ಸರ್ವಜ್ಞ ಚೆನ್ನೈನಲ್ಲಿ ಬೇಡ, ತಿರುವಳ್ಳುವರ್ ಬೆಂಗಳೂರಲ್ಲಿ ಬೇಕು!

ಕಳೆದ ವಾರ ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಇದ್ದಕ್ಕಿದ್ದಂತೆ ಹಲಸೂರು ಕೆರೆ ದಂಡೆಯಲ್ಲಿ ಪ್ರತ್ಯಕ್ಷಗೊಂಡು ಮತ್ತೆ ಗೋಣಿಚೀಲ ಹೊದ್ದು ಕೂತ ಘಟನೆ ನಡೆದಿದೆ.

೨೦೦೦ದ ಇಸವಿಯಲ್ಲಿ ಡಾ ರಾಜ್ ಅವರನ್ನು ಬಿಡಬೇಕಾದರೆ ಕರ್ನಾಟಕ ಏನೇನು ಮಾಡಬೇಕು ಎಂದು "ಅಪ್ಪಣೆ"ಯಿತ್ತಿದ್ದ ಕಾಡುಗಳ್ಳ ವೀರಪ್ಪನ ಪಟ್ಟಿಯಲ್ಲಿ ಈ ಕವಿಯ ಪ್ರತಿಮೆಯನ್ನು ಬೆಂಗಳೂರಲ್ಲಿ ನಿಲ್ಲಿಸಬೇಕು ಅಂತ್ಲೂ ಇತ್ತು. ಇದಕ್ಕೆ ಆಗಿನ ನಮ್ಮ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕರುಣಾನಿಧಿಯ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ತಮಿಳುನಾಡಲ್ಲಿ ಕನ್ನಡದ ಹಿರಿಯ ಕವಿ ಸರ್ವಜ್ಞನ ಪ್ರತಿಮೆ ನಿಲ್ಲಿಸಬೇಕಿತ್ತು.

ಆದರೆ ಅದು ಮಾತ್ರ ಇವತ್ತಿನ ವರೆಗೂ ಆಗಿಲ್ಲ. ಹೀಗಿರುವಾಗ ತಿರುವಳ್ಳುವರ್ ಪ್ರತಿಮೆಯ ಮೇಲಿನ ಹೊದಿಕೆಯನ್ನು ತೆಗೆದರೆ ಕನ್ನಡಿಗರು ಹೇಗೆ ತಾನೆ ಸುಮ್ಮನಿರುತ್ತಾರೆ ಗುರು? ತಿರುವಳ್ಳುವರ್ ಹೇಳಿಕೊಟ್ಟ ಕೊಟ್ಟು ತೊಗೋಬೇಕು ಅನ್ನೋ ಸಂಸ್ಕೃತಿಯೇ ಅವನ ಭಕ್ತರಿಗೆ ಇಲ್ಲದಂತಿದೆಯಲ್ಲ ಸರ್ವಜ್ಞ!
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು,
ತನ್ನಂತೆ ಪರರ ಬಗೆದೊಡೆ,
ಕೈಲಾಸ ಬಿನ್ನಾಣವಕ್ಕು ಸರ್ವಜ್ಞ.

ತನ್ನಂತೆ ಪರರ ಬಗೆಯದ ತಿರುವಳ್ಳುವರ್ ಭಕ್ತರಿಗೆ ತನಗವರು ಬಗೆದಂತೆ ಸರ್ವಜ್ಞಭಕ್ತರು ಬಗೆದಾರೆಯೇ ಸರ್ವಜ್ಞ?

3 ಅನಿಸಿಕೆಗಳು:

Anonymous ಅಂತಾರೆ...

illa guru! nindaytamma kaapi?
kannadadalli blog odi sakat andre sakat kushi aytu siva...
baraha upyogsakke swalpa technical kireeks aytu adakke angla baashele baritidini...solve hoditini tension illa...
inti,
yerra birri kannada premi

ಬನವಾಸಿ ಬಳಗ ಅಂತಾರೆ...

ನಿಮ್ಮ ನಲ್ಮೆಯ ಮಾತಿಗೆ ನನ್ನಿ. ಬರ್ತಾ ಇರಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ.

Anonymous ಅಂತಾರೆ...

ತಿರುವಳ್ಳುವರ್ ನ ಕನ್ನಡದ ಕೊಡುಗೆ ಏನು? ತಮಿಳವರಿಗೆ ಅಶ್ಟು ತಿಳಿಯಲ್ವಾ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails