ಸರ್ವಶಿಕ್ಷಾ ಅಭಿಯಾನದಲ್ಲಿ ಕೇಂದ್ರದ ಸೋಲು: ಗೊತ್ತಿದ್ದ ವಿಷಯವೇ!

"ಶಾಲೆಯ ಚಟುವಟಿಕೆಗಳಲ್ಲಿ ಸಮುದಾಯದ ಕ್ರಿಯಾತ್ಮಕ ಸಹಭಾಗಿತ್ವದ ಮೂಲಕ ಎಲ್ಲ ಸಾಮಾಜಿಕ ಮತ್ತು ಲಿಂಗ ಸಂಬಂಧಿ ಕಂದರಗಳನ್ನು ನಿವಾರಿಸಿ, 2010 ರೊಳಗೆ ಎಲ್ಲರಿಗೂ ತೃಪ್ತಿದಾಯಕ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡುವುದು" ಅನ್ನೋ ಉದ್ದೇಶ ಇಟ್ಕೊಂಡಿರೋ ಸರ್ವಶಿಕ್ಷಾ ಅಭಿಯಾನದಲ್ಲಿ ಶಿಕ್ಷಣ ಕೊಡಕ್ಕೆ ಹೊರ್ಟಿರೋರಿಗೂ ಪಡೆಯೋರಿಗೂ ಎಂಥಾ "ಕಂದರ" ಇದೆ ಅಂತ ಇವತ್ತಿನ ಪ್ರಜಾವಾಣೀಲಿ ಕನ್ನಡ ವಿ.ವಿ. ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಟಿ. ಆರ್. ಚಂದ್ರಶೇಖರ ತೋರಿಸಿಕೊಟ್ಟಿದ್ದಾರೆ.

ಕೇಂದ್ರಸರ್ಕಾರದ ಈ ಅಭಿಯಾನ ಸ್ಥಳೀಯ ಅಂಕಿ-ಅಂಶಗಳು, ಸ್ಥಳೀಯ ಪರಿಸ್ಥಿತಿಗಳ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡಕ್ಕಾಗದೆ ಹೇಗೆ "ದಿಕ್ಕು ತಪ್ಪಿದೆ" ಅಂತ ಚಂದ್ರಶೇಖರ ಅವರ ಪದಗಳಲ್ಲೇ ಓದಿ:
ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಕಾರ್ಯಕ್ರಮದ ಮುಖ್ಯ ಸಮಸ್ಯೆಯೇನೆಂದರೆ ಅದಕ್ಕೆ ಪ್ರಾದೇಶಿಕ ಆಯಾಮ ಇಲ್ಲದಿರುವುದು. ಇದ್ದರೂ ಅದಕ್ಕೆ ನೀಡಬೇಕಾದಷ್ಟು ಮಹತ್ವವನ್ನು ನೀಡಿಲ್ಲ. ತಾತ್ವಿಕವಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ, ಆದರೆ ಅವುಗಳನ್ನು ರಾಜ್ಯ ಮಟ್ಟದಲ್ಲಿ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಏಕರೂಪಿಯಾಗಿ ಮತ್ತು ಯಾಂತ್ರಿಕವಾಗಿ ತಯಾರಿಸಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಪ್ರಾದೇಶಿಕ ಅಂತರ-ಅಸಮಾನತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳು ತಯಾರಾಗುತ್ತಿಲ್ಲ.

[...]

ಈ ಬಗೆಯ ಸಮಸ್ಯೆಗೆ ಸಂಬಂಧಿಸಿದಂತೆ ಸರ್ವಶಿಕ್ಷಾ ಅಭಿಯಾನದಲ್ಲಿ ಗಮನ ನೀಡಿರುವುದು ಕಂಡುಬರುತ್ತಿಲ್ಲ. ಇದರಿಂದಾಗಿ ಸರ್ವರಿಗೂ ಶಿಕ್ಷಣವೆಂಬ ಉದ್ದೇಶವೇ ವಿಫಲಗೊಳ್ಳುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಗೆ ಗಮನ ನೀಡದಿದ್ದರೆ ಸರ್ವಶಿಕ್ಷಾ ಅಭಿಯಾನದ 2010ರ ಗುರಿಯನ್ನು ಸಾಧಿಸುವುದು ರಾಜ್ಯದಲ್ಲಿ ಕಷ್ಟಸಾಧ್ಯವಾಗುತ್ತದೆ.

[...]

ಪ್ರಾದೇಶಿಕ ಅಸಮಾನತೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಿರುವ ಡಾ. ಡಿ. ಎಂ. ನಂಜುಂಡಪ್ಪ ಸಮಿತಿಯು ರಾಜ್ಯದ 175 ತಲ್ಲೂಕುಗಳ ಪೈಕಿ 143 ಶೈಕ್ಷಣಿಕವಾಗಿ ಮುಂದುವರೆದ ತಾಲ್ಲೂಕುಗಳೆಂದೂ ಮತ್ತು 32 ಶೈಕ್ಷಣಿಕ ದುಃಸ್ಥಿತಿಯಲ್ಲಿವೆಯೆಂದೂ ಗುರುತಿಸಿದೆ...ಸರ್ವ ಶಿಕ್ಷಾ ಅಭಿಯಾನದ ತಜ್ಞರು ಇದರ ಬಗ್ಗೆ ಗಮನ ನೀಡಿದಂತೆ ಕಾಣುವುದಿಲ್ಲ.

ಒಟ್ನಲ್ಲಿ ಈ ಸರ್ವಶಿಕ್ಷಾ ಅಭಿಯಾನದಲ್ಲಿ ಕೇಂದ್ರ ಹಾಕಬಾರದ್ದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿರುವುದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ ಗುರು! ಸುಮ್ಮನೆ ಈ ಕೆಲಸವನ್ನ ರಾಜ್ಯಕ್ಕೇ ಬಿಟ್ಟು ಬೇಕಾದ ಅನುದಾನ ಕೊಟ್ಟಿದ್ದರೆ ಸಾಕಾಗಿತ್ತು. ಅಲ್ಲ, 100ಕೋಟಿ ಜನಸಂಖ್ಯೆಯಿರೋ ದೇಶದ ಮೂಲೆಮೂಲೆಗಳಲ್ಲಿ ಹೋಗಿ ಪ್ರಾಥಮಿಕ ಶಿಕ್ಷಣ ಕೊಡ್ತೀನಿ ಅಂತ ದಿಲ್ಲಿ ಅಂದುಕೊಳ್ಳೋದೇ ಮಹಾ ಮೂರ್ಖತನ ಗುರು! ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊನ್ನೆಮೊನ್ನೆ ದಿಲ್ಲಿಯಲ್ಲಿ ನಡೆದ ಒಕ್ಕೂಟ ವ್ಯವಸ್ಥೆಗಳ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ -
Defence, foreign policy and macro-economic management are clearly best dealt at the national level. Other policy issues like health care, education and law and order, are best dealt with at more decentralised levels of governance.

ಅಂತ ಹೇಳಿ ಈ ದೇಶದಲ್ಲಿ ಶಿಕ್ಷಣ ಹೇಗೆ ನಡೀಬೇಕು ಅಂತ ಕೇಂದ್ರ ಅರ್ಥ ಮಾಡ್ಕೊಂಡಿದೆ ಅನ್ನೋ ಭರವಸೆ ಕೊಟ್ಟಿದ್ದಾರಲ್ಲ, ಅದನ್ನ ಜಾರೀಗ್ ತರದೇ ಇರೋದ್ರಿಂದ್ಲೇ ತಾನೆ ಈ ಯೋಜ್ನೆ ಡುಮ್ಕಿ ಹೊಡೀತಿರೋದು? ನಿಜಕ್ಕೂ ಭಾರತೀಯ ಒಕ್ಕೂಟದಲ್ಲಿ ಕೇಂದ್ರ ರಕ್ಷಣೆ ಮತ್ತು ವಿದೇಶಸಂಪರ್ಕ ಮುಂತಾದ ಮಾಡಬೇಕಾದ್ದನ್ನು ಸರಿಯಾಗಿ ಮಾಡಿ ಮಿಕ್ಕಿದ್ದನ್ನು ರಾಜ್ಯಗಳಿಗೆ ಬಿಡೋದೇ ಸರಿಯಾದ ದಾರಿ. ಇದನ್ನ ಅರ್ಥ ಮಾಡ್ಕೊಳ್ದೇ ಇರೋ ಭಾರತೀಯ ಆಡಳಿತ ವ್ಯವಸ್ಥೇಲಿ ಇಂಥಾ ಯೋಜನೆಗಳು ಸೋಲುಣ್ಣೋದು ಖಂಡಿತ! ಭಾರತದ ಒಕ್ಕೂಟ ವ್ಯವಸ್ಥೇಲಿ ಕೇಂದ್ರದ ಪಾತ್ರ ಏನಿರಬೇಕು, ರಾಜ್ಯಗಳ ಪಾತ್ರ ಏನಿರಬೇಕು ಅಂತ ಇದ್ರಿಂದಾನಾದ್ರೂ ಸರಿಯಾಗಿ ಅರ್ಥ ಮಾಡ್ಕೊಳೋ ಪ್ರಯತ್ನ ನಡೀಬೇಕು. ಏನ್ ಗುರು?

1 ಅನಿಸಿಕೆ:

Anonymous ಅಂತಾರೆ...

This Abhiyana by Govt. is bogus. Any thing started by Govt, ends
up in loot. In Hyderabad in the month of April a lady in charge of
the Dept; Looted 10 crores by drawing bogus cheques form this
Abhiyana A/C of govt, from the Vijaya bank secunderabad. This news
came in all the print media and T.V. for 3 days. It is said that
this lady is close to CM and therefore it is hushed up none so far
have been booked though 10 crores is swallowed !!!. This dam
Abhiyana should be closed by the Govt.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails