ಕನ್ನಡಿಗರಿಗೆ ಕೆಲಸ - ಹೊಸ ಸರ್ಕಾರಕ್ಕಿದು ಸದವಕಾಶ!


ಆಂಧ್ರಪ್ರದೇಶ ಸರ್ಕಾರ ಸುಮಾರು ನಾಲ್ಕು ವರ್ಷಗಳಿಂದ ತನ್ನ ನಾಡಿನ ಹಳ್ಳಿ ಯುವಕರ ಬದುಕು ಹಸನು ಮಾಡಲು ಉದ್ಯೋಗ ಅವಕಾಶಗಳನ್ನು ಕಟ್ಟಿಕೊಡೋ ಅನೇಕ ಕ್ಷೇತ್ರಗಳಲ್ಲಿ, ಅದ್ರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿ ಕೊಡ್ತಾ ಇದೆ ಗುರು! ಮೈಕ್ರೋಸಾಫ್ಟ್ ಒಂದಿಗೆ ಸೇರಿ ಇಂತಹ ಒಂದು ಯೋಜನೇನಾ ಕೈಗೊಂಡಿದ್ದು, ಇದರಿಂದ ಅನೇಕ ಹಳ್ಳಿಗರ ಬದುಕು ಹಸನಾಗಿದೆಯಂತೆ. ಒಟ್ಟಿನಲಿ ಕಾಲಕ್ಕೆ ತಕ್ಕಂತೆ ಬದಲಾಗಿ ತನ್ನ ನಾಡಿನ ಯುವಕರನ್ನು ಲಾಭದಾಯಕ ಉದ್ದಿಮೆಗಳತ್ತ ಕರೆದೊಯ್ಯೋದ್ರಲ್ಲಿ ಕೈಹಾಕಿ ತೆಲುಗು ನಾಡಿನ ಜನರಿಗೆ ಐ.ಟಿ ಕ್ಷೇತ್ರದಲ್ಲೂ ಉದ್ಯೋಗ ವಂಚನೆಯಾಗ್ದೇ ಇರೋ ಹಾಗೆ ನೋಡ್ಕೊಂಡಿದೆ ಗುರು!

ಆಂಧ್ರದ ರಾಜ್ಯ ಸರ್ಕಾರದ ಈ ತರಬೇತಿ ಕಾರ್ಯಕ್ರಮದಡಿ ಮುಂಚೆ ಇಡೀ ತಿಂಗಳು ದುಡಿದರೂ ಸಿಗದಷ್ಟು ಹಣ ಒಂದು ದಿನದಲ್ಲೇ ಸಂಪಾದ್ಸೋ ಸಾಮರ್ಥ್ಯವನ್ನು ಮತ್ತು ಅದಕ್ಕೆ ತಕ್ಕಂತ ಹುದ್ದೆಯನ್ನೂ ತನ್ನ ನೆಲದ ಮಕ್ಕಳಿಗೆ ದೊರಕಿಸಿಕೊಟ್ಟಿದೆ ಗುರು! ಆಂಧ್ರದ ಸರ್ಕಾರ ನಿಜಕ್ಕೂ ತನ್ನ ರಾಜ್ಯದ ಏಳಿಗೆ ತನ್ನ ಯುವಕರ ಉದ್ಯೋಗ ಪರಿಸ್ಥಿತಿಯೊಳಗೆ ಅಡಗಿದೆ ಅಂತ ಚೆನ್ನಾಗೇ ಮನವರಿಕೆ ಮಾಡಿಕೊಂಡಿದೆ. ಇಂತಹ ಯೋಜನೆಯಿಂದ ಆಂಧ್ರ ಪ್ರದೇಶ ಸರ್ಕಾರ ನಾಡಿನ ಯುವಕರು ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಸಿರೋದ್ರ ಜೊತೆಗೆ, ತಮ್ಮ ನಾಡಿನಲ್ಲೇ ಹುಟ್ಟಿಕೊಂಡಿರುವ ಐ.ಟಿ ಕಂಪನಿಗಳ ಕಚೇರಿಗಳೊಳಗಿನ ಉದ್ಯೋಗದ ಅವಶ್ಯಕತೆಗಳನ್ನು ತಮ್ಮ ನಾಡಿನ ಯುವಕರಿಂದಲೇ ಪೂರೈಸಿ ಬೇರೆ ರಾಜ್ಯ ಸರ್ಕಾರಗಳಿಗೆ ಒಂದು ರೀತಿಯ ಉದಾಹರಣೆಯಾಗಿ ನಿಂತಿದೆ!
ಹೊಸ ಸರ್ಕಾರ ಇಂಥಾ ತರಬೇತಿ ಯೋಜನೆ ರೂಪಿಸಲಿ

ಕರ್ನಾಟಕದಲ್ಲೂ ಒಂದು ಹೊಸ ಸರ್ಕಾರ ಬಂದಿದೆ. ನಮ್ಮ ನಾಡಿನ ಹಳ್ಳಿಹಳ್ಳಿಯಲ್ಲೂ ಯುವ ಶಕ್ತಿ ಇದೆ ಮತ್ತು ಅವರಿಗೆ ಉದ್ಯೋಗವಿರದ ಸಮಸ್ಯೆ ಕಾಡ್ತಾ ಇದೆ. ನಮ್ಮ ರಾಜ್ಯ ಸರ್ಕಾರ ಆಂಧ್ರಪ್ರದೇಶ ರೂಪಿಸಿರುವಂಥಾ ಒಂದು ಯೋಜನೇನಾ ನಮ್ಮ ನಾಡಿನ ಮುಂಚೂಣಿ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯವಿಡೀ ಎಲ್ಲಾ ತಾಲೂಕು/ ಹೋಬಳಿಗಳಲ್ಲಿ ಶುರು ಮಾಡಿ ಬೇಡಿಕೆಯ ನಾನಾ ಉದ್ಯೋಗಗಳಿಗೆ ಸಂಬಂಧಪಟ್ಟಂತೆ ಪ್ರತಿಭೆಗಳನ್ನು ಬೆಳೆಸೋ ಕೆಲ್ಸ ಮಾಡಿ, ತರಬೇತಿ ಪಡೆದೋರಿಗೆ ಆಯಾ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಶಕ್ತರನ್ನಾಗಿ ಮಾಡಬೇಕು ಗುರು!

4 ಅನಿಸಿಕೆಗಳು:

Suresh Sathyanarayana ಅಂತಾರೆ...

beda guru beda.... bengloorige ITne beda.... practical aagi yaaru eshte hodedaadidru ee parakeeyarige namm bhaashe kalsokke saadhyavaagtilla... nammavarige namm bhaashe mele abhimaana annodu kaasinanshtu illa... aadre ee ITna togond hogi bere ellaadru bisaakidre ella daridra horaginavarella allige hogi saaytaare
aaga maththe nirmala bengalooru

Anonymous ಅಂತಾರೆ...

ಆಂದ್ರ ಸರಕಾರ ಇಂತಹ ಯೋಜನೆಯನ್ನು ಹಾಕಿಕೊಂಡು ಏನೇನು ಮಾಡುತ್ತಿದೆಯೊ ಒಟ್ಟಿನಲ್ಲಿ ಅಮೇರಿಕಕ್ಕೆ ಸ್ವಲ್ಪವೂ ಯೋಗ್ಯತೆ ಇಲ್ಲದ ಗುಲ್ಟುಗಳು ಬರುವುದು ಹೆಚ್ಚಾಗುತ್ತಿದೆ. ತನ್ನ ನಾಡಿನಲ್ಲೆ ಅವರಿಂದ ಕೆಲ್ಸ ಮಾಡಿಸಿಕೊಂಡರೆ ಪರವಾಗಿಲ್ಲ. ಆದರೆ ಆಂದ್ರದ ಪ್ರತಿಯೊಬ್ಬ ಯುವಕನ ಫಾದರ್ ಲ್ಯಾಂಡ್ ಅಮೇರಿಕ ಹೀಗಾಗಿ ತನಗೆಷ್ಟು ಯೋಗ್ಯತೆ ಇಲ್ಲದಿದ್ದರು ಇಲ್ಲಿಗೆ ಬಂದು ತುಂಬಿಕೊಳ್ಳುತ್ತಿದ್ದಾರೆ. ಭಾರತದ ಯುವಕರ ಮೇಲಿರುವ ಅಭಿಪ್ರಾಯವೇ ಬದಲಾಗುತ್ತಿದೆ ಇಲ್ಲಿಯ ಜನರಿಗೆ. ಎಲ್ಲಾ ಕಡೆ ಅದೇ ಮಾತು, ’Indian companies are sending low class workers on H1 visa' ಅಂತ. ಮುಂದೆ ಎಚ್೧ ವೀಸ ನಿಲ್ಲಿಸಿದರು ಆಷ್ಟರ್ಯ ಇಲ್ಲ. ಆಂದ್ರ ಸರಕಾರ ಮತ್ತು ನಮ್ಮ ಐ.ಟಿ ಕಂಪನಿಗಳು ಇದರ ಬಗ್ಗೆ ಸ್ವಲ್ಪ ಜವಬ್ದಾರಿಯುತವಾಗಿ ನಡೆದುಕೊಂಡರೆ ಸೂಕ್ತ. ಇಲ್ಲವಾದಲ್ಲಿ ನಮಗೆ ಬರುವ ಕೆಲಸಗಳು ಕಡಿಮೆಯಾಗಬಹುದು.

- ಎಮ್. ಎಸ್. ಸ್ಟೂಡೆಂಟ್ ಇನ್ ಅಮೇರಿಕ

Rohith B R ಅಂತಾರೆ...

anonymous avre,
adakkene enguru illi heltirodu enu andre - andhra sarkara maadtu anta alde hodru, namma yuvakara baalu hasanaagisalu, mattu avarige udyoga avakaasha hechchu maadisalu, ee reetiya yuvakara pratibhege protsaaha needi avarige tarabeti needuva yojanegalige sarkaara neravu aagabeku.

taanaagiye nadesabeku antenilla.. sumne ENABLER aadre saaku.. illiyoo tarabetiyalli yaaru bestO avranna karesali..

Anonymous ಅಂತಾರೆ...

Alla Guru...AP ge matte yaaru hogthare. Avru IT company start madire avare Thumbikobeku.These Telugu people are soo irritating.
If Karnataka if Govt Starts IT company in any remote place , People from different parts of India will come and join.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails