ್ಲಿ ಇರೋರೆಲ್ಲ ಬರೀ ಬ್ರಾಹ್ಮಣರ? ಏನು ಮಾತಿದೆ.

ನಮಗೆ ನಿಮ್ಮ ವೇದ, ಶಂಕರ, ರಾಮಾನುಜ, ಯಾರು, ಬೇಕಾಗಿಲ್ಲ. ಏನ್‌ಗುರುಗೇ ಬೇಕಾದ್ರೂ ನಮಗೆ ಬೇಕಾಗಿಲ್ಲ.

ನಮ್ಮ ಬೇಕಾಗಿರುವುದು science, commerce ಮತ್ತು arts. ಇದಕ್ಕೆ English ಮತ್ತು ಕನ್ನಡ ಸಾಕು.


ನೀವು ಸಂಸ್ಕೃತದೋರು ಒಂದು ಕೆಲಸ ಮಾಡಿ, ನಮ್ಮ ಕೇಂದ್ರ ಸರಕಾರಕ್ಕೆ ಒಂದು ಬೇರೆ ರಾಜ್ಯಕ್ಕೆ ಅರ್ಜಿ ಹಾಕಿ.

ನಿಮ್ಮ ಸಂಸ್ಕೃತ ರಾಜ್ಯದಲ್ಲಿ ಇರಿ. ನಮ್ಮನ್ನು ನಮ್ಮ ಕನ್ನಡ ರಾಜ್ಯದ ಮೇಲೆ ನಿಮ್ಮ ಸಂಸ್ಕೃತ ಮತ್ತು ಹಿಂದಿ ಹೇಳಬೇಡಿರಿ. ಈ ಹೇರಿಕೆ ಅದಕ್ಕೆ ನಮ್ಮ ವಿರೋಧ ಇದೆ.

Anonymous ಅಂತಾರೆ...

"ಸಂಸ್ಕೃತದಲ್ಲಿರೋ ಅಂತಹಾ ವಿಚಾರಧಾರೆ ಬೇರೆಲ್ಲೂ ಇಲ್ಲ ಅನ್ನೋದು ಸರ್ವರೂ ಒಪ್ಪಿಕೊಳ್ಳೋ ವಿಚಾರ (ಒಪ್ಪಿಕೋಳ್ಲದೇ ಇರೋ ಮಹಾನುಭಾವರು ಇದ್ದಾರೆ), ಭಗವದ್ ಗೀತೆಯಾಗಲಿ, ಮಹಾಭಾರತವಾಗಲಿ, ರಾಮಯಣವಾಗಲಿ, ಭಾಗವತ ವಾಗಲೀ, ಶ್ರಿ ಶಂಕರ, ರಮಾನುಜ, ಮಧ್ವ, ಹೀಗೆ ಅನೇಕರ ಮುತ್ತು ರತ್ನಗಳನ್ನ ನಾವು ಈಗಾಗ್ಲೇ ಕಳ್ಕೊತಾ ಇರೋವಾಗ, ಅವುಗಳ ಸ್ವಾರಸ್ಯವನ್ನು ಸವಿದೂ ಹೀಗೆ ಮಾತಾಡೋದು ನಗೆಗಾಟ್ಲು ಅನ್ಸುತ್ತೆ, ಅಲ್ವೆ? ಅವುಗಳ ಅನುವಾದ ಓದಿ ಅಂದ್ರೆ ಏನ್ ಹೆಳ್ಬೇಕು ಹೇಳಿ :)"




ಏನು ಇಲ್ಲಿ ಕರ್ನಾಟಕದಲ್ಲಿ ಇರೋರೆಲ್ಲ ಬರೀ ಬ್ರಾಹ್ಮಣರ? ಏನು ಮಾತಿದೆ.

ನಮಗೆ ನಿಮ್ಮ ವೇದ, ಶಂಕರ, ರಾಮಾನುಜ, ಯಾರು, ಬೇಕಾಗಿಲ್ಲ. ಏನ್‌ಗುರುಗೇ ಬೇಕಾದ್ರೂ ನಮಗೆ ಬೇಕಾಗಿಲ್ಲ.

ನಮ್ಮ ಬೇಕಾಗಿರುವುದು science, commerce ಮತ್ತು arts. ಇದಕ್ಕೆ English ಮತ್ತು ಕನ್ನಡ ಸಾಕು.


ನೀವು ಸಂಸ್ಕೃತದೋರು ಒಂದು ಕೆಲಸ ಮಾಡಿ, ನಮ್ಮ ಕೇಂದ್ರ ಸರಕಾರಕ್ಕೆ ಒಂದು ಬೇರೆ ರಾಜ್ಯಕ್ಕೆ ಅರ್ಜಿ ಹಾಕಿ.

ನಿಮ್ಮ ಸಂಸ್ಕೃತ ರಾಜ್ಯದಲ್ಲಿ ಇರಿ. ನಮ್ಮನ್ನು ನಮ್ಮ ಕನ್ನಡ ರಾಜ್ಯದ ಮೇಲೆ ನಿಮ್ಮ ಸಂಸ್ಕೃತ ಮತ್ತು ಹಿಂದಿ ಹೇಳಬೇಡಿರಿ. ಈ ಹೇರಿಕೆ ಅದಕ್ಕೆ ನಮ್ಮ ವಿರೋಧ ಇದೆ.

Anonymous ಅಂತಾರೆ...

ಅಲ್ಲಮ ಮಹಾಪ್ರಭು!! ಬ್ರಹ್ಮಣನಾ?!!! ಅಸಹ್ಯವಾಗಿ ಜಾತಿವಾದ ತರೋದು ಬೇಡಾ ಗುರು! ನಮ್ ದೇಷಕ್ಕೆ ಜಾತಿ ಬೇಧದಿಂದ ಈಗಾಗ್ಲೇ ಆಗಿರೊ ಏಟು, ನಷ್ಟ ಸಾಕು. ಇವೆಲ್ಲಾ ಬರೀ ಉಧಾಹರಣೆಗೆ ಅಷ್ಟೇ ಸರಿ! ಹೀಗೆ ಕೂಪ ಮಂಡೂಕರಂತೆ ಮಾತಾಡ್ಬೇಕಾ? ಗುರು, ದೇಷ, ರಾಜ್ಯ ಅಂದ್ಮೇಲೆ ಬೇರೆ ಬೇರೆ, ವಿವಿದ, ವಿಭಿನ್ನ ಅಭಿಪ್ರಾಯಗಳು, ಅನಿಸಿಕೆಗಳೂ, ವಿಚಾರಗಳು ಇದ್ದಿದ್ದೆ, ಬರೀ ನೀನೊಬ್ಬನೇ ಅಲ್ಲಾ ಗುರು ಕರ್ನಾಟಕ ಅಂದ್ರೆ. ನಿನಗಿಂತ ಜಾಸ್ತಿನೇ ಕನ್ನಡ ಪ್ರೇಮ ನನಗಿದೆ ಅನ್ಸುತ್ತೆ, ಅದು arguable. ಸುಮ್ನೆ ನಿನ್ ಕನ್ನಡ ಪ್ರೇಮ ನನ್ನ ಮೇಲೆ ಹೇರಕ್ಕೆ ಬರಬೇಡ ದಯವಿಟ್ಟು. ನಿನಗೆ ಬೇಡದಿದ್ದರೆ ಬೇಡ ಬಿಡು, ಕಲ್ಯೋರು ಕಲೀತಾರೆ. english ಮಾತ್ರಾ ಹೇರ್ಬಹುದಾ, ಹೇರ್ಸ್ಕೊ ಗುರು ಹೇರ್ಸ್ಕೊ!! ಏನ್ ಮಾತಾಡ್ತೀರೊ!!

ಎಲ್ಲರೂ ಅವ್ರ್-ಅವ್ರ್ದೆ ರಾಜ್ಯ ಕೇಳ್ತಾ ಕೂತ್ರೆ ಅಧೊಗತಿ ಅಷ್ಟೆ. ಭಾರತಕ್ಕೆ ತರ್ಪಣ ಕೊಡೋದು ಬಾಕಿ. ಹೀಗೆ ಆಯ್ತು ಅಂದ್ರೆ ದೇಷನ ಚಿಂದಿ ಚಿಂದಿ ಮಾಡ್ಬೇಕು ಅಷ್ಟೆ! ಕೊಡವ/ಕೂರ್ಗ್ ಅವ್ರೂ ಅವರ್ದೆ ರಾಜ್ಯ ಕೇಳ್ಳೀ, ತುಳು ರಾಜ್ಯ, ಹೀಗೆ ಕರ್ನಾಟಕವನ್ನೂ ಚಿಂದಿ ಚಿಂದಿ ಮಾಡ್ಬೇಕಾ ಗುರು? ಏನ್ ಮಾತಾಡ್ತೀಯಾ ಗುರು, ಮನೆ ಮುರ್ಯೊ ಮಾತು ಅರ್ಥವಿಲ್ಲದ ಹಾಗೆ... ಚೆಚೆ... ದಯವಿಟ್ಟು ...

Anonymous ಅಂತಾರೆ...

ಅಲ್ಲಮ ಮಹಾಪ್ರಭು!! ಬ್ರಹ್ಮಣನಾ?!!! ಅಸಹ್ಯವಾಗಿ ಜಾತಿವಾದ ತರೋದು ಬೇಡಾ ಗುರು! ನಮ್ ದೇಷಕ್ಕೆ ಜಾತಿ ಬೇಧದಿಂದ ಈಗಾಗ್ಲೇ ಆಗಿರೊ ಏಟು, ನಷ್ಟ ಸಾಕು. ಇವೆಲ್ಲಾ ಬರೀ ಉಧಾಹರಣೆಗೆ ಅಷ್ಟೇ ಸರಿ! ಹೀಗೆ ಕೂಪ ಮಂಡೂಕರಂತೆ ಮಾತಾಡ್ಬೇಕಾ? ಗುರು, ದೇಷ, ರಾಜ್ಯ ಅಂದ್ಮೇಲೆ ಬೇರೆ ಬೇರೆ, ವಿವಿದ, ವಿಭಿನ್ನ ಅಭಿಪ್ರಾಯಗಳು, ಅನಿಸಿಕೆಗಳೂ, ವಿಚಾರಗಳು ಇದ್ದಿದ್ದೆ, ಬರೀ ನೀನೊಬ್ಬನೇ ಅಲ್ಲಾ ಗುರು ಕರ್ನಾಟಕ ಅಂದ್ರೆ. ನಿನಗಿಂತ ಜಾಸ್ತಿನೇ ಕನ್ನಡ ಪ್ರೇಮ ನನಗಿದೆ ಅನ್ಸುತ್ತೆ, ಅದು arguable. ಸುಮ್ನೆ ನಿನ್ ಕನ್ನಡ ಪ್ರೇಮ ನನ್ನ ಮೇಲೆ ಹೇರಕ್ಕೆ ಬರಬೇಡ ದಯವಿಟ್ಟು. ನಿನಗೆ ಬೇಡದಿದ್ದರೆ ಬೇಡ ಬಿಡು, ಕಲ್ಯೋರು ಕಲೀತಾರೆ. english ಮಾತ್ರಾ ಹೇರ್ಬಹುದಾ, ಹೇರ್ಸ್ಕೊ ಗುರು ಹೇರ್ಸ್ಕೊ!! ಏನ್ ಮಾತಾಡ್ತೀರೊ!!

ಎಲ್ಲರೂ ಅವ್ರ್-ಅವ್ರ್ದೆ ರಾಜ್ಯ ಕೇಳ್ತಾ ಕೂತ್ರೆ ಅಧೊಗತಿ ಅಷ್ಟೆ. ಭಾರತಕ್ಕೆ ತರ್ಪಣ ಕೊಡೋದು ಬಾಕಿ. ಹೀಗೆ ಆಯ್ತು ಅಂದ್ರೆ ದೇಷನ ಚಿಂದಿ ಚಿಂದಿ ಮಾಡ್ಬೇಕು ಅಷ್ಟೆ! ಕೊಡವ/ಕೂರ್ಗ್ ಅವ್ರೂ ಅವರ್ದೆ ರಾಜ್ಯ ಕೇಳ್ಳೀ, ತುಳು ರಾಜ್ಯ, ಹೀಗೆ ಕರ್ನಾಟಕವನ್ನೂ ಚಿಂದಿ ಚಿಂದಿ ಮಾಡ್ಬೇಕಾ ಗುರು? ಏನ್ ಮಾತಾಡ್ತೀಯಾ ಗುರು, ಮನೆ ಮುರ್ಯೊ ಮಾತು ಅರ್ಥವಿಲ್ಲದ ಹಾಗೆ... ಚೆಚೆ... ದಯವಿಟ್ಟು ...

Anonymous ಅಂತಾರೆ...

ಬೆದನೆಕಾಯಿ ಪಂಡಿತೊತ್ತಗರೇ!!

ನೀವು ಮಾತ್ರ ಸಂಸ್ಕೃತಕ್ಕೂ ಧರ್ಮಕ್ಕೂ ನಂಟು ಬಿಗಿದು "ಧಾರ್ಮಕಕ್ಕಾಗಿ ಸಂಸ್ಕೃತ" ಬೇಕು ಅನ್ನೋಬಹುದೋ?

ಅದೂ ಅಲ್ಲದೇ ಈ ಶಂಕರ, ರಾಮಾನುಜ ಇವರೆಲ್ಲ ಬರೀ ಬ್ರಾಹ್ಮಣರ ಗುರುಗಳು, ಬರೀ ಬ್ರಾಹ್ಮಣರು ವೇದವನ್ನು ನಂಬೋದು.

ಈ ವೈದಿಕಧರ್ಮವೇ "ಮನುಸ್ಮೃತಿ" ಎಂಬ ಸಂಸ್ಕೃತ ಗ್ರಂಥವನ್ನು ಹುಟ್ಟಿಸಿದ್ದು.

ಇಷ್ಟೆಲ್ಲ ಮಾಡಿ ಬಿಟ್ಟು, ಈ ದೊಡ್ಡದಾಗಿ ಜಾತಿ ತರಬೇಡಿ ಅಂತೆ!!

ಇವರ ಶಂಕರ ಮಠ, ರಾಘವೇಂದ್ರ ಮಠಗಳಿಗೆ ಎಷ್ಟು ಬ್ರಾಹ್ಮಣೇತರರು ಒಳಗೆ ಸೇರಿಸಿಕೊಳ್ತಾರೆ. ಅಲ್ಲಿಗೆ ಬೇಡವಾದ ನಾವು ಇವರ ಸಂಸ್ಕೃತ ಉಳಿಸಲು, ನಮ್ಮ ಕನ್ನಡವನ್ನು ಬಲಿಕೊಡಬೇಕಾ?

ಬರೀ ಇದೇ ಆಯ್ತು ಇವರು ತಾರತಮ್ಯವಾದ ಮತ್ತು ಕಂತ್ರಿಬುದ್ಧಿ!

Anonymous ಅಂತಾರೆ...

allamare, karnatakada yaavudaadaru shankara maTa athava raaghavendra Mata galalli nimma jaati keli volage bido padhati ide tilisi..idu yellu illa..eega yellaroo jaati bheda maretu jeevana nadesuttiddare..nimmanthavare innu jaati pangaDa, anta desha voldeyalu tidigaalalli nitirodu..chi nimma dweshakkitstu..

Anonymous ಅಂತಾರೆ...

ಒಹೋ ಹಾಗೋ,

ಹಾಗಾದರೆ ಮೊದಲು

ಉಡುಪಿ, ಶೃಂಗೇರಿ, ಇಲ್ಲೆಲ್ಲ, ಬ್ರಾಹ್ಮಣೇತರಿಗೆ ವೇದ ಪಾಠ ಕಲಿಸಿಲು ಶುರುಮಾಡಿ.( ಬ್ರಾಹ್ಮಣೇತರಿಗೆ ಮಠದಲ್ಲಿ ಓದಲು ಅವಕಾಶ ಇಲ್ಲ, ಆದರೆ ಹುಂಡಿಗೆ ದುಡ್ಡ ಹಾಕಕ್ಕೆ, ಮಂಗಳಾರತಿ ತಟ್ಟೆಗೆ ಕಾಸು ಹಾಕಕ್ಕೆ ಇವರು ಬೇಕು )

ಆಮೇಲೆ, ಅಲ್ಲೆಲ್ಲ, ವೇದ ಕಲಿತ ಬ್ರಾಹ್ಮಣೇತರರನ್ನು ಅರ್ಚಕರಾಗಿ ನೇಮಿಸಿರಿ.

ಇವರ ಪೇಜಾವರ ಮಠದ ವಿಶ್ವೇಶ್ವರ ತೀರ್ಥರೆಂಬೋ ಹಿಂದು ನಾಯಕರು ಬಂದು ದಲಿತರ ಜೊತೆಗೆ ಕೂತು ಊಟಮಾಡಲಿ, ಅಂದು ಇವರ ಜಾತಿವಾದಿಗಳಲ್ಲ.!!

ಆಮೇಲೆ ನೀವು ಜಾತಿವಾದಿಗಳಲ್ಲ.!! ( ಇದೆಲ್ಲ ಇವರು ಮಾಡಲ್ಲ, ಏಕೆಂದರೆ ದೇವಸ್ಥಾನದಿಂದ ದುಡ್ಡು ಮಾಡಿ ಹೊಟ್ಟೆ ಹೊರೆಯುವುದೇ ಇವರ ಜಾತಿಧರ್ಮ )

ದೇಶ, ನಾವೊಬ್ಬರೇ ದೇಶದ ರಕ್ಷಕರು ಎಂದು ಹೇಳಿಕೊಂಡು ನಿಮ್ಮ ಬ್ರಾಹ್ಮಣ ಕಂತ್ರಿ ಬುದ್ಧಿ ಬಿಡಲ್ಲ.

Anonymous ಅಂತಾರೆ...

allamare, nimma goDDu vaada neevu bidalla biDi..Nimmannu yaraadaroo devasthaanakke hogi duddu haaki yendu kaalu kattikondare?illavalla..neevu deevasthaanakke hogadiddaroo avu nadeyuttave, neevu yaava church ge hogadiddaroo avu naDeyuttave..innu pejaavara maTadavara bagge heLidiri..pratiyobbara vyuktikavishaya nimageke?? neevu allige hodare alli nimma jaati keLuvudillavalla? ashtusaaku nimage..innu veda paaTagaLa bagge heLidiri..indu yella pustakadangadigaLallu veda pustakagaLu siguttave..nimage aasakti iddare kondukollabahudalla? pustaka dangaDiyalli nimma jaati keLuttareye?

Vijendra ( ವಿಜೇಂದ್ರ ರಾವ್ ) ಅಂತಾರೆ...

ಇಲ್ಲಿ ಅಲ್ಲಮರ ವಾದ ಸರಿಯಿಲ್ಲ.. ದಾರಿ ತಪ್ತಾ ಇದೆ.. ಸುಮ್ನೆ ಅಗತ್ಯ ಇಲ್ಲದ ವಿಷಯಗಳನ್ನು ಎಳೆದು ತರ್ತಾ ಇದ್ದಾರೆ.

Anonymous ಅಂತಾರೆ...

ಅಹಾ..

ನೋಡಿದ್ರ, ಯಾವಾಗ ನಿಮ್ಮ ಬುಡಕ್ಕೆ ಬಂತು ಆಗ ಗೊಡ್ಡುವಾದ.

ಯಾರಾದರು ಬ್ರಾಹ್ಮಣರನ್ನು ಗೊಡ್ಡುತನದಲ್ಲಿ ಮೀರಿಸಿರಿವರುಂಟೇ :)..


ವಿಜೇಂದ್ರ ರಾವ್ :)

ನೋಡಿ, ವೇದ, ಶಂಕರ, ರಾಮಾನುಜ ಇವರನ್ನು ಕಟ್ಟಿಕೊಂಡು ಹೆಚ್ಚಿನ ಕನ್ನಡಿಗರಿಗೆ ಬೇಕಾಗಿಲ್ಲ. ಏಕೆಂದರೆ ಹೆಚ್ಚು ಕನ್ನಡಿಗರು ಬ್ರಾಹ್ಮಣರಲ್ಲ.

ಬ್ರಾಹ್ಮಣರು ಕನ್ನಡಿಗರು ಹೌದು, ಸಂಸ್ಕೃತದೋರು ಹೌದು, ತಮಿಳರು ಹೌದು ಎಲ್ಲ ಅವರು. :) ಗೊಸುಂಬೆಗಳು.

ಈಗ ಸಂಸ್ಕೃತವನ್ನು ಕನ್ನಡಿಗರು ಕಲಿಯಬೇಕು, ಇಲ್ಲದಿದ್ದರೆ ನಿಮ್ಮ ಆತ್ಮಕ್ಕೆ ಗತಿಯಿಲ್ಲ ಅಂತ ಇವರೇ ಹೇಳ್ತಾ ಇರೋದು.

ಇವಿಷ್ಟನ್ನು ಇವರು ಮಾಡೋದು ಇಷ್ಟಕ್ಕೆ, ನಮ್ಮ ಜನ ಮುಚ್ಚಿಕೊಂಡು ಇವರ ಗುಡಿಗೆ ದುಡ್ಡಕೊಟ್ಟಿ ಬರಬೇಕು ಅದಕ್ಕೆ.

ನಮ್ಮ ಸಮಾಜದಲ್ಲಿ ಮೌಢ್ಯವನ್ನು ಜ್ಯೋತಿಷ್ಯ, ಜಾತಕ ಮುಂತಾದವುಗಳಿಂದ ತುಂಬಿರುವವರು ಈ ಸಂಸ್ಕೃತದವರೇ.!! ಅದಕ್ಕಾಗಿಯೇ ಸಂಸ್ಕೃತಬೇಕು.

ನನಗೆ ಗೊತ್ತು ಈ ಎಡಬಿಡಂಗಿಗಳಿ ಏನು ಹೇಳಿದರೂ ನನ್ನ ಜುಟ್ಟೇ ಜುಟ್ಟು, ನನ್ನ ಸಪ್ಪೇ ಸಾರೇ ರಸಗವಳ ಅಂತ ಬಡೆದುಕೊಳ್ಳೋದು ಅವರ ಸಂಪ್ರದಾಯ ನಿಷ್ಠೆ.

ನೀನು ಯಾರನ್ನು ಉದ್ದಾರ ಆಗಕ್ಕೆ ಬಿಡಲ್ಲ.

Anonymous ಅಂತಾರೆ...

ree allamare, ivattu shaalegaLalli saMskruta kaliyuttiruvavaru baree braahmaNaralla, yella jaatiyavaroo iddare.adyaake braahmaNaru braahmaNaru anta badkoteera? nimma jaatiyavarannu naayigaLu andare nimage hege aagutte? nimmanthavare jaati jaati anta heLi samaajana voditirodu..

Vijendra ( ವಿಜೇಂದ್ರ ರಾವ್ ) ಅಂತಾರೆ...

ಅಲ್ಲಮರೆ ನಿಮ್ಮ ನುಡಿ ಮುತ್ತುಗಳಿಗೆ ತುಂಬಾ ಧನ್ಯವಾದಗಳು.. ಆಯ್ತು ನೀವು ಹೇಳ್ತಾ ಇರೋದೆಲ್ಲಾ ಸರಿ

Anonymous ಅಂತಾರೆ...

allamarobbare kannaDigaru, avara jaatiyavaru maatra kannadigaru.karnaatakada janasankhyalli 10% ginta kadime janasankhyegaLiruva jaatiyavarella kannaDigaralla!!

Anonymous ಅಂತಾರೆ...

ಕನ್ನಡದವರಾಗಿದ್ರೆ ಸಂಸ್ಕೃತ ಸಂಸ್ಕೃತ ಸಂಸ್ಕೃತ ಅಂತ ಬಾಯಿ ಬಡ್ದುಕೋತಾ ಇರಲಿಲ್ಲ.

ನೀವು ಕನ್ನಡದೋರ ಸಂಸ್ಕ್ರುತದೋರ? ಅಂತ ಕನ್ನಡಿಗ ಕೇಳಿದ್ರೆ
ನಾನು ಸಂಸ್ಕೃತದೋನು ಹೌದು, ಕನ್ನಡದೋನು ಹೌದು ಅಂತೀರ

ನೀವು ತಮಿಳಿನೋರ ಸಂಸ್ಕ್ರುತದೋರ? ಅಂತ ತಮಿಳ ಕೇಳಿದ್ರೆ,
ನಾನು ಸಂಸ್ಕೃತದೋನು ಹೌದು, ತಮಿಳನೂ ಹೌದು ಅಂತಿರ.

ಇದನ್ನೇ ಗೊಸಂಬೆ ಬುದ್ದಿ ಅನ್ನೋದು.

ಎಲ್ಲಿ ಹೋದ್ರು ಇವರೊಬ್ರು ಚನ್ನಾಗಿದ್ರೆ ಆಯ್ತು, ಮಿಕ್ಕೋರೆಲ್ಲ ಹಾಳಾಗಿ ಹೋಗ್ಲಿ! ತೂ.

Anonymous ಅಂತಾರೆ...

DearMr ALLam,neevu samskruta oduvavarellaru ondu jaatiyavaru yendu vaadisuttiddeeri..sariyaagi anki amshagaLannu kottu maatanaadi. yeshtu saMskruta shikshakaru/vidyaarthigaLu yaava yaava jaatiyavaru anta? Samskrutadalli raamayana bareda Vaalmeeki beDara jaatiyavaru..

Anonymous ಅಂತಾರೆ...

ನಂಗೆ ಮಾಡಕ್ಕೆ ಕೆಲಸ ಇಲ್ವಾ?

ನಂಗೆ ನಮ್ಮ ನಾಡಲ್ಲಿ ಸಂಸ್ಕೃತ ಬೇಡ. ಒಂದು ವೇಳೆ ಸಂಸ್ಕೃತ ಓದಿದ್ರೂ ಸಂಸ್ಕೃತವನ್ನು ಎಲ್ಲರೂ ಕಲಿಯಬೇಕು ಅನ್ನೋದ ಬೇಡ.

ಸಂಸ್ಕೃತ ನಮ್ಮ ಭಾಷೆ ಅಲ್ಲ. ಅದು ಒಂದು ಜಾತಿಯೋರ ಭಾಷೆ.
ಹೌದು ನಮ್ಮ ಜಾತಿಯೋರೇ ಇಲ್ಲಿ ಹೆಚ್ಚು ಮಂದಿ ಇರೋದು.

ಅಷ್ಟೇ..

ನಿಮ್ಮ ಕಂತ್ರಿ ವಾದ ಇದ್ದದ್ದೇ!!

ಇಷ್ಟೇ.. ನೀವು ಏನ್ ಬೇಕಾದ್ರು ಮಾಡ್ಕೊಳ್ಳಿ!

Anonymous ಅಂತಾರೆ...

"ಸಂಸ್ಕೃತ ಒಂದು ಜಾತಿಯೋರ ಭಾಷೆ" ಎನ್ನುವುದು ನಿಜವಲ್ಲ. ಆ ಜಾತಿಯವರಿಗೆ (ಬ್ರಾಹ್ಮಣರಿಗೆ) ಸಂಸ್ಕೃತ ಬರುವುದೇ ಇಲ್ಲ. ಬಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದಷ್ಟೇ ಅವರ ವಾದ.

ಸರಿಯಾಗಿ ಹೇಳಬೇಕು ಎಂದರೆ - ಸಂಸ್ಕೃತ ಎಂದರೆ ಬ್ರಾಹ್ಮಣರು ತಮಗೂ ಆಧ್ಯಾತ್ಮಕ್ಕೂ ನಡುವಿನಲ್ಲಿ ಬೇಡದಿದ್ದರೂ ಉಳಿಸಿಕೊಂಡಿರುವ ಗೋಡೆ. ಗೋಡಿಯಿಂದಾಚೆಯಿರುವುದು ಅವರಿಗೆ ಏನೂ ಕಾಣಿಸುತ್ತಿಲ್ಲ. ಆದರೂ ಕಾಣಿಸುತ್ತಿದೆ ಎಂದು ನಟಿಸುತ್ತಾರೆ, ಅಷ್ಟೆ.

ಬ್ರಾಹ್ಮಣರಿಗೂ ಅಧ್ಯಾತ್ಮಕ್ಕೂ ನಡುವಿನ ಸಂಸ್ಕೃತವೆಂಬ ಗೋಡೆ ಬಿದ್ದರೇ ಅವರು ನಿಜವಾದ ಬ್ರಾಹ್ಮಣರು ಎನಿಸಿಕೊಳ್ಳುವುದು, ಹೀಗಾದರೇ ಸಮಾಜಕ್ಕೆ ಸತ್ವಗುಣ ಹಿಂತಿರುಗುವುದು.

ಈ ಗೋಡೆಯನ್ನು ಛಿದ್ರಛಿದ್ರ ಮಾಡುವುದಕ್ಕೆ ಕನ್ನಡವೆಂಬ ಆನೆಯೇ ಬೇಕು.

Anonymous ಅಂತಾರೆ...

ರಾಘವೇಂದ್ರಾಚಾರ್

ನಿಮ್ಮಂತೋರು ಸಾವಿರಕ್ಕೆ ಒಬ್ರು.. ನಿಮ್ಮಂತವರ ಬಗ್ಗೆ ಗೌರವ ಇದ್ದೇ ಇದೆ.

ಆದರೆ ಸಂಸ್ಕೃತದ ಕುರುಡುಭಕ್ತರು, ಕಟ್ಟರವಾದಿಗಳು, ಇವರಿಗೆ ಗೋಡೆಯೇ ಬೇಕು, ಅದರ ಹಿಂದೆ ಇರುವ ಹೊರಜಗತ್ತು ಬೇಡ.

ಇವರಾಯ್ತು ಇವರ ಗೋಡೆಯಾಯ್ತು!!

Anivaarya ಅಂತಾರೆ...

"ನಂಗೆ ನಮ್ಮ ನಾಡಲ್ಲಿ ಸಂಸ್ಕೃತ ಬೇಡ"

- ಒಳ್ಳೆಯದೆ, ನಿಮಗೆ ಬೇಡದಿದ್ದರೆ ನಿಮಗೆ ಬೇಡ ಅಷ್ಟೆ! ಯಾರೂ ಹೇರೋಲ್ಲ! ನಿಮ್ಮ ಹಾಗೆ ಅವರ ಅನಿಸಿಕೆ ಅವರು ವ್ಯಕ್ತ ಪಡಿಸ್ಲೀ ಬಿಡಿ! ಸುಮ್ನೆ ವಿಚಾರ ದಬ್ಬಾಳಿಕೆ ಮಾಡೋದ್ ಬೇಡಾ ಅಲ್ವೆ?

"ಒಂದು ವೇಳೆ ಸಂಸ್ಕೃತ ಓದಿದ್ರೂ ಸಂಸ್ಕೃತವನ್ನು ಎಲ್ಲರೂ ಕಲಿಯಬೇಕು ಅನ್ನೋದ ಬೇಡ"

- ಹೌದು, ಯಾವುದೇ ಆಗಲೀ ಕಲಿಯಲೇಬೇಕು ಅಂದಾಗ ಸರಿ ಇಲ್ಲ! ಹಾಗೆಯೇ ಕೆಲವರಿಗೆ ಕನ್ನಡವೂ ಬೇಡ ಅನ್ಸೋದೂ ಸಹಜ, ಅವರವರಿಗೆ ಇಷ್ಟ ಬಂದ ಹಾಗೆ ಬಾಳ್ಲೀ ಬಿಡಿ, ನಮ್ ಅಜ್ಜಿ ಹೇಳೊ ಹಾಗೆ ಹಾಳಾಗೋಗ್ಲೀ. ಸರೆಯಾಗಿ ಹೇಳಿದ್ರೀ.

"ಅದು ಒಂದು ಜಾತಿಯೋರ ಭಾಷೆ"
- ಇದಕ್ಕೆ ಏನ್ ಹೇಳ್ಬೇಕು ಹೇಳಿ! ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಅಷ್ಟೆ! ಇದೊಂದು ಮಾತ್ರ ನಿಮ್ಮದು ಕೂಪ ಮಂಡೂಕ ವಾದ ಅಲ್ಲಮ ಗುರು. ಜಾತಿ ಅಂದ್ರೆ ಏನು ಅಂತ ತಿಳಿಯದೆ ಮಾತಾಡಬಾರ್ದು. ನಿಮ್ಮ ಮರ್ಯಾದೆ ಪ್ರಷ್ನೆ ಗುರು. ಹೀಗಾದಲ್ಲಿ english ಕ್ರಿಷ್ಚಿಯನರ ಭಾಷೆ, ಉರ್ದು ಮುಸಲಮಾನರ ಭಾಷೆ, ಕನ್ನಡ ಯಾರ್ ಭಾಷೆ? ಆ ಜಾತಿಯ ೯೦% ಜನರಿಗೆ ಸಂಸ್ಕೃತದ ಗಂಧವೇ ಇಲ್ಲ, ಭಾಷೆ ಯಾವುದೇ ಜಾತಿಯದು ಆಗಲು ಸಾಧ್ಯವೇ ಇಲ್ಲ.

ಈ ಜಾತಿ ಕಿತ್ತಾಟ ಬೇಡ ಗುರು! ತುಂಬಾ sensitive ಅದು, ಎಲ್ಲೆಲ್ಲಿಗೋ ಹೋಗುತ್ತೆ. ನಿಮಗೆ ಒಂದು ಭಾಷೆ ಬೇಡ ಅನ್ಸುದ್ರೆ ಬೇಡ ಬಿಡಿ, ಕಲೀಬೇಡಿ, ಸುಮ್ನೆ ಈ ಸ್ಲಮ್ ಶಾಟ್ ಯಾಕೆ! ಕಲಿಯೋರು ಕಲೀಲಿ!!

ಯಾರಯ್ಯಾ ಬ್ಲಾಗ್ ಅಡ್ಮಿನ್ ಮಹಾಶಯ, ಇವರ ಜಾತಿ ವಾದ ಸರಿಯೇ? ಇದು ಸರಿಯಾದರೆ ಯಾವುದು ತಪ್ಪು? :)

Anivaarya ಅಂತಾರೆ...

ರಾಘವೇಂದ್ರಾರ್ಚಾರರೆ:

"ಸಂಸ್ಕೃತ ಎಂದರೆ ಬ್ರಾಹ್ಮಣರು ತಮಗೂ ಆಧ್ಯಾತ್ಮಕ್ಕೂ ನಡುವಿನಲ್ಲಿ ಬೇಡದಿದ್ದರೂ ಉಳಿಸಿಕೊಂಡಿರುವ ಗೋಡೆ"

೧) ಗೋಡೆಯಲ್ಲ, ಅದು ಮೆಟ್ಟಲು ಅಥವ ಏಣಿ. ಬರೀ ಆಧ್ಯಾತ್ಮವೇ ಅಲ್ಲ, ಗಣಕಕ್ಕೆ ಸಿಲುಕದೇ ಇರುವಷ್ಟು ವಿಷಯ ಬಂಢಾರಗಳಿಗೂ ಏಣಿ. ಕಂಡಿತ ನಿಜ, ಈ ಏಣಿ ಹಿಂದೆ ಇದ್ದ ಕೆಲವು ಪೆದ್ದ ಬ್ರಾಹ್ಮಣರಿಂದ, ಬ್ರಿಟೀಷರ ದಬ್ಬಾಳಿಕೆ, ಮತ್ತು ನಮ್ಮ ಪೆದ್ದುತನಗಳಿಂದ ಈಗ ಕಾಣಿಸದೆ ಹೋಗ್ತಾ ಇದೆ ಅಷ್ಟೆ.

೨) "ಬೇಡದಿದ್ದರೂ" ಅನ್ನೋದು ಬೇಡದಿದ್ದವರಿಗೆ ಮಾತ್ರ ಸಲ್ಲುವ ಅರ್ಥ! ಯಾವುದು (ಎಷ್ಟು) ಬೇಕು, ಯಾವುದು (ಎಷ್ಟು) ಬೇಡ ಅನ್ನೋದು ತಿಳುವಳಿಕೆಯ ಮೇಲೆ ನಿರ್ಬರವಾಗಿರುತ್ತೆ ಅಲ್ವೆ? ವಿಧ್ಯೆಯ ಬೆಲೆ ಅರಿಯದೆ ವಿಧ್ಯೆಯೇ ಬೇಡ ಅಂತ ಹೇಳೋರೂ ಇರ್ತಾರೆ, ಹಾಗಂತ ವಿಧ್ಯೆಯ ಬೆಲೆ ಕಮ್ಮಿ ಆಗುತ್ಯೆ?

"ಬ್ರಾಹ್ಮಣರಿಗೂ ಅಧ್ಯಾತ್ಮಕ್ಕೂ ನಡುವಿನ ಸಂಸ್ಕೃತವೆಂಬ ಗೋಡೆ ಬಿದ್ದರೇ ಅವರು ನಿಜವಾದ ಬ್ರಾಹ್ಮಣರು ಎನಿಸಿಕೊಳ್ಳುವುದು, ಹೀಗಾದರೇ ಸಮಾಜಕ್ಕೆ ಸತ್ವಗುಣ ಹಿಂತಿರುಗುವುದು"

- ನಿಜವಾದ ಬ್ರಾಹ್ಮಣರು, ಕ್ಷತ್ರೀಯರು, ವೈಶ್ಯರು, ಶೂದ್ರರು ಯಾರು ಅಂತ ಮೊದಲು ಅರ್ಥ ಮಾಡ್ಕೊಂಡ್ರೆ ಒಳ್ಳೆದು, ಅಲ್ವೆ? ಬರೀ ಹುಟ್ಟಿನಿಂದ ಬರೋ ಜಾತಿನ ಸರಿ ಅಲ್ಲ ಅಂತ ಎಲ್ಲಾರೂ ಹೇಳುದ್ರೂ ನಾವು ಬಿಡ್ತೀವಾ? ಈಗಿನ ಸಾಮಾಜಿಕ ಪದ್ದತಿಯಷ್ಟು ನಗೆಗೇಡು ಪರಿಸ್ತಿತಿ ಯಾವತ್ತೂ ಇರ್ರ್ಲಿಲ್ಲ ಅನ್ನಿ. ಸಂಸ್ಕೃತಕ್ಕೂ ಬ್ರಾಹ್ಮಣತೆಗೂ ಸಂಬಂಧವಿಲ್ಲ ಅಂತ ಸರೆಯಾಗೇ ಹೇಳಿದ್ದ್ರೀರಿ, ಆದ್ರೂ ಆ ಗೋಡೆ ಬಿದ್ದ್ರೆ ಸರ್ಯಾದ ಬ್ರಾಹ್ಮಣ ಹೇಗ್ ಆಗ್ತಾರೆ ಅನ್ನೋದು ಸ್ವಲ್ಪ ಹ್ಮ್ ...... ಅಲ್ಲ್ವಾ? ಸಮಾಜಕ್ಕೆ ಸತ್ವ ಗುಣ ಹಿಂತಿಗೋದಕ್ಕೂ ಈ ಗೋಡೆ ಬಿದ್ದು ಹೋಗೋದಕ್ಕೂ ಸಂಬಂಧ ಏನು ಗೊತ್ತಿಲ್ಲ, ಯಾಕಂದ್ರೆ ನೀವ್ ಹೇಳೋ ಗೋಡೆ ಯಾವಾಗ್ಲೊ ಬಿದ್ ಹೋಗಿದೆ ಆದ್ರೂ ಬರೀ ರಜೋ/ತಮೋ ಗುಣಗಳೆ ಆಳ್ತಾ ಇವೆ ಅಲ್ವಾ?


"ಈ ಗೋಡೆಯನ್ನು ಛಿದ್ರಛಿದ್ರ ಮಾಡುವುದಕ್ಕೆ ಕನ್ನಡವೆಂಬ ಆನೆಯೇ ಬೇಕು"

- ಇದನ್ನ fascinating alphabet soup ಅಂತಾರೆ, ಅಲ್ವಾ? ಈ ಗೋಡೆನ ಛಿದ್ರಛಿದ್ರ ಮಾಡಲು ಯಾವ ಆನೆಯಾಗಲೀ, ತಿಮಿಂಗಳವಾಗಲೀ, ಗಂಡುಬೇರುಂಡಗಳೇ ಆಗಲಿ ಸಲ್ಲದು, ಸಾಲದು ಗುರು! ಹೇಗೆ ಕನ್ನಡ ಒಂದು ಮಹತ್ ಭಾಷೆಯೋ, ಸಂಸ್ಕೃತವೂ ಕೂಡ, ಇವನ್ನ ಅಳಿಸಲು, ಛಿದ್ರಛಿದ್ರ ಮಾಡಲು ಸಾಧ್ಯವೇ ಇಲ್ಲ. ಈಗ ಕನ್ನಡ ಪ್ರೇಮ ಮತ್ತೆ ಹೊಸದಾಗಿ, ಹೊಸ ರೀತಿಗಳಲ್ಲಿ ಹುಟ್ಟಿ ಬರ್ತಾ ಇದ್ಯೊ, ಹಾಗೆ ಸಂಸ್ಕೃತ ಪ್ರೇಮಾ ಕೂಡ ಮರು ಹುಟ್ಟಿ ಬರ್ತಾ ಇದೆ.

ಸಂಸ್ಕೃತ, ಕನ್ನಡ ಮತ್ತು ಇತರ ಭಾಷೆಯಂತೇ ಒಂದು (ಅಧ್ಬುತ, ಭವ್ಯ, ದಿವ್ಯ) ಭಾಷೆ ಅನ್ನೋದನ್ನ ಮರೆತು ಆನೆ, ಕುದರೆ, ಒಂಟೆ, ಇಲಿ ಅಂತಾಗ್ಲೀ, ಗೋಡೆ, ಗೂಡೆ, ಪೀಡೆ ಅಂತಾಗ್ಲೀ, ಹುಲ್ಲು, ಕಲ್ಲು, ಜೊಲ್ಲು ಅಂತಾಗ್ಲೀ ನೋಡುದ್ರೆ ಏನ್ ಹೇಳ್ಬೇಕು ಗುರು? ಭಾಷೆಯನ್ನ ಭಾಷೆಯಂತೆ ನೋಡಕ್ಕಾದ್ರೆ ನೋಡಿ.

ನಮ್ಮ ತಾಯಿಯ ಮೇಲೆ ಪ್ರೇಮ ಇಡೋಣ, ಹಾಗಂತ ಬೇರೋಬ್ಬರ ತಾಯಿಯ ಮರ್ಯಾದೆ ತೆಗೆಯುವ ಪ್ರಯತ್ನ ಬೇಡಾ ಗುರು! ಅದನ್ನ ಛಿದ್ರ ಮಾಡೋ ಮಾತ್ ಯಾಕ್ ಬೇಕು ಗುರು?

ನಿಮ್ಮಂತೆಯೆ ಅಭಿಮಾನಿ ಕನ್ನಡಿಗ ನಾನು ಸಹ.

Anonymous ಅಂತಾರೆ...

ಯಾರಯ್ಯ,

ಸುಮ್ಮನೆ ನನ್ನ ಪದಗಳ ಬಳಕೆ/ವಾಕ್ಯ ಶೈಲಿಗಳನ್ನು ಆಡಿಕೊಂಡರೆ ಏನೂ ಸಿಗುವುದಿಲ್ಲಪ್ಪ.

ನಿಮ್ಮ ಸಂಸ್ಕೃತದ ಒಲವನ್ನು ಹಾಗೇ ಇಟ್ಟುಕೊಳ್ಳಿ. ಯಾರೂ ಬೇಡ ಎನ್ನುತ್ತಿಲ್ಲ. ನಿಮಗದು ಏಣಿಯೇ ಇರಬಹುದು. ಆದರೆ ಇವತ್ತು ಕನ್ನಡನಾಡಿನಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಅದು ಗೋಡೆಯೇ. ಕನ್ನಡಿಗನ ನಾಲಿಗೆಯಲ್ಲಿ ಹೊರಳದ ಪದಗಳು, ಅರ್ಥವಾಗದ ಪದಗಳು - ಇವೇ ಇರುವುದು.

ಇಷ್ಟೆಲ್ಲಾ ಮಾತಾಡುತ್ತೀರಲ್ಲ, ಈ ಕೆಳಗಿನ ವಾಕ್ಯದ ಅರ್ಥ ಏನು ಅಂತ ಹೇಳಿ. ಇದು ನಿಮ್ಮ "ಏಣಿ" ಭಾಷೆಯಲ್ಲೇ ಇದೆ:

ಅಥೋ ಅಯಂ ವಾ ಆತ್ಮಾಸರ್ವೇಷಾಂ ಭೂತಾನಾಂ ಲೋಕಃ ಸ ಯಜ್ಜು ಹೋತಿ ಯದ್ಯಜತೇ ತೇನ ದೇವಾನಾಂ ಲೋಕೋಽಥ ಯದನುಬ್ರೂತೇ ತೇನ ಋಷೀಣಾಮಥ ಯತಿತೃಭ್ಯೋ ನಿಷೃಣಾತಿ ಯತ್ಪ್ರಜಾಮಿಚ್ಛತೇ ತೇನ ಪಿತೃಣಾಮಥಯನ್ಮನುಷ್ಯಾನ್ ವಾಸಯತೇ ಯದೇಭ್ಯೋಽಶನಂ ದದಾತಿ ತೇನ ಮನುಷ್ಯಾಣಾಮಥ ಯಪಶುಭ್ಯಸ್ತೃಣೋದಕಂ ವಿನ್ದತಿ ತೇನ ಪಶೂನಾಂ ಯದಸ್ಯ ಗೃಹೇಷು ಶ್ವಪದಾ ವಯಂಸ್ಯಾಪಿಪೀಲಿಕಾಭ್ಯ ಉಪಜೀವನ್ತಿ ತೇನ ತೇಷಾಂ ಲೋಕೋ ಯಥಾ ಹ ವೈ ಸ್ವಾಯ ಲೋಕಾಯಾರಿಷ್ಟಿಮಿಛ್ಛೇದೇವಂ ಹೈವಂವಿದೇ ಸರ್ವಾಣಿ ಭೂತಾನ್ಯರಿಷ್ಟಮಿಚ್ಛನ್ತಿ ತದ್ವಾ ಏತದ್ವಿದಿತಂ ಮೀಮಾಂಸಿತಮ್ ||

ಹೇಳಿ, ದೊಡ್ಡ ದೊಡ್ಡ ಮಾತನ್ನಾಡುವವರು ಇದರ ಅರ್ಥ ಹೇಳಿ. ಬೇಕಿತ್ತಾ ಏಣಿ? ಒಂದೇ ನೆಲದ ಮೇಲಿರುವ ಎರಡು ಜಾಗಗಳ ನಡುವೆ ಹೋಗುವುದಕ್ಕೆ ಏಣಿ ಬೇಕಿತ್ತಾ?

ಈ ವಾಕ್ಯದ ಅರ್ಥವನ್ನು ಕನ್ನಡದಲ್ಲಿ ಹೇಳಿದರೆ "ಅಯ್ಯೋ...ಇಷ್ಟೇನಾ....?" ಅನ್ನುವಂತಿದೆ. ಆದರೆ ನಿಮ್ಮ ಏಣಿಯೇ ಇಲ್ಲಿ ತೊಂದರೆ.

ಹಿಂದೆ ಯಾರೋ ಏಣಿಯನ್ನು ಹತ್ತಿ / ಗೋಡೆಯನ್ನು ಒಡೆದು ಈಗ ಎಲ್ಲವನ್ನೂ ಕನ್ನಡದಲ್ಲೇ ಸಿಗುವಂತೆ ಮಾಡಿದ್ದಾರೆ ಸ್ವಾಮಿ. ಅದನ್ನ ಓದಿಕೊಳ್ಳಿ ಸಾಕು. ಬೇಡದಿದ್ದರೂ "ಏಣಿ ಹತ್ತುತ್ತೇನೆ, ಹತ್ತುತ್ತೇನೆ" ಎನ್ನುವುದು ಕೇವಲ ಹುಡುಗಾಟ ಮಾತ್ರವು.

Anonymous ಅಂತಾರೆ...

ರಾಘವೇಂದ್ರಾಚಾರ್

ಭಲಾ! ಅದನ್ನು ಕನ್ನಡಕ್ಕೆ ತರಲು ಅವರು ಯಾರೋ ಸಂಸ್ಕೃತ ಪಂಡಿತ ಹತ್ತಿರ ಓಡಿರಬೇಕು.

ನಿಮ್ಮ ಮೇಲೇ ನನ್ನ ಗೌರವ ಹೆಚ್ಚಾಯಿತು. ಇಷ್ಟು ಸಂಸ್ಕೃತ ಅರಿತು, ನಿಮಗೆ ಕನ್ನಡಿಗ ಕಷ್ಟ ಅರ್ಥವಾಗಿದೆ.

ಲೋ ಮೊಂಡರ, ಇವರನ್ನು ನೋಡಿರಿ ಕಲಿಯಿರಿ!!

ಒಳ್ಳೇದಾಗಲಿ
ನನ್ನಿ!( ಇದನ್ನು ನೀವೆಲ್ಲೋ ಬಳಸಿದ್ದೀರಿ, ಹೀಗಂದ್ರೇನು? )

Anonymous ಅಂತಾರೆ...

ರಾಘವೇಂದ್ರಚಾರ್ ಮತ್ತು ಅಲ್ಲಮ ರವರೆ,

ನಿಮ್ಮಿಬ್ಬರ ಕನ್ನಡ ಪ್ರೀತಿ ಸದಾ ಹೀಗೆ ಇರಲಿ ಎಂದು ಬಯಸುವೆ. ಒಳ್ಳೆ ಚರ್ಚೆಗೆ ಅವಕಾಶಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಶಾಂತಕುಮಾರ್ ಕಪ್ಪಗಲ್

Anonymous ಅಂತಾರೆ...

ಶಾಂತಕುಮಾರ್ ಕಪ್ಪಗಲ್

ನಿಮಗೂ ಒಳ್ಳೆಯದಾಗಲಿ!!

Anivaarya ಅಂತಾರೆ...

ರಾಘವೇಂದ್ರಾಚಾರರೆ,

ಮೆಚ್ಚಿದೆ ನಿಮ್ಮ ವಾದವನ್ನ. ನಮ್ಮ ಅಲ್ಲಮ ಪ್ರಭುಗಳ ಸಂತೋಷವನ್ನ ಇನ್ನೂ ಮೆಚ್ಚಿದೆ.

"ಇವತ್ತು ಕನ್ನಡನಾಡಿನಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಅದು ಗೋಡೆಯೇ"

- ಕನ್ನಡನಾಡಿನಲ್ಲಿ ಕನ್ನಡವನ್ನ ಕಲಿಯದಿದ್ದರೆ ಕನ್ನಡವೂ ಗೋಡೆಯೇ ಗುರು, ಅನೇಕರಿಗೆ ನಮ್ಮ ಪ್ರೀತಿಯ english ಅನ್ನೋ ಮಾಹಾನ್ ಗೋಡೆಯೂ ಇರುತ್ತೆ ಗುರು, ಆದರೆ ಅದು ಏಣಿಯಾಗಿಯೂ ಪ್ರಯೊಗಿಸ ಬಹುದು ಅಂತ ಅದನ್ನ ತಿಳಿದರೆ, ಕಲಿತಾಗ ಅರಿವು ಆಗುತ್ತೆ ! ತಿಳಿಯದೇ ಇರುವುದು, ಕಲಿಯದೇ ಇರುವುದು, ಕಲಿಸದೇ ಇರುವುದು ನಮಗೆ ಸೇರಿದ್ದು!!

"ನಿಮ್ಮ ಏಣಿಯೇ ಇಲ್ಲಿ ತೊಂದರೆ"

- ಗೊತ್ತಿಲ್ಲದೇ ಇದ್ದಾಗ ಬರೀ ಈ ಏಣಿಯಲ್ಲ ಎಲ್ಲವೂ ತೊಂದರೆಯೇ ಗುರು. ಆಗ್ಲೇ ಹೇಳಿದ ಹಾಗೆ, ಒಬ್ಬ ಅಚ್ಚಾ ಕನ್ನಡಿಗ illeterate ಆಗಿದ್ದ್ರೆ ಕನ್ನಡವೂ ಗೋಡೆಯೆ, ತೊಂದರೆಯೇ ಗುರು. ಪುಟ್ಟ ಮಗುವಾದಾಗ ಎಲ್ಲವೂ ಗೋಡೆಯೆ, ಕನ್ನಡವೂ ಕೂಡ, ಯಾಕೆಂದರೆ ಅರಿವಿನ ಬರ. ಹಾಗಂತ ಕನ್ನಡವೆಂಬ ಏಣಿಯನ್ನ ಎಸೀಬೇಕಾ ಗುರು, ಆ ಗೋಡೆಯನ್ನ ಛಿಂದಿಛಿಂದಿ ಮಾಡ್ಬೇಕಾ ಗುರು. ಆ ಗೋಡೆಯನ್ನ ಏಣಿಯನ್ನಾಗಿ ಮಾಡಲು ಪ್ರಯತ್ನಿಸಬಾರ್ದಾ? ಅದ್ ಬಿಟ್ಟು ಕನ್ನಡವೆಂಬ ಏಣಿಯನ್ನ ಎಸೆಯಿರಿ ಅಂದ್ರೆ ಸರಿನಾ?


"ಕನ್ನಡಿಗನ ನಾಲಿಗೆಯಲ್ಲಿ ಹೊರಳದ ಪದಗಳು, ಅರ್ಥವಾಗದ ಪದಗಳು - ಇವೇ ಇರುವುದು"

- ಕನ್ನಡಿಗನ ಬಾಯಲ್ಲಿ ಸರಿಯಾದ,ಅಚ್ಚ ಕನ್ನಡವೂ ಹೊರಡದು ಗುರು :) ಹಾಗಂತ ಕನ್ನಡವನ್ನ ಬಿಡಕ್ಕಾಗುತ್ತಾ? ಕಲಿಯುವ ಪ್ರಯತ್ನ ಮಾಡ್ದ್ರೆ ಕಲಿಬೋದು. ಏಷ್ಟೋ ಕನ್ನಡಿಗರಿಗೆ "ಶ", "ಹ" ಹೇಳಕ್ಕೆ ನಾಲಿಗೆ ಹೊರ್ಡಲ್ಲಾ ಗುರು, ನೀವು ನಮ್ಮ ಹಾಗೆ ಹಳ್ಳಿಯಿಂದ ಬಂದಿದ್ದಲ್ಲಿ ತಿಳಿಯುವ ಸಾಧ್ಯತೆ ಇದೆ.

ನಮ್ಮ ವಿವಾದವನ್ನ ನೋಡಿ, ಅದು "ನನಗೆ ಸಂಸ್ಕೃತ ಬರುತ್ತೋ ಇಲ್ಲವೋ" ಅಂತಲ್ಲ ಇರೋದು! ಸಂಸ್ಕೃತದ ಸ್ಥಾನ ಮತ್ತು ಮೌಲ್ಯದ ಮೇಲೆ. ಇರಲಿ, ಪರ್ವಾಗಿಲ್ಲ.

ನಾನು ನಿಮ್ಮ ಪದಗುಂಜದಲ್ಲಿರುವ ಪದಗಳನ್ನ, ಕೆಲವು phrasesಗಳನ್ನು ಕೂಡ ಅರ್ಥ ಮಾಡಿಕೊಳ್ಳಬಲ್ಲೆ, ಆದರೆ ತಾತ್ಪರ್ಯ ಹೇಳುವ ಸಾಮರ್ಥ್ಯ ಇನ್ನೂ ಪಡೆದಿಲ್ಲ. ಕೆಲವೊಮ್ಮೆ context ಗೊತ್ತಿಲ್ಲದೇ ಅರ್ಥ ಸಾಧ್ಯವಿಲ್ಲ. anyway. ೧-೨ ವರ್ಷದ ಪ್ರಯತ್ನದಲ್ಲಿ ಇಷ್ಟಕ್ಕಾದ್ರೂ ಬಂದಿರುವೆ ಅಂತ ನನಗೇ ಖುಷಿ ಆಗುವಂತೆ ಮಾಡಿದ್ರಿ, ಧನ್ಯವಾದಗಳು. ಪ್ರಯತ್ನ ಜಾರಿಯಲ್ಲಿರುತ್ತೆ, ಸರಿಯಾಗಿ ತಿಳಿದಿಲ್ಲ ಅಂತ ನಾಚಿಕೆ ಏನೂ ಇಲ್ಲ. ಚೆನ್ನಾಗಿರುವುದು ಅಂತ ಅರಿತ ಮೇಲೆ ಕಲಿಕೆ ಅಷ್ಟೆ. ಹಾಗಂತ ಇದರ value ಏನು ಅಂತ ಗೊತ್ತಿಲ್ಲದೇ ಇರಬೇಕಿಲ್ಲ, ಅದರಲ್ಲಿ ಏನಿದೆ ಎಷ್ಟಿದೆ ಅಂತ ಅರಿವಿದೆ, ಕಲೆಯುವೆ ಅನ್ನೋ ನಂಬಿಕೆಯೂ ಇದೆ. ಏನೋ ಬಿಡಿ.

ಈಗ ನೀವು ಕೆಳಗಿನ ಅಧ್ಬುತ ಸಾಹಿತ್ಯವನ್ನೇ ನೋಡಿ ...(ನಿಮಗೆ ಕನ್ನಡ ತುಂಬಾ ಚೆನ್ನಾಗಿ ಗೊತ್ತಿದೆ ಅಂತ ತಿಳ್ಸಿರೋದ್ರಿಂದ ಇದು ನಿಮಗೆ ಕಷ್ಟವಾಗೋದಿಲ್ಲ, ಅದಕ್ಕೆ ಇದು ನಿಮಗಲ್ಲ; ನನ್ನಂತಾ ಸಾಮಾನ್ಯ ಕನ್ನಡಿಗನಿಗೆ ಉದ್ದೇಶಿಸಿ ಅಷ್ಟೆ) ಏನೇ ಆಗ್ಲೀ ಈ ಅಧ್ಬುತ ಕ್ರಿತಿಯನ್ನ ಸವಿ ಗುರು ...

ಹೊನ್ನೊಂದು ಜಗದಿ ನೀಂ ಕೈಗೆ ಕೋಂಡುದನು ವಿಧಿ |
ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು||
ಭಿನ್ನವಂತಿರೆ ವಸ್ತುಮೌಲ್ಯಗಳ ಗಣನೆಯೀ|
ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ||
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಓಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡಕರದವೊಲು? - ಮಂಕುತಿಮ್ಮ ||
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||
ಮುಸುಕುಬೆಳಕೊಂದಾದ ಸಂಜೆಮಂಜೇನವನು |
ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ ||

ಈಗ dictionary/online ಪದಬಂಧ ಅಂತ ವದ್ದಾಡೋದ್ ಬೇಡಾ ಗುರು! ಬಿಟ್ಟಾಕು! ೨-೩ ಸಾರಿ ಓದಿದ್ರೆ ನಮ್ಗೇ ಗೊತ್ತಾಗುತ್ತೆ. ಇದನ್ನ ಅರ್ಥಾ ಮಾಡ್ಕೊಳಕ್ಕೆ ನಮಗೆ ಸಮಯ ಬೇಕು, ಅಲ್ವೆ? ಒಮ್ಮೊಮ್ಮೆ ಶಬ್ಧಖೋಶ ಬೇಕು, ಅಂತದ್ರಲ್ಲಿ ಬೇರೆ ಮಾತ್ಯಾಕೆ? ಇದರಲ್ಲಿನ ಪ್ರತಿ ಪದದ ಅರ್ಥ ತಿಳಿದರೆ ಸಾಲದು, ತಾತ್ಪರ್ಯ ಅರ್ಥ ಆದಾಗ ನಮ್ಮ ಕನ್ನಡದ ಅರಿವು ಎಷ್ಟಿದೆ ಅಂತ ತಿಳಿಯುತ್ತೆ. ಕೆಲ ಕನ್ನಡಿಗರಿಗೆ ಇದು ಕನ್ನಡ ಅಂತಾನೇ ಗೊತ್ತಿಲ್ಲದ ಸಾಧ್ಯತೆ ಇದೆ, ಅಂತದ್ರಲ್ಲಿ ...

ಆದ್ರೂ ಕನ್ನಡ ಗೊತ್ತು ಅಂತ ಹೇಳುವ ನಾವೇ ಇದರ ತಿರುಳು ತೆಗೆಯಕ್ಕೆ ಮುಕ್ಕರೀತೀವಿ ಇನ್ನು ಸುಮ್ನೆ ಬೇರೆಯವರ ಮೇಲೆ ಯಾಕೆ ಗೂಬೆ ಕೂರ್ಸ್ಬೇಕು ಅಲ್ಲ್ವಾ?


"ಒಂದೇ ನೆಲದ ಮೇಲಿರುವ ಎರಡು ಜಾಗಗಳ ನಡುವೆ ಹೋಗುವುದಕ್ಕೆ ಏಣಿ ಬೇಕಿತ್ತಾ?"

- ಒಂದೇ ನೆಲ ಇಲ್ಲ ಗುರು, ಏಣಿ ಇದ್ದ್ರೆ ಗೊತ್ತಾಗುತ್ತೆ!! ಮೇಲೆ ನೋಡದೆ ಇದ್ದಲ್ಲಿ ಮೇಲೆ ಏನಿದೆ ಅಂತ ಗೊತ್ತಿಲ್ದೆ ಏಣಿ ಯಾಕೆ, ಬರೀ ಗೋಡೆಯೇ ಕಾಣೋದು? the loser could see nothing but the wall ಅಂತಾರಲ್ಲ ಹಾಗೆ ಆಗುತ್ತೆ ಅಲ್ವೆ?

ಯಾರೋ ಎಸೆದ ಬಾಳೇಹಣ್ಣಿನ ಸಿಪ್ಪೆಯ ಮೇಲೆ ಅವಲಂಬನೆ ಜಾಸ್ತಿ ದಿನ ನಡೆಯೋಲ್ಲ ಗುರು, ಅದಕ್ಕೆ ನಾವೇ ಕಲಿಯೋ ಹಠವಿದ್ದಲ್ಲಿ ಏಣಿಯ ಬೆಲೆ ತಿಳಿಯಲು ಸಾಧ್ಯ, ಇಲ್ಲವಾದಲ್ಲಿ ಬರೀ ನೆಲವೇ ಸಾಷಿ. ನೆಲ ಕಚ್ಚೋದ್ ಬೇಡ ಗುರು. ಸ್ವಲ್ಪ ಶ್ರದ್ಧೆ, ಪ್ರಯತ್ನ ಇದ್ದಲ್ಲಿ ಹೊಸ ಏಣಿಯು ದೂರವೇನಿಲ್ಲ.

"ಬೇಡದಿದ್ದರೂ "ಏಣಿ ಹತ್ತುತ್ತೇನೆ, ಹತ್ತುತ್ತೇನೆ" ಎನ್ನುವುದು ಕೇವಲ ಹುಡುಗಾಟ ಮಾತ್ರವು"

- ಯಾರಿಗೆ ಬೇಕು, ಯಾರಿಗೆ ಬೇಡ, ಯಾವುದು ಬೇಕು ಯಾವುದು ಬೇಡ ಅಂತ ಅವರವರಿಗೆ ಗೊತ್ತು ಗುರು! ನಮ್ಮ ನಮ್ಮ intellectual cravings ಮೇಲೆ depend ಆಗುತ್ತೆ.

ಇನ್ನೂ ಬರೆಯಬೇಕೆಂಬ ಕುತೂಹಲ, ಆದ್ರೆ ಈಗ ಸಕ್ಕತ್ ರಾತ್ರಿ ಆಯ್ತು! ನಾಳೆ ಸಿಗೋಣಾ! ಬರೀತಾ ಇರಿ.

ಮತ್ತೊಮ್ಮೆ, ನಿಮ್ಮ ಹಾಗೆ ನಾನೂ ಕನ್ನಡ ಅಭಿಮಾನಿ. ದಯವಿಟ್ಟು ಇದರ ಬಗ್ಗೆ ಟೀಕಿಸಬೇಡಿ, ಇದು ನನ್ನ request.

ತಪ್ಪಿದಲ್ಲಿ ಕ್ಶಮಿಸಿ.

Anonymous ಅಂತಾರೆ...

ಯಾರಯ್ಯ,

ನಿಮ್ಮ ಕನ್ನಡದ ಅಭಿಮಾನವನ್ನು ನಾನು ಎಂದಿಗೂ ಟೀಕಿಸುವುದಿಲ್ಲ.

ನಾವಿಬ್ಬರೂ ವಾದಕ್ಕೆ ಕುಳಿತಾಗ ನಮ್ಮ ಉದ್ದೇಶಗಳು ಒಂದೇ ಇರಬೇಕಲ್ಲ? ಇಲ್ಲದಿದ್ದರೆ ವಾದ ನಿಲ್ಲುವುದೇ ಇಲ್ಲ.

ನೀವು ಈ ವಾದದಲ್ಲಿ ಪಾಲ್ಗೊಳ್ಳುವಾಗ "ನನಗೆ (ಎಂದರೆ ಒಬ್ಬಂಟಿಗನಾದ ಯಾರಯ್ಯನಿಗೆ) ಇನ್ನೂ ಮೇಲೆ ಮೇಲೆ ಏರಲು, ಪ್ರಪಂಚದಲ್ಲಿ ಈಗಾಗಲೇ ಯಾವ ಯಾವ ಏಣಿಗಳಿವೆ, ದಾರಿಗಳಿವೆ?" ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳುತ್ತಿದ್ದೀರಿ. ಈ ಪ್ರಶ್ನೆ ನಿಮಗೆ ಒಳ್ಳೆಯದೇ. ಹಾಕಿಕೊಳ್ಳಿ, ಉತ್ತರಿಸಿಕೊಳ್ಳಿ, ಅದಕ್ಕೆ ಬೇಕಾದ್ದನ್ನೆಲ್ಲ ಹುಡುಕಿ ಹುಡುಕಿ ತೆಗೆಯಿರಿ, ಸವಿಯಿರಿ. ಇದೇ ನಿಮಗೆ ಸರಿಯಾದ ದಾರಿ.

ಆದರೆ ನಾನಿಲ್ಲಿ ವಾದಕ್ಕೆ ಕುಳಿತಿರುವುದು ನಿಮ್ಮ ಪ್ರಶ್ನೆಯನ್ನು ಇಟ್ಟುಕೊಂಡಲ್ಲ.

ನನಗೆ ಇನ್ನೂ ನಾನು ಒಬ್ಬಂಟಿಗನಾಗಿ (ಎಂದರೆ ರಾಘವೇಂದ್ರಾಚಾರ್ ಆಗಿ) ಇನ್ನೂ ಮೇಲೆ ಮೇಲೆ ಏರುವ ಹಂಬಲವೇ ಇಲ್ಲ.

ಆಯಿತು.

ಏರಿದ್ದಾಯಿತು.

ಇನ್ನೊಬ್ಬರಿಗೆ ನಾನು ಏರಿಲ್ಲದಿರಬಹುದು.

ಆದರೆ ನನಗೆ ಇನ್ನು ಏರುವುದಕ್ಕೆ ಇನ್ನೇನೂ ಇಲ್ಲ.

ಇದ್ದರೆ ಅದು ನನಗೆ ಬೇಡವೂ ಬೇಡ.

ನಾನು ಹಾಕಿಕೊಳ್ಳುವ ಪ್ರಶ್ನೆ: ಐದೂವರೆ ಕೋಟಿ ಸಾಮಾನ್ಯ ಕನ್ನಡಿಗರಿಗೆ ಮೇಲೇರಲು ಏನೇನು ಬೇಕು? ಎನ್ನುವುದು.

ಈ ಪ್ರಶ್ನೆಯನ್ನು ಉತ್ತರಿಸುವುದಾದರೆ ಒಟ್ಟಗೇ ಮುಂದುವರೆಯೋಣ.

ಇಲ್ಲದಿದ್ದರೆ ಸುಮ್ಮನೆ ಹೊತ್ತು ಹೋಗುತ್ತದೆ, ಅಷ್ಟೆ.

Anonymous ಅಂತಾರೆ...

"ನಾನು ಹಾಕಿಕೊಳ್ಳುವ ಪ್ರಶ್ನೆ: ಐದೂವರೆ ಕೋಟಿ ಸಾಮಾನ್ಯ ಕನ್ನಡಿಗರಿಗೆ ಮೇಲೇರಲು ಏನೇನು ಬೇಕು? ಎನ್ನುವುದು."

ರಾಘವೇಂದ್ರಾಚಾರರೇ, ಇಂತಹ ಯೋಚನೇ, ಈ ಬಂಡ ಬ್ರಾಹ್ಮಣರು( ಇವರನ್ನು ಬ್ರಾಹ್ಮಣರು ಅನ್ನೋದು ಬ್ರಾಹ್ಮಣ ಪದಕ್ಕೆ ಅವಮಾನ ) ಬರೆವುದೇ ಇಲ್ಲ ಸ್ವಾಮಿ.

ಅದಕ್ಕೆ ನಾನು ಹೇಳಿದ್ದು, ನಿಮ್ಮಂತವರು ಸಾವಿರಕ್ಕೆ ಒಬ್ಬರು.

ಈ ಬಂಡರ ಗುರಿ ಏನಿದ್ದರೂ ಹೇಗಾದರು ತಳಂಕಬಳಂಕ, ಅಡ್ಡಾದಿಡ್ಡಿ ವಾದದ ಮೇಲೆ ವಾದವನ್ನು ಉಚ್ಚಿ, ಇವರ ಸಂಸ್ಕೃತವೇ ದೊಡ್ಡದು, ಇವರ ವೇದವೇ ದೊಡ್ಡದು, ಇವರ ಶಂಕರ, ರಾಮಾನುಕ, ಮಧ್ವರ ಮುಂದೆ ಬಸವ, ಅಲ್ಲಮ, ಅಕ್ಕಮಹಾದೇವಿ ಇಂತಹ ಕನ್ನಡದ ದಾರ್ಶನಿಕರು ಮೂಲೆ ಕಸ.

ಊರು ಹಾಳಾದರು, ಇವರ ಜುಟ್ಟಿಗೆ ಚಿನ್ನಮಲ್ಲೆ ಬೇಕು. ಇದೇ ಇವರ ಬುದ್ದಿ. ಬ್ರಿಟೀಶರ ಕಾಲು ನೆಕ್ಕು ಶಾನುಭೋಗತನ ಗಿಟ್ಟಿಸಿಕೊಂಡಿದ್ದು ಇವರೇ ತಾನೆ! ಇಷ್ಟೇ ಇವರ ಯೋಗ್ಯತೆ.

ಈ ಯಾರಯ್ಯನೂ ಅಷ್ಟೇ ಮಾತನ್ನು ಎತ್ತೆತ್ತೆಲೋ ಹರಳಿಸಿ, ತಲೆಬುಡ ಇಲ್ಲದ ವಾದ ಮಂಡನೆಯಲ್ಲೇ ತನ್ನ ಬ್ರಾಹ್ಮತ್ವದ ಪ್ರದರ್ಶನಕ್ಕೆ ನಿಂತಿದ್ದಾರೆ.

ಒಂದು ವಿಷಯಕ್ಕೆ ಬದ್ಧರಾಗಿ ಮಾತಾಡೋದು, ಇರೋದು, ನಡೆದುಕೊಳ್ಳೋದು, ಇಂತಹ ಬಂಡರಿಗೆ, ಗುಡ್ಡುಮಾತುಗಾರರಿಗೆ ಎಲ್ಲಿದೆ?

ನೋಡಿ, ಇವರು ಹೀಗೆ ಮೂಲ ವಿಷಯವನ್ನು, ಕನ್ನಡದ ಕಾಳಜಿಯನ್ನು ಮರೆತು, ಎಲ್ಲೆಲ್ಲಿಗೋ ಮಾತು ಹಾಯಿಸುತ್ತಾರೆ.

Vijendra ( ವಿಜೇಂದ್ರ ರಾವ್ ) ಅಂತಾರೆ...

ನಾನು ಬ್ರಾಹ್ಮಣನಲ್ಲ.. ಆದ್ರೂ ಇಲ್ಲಿ ಅಲ್ಲಮರು ಬ್ರಾಹ್ಮಣರ ಬಗ್ಗೆ ಬಳಸುತ್ತಿರುವ ಪದಗಳು, ಪೂರ್ವಗ್ರಹಪೀಡಿತವಾಗಿದೆ ಅಂತ ಅನ್ನಿಸ್ತಾ ಇದೆ. ನಿನ್ನೆನೂ ಇದನ್ನು ಹೇಳಿದ್ದೆ. ಹಣ್ಣು ಬಿಟ್ಟು ಸಿಪ್ಪೆ ತಿಂದ ಹಾಗೆ ಕನ್ನಡದ ಬಗ್ಗೆ ಚರ್ಚೆ ಬಿಟ್ಟು, ಬ್ರಾಹ್ಮಣರನ್ನು ಹೀಯಾಳಿಸುದರಲ್ಲೆ ಖುಶಿ ಪಡ್ತಾ ಇದ್ದಾರೆನೋ ಅಂತ ಅನ್ನಿಸ್ತಾ ಇದೆ. ಇದು ಏನ್ ಗುರು ಬ್ಲಾಗಿನ ಘನತೆಗೆ ತಕ್ಕುದಾದದಲ್ಲ.. ಏನ್ ಗುರು ಬ್ಲಾಗ್ ಶುರುವಾದ ದಿನದಿಂದ ಓದುಗನಾಗಿ, ಅಭಿಮಾನಿಯಾಗಿ ಈ ಮಾತನ್ನು ಹೇಳ್ತಾ ಇದ್ದೇನೆ. ಈ ನನ್ನ ಅನಿಸಿಕೆಯ ಬಗ್ಗೆ ವೈಯುಕ್ತಿಕ ಟೀಕೆ ಕೇಳಲು ಬಯಸುದಿಲ್ಲ...

Anonymous ಅಂತಾರೆ...

Allamare, nimage neevu mattu nimma pangaDadavaru itta hinduLida vargakke serade yaava sarkaari savalattu gaLannoo paDeyalikkagilla atta neevu yaavagaloo badkotteeralla aa jaatiyavarashtu budhivantaroo aagilla..adakke my parachkotideera ansutte..nimma bagge nanage kanikaravide..

ಬನವಾಸಿ ಬಳಗ ಅಂತಾರೆ...

ಗೆಳೆಯರೆ,

ಇಲ್ಲಿ ಅನಿಸಿಕೆಗಳು ವಿಷಯವನ್ನು ಬಿಟ್ಟು ಬಹುದೂರ ಬರುತ್ತಿವೆ.

ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತನಾಡುತ್ತಿದ್ದರೋ ಇಲ್ಲವೋ ಎನ್ನುವುದರ ಬಗ್ಗೆಯೇ ನಿಮ್ಮ ಅನಿಸಿಕೆಗಳು ಸೀಮಿತವಾಗಿರಲಿ.

ಸುಮ್ಮನೆ ಅವರಿವರನ್ನು ಬೈದುಕೊಂಡು ಬರೆಯುವುದರಿಂದ ಉಪಯೋಗವಿಲ್ಲ.

ಅನಿಸಿಕೆಗಳು ಮೂಲ ವಿಷಯದಿಂದ ಬಹುದೂರ ಬಂದು, ಅದರಿಂದ ಚರ್ಚೆ ಕೆಟ್ಟ ದಾರಿ ಹಿಡಿದರೆ ಅನಿಸಿಕೆಗಳನ್ನು ಬರೆಯದಂತೆ ನಿಲ್ಲಿಸದೆ ನಮಗೆ ಬೇರೆ ದಾರಿ ಇರುವುದಿಲ್ಲ. ಇದಕ್ಕೆ ಅನುವು ಮಾಡಿಕೊಡಬೇಡಿ ಎಂದು ಈ ಮೂಲಕ ಬನವಾಸಿ ಬಳಗ ನಿಮ್ಮನ್ನು ಕೇಳಿಕೊಳ್ಳುತ್ತಿದೆ.

ನನ್ನಿ!

Anonymous ಅಂತಾರೆ...

ನಾನು ಹೇಳಿದ್ದು ಸತ್ಯ. ಆದರೂ ನನ್ನ ಮೇಲೆ ಕೋಪ.

ಇರಲಿ.. ನಾನು ಬ್ರಾಹ್ಮಣರ ಬಗ್ಗೆ ಬರೆದುದು ಸರಿಯಿಲ್ಲ ಅಂದರೆ, ಈ ತರಲೆಗಳು ಸಂಸ್ಕೃತ ಮರೆಸಿ ಇಲ್ಲಿ ಬರೆದುದು ಸರಿಯಿಲ್ಲ

ಸಂಸ್ಕೃತ ಮೆರೆಸುವುದನ್ನು ಅವರು ನಿಲ್ಲಿಸಲಿ, ಆಮೇಲೆ ಆ ತನಗೆ ತಾನೆ, ಬ್ರಾಹ್ಮಣ ಸುದ್ದಿ ಬರುವುದಿಲ್ಲ.

ಏನ್ ಗುರು, ವಿಚಾರದಿಂದ ದೂರ ಮೊದಲು ಹಾರಿದವರು ಈ ಮೊಂಡ ಸಂಸ್ಕೃತದವರು.

ನನ್ನಿ( ಅಂದರೆ ಏನು? )

Anonymous ಅಂತಾರೆ...

ನನ್ನಿ ಎಂದರೆ ಧನ್ಯವಾದ.

Anonymous ಅಂತಾರೆ...

ಹಾ!

ಕಲಿಸಿದಕ್ಕೆ ನನ್ನಿ!

Anivaarya ಅಂತಾರೆ...

ಯಾಕಯ್ಯ ಮತ್ತೆ ಮತ್ತೆ ಅಸಹ್ಯವಾಗಿ ಜಾತಿ, ಮತ, ಮಣ್ಣು, ಮಸಿ ಅಂತ ಹೀಗೆ ಏನೇನೋ ಮಾತಾಡ್ತೀಯಾ? ಹೀಗೆ ಕೆಟ್ಟದಾಗಿ ಮಾತಾಡೋದು ಕಷ್ಟವೇನಲ್ಲ, ಬುದ್ದಿಯೇ ಬೇಕಿಲ್ಲ. ಸ್ವಲ್ಪವಾದರೂ ಇಲ್ಲಿಯ ವಾದ ಏನು ಅಂತ ಅರೆಯಲು ಪ್ರಯತ್ನಿಸು, ವಿತ್ತಂಡವಾದ ಬೇಡ. ಕಣ್ಣಿನ ಪಟ್ಟಿ ಸ್ವಲ್ಪ ತೆಗಿ ಗುರು.

"ಈ ಬಂಡ ಬ್ರಾಹ್ಮಣರು( ಇವರನ್ನು ಬ್ರಾಹ್ಮಣರು ಅನ್ನೋದು ಬ್ರಾಹ್ಮಣ ಪದಕ್ಕೆ ಅವಮಾನ ) ಬರೆವುದೇ ಇಲ್ಲ ಸ್ವಾಮಿ"

- ಹಾಹಾಹಾ ನಗಬೇಕಷ್ಟೆ. ಬಿಡು ಗುರು ನಿನ್ನ ಲೆವಲ್ ಏನು ಅಂತ ತೋರಿಸಿದೆ. ಹೌದು ನಾನು ಹುಟ್ಟಿನಿಂದ ಬ್ರಾಹ್ಮಣನೇ, ಆದರೆ ಅದು ನನ್ನ ವಯಕ್ತಿಕ ವಿಷಯ.

ಆದರ ಜೊತೆಗೆ ನಾನು ಅಪ್ಪಟ ಕನ್ನಡಿಗ ಕೂಡ, ದಯವಿಟ್ಟು ಜೋಪಾನವಾಗಿ ಮಾತಾಡು ಗುರು. ನಿಂಗಿಂತ ಕನ್ನಡ ಪ್ರೇಮ ನನಗಿದೆ.

"ಈ ಬಂಡರ ಗುರಿ ಏನಿದ್ದರೂ ಹೇಗಾದರು ತಳಂಕಬಳಂಕ, ಅಡ್ಡಾದಿಡ್ಡಿ ವಾದದ ಮೇಲೆ ವಾದವನ್ನು ಉಚ್ಚಿ"

ಯಾರು ಅಡ್ಡಾದಿಡ್ಡಿ, ತಳ್ಳಂಬಳಕ ವಾದ ಮಾಡ್ತಾ ಇರೋದು, ಯಾರು ಬಂಡರು ಅಂತ ಈ ನಿಮ್ಮ ಪೋಷ್ಟ್ ಸರಿಯಾಗಿ ಹೇಳುತ್ತೆ. ನಾನು ವಾದದಲ್ಲೇ ಇದ್ದೇನೆ ನೀನು ಎಲ್ಲೇಲ್ಲಿಗೋ ಏಳೆಯಲು ಯತ್ನಿಸುತ್ತಿದ್ದಿ ಗುರು.

ನೀನು ಇಲ್ಲಿ ಮಾಡ್ತಾ ಇರೋದು ಸೋತು, ಸೊರಗಿ, ದಿಕ್ಕು ಕಾಣದೆ ವದ್ದಾಡುವಂತಹಾ ಬಾಲ ಸುಟ್ಟ ಬೆಕ್ಕಿನ ವಾದ. ಹುಚ್ಚಲ್ಲ, ಬೆಪ್ಪಲ್ಲ, ಶಿವಲೀಲೆ ಅಂತಾರಲ್ಲ ಹಾಗೆ. ಜಾತಿ ಜಾತಿ ಜಾತಿ ಅನ್ನೋ ಮಸಿ ಬಳೆದು ಬರೀ ಉತ್ತೇಜಿತ ವಿತ್ತಂಡ ವಾದ ಮಾಡ್ತಾ ಎಲ್ಲೆಲ್ಲಿಗೋ ಹೋಗ್ತಾ ಇರೋದು ಯಾರು ಸ್ವಲ್ಪ ನೋಡ್ಕೊ. ದಯವಿಟ್ಟು ಜಾತಿ ವಿಷಯ ಎತ್ತಬೇಡ ಗುರು.

ಜಾತಿಗೂ ಭಾಷೆಗೂ ಸಂಬಂದ ಇಲ್ಲ, ನಿನಗೆ ಯಾರು ಎಷ್ಟು ಹೇಳಿದರೂ ಅರ್ಥವಾಗುವಂತೆ ಕಾಣೊತ್ತಿಲ್ಲವಲ್ಲ ಗುರು, ಮಸಿಯನ್ನ ಸ್ವಲ್ಪ ಒರೆಸಿಕೊ ಕಾಣಬಹುದು.


"ಇವರ ಸಂಸ್ಕೃತವೇ ದೊಡ್ಡದು"
- ಇಲ್ಲಿ ದೊಡ್ಡದು ಚಿಕ್ಕದ್ದು ಅನ್ನೋ ಮಾತೇ ಇಲ್ಲ!! ನನ್ನ ತಾಯೇ ಕನ್ನಡ ಅಂತ ಮುಂಚೆನೆ ಹೇಳಿದ್ದೇನೆ, ಗುರು ಮತ್ತು ತಾಯಿ ಎರಡರದೂ ಸ್ಥಾನಗಳಿವೆ ಅಂತಲೂ ಹೇಳಿದ್ದೇನೆ. ಮೇಲೆ ಕೆಳಗೆ ಅನ್ನೋದು ಇಲ್ಲಿ ಬಂದಿಲ್ಲ. ನೀನಗೆ ಓದಲು ಬಂದರೆ ತಾನೆ ಅರ್ಥ ಆಗೋದು ಗುರು. ಏಣಿ-ಗೋಡೆ ವಿಷಯದ ಮೇಲೆ-ಕೆಳಗೆ ಬೇರೆಯೇ, ಆಧ್ಯಾತ್ಮದ ಬಗ್ಗೆಯ ವಾದವದು, ಅದನ್ನ ನೋಡು.

"ಇವರ ವೇದವೇ ದೊಡ್ಡದು, ಇವರ ಶಂಕರ, ರಾಮಾನುಕ, ಮಧ್ವರ ಮುಂದೆ ಬಸವ, ಅಲ್ಲಮ, ಅಕ್ಕಮಹಾದೇವಿ ಇಂತಹ ಕನ್ನಡದ ದಾರ್ಶನಿಕರು ಮೂಲೆ ಕಸ"

- ಮತ್ತೊಂದು ವಿತ್ತಂಡವಾದ. ಇರ್ಲಿ. ನನಗೆ ಶ್ರೀ ಶಂಕರ, ರಮಾನುಜ, ಮಧ್ವರ ಮೇಲೆ ಎಷ್ಟು ಶ್ರದ್ದೆ, ಭಕ್ತಿ ಇದ್ಯೊ ಅಷ್ಟೆ ಶ್ರದ್ದೆ ಬಸವ, ಅಲ್ಲಮ, ಅಕ್ಕಮಹಾದೇವಿ ಇದೆ. ಆದರೆ ನಿಮ್ಮ ಮಾತಿನ ದಾಟಿಯನ್ನ ನೋಡಿದ್ರೆ ನಿಮಗೆ ಬಸವ, ಅಲ್ಲಮ, ಅಕ್ಕಮಹಾದೇವಿ ಅವರ ಬಗ್ಗೆಯೂ ತಿಳಿದಿಲ್ಲ ಅಂತ ಬಾಸವಾಗುತ್ತೆ, ಆದ್ರೂ ...... "ಪರರ ನಿಂದಿಸಬೇಡ" .....

ಬ್ಲಾಗ್ ಅಡ್ಮಿನ್ ಮಹಾಶಯ, ಅಡ್ ಬಿದ್ದೆ ನಿನ್ಗೆ. ಇದು ಸರಿಯೇ? ಇದು ತಪ್ಪಲ್ಲವಾದಲ್ಲಿ ತಪ್ಪು ಯಾವುದು ಅಂತ ತಿಳಿಸಿ?

Anivaarya ಅಂತಾರೆ...

ಏನ್ಗುರು,

ದಯವಿಟ್ಟು ಕ್ಷಮಿಸಬೇಕು ವಾದವಿವಾದ ಎಲ್ಲೆಲ್ಲಿಗೋ ಎಳೆದು ಕೊಂಡು ಹೋಯಿತು, ಅದರೆ ಅದು ನನ್ನ ಉದ್ದೇಶವಾಗಿರಲಿಲ್ಲ. ಇದೊಂದು ವಿನಂತಿ. ದಯವಿಟ್ಟು ಈ ಜಾತಿ, ಮತ ಗಳ ಬೇದ ಬರದಂತೆ ನೋಡಿಕೊಳ್ಳಿ.

ಇಲ್ಲಿ ಕನ್ನಡಿಗರು ಕನ್ನಡದಲ್ಲಿ ಮಾತಾಡ ಬಹುದು ಅನ್ನೋ ಖುಷಿಗೆ ಬರುತ್ತಾರೆ. ಬ್ರಾಹ್ಮಣ, ಕ್ಷತ್ರೀಯ, ವೈಷ್ಯ, ಶೂದ್ರ, ಚಾಂಡಾಳ ಅನ್ನೋ ಬೇದವಿಲ್ಲದೇ ಕನ್ನಡಿಗರ ಹಾಗೆ ನಮ್ಮ ನಮ್ಮ ಅನಿಸಿಕೆಗಳನ್ನ ವ್ಯಕ್ತ ಪಡಿಸೋದು ತಪ್ಪಲ್ಲ ಅಂತ ಅನ್ಕೊಂಡಿದ್ದೇನೆ. ನಮ್ಮ ನಮ್ಮ ವಯ್ಯಕ್ತಿಕ ಒಂದು ಜಾತಿಯ ಮೇಲಿನ biasesಗಳನ್ನ ತೋಡಿಕೊಳ್ಳೋ platform ಆಗೋದು ಒಳ್ಳೆಯದಲ್ಲ, ಅಲ್ವೆ?

ಅಲ್ಲಮರ (ಬಂಡ)ಬ್ರಾಹ್ಮಣರ ಮೇಲಿನ ಧಾಳಿಯನ್ನ ಯಾರೂ ಖಂಡಿಸದೇ ಇರೋದನ್ನ ನೋಡಿದರೆ ನನ್ಗೆ ಬೇಸರವಾಯ್ತು. ನಾವು ಕನ್ನಡಿಗರ ಅನ್ನಿಸ್ತು, ಎಲ್ಲಿ ಹೋಯ್ತು ನಮ್ಮ ethical background ಅನ್ತು. ಒಂದು ಜಾತಿಗೂ, ಭಾಷೆಗೂ ಎಲ್ಲಿಯ ಸಂಬಂಧ ಅನ್ನೋದು .... ಬಿಟ್-ಹಾಕಿ.

ಈ ಬ್ಲಾಗ್ ಚೆನ್ನಾಗಿ ನಾಡೀತಾ ಇದೆ ಗುರು, ಹೀಗೆ ಮುಂದುವರೆಯಲಿ. ಒಮ್ಮೊಮ್ಮೆ ಹೀಗೆ ಧಾರಿ ತಪ್ಪೋದು ಸಹಜ, ಕ್ಷಮೆ ಇರಲಿ. ನಾವುಗಳೆಲ್ಲರೂ ನಮ್ಮ ನಮ್ಮದೇ ಆದ ಕೂಪಗಳ ಕಪ್ಪೆಗಳು, ಆದ್ರಿಂದ we may have differences, but that should be for a healthy exchange of ideas. ಇಲ್ಲಿ ಸೋಲು-ಗೆಲವು ಅನ್ನೋದು ಇಲ್ಲ ಎಂದು ತಿಳಿಯುತ್ತೇನೆ.

ಪ್ರೀತಿಯ,
ಯಾರಯ್ಯ

Anonymous ಅಂತಾರೆ...

"ನಿನ್ನ ಲೆವಲ್ ಏನು ಅಂತ ತೋರಿಸಿದೆ"
ಹೌದು ನಿಮಗೆ ಜಗತ್ತಲ್ಲಿ ಇರುವ ಎಲ್ಲರ ಲೆವೆಲ್ಲು ನಿರ್ಧಾರ ಮಾಡುವ ಹಕ್ಕು ಇರುವುದು. ನೀವು ಹೇಳದ ಮೇಲೆ ನನ್ನ ಲೆವೆಲ್ಲಿಗೆ certificate ಸಿಗವುದು.
ಇದು ನಿಮ್ಮ ಹುಟ್ಟು ಬ್ರಾಹ್ಮಣ ಬುದ್ಧಿ.

ಕನ್ನಡಕ್ಕೊಂದು ಲೆವೆಲ್ಲು, ಸಂಸ್ಕೃತಕ್ಕೊಂದು ಲೆವೆಲ್ಲು, ಆದರೆ ಕನ್ನಡದ ಲೆವೆಲ್ಲು ಸಂಸ್ಕೃತಕ್ಕಿಂತ ಯಾವಾಗಲು ಕೆಳಗೇ, ಎಷ್ಟೇ ಆದರು ಅದು ಶೂದ್ರರ, ಜೈನ, ಲಿಂಗಾಯತರ ಭಾಷೆ, ಸಂಸ್ಕೃತದಂತೆ ದೈವಭಾಷೆಯೇ, ಇಲ್ಲ ವಿಪ್ರರ ಭಾಷೆಯೆ.

ನೀವು ಮೊದಲು ಸರಿಯಾಗಿ ವಿಷಯಕ್ಕ ಅಂಟಿಕೊಂಡು ಮಾತಾಡುವುದನ್ನು ಕ್ರಿಯೆಗೆ ತನ್ನಿ. ಸಂಸ್ಕೃತವನ್ನು ವೇದಕ್ಕೆ, ಶಂಕರ, ರಾಮಾನುಜರಂತ ಮತಸ್ಠಾಪಕರಿಗೆ ಅಂಟು ಹಾಕಿದ್ದು ಯಾರು ಮೊದಲು? ನಿಮ್ಮ ವಿಪ್ರಬಾಂದವನೇ ಒಬ್ಬ.
ಅವನ ತಲೆಬುಡವಿಲ್ಲದ ವಾದವನ್ನು ಓದಿ ಅವನಿಗೆ ಮೊದಲು ಹೇಳಿ "ಸಂಸ್ಕೃತವನ್ನು ಒಂದು ಮತಕ್ಕೆ, ಧರ್ಮಕ್ಕೆ ಅಂಟಿಸಬೇಡಪ್ಪ, ಆರ್ಯ" ಅಂತ. ಹಾಗೆ ನೀವು ಮಾಡುವುದೇ ಇಲ್ಲ ಎಷ್ಟೇ ಆದರು "ಸ್ವಜಾತಿಪಕ್ಷಪಾತ" ಅನ್ನವುದು ನಿಮ್ಮ ಕುಲಸಂಪ್ರದಾಯವಲ್ಲವೇ?

ಸಂಸ್ಕೃತದ ಬಗ್ಗೆ ಪೊಳ್ಳು ಹಿರಿಮೆ ಸಾರುವುದನ್ನು ನಿಲ್ಲಿಸಿ, ಆಗ ನಿಮ್ಮನ್ನು ಯಾರು ಬಂದು ಹಳಿಸು ತಡೆಯುವುದಿಲ್ಲ. ನಿಮ್ಮ ಈ ಪೊಳ್ಳತನ ಮುಂದುವರಿಸಿದರೆ, ನಿಮ್ಮನ್ನು ಹಳಿಯುವವರು ಇದ್ದೇ ಇರುತ್ತಾರೆ.

Anonymous ಅಂತಾರೆ...

ಯಾರಯ್ಯನವರು ತಾವು ಏನು ಮಾತಾಡಿದರು ಅದು ದೊಡ್ಡಮಾತು, ತಮ್ಮದೇ ದೊಡ್ಡತನ, ತಮ್ಮದೇ ಉದಾರಬುದ್ಧಿ ಅಂತ ಸ್ವಭ್ರಾಂತಿಯಲ್ಲಿದ್ದಾರೆ.

ಮನೆಗೆ ಹಸಿದು ಬಂದವರಿಗೆ ಉಣ್ಣಕೊಡದೇ, ಬರೀ ಹಾಡು ಹಾಡಿದರೆ ಏನು ಬಂತು ಭಾಗ್ಯ. ಹೀಗೆ ಯಾರಯ್ಯ+ಅವರ ಬಳಗ, ಬರೀ ಮಾತು. ಕೆಲಸದಲ್ಲಿ ತಮಗೆ ಬೇಕಾದುದನ್ನೇ ಮಾಡಿಕೊಳ್ಳಲು ಸಂಸ್ಕೃತದ ಪಕ್ಕ ನಿಲ್ಲವರು.

ಈ ಎಳೆಯಲ್ಲಿ ವೇದ, ಉಪನಿಷತ್ತು, ಪುರಾಣ, ರಾಮಾಯಣ ... ಅಂತ ಒಂದು ಮಣ ಸಂಸ್ಕೃತ ಕೃತಿಗಳ ಹೆಸರು ಹೇಳಿ ಇದನ್ನೆಲ್ಲ ತಿಳಿಯದ ಮನುಜರು ಪ್ರಾಣಿಗಳಂತೆ ಭೂಮಿಗೆ ಭಾರ, ಈ ಪುಸ್ತಕಗಳಲ್ಲಿ ಇರುವ ಜ್ಞಾನವನ್ನು ಪಡೆಯದವನು ಅವನು ತನ್ನ ಕೆಲಸವನ್ನು ತನ್ನ ಪಾಡಿಗೆ ನಿಯತ್ತಿನಿಂದ ಮಾಡುವ ರೈತನಾಗಲಿ, ಕಮ್ಮಾರನಾಗಲಿ, ಅವನ ಜನ್ಮ ನಿರರ್ಥಕ ಅಂತ ದೊಡ್ಡದೊಡ್ಡ ಭಾವದವರು ದೊಡ್ಡದೊಡ್ಡ ಮಾತು ಆಡಿದ್ದಾರೆ. ದಯವಿಟ್ಟು ಅವುಗಳನ್ನು ಗಮನಿಸಬೇಕು.

ಹೀಗೆ ಹೇಳಿದವರ ಸಿದ್ಧಾಂತ ಯಾವಾಗಲೂ ಹೀಗೆ ದುಡಿಮೆಗೆ ಇವರಲ್ಲಿ ಬೆಲೆ ಇಲ್ಲ, ಹಾಗೆ ದುಡಿಮೆಯ ನುಡಿಯಾದ ಕನ್ನಡಕ್ಕೆ ಬೆಲೆಯಿಲ್ಲ. ಸುಮ್ಮನೆ ಕುಳಿತು, ಆಧ್ಯಾತ್ಮ ಅಂತ ಏನು ಕೆಲಸ ಮಾಡದೇ, ಭಕ್ತರು ಎಂದು ಬರುವ ಹುಂಬರನ್ನು ದೋಚಿ ಉಂಡು ಜೀವನ ಮುಗಿಸಿ, ನನ್ನದೇ ಸಾರ್ಥಕ ಬದುಕು ಅನ್ನುವುದು.

ಏನ್‌ಗುರು.........................
ನಾನಿಲ್ಲಿ ಇಷ್ಟು ಮಾತಾಡಿದ್ದು. ಯಾರು ಮಹಾಶಯ ಬಂದು ಸಂಸ್ಕೃತದಲ್ಲಿ ಮಾತ್ರ ಆಧ್ಯಾತ್ಮ ಇರುವುದು, ಅದಕ್ಕೆ ಎಲ್ಲರೂ ಅದನ್ನು ಕಲಿಯಲೇ ಬೇಕು, ಇಲ್ಲದೇ ಹೋದರೆ ಅವರು ಜೀವನದಲ್ಲಿ ಮೇಲ್‌ಸ್ಥರ ಪಡೆಯಲ್ಲ ಅಂತ ಕೊಚ್ಚಿಕೊಂಡಿದಕ್ಕೆ. ಇಂತಹ ಪೊಳ್ಳುವಾದವನ್ನು ಮಾಡಲು ಅವಕಾಶವಿರುವಾಗ, ಅದನ್ನು ಖಂಡಿಸಲು ಅವಕಾಶ ಏಕೆ ಇರಬಾರದು.

ಇಷ್ಟೇ!

Anivaarya ಅಂತಾರೆ...

ಅಲ್ಲಮ ಮಹಾಪ್ರಭುಗೆ ಜೈ! ಹಾಹಾಹಾ .... ಆಕಾಶಕ್ಕೆ ಏನೂ ಆಗಲ್ಲ. ಬಿಡು ಗುರು ನೀನೇ ಬೆಶ್ಟ್; ನಿನ್ನ ತಮಾಷೆ ಸೂಪರ್, ತುಂಬಾ ಚೆನ್ನಾಗಿದೆ!! ಹೀಗೇ ಜೋಕ್ಸ್ ಮಾಡ್ತಾ ಇರು ಗುರು, ಎಲ್ಲಾರೂ ನಗ್ ನಗ್ತಾನೆ ಇರೋಣ.

Anonymous ಅಂತಾರೆ...

ಅಲ್ಲಮ, ಯಾರಯ್ಯ ಮತ್ತು ರಾಘವೇಂದ್ರಾಚಾರ್ ಅವರಿಗೆ . . .
ಯಾರಯ್ಯನವರೇ,
ನಿಮ ಕನ್ನಡ ಪ್ರೀತಿಯನ್ನು ಗೌರವಿಸ್ತಾನೇ, ಈ ಅನಿಸಿಕೆ ಬರೀತಾ ಇದೀನಿ.
ಭಾಷಾ ವಿಜ್ಞಾನದ ಒಂದು ಅಚ್ಚರಿಯನ್ನು ನಿಮಗೆ ಹೇಳಬೇಕಾಗಿದೆ. ಒಂದು ಮಾನವ ಶಿಶು ತನ್ನ ಮೊದಲ ಆರು ವರ್ಷದಲ್ಲಿ ಯಾವ ಭಾಷಾ ವಾತಾವರಣದಲ್ಲಿ ಬೆಳೆಯುತ್ತದೋ ಆ ಭಾಷೆಯ ಜಾಯಮಾನ, ಅದರ ವ್ಯಾಕರಣಕ್ಕೆ ( ಪುಸ್ತಕಗಳಲ್ಲಿ ಬರೆಯುವ ವ್ಯಾಕರಣ ಅಲ್ಲ, ಇದು ವಿವರಿಸಲಾಗದ ಸಹಜವಾದ ಭಾಷಾ ಸ್ವಭಾವ) ಹೊಂದಿಕೊಂಡು ಬಿಡುತದೆ. ಆ ಕಾರಣದಿಂದಲೇ ಅದನ್ನು ತಾಯಿ ನುಡಿ ಅಂತಾರೆ. ಇದನ್ನು ವಿವರಿಸೋದು ಕಷ್ಟ. ಆದರೆ ಒಂದು ಪ್ರಯೋಗದ ಮೂಲಕ ವಿವರುಸ್ತೀನಿ.
ಒಂದು ಭಾಷೆಯ ಮಗುವಿಗೆ ತನ್ನದಲ್ಲದ ಭಾಷೆ, ಅಂದರೆ ಎರಡನೆ ಭಾಷೆಯ ಒಳ ಹೊರಗು ಅರಿಯಲು ಎಷ್ಟು ತೊಡಕಾಗುವುದೋ ಅಷ್ಟೇ ತೊಡಕು ಆರು ವರ್ಷಗಳ ನಂತರ ಕಲಿಯಲು ಹೊರಟರೆ ತನ್ನ ಭಾಷೆಯಲ್ಲೂ ಅಂತಹ ತೊಡುಕೇ ಆಗುವುದು. ಇದನ್ನು ಕೆಲ ಮಕ್ಕಳನ್ನು ಹುಟ್ಟಿದಾಗಿನಿಂದ ಆರು ವರ್ಷಗಳ ಕಾಲ ಯಾವ ಭಾಷೆಗೂ ಎಕ್ಸ್ ಪೋಸ್ ಮಾಡದೆ ಬೆಳೆಸಿ, ನಂತರ ಅವುಗಳಲ್ಲಿ ಕೆಲಮಕ್ಕಳನ್ನು ಬೇರೆ ಭಾಷೆಗೂ, ಕೆಲವನ್ನು ತಾಯಿನುಡಿಗೂ ಪರಿಚಯಿಸಿ ಕಲಿಕೆಯಲ್ಲಿನ ವ್ಯತ್ಯಯವನ್ನು ಅಧ್ಯಯನ ಮಾಡಿ ಸಾಧಿಸಿದ್ದಾರೆ. ಈ ಮಾತು ಯಾಕೆ ಅಂದರೆ ' ಕನ್ನಡದ ಮಕ್ಕಳಿಗೆ ಕನ್ನಡವೂ ಕಲಿಯದಿದ್ದರೆ ಗೋಡೆಯೇ' ಅನ್ನುವ ನಿಮ್ಮ ಮಾತು ಸರಿಯಲ್ಲ. ನೀವು ಬರವಣಿಗೆ ಮತ್ತು ಲಿಪಿಯ ಅರಿವನ್ನೇ ಭಾಷೆ ಎಂದು ತಿಳಿದು ಹೀಗೆ ಬರೆದಿರೋ ಏನೋ ಕಾಣೆ. ಯಾವ ವಾತಾವರಣದಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುವರೋ, ಯಾವ ಭಾಷೆಯನ್ನು ಕೇಳುತ್ತಾ ಅನುಕರಿಸುತ್ತಾ ಬೆಳೆಯುವರೋ ಅದು ಆ ಮಕ್ಕಳ ತಾಯಿನುಡಿಯಾಗುತ್ತದೆ. ಹಾಗಾಗಿ ನಿಮ್ಮ ಮೇಲ್ಕಾಣಿಸಿದ ಹೇಳಿಕೆ ವಿತಂಡವಾದವೇನೋ ಅನ್ನಿಸುತ್ತದೆ. ಸ್ವಲ್ಪ ನೀವೇ ಪರಾಮರ್ಷೆ ಮಾಡಿ ನೋಡಿ.
ಅಲ್ಲಮರೇ,
ಇನ್ನು ಜಾತಿಯ ಮಾತನ್ನಾಡುತ್ತಿರುವ ನಿಮಗೂ ಮತ್ತು ಯಾರಯ್ಯನವರಿಗೂ ಒಂದೇ ಉತ್ತರ. ನೀವು ಸಮಾಜದ ಉನ್ನತ ವರ್ಗದ ಜನ. ಯಾರೇ ಜಾತಿಯನ್ನು ವಾದಕ್ಕೆ ತರುವುದರಿಂದ ಒಬ್ಬರು ಮತ್ತೊಬ್ಬರನ್ನು ಹಂಗಿಸಲು ಸಾಧ್ಯವೇ ಹೊರತು ಉಪಯುಕ್ತ ವಾದ ಮಾಡಲು ಸಾಧ್ಯವಾಗಲ್ಲ. ಇತ್ತೀಚಿಗೆ ನಮ್ಮ ಮೈಸೂರಿನ ಗೋಡೆಗಳ ಮೇಲೆ ಬರೆದಿದ್ದ ಒಂದು ಘೋಷಣೆ ಓದಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಂತ ಬರೆದು 'ಕನ್ನಡವೇ ಜಾತಿ' 'ಕನ್ನಡವೇ ಧರ್ಮ' ಕನ್ನಡವೇ ದೇವರು' ಅಂತ್ ಅದರಲ್ಲಿತ್ತು. ಇಂತಹ ಮನಸ್ಥಿತಿ ನಮ್ಮದಾದರೆ ನಿಜವಾದ ಸತ್ವ ಹೊರಬರುತ್ತದೆ. ಇಲ್ಲವಾದಲ್ಲಿ ಬರೀ ಕೆಸೆರೆರಚಾಟವೇ.
ರಾಘವೇದ್ರಾಚಾರ್ ಅವರೇ,
ನಿಮ್ಮ ಮತ್ತು ಯಾರಯ್ಯನವರ ನಡುವೆ ನಿಜವಾದ ತಾತ್ವಿಕ ಚರ್ಚೆ ಕಾಣುಸ್ತಿದೆ. ಇದನ್ನು ಮುಂದುವರೆಸಿ, ನಾಡಿಗೆ ಇದರಿಂದ ಖಂದಿತಾ ಉಪಯೋಗವಾಗುತ್ತದೆ. ಇಬ್ಬರೂ ಮೊಂಡುವಾದಕ್ಕೆ ಬೀಳದೆ ಎರಡೂ ವಾದಗಳ ಸರಿತಪ್ಪುಗಳನ್ನು ಮಥಿಸಿ ಒಂದು ಒಪ್ಪಿಗೆಯಾಗುವಂತಹಾ ನಿಲುವು ತಲುಪಿ.
ಎಲ್ಲರೂ ವ್ಯಂಗ್ಯ ವಿಡಂಬನೆ ನಿಂದನೆಗಳಿಂದ ಮುಕ್ತವಾದ ಚರ್ಚೆ ನಡೆಸಿ.
ಏನೇ ಆಗಲಿ ಕನ್ನಡದ ಮಕ್ಕಳಲ್ಲಿ ನಾಡು ನುಡಿಯ ಇಂತಹ ತಾತ್ವಿಕ ಚರ್ಚೆ ನಡೆಯುತ್ತಿರುವುದು ನಾಡಿನ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು. ಬನವಾಸಿ ಬಳಗದ ಬ್ಲಾಗರ್ ಗಳು ಈ ಚರ್ಚೆಯನ್ನು ಎಲ್ಲ ಕಡೆ ಹೆಚ್ಚು ಹೆಚ್ಚು ಪ್ರಚಾರ ಮಾಡಿದರೆ ಒಳಿತು.
ಒಳಿತಾಗಲಿ
ಡಾ.ರಾಮಕೃಷ್ಣ ಪುರಾಣಿಕ್

Anonymous ಅಂತಾರೆ...

ಡಾ.ರಾಮಕೃಷ್ಣ ಪುರಾಣಿಕ್ ಅವರೆ,

ಮೊದಲು ನನ್ನನ್ನು ಕ್ಷಮಿಸಿರಿ

ನೋಡಿ, ಮೊದಲು ಧರ್ಮಕ್ಕೆ ಸಂಸ್ಕೃತವನ್ನು ಅಂಟಿಸಿದವರು, ನಿಮ್ಮ ಮಾತನ್ನು ಲೇವಡಿಸಿದವರು, ಮತ್ತು ತಮ್ಮ ಶಂಕರ, ರಾಮಾನುಜರನ್ನೇ ಮರೆಸಿದವರ ಅಬ್ಬರ ಇಲ್ಲಿ ನೋಡಿ, ರೋಸಿ ನಾನು ಬರೆದುದು, ತುಣುಕು ಕೋಪವೂ ಇತ್ತು!


ಅದನ್ನು ಬಿಟ್ಟು ನನಗೆ ಎಲ್ಲ ಬ್ರಾಹ್ಮಣರೆ ಮೇಲೆ ದ್ವೇಷವಿಲ್ಲ. ನಮ್ಮ ಕನ್ನಡಕ್ಕೆ ಕೊಡುಗೆಯಿತ್ತ ಬ್ರಾಹ್ಮಣರು ಇದ್ದರು, ಇದ್ದಾರೆ. ಆದರೆ ಬರೀ ತಾವು ಬ್ರಾಹ್ಮಣರಾಗಿ ಹುಟ್ಟಿದ್ದೇವೆ ಎಂಬ ಮಾತ್ರಕ್ಕೆ ಎಲ್ಲದರಲ್ಲೂ ತಮ್ಮದೇ ಮೇಲು, ಅವರ ಹುಟ್ಟಿನಲ್ಲಿ ಮೇಲು, ಅವರ ಸಂಸ್ಕೃತವೇ ಮೇಲು, ಅವರ ಶಂಕರ ರಾಮನುಜರೇ ಮೇಲು, ಅವರ ವೇದೋಪನಿಷತ್ತು ಬಿಟ್ಟರೆ ಆಧ್ಯಾತ್ಮವೇ ಇಲ್ಲ, ಅವರ ಅಡುಗೆಯೇ ಮೇಲು, ಅವರ ಉಡುಗೆಯೇ ಮೇಲು ಅನ್ನುವ ತಾರತಮ್ಯಭಾವ ಇನ್ನೂ ಈ ಕಟ್ಟರವಾದದ ಬರೀ ಹುಟ್ಟಿನಿಂದ ಬ್ರಾಹ್ಮಣರಿಗೆ ಇದೆ, ಅಂದರೆ ಅದು ತಪ್ಪಲ್ಲ.


ಈ ಕಟ್ಟರವಾದಿಗಳಿಗೆ ನಿಮ್ಮ ಮತ್ತು ರಾಘವೇಂದ್ರಾಚಾರರ ಮಾತು ರುಚಿಸಲ್ಲ.


ಕೊನೆಯ ಮಾತು

ಕನ್ನಡ ನೆಲದಲ್ಲಿ "ಕನ್ನಡವೊಂದೇ ಮುಖ್ಯವಾಗಿ ಬಾಳಿಗೆ ಬೇಕಾದುದು, ಕನ್ನಡವೇ ಜಾತಿ, ನೀತಿ, ಧರ್ಮ, ಜನಾಂಗ, ನಮ್ಮ identity" ಅನ್ನುವ ಮನಸ್ಸಿನವರಿಗೆ ನನ್ನ ಪೂರ್ಣ ಪ್ರೋತ್ಸಾಹ ಮತ್ತು ಶುಭಹಾರೈಕೆ ಇದೆ. ಆದರೆ ಕನ್ನಡವೊಂದು after all regional language, ಸಂಸ್ಕೃತವಾದರೆ ದೇವಭಾಷೆ. ಅದಕ್ಕೆ ಕನ್ನಡಕ್ಕಿಂತ ಸಂಸ್ಕೃತ ಮೇಲು ಅನ್ನುವವರ ವಿರುದ್ಧ ರೋಸಿರುವ ಮನವೂ ಇದೆ.


ನಾನು ಯಾವ ದೊಡ್ಡ ಮನುಷ್ಟ ಅಲ್ಲ. ಆದರೆ ದೊಡ್ಡತನವಿರುವವರ ಮುಂದೆ ಸಣ್ಣವನು, ಸಣ್ಣತನ ಇರುವವರ ಮುಂದೇ ದೊಡ್ಡವನೇ.

Anivaarya ಅಂತಾರೆ...

preeಡಾ.ರಾಮಕೃಷ್ಣ ಪುರಾಣಿಕ್

Anivaarya ಅಂತಾರೆ...

ಪ್ರೀತಿಯ ಡಾ.ರಾಮಕೃಷ್ಣ ಪುರಾಣಿಕ್ ಅವರಿಗೆ ನಮಸ್ಕಾರ.

ಧನ್ಯವಾದಗಳು ನಿಮ್ಮ balanced viewpointಗೆ, ತುಂಬಾ ಚೆನ್ನಾಗಿ ಹೇಳಿದ್ದೀರಿ.

೧) "ಸಂಸ್ಕೃತ ಎಂದರೆ ಬ್ರಾಹ್ಮಣರು ತಮಗೂ ಆಧ್ಯಾತ್ಮಕ್ಕೂ ನಡುವಿನಲ್ಲಿ ಬೇಡದಿದ್ದರೂ ಉಳಿಸಿಕೊಂಡಿರುವ ಗೋಡೆ"

- ಈ ಅನಿಸಿಕೆಗೆ ಉತ್ತರವಾಗಿ ಶುರುವಾದ ನನ್ನ ವಾದವಿದು. ಇಲ್ಲಿ ಸಂಸ್ಕೃತ ಕೃತಿ ಮತ್ತು ಲಿಪಿಯ ಉದ್ದೇಶಿಸಿದ್ದೇನೆ. ಆ contextನಿಂದ ಆಚೆ ನೋಡಿದರೆ ಅದು ಸರಿಯಲ್ಲ ಅಂತ ಗೊತ್ತು. ಇದರಲ್ಲಿ "ಬೇಡದಿದ್ದರೂ" ಅನ್ನೋ ಪದ ಸ್ವಲ್ಪ ಸರಿ ಅನಿಸಲಿಲ್ಲ ಅದಕ್ಕೆ ಹೇಳಿದೆ ಅಷ್ಟೆ.

೨) ಆಮೇಲೆ, "ಇವತ್ತು ಕನ್ನಡನಾಡಿನಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಅದು ಗೋಡೆಯೇ", ಅಂತ ಹೇಳಿದ್ದಕ್ಕೆ "ಕನ್ನಡನಾಡಿನಲ್ಲಿ ಕನ್ನಡವನ್ನ ಕಲಿಯದಿದ್ದರೆ ಕನ್ನಡವೂ ಗೋಡೆಯೇ ಗುರು" ಅಂದಿದ್ದೊ "ಕಲಿಯದಿದ್ದರೆ, ವಾತವರಣವಿಲ್ಲದಿದ್ದರೆ" ಅನ್ನೋ ಕಾಂಟೆಕ್ಷ್ಟಲ್ಲೆ. ನಾನೂ ಕನ್ನಡನಾಡಿನಲ್ಲಿ ಹುಟ್ಟಿದವ, ಅದು ನನಗೂ ಗೋಡೆಯಾಗೇ ಇತ್ತು, ಆದರೆ ಕಲೆಯಲು ಆರಂಬಿಸಿದ ಮೇಲೆ ಸ್ವಲ್ಪ change ಇದೆ ಅಂತ ಹೇಳ್ದೆ ಅಷ್ಟೆ. ಅದಕ್ಕೆ english ಕೂಡಾ ಕೆಲವರಿಗೆ ಗೋಡೆಯೇ ಅಂತ ಹೇಳಿದೆ. ನೀವೇ ಹೇಳಿದಂತೆ ಬೆಂಗಳೂರಿನಲ್ಲಿನ ಮಕ್ಕಳಿಗೆ english ಗೋಡೆಯಲ್ಲವೇನೋ (ಲಿಪಿ, ಬರಹ, ಆಡು ಭಾಷೆಯಾಗಲೀ), ಆದರೆ ನೆಲಮಂಗಳದಲ್ಲಿ ಬೆಳೆಯುವ ಮಕ್ಕಳಿಗೆ ಅದು ಗೋಡೆಯೆ.

ನಾನು ನಿಮ್ಮಷ್ಟ್ ತಿಳಿದವನಲ್ಲದೇ ಇರಬಹುದು ಆದರೆ ನನ್ನ experience ಅಲ್ಲಿ ಸಾಕಷ್ಟು mentoring, councelling ಮತ್ತು developmental consultations ಮಾಡಿದ್ದೇನೆ. ಅವುಗಳು ಅನುಭವದಿಂದ ಹೇಳುತ್ತೇನೆ ಕಲಿಯಬೇಕು ಅಂದಲ್ಲಿ ವಯಸ್ಸು ಎಂಬ ಅಡಚಣೆ ಇರೋದು ನಿಜ, ಆದರೆ ಆ ಅಡಚಣೆ permanent ಅಲ್ಲ - ಅದು ನಿಮಗೂ ಗೊತ್ತು. ಆ ಮನೋಭಾವವಿಲ್ಲದಿದ್ದಲ್ಲಿ ಏಣಿಯೂ ಗೋಡೆಯಾಗಿಯೇ ಕಾಣುತ್ತೆ ಅಂತ ಹೇಳ್ದೆ ಅಷ್ಟೆ.

ನೀವು ಹೆಳುತ್ತೀರ "ಯಾವ ವಾತಾವರಣದಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುವರೋ, ಯಾವ ಭಾಷೆಯನ್ನು ಕೇಳುತ್ತಾ ಅನುಕರಿಸುತ್ತಾ ಬೆಳೆಯುವರೋ ಅದು ಆ ಮಕ್ಕಳ ತಾಯಿನುಡಿಯಾಗುತ್ತದೆ". ಸರಿಯಾಗಿ ಹೇಳಿದಿರಿ. ಇದನ್ನ ಒಪ್ಪದಿರಲು ಸಾಧ್ಯವೇ ಇಲ್ಲ.

೧) ಬೆಂಗಳೂರಿನಲ್ಲೆ ಎಷ್ಟೊ ಕನ್ನಡಿಗರ international schoolಗೆ ಹೋಗಿ french, spanish ಕಲೆಯುತ್ವೆ ಆದ್ರೆ ಕನ್ನಡವೇ ಕಲಿಯೋದಿಲ್ಲ, ಹುಚ್ಚುತನ. ಈ ಮಕ್ಕಳಿಗೆ ಕರ್ನಾಟಕದಲ್ಲಿದ್ದು ಕನ್ನಡವೇ ಬಾರದು, ಮನೆಯಲ್ಲೂ ಬರೀ english ನಲ್ಲೇ ಮಾತಾಡೋದನ್ನ ನೋಡಿದ್ದೇನೆ. ನೀವು ಹೇಳಿದ ಹಾಗೆ ವಾತಾವರಣದಿಂದ ಆಗೋ ಎಫೆಕ್ಟ್. ಈ ಮಕ್ಕಳಿಗೆ ಯಾವುದು ಗೋಡೆ ಅಂತ ಕೇಳಿದೆ ಅಷ್ಟೆ.

೨) ನನ್ನ ಅಮ್ಮ ೨೫ ವರ್ಷದ ತನಕ ತಮಿಳು ನಾಡಿನಲ್ಲಿ ಬೆಳೆದವರು, ಆಮೇಲೆ ಕರ್ನಾಟಕಕ್ಕೆ ಬಂದವರು. ಅರೇ ಬರೆ ತಮಿಳುನಾಡು ಕನ್ನಡಿಗರ ಹಾಗೆ ಮಾತಾಡುತ್ತಿದ್ದ್ರಂತೆ. ಆದರೆ ಆಮೇಲೆ ಕನ್ನಡ ಕಲಿತು, ಅದರಲ್ಲೇ ವಿದ್ವತ್ ಮತ್ತು ಬಿ.ಏ ಮಾಡಿದರು, ಕನ್ನಡದಲ್ಲೇ ಪರೀಕ್ಷೆ ಬರೆದವರು. ೩೫ ವರ್ಷದ ನಂತರ ಮೊದಲನೇ ಬಾರಿ ಹಿಂದಿ ಮತ್ತು ಸಂಸ್ಕೃತವನ್ನ ನೋಡಿದೋರು, ಆಮೇಲೆ ೪೦ ವರ್ಷ ಆದಾಗ ಅವರು ಇವುಗಳಲ್ಲಿಯೂ ವಿದ್ವತ್ ಮಾಡಿದರು. ಕರ್ನಾಟಕದಲ್ಲೇ ತಮಿಳು ಮತ್ತು ಕನ್ನಡ teacher ಆಗಿ, ಕೊನೆಗೆ ಹಿಂದಿ ಟೀಚರ್ ಆಗಿ ರಿಟೈರ್ ಆದ್ರು. ಈ ಕಾಂಟೆಕ್ಷ್ಟಲ್ಲಿ "ಕಲಿಯುವ ತನಕ ಅದು ಗೋಡೆ ಅಂದಿದ್ದು" ಅಷ್ಟೆ!!

೩) ನನಗೆ ೨೦ ವರ್ಷ ಆಗೋ ತನಕ ತಮಿಳು ತಿಳಿದಿರಲಿಲ್ಲ, ಆದರೆ ಸಿಂಗಾಪುರದಲ್ಲಿ ೫ ವರ್ಷ ಇದ್ದಾಗ ತಮಿಳು ಮಾತಾಡಲು, ಬರೆಯಲು, ಓದಲೂ ಕಲಿತೆ. ಚೈನೀಸ್ ಸ್ವಲ್ಪ ಕಲೆತೆ. ಸಂಸ್ಕೃತ ಕೂಡ ೩೦ ವರ್ಷಗಳ ನಂತರ ಕಲೆಯಲು ಆರಂಬಿಸಿರುವೆ, ಸ್ವಲ್ಪ ಕಲೆಯುತ್ತಲೂ ಇರುವೆ. ಕೆಲೆಯುತ್ತಾ ಇದ್ದಂತೆ ಆ ಗೋಡೆ ಗೋಡೆಯಾಗಿ ಉಳಿಯುವುದಿಲ್ಲ. ಈ ಕಾಣ್ಟೆಕ್ಶ್ಟ್ ನಲ್ಲಿ ಹೇಳಿದ್ದೇನೆ ಅಷ್ಟೆ.

ಕೆಲವರಿಗೆ ಹಿಂದಿ ಬೇಡ, ಕೆಲವರಿಗೆ ತಮಿಳು ಬೇಡ, ಕೆಲವರಿಗೆ ಆಂಗ್ಲ ಬೇಡ, ಯಾರಿಗೂ ಸಂಸ್ಕೃತ ಬೇಡ, ಹಾಗಂತ ಯಾವುದಾದ್ರೂ ಭಾಷೆಯನ್ನ ಛಿಂದಿಛಿಂದಿ ಮಾಡಬೇಕೆಂಬ ಪದಗಳು ಸರಿಯೇ ಅಂತ ನನ್ನ ವಾದವಾಅಗಿತ್ತು.

ಬಿಡಿ ಗುರುಗಳೆ. ಇಂತಾ ವಾದ ವಿವಾದಗಳಲ್ಲಿ ಸೋಲು-ಗೆಲುವು ಅನ್ನೋದು ಸರಿಯಲ್ಲ. ಇವೆಲ್ಲ ಕಲೆಯುವ experiences ಅಷ್ಟೆ. ನಿಮ್ಮಿಂದ, ಎಲ್ಲರಿಂದ ಸಾಕಷ್ಟು ಕಲೆತಿರುವೆ. Sometimes you need to flow against the stream to get a feel for the current ಅಂತ ನನ್ನ ಅನಿಸಿಕೆ. ಈಗ i have got a feel for the current (electric current ಕೂಡ ಹೆಹೆ) ಹೆಹೆ :) ಜೆಲ್ಲಿಫಿಶ್ ಗಳು, ಶಾರ್ಕ್ ಗಳು, ತಿಮಿಂಗಳಗಳು, ಮೊಸಳೆಗಳು, ಶ್ಟಾರ್ಫಿಶ್ಗಳು ಎಲ್ಲಾ ಇರಲೇಬೇಕಲ್ಲ್ವೆ. ಈಜ್ತಾ ಇರೋಣಾ.

ತಪ್ಪಿದ್ದಲ್ಲಿ ಕ್ಷಮಿಸಿ.

ಪ್ರೀತಿಯ,
ಯಾರಯ್ಯ

Anonymous ಅಂತಾರೆ...

ಪ್ರೀತಿಯ ಅಲ್ಲಮರೇ,
ಎದುರಿನವ ಸಂಯಮ ಕಳೆದುಕೊಂಡು ಮಾತನ್ನಾಡಿದಾಗ ನಾವೂ ಅದನ್ನೇ ಮಾಡಿದರೆ ಅದು ತಪ್ಪು ಪ್ರತಿಕ್ರಿಯೆ ಆದೀತು. ನಿಮ್ಮ ಒಳ್ಳೊಳ್ಳೆ ಮಾತುಗಳು ಕೂಡಾ ಆಗ ತೂಕ ಕಳೆದು ಕೊಂಡು ಬಿಡುವ ಅಪಾಯವಿದೆ.
ಆದರೂ ನೀವು ತಪ್ಪಾಯ್ತು ಎಂದು ಕೇಳಿ ದೊಡ್ಡಸ್ತಿಕೆ ತೋರ್ಸಿದೀರ. ತುಂಬಾ ಸಂತಸ. ಇದು ನಿಮ್ಮ ಉದ್ದೇಶದಲ್ಲಿ ಹುಳುಕು ಇಲ್ಲದ್ದನ್ನು ತೋರಿಸುತ್ತದೆ. ಕನ್ನಡ ನಾಡನ್ನು ನಾವೆಲ್ಲ ಸೇರಿಯೇ ಕಟ್ಟಬೇಕಿದೆ. ಯಾರೇ ಆಗಲಿ ನಮ್ಮ ದೃಷ್ಟಿಕೋನಗಳು ನಮಗೆ ಸರಿ ಎನ್ನಿಸುವ ಕಾರಣದಿಂದಲೇ ಅವನ್ನು ಅಷ್ಟು ಬಲವಾಗಿ ಪ್ರತಿಪಾದಿಸುತ್ತೇವೆ. ಆದರೆ ನಿಜವಾಗ್ಲು ಹೆಚ್ಚು ಸರಿಯಾದದ್ದು ಎನ್ನುವ ಬೆಣ್ಣೆಯನ್ನು ಹೊರತೆಗೆತೆಗೆಯಲು ವಿಚಾರ ಮಂಥನ ಮಾಡೋಣ. ಅಮೃತ ಹುಟ್ಟುವ ಮುನ್ನ ಹಾಲಾಹಲ ಹುಟ್ಟಿದ್ದೂ ನಿಜವೇ ಬಿಡಿ. ನಮ್ಮ ನಾಡು ಕಟ್ಟಲು ನಮಗೆ ಅಲ್ಲಮರೂ ಬೇಕು, ಯಾರಯ್ಯನವರೂ ಬೇಕು. ಅಷ್ಟೇಕೆ ಬರಿ ಮುಳ್ಳಿನಂತೆ ವ್ಯಂಗ್ಯದಿಂದ ಚುಚ್ಚುವ ಅನಾನಿಮಸ್ಸುಗಳೂ ಬೇಕು.
ಡಾಕ್ಟರ್ ಅವರು ಬರೆದಂತೆ, ಕನ್ನಡವೇ ನಮ್ಮ ಜಾತಿ, ಧರ್ಮ, ದೇವರು ಆಗಬೇಕು.

ನನ್ನಿ
ತಿಮ್ಮಯ್ಯ

Anivaarya ಅಂತಾರೆ...

ಪ್ರೀತಿಯ ತಿಮ್ಮಯ್ಯ,

ತುಂಬಾ ಪಕ್ವವಾದ ಯೋಚನೆ. ಇಂತಾ ಒಂದು diverse teamನಲ್ಲಿ ಕೆಲವು ಮನಸ್ತಾಪಗಳು, ಬೇರೆ ಬೇರೆ ರೀತಿಗಳು, ನೀತಿಗಳು, ಅನಿಸಿಕೆಗಳು, ಅಭಿಪ್ರಾಯಗಳು, biasesಗಳು ಬರೋದು/ಇರೋದು ಸಹಜ. ಆದ್ರೆ ಅದು ನಮ್ಮ ಗುರಿಯಿಂದ ನಮ್ಮನ್ನ ಸರಿಯದೇ ಇರೋ ಹಾಗೆ ನೋಡಿಕೊಳ್ಳಬೇಕು ಅಂತ ಚೆನ್ನಾಗಿ ವ್ಯಕ್ತಪಡೆಸಿದ್ದೀರ.

ಕನ್ನಡದ ರಕ್ಷಣೆ ನಮ್ಮ ಶಿಕ್ಷಣೆಯಿಂದ ಆಗುತ್ತೆ. ನಾವು ನಮ್ಮ ಮಕ್ಕಳಲ್ಲಿ ಈ ಪ್ರೇಮ ಹುಟ್ಟಿಹಾಕಬೇಕು. ಹಾಗೆಯೇ ನಮ್ಮ ಭಾಷಾ ಶುದ್ದಿ ಮಾಡಲು ಯತ್ನಿಸಬೇಕು, ಆಂಗ್ಲ ಭಾಷೆಯ ಪ್ರಯೋಗವನ್ನ ಸ್ವಲ್ಪ ಕಡಿಮೆ ಮಾಡ್ಕೊತಾ ಬರೋ ಪ್ರಯತ್ನ ಈ ದಿಸೆಯಲ್ಲಿ ಹಾಕುತ್ತಿರುವ ಮೊದಲನೆಯ ಹೆಜ್ಜೆ. ಇಲ್ಲಿ, ಕ್ಯಾನಡ, ಕನ್ನಡ ಸಂಘಗಳು ಬರೀ ಮನರಂಜನಾ ಕಾರ್ಯಕ್ರಮಗಳನ್ನ ಆಯೋಜಿಸುತ್ತವೆ. ಅವುಗಳಲ್ಲಿ ಈ ನಮ್ಮ ಬ್ಲಾಗಿನಲ್ಲಿ ಕಾಣುವಂತಹಾ ವಿಷಯಗಳನ್ನ ಚರ್ಚಿಸಬೇಕು ಅನ್ನೋ ಹೊಸ ಹುಮ್ಮಸ್ಸು ಬಂದಿದೆ, ಮಾಡಿಯೇ ಮಾಡಬೇಕು.

ಇದಲ್ಲದೆ ನಮ್ಮದೇ ಆದ ರೀತಿಯಲ್ಲಿ ನಮ್ಮ ಅನೇಕ ಭಾರತೀಯ ಸ್ನೇಹಿತರಿಗೆ ನಮ್ಮ ಭಾಷೆಯ ಅರಿವು ಉಂಟುಮಾಡಿಸೋ ಯತ್ನ ಮಾಡ್ತಾ ಇದೀವಿ ನಾನು ಮತ್ತು ನನ್ನ ಹೆಂಡ್ತಿ. ಆಶ್ಚರ್ಯವೇನೆಂದರೆ ಅವರು ತುಂಬಾ ಚೆನ್ನಾಗಿ ಸ್ವೀಕರಿಸುತ್ತಾರೆ. ಒಬ್ಬ ತಮಿಳು ಸ್ನೇಹಿತ ಅವನ ತಿರುಕ್ಕ್ಕೊರಳ್ ಬಗ್ಗೆ ಹೇಳುವಾಗ ಅವನಿಗೆ ನಮ್ಮ ಮಂಕೊತಿಮ್ಮನ ಕಗ್ಗದ ಅಧ್ಬುತ ತಿಣುಕುಗಳಿಗೆ ಪರಿಚಯಿಸಿದೆ, ಕೇಳಿ ಸುಸ್ತಾಗೋದ. ನಮ್ಮಲ್ಲಿ ಇದೆ, ನಮಗೆ ತಿಳಿದರೆ ಬೇರೆಯವ್ರ್ಗೆ ತಿಳಿಸಬಹುದು.

ಒಟ್ಟಿಗೆ ಸೇರಿಯೇ ಈ ಎಂ.ಜಿ ರೋಡ್, ಕಾರ್ಮೆಲ್ ಕಾನ್ವೆಂಟ್ ಮನೋಭಾವಗಳನ್ನ ಕನ್ನಡೀಕರಣ ಮಾಡಬೇಕು. ಆದ್ರೆ ಇದು forceನಿಂದ ಆಗದು, ವತ್ತಡದಿಂದ ಬರೀ ಅಸಹ್ಯ ಉಂಟಾಗುತ್ತೆ ಅಷ್ಟೆ. ಹನಿ ಹನಿ ಗೂಡಿದರೆ ಹಳ್ಳ, ಮೊದಲು ನಾವು ತಿಳಿಯಬೇಕು, ಕಲಿಯಬೇಕು, ನಮ್ಮವರಿಗೆ ಅರಿವಾಗಾದಾಗ ಆ ಹುಮ್ಮಸ್ಸು ಹರಡೋದು ಸುಲಬ.

ಏನ್ಗುರು ಅಂತಹಾ ಪ್ರಯೋಗಗಳು ಆ ದಿಕ್ಕಿನ್ನಲ್ಲಿ ನಮಗೆ equip ಮಾಡಲಿ ಎಂಬ ನನ್ನ ಬರವಸೆ ಈಗ ಗಟ್ಟಿಯಾಗಿದೆ.

Anonymous ಅಂತಾರೆ...

ತಿಮ್ಮಯ್ಯ...

ನಮ್ಮ ಸಂಯಮ ಎಷ್ಟಿದೆ ಅಂದರೆ ಇವರು ಎಲ್ಲಡೆ ಏನೇನೋ ಹೇಳಿದರು ಅದಕ್ಕೆ ಪ್ರತಿರೋಧ ನಾವು ಒಡ್ಡಿರುವ ಕುರುಹು ಇಲ್ಲ. ಇವರು ಈ ಸುಳ್ಳು ಪೊಳ್ಳು ಹರಡಲು ಸಂಘಗಳನ್ನು ಕಟ್ಟಿಕೊಂಡು ಊರೂರು ಸುತ್ತಿ ಇದನ್ನೇ ಹೇಳುತ್ತಾದೆ ಇಂದೂ ಕೂಡ. ಅದನ್ನೆಲ್ಲ ನಾವು ಕನ್ನಡ ನಾಡಿನಲ್ಲಿ ಇರುವ ಹೆಚ್ಚು ಮಂದಿ, ಹೆಚ್ಚು ಜಾತಿಯ ಮಂದಿ ಎಂದು ಪ್ರತಿರೋಧಿಸಿಲ್ಲ.

ಆದರೆ ಇವರು ಕನ್ನಡಕ್ಕೆ ತಿರುಗಿ ಬಿದ್ದಾಗ ನಮಗೆ ಸಹಿಸಲು ಆಗುವುದಿಲ್ಲ. ಕನ್ನಡಕ್ಕೆ ಇವರ ಎಡರುಗಾಲು ಕೀಳಲೇ ಬೇಕು. ಇಲ್ಲದೇ ಹೋದರೆ ನಮ್ಮ ಕನ್ನಡ ಸತ್ಯವ ಹೀನವಾಗಿ, ಸಂಸ್ಕೃತದ ಊರುಗೋಲು ಹಿಡಿಯಬೇಕಾಗುತ್ತದೆ. ಆಗಲೇ ಕೊಂಚ ಸಂಸ್ಕೃತದ ಮೇಲೇ ಅವಲಂಬಿತವಾಗಿದೆ. ಇದರಿಂದಲೇ ಹೆಚ್ಚು ಹೆಚ್ಚು ಮಂದಿಗೆ ತೊಂದರೆ ಆಗುತ್ತಿದೆ. ಇದರಿಂದ ಲಾಭ ಬರೀ ಬೆರಳಣಿಕೆಯಣ್ಟು ಇರುವ ಒಂದು ಪಂಗಡಕ್ಕೆ ಅನ್ನುವುದು ಯಾವ ಹುಂಬನಿಗೂ ಅರ್ಥವಾಗುವ ವಿಷಯ.


ನಿಮ್ಮ ಮಾತುಗಳಿಗೆ ನನ್ನಿ(ಧನ್ಯವಾದ)

ನೀವು ಈ ಕಟ್ಟರವಾದಿಗಳನ್ನು ಹಿಡಿತದಲ್ಲಿ ಇಡದಿದ್ದರೆ, ಇವರು ನಮ್ಮ ಕನ್ನಡ ಸಂಸ್ಕೃತಿಯನ್ನು ಹಾಳುಗೆಡವವರು.

-ಅಲ್ಲಮ

Anonymous ಅಂತಾರೆ...

ಗೆಳೆಯರೇ,
ನಿಮ್ಮ ವಾದ ವಿವಾದಗಳನ್ನು ನೋಡಿದ ಮೇಲೆ ನನ್ನ ಅರಿವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸಾಗುತ್ತಿದೆ.
ಇದು ಕನ್ನಡ ಲಿಪಿ, ಕನ್ನಡದಲ್ಲಿ ಸಂಸ್ಕೃತ ಸೇರಿಕೊಂಡ ಬಗೆ ಮತ್ತು ಒಂದು ಇನ್ನೊಂದಕ್ಕಿಂತ ಮೇಲರಿಮೆ ಹುಟ್ಟುಹಾಕಲು ಇದ್ದ ಕಾರಣಗಳನ್ನು ಹುಡುಕುವ ಪ್ರಯತ್ನ.
ನಾವೆಲ್ಲ ತಿಳಿದಂತೆ ಕನ್ನಡ ಭಾಷೆ ಎಷ್ಟು ಹಳೆಯದು? ಈ ಪ್ರಶ್ನೆಗೆ ಥಟ್ ಅಂತ ಬರುವ ಉತ್ತರ ೨೦೦೦ ವರ್ಷಗಳು. ಆದರೆ ೨೦೦೦ ವರ್ಷಗಳ ಹಳಮೆ ಇರುವುದು ಲಭ್ಯವಿರುವ ಕನ್ನಡ ಭಾಷಾ ಸಾಹಿತ್ಯಕ್ಕೆ.
ಆದರೆ ಒಂದು ಭಾಷೆ, ಭಾಷೆಯಾಗಿ ಅಸ್ತಿತ್ವಕ್ಕೆ ಬರಲು ಎಷ್ಟು ಕಾಲ ಬೇಕಾದೀತು? ಒಂದು ವಸ್ತುವನ್ನು ಒಂದು ಹೆಸರಿನಿಂದ ಒಂದು ಜನಾಂಗದ ಜನರೆಲ್ಲಾ ಗುರುತಿಸಿ ಕರೆಯಬೇಕೆಂದರೆ ಎಷ್ಟು ಸಮಯ ಬೇಕಾದೀತು? ಅಂದರೆ ಮರವನ್ನು ಮರ ಎಂದು ಒಂದು ಪ್ರದೇಶದಲ್ಲಿ ವಾಸಿಸುವ ಎಲ್ಲ ಜನರೂ ಗುರುತಿಸುವಂತಾಗಲು, ಹಾಗೇ ಸಾವಿರಾರು ಪದಗಳು ಹುಟ್ಟಲು, ಆ ಪದಗಳು ವಾಕ್ಯರೂಪ ಪಡೆಯಲು, ಅದಕ್ಕೊಂದು ಲಿಪಿ ಹುಟ್ಟಲು . . . ಈ ಚಕ್ರಕ್ಕೆ ಸಾವಿರಾರು ವರ್ಷಗಳಲ್ಲ, ಒಂದೆರಡು ಲಕ್ಷ ವರ್ಷಗಳು ಬೇಕು. ಅಂದರೆ ನಾವು ಕನ್ನಡಿಗರೆಲ್ಲ ಕನ್ನಡ ನಾಡೆನ್ನುವ ಈ ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳಿಂದ ಒಟ್ಟಾಗಿ ಬದುಕುತ್ತಿರುವ ಒಂದು ಜನಾಂಗಕ್ಕೆ ಸೇರಿದ್ದೇವೆ.
ಧರ್ಮ, ಜಾತಿ, ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮ. . . . ಕಡೆಗೆ ದೇವರು ಎನ್ನುವುದೂ ಕೂಡಾ ನಮ್ಮ ಅರಿವಿಗೆ ಬಂದದ್ದು ಆಮೇಲೆಯೇ ಮತ್ತು ಎಲ್ಲಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ನಮ್ಮ ಅರಿವಿಗೆ ಇವು ಬಂದದ್ದು ಕನ್ನಡದಿಂದಲೇ.
ಯಾಕೆ ಅಂದರೆ ನಮ್ಮ ಜನಾಂಗದ ಭಾಷೆ ಕನ್ನಡವಾದ್ದರಿಂದಲೇ.
ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಕನ್ನಡದ, ಕನ್ನಡಿಗರ ಬದುಕಿನ ಮೇಲೆ ಪ್ರಭಾವ ಬೀರಿರುವುದು ಇತ್ತೀಚಿಗೆ. ಆದರೆ ಸಂಸ್ಕೃತ ತನ್ನ ಪ್ರಭಾವ ಬೀರಿರುವುದು ಬಹಳ ಹಿಂದಿನಿಂದಲೇ. ಅದು ನಮ್ಮ ನುಡಿಯನ್ನು ಹೊಕ್ಕಿದ್ದು ಹೇಗೆ?
ಸಂಸ್ಕೃತ ಕನ್ನಡಕ್ಕಿಂತ ಬಹಳ ಹಿಂದೆಯೇ ಲಿಪಿಯನ್ನು ಪಡೆಯಿತು. ಹಾಗಾಗಿ ಅರಿವನ್ನು ಸಂಸ್ಕ್ರುತ ಭಾಷೆಯಲ್ಲಿ ಬರೆದಿಡಲಾಯಿತು. ಸರಳವಾಗಿ ಅರ್ಥ ಮಾಡಿಸಲು ಒಂದು ಉದಾಹರಣೆ ಹೇಳುತ್ತೇನೆ.
ಸಂಸ್ಕೃತ ಭಾಷೆಯಲ್ಲಿ ಶಿಲ್ಪ ಶಾಸ್ತ್ರ ಎನ್ನುವ ಒಂದು ಜ್ಞಾನ ಭಂಡಾರವಿದೆ (ಶಿಲ್ಪವೋ, ಕೃಷಿಯೋ, ಆರೋಗ್ಯವೋ . . ಎಂಥದೋ ಒಂದು). ಕನ್ನಡ ನಾಡಿನ ಒಂದು ಊರನ್ನು ಈಗ ಕಲ್ಪಿಸಿಕೊಳ್ಳಿರಿ. ಆಗಿನ್ನೂ ಕನ್ನಡಕ್ಕೆ ಲಿಪಿಯೂ ಇರಲಿಲ್ಲ.
ಸಂಸ್ಕೃತದಲ್ಲಿರುವ ಆ ಅರಿವನ್ನು ಪಡೆಯಲು ಕನ್ನಡಿಗನೊಬ್ಬ ಸಂಸ್ಕೃತ ಕಲಿಯುತ್ತಾನೆ. ಈಗ ಎರಡು ವಿಷಯ ನೋಡೋಣ.
೧. ಕನ್ನಡ ಲಿಪಿ ಹುಟ್ಟಿದ ಬಗೆ. ೨. ಸಂಸ್ಕೃತದ ಬಗ್ಗೆ ಮೇಲರಿಮೆ ಹುಟ್ಟಿಕೊಂಡಿರುವ ಬಗೆ.
೧. ಕನ್ನಡ ಲಿಪಿ ಹುಟ್ಟಿದ ಬಗೆ: ಆ ಊರಿನ ಕೆಲ ಜನ ಸಂಸ್ಕೃತದಲ್ಲಿರುವ ಜ್ಞಾನವನ್ನು ಪಡೆಯಲು ತೀರ್ಮಾನಿಸಿದರೂ ಅದನ್ನು ಅರ್ಥ ಮಾಡಿಕೊಳ್ಳಲು ಕನ್ನಡವನ್ನು ಮಾಧ್ಯಮವಾಗಿ ಬಳಸಿಕೊಳ್ಳಲೇ ಬೇಕಾಗಿದೆ, ಕಾರಣ ಅವರ ತಾಯಿನುಡಿ ಕನ್ನಡ. 'ಅಹಂ ಬ್ರಹ್ಮಾಸ್ಮಿ' ಇದನ್ನು ಅರ್ಥ ಮಾಡಿಕೊಳ್ಳುವುದು 'ನಾನು ಬ್ರಹ್ಮನಿದ್ದೇನೆ' ಎಂದೆ. ಅಂದರೆ ಮೂಲ ಸಂಸ್ಕೃತಕ್ಕೆ ಪ್ರತಿಪದಅರ್ಥ, ವಾಕ್ಯಾರ್ಥ, ತಾತ್ಪರ್ಯ ಕನ್ನಡದಲ್ಲೇ ಇರುವುದು ಕಲಿಕೆಗೆ ಸುಲಭ. ಆದರೆ ಕನ್ನಡಕ್ಕೆ ಲಿಪಿಯೇ ಇಲ್ಲವಲ್ಲ. ಸರಿ, ಕನ್ನಡಕ್ಕೆ ಹಾಗೆ ಲಿಪಿಯ ಅಗತ್ಯವನ್ನು ಕಂಡುಕೊಂಡು ಲಿಪಿ ಹುಟ್ಟು ಹಾಕಿದರು. ಆ ಭರದಲ್ಲಿ ಕನ್ನಡ ಭಾಷೆಯಲ್ಲಿ ಸ್ವಭಾವತಃ ಇಲ್ಲದ ಮಹಾಪ್ರಾಣಗಳು, ಋಕಾರಾದಿ ಅಕ್ಷರಗಳು ಜನ್ಮ ತಳೆದವು. ಇದು ಕನ್ನಡ ಲಿಪಿಯ ಹುಟ್ಟಿನ ರೀತಿ. ಕನ್ನಡದ ಲಿಪಿಯೇನೋ ಬಂತು ಆದ್ರೆ ಅದರ ಕಲಿಕೆಯ ಮಹತ್ವ ಎಲ್ಲರಿಗೂ ತಲುಪದೆ ಕೆಲವೇ ಜನಗಳ ಸ್ವತ್ತಾಯಿತು. (ಉದ್ದೇಶಪೂರ್ವಕವಾಗಿ ಹಾಗೆ ಮಾಡಲಾಯಿತು ಎನ್ನುವುದೂ ಸ್ವಲ್ಪ ಮಟ್ಟಿಗೆ ನಿಜವಿರಬಹುದು). ನೀವು ಗಮನಿಸಿ, ಕನ್ನಡಿಗರ (ಭಾರತೀಯರ) ಸಾಕ್ಷರತಾ ಪ್ರಮಾಣ ಇತ್ತೀಚಿನವರೆಗೂ ಅದೆಷ್ತು ಕಡಿಮೆಯಿತ್ತು ಅಂತ.
೨. ಸಂಸ್ಕೃತದ ಬಗ್ಗೆ ಮೇಲರಿಮೆ ಹುಟ್ಟಿಕೊಂಡಿರುವ ಬಗ್ಗೆ : ಯಾರು ಶಿಲ್ಪ ಶಾಸ್ತ್ರವನ್ನು ಅರಿತಿರುವನೋ ( ಅಥವಾ ಇನ್ನಾವುದೇ ಶಾಸ್ತ್ರವನ್ನು . . ) ಅವನು ಸಹಜವಾಗಿಯೇ ಆ ವಿಷಯದಲ್ಲಿ ಪಂಡಿತ. ಜನ ಅವನ ಸಲಹೆ ಮಾರ್ಗದರ್ಶನ ಪಡೆಯುವುದು ಸಹಜವೇ ಅಲ್ಲವೇ. ಹೀಗಾಗಿ ಅಂತಹವರು ಸಮಾಜದಲ್ಲಿ ಗಣ್ಯರಾದರು.ಇವರು ಅನುಕರಣೀಯರಾದರು. ಇವರ ಮಾತಿನಲ್ಲಿ ಬಳಸಲಾಗುವ ಪದಗಳು ಕೂಡಾ ಮೇಲ್ಮಟ್ಟದವು ಎನ್ನುವಂತೆ ಆಯ್ತು. (ಇಂಗ್ಲಿಷರ ಆಳ್ವಿಕೆಯಲ್ಲಿ ಇಂಗ್ಲೀಷ್ ಮಾತಾಡಿದರೆ ಮೇಲರಿಮೆ ಎನ್ನುವಂತೆ ಆಯಿತು) ಹೀಗಾಗಿ ಸಂಸ್ಕ್ರುತ ಪದಗಳನ್ನು ಬಳಸುವುದು ಉನ್ನತ ದರ್ಜೆಯದು ಅನ್ನುವಂತಾಯಿತು.
ಕನ್ನಡ ಲಿಪಿಯನ್ನು ಹುಟ್ಟುಹಾಕಿದಂತೆಯೇ, ಕನ್ನಡ ವ್ಯಾಕರಣವನ್ನು ಹುಟ್ಟು ಹಾಕಲಾಯಿತು. ತಮಾಶೆಯೆಂದರೆ ಕನ್ನಡ ಭಾಷೆಯಲ್ಲಿರುವ ಅಕ್ಷರ, ಪದಗಳನ್ನು ಪ್ರತಿನಿಧಿಸುವುದಕ್ಕಿಂತಾ ಸಂಸ್ಕೃತವನ್ನು ಬರೆಯಲು ಅನುವಾಗುವಂತೆ ಕನ್ನಡ ಲಿಪಿಯನ್ನು ಹುಟ್ಟುಹಾಕಿದರೆ, ಸಂಸ್ಕೃತ ಭಾಷೆಯ ವ್ಯಾಕರಣಕ್ಕೆ ಹೊಂದುವಂತೆ ಕನ್ನಡ ವ್ಯಾಕರಣವನ್ನು ಬಗ್ಗಿಸಿದರು, ವ್ಯಾಖ್ಯಾನಿಸಿದರು. ವ್ಯಾಕರಣ ಎನ್ನುವುದು ಆ ಭಾಷೆ ಹೊಂದಿರುವ ನಿಯಮ, ಗುಣ ಲಕ್ಷಣಗಳು, ಆದರೆ ಸಂಸೃತ ವ್ಯಾಕರಣಕ್ಕೆ ಕನ್ನಡವನ್ನು ತುರುಕಲಾಗಿದೆ. ಇವೆಲ್ಲದರ ಪರಿಣಾಮದಿಂದ ಕನ್ನಡ ಭಾಷೆಗೆ ಶ್ರೀಮಂತಿಕೆ ಬಂದಿದೆ ಎಂದೋ ಬಡವಾಗಿದೆ ಎಂದೋ ವಿಶ್ಲೇಷಣೆ ಮಾಡುವುದು ಬೇರೆಯೇ ವಿಷಯ. ಆದರೆ ಹೀಗೆ ಒಂದು ಭಾಷೆಯ ತುಂಬಾ ಅಗತ್ಯ ಇಲ್ಲದಿದ್ದಾಗ್ಲೂ (ಅಗತ್ಯ ಇದ್ದಾಗ ಎಲ್ಲ ಭಾಷೆಯಿಂದ ಪದ ತೊಗೊಳ್ಳೋದು ತಪ್ಪಲ್ಲ. ಅಗತ್ಯ ಇಲ್ಲದೆ ಅನ್ನಕ್ಕೆ ನೂರಾರು ಪದಗಳ ಉದಾಹರಣೆ ಕೊಡಬಹುದು) ಇನ್ನೊಂದು ಭಾಷೆಯ ಪದಗಳನ್ನು ತುಂಬೋದು ಸರಿಯಲ್ಲ.
ಇದೆಲ್ಲ ಒಂದು ಕಡೆ ಆದರೆ, ಜ್ಞಾನ ಸಂಪಾದನೆಗಾಗಿ ನಾಡಿನ ಎಲ್ಲ ಜನರೂ ಸಂಸ್ಕೃತ, ಇಂಗ್ಲಿಷ್ ಕಲಿಯಬೇಕು ಅನ್ನುವ ಸಾಮಾನ್ಯ ಮನಸ್ಥಿತಿಯಿಂದ ಹೊರಬಂದು ನಾವೀಗ ನೋಡಬೇಕಾಗಿದೆ. ಆಸಕ್ತಿಯುಳ್ಳ ಕೆಲವು ಜನ ಆಯಾ ಭಾಷೆಗಳನು ಕಲಿತು ಅಲ್ಲಿರುವ ಜ್ಞಾನ, ವಿಜ್ಞಾನವೇ ಮೊದಲಾದ ಹಿರಿಮೆಗಳನ್ನೆಲ್ಲಾ ಕನ್ನಡಕ್ಕೆ, ಅಂದರೆ ಹೆಚ್ಚು ಕನ್ನಡಿಗರು ಬಳಸುವ ಕ್ಲಿಷ್ಟ ಸಂಸ್ಕೃತ ಪದಗಳಿಲ್ಲದ ಕನ್ನಡಕ್ಕೆ ತರಬೇಕಿದೆ. ಆಗ ಇಡೀ ಜನಾಂಗಕ್ಕೆ ಕಲಿಕೆ ಸುಲಭವಾಗುತ್ತದೆ.ಆಗ ಸಹಜವಾಗಿ ಯಾವುದೆ ವಿಷಯದ ಬಗೆಗಿನ ನಮ್ಮ ಕಲಿಕೆ ಅತ್ಯುತ್ತಮವಾಗಿರುತ್ತದೆ. ವಿಷಯದ ಆಳ ಅರಿವು ತಿಳಿಯುತ್ತದೆ. ಆಗ ನಮ್ಮಿಂದಲೂ ಹೊಸ ಹೊಸ ಅನ್ವೇಷಣೆಗಳು ಸಾಧ್ಯವಾಗುತ್ತದೆ. ನನ್ನ ದೃಷ್ಟಿಯಲ್ಲಿ ಜಾಗತೀಕರಣ ಎದುರಿಸಲು ಇದೇ ಸರಿಯಾದ ಮಾರ್ಗ. ಇವತ್ತು ಇಂಗ್ಲಿಷ್ ಮುಂದಿದೆ ಅಂತ ಅದರ ಬೆನ್ನು ಹತ್ತುವುದರಲ್ಲೇ ನಾವು ಮಗ್ನರಾದರೆ ನಾಳೆ ಆ ಜಾಗಕ್ಕೆ ಫ್ರೆಂಚೋ, ಜರ್ಮನ್ನೋ, ಜಪಾನೀಸೋ ಬಂದರೆ ಅದರ ಬೆನ್ನು ಹತ್ತ ಬೇಕಾಗುತ್ತದೆ. ಅದರ ಬದಲು ಜ್ಞಾನದ ಬೆನ್ನು ಹತ್ತೋಣ. ನಮ್ಮ ಇಂಜಿನಿಯರಿಂಗ್ ಕಲಿಕೆ ನಮ್ಮ ಭಾಷೆಯಲ್ಲಿರಲಿ, ಬೇಕಾದರೆ ಒಂದು ಬೇರೆ ವಿದೇಶಿ ಭಾಷೆಯನ್ನು ಆಪ್ಷನಲ್ ಆಗಿ ಕಲಿಯೋಣ. ಕೆಲವರು ಜಪನೀಸ್, ಕೆಲವರು ಫ್ರೆಂಚ್, ಕೆಲವರು ಇಟಾಲಿಯನ್, ಕೆಲವರು ಇಂಗ್ಲಿಷ್ . . . ಆಗ ಮಾತ್ರ ನಾವು ಪ್ರಪಂಚದ ಅತ್ಯುತ್ತಮರೊಡನೆ ಸ್ಪರ್ಧಿಸಲು ಸಾಧ್ಯ.

