
ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರೋ ಬಿಸಿ ಸುದ್ದಿ ಇದೀಗ ಬಂದಿದೆ. ಕನ್ನಡಿಗರ ಬಹುದಿನದ ಬೇಡಿಕೆ ಈ ಮೂಲಕ ಈಡೇರಿದೆ. ಎಲ್ಲ ಕನ್ನಡಿಗರಿಗೆ ಅಭಿನಂದನೆಗಳು. ಇದೀಗ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದ್ದು ಕನ್ನಡನಾಡಿನಲ್ಲಿ ಇಂದು ಹರ್ಷದ ಹೊಳೆ ಹರಿದಾಡಿದೆ. ಈ ಸಮ್ಮಾನ ಕನ್ನಡ ನುಡಿಯ ಬೆಳವಣಿಗೆಗೆ ಪೂರಕವಾಗಲಿದೆ ಅನ್ನುವುದು ಎಷ್ಟು ಮಹತ್ವದ ಸುದ್ದಿಯಾಗಿದೆಯೋ ಒಕ್ಕೂಟ ವ್ಯವಸ್ಥೆಗೆ ಒಂದು ಗೌರವವನ್ನೂ ಇದು ತಂದುಕೊಟ್ಟಿದೆ ಎನ್ನುವುದೂ ಅಷ್ಟೇ ಮಹತ್ವದ ಸುದ್ದಿಯಾಗಿದೆ ಗುರು!
ಕನ್ನಡಿಗರ ಈ ಬೇಡಿಕೆಯು ಮೊದಲಿಗೆ ಸಾಹಿತ್ಯ ವಲಯಕ್ಕೆ ಸೀಮಿತವಾಗಿದ್ದನ್ನು, ಜನಾಂದೋಲನವನ್ನಾಗಿ ರೂಪಿಸಿ ನಿರಂತರವಾಗಿ ಫೆಬ್ರವರಿ 2006ರಿಂದ ಹೋರಾಟವನ್ನು ನಡೆಸಿಕೊಂಡು ಬಂದ ಕರ್ನಾಟಕ ರಕ್ಷಣಾ ವೇದಿಕೆಗೆ, ಮತ್ತದರ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರಿಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ಕನ್ನಡಿಗರ ಒಗ್ಗಟ್ಟಿನ ಈ ಹೋರಾಟ ನಮಗೆ ಕಲಿಸುತ್ತಿರುವ ಪಾಠ ಅತ್ಯಂತ ಮಹತ್ವದ್ದಾಗಿದೆ. ನಾಡಿನೆಲ್ಲ ಕನ್ನಡ ಬಂಧುಗಳಿಗಿದೋ ನಮ್ಮ ಮನದುಂಬಿದ ಅಭಿನಂದನೆಗಳು!!
ಹಾಗೆಯೇ ನಮ್ಮ ತೆಲುಗು ಬಾಂಧವರಿಗೂ ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದರ ಅಭಿನಂದನೆಗಳು.
KARNATIQUE ನಲ್ಲೂ ಓದಿ: BREAKING NEWS: Kannada Identified as Classical Language
ಹಾಗೆಯೇ ನಮ್ಮ ತೆಲುಗು ಬಾಂಧವರಿಗೂ ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದರ ಅಭಿನಂದನೆಗಳು.
KARNATIQUE ನಲ್ಲೂ ಓದಿ: BREAKING NEWS: Kannada Identified as Classical Language
ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