ವಿಶ್ವಾಸಿ
ಆನಂದ್

Anonymous ಅಂತಾರೆ...

ಗೆಳೆಯರೇ,
ನಿಮ್ಮ ವಾದ ವಿವಾದಗಳನ್ನು ನೋಡಿದ ಮೇಲೆ ನನ್ನ ಅರಿವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸಾಗುತ್ತಿದೆ.
ಇದು ಕನ್ನಡ ಲಿಪಿ, ಕನ್ನಡದಲ್ಲಿ ಸಂಸ್ಕೃತ ಸೇರಿಕೊಂಡ ಬಗೆ ಮತ್ತು ಒಂದು ಇನ್ನೊಂದಕ್ಕಿಂತ ಮೇಲರಿಮೆ ಹುಟ್ಟುಹಾಕಲು ಇದ್ದ ಕಾರಣಗಳನ್ನು ಹುಡುಕುವ ಪ್ರಯತ್ನ.
ನಾವೆಲ್ಲ ತಿಳಿದಂತೆ ಕನ್ನಡ ಭಾಷೆ ಎಷ್ಟು ಹಳೆಯದು? ಈ ಪ್ರಶ್ನೆಗೆ ಥಟ್ ಅಂತ ಬರುವ ಉತ್ತರ ೨೦೦೦ ವರ್ಷಗಳು. ಆದರೆ ೨೦೦೦ ವರ್ಷಗಳ ಹಳಮೆ ಇರುವುದು ಲಭ್ಯವಿರುವ ಕನ್ನಡ ಭಾಷಾ ಸಾಹಿತ್ಯಕ್ಕೆ.
ಆದರೆ ಒಂದು ಭಾಷೆ, ಭಾಷೆಯಾಗಿ ಅಸ್ತಿತ್ವಕ್ಕೆ ಬರಲು ಎಷ್ಟು ಕಾಲ ಬೇಕಾದೀತು? ಒಂದು ವಸ್ತುವನ್ನು ಒಂದು ಹೆಸರಿನಿಂದ ಒಂದು ಜನಾಂಗದ ಜನರೆಲ್ಲಾ ಗುರುತಿಸಿ ಕರೆಯಬೇಕೆಂದರೆ ಎಷ್ಟು ಸಮಯ ಬೇಕಾದೀತು? ಅಂದರೆ ಮರವನ್ನು ಮರ ಎಂದು ಒಂದು ಪ್ರದೇಶದಲ್ಲಿ ವಾಸಿಸುವ ಎಲ್ಲ ಜನರೂ ಗುರುತಿಸುವಂತಾಗಲು, ಹಾಗೇ ಸಾವಿರಾರು ಪದಗಳು ಹುಟ್ಟಲು, ಆ ಪದಗಳು ವಾಕ್ಯರೂಪ ಪಡೆಯಲು, ಅದಕ್ಕೊಂದು ಲಿಪಿ ಹುಟ್ಟಲು . . . ಈ ಚಕ್ರಕ್ಕೆ ಸಾವಿರಾರು ವರ್ಷಗಳಲ್ಲ, ಒಂದೆರಡು ಲಕ್ಷ ವರ್ಷಗಳು ಬೇಕು. ಅಂದರೆ ನಾವು ಕನ್ನಡಿಗರೆಲ್ಲ ಕನ್ನಡ ನಾಡೆನ್ನುವ ಈ ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳಿಂದ ಒಟ್ಟಾಗಿ ಬದುಕುತ್ತಿರುವ ಒಂದು ಜನಾಂಗಕ್ಕೆ ಸೇರಿದ್ದೇವೆ.
ಧರ್ಮ, ಜಾತಿ, ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮ. . . . ಕಡೆಗೆ ದೇವರು ಎನ್ನುವುದೂ ಕೂಡಾ ನಮ್ಮ ಅರಿವಿಗೆ ಬಂದದ್ದು ಆಮೇಲೆಯೇ ಮತ್ತು ಎಲ್ಲಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ನಮ್ಮ ಅರಿವಿಗೆ ಇವು ಬಂದದ್ದು ಕನ್ನಡದಿಂದಲೇ.
ಯಾಕೆ ಅಂದರೆ ನಮ್ಮ ಜನಾಂಗದ ಭಾಷೆ ಕನ್ನಡವಾದ್ದರಿಂದಲೇ.
ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಕನ್ನಡದ, ಕನ್ನಡಿಗರ ಬದುಕಿನ ಮೇಲೆ ಪ್ರಭಾವ ಬೀರಿರುವುದು ಇತ್ತೀಚಿಗೆ. ಆದರೆ ಸಂಸ್ಕೃತ ತನ್ನ ಪ್ರಭಾವ ಬೀರಿರುವುದು ಬಹಳ ಹಿಂದಿನಿಂದಲೇ. ಅದು ನಮ್ಮ ನುಡಿಯನ್ನು ಹೊಕ್ಕಿದ್ದು ಹೇಗೆ?
ಸಂಸ್ಕೃತ ಕನ್ನಡಕ್ಕಿಂತ ಬಹಳ ಹಿಂದೆಯೇ ಲಿಪಿಯನ್ನು ಪಡೆಯಿತು. ಹಾಗಾಗಿ ಅರಿವನ್ನು ಸಂಸ್ಕ್ರುತ ಭಾಷೆಯಲ್ಲಿ ಬರೆದಿಡಲಾಯಿತು. ಸರಳವಾಗಿ ಅರ್ಥ ಮಾಡಿಸಲು ಒಂದು ಉದಾಹರಣೆ ಹೇಳುತ್ತೇನೆ.
ಸಂಸ್ಕೃತ ಭಾಷೆಯಲ್ಲಿ ಶಿಲ್ಪ ಶಾಸ್ತ್ರ ಎನ್ನುವ ಒಂದು ಜ್ಞಾನ ಭಂಡಾರವಿದೆ (ಶಿಲ್ಪವೋ, ಕೃಷಿಯೋ, ಆರೋಗ್ಯವೋ . . ಎಂಥದೋ ಒಂದು). ಕನ್ನಡ ನಾಡಿನ ಒಂದು ಊರನ್ನು ಈಗ ಕಲ್ಪಿಸಿಕೊಳ್ಳಿರಿ. ಆಗಿನ್ನೂ ಕನ್ನಡಕ್ಕೆ ಲಿಪಿಯೂ ಇರಲಿಲ್ಲ.
ಸಂಸ್ಕೃತದಲ್ಲಿರುವ ಆ ಅರಿವನ್ನು ಪಡೆಯಲು ಕನ್ನಡಿಗನೊಬ್ಬ ಸಂಸ್ಕೃತ ಕಲಿಯುತ್ತಾನೆ. ಈಗ ಎರಡು ವಿಷಯ ನೋಡೋಣ.
೧. ಕನ್ನಡ ಲಿಪಿ ಹುಟ್ಟಿದ ಬಗೆ. ೨. ಸಂಸ್ಕೃತದ ಬಗ್ಗೆ ಮೇಲರಿಮೆ ಹುಟ್ಟಿಕೊಂಡಿರುವ ಬಗೆ.
೧. ಕನ್ನಡ ಲಿಪಿ ಹುಟ್ಟಿದ ಬಗೆ: ಆ ಊರಿನ ಕೆಲ ಜನ ಸಂಸ್ಕೃತದಲ್ಲಿರುವ ಜ್ಞಾನವನ್ನು ಪಡೆಯಲು ತೀರ್ಮಾನಿಸಿದರೂ ಅದನ್ನು ಅರ್ಥ ಮಾಡಿಕೊಳ್ಳಲು ಕನ್ನಡವನ್ನು ಮಾಧ್ಯಮವಾಗಿ ಬಳಸಿಕೊಳ್ಳಲೇ ಬೇಕಾಗಿದೆ, ಕಾರಣ ಅವರ ತಾಯಿನುಡಿ ಕನ್ನಡ. 'ಅಹಂ ಬ್ರಹ್ಮಾಸ್ಮಿ' ಇದನ್ನು ಅರ್ಥ ಮಾಡಿಕೊಳ್ಳುವುದು 'ನಾನು ಬ್ರಹ್ಮನಿದ್ದೇನೆ' ಎಂದೆ. ಅಂದರೆ ಮೂಲ ಸಂಸ್ಕೃತಕ್ಕೆ ಪ್ರತಿಪದಅರ್ಥ, ವಾಕ್ಯಾರ್ಥ, ತಾತ್ಪರ್ಯ ಕನ್ನಡದಲ್ಲೇ ಇರುವುದು ಕಲಿಕೆಗೆ ಸುಲಭ. ಆದರೆ ಕನ್ನಡಕ್ಕೆ ಲಿಪಿಯೇ ಇಲ್ಲವಲ್ಲ. ಸರಿ, ಕನ್ನಡಕ್ಕೆ ಹಾಗೆ ಲಿಪಿಯ ಅಗತ್ಯವನ್ನು ಕಂಡುಕೊಂಡು ಲಿಪಿ ಹುಟ್ಟು ಹಾಕಿದರು. ಆ ಭರದಲ್ಲಿ ಕನ್ನಡ ಭಾಷೆಯಲ್ಲಿ ಸ್ವಭಾವತಃ ಇಲ್ಲದ ಮಹಾಪ್ರಾಣಗಳು, ಋಕಾರಾದಿ ಅಕ್ಷರಗಳು ಜನ್ಮ ತಳೆದವು. ಇದು ಕನ್ನಡ ಲಿಪಿಯ ಹುಟ್ಟಿನ ರೀತಿ. ಕನ್ನಡದ ಲಿಪಿಯೇನೋ ಬಂತು ಆದ್ರೆ ಅದರ ಕಲಿಕೆಯ ಮಹತ್ವ ಎಲ್ಲರಿಗೂ ತಲುಪದೆ ಕೆಲವೇ ಜನಗಳ ಸ್ವತ್ತಾಯಿತು. (ಉದ್ದೇಶಪೂರ್ವಕವಾಗಿ ಹಾಗೆ ಮಾಡಲಾಯಿತು ಎನ್ನುವುದೂ ಸ್ವಲ್ಪ ಮಟ್ಟಿಗೆ ನಿಜವಿರಬಹುದು). ನೀವು ಗಮನಿಸಿ, ಕನ್ನಡಿಗರ (ಭಾರತೀಯರ) ಸಾಕ್ಷರತಾ ಪ್ರಮಾಣ ಇತ್ತೀಚಿನವರೆಗೂ ಅದೆಷ್ತು ಕಡಿಮೆಯಿತ್ತು ಅಂತ.
೨. ಸಂಸ್ಕೃತದ ಬಗ್ಗೆ ಮೇಲರಿಮೆ ಹುಟ್ಟಿಕೊಂಡಿರುವ ಬಗ್ಗೆ : ಯಾರು ಶಿಲ್ಪ ಶಾಸ್ತ್ರವನ್ನು ಅರಿತಿರುವನೋ ( ಅಥವಾ ಇನ್ನಾವುದೇ ಶಾಸ್ತ್ರವನ್ನು . . ) ಅವನು ಸಹಜವಾಗಿಯೇ ಆ ವಿಷಯದಲ್ಲಿ ಪಂಡಿತ. ಜನ ಅವನ ಸಲಹೆ ಮಾರ್ಗದರ್ಶನ ಪಡೆಯುವುದು ಸಹಜವೇ ಅಲ್ಲವೇ. ಹೀಗಾಗಿ ಅಂತಹವರು ಸಮಾಜದಲ್ಲಿ ಗಣ್ಯರಾದರು.ಇವರು ಅನುಕರಣೀಯರಾದರು. ಇವರ ಮಾತಿನಲ್ಲಿ ಬಳಸಲಾಗುವ ಪದಗಳು ಕೂಡಾ ಮೇಲ್ಮಟ್ಟದವು ಎನ್ನುವಂತೆ ಆಯ್ತು. (ಇಂಗ್ಲಿಷರ ಆಳ್ವಿಕೆಯಲ್ಲಿ ಇಂಗ್ಲೀಷ್ ಮಾತಾಡಿದರೆ ಮೇಲರಿಮೆ ಎನ್ನುವಂತೆ ಆಯಿತು) ಹೀಗಾಗಿ ಸಂಸ್ಕ್ರುತ ಪದಗಳನ್ನು ಬಳಸುವುದು ಉನ್ನತ ದರ್ಜೆಯದು ಅನ್ನುವಂತಾಯಿತು.
ಕನ್ನಡ ಲಿಪಿಯನ್ನು ಹುಟ್ಟುಹಾಕಿದಂತೆಯೇ, ಕನ್ನಡ ವ್ಯಾಕರಣವನ್ನು ಹುಟ್ಟು ಹಾಕಲಾಯಿತು. ತಮಾಶೆಯೆಂದರೆ ಕನ್ನಡ ಭಾಷೆಯಲ್ಲಿರುವ ಅಕ್ಷರ, ಪದಗಳನ್ನು ಪ್ರತಿನಿಧಿಸುವುದಕ್ಕಿಂತಾ ಸಂಸ್ಕೃತವನ್ನು ಬರೆಯಲು ಅನುವಾಗುವಂತೆ ಕನ್ನಡ ಲಿಪಿಯನ್ನು ಹುಟ್ಟುಹಾಕಿದರೆ, ಸಂಸ್ಕೃತ ಭಾಷೆಯ ವ್ಯಾಕರಣಕ್ಕೆ ಹೊಂದುವಂತೆ ಕನ್ನಡ ವ್ಯಾಕರಣವನ್ನು ಬಗ್ಗಿಸಿದರು, ವ್ಯಾಖ್ಯಾನಿಸಿದರು. ವ್ಯಾಕರಣ ಎನ್ನುವುದು ಆ ಭಾಷೆ ಹೊಂದಿರುವ ನಿಯಮ, ಗುಣ ಲಕ್ಷಣಗಳು, ಆದರೆ ಸಂಸೃತ ವ್ಯಾಕರಣಕ್ಕೆ ಕನ್ನಡವನ್ನು ತುರುಕಲಾಗಿದೆ. ಇವೆಲ್ಲದರ ಪರಿಣಾಮದಿಂದ ಕನ್ನಡ ಭಾಷೆಗೆ ಶ್ರೀಮಂತಿಕೆ ಬಂದಿದೆ ಎಂದೋ ಬಡವಾಗಿದೆ ಎಂದೋ ವಿಶ್ಲೇಷಣೆ ಮಾಡುವುದು ಬೇರೆಯೇ ವಿಷಯ. ಆದರೆ ಹೀಗೆ ಒಂದು ಭಾಷೆಯ ತುಂಬಾ ಅಗತ್ಯ ಇಲ್ಲದಿದ್ದಾಗ್ಲೂ (ಅಗತ್ಯ ಇದ್ದಾಗ ಎಲ್ಲ ಭಾಷೆಯಿಂದ ಪದ ತೊಗೊಳ್ಳೋದು ತಪ್ಪಲ್ಲ. ಅಗತ್ಯ ಇಲ್ಲದೆ ಅನ್ನಕ್ಕೆ ನೂರಾರು ಪದಗಳ ಉದಾಹರಣೆ ಕೊಡಬಹುದು) ಇನ್ನೊಂದು ಭಾಷೆಯ ಪದಗಳನ್ನು ತುಂಬೋದು ಸರಿಯಲ್ಲ.
ಇದೆಲ್ಲ ಒಂದು ಕಡೆ ಆದರೆ, ಜ್ಞಾನ ಸಂಪಾದನೆಗಾಗಿ ನಾಡಿನ ಎಲ್ಲ ಜನರೂ ಸಂಸ್ಕೃತ, ಇಂಗ್ಲಿಷ್ ಕಲಿಯಬೇಕು ಅನ್ನುವ ಸಾಮಾನ್ಯ ಮನಸ್ಥಿತಿಯಿಂದ ಹೊರಬಂದು ನಾವೀಗ ನೋಡಬೇಕಾಗಿದೆ. ಆಸಕ್ತಿಯುಳ್ಳ ಕೆಲವು ಜನ ಆಯಾ ಭಾಷೆಗಳನು ಕಲಿತು ಅಲ್ಲಿರುವ ಜ್ಞಾನ, ವಿಜ್ಞಾನವೇ ಮೊದಲಾದ ಹಿರಿಮೆಗಳನ್ನೆಲ್ಲಾ ಕನ್ನಡಕ್ಕೆ, ಅಂದರೆ ಹೆಚ್ಚು ಕನ್ನಡಿಗರು ಬಳಸುವ ಕ್ಲಿಷ್ಟ ಸಂಸ್ಕೃತ ಪದಗಳಿಲ್ಲದ ಕನ್ನಡಕ್ಕೆ ತರಬೇಕಿದೆ. ಆಗ ಇಡೀ ಜನಾಂಗಕ್ಕೆ ಕಲಿಕೆ ಸುಲಭವಾಗುತ್ತದೆ.ಆಗ ಸಹಜವಾಗಿ ಯಾವುದೆ ವಿಷಯದ ಬಗೆಗಿನ ನಮ್ಮ ಕಲಿಕೆ ಅತ್ಯುತ್ತಮವಾಗಿರುತ್ತದೆ. ವಿಷಯದ ಆಳ ಅರಿವು ತಿಳಿಯುತ್ತದೆ. ಆಗ ನಮ್ಮಿಂದಲೂ ಹೊಸ ಹೊಸ ಅನ್ವೇಷಣೆಗಳು ಸಾಧ್ಯವಾಗುತ್ತದೆ. ನನ್ನ ದೃಷ್ಟಿಯಲ್ಲಿ ಜಾಗತೀಕರಣ ಎದುರಿಸಲು ಇದೇ ಸರಿಯಾದ ಮಾರ್ಗ. ಇವತ್ತು ಇಂಗ್ಲಿಷ್ ಮುಂದಿದೆ ಅಂತ ಅದರ ಬೆನ್ನು ಹತ್ತುವುದರಲ್ಲೇ ನಾವು ಮಗ್ನರಾದರೆ ನಾಳೆ ಆ ಜಾಗಕ್ಕೆ ಫ್ರೆಂಚೋ, ಜರ್ಮನ್ನೋ, ಜಪಾನೀಸೋ ಬಂದರೆ ಅದರ ಬೆನ್ನು ಹತ್ತ ಬೇಕಾಗುತ್ತದೆ. ಅದರ ಬದಲು ಜ್ಞಾನದ ಬೆನ್ನು ಹತ್ತೋಣ. ನಮ್ಮ ಇಂಜಿನಿಯರಿಂಗ್ ಕಲಿಕೆ ನಮ್ಮ ಭಾಷೆಯಲ್ಲಿರಲಿ, ಬೇಕಾದರೆ ಒಂದು ಬೇರೆ ವಿದೇಶಿ ಭಾಷೆಯನ್ನು ಆಪ್ಷನಲ್ ಆಗಿ ಕಲಿಯೋಣ. ಕೆಲವರು ಜಪನೀಸ್, ಕೆಲವರು ಫ್ರೆಂಚ್, ಕೆಲವರು ಇಟಾಲಿಯನ್, ಕೆಲವರು ಇಂಗ್ಲಿಷ್ . . . ಆಗ ಮಾತ್ರ ನಾವು ಪ್ರಪಂಚದ ಅತ್ಯುತ್ತಮರೊಡನೆ ಸ್ಪರ್ಧಿಸಲು ಸಾಧ್ಯ.

ವಿಶ್ವಾಸಿ
ಆನಂದ್

Anonymous ಅಂತಾರೆ...

"ಸಂಸ್ಕೃತ ಕನ್ನಡಕ್ಕಿಂತ ಬಹಳ ಹಿಂದೆಯೇ ಲಿಪಿಯನ್ನು ಪಡೆಯಿತು. ಹಾಗಾಗಿ ಅರಿವನ್ನು ಸಂಸ್ಕ್ರುತ ಭಾಷೆಯಲ್ಲಿ ಬರೆದಿಡಲಾಯಿತು. ಸರಳವಾಗಿ ಅರ್ಥ ಮಾಡಿಸಲು ಒಂದು ಉದಾಹರಣೆ ಹೇಳುತ್ತೇನೆ."

ಈ ಬಗ್ಗೆ ಒಂದು ಮಾತು.. ಇವರು "ದೇವನಾಗರಿ"ಯನ್ನು ಇಲ್ಲಿ ಸಂಸ್ಕೃತ ಪಡೆದ ಲಿಪಿ ಎಂದು ಅಂದುಕೊಂಡು, ಅದು ಕನ್ನಡಕ್ಕಿಂತ ಹಳತು ಅಂದಿದ್ದರೆ ಅದು ತಪ್ಪು.

http://ancientscripts.com/ws_timeline.html
ಕನ್ನಡ ಲಿಪಿ ದೇವನಾಗರಿಗಿಂತ ಹಳತು. ಹಾಗೆ ಕನ್ನಡ ಲಿಪಿಯ ತಾಯಿ ಕದಂಬ ಲಿಪಿ, ದೇವನಾಗರಿಯ ತಾಯಿ ನಾಗರಿಗಿಂತ ಹಳತು.

ಸಂಸ್ಕೃತವನ್ನು ಮೊದಲು ಬರೆದುದು ಪಾರಸಿ ಲಿಪಿಯಲ್ಲಿ/ಗಾಂಧಾರ ಲಿಪಿಯಲ್ಲಿ. ಅದಕ್ಕೆ ಸಂಸ್ಕೃತ ಹುಟ್ಟಿದ್ದು ಈಗಿನ ಅಫಗಾನಿಸ್ತಾನ, ಇರಾನ್ ಹತ್ತಿರ ಅಂತ ದಟ್ಟವಾದಗಳಿವೆ.

ಅದಕ್ಕೆ ಸಂಸ್ಕೃತದಲ್ಲಿರುವ sound system/phonteic system ಪಾರಸೀ/ಇರಾಕ್ ನುಡಿಗಳಿಗೆ ಹತ್ತಿರವಾಗಿದೆ.

ಆದರೆ..

ಆನಂದರು "ಸಂಸ್ಕೃತವು ಕನ್ನಡಕ್ಕಿಂತ ಮೊದಲು ಬರೆಯಲಾಯಿತು"(ಲಿಪಿಯ ಸಂಗತಿ ಬಿಟ್ಟು) ಎಂದು ಹೇಳಿದ್ದರೆ ಅದು ಸರಿ. ಕನ್ನಡದ ಅರಸರು ಸಂಸ್ಕೃತ ಶಾಸನಗಳನ್ನು ಕನ್ನಡ ಲಿಪಿಯಲ್ಲೇ ಬರೆದಿರುವುದು ಗಮನಿಸ-ತಕದ್ದು.,

ನನ್ನಿ! ಹದುಳವಿರಲಿ!

ಮಾತುಕತೆ ಚನ್ನಾಗಿ ನಡೆದಿದೆ.

Anonymous ಅಂತಾರೆ...

ಅಲ್ಲಮರೇ,

ಸರಿಯಾಗಿದೆ. ಅಂತಹ ಹುನ್ನಾರಗಳನ್ನು ನಾವು ವಾದಗಳಿಂದ ಗೆಲ್ಲೋಣ.
ಅವರಲ್ಲಿಯೂ ಹೆಚ್ಚಿನವರು ತಮ್ಮ ಮಾರ್ಗದಿಂದಲೇ ಕನ್ನಡದ ಉದ್ಧಾರ ಸಾಧ್ಯ ಅಂದು ಕೊಡಿರುವುದು ನಿಜ. ಇತ್ತೀಚಿಗೆ ಪ್ರತಾಪ ಸಿಂಹರ ಅಂಕಣದಲ್ಲಿ (ವಿ.ಕ) ಅವರು ಅಂಬೇಡ್ಕರ್ ಬಗ್ಗೆ ಬರೆಯುತ್ತಾ ಸಂಸ್ಕೃತವನ್ನು ಅಂಬೇಡ್ಕರ್ ಅವರು ಕಲಿತು, ರಾಷ್ಟ್ರಭಾಷೆಯಾಗಿ ಮಾಡಿ ಎಂದರು. ಸಂಸ್ಕೃತ ಕಲಿತು ಸುಸಂಸ್ಕೃತರಾದರು. ಎಲ್ಲ ಹಿಂದುಳಿದವರೂ ಹೀಗೆ ಸುಸಂಸ್ಕೃತರಾಗಬೇಕು ಅನ್ನುವ ಅರ್ಥದಲ್ಲಿ ಬರೆದಿದ್ದದ್ದು ಇದೆ. ಸಂಸ್ಕೃತ ಕಲಿತವರೆ ಉತ್ತಮರು ಎನ್ನುವ ಮನಸ್ಥಿತಿಗೆ ಇದು ಉದಾಹರಣೆ. ಇಂತಹ ಚಿಂತನೆಗಳು ಅಂತಹ ಜನರ ಉದ್ದೇಶ, ಅರಿವುಗಳ ಬಗ್ಗೆ ಜನಸಾಮಾನ್ಯರಲ್ಲಿ ಕಿರಿಕಿರಿ ಹುಟ್ಟುಹಾಕುತ್ತದೆ. ಆದರೆ ನಾಡು ಕಟ್ಟಲು ಮನಸ್ಸಿರುವ, ನಾಡಿನ ಜನತೆಯನ್ನು ಅವರ ಸ್ಥಿತಿಗತಿಗಳನ್ನ ಅವರ ಸಹಜ ಭಾಷೆಯನ್ನು ಅರಿತಿರುವ, ನಮ್ಮ ಜನರ ಇತಿಮಿತಿಗಳನ್ನು ಅರಿತಿರುವ,ಅವರ ಮತ್ತವರ ಭಾಷೆಯ ಬಗ್ಗೆ ಕೀಳು ಎನ್ನುವ ಭಾವನೆಯಿಲ್ಲದ ಜನರು ಯೋಚಿಸುವುದೇ ಬೇರೆ ರೀತಿ. ನಮ್ಮ ಸಾಮಾಜಿಕ ಸ್ಥಾನಮಾನಕ್ಕೆ, ನಮ್ಮ ಅನ್ನ ಬಟ್ಟೆಗೆ, ನಮ್ಮ ಬದುಕಿಗೆ, ಬೆಳವಣಿಗೆಗೆ ಮಾರಕವಾಗುವ, ತೊಡಕಾಗುವ ಹಾಗಿದ್ದರೆ ಸಂಸ್ಕೃತದ, ಇಂಗ್ಲಿಷ್ ನ ಅಥವಾ ಇನ್ನಾವುದೇ ಭಾಷೆಯ ಮೇಲಿನ ಅವಲಂಬನೆ ಇಲ್ಲವಾಗಬೇಕು. ಹಾಗಾಗುವಂತೆ ಮಾಡುವುದೇ ನಮ್ಮ ನಿಮ್ಮ ಎಲ್ಲರ ಕರ್ತವ್ಯ ಮತ್ತು ಮುಂದಿರುವ ಸವಾಲು

ನನ್ನಿ,

ತಿಮ್ಮಯ್ಯ

Anonymous ಅಂತಾರೆ...

ತಿಮ್ಮಯ್ಯ..

ವಿಕದಲ್ಲಿ ಬಂದ ಕೆಲವು ಅಂಕಣಗಳು

೧ ಸಂಸ್ಕೃತವಿಲ್ಲದ ಕನ್ನಡ ಜಾಳು
೨ ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಸಮಾನ್ಯರ ಭಾಷೆಯಾಗಿತ್ತು.
೩ ಹಳೆಗನ್ನಡದಲ್ಲಿ ಬದುಕಲು ಬೇಕಾದುದಿಲ್ಲ, ಹಳೆಗನ್ನಡ ಬರೀ ಸಂಸ್ಕೃತ ಕಾವ್ಯಗಳ ಅನುವಾದ
೪ ನೀವು ಕೊಟ್ಟ ಪ್ರತಾಪ ಸಿಂಹರ ಉದಾಹರಣೆ

ಅಂತು ವಿಕದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಆದುದಕ್ಕೆ ಸಾರ್ಥಕವಾಯಿತು.

ಈ ವಿಕ ಇರುವುದೇ ಭೈರಪ್ಪನಂತಹ( ಗೌಡತಿ ಲಕ್ಷ್ಮೀ ಅನ್ನುವವರ ಬಾಯಲ್ಲಿ ಬ್ರಾಹ್ಮಣರೇ ಶ್ರೇಷ್ಠರು ಎಂದು ಹೇಳಿಸಿದ್ದು ಇವರೇ ತಾನೆ, ಆವರಣದಲ್ಲಿ) ಬ್ರಾಹ್ಮಣರನ್ನು ಮೆರಸಿವುದಕ್ಕೆ. ಈ ಭೈರಪ್ಪನನ್ನು ಖಂಡಿಸಿದ ಅನಂತಮೂರ್ತಿ ಮುಂತಾದವರ ಮುಖಕ್ಕೆ ಮಸಿಬಳೆಯುವುದಕ್ಕೆ.

ಪ್ರಜಾವಾಣಿ ಇಂತಹ ಹೇಸಿಗೆಗೆ ಕೈ ಹಾಕಿದ ಉದಾಹರಣೆಗಳು ಬಹಳ ಕಡಮೆ.

ನೋಡಿ ಇದೇ, ನಾನು ಹೇಳುತ್ತಿದ್ದ ಬಂಡ ಸಂಸ್ಕೃತ ಬ್ರಾಹ್ಮಣರಿಗೆ ಮಾದರಿಗಳು! ಇದು ಸತ್ಯವೇ. ಇದನ್ನು ಸಮರ್ಥಿಸಿಕೊಂಡು ಇನ್ನಷ್ಟು ಬಂಡರು ಬರುವರು, ಜಗಳಕ್ಕೆ.

ನನ್ನಿ

Anivaarya ಅಂತಾರೆ...

ಯಾರಯ್ಯ ಅಡ್ಮಿನ್!

ಇಲ್ಲಿ ಮತ್ತೆ ಮತ್ತೆ ಒಂದು communityಯ ನಿಂದನೆ ಆಗುತ್ತಿದೆ. ಮುಂದೆ ಹೀಗೇ ಬೇರೆ communityಯ (ಇಲ್ಲಿ ಜಾತಿ ಎಂಬ ಪದ ಬೇಡ) ಹೀಗೆ ಅವಮಾನಕ್ಕೆ ದಾರಿ ಮಾಡಕೊಡಬೇಡಿ ದಯವಿಟ್ಟು. ಇಂತಾ ತಿಳುವಳಿಕೆ ಇಲ್ಲದ, ಅಸಹ್ಯವಾದ ಜಾತಿ ವಾದದ ಅಲ್ಲಮನ ಮಾತುಗಳನ್ನ ಮತ್ತೆ ಮತ್ತೆ ಹೀಗೆ ಬಿಡಬಹುದೆ, ಇದು ಸರಿಯೆ? ಖಂಡಿಸದ್ದಿದ್ದಲ್ಲಿ ಇಂತ ತಿಳುವಳಿಕೆಯೇ ಇಲ್ಲದವಗೆ ಅವರು ಹೇಳಿದ್ದೆ ಸರಿ ಅನ್ನೋ ನಂಬಿಕೆ ಕೊಡೊ forum ಆಗುತ್ತೆ ಇದು. ಜಾತಿ ವಿಷಯ ಬೇಡವೆಂದರೊ ಇಂತಾ postಗಳನ್ನ ನೀವು ಮತ್ತೆ ಮತ್ತೆ ಪ್ರೋತ್ಸಾಹಿಸೋ ಹಾಗೆ ಆಗುತ್ತೆ ಗುರು.

ಹೀಗೆ ಮುಂದೆ ಲಿಂಗಾಯಿತ, ಗೌಡ, ಶೂದ್ರ, ಚಾಂಡಾಳ ಅಂತೆಲ್ಲಾ ಶುರು ಆಗ್ಬೇಕಾ ಗುರು? ಜಾತಿಗಳ ಯೋಗ್ಯತೆಗಳ ಖಂಡನೆ ಆಗ್ಬೇಕಾ ಗುರು? ಎಲ್ಲಾ ಜಾತಿಯವರ ಬಗ್ಗೆಯೂ ಕೀಳಾಗಿ ಮಾತಾಡಲು ಕಷ್ಟವೇನಿಲ್ಲ. ಮಿಸಲಾತಿ, ಮಣ್ಣು ಮಸಿ ಎಲ್ಲಾ ಶುರು ಆಗುತ್ತೆ. ದಯವಿಟ್ಟು ಕನ್ನಡದ ಬಗ್ಗೆ ಮಾತಾಗಲಿ ಇಲ್ಲಿ.

ಏನ್ ಗುರು ಇದು?

ದಯವಿಟ್ಟು ಈ ಬ್ಲಾಗಿ ಮರ್ಯಾದೆಯನ್ನ ಉಳಿಸಿಕೊಡಬೇಕೆಂಬ sincere request!

ನಾನು ಬ್ರಾಹ್ಮಣ (ಜಾತಿಯಲ್ಲಿ), ಆದರೆ ಕನ್ನಡ ಅಭಿಮಾನಿ ಕೂಡ, ಜೊತೆಗೆ ಸಂಸ್ಕೃತವನ್ನೂ ಬೆಂಬಲಿಸುತ್ತೇನೆ. ಕನ್ನಡ ಪ್ರೆಮಿ ಅಂದ್ರೆ ಬೇರೆ ಭಾಷೆ, ಜಾತಿ ವಿರೋದಿ/ಧ್ವೇಷಿ ಆಗಲೇ ಬೇಕೆ ಹೀಗೆ? ಇದೇ ಕನ್ನಡ ಪ್ರೇಮವಾದರೆ ಅದು ಕೂಪ ಮಂಡೂಕಗಳು ಅಷ್ಟೆ; ಈ ಬಾಳಿಗಿಂತ ಕುದರೆಯದೇ ಎಷ್ಟೋ ಮೇಲು.

ನಾಚಿಗೆ-ಗೇಡು ಅಲ್ಲಮ; ಏನೋ ಯಾರೊ ಪುಟ್ಟು ಹುಡುಗ ತಿಳ್ವಳಿಕೆ ಇಲ್ಲದೇ ಮಾತಾಡ್ತಾನೆ ಅಂತ ಇದ್ದ್ರೆ ಸ್ವಲ್ಪ ಜಾಸ್ತಿಯೇ ಆಗ್ತಾ ಇದೆ. Grow up if you can.

Anonymous ಅಂತಾರೆ...

ನೋಡಿ ಯಾರಯ್ಯ

ಆಡ್ಮಿನ್ನಿಗೆ ಬುದ್ಧಿ ಇದೆ. ನಿಮಗೊಬ್ಬರಿಗೆ ಅಲ್ಲ ಬುದ್ಧಿ ಇರುವುದು( typical ).. ಎಲ್ಲರಿಗೂ ಉಪದೇಶ ಕೊಡವ ನಿಮ್ಮ ಕುಲಸಂಪ್ರದಾಯಕ್ಕೆ ತುಸು ಕಡಿವಾಣ ಹಾಕಿರಿ.

ನೀವು ಉಪದೇಶದ, ತಪ್ಪುಸರಿಯನ್ನು ನೀವೇ ನಿರ್ಧರಿಸು ಅಧಿಕಾರವನ್ನು, ಇದೇ ತಪ್ಪು ಇದೇ ಸರಿ ಎಂದು ಹೇಳುವ ಸ್ಥಾನವನ್ನು ನೀವೇ ಅಲಂಕರಿಸಿಕೊಳ್ಳಬೇಡಿ. ಅದರ ಯೋಗ್ಯತಾಯೋಗ್ಯತೆಯ ನಿರ್ಧರಣೆಯಲ್ಲೇ ಅನುಮಾನಗಳಿವೆ.

ಯಾವುದು ಮರ್ಯಾದೆ, ಯಾವುದು ಅಲ್ಲ ಅಂತ ಆಡ್ಮಿನ್ ಗೆ ತೀರ್ಮಾನ ಮಾಡಲು, ಬಿಡಿ. ಅವರಿಗೂ ಓದುಬರಹ, ತಿಳಿವಳಿಕೆ ಇದೆ. ಇಲ್ಲದಿದ್ದರೆ ಸಂಸ್ಕೃತದಿಂದ ಇರುವ ಅಪಾಯವನ್ನು ಇಷ್ಟು ಸ್ಪಷ್ಟವಾಗಿ ತಿಳಿಸುತ್ತಿರಲಿಲ್ಲ.

"ನಾನು ಬ್ರಾಹ್ಮಣ (ಜಾತಿಯಲ್ಲಿ), ಆದರೆ ಕನ್ನಡ ಅಭಿಮಾನಿ ಕೂಡ, ಜೊತೆಗೆ ಸಂಸ್ಕೃತವನ್ನೂ ಬೆಂಬಲಿಸುತ್ತೇನೆ. ಕನ್ನಡ ಪ್ರೆಮಿ ಅಂದ್ರೆ ಬೇರೆ ಭಾಷೆ, ಜಾತಿ ವಿರೋದಿ/ಧ್ವೇಷಿ ಆಗಲೇ ಬೇಕೆ ಹೀಗೆ? ಇದೇ ಕನ್ನಡ ಪ್ರೇಮವಾದರೆ ಅದು ಕೂಪ ಮಂಡೂಕಗಳು ಅಷ್ಟೆ; ಈ ಬಾಳಿಗಿಂತ ಕುದರೆಯದೇ ಎಷ್ಟೋ ಮೇಲು.

ನಾಚಿಗೆ-ಗೇಡು ಅಲ್ಲಮ; ಏನೋ ಯಾರೊ ಪುಟ್ಟು ಹುಡುಗ ತಿಳ್ವಳಿಕೆ ಇಲ್ಲದೇ ಮಾತಾಡ್ತಾನೆ ಅಂತ ಇದ್ದ್ರೆ ಸ್ವಲ್ಪ ಜಾಸ್ತಿಯೇ ಆಗ್ತಾ ಇದೆ. Grow up if you can."

ಈ ರೀತಿ ಯಾವುದು ನಾಚಿಕೆ-ಗೇಡು/ಕೀಳು, ಯಾವುದು ತಿಳಿವು/ಜ್ಞಾನ, ಯಾರು ತಿಳಿದವರು, ಯಾರು ತಿಳಿದಿಲ್ಲ ಎಂಬ ceritificate ಕೊಡುವ ಹುಟ್ಟುಗಣ ಯಾರಯ್ಯರಂತಹ ಹುಟ್ಟು-ಬ್ರಾಹ್ಮಣ, ಆದರೆ ಬ್ರಾಹ್ಮಣನಾಗಿ ಜನರಿಗೆ ಒಳ್ಳಯ ಕೆಲಸಮಾಡುವ ಬುದ್ಧಿ ಇಲ್ಲದ, ಕನ್ನಡಪ್ರೇಮ ಅಂತ ಹೇಳಿ, ಸಂಸ್ಕೃತವನ್ನು ಬಲವಾಗಿ ಬೆಂಬಲಿಸುವ, ಜಾತಿ ವಿರೋಧಿ ಅಂತ ಹೇಳಿ, ತಮ್ಮ ಮಠಗಳಲ್ಲಿ ಬರೀ ಬ್ರಾಹ್ಮಣರಿಗೆ ವೇದಪಾಠ ಕಲಿಸುವ, ಆಷಾಢಭೂತಿ, ಬೂಟಾಟಿಕೆಯ ಬ್ರಾಹ್ಮಣನಿಗೆ ಹುಟ್ಟುಗುಣ, ಅವರ ಅಹಂಕಾರ, ಪೊಳ್ಳುಮೇಲ್ಮೆ ಹೀಗೆಲ್ಲ ಆಡಿಸುವುವುದು.

ಇದಕ್ಕೆ ವಿರುದ್ಧವಾಗಿ, ಹಲವ ಬ್ರಾಹ್ಮಣರು ಹೆಚ್ಚೆಚ್ಚು ತಿಳಿದು ನಮ್ಮ ಸಮಾಜಕ್ಕೆ ಒಳಿತನ್ನು ಮಾಡುವರು, ಇದಕ್ಕೆ ಉದಾಹರಣೆ, ಇಲ್ಲೇ ಬಂದ ರಾಘವೇಂದ್ರಾಚಾರ್‍, ಪುರಾಣಿಕ್, "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಬರೆದ ಶಂಕರ ಭಟ್ಟ ಇವರೂ ಇದ್ದಾರೆ, ಇವರಿಗೆ ನಾವು ಸದಾ ತಲೆ ಬಾಗುವೆವು.

ಆದರೆ ಒಂದು ಗುಂಪಿನ ಬಾಯಿ ಮುಚ್ಚಿಸಲು ಕುತಂತ್ರ ಹೂಡುವುದು ಮೊದಲನೇ ಗುಂಪಿನ ಸಂಪ್ರದಾಯ. ಒಟ್ಟಿನಲ್ಲಿ ಇವರೊಬ್ಬರು ಮಾತಾಡುತ್ತಾ ಇರಬೇಕು, ಉಪದೇಶದ ಮೇಲೆ ಉಪದೇಶ, ಮಿಕ್ಕವರು ಕೇಳಬೇಕು, ಅಡ್ಡಮಾತಾಡಿದರೆ, ಪ್ರಶ್ನಿಸಿದರೆ ಅವನ ನಾಲಗೆ ಸೀಳಿದ ಕಾಲವೂ ಇತ್ತು.

ಆಡ್ಮಿನ್,
ನಾನು ಇಲ್ಲಿ ಬರೀ ಒಂದು ಪಂಗಡ, ಯಾಕೆ ಅಷ್ಟೊಂದು fanatic ಆಗಿ ಸಂಸ್ಕೃತ, ವೇದ, ಶಂಕರ, ರಾಮಾನುಜರನ್ನು ಮೆರಸುವುದು, ಅಂತ ವಿವರಿಸುತ್ತಿದ್ದೇನೆ. ನನ್ನ ಮಾತುಗಳು ಕೆಟ್ಟವಾದರೆ, ನನ್ನ postಗಳ ಜೊತೆಜೊತೆಗೆ,

೧) ವೇದ, ಶಂಕರ, ರಾಮಾನುಜರನ್ನು ಮೆರೆಸಿದ postಗಳನ್ನು,
೨) ಯಾರಯ್ಯನಂತೆ ಬಿಟ್ಟಿ ಉಪದೇಶ, ಯಾವುದು ಸರಿ ಯಾವುದು ತಪ್ಪು, ಯಾವುದು ಮರ್ಯಾದೆ, ಯಾವುದು ಅಲ್ಲ, ಯಾರಿಗೆ ತಿಳಿವಿದೆ, ಯಾರಿಗೆ ಇಲ್ಲ, ಯಾರು ಬೆಳೆದಿದ್ದಾರೆ, ಯಾರಿಲ್ಲ ಎಂದು ceritficate ಕೊಡವ
೩) ಒಬ್ಬರು ಮಾತನ್ನು ನಿಲ್ಲಿಸಿ, ತಡೆಹಿಡಿಯಿರಿ, ಎಂದು ಹೇಳುವ ವಾಕ್ಸ್ವತಂತ್ರಹರಣದ ಮಾತುಗಳನ್ನು,

ಇವೆಲ್ಲವನ್ನು ಅಳಿಸಿ, ಬಿಡಬೇಕು.

ನೀವು ಸಂಸ್ಕೃತ, ವೇದ, ಶಂಕರ, ರಾಮಾನುಜ ಮುಂತಾದ ಬ್ರಾಹ್ಮಣರ ವಿಷಯಗಳನ್ನು ಮೆರೆಯಲು/ಮೆರೆಸಲು ಬಿಟ್ಟು, ಅದರ/ಅವರ ಖಂಡನೆಯನ್ನು ನಿಷೇಧಿಸುವುದಾದರೆ ನೀವು ಈ ಬಂಡ ಬ್ರಾಹ್ಮಣ ಪಂಗಡದ ಪಕ್ಷಪಾತಿಗಳಾಗುವಿರಿ.

ಈ ಯಾರಯ್ಯ ಮತ್ತು ವಿಪ್ರಬಳಗ, ಎಲ್ಲಿಯ ವರೆಗೆ ಹೀಗೆ ಸುಮ್ಮಸುಮ್ನೆ ಸಂಸ್ಕೃತ ಮೆರೆಸುವುದನ್ನು ನಿಲ್ಲಿಸುವುದಿಲ್ಲ, ನಾವು ಅಲ್ಲಿಯ ವರೆಗೆ ಅವನ್ನು ಖಂಡಿಸುವುದನ್ನು ನಿಲ್ಲಿಸುವುದಿಲ್ಲ.

ಸಂಸ್ಕೃತವನ್ನು ಸುಮ್ಮಸುಮ್ನೆ ಮೆರೆಸದೇ ಇರುವ ಆಯ್ತೆ ಯಾರಯ್ಯ ಮತ್ತು ಅವರ ಬಳಗಕ್ಕಿದೆ.

-ಅಲ್ಲಮ

Anivaarya ಅಂತಾರೆ...

ಹೌದು ಅಲ್ಲಮ!

ಸರಿಯಾಗಿ ಹೇಳ್ದೆ, ಸೂಪರ್!

Anonymous ಅಂತಾರೆ...

ಪ್ರೀತಿಯ ಅಲ್ಲಮರೇ,
ಮತ್ತೆ ನೀವು ತಪ್ಪು ಮಾಡ್ತಿದೀರ. ನೀವು ಹೇಳಿದ್ದು ಸರಿ ಇದೆ ಆದ್ರೆ ಪೂರ್ತಿ ಸರಿ ಅಲ್ಲ. ಮೊದಲಿಗೆ ವಿ.ಕ ಪತ್ರಿಕೆ ಬಗ್ಗೆ, ಅವುಗಳಲ್ಲಿ ಪ್ರಕಟವಾಗುವ ಇಂತಹ ಬರಹಗಳನ್ನು ನಾವೆಲ್ಲ ಖಂಡಿತಾ ವಿರೋಧಿಸೋಣ. ವಿರೋಧಿಸಿದ್ದೇವೆ ಕೂಡಾ. ನೀವು ಯಾರೋ ಕೆಲವರ ಕೃತ್ಯಕ್ಕೆ ಸಾರಾಸಗಟಾಗಿ ಒಂದು ಜಾತಿಯನ್ನೇ ಖಂಡಿಸುವುದು ತಪ್ಪಾಗುತ್ತದೆ. ನಿಮ್ಮ ಬರವಣಿಗೆ, ನಿಲುವು ' ಇಂತಹದ್ದನ್ನು ಮಾಡುತ್ತಿರುವ ವ್ಯಕ್ತಿ, ಶಕ್ತಿ, ಸಂಘಟನೆಗಳು . . ತಪ್ಪು ಮಾಡ್ತಿವೆ ಅಂದ್ರೆ ಸಾಕಲ್ಲವಾ? ಬಹುಷಃ ನೀವು ಭಾವುಕರಾಗಿ ಹೀಗೆ ಮಾತಾಡಿದಾಗ ಆ ಜಾತಿಯ(ಕ್ಷಮಿಸಿ, ಜಾತಿ ಅಂದಿದ್ದಕ್ಕೆ) ಸರಿಯಾಗಿ ಯೋಚಿಸಿವವರೂ ಎಲ್ಲೋ ನಿಮ್ಮದು ಪೂರ್ವಾಗ್ರಹ ಅಂದು ಕೊಳ್ಳುವುದಿಲ್ಲವೇ? ನೀವೇ ಹೇಳಿದಂತೆ ಅಲ್ಲಿ ನಮ್ಮ ಪರವಾದ ಭಟ್ಟರೂ, ಪುರಾಣಿಕರೂ, ಆಚಾರುಗಳೂ ಇರುವಾಗ ಇಂತಹ ಮಾತು ತಪ್ಪಾಗಲ್ವ? ಇದೇ ಕಾರಣಕ್ಕೆ ಯಾರಯ್ಯನವರಿಗೆ ಕಿರಿಕಿರಿ ಆಗ್ತಿರೋದು ಅನ್ಸುತ್ತೆ. ಈ ಜಾತಿ ಎನ್ನುವ ಭೂತ. ನಮ್ಮನ್ನು ಕನ್ನಡಿಗರಾಗಿ ಒಂದು ಮಾಡದಷ್ಟು ಅಟ್ಟಹಾಸದಿಂದ ಮೆರೆಯೋದ್ನ ನಾವೂ ನೀವೂ ಸ್ವಲ್ಪ ತಾಳ್ಮೆ, ಸ್ವಲ್ಪ ಮಾತಿನ ಮೇಲಿನ ಹಿಡಿತಗಳಿಂದ ಸಾಧಿಸೋಣ ಕಣ್ರೀ. ಬೀಡ್ರಿ, ಇಲ್ಲಿ ನನಗೆ, ನಿಮಗೆ, ಪುರಾಣಿಕರಿಗೆ, ಯಾರಯ್ಯನವರಿಗೆ . . . ಇರೋದು ಒಂದೇ ಜಾತಿ, ಅದು ನಮ್ಮ ಜೀವನಾಡಿಯಾದ ಕನ್ನಡ ಮಾತ್ರ.
ಯಾರಯ್ಯನವರೇ, ನೀವಾದ್ರೂ ಆ ಮಾತನ್ನು ಅಲ್ಲಿಗೆ ಬಿಟ್ಟು ಮೂಲ ವಿಷಯಕ್ಕೆ ಹಿಂದಿರುಗ ಬಾರದಾ? ಅಲ್ಲಮರ ಖಂಡನೆಯನ್ನು ಇಡೀ ಸಮುದಾಯಕ್ಕೆ ಅಂತ ಯಾಕೆ ಅಂದ್ಕೋತೀರಾ? ಅವರು ಹಾಗೆ ಅಂದರೂ ಕೂಡಾ ಅವರ ಅಭಿಪ್ರಾಯಕ್ಕೆ ಕಾರಣವಾದ ಒಂದು ವರ್ಗ ಹೀಗೆ ಅವರಿಗೆ ಅನ್ನಿಸಲು ಕಾರಣವಾಗಿದೆ, ಅಂತಹವರನ್ನು ಉದ್ದೇಶಿಸಿ ಮಾತಾಡಿದ್ದಾರೆ ಅಂದುಕೊಳ್ಳಿ. ನೀವು ಆ ಗುಂಪಿನಲ್ಲಿಲ್ಲ ಅಂದ್ರೆ ಆಯ್ತಲ್ಲ. ಕನ್ನಡ ಪ್ರೇಮ ಅಂದರೆ ನೀವಂದ ಹಾಗೇ, ಬೇರೆ ಭಾಷೇನ ದ್ವೇಶ ಮಾಡೋದಲ್ಲ. ಅಲ್ಲಿರುವ ಒಳ್ಳೆಯದನ್ನು ನಮ್ಮ ಭಾಷೆಗೆ ತರುವುದು. ಆ ಮೂಲಕ ನಮ್ಮದಲ್ಲದ ಭಾಷೆಯನ್ನು ಕಲಿಯಬೇಕೆನ್ನುವ ಒತ್ತಡ/ ಅನಿವಾರ್ಯತೆಯಿಂದ ನಮ್ಮ ಭಾಷಿಕ ಜನರನ್ನು ಕಾಪಾಡುವುದು, ಅಲ್ಲವೇ?
ಇನ್ನು ಪ್ರಜಾವಾಣಿಯನ್ನು ಹೊಗಳುವ ಅಗತ್ಯವೂ ಇಲ್ಲ ಗೆಳೆಯರೇ, ಇದೇ ಪ್ರಜಾವಾಣಿ ಪತ್ರಿಕೆಯೇ ಇಡೀ ಗೋಕಾಕ್ ಚಳುವಳಿಗೆ ವಿರುದ್ಧವಾಗಿ ನಿಂತಿತ್ತು. ಇದೇ ಪ್ರಜಾವಾಣಿ ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬಂತೆ ಇತ್ತೀಚಿಗೆ ಪ್ರಕಟಿಸಿತ್ತು. ಹಾಗಲ್ಲ ಎಂದು ದಾಖಲೆ ಸಮೇತ ಕಳಿಸಿದ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಿತ್ತು.ಇದೇ ಪತ್ರಿಕೆಯೇ ನಿನ್ನೆ ಮೊನ್ನೆ ಅಕ್ರಮ ಇಂಗ್ಲಿಷ್ ಶಾಲೆಗಳಾ ಪರವಾಗಿ, ಕನ್ನಡಿಗರ ಹಿತಕ್ಕೆ ವಿರುದ್ಧವಾಗಿ, ನಿಂತಿತ್ತು. ಇದು ಈ ಚರ್ಚೆಗೆ ಸಂಬಂಧವಿಲ್ಲ, ಬರಿ ನಿಮ್ಮ ಮಾಹಿತಿಗಾಗಿ ಹೇಳಿದೆ ಅಷ್ಟೆ.

ನನ್ನಿ
ತಿಮ್ಮಯ್ಯ

Anonymous ಅಂತಾರೆ...

ಪ್ರೀತಿಯ ಅಲ್ಲಮರೇ,
ಮತ್ತೆ ನೀವು ತಪ್ಪು ಮಾಡ್ತಿದೀರ. ನೀವು ಹೇಳಿದ್ದು ಸರಿ ಇದೆ ಆದ್ರೆ ಪೂರ್ತಿ ಸರಿ ಅಲ್ಲ. ಮೊದಲಿಗೆ ವಿ.ಕ ಪತ್ರಿಕೆ ಬಗ್ಗೆ, ಅವುಗಳಲ್ಲಿ ಪ್ರಕಟವಾಗುವ ಇಂತಹ ಬರಹಗಳನ್ನು ನಾವೆಲ್ಲ ಖಂಡಿತಾ ವಿರೋಧಿಸೋಣ. ವಿರೋಧಿಸಿದ್ದೇವೆ ಕೂಡಾ. ನೀವು ಯಾರೋ ಕೆಲವರ ಕೃತ್ಯಕ್ಕೆ ಸಾರಾಸಗಟಾಗಿ ಒಂದು ಜಾತಿಯನ್ನೇ ಖಂಡಿಸುವುದು ತಪ್ಪಾಗುತ್ತದೆ. ನಿಮ್ಮ ಬರವಣಿಗೆ, ನಿಲುವು ' ಇಂತಹದ್ದನ್ನು ಮಾಡುತ್ತಿರುವ ವ್ಯಕ್ತಿ, ಶಕ್ತಿ, ಸಂಘಟನೆಗಳು . . ತಪ್ಪು ಮಾಡ್ತಿವೆ ಅಂದ್ರೆ ಸಾಕಲ್ಲವಾ? ಬಹುಷಃ ನೀವು ಭಾವುಕರಾಗಿ ಹೀಗೆ ಮಾತಾಡಿದಾಗ ಆ ಜಾತಿಯ(ಕ್ಷಮಿಸಿ, ಜಾತಿ ಅಂದಿದ್ದಕ್ಕೆ) ಸರಿಯಾಗಿ ಯೋಚಿಸಿವವರೂ ಎಲ್ಲೋ ನಿಮ್ಮದು ಪೂರ್ವಾಗ್ರಹ ಅಂದು ಕೊಳ್ಳುವುದಿಲ್ಲವೇ? ನೀವೇ ಹೇಳಿದಂತೆ ಅಲ್ಲಿ ನಮ್ಮ ಪರವಾದ ಭಟ್ಟರೂ, ಪುರಾಣಿಕರೂ, ಆಚಾರುಗಳೂ ಇರುವಾಗ ಇಂತಹ ಮಾತು ತಪ್ಪಾಗಲ್ವ? ಇದೇ ಕಾರಣಕ್ಕೆ ಯಾರಯ್ಯನವರಿಗೆ ಕಿರಿಕಿರಿ ಆಗ್ತಿರೋದು ಅನ್ಸುತ್ತೆ. ಈ ಜಾತಿ ಎನ್ನುವ ಭೂತ. ನಮ್ಮನ್ನು ಕನ್ನಡಿಗರಾಗಿ ಒಂದು ಮಾಡದಷ್ಟು ಅಟ್ಟಹಾಸದಿಂದ ಮೆರೆಯೋದ್ನ ನಾವೂ ನೀವೂ ಸ್ವಲ್ಪ ತಾಳ್ಮೆ, ಸ್ವಲ್ಪ ಮಾತಿನ ಮೇಲಿನ ಹಿಡಿತಗಳಿಂದ ಸಾಧಿಸೋಣ ಕಣ್ರೀ. ಬೀಡ್ರಿ, ಇಲ್ಲಿ ನನಗೆ, ನಿಮಗೆ, ಪುರಾಣಿಕರಿಗೆ, ಯಾರಯ್ಯನವರಿಗೆ . . . ಇರೋದು ಒಂದೇ ಜಾತಿ, ಅದು ನಮ್ಮ ಜೀವನಾಡಿಯಾದ ಕನ್ನಡ ಮಾತ್ರ.
ಯಾರಯ್ಯನವರೇ, ನೀವಾದ್ರೂ ಆ ಮಾತನ್ನು ಅಲ್ಲಿಗೆ ಬಿಟ್ಟು ಮೂಲ ವಿಷಯಕ್ಕೆ ಹಿಂದಿರುಗ ಬಾರದಾ? ಅಲ್ಲಮರ ಖಂಡನೆಯನ್ನು ಇಡೀ ಸಮುದಾಯಕ್ಕೆ ಅಂತ ಯಾಕೆ ಅಂದ್ಕೋತೀರಾ? ಅವರು ಹಾಗೆ ಅಂದರೂ ಕೂಡಾ ಅವರ ಅಭಿಪ್ರಾಯಕ್ಕೆ ಕಾರಣವಾದ ಒಂದು ವರ್ಗ ಹೀಗೆ ಅವರಿಗೆ ಅನ್ನಿಸಲು ಕಾರಣವಾಗಿದೆ, ಅಂತಹವರನ್ನು ಉದ್ದೇಶಿಸಿ ಮಾತಾಡಿದ್ದಾರೆ ಅಂದುಕೊಳ್ಳಿ. ನೀವು ಆ ಗುಂಪಿನಲ್ಲಿಲ್ಲ ಅಂದ್ರೆ ಆಯ್ತಲ್ಲ. ಕನ್ನಡ ಪ್ರೇಮ ಅಂದರೆ ನೀವಂದ ಹಾಗೇ, ಬೇರೆ ಭಾಷೇನ ದ್ವೇಶ ಮಾಡೋದಲ್ಲ. ಅಲ್ಲಿರುವ ಒಳ್ಳೆಯದನ್ನು ನಮ್ಮ ಭಾಷೆಗೆ ತರುವುದು. ಆ ಮೂಲಕ ನಮ್ಮದಲ್ಲದ ಭಾಷೆಯನ್ನು ಕಲಿಯಬೇಕೆನ್ನುವ ಒತ್ತಡ/ ಅನಿವಾರ್ಯತೆಯಿಂದ ನಮ್ಮ ಭಾಷಿಕ ಜನರನ್ನು ಕಾಪಾಡುವುದು, ಅಲ್ಲವೇ?
ಇನ್ನು ಪ್ರಜಾವಾಣಿಯನ್ನು ಹೊಗಳುವ ಅಗತ್ಯವೂ ಇಲ್ಲ ಗೆಳೆಯರೇ, ಇದೇ ಪ್ರಜಾವಾಣಿ ಪತ್ರಿಕೆಯೇ ಇಡೀ ಗೋಕಾಕ್ ಚಳುವಳಿಗೆ ವಿರುದ್ಧವಾಗಿ ನಿಂತಿತ್ತು. ಇದೇ ಪ್ರಜಾವಾಣಿ ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬಂತೆ ಇತ್ತೀಚಿಗೆ ಪ್ರಕಟಿಸಿತ್ತು. ಹಾಗಲ್ಲ ಎಂದು ದಾಖಲೆ ಸಮೇತ ಕಳಿಸಿದ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಿತ್ತು.ಇದೇ ಪತ್ರಿಕೆಯೇ ನಿನ್ನೆ ಮೊನ್ನೆ ಅಕ್ರಮ ಇಂಗ್ಲಿಷ್ ಶಾಲೆಗಳಾ ಪರವಾಗಿ, ಕನ್ನಡಿಗರ ಹಿತಕ್ಕೆ ವಿರುದ್ಧವಾಗಿ, ನಿಂತಿತ್ತು. ಇದು ಈ ಚರ್ಚೆಗೆ ಸಂಬಂಧವಿಲ್ಲ, ಬರಿ ನಿಮ್ಮ ಮಾಹಿತಿಗಾಗಿ ಹೇಳಿದೆ ಅಷ್ಟೆ.

ನನ್ನಿ
ತಿಮ್ಮಯ್ಯ

Anonymous ಅಂತಾರೆ...

ಪ್ರಿಯ ಯಾರಯ್ಯನವರೇ,
ನಿಮ್ಮ ಕನ್ನಡದ ಕೆಲಸಕ್ಕೆ ಅಭಿನಂದನೆಗಳು. ತುಂಬಾ ಜನಕ್ಕೆ ಕನ್ನಡದ ಕೆಲಸ ಎಂದರೆ ಸಾಹಿತ್ಯ, ಸಾಹಿತಿಗಳ ಬಗ್ಗೆ ಪರಿಚಯ ಮಾಡ್ಕೊಳ್ಳೋದು, ಪ್ರಚಾರ ಮಾಡೋದು ಅನ್ನೋ ಅಷ್ಟು ಮಾತ್ರ ಆಗಿದೆ. ನೀವು ಕೆನೆಡಾದಲ್ಲಿ ಮಾಡ್ತಿರೋ ಕನ್ನಡದ ಕೆಲಸ ಇದಕ್ಕಿಂತ ಭಿನ್ನವಾಗಿದ್ದರೆ ಸಂತೋಷ, ಅದಲ್ಲದೆ ಬರಿ ಇಷ್ಟೇ ಆಗಿದ್ದರೆ ಒಮ್ಮೆ ಪರಾಮರ್ಶಿಸಿಕೊಳ್ಳುವುದು ಒಳಿತು. ಬಹುಷಃ ನಾವೆಲ್ಲ ನಮ್ಮ ಕನ್ನಡ ಇಂಥದಕ್ಕೆ ಲಾಯಕ್ಕು (ಸಾಹಿತ್ಯ . . . ಇತ್ಯಾದಿ ಜುಟ್ಟಿನ ಮಲ್ಲಿಗೆ ಹೂವು), ಅಧ್ಯಾತ್ಮಕ್ಕೆ ಸಂಸ್ಕೃತವೂ ( ಇದು ಪರಮಾರ್ಥಕ್ಕೆ . . .) ಜ್ಞಾನ,ವಿಜ್ಞಾನ, ತಂತ್ರಜ್ಞಾನಕ್ಕೆ ಇಂಗ್ಲಿಷ್ ಅಂತಲೂ (ಇದು ಹೊಟ್ಟೆಯ ಹಿಟ್ಟು) ತೀರ್ಮಾನ ಮಾಡಿಕೊಂಡು ಬಿಟ್ಟಿದ್ದೇವೆ. ಒಂದು ಭಾಷೆಯ ಸಾರ್ವಭೌಮತ್ವ ಎಂದರೆ ಅದು ಹೊಟ್ಟೆಯ ಹಿಟ್ಟಿನ ಭಾಷೆಯಾದರೆ ಮಾತ್ರ ಸಾಧಿಸಿದಂತೆ. ಹೀಗೆ ಸಾಧಿಸಲು ಬೇಕಾದ ಶಕ್ತಿ, ಯೋಗ್ಯತೆ ಒಂದು ಭಾಷೆಗೆ ಇಲ್ಲ ಅಂದರೆ ಅದು ಆ ಭಾಷೆಯ ಮಿತಿಯಲ್ಲ. ಅದನ್ನು ಬಳಸುವ ಜನರ ಮಿತಿ. ಕನ್ನಡದಲ್ಲಿ ಎಲ್ಲಕ್ಕೂ ಪದಗಳಿಲ್ಲ, ಪುಸ್ತಕಗಳಿಲ್ಲ ಎನ್ನುವುದು ನಿಜವೇ ಆಗಿದೆ. ಜಪಾನೀಸ್ ಭಾಷೆಯಲ್ಲಿ ಅಧ್ಯಾತ್ಮವಿಲ್ಲ ಅಂತ ಆ ಜನರೆಲ್ಲ ಸಂಸ್ಕೃತ ಕಲಿಯಲಿ ಎನ್ನುವುದು ಎಷ್ತು ಹಾಸ್ಯಾಸ್ಪದವೋ ಅಷ್ಟೇ ಹಾಸ್ಯಾಸ್ಪದ, ಕನ್ನಡಿಗರೆಲ್ಲ ಕನ್ನಡ ಕಲಿಯಲಿ ಎನ್ನುವ ಆಶಯ.
ಸಂಸ್ಕೃತ, ಇಂಗ್ಲಿಷ್, ಹಿಂದಿ ಇವುಗಳಿಂದ ಒಳ್ಳೇಯದು ಸಿಕ್ಕುತ್ತಿದೆ (ಹಿಂದಿಯಿಂದ ಮಣ್ಣಂಗಟ್ಟಿನೂ ಸಿಕ್ತಿಲ್ಲ ಅನ್ನೋದು ನನ್ನ ಅಭಿಪ್ರಾಯ) ಅಂದುಕೊಂಡರೂ ಅವುಗಳನ್ನು ಅವುಗಳ ಸದ್ಗುಣಕ್ಕಾಗಿ ಮೇಲೇರಿಸುವ ಅಗತ್ಯ ಕಾಣ್ತಿಲ್ಲ. ಪಕ್ಕದ ಮನೆಯವಳ ಅಮ್ಮ ಸುಂದರಿ, ನಮ್ಮಮ್ಮ ಕುರೂಪಿ ಅಂತ ಕೊರಗೋದು ಸರಿಯಾದದ್ದಲ್ಲ ಅಲ್ವಾ ಸಾರ್.

ತಿಮ್ಮಯ್ಯ

Anonymous ಅಂತಾರೆ...

ತಿದ್ದುಪಡಿ:

ಅಟ್ಟಹಾಸದಿಂದ ಮೆರೆಯೋದನ್ನು ಅಡಗಿಸಲು ಅಂತ ಓದಿಕೊಳ್ಳಿ

ತಿಮ್ಮಯ್ಯ

Anonymous ಅಂತಾರೆ...

ತಿಮ್ಮಯ್ಯ

ನೀವು ನನ್ನ ಮಾತಲ್ಲಿ ಕೆಲವನ್ನು ತಪ್ಪು ಅರ್ಥಮಾಡಿಕೊಂಡಿದ್ದೀರಿ. ಇರಲಿ..

ನಿಮ್ಮ ಮಾತು ಚನ್ನಾಗಿದೆ. ಆದರೆ.. ಸಂಸ್ಕೃತ ಅಂದ ಕೂಡಲೇ fanatic ಆಗಿ, ವೇದ ಉಪನಿಷತ್ತು, ಅದು ಇದು ಅಂತ ಮೈಮೇಲೆ ಎರಗುವ ಯಾರಯ್ಯ+ಬಳಗ ಇದೆ. ಇದು ಸಂಸ್ಕೃತವೇ ಎಲ್ಲ ಭಾಷೆಗಳ ತಾಯಿ. ಸಂಸ್ಕೃತವೇ ಎಲ್ಲ ಭಾಷೆಗಳ ಹುಟ್ಟಿಗೆ ಕಾರಣ ಅಂತ ಡಂಗೂರ ಹೊಡೆಯುತ್ತಾ ಇದೆ. ಇವರ ಗುಂಪು ಈ ಸುಳ್ಳು ಸಾರುವ ಕೆಲವನ್ನು ಕನ್ನಡ ನೆಲದಲ್ಲೂ ಚೋರಾಗೇ ನಡೆಸಿದ್ದಾರೆ.

ಇದರಿಂದ ಅನೇಕರಿಗೆ ಕನ್ನಡ ಅಂದರೆ ಯಾವಾಗಲು ಸಂಸ್ಕೃತಕ್ಕಿಂತ ಕೀಳು, ಚಿಕ್ಕಭಾಷೆ ಅನ್ನುವ ಭಾವ ಬಂದು ಹೋಗಿದೆ.

ಇದಕ್ಕೆ ಹೊಣೆ ಇವರೇ ಅಲ್ವಾ!!

ಜಾತಿ ಇಂದು ಈ ಬಂಡರಿಗೆ ಬೇಡ, ಆದರೆ ೧೯೪೭ ತನಕ ಇದನ್ನೇ ಬಂಡವಾಳ ಮಾಡಿಕೊಂಡು ಮೆರೆದಿದ್ದು. ಈಗಲೂ ದೇವಸ್ಥಾನದ ಅರ್ಚಕ ಹುದ್ದೆ, ಜಾತಿಯೇ ಅಲ್ಲವೇ ಆಧಾರ. ಒಬ್ಬ ಮಾದಿಗ ಹೊಲೆಯ ವೇದ ಕಲಿತು ಅರ್ಚಕನಾಗಲು ಇವರು ಬಿಡುವರೇ?

ಇಷ್ಟೇ!

Anonymous ಅಂತಾರೆ...

Allama, ninage braahmnanaru budhivantarendu avara mele matsara idhantide..ivattu deshada hechu aishwarya iruvudu udyami/vyaapaarasthara kynalli..avaralli 99% goo hechiinavaru braahmanetararu..ee braahmanaru tamma hotte paadigaagi swalpa vodi kondu alli illi noukari maaduttiddare, kashta pattu dudiyuttiddare..avara vidheyate, nishtemattu shramadinda volleya hesaru tandukondiddaare..adakke ninagyaake kannu uri..??ninage ashtu budhivantanallavendu hottekichhee??hogli nimma pangaDavannu hinDulida jaatige serisi reservation kodi yendu sarkaarakke adda beelu Hogu..illi bandu gOlaadidare yenoo upayogavilla..innu nimma aa prajaavaani waste paper ashte..Vijaya Karnataka is No.1 paper in Karnataka..

Anonymous ಅಂತಾರೆ...

ಮತ್ತೊಬ್ಬ ಬಂಡ ಜಂಬದ ಬ್ರಾಹ್ಮಣ ಮಾತು..

ನಮ್ಮ ದೇಶದಲ್ಲಿ ಶ್ರಮದಿಂದಲೇ ಮೇಲೆ ಬರುವ ಹಾಗಿದ್ದರೆ, ಎಷ್ಟೋ ಮಂದಿ ಮೇಲೆ ಬರುತ್ತಿದ್ದರು.

ಇವೊತ್ತು ರಾಜಕೀಯದಲ್ಲಿ ಹೇಗೆ ಕುತಂತ್ರ, lobby ಇಂದ ಮೇಲೆ ಬರುವರೋ, ಹಾಗೆ ಈ ೯೯% ಮಂದಿ. ಎಷ್ಟೇ ಆದರು ಸ್ವಜನೋದ್ಧಾರದಲ್ಲಿ ಎತ್ತಿದ ಕೈ ಅಲ್ಲವೇ.

ಹೋಗಿ ತಿಂದರೆ ಬ್ರಾಹ್ಮಣನ ಹೋಟೆಲ್ಲೇ ಆಗಬೇಕು, ಅದಕ್ಕೆ ಆಚಾರ ಅನ್ನುವ ಒಂದು ನೆಪ!

ಬುದ್ಧಿವಂತರು ಅವರು ಅಂತ ನಾನೇಕೆ ಹೊಟ್ಟೆಕಿಚ್ಚು ಪಡಲಿ. ಅವರು ಬುದ್ಧಿವಂತ, ಆದರೆ ದುರ್ಬುದ್ಧಿಯೇ ಹೆಚ್ಚು. ಕಿತಾಪತಿಯಲ್ಲಿ ನಿಸ್ಸೀಮರು. ಬ್ರಿಟೀಶರಿಗೆ ಇವರೇ ಅಲ್ವಾ ಸಲಹೆಗಾರರಾಗಿದ್ದು ರಾಜಗೋಪಾಚಾರಿ ಮುಂ.

ಇರಲಿ ಬಿಡಿ ಅಯ್ಯನೋರೇ, ನೀವೊಬ್ಬರೇ ಬುದ್ಧಿವಂತರು ಅನ್ನುವ ಜಂಬ ಎಷ್ಟು ದಿನ ಉಳಿದಿರುತ್ತದೆ. ಈ ಯಾವ ತಲೆಕೆಟ್ಟು ಬ್ರಾಹ್ಮಣ ಕಾಲು ನೆಕ್ಕುವ ಅರಸತನವಿಲ್ಲ. ಅಂತ ರಾಜಕಾರಣಿಗಳು ಅಲ್ಲಿ ಇಲ್ಲಿ ಇರಬಹುದು.

ಹಿಂದಿನ ಬ್ರಾಹ್ಮಣ ದರಬಾರು ಕಡಿಮೆ ಆಯಿತು ಅಂತ ಈಗ ದೇಶೋದ್ಧಾರ, ರಾಷ್ಟ್ರೋದ್ಧಾರ, ಧರ್ಮೋತ್ಥಾನ ಅನ್ನುವ ಸೋಗಿನಲ್ಲಿ ಮಂದಿಯನ್ನು ಮರುಳು ಮಾಡಲು ತೊಡಗಿದ್ದಾರೆ.

"avaralli 99% goo hechiinavaru braahmanetararu"

ಬ್ರಾಹ್ಮಣೇತರು ಈ ವಾಕ್ಯವನ್ನು ನೆನಪಿಟ್ಟುಕೊಳ್ಳಿರಿ. ನಿಮ್ಮನ್ನು ಆಳುವ ಸಂಬಳ ಕೊಡುವ ದಣಿಗಳು ಬ್ರಾಹ್ಮಣರು, ಕೆಳಗಡೆ ದುಡಿಯು 99% ಮಂದಿ ಬ್ರಾಹ್ಮಣೇತರರು, ಗುಲಾಮರು.

ಇದನ್ನೇ ನಾನು ಹಿಂದೆ ಹೇಳುದ್ದು ಬರಿ ಬ್ರಾಹ್ಮಣನಾಗಿ ಹುಟ್ಟಿದಕ್ಕೆ ಮೇಲರಿಮೆ. ಇವರೊಬ್ಬರೇ ಬುದ್ಧಿವಂತ. ಇವರೊಬ್ಬರೇ ದೇಶಕ್ಕೆ ದುಡ್ಡು ತರುವ ೯೯% ಮಂದಿ.

ತಿಮ್ಮಯ್ಯನವರು ನೋಡಿ, ಇವರೇ ನಾನು ಹಿಂದೇ ಹೇಳದ ಮಾತುಗಳ ಉದಾಹರಣೆಯಾದ ವ್ಯಕ್ತಿ

ಮುಂದುವರಿಯಲು ಇವರು ಯಾರನ್ನು ಬಿಟ್ಟಿದ್ದಾರೆ?

Anonymous ಅಂತಾರೆ...

geLeyare,

tiddupaDi:

nanna hindina postingnalli "kannDigaru kannaDavannu" aMta iruvudannu "kannaDigaru samskritavannu" eMdu odikoLLi.


thimmayya

Anonymous ಅಂತಾರೆ...

Allama, kannaDa chaLuvaLi huttu haakida a.Na. Krushnaraayaru, D.V.G, naa,haasyabrahma T.P kylaasam avarella braahmanare..Samskrutavannu avaru kuruDu abhimaamaanaDinda nodiDdare kannaDa bhaashege ishtella saadhane maaDalaaguttitte?? Braahmana infosys Narayana Murthy yavara samstheyalli yaavude jaati nodi kelasakke serisikolluvudilla..braahmanaru ishtella hesaru gaLisuttiruvudu nodi ninage sahisalaaguttilla ashte...ashtondu dwesha, sittu, matsara aarogyakke volleyadalla..swalpa control maadiko maaraaya..neenoo kashta pattare mele barutteeya..adubittu heegella aaDabahude??...ninna 'Nandi' brand patrikeya kubuddhi namagenu gottillave?? ninnanthaha jaativaadigaLu voduva patrike adu ashte..

Anonymous ಅಂತಾರೆ...

Aa.Na.Krushnaraayaru chaamarajapeteyalli M.S.Subbulaxmiyavara tamilu sangeeta sabheyannu virodhisi chaLuvaLi maadidaaga,avaranne khalanayakarante chitrisiddu nimmantaha jaativaadigaLe..adakke allave kannaDa chaLuvaLi hutti 40 varshavaaguttaa bandiddaroo nimmantaha jaativaaDigaLindaaagi indu kannaDavannu keluvavarilladantaagide..

Anonymous ಅಂತಾರೆ...

ಅಲ್ಲಮ ಗುರುಗಳೆ, ಇಡೀ ಬ್ಲಾಗಿನಲ್ಲಿ ನೀನು ಬರೆದಿರೋ ಎಲ್ಲ ಪೊಸ್ಟ್ ನೊಡ್ದೆ, ಎಲ್ಲದ್ರಲ್ಲೂ ಒಂದೆ ದಾಟಿ/ವಿಷಯ...ನಿನ್ನ ಉದ್ದೇಶ ಏನು ಅಂತ? "Constructive" ಆಗಿ ಒಂದನ್ನೂ ಒಂದು ವಿಷಯವನ್ನು ಬರೆದಿಲ್ವಲ್ಲಾ, ಅದು ನಿನ್ನ ಬುದ್ದಿಯ limitationನೋ ಅಥವ ಹುಚ್ಚು ದ್ವೀಷವೋ?

ತುಂಬ wierd ಆಗಿದೆ ನಿನ್ನ ವರಸೆ...

ಬನವಾಸಿ ಬಳಗ ಅಂತಾರೆ...

ಗೆಳೆಯರೆ/ಗೆಳತಿಯರೆ,

ಇಲ್ಲಿ ಚರ್ಚೆ ಹಳಿ ತಪ್ಪಿರುವುದರಿಂದ ಅನಿಸಿಕೆಗಳನ್ನು ಬರೆಯದಂತೆ ಮಾಡಬೇಕಾಗಿ ಬಂದಿದೆ ಎಂದು ನೋವಿನಿಂದ ಹೇಳುತ್ತಿದ್ದೇವೆ.

"ಕರ್ನಾಟಕದಲ್ಲಿ ಹಿಂದೆ ಸಂಸ್ಕೃತ ಮಾತಾಡ್ತಿದ್ರು ಅನ್ನೋದು ಬರೀ ಸುಳ್ಳು" ಎನ್ನುವ ವಿಷಯಕ್ಕೇ ನಿಜವಾಗಲೂ ಸಂಬಂಧಪಟ್ಟ ಅನಿಸಿಕೆಗಳೇನಾದರೂ ಇದ್ದರೆ ನಮಗೆ ಮಿಂಚಿಸಿ.

ಬನವಾಸಿ ಬಳಗ ಅಂತಾರೆ...

ಮತ್ತೊಮ್ಮೆ ಚರ್ಚೆ ತೆರವುಮಾಡಿದ್ದೇವೆ.

ದಯವಿಟ್ಟು ವಿಷಯಕ್ಕೆ ನಿಮ್ಮ ಅನಿಸಿಕೆಗಳನ್ನು ಮೀಸಲಾಗಿಡಿ.

ಇಲ್ಲಿಂದ ಯಾವ ಅನಿಸಿಕೆಗಳನ್ನು ತೆಗೆದುಹಾಕಿದ್ದೇವೋ ಅವುಗಳಲ್ಲಿ (೧) ಕೆಟ್ಟ ಪದಗಳ ಬಳಕೆ (೨) ವಿಷಯಕ್ಕೆ ಉತ್ತರವಾಗಿ ಅನಿಸಿಕೆ ಬರೆಯದೆ ವಿಷಯ ಬರೆದವನ ಜಾತಿ ಮುಂತಾದವುಗಳ ಬಗ್ಗೆ ಚರ್ಚೆಯನ್ನು ಎಳೆಯುವಿಕೆ - ಎಂಬ ಎರಡು ದೋಷಗಳಿದ್ದವು.

ಇವುಗಳನ್ನೆಲ್ಲ ಮೀರಿ ಹೋಗೋಣ.

ಅನಿಸಿಕೆಗಳು ಸಾತ್ವಿಕವಾಗಿರಲಿ.

Anivaarya ಅಂತಾರೆ...

ನಮಸ್ಕಾರ,

ಧನ್ಯವಾದ ಏನ್ಗುರು.

ಈ ಸೂತ್ರದಲ್ಲಿ ಕೆಲವು ಕಡೆ "ನನ್ನಿ" (== ಧನ್ಯವಾದ) ಅನ್ನೋ ಪದ ಬಳಿಸಲಾಗಿದೆ, ಅದು ತಮಿಳಿನ "ನಂನ್ರಿ" ಅನ್ನೋ ಪದಕ್ಕೆ ತುಂಬಾ ಹತ್ರವಾಗಿ ಕಾಣುತ್ತೆ. ಇದರ ಬಗ್ಗೆ ತಿಳಿದವರು ಸ್ವಲ್ಪ ಬೆಳಕನ್ನ ಚೆಲ್ಲುದ್ರೆ ಸಂತೋಷ. ಮೂಲತಹ ದ್ರಾವಿಡ ಭಾಷೆಯ ಸಮಾನತೆಯೇನು?

ಪ್ರೀತಿಯ,
ಯಾರಯ್ಯ

Anonymous ಅಂತಾರೆ...

ತಮಿಳಲ್ಲಿ ನಂನ್ರಿ ಅಲ್ಲ ಅದು ನಣ್‌ಱಿ.

ನನ್ನಿ ಅಂದರೆ ಒಲುಮೆ, ದಿಟ, ಸಯ್ಪು. ಹೀಗೆ ಹಲವು ತಿಳಿವುಗಳಿವೆ. ನಂನಿ ಬಗ್ಗೆ www.sampada.netಅಲ್ಲಿ ಹಲವು ಮಾತುಕತೆ ನಡೆದಿದೆ ಹುಡಿಕಿ ಓದಿಕೊಳ್ಳಿರಿ.

ಇಂನು ದ್ರಾವಿಡ ನುಡಿಗಳ ನಡುವಣದ ಸಮದ ಬಗ್ಗೆ ತಿಳಿಯಲು

A comparitive grammar of Dravidian language; Robert Cadwell ಒಳ್ಳೇ ಹೊತ್ತಗೆ.

ಹಾಗೆ

Dr.D.N ಶಂಕರಭಟ್ಟರ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕನ್ನಡ ಬರಹವನ್ನು ಸರಿಪಡಿಸೋಣ

ಇದು ಬಲು ಬಾಳಿಕೆಗೆ ಬರುವ ಹೊತ್ತಗೆಗಳು.

ಅರಿಮೆ ಹೆಚ್ಚಿರುವರಿಂದ ಇಲ್ಲಿ ಅದನ್ನು ಬಿಡಿಸಿ ಬರೆಯಲಾಗದು.

ನಂನಿ. ಹದುಳವಿರಲಿ.

ಹಾಗೆ

accha-kannada.blogspot.com ಇದನ್ನು ನೋಡಿರಿ.

guru ಅಂತಾರೆ...

ವಿರೋದ ಮಾಡಬೇಕು ಅಂತ ಅನ್ನಿಸಿದ್ರೆ ಹಿಂದಿ ವಿರೋಧ ಮಾಡಿ ಅದ ಬಿಟ್ಟು ಸಂಸ್ಕ್ರುತ ಯಾಕೆ ವಿರೋಧ ಮಾಡ್ತೀರ
ಏನ್ ಜನ ಸ್ವಾಮಿ ನಮ್ಮ ತನ ಅಂತ ಸ್ವಲ್ಪ ಊಳಿಸಿ ಕೊಳ್ಳಿ

Anonymous ಅಂತಾರೆ...

guru sir,

Please read all the posts of enguru with respect to Sankskrit and understand what they are telling.

sundar

Sri ಅಂತಾರೆ...

ನಲ್ಮೆಯ ಸ್ನೇಹಿತರೊಬ್ಬರು ನನ್ನ ಅಲ್ಪ ಜ್ಞಾನದ ಮುಸುಕನ್ನು ಹೊರಹಾಕಲು ಮತ್ತು ನನಗೆ ಕನ್ನಡದ ಹಿರಿಮೆ ಗರಿಮೆ ಗಳನ್ನು ಅರಿವು ಮಾಡಿಕೊಡಲು ಈ ಕೊಂಡಿಯ ಬಗ್ಗೆ ತಿಳಿಸಿದರು. ಅವರಿಗೆ ನಾನು ಚಿರಋಣಿ

ಇನ್ನು ಇಲ್ಲಿ ಮುಂಚೆಉಲ್ಲೇಖಿತ ವಾಗಿರುವ ಮುಖ್ಯವಾದ ವಿಷಯಕ್ಕೆ ಬಂದರೆ "ಕರ್ನಾಟಕದಲ್ಲಿ ಸಂಸ್ಕೃತವು ಮಾತನಾದಲ್ಪಟ್ಟಿತು ಅಥವಾ ಇಲ್ಲ" ಇದರಿಂದ ಹೆಚ್ಚಗೆ ವ್ಯತ್ಯಾಸ ಆಗೋದಿಲ್ಲ. ಇವತ್ತಿನ ದಿನದಲ್ಲಿ, ನಾವು ಎಷ್ಟು ಹೆಚ್ಚು ಕಳೆಯುತ್ತೇವೋ ಅಷ್ಟು ಒಳ್ಳೇದು. ಅಷ್ಟೇ. ಹಿಂದೆ ಹೇಗಿತ್ತೋ, ೩೦೦೦ ವರ್ಷಗಳ ಕೆಳಗೆ ಯಾವ ರೀತಿಯಿತ್ತೋ ಅದನ್ನ ಊಹಿಸ ಬಹುದೇ ಹೊರತು ನಾವು ನೋಡಲು ಸಾಧ್ಯವಿಲ್ಲ. ಅನ್ಯ ಭಾಷೀಯರಂತೆ ನಾವು ಬೇರೆ ಭಾಷೆಯವರನ್ನು ಕೀಳಾಗಿ ಕಾಣುವುದು ಬೇಡ. ಇಲ್ಲಿಯೂ ನಾವು ಕನ್ನಡಿಗರು ನಮ್ಮ ಕನ್ನಡತನ, ಉದ್ಹ್ಧಾತ್ತವಾಗಿ ಮೆರೆಯೋಣ. ಮೇಲು, ಕೀಳು, ಬಲ್ಲಿದ, ಪಾಮರ, ಜ್ಞಾನಿ, ಇವೆಲ್ಲ ನಾವು ನಮ್ಮ ತಿಳುವಲಿಕೆಯ ಪರಿಧಿಯಲ್ಲಿ ಸೃಷ್ಟಿಸಿಕೊಂದಿರೋ ಅಂತಹ ಪದಗಳು. "ಮಾನವ ಜಾತಿ ತಾನೊಂದೆ ವಲಂ". ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವೊಂದಿಲ್ಲ. ಎಲ್ಲ ಕಡೆ ಗಳಿಂದಲೂ ಒಳ್ಳೆಯದನ್ನು ಕಲೆಯೋಣ ಮತ್ತು ನಮ್ಮ ಭಾಷೆಯನ್ನೂ ಬೆಳೆಸೋಣ.

ಆದರೂ ಇಲ್ಲಿ ಇಂತಹ ಭಾಷಾಭಿಮಾನ ಮತ್ತು ಸಾಮಾಜಿಕ ಕಳಕಳಿ ನೋಡಿ ಬಹಳ ಸಂತಸವಾಯಿತು.. ಎಲ್ಲರಿಗು ಅಭಿನಂದನೆಗಳು

Anonymous ಅಂತಾರೆ...

ಭಾರತದೆಲ್ಲಾಲ್ಲಾ ಸಂಸ್ಕೃತ ಮಾತಾಡ್ತಿದ್ರು ಎನ್ನೋದು ಸುಳ್ಳು ಅಂತ ನನಗೂ ಅನ್ಸುತ್ತಿದೆ. ಕರ್ನಾಟಕದಲ್ಲೂ ಎಲ್ಲರೂ ಸಂಕೃತ ಮಾತಾಡ್ತಾ ಇದ್ದಿರೋ ಸಾಧ್ಯತೆನೇ ಇಲ್ಲ.

ನನಗನ್ಸೋದು ಏನೆಂದ್ರೆ ಕನ್ನಡಾನ ಕನ್ನಡವಾಗೇ ಬಿಟ್ಟು ಸಂಸ್ಕೃತಾನ ಸಂಸ್ಕೃತದಂತೆಯೇ ಕಲೀಬೇಕು. ಅಂದರೆ ಸಂಸ್ಕೃತ ಪದಗಳನ್ನೆಲ್ಲ ಕನ್ನಡಕ್ಕೆ ಹಾಕೋ ಹುಚ್ಚುತನ ಬಿಡಬೇಕು.

ಅಂದ ಹಾಗೆ ಗುರು ಅವ್ರು ಹೇಳ್ದಂತೆ ವೇದಗಳು ಇತ್ಯಾದಿ ಗ್ರಂಥಗಳ ಕನ್ನಡ ಅವತರಿಣಿಕೆಗಳು ಈಗಾಗಲೇ ಲಭ್ಯವಿವೆ. ಅವುಗಳ ಅರಿವು ಪಡೆಯಲು ಸಂಸ್ಕೃತದಲ್ಲೇ ಎಲ್ಲರೂ ಓದಬೇಕೆನ್ನುವುದು ಮೂರ್ಖತನ. ಐದು ಕೋಟಿ ಕನ್ನಡಿಗರಲ್ಲಿ ಹತ್ತಿಪ್ಪತು ಜನ ಸಂಸ್ಕೃತ ಕಲಿತು ಅವನ್ನು ಭಾಷಾಂತರಿಸಿದರೂ ಸಾಕು. ಇದರಿಂದ ಕನ್ನಡನೂ ಉಳಿಯುತ್ತೆ, ಅದರ ಜೊತೆಗೆ ಜನರಲ್ಲಿ ಅರಿವೂ ಕುಡ ಹೆಚ್ಚುತ್ತದೆ.

Priyank ಅಂತಾರೆ...

@Sri
ಸಂಸ್ಕ್ರುತದಲ್ಲಿರೋ ಒಳ್ಳೆಯದನ್ನು ಕನ್ನಡಿಗರಿಗೆ ತಂದುಕೊಡೋ ಕೆಲಸವಾಗಬೇಕು.
ಒಳ್ಳೆಯ ವಿಷಯಗಳನ್ನು ನಮ್ಮ ಜನರು ಅರಿತುಕೊಳ್ಳಲು ಅದು ಕನ್ನಡದಲ್ಲಿದ್ದರೆ ಸಾಧ್ಯ.
ಬೇರೆ ಭಾಷೆಯನ್ನೂ ಕಲಿತರೆ ಮಾತ್ರ ಅದರಲ್ಲಿರೋ ಒಳ್ಳೆಯ ವಿಷಯಗಳನ್ನು ದಕ್ಕಿಸಿಕೊಳ್ಳಲು ಸಾಧ್ಯ ಎಂಬ ವಾತಾವರಣ ಬದಲಾಗಬೇಕು.
ಇದು, ಈ ಏನ್ ಗುರು ಬ್ಲಾಗಿನ ತಿರುಳು.

ಬೇರೆ ಭಾಷೆಗಳನ್ನು ದ್ವೇಷಿಸಿ ಎಂದು ಎಲ್ಲೂ ಹೇಳಲಾಗಿಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails